Homeಮುಖಪುಟಕರ್ನಾಟಕದಲ್ಲಿ ದಲಿತ ಮುಸ್ಲಿಂ ಸಮುದಾಯಗಳಿಗೆ ಸಿಕ್ಕ ರಾಜಕೀಯ ಅಧಿಕಾರವೆಷ್ಟು? ಸಿಗಬೇಕಾದುದೆಷ್ಟು?

ಕರ್ನಾಟಕದಲ್ಲಿ ದಲಿತ ಮುಸ್ಲಿಂ ಸಮುದಾಯಗಳಿಗೆ ಸಿಕ್ಕ ರಾಜಕೀಯ ಅಧಿಕಾರವೆಷ್ಟು? ಸಿಗಬೇಕಾದುದೆಷ್ಟು?

ಕರ್ನಾಟಕದ ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಸಮುದಾಯಗಳಿಗೆ ಸಿಗುತ್ತಿರುವ ಮೀಸಲಾತಿಯ ಪ್ರಮಾಣ, ರಾಜಕೀಯ ಪ್ರಾತಿನಿಧ್ಯದ ತಾರತಮ್ಯ ಕುರಿತು ಚಿಂತನಾರ್ಹ ಲೇಖನ..

- Advertisement -
- Advertisement -

ಕರ್ನಾಟಕ ದೇಶದ ಆರನೇ ದೊಡ್ಡ ರಾಜ್ಯ. ದಕ್ಷಿಣದ ಐದು ರಾಜ್ಯಗಳ ಪ್ಯಕಿ ಕರ್ನಾಟಕ ಅತೀ ದೊಡ್ಡ ರಾಜ್ಯ. ಜನಸಂಖ್ಯೆ ಆರೂವರೆ ಕೋಟಿ. ಇಲ್ಲಿನ ಸಾಕ್ಷರತೆ 75%. 30 ಜಿಲ್ಲೆ, 236 ತಾಲ್ಲೂಕು, 6073 ಗ್ರಾಮ ಪಂಚಾಯತಿ, 1,05,000 ಗ್ರಾಮ ಪಂಚಾಯಿತಿ ಸದಸ್ಯರು, 90 ಪಟ್ಟಣ ಪಂಚಾಯಿತಿ, 113 ಪುರಸಭೆ, 58 ನಗರ ಸಭೆ, 10 ಮಹಾನಗರ ಪಾಲಿಕೆಗಳನ್ನು ಕರ್ನಾಟಕ ಒಳಗೊಂಡಿದೆ.

224 ಶಾಸಕರು ಮತ್ತು 28 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಾರೆ. 75 ವಿಧಾನ ಪರಿಷತ್‌ ಸದಸ್ಯರಿದ್ದು ಅದರಲ್ಲಿ 25 ಸದಸ್ಯರನ್ನು ಶಾಸಕರು ಆರಿಸಿದರೆ 25 ಸದಸ್ಯರನ್ನು ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. 7 ಸದಸ್ಯರು ಶಿಕ್ಷಕರ ಕ್ಷೇತ್ರದಿಂದ 7 ಜನರು ರಾಜ್ಯದ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದರೆ, ಉಳಿದ 11 ಸದಸ್ಯರನ್ನು ಪಕ್ಷಗಳ ಸಲಹೆಯಂತೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಇವರ ಅಧಿಕಾರವಧಿ 6 ವರ್ಷಗಳಿದ್ದು ಪ್ರತೀ 2 ವರ್ಷಗಳಿಗೊಮ್ಮೆ 25 ಸದಸ್ಯರ ಅವಧಿ ಮುಗಿದು ಹೊಸಬರನ್ನು ಆಯ್ಕೆ ಮಾಡುತ್ತಾರೆ. ರಾಜ್ಯದಿಂದ 12 ಜನ ರಾಜ್ಯಸಭಾ ಸದಸ್ಯರನ್ನು ಶಾಸಕರು ಆಯ್ಕೆ ಮಾಡುತ್ತಾರೆ.

