Homeಮುಖಪುಟಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಭಾರತೀಯ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇಂದು ವ್ಯಕ್ತಪಡಿಸಲಾಗುತ್ತಿರುವ ಅಭಿಪ್ರಾಯಗಳನ್ನು ಸಂವಿಧಾನ ಸಭೆಯು 70 ವರ್ಷಗಳ ಹಿಂದೆಯೇ ಚರ್ಚಿಸಿತ್ತು.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನವಂಬರ್ 1948ರಲ್ಲಿ ಸದಸ್ಯ ಝಡ್.ಎಚ್. ಲಾರಿ ಅವರು ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಸಂವಿಧಾನ ಸಭೆಯಲ್ಲಿ ತನ್ನ ವಾದವನ್ನು ಮಂಡಿಸುತ್ತಿದ್ದಾಗ ಅವರನ್ನು ಮತ್ತೆಮತ್ತೆ ಅಣಕಿಸಲಾಗಿತ್ತು. ಯುನೈಟೆಡ್ ಪ್ರಾವಿನ್ಸಸ್ (ಬಹುತೇಕ ಈಗಿನ ಉತ್ತರ ಪ್ರದೇಶ)ನ ಈ ಮುಸ್ಲಿಮ್ ನಾಯಕನಲ್ಲಿ ಕೆಲವು ಸದಸ್ಯರು, ಪಾಕಿಸ್ತಾನದಲ್ಲಿ “ನಿಮ್ಮ ನಾಯಕರು” ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಅವರ ಭಾರತೀಯ ಪೌರತ್ವವನ್ನೇ ಪ್ರಶ್ನೆ ಮಾಡಿದ್ದರು.

“ನಾನು ನನ್ನ ಹಕ್ಕುಗಳನ್ನು ಪಾಕಿಸ್ತಾನಕ್ಕೆ ಅಡವು ಇಟ್ಟಿಲ್ಲ. ಪಾಕಿಸ್ತಾನ ಏನು ಮಾಡುತ್ತದೆ, ಏನು ಮಾಡುವುದಿಲ್ಲ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ” ಎಂದು ಅವರು ಅಂತವರಿಗೆ ಸರಿಯಾದ ಉತ್ತರವನ್ನೇ ನೀಡಿದ್ದರು. “ಭಾರತೀಯ ಮುಸ್ಲಿಮರು ಈ ಮಣ್ಣಿನ ಮಕ್ಕಳು. ಆದುದರಿಂದ ನಾವು ಭಾರತೀಯ ಪೌರರ ಹಕ್ಕುಗಳನ್ನು ಕೇಳುತ್ತಿದ್ದೇವೆ” ಎಂದು ವಕೀಲರಾದ ಅವರು ಹೇಳಿದ್ದರು.

ಇದೀಗ ಏಳು ದಶಕಗಳ ನಂತರ ಮುಸ್ಲಿಂ ಸಮುದಾಯವನ್ನು ಅದೇ ರೀತಿಯ, ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ಅಣಕಕ್ಕೆ ಗುರಿಪಡಿಸಲಾಗುತ್ತಿದೆ. ದೇಶದ ಪೌರತ್ವ ಕಾಯಿದೆಗೆ ಧಾರ್ಮಿಕ ಮಾನದಂಡ ನೀಡುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಎನ್‌ಪಿಎ ಮತ್ತು ಎನ್‌ಆರ್‌ಸಿ ವಿರುದ್ಧ ಲಕ್ಷಾಂತರ ಭಾರತೀಯರು ಬೀದಿಗಿಳಿದಿರುವ ಹೊತ್ತಿನಲ್ಲಿ ಅಂದು ಸಂವಿಧಾನ ಸಭೆಯಲ್ಲಿ ಎತ್ತಲಾಗಿದ್ದ ಕೆಲವು ಪ್ರಶ್ನೆಗಳನ್ನೇ ಈಗ ಎತ್ತಲಾಗುತ್ತಿದೆ.