ರಾಜಕೀಯ ಮೀಸಲಾತಿ :

ಒಟ್ಟು 28 ಸಂಸತ್‌ ಸದಸ್ಯರಲ್ಲಿ 5 ಕ್ಷೇತ್ರಗಳು SCಗಳಿಗೆ 2 ಕ್ಷೇತ್ರಗಳು STಗಳಿಗೆ ಮೀಸಲಾಗಿದ್ದು ಉಳಿದವರು ಸಾಮಾನ್ಯ ಕ್ಷೇತ್ರಗಳು. 224 ವಿಧಾನ ಸಭಾ ಕ್ಷೇತ್ರಗಳಲ್ಲಿ  36 SC ಮತ್ತು  15 ST ಸಮುದಾಯಕ್ಕೆ ಮೀಸಲಾಗಿವೆ.

ಅದೇ ರೀತಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಕೂಡ 50% ಶೇಕಡ ಮಹಿಳಾ ಮೀಸಲು ಇದ್ದು, ಮಹಿಳಾ ಮೀಸಲಿನಲ್ಲಿ SC, ST, OBC ಗಳಿಗೆ ಉಪ ಮೀಸಲಾತಿ ಲಭ್ಯವಿದೆ. ಇನ್ನು 101 SC ಜಾತಿಗಳಿಗೆ 15%  ST ಜಾತಿಗಳಿಗೆ 3%, 207 ಹಿಂದುಳಿದ ವರ್ಗಗಳ ಜಾತಿಗಳಿಗೆ 32% ಮೀಸಲಾತಿ ಇದೆ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಕ್ಕಲಿಗ, ಲಿಂಗಾಯಿತ, ಜೈನ, ಕೈಸ್ತ, ರೆಡ್ಡಿ, ಬಂಟ, ಮೊದಲಾದ ಹಲವಾರು ಜಾತಿಗಳು ಬರುತ್ತವೆ. ಮುಸ್ಲಿಂ, ಕುರುಬ, ಈಡಿಗ, ಬಿಲ್ಲವ, ಬಲಿಜ ಈ ರೀತಿ 2ನೇ ವರ್ಗ ವಿಂಗಡನೆ ಮಾಡಲಾಗಿದ್ದು ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗಗಳು ಎನ್ನಲಾಗುತ್ತದೆ.

ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ :

ಈ ಮೇಲೆ ಹೆಸರಿಸಿದ ಎಲ್ಲಾ ಜಾತಿಗಳಿಗೂ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೂ ಸಹ ಬಹಳಷ್ಟು ಜನ ಮೀಸಲಾತಿ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದಿದ್ದು ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ದುರಂತವೆಂದರೆ ಯಾರು ಮೀಸಲಾತಿಯನ್ನು ಪಡೆಯುತ್ತಿದ್ದಾರೋ ಅವರೇ ಮೀಸಲಾತಿಯನ್ನು ನಾವು ಪಡೆಯುತ್ತಲೇ ಇಲ್ಲವೆಂಬ ನಾಟಕವಾಡುತ್ತಿದ್ದಾರೆ.!!

■    ಲಿಂಗಾಯಿತರು ಹಾಗೂ ಅದರ 42 ಒಳಪಂಗಡಗಳೂ ಕೆಟಗರಿ 3ಬಿ ಕೋಟಾದ ಅಡಿಯಲ್ಲಿ ಮೀಸಲಾತಿಯನ್ನು ಪಡೆಯುತ್ತಿವೆ.!!

■    ಇನ್ನು ರೆಡ್ಡಿ, ಒಕ್ಕಲಿಗ, ಬಂಟ, ಬಲಿಜ, ಕೊರವ ಇವರೂ ಸಹ ಕೆಟಗರಿ 3ಎ ಅಡಿಯಲ್ಲಿ ಒಟ್ಟು 12 ಜಾತಿಗಳವರು ಮೀಸಲಾತಿ ಪಡೆಯುತ್ತಿದ್ದಾರೆ.!!

■    ವಿಶ್ವಕರ್ಮ, ಕುರುಬರು, ಮಡಿವಾಳರು, ಕಂಬಾರರು, ಕುಂಬಾರರು, ದೇವಾಂಗ ಹೀಗೆ 102 ಜಾತಿಗಳು ಎಸ್.ಸಿ ಗೆ ಎಷ್ಟು ಮೀಸಲಾತಿ ಇದೆಯೋ ಅವರೂ ಸಹ ಅಷ್ಟೇ  [ಶೇ.15 ] ಮೀಸಲಾತಿ ಪಡೆಯುತ್ತಿದ್ದಾರೆ.!! ಇವರೆಲ್ಲಾ ನಾವು ಮೇಲ್ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ.!!

■    ಜೇನುಕುರುಬ, ಕಾಡುಕುರುಬ ಇವರೂ ಸಹ ಮೀಸಲಾತಿ ಪಡೆಯುತ್ತಿದ್ದಾರೆ..

ಪ್ರಶ್ನೆ ಬಂದಿರೋದು ನಾವ್ಯಾರೂ ಮೀಸಲಾತಿಯನ್ನು ಪಡೆಯುತ್ತಿಲ್ಲ ಅನ್ನುವ ಮಟ್ಟಿಗೆ ಈ ಮೇಲಿನವರಲ್ಲಿ ಬಹುತೇಕರು ವರ್ತಿಸುತ್ತಿರುವುದು ಹೇಸಿಗೆ ಹುಟ್ಟಿಸಿ ಅವರ ಚಾಣಾಕ್ಷ್ಯತನಕ್ಕೆ ತಳಮಟ್ಟದ ಸಮುದಾಯಗಳು ಬೆರಗುಗಣ್ಣಿನಿಂದ ನೋಡುವಂತೆ ಮಾಡಿವೆ.!!

■    ಇವರೆಲ್ಲರೂ ಅಸ್ಪೃಷ್ಯತೆಯ ನೋವನ್ನು ಅನುಭವಿಸಿದ್ದಾರೆಯೇ!? ಹೀಗಿದ್ದರೂ ಮೀಸಲಾತಿ ವಿರೋಧಿಸುವ ಬಹುತೇಕರು ಇದೇ ಗುಂಪುಗಳಲ್ಲಿದ್ದಾರೆಂಬುದು ಖೇದಕರ, ದುರದೃಷ್ಟಕರ.!!

■    ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಮೀಸಲಾತಿ ಪಡೆಯುತ್ತಿದ್ದಾರೆ ಅನ್ನೋ ಹುಂಬತನ ಇರುವ ಇಂಥ ಜನ ತಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ!? ಎಂಬುದರ ಅರಿವೇ ಅವರಿಗೆ ಇಲ್ಲ.!!

ಮೀಸಲಾತಿಯನ್ನು ವಿರೋಧಿಸುವ ಧೋರಣೆ ಹೊಂದಿರುವ ಇವರು ತಮಗಿರುವ ಮೀಸಲಾತಿಯನ್ನು ಮೊದಲು ಬಿಟ್ಟುಬಿಡಲಿ.!! ಬಡವರಿಗಾದರೂ ಸಿಗುತ್ತದೆ, ಇದು ಆದರ್ಶ.!

ಕರ್ನಾಟಕದ ಮೀಸಲಾತಿ ವಿವರ ಇಂತಿದೆ.

1) ಪ್ರವರ್ಗ – 1                4 %  ( 95 ಜಾತಿಗಳು )

2) ಪ್ರವರ್ಗ – 2 (ಎ)         15% ( 102 ಜಾತಿಗಳು)

3) ಪ್ರವರ್ಗ  – 2 (ಬಿ)         4% ( ಮುಸ್ಲಿಮರು )

4) ಪ್ರವರ್ಗ  – 3 (ಎ)         4% (ಒಕ್ಕಲಿಗ&ಬಲಿಜ)

5) ಪ್ರವರ್ಗ  – 3 (ಬಿ)         5% ( ಲಿಂಗಾಯತರು & ಇತರೆ 5)

6) ಪ.ಜಾತಿ   –                  15% ( 101 ಜಾತಿಗಳು)

7) ಪ.ಪಂಗಡ-                   3%  (50 ಜಾತಿಗಳು)

ಹಲವಾರು ಪ್ರವರ್ಗಗಳ 206 ಜಾತಿಗಳಿಗೆ ಮೀಸಲಾತಿ ಸಿಗುತ್ತಿದೆ. ಅವರು ಮುಖ್ಯವಾಗಿ ಸಾಮಾಜಿಕವಾಗಿ ಮುಂದುವರೆದು, ತಲತಲಾಂತರದಿಂದ ಹಲವಾರು ಎಕರೆ ಭೂಮಿಯನ್ನು ಹೊಂದಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದಿದ್ದಾರೆ. ಆದರೂ ಮೀಸಲಾತಿ ಬೇಕಿದ್ದು ಅವರಿಗೆ 32% ಸಿಗುತ್ತಿದೆ.