ಸಂವಿಧಾನದ ಕುರಿತು ಹಲವಾರು ಭಯಗಳು, ಅಸಮ್ಮತಿಗಳು ಮತ್ತು ಟೀಕೆಗಳು ಇದ್ದ ಹೊರತಾಗಿಯೂ, ಭಾರತದ ಭವಿಷ್ಯ ಏನಾಗಿರಬೇಕು ಎಂಬದಕ್ಕಿಂತ ಹೆಚ್ಚಾಗಿ, ಏನಾಗಿರಬಾರದು ಎಂಬ ವಿವೇಕ ಅಂದು ಜಯಿಸಿತ್ತು. ಆಗಲೂ ಭಾರತವನ್ನು ಬಹುಸಂಖ್ಯಾತರ ದೇಶವನ್ನಾಗಿ ಮಾಡುವುದರ ಪರವಾಗಿ ಬೊಬ್ಬೆಗಳು ಇದ್ದರೂ, ಅದನ್ನು ಜಾತ್ಯಾತೀತ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು ಎಂದು ಅಂಬೇಡ್ಕರ್ ಮತ್ತು ನೆಹರೂ ನೇತೃತ್ವದಲ್ಲಿ ಸಂವಿಧಾನ ಸಭೆಯ ಸದಸ್ಯರು ನಿರ್ಣಾಯಕವಾಗಿ ನಿರ್ಧರಿಸಿದ್ದರು. ಆಗ ನಡೆದ ಚರ್ಚೆಗಳು ಇಂದಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ನೆರವಾಗಬಹುದು.

ರಕ್ತವೇ? ಹುಟ್ಟೇ?

ಸಂವಿಧಾನ ಸಭೆಯಲ್ಲಿ ನಡೆದ ಅತ್ಯಂತ ಕಠಿಣವಾದ ಕದನವು, ಭಾರತದ ಪೌರತ್ವವನ್ನು ಯಾವ ಆಧಾರದಲ್ಲಿ ನಿರ್ಣಯಿಸಬೇಕು ಎಂಬುದಾಗಿತ್ತು. ಇದು ಲೆಕ್ಸ್ ಸೋಲಿ (lex soli) ಅಂದರೆ, ಜನ್ಮಸ್ಥಾನದ ಕಾನೂನು ಮತ್ತು ಲೆಕ್ಸ್ ಸಾಂಗ್ವಿನಿಸ್ (lex sanguinis) ಅಂದರೆ, ರಕ್ತ ಸಂಬಂಧದ ಕಾನೂನುಗಳೆರಡರ ಪ್ರಕಾರವೂ ಪೌರತ್ವವು ನಿರ್ಧಾರವಾಗುತ್ತದೆ ಎಂದು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ವಾದಿಸಿದ್ದರು. ಸಂವಿಧಾನದಲ್ಲಿರುವ “ನಾವು ಜನರು” ಎಂಬ ಉಲ್ಲೇಖದಂತೆ ದೇಶದಲ್ಲಿ ಹುಟ್ಟಿದ ಎಲ್ಲರನ್ನೂ ಯಾವುದೇ ಧರ್ಮದ ಹಂಗಿಲ್ಲದೆ ಭಾರತೀಯ ಪ್ರಜೆಗಳೆಂದು ಪರಿಗಣಿಸಬೇಕು ಎಂದು ಹಲವರು ವಾದಿಸಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಎಲ್ಲಿಯೇ ಹುಟ್ಟಿದ್ದರೂ ರಕ್ತಸಂಬಂಧ, ನಿರ್ದಿಷ್ಟ ಜನಾಂಗಕ್ಕೆ ಸೇರಿದವರಿಗೆ ಪೌರತ್ವ ನೀಡಬೇಕು ಎಂದು ಕೆಲವರು ವಾದಿಸಿದ್ದರು. ಇಂದು ಇದೇ ವಾದ ಸಿಎಎ ಮೂಲಕ ಮತ್ತೆ ತಲೆಯೆತ್ತಿದೆ. ಅದರ ಪ್ರಕಾರ ನಿರ್ದಿಷ್ಟ ಜನಾಂಗಕ್ಕೆ, ಅಥವಾ ಧರ್ಮಕ್ಕೆ ಸೇರದ ಜನರು (ಮುಖ್ಯವಾಗಿ ಮುಸ್ಲಿಮರು) ಸಮಾನ ಹಕ್ಕುಗಳನ್ನು ಹೊಂದಿಲ್ಲ ಮತ್ತು ಅವರನ್ನು ನೈಸರ್ಗಿಕ ಪೌರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಬೆಂಬಲಿಗರ ವಾದವಾಗಿದೆ.

ಜಾತ್ಯಾತೀತತೆ ಅಪರಾಧವೇ?