ಆದರೆ ಪ.ಜಾತಿ ಮತ್ತು ಪ.ಪಂಗಡದ 151 ಜಾತಿಗಳಿಗಿರುವ 18% ಮೀಸಲಾತಿ ಅವರಿಗಿಂತ ಹೇಗೆ ಹೆಚ್ಚು?

ಇವರು ಸಾಮಾಜಿಕವಾಗಿ ಹಿಂದುಳಿದು, ಉಳುಮೆಗೆ ಭೂಮಿ ಇಲ್ಲದೆ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು, ಇದರಲ್ಲಿನ ಹಲವಾರು ಸಮುದಾಯಗಳು ಅಸ್ಪೃಶ್ಯತೆ ಅನುಭವಿಸಿರುವವರು.

ಇವತ್ತು ಪರಿಶಿಷ್ಟ ಜಾತಿಯ ಕೆಲವೇ ಕೆಲವು ಸಮುದಾಯದವರು ಮಾತ್ರ ಮೀಸಲಾತಿಯ ಸಹಾಯದಿಂದ  ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುತ್ತಲಿದ್ದರೂ, ತಳ ಸಮುದಾಯದವರನ್ನು ಸಾಮಾಜಿಕವಾಗಿ ಮುಂದುವರೆಯಲು ಬಿಡುತ್ತಿಲ್ಲ.

ಭಾರತದ ಯಾವುದೇ ಒಂದು ಸಮುದಾಯ ಮೀಸಲಾತಿಯಿಂದ ಹೊರ ಉಳಿದಿಲ್ಲ. ಯಾವುದಾದರೂ ಒಂದು ರೀತಿಯಲ್ಲಿ ಮೀಸಲಾತಿ ಪಡೆದೆ ಪಡೆದಿರುತ್ತದೆ. ಉದಾ: ಪ್ರಾದೇಶಿಕ ಮೀಸಲಾತಿ (ಹೈದರಾಬಾದ್ ಕರ್ನಾಟಕ)

ನರಸಿಂಹ್ ರಾವ್ ಸರ್ಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಳಿದವರಿಗೆ ನೀಡುವ ಮೀಸಲಾತಿಯ ಜೊತೆಗೆ ”ಆರ್ಥಿಕವಾಗಿ ಹಿಂದುಳಿದವರನ್ನೂ ಸೇರಿಸಿ ಮೀಸಲು ನೀಡುವ ನಿಯಮವನ್ನು ಸೇರಿಸಿ ಆದೇಶ ಹೊರಡಿಸಿತು.

ಮೇಲ್ವರ್ಗದವರಿಗೆ ಮೀಸಲಾತಿ :

ರಾಜ್ಯದಲ್ಲಿ 95% ಶೇಕಡ ಜನರಿಗೆ ಈ ಹಿಂದೆ ವಿವಿಧ ರೀತಿಯ ಮೀಸಲಾತಿ ಇದ್ದವು. ರಾಜ್ಯದಲ್ಲಿ ಹಿಂದೆ ಬ್ರಾಹ್ಮಣ, ಆರ್ಯ, ವೈಷ್ಣವ, ಮೊದಲಿಯಾರ್, ಮತ್ತು ನಾಗರಥಾ ಮೊದಲಾದ ಜಾತಿಯವರು ಮಾತ್ರ ಮೀಸಲಾತಿಯಿಂದ ವಂಚಿಸಲ್ಪಟ್ಟಿದ್ದರು. ರಾಜ್ಯದಲ್ಲಿ ಈ ಸಮುದಾಯಗಳ ಜನ ಸಂಖ್ಯೆ ಕೇವಲ 5 ರಿಂದ 6 ಶೇಕಡ. ರಾಷ್ಟ್ರಮಟ್ಟದಲ್ಲಿ ಕೇವಲ 17 ಶೇಕಡ ವಿರುವ ಬಲಿಷ್ಟ ವರ್ಗದವರಿಗೆ ಮಾತ್ರ ಮೀಸಲಾತಿ ಸಿಗುತ್ತಿರಲಿಲ್ಲ.

2019ರಲ್ಲಿ ಮೋದಿ ಸರಕಾರ ಈ ಮೇಲ್ವರ್ಗದವರಿಗೆ 10% ಮೀಸಲಾತಿ ನೀಡುವ ಕಾನೂನು ಜಾರಿಗೆ ತಂದರು. ಇದರಿಂದ 5 ರಿಂದ 6 ಶೇಕಡ ವಿರುವ ಈ ಬಲಿಷ್ಟ ವರ್ಗದವರಿಗೆ 10 ಶೇಕಡ ಮೀಸಲಾತಿ ಸಿಗುತ್ತದೆ. ಆದರೆ ರಾಜ್ಯದಲ್ಲಿ 16 ಶೇಕಡ ವಿರುವ ಮುಸ್ಲಿಮರಿಗೆ ಕೇವಲ 4 ಶೇಕಡ ಮೀಸಲಾತಿ ಲಭ್ಯವಿದೆ. ವಿ.ಪಿ.ಸಿಂಗ್ ರವರು ಪ್ರಧಾನ ಮಂತ್ರಿಯಾಗಿದ್ದಾಗ 27 ಶೇಕಡ ಮೀಸಲಾತಿ ನೀಡುವ ಕಾನೂನು ತಂದರು. ಇದರಲ್ಲಿ ಮುಸ್ಲಿಂ ಸಮುದಯದ ಕಚ್ಚಿ ಮೇಮನ್, ನವಾಯತ್, ಬೊಹ್ರಾ, ಸೈಯದ್, ಶೇಕ್, ಪಠಾನ್, ಮುಗಲ್, ಮೆಹ್ದವಿ, ಜಮಾಯತಿ-ಕೊಂಕಣಿ ಮುಸ್ಲಿಂಮರನ್ನು ಹೊರತು ಪಡಿಸಿ ಎಲ್ಲಾ ಮುಸ್ಲಿಮರಿಗೆ ಈ ಮೀಸಲಾತಿ ಲಭ್ಯವಿದೆ. ಅಲ್ಲದೆ ಇತರ ಹಿಂದುಳಿದ ವರ್ಗಗಳ 199 ಜಾತಿಗಳು ಮತ್ತು ಇತರ ನೊರಾರು ಉಪ ಜಾತಿಗಳಿಗೆ ಈ 27%ದಲ್ಲಿ ಪಾಲಿದೆ.

ಜಾತಿವಾರು ರಾಜಕೀಯ ಅಧಿಕಾರ :

ರಾಜ್ಯದಲ್ಲಿ ರಾಜಕೀಯ ಅಧಿಕಾರದಲ್ಲಿ ಹೆಚ್ಚು ಅವಕಾಶ ಪಡೆದಿರುವುದು ಒಕ್ಕಲಿಗ, ಅಂಗಾಯಿತ ಮತ್ತು ಬ್ರಾಹ್ಮಣ ಸಮುದಾಯಗಳಾಗಿವೆ. ಮುಖ್ಯಮಂತ್ರಿ, ಶಾಸಕರು, ಸಂಸದರು ಹೆಚ್ಚಾಗಿ ಈ ಮೂರು ಸಮುದಾಯಗಳಿಂದ ತಮ್ಮ ಜನ ಸಂಖ್ಯೆಯ ಅನುಪಾತಕಿಂತ ಹೆಚ್ಚು ಇದ್ದಾರೆ. ರಾಜಕೀಯ ಮೀಸಲಾತಿಯಿಂದಾಗಿ ದಲಿತರು ಸಂಸದ, ಶಾಸಕರಾಗಿರಬಹುದು ಆದರೆ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಪಾಲು ಪಡೆದಿಲ್ಲ.

ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಎರಡನೇ ದೊಡ್ಡ ಸಮುದಾಯವಾಗಿದ್ದರು ರಾಜಕೀಯ ಪ್ರಾತಿನಿಧಿ ತೀರಾ ಕಡಿಮೆಯಿದೆ. ಇದುವರೆಗೂ ಮುಖ್ಯಮಂತ್ರಿ ಪದವಿ ಸಿಕ್ಕೇ ಇಲ್ಲ. ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಒಬ್ಬನೇ ಒಬ್ಬ ಮುಸ್ಲಿಂ ಸಂಸತ್ ಸದಸ್ಯ ಚುನಾಯಿತನಾಗಿಲ್ಲ. ಶಾಸಕರು, ಸಂಸದರು, ಮಂತ್ರಿಗಳು ಮತ್ತು ರಾಜ್ಯಸಭೆ ಸ್ಥಾನಗಳಲ್ಲಿ ಜನ ಸಂಖ್ಯೆಯ ಅನುಪಾತಕಿಂತ ತೀರಾ ಕಡಿಮೆ ಮುಸ್ಲಿಂ ಸಮುದಾಯಕ್ಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ಲಭ್ಯವಾಗಿದ್ದರೂ ಸಹ ಇತರ ಹಿಂದುಳಿದ ವರ್ಗಗಳು ಆ ಮೀಸಲು ಪಟ್ಟಿಯಲ್ಲಿ ಸೇರಿರುವುದರಿಂದ ಅಲ್ಲಿಯೂ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಕನಿಷ್ಟ ಸ್ಥಳೀಯ ಸಂಸ್ಥೆಗಳಲ್ಲಾದರೂ ಮುಸ್ಲಿಮರಿಗೆ ಪ್ರತೇಕ ಮೀಸಲಾತಿ ನಿಗದಿಪಡಿಸಿದರೆ, ತಕ್ಕಮಟ್ಟಿಗೆ ಸ್ಥಳೀಯ ರಾಜಕೀಯ ಅಧಿಕಾರದಲ್ಲಿ ಸ್ವಲ್ಪ ಪಾಲು ಸಿಗಬಹುದು.

ಮುಖ್ಯಮಂತ್ರಿ ಸ್ಥಾನ ವಂಚಿತರು :

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಜಾತಿವಾರು ಜನಗಣತಿ ನಡೆಸಿದ್ದರು. ಹಿಂದುಳಿದ ವರ್ಗಗಳ ಆಯೋಗ ಈ ಜನಗಣತಿ ಕಾರ್ಯ ನಡೆಸಿ ದೇಶದಲ್ಲೆ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿತು. ಇದರ ಅಂಕಿ-ಅಂಶಗಳು ಸೋರಿಕೆಯಾಗಿ ಕೆಲವು ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆ ಪ್ರಕಾರ ರಾಜ್ಯದಲ್ಲಿ ಅತ್ಯಂತ ದೊಡ್ಡ ಜನ ಸಮುದಾಯವಾಗಿ ದಲಿತರಿದ್ದು, ಎರಡನೇ ದೊಡ್ಡ ಸಮುದಾಯ ಮುಸ್ಲಿಮರು, ಮೂರನೇ ಸ್ಥಾನ ಲಿಂಗಾಯಿತರು ಮತ್ತು ನಾಲ್ಕನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆ ಎಂದು ಗುರುತಿಸಲಾಯಿತು.

ಆದರೆ ರಾಜ್ಯದ ಅತಿದೊಡ್ಡ ಸಮುದಾಯವಾದ ದಲಿತರು ಮತ್ತು ಎರಡನೇ ದೊಡ್ಡ ಜನ ಸಮುದಾಯವಾದ ಮುಸ್ಲಿಮರಿಗೆ ರಾಜಕೀಯ ಅಧಿಕಾರ ಮತ್ತು ಸರಕಾರದ ನೀತಿ ನಿರೂಪಣೆಯಲ್ಲಿ ತೀರಾ ಕಡಿಮೆ ಪ್ರಾತಿನಿಧ್ಯ ಸಿಕ್ಕಿದೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸ್ಥಾನಗಳಿಂದ 73 ವರ್ಷಗಳಿಂದ ದಲಿತರು ಮತ್ತು ಕ್ರೈಸ್ತರನ್ನು ದೂರ ಇಡಲಾಗಿತ್ತು. 25 ಅಕ್ಟೋಬರ್ 1947 ರಿಂದ 26 ಜುಲೈ 2019 ರವರೆ ರಾಜ್ಯದಲ್ಲಿ ಒಟ್ಟು 38 ಮುಖ್ಯಮಂತ್ರಿಗಳು ಬಂದು ಹೋಗಿದ್ದರೂ ಒಬ್ಬನೇ ಒಬ್ಬ ದಲಿತ ಅಥವಾ ಮುಸ್ಲಿಮ್‌ ವ್ಯಕ್ತಿ ಇಲ್ಲ ಎಂಬುದನ್ನು ಗಮನಿಸಬೇಕು.

ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗ ಸಮುದಾಯದಿಂದ ಕೆ.ಸಿ ರೆಡ್ಡಿ, ಕೆಂಗಲ್‌ ಹನುಮಂತಯ್ಯ, ಕೆ.ಮಂಜಪ್ಪ, ಎಸ್.ಎಂ.ಕೃಷ್ಣ ಅಧಿಕಾರ ಚಲಾಯಿಸಿದರು. ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಸದಾನಂದ ಗೌಡ, ಮತ್ತು ಜನತಾ ಪರಿವಾರದಿಂದ ದೇವೇಗೌಡ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಒಟ್ಟು 7 ಜನ ಒಟ್ಟು 9 ಬಾರಿ ಒಕ್ಕಲಿಗ ಮುಖ್ಯಮಂತ್ರಿಗಳಿದ್ದಾರೆ.

ಲಿಂಗಾಯಿತ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಮತ್ತು ವೀರೇಂದ್ರ ಪಾಟಿಲ್ ಸೇರಿ ನಾಲ್ಕು ಮುಖ್ಯಮಂತ್ರಿಗಳು 6 ಬಾರಿ ಅಧಿಕಾರ ಚಲಾಯಿಸಿದರು. ಬಿಜೆಪಿಯಿಂದ ಯಾಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್‌ ಸೇರಿ ಇಬ್ಬರು 5 ಬಾರಿ ಮುಖ್ಯಮಂತ್ರಿದಾದರು. ಜನತಾ ಪರಿವಾರದಿಂದ ಎಸ್‌.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದರು.

ಹಿಂದುಳಿದ ವರ್ಗದಿಂದ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಮುಖ್ಯಮಂತ್ರಿಗಳಾಗಿದ್ದಾರೆ. ದೇವರಾಜ್ ಅರಸು (ಅರಸು), ಧರ್ಮ‌ಸಿಂಗ್‌ (ರಜಪೂತ), ವೀರಪ್ಪ ಮೋಯ್ಲಿ(ದೇವಾಡಿಗ), ಬಂಗಾರಪ್ಪ (ಈಡಿಗ), ಮತ್ತು ಸಿದ್ದರಾಮಯ್ಯ (ಕುರುಬ). ಹೀಗೆ 5 ಜನ 6 ಬಾರಿ ಆಯ್ಕೆಯಾಗಿದ್ದಾರೆ.

ಬ್ರಾಹ್ಮಣ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುಂಡೂರಾವ್ ಒಮ್ಮೆ ಮತ್ತು ಜನತಾ ಪರಿವಾರದಲ್ಲಿ ರಾಮಕೃಷ್ಣ ಹೆಗ್ಡೆ ಎರಡು ಬಾರಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಕೇವಲ 3% ಮಾತ್ರವಿದ್ದರು ಸಹ ಈ ಇಬ್ಬರು 3 ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿಗಳು 19 ವರ್ಷ ರಾಜ್ಯವಾಳಿದ್ದಾರೆ. ಲಿಂಗಾಯಿತ ಮುಖ್ಯಮಂತ್ರಿಗಳು 25 ವರ್ಷ ಅಧಿಕಾರದಲ್ಲಿದ್ದರು. ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳು 18 ವರ್ಷ ರಾಜ್ಯವಾಳಿದ್ದರು. ಬ್ರಾಹ್ಮಣ ಮುಖ್ಯಮಂತ್ರಿಗಳು 8 ವರ್ಷ ಅಧಿಕಾರದಲ್ಲಿದ್ದರು. ಆದುದರಿಂದ ಹಿಂದುಳಿದ ವರ್ಗಗಳಲ್ಲಿ ಕೆಲವು ಜಾತಿ ವರ್ಗದವರು, ದಲಿತರು, ಕ್ರೈಸ್ತರು ಮತ್ತು ಮುಸ್ಲಿಮ್ ಸಮುದಾಯಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ನೀಡುವ ಬಗ್ಗೆ ಎಲ್ಲಾ ಪಕ್ಷಗಳು ಚಿಂತಿಸಿ ಸರ್ವರಿಗೂ ಸಮಪಾಲು ಸಿದ್ದಾಂತ ಅನುಕರಿಸಬೇಕಾಗಿದೆ. ಅಲ್ಲದೇ ಮಹಿಳೆಯರಿಗೂ ಕೂಡ ರಾಜಕೀಯ ಅಧಿಕಾರ ಮತ್ತು ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಗಮನ ವಹಿಸಬೇಕಾಗಿದೆ.

(ಲೇಖಕರು SDPI ಪಕ್ಷ ರಾಜ್ಯ ಕಾರ್ಯದರ್ಶಿಗಳು. ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...