ಧರ್ಮಾಧರಿತ ಪೌರತ್ವವನ್ನು ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ ಮತ್ತು ಹಲವಾರು ಇತರರು ವಿರೋಧಿಸಿದ್ದರು. ಆದರೆ ಕೆಲವರು- ನಾಝಿ ಜರ್ಮನಿಯ ತತ್ವಗಳು ಮತ್ತು ಫ್ಯಾಸಿಸ್ಟ್ ಇಟಲಿಯ ತತ್ವಗಳಿಂದ ಪ್ರಭಾವಿತರಾಗಿ ಅವುಗಳನ್ನು ಮೆಚ್ಚಿ ಅನುಸರಿಸುತ್ತಿದ್ದ ಕೆಲವು ಸಂಘಟನೆಗಳಿಗೆ ಸೇರಿದವರೇ ಧರ್ಮ ಮತ್ತು ಪೌರತ್ವಗಳ ನಡುವೆ ಸಂಬಂಧ ಕಲ್ಪಿಸಲು ಪಟ್ಟುಹಿಡಿದಿದ್ದರು. (ಅವರೇ ಇಂದಿಲ್ಲಿ ಅಧಿಕಾರ ಹಿಡಿದಿದ್ದಾರೆ.)  ಇವರಲ್ಲಿ ಪ್ರಮುಖರೆಂದರೆ ಪಿ. ಎಸ್. ದೇಶ್‌ಮುಖ್. ಅವರು ಆಗಸ್ಟ್ 11, 1949ರಂದು ಮಾಡಿದ ಭಾಷಣದ ಸಾರಾಂಶ ಕೆಳಗಿದೆ:

ಡಾ. ಬಿ.ಆರ್.  ಅಂಬೇಡ್ಕರ್ ಅವರ ಪೌರತ್ವ ಕುರಿತ ವ್ಯಾಖ್ಯಾನವು  ಭಾರತೀಯ ಪೌರತ್ವವನ್ನು “ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಪೌರತ್ವ”ವನ್ನಾಗಿ ಮಾಡುವುದೆಂದು ದೇಶ್‌ಮುಖ್ ಅವರು ಭಾವಿಸಿದ್ದರು. ಹುಟ್ಟಿನಿಂದ ಪೌರತ್ವ ನೀಡುವ ಕುರಿತು ಅವರಿಗೆ ಅಸಮಾಧಾನವಿತ್ತು. ಕರಡು ವಿಧಿಯನ್ನು ಸ್ವೀಕರಿಸಿದರೆ ಮುಂಬಯಿ ಬಂದರಿನ ಮೂಲಕ ಪ್ರಯಾಣಿಸುವ ಮಹಿಳೆಯೊಬ್ಬಳು ಹೆತ್ತ ಮಗುವಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಅವರು ವಾದಿಸಿದ್ದರು ದೇಶ್‌ಮುಖ್ ಅವರು ಕನಿಷ್ಟ ಎರಡು ತಿದ್ದುಪಡಿಗಳಿಗೆ ಬೇಡಿಕೆ ಇಟ್ಟಿದ್ದರು.

ಮೊದಲನೆಯದು ಕೇವಲ ಭಾರತದಲ್ಲಿ ಹುಟ್ಟುವುದು ಸಾಕಾಗದು; ಮಗು ಭಾರತೀಯ ಹೆತ್ತವರಿಗೆ ಹುಟ್ಟಿರಬೇಕು ಎಂಬುದು. ಎರಡನೆಯದೆಂದರೆ, ಹಿಂದೂಗಳು ಮತ್ತು ಸಿಕ್ಖರು ಪ್ರಪಂಚದ ಯಾವುದೇ ಕಡೆಯಲ್ಲಿ ವಾಸಿಸುತ್ತಿದ್ದರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿರಬೇಕು ಎಂಬುದು.

ಇದೇ ಅಭಿಪ್ರಾಯಗಳು ನರೇಂದ್ರ ಮೋದಿ ಚುನಾವಣಾ ಗೆಲುವಿನ ನಂತರ ಮೇ 2019ರಂದು ಮಾಡಿದ ಭಾಷಣದಲ್ಲಿ ಪ್ರತಿಫಲಿಸಿದೆ. ಅದರಲ್ಲಿ ಅವರು ಜಾತ್ಯತೀತ ಪರಿಕಲ್ಪನೆಯನ್ನು ದೂರಿ, ಯಾವ ರಾಜಕೀಯ ಪಕ್ಷವೂ ಜಾತ್ಯತೀತತೆಯ ಮುಖವಾಡದ ಹಿಂದೆ ಅಡಗುವ ಧೈರ್ಯ ತೋರಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪೌರತ್ವದ ಪ್ರಶ್ನೆ ಎದ್ದಿದೆ. ದೇಶವನ್ನು ತಳಮಳಕ್ಕೆ ದೂಡಿದೆ. ಇದು 1948ರ ನಾಝಿ, ಫ್ಯಾಸಿಸ್ಟ್ ಬೆಂಬಲಿಗರ ಪ್ರಯತ್ನವನ್ನು ಮುಂದುವರಿಸುವ ಯತ್ನ.

(ಜಾತ್ಯತೀತತೆಯ ಪರವಾಗಿ ಸಂವಿಧಾನ ಸಭೆಯಲ್ಲಿ ಅಂದು ನಡೆದ ಚರ್ಚೆಗಳ ಕುರಿತು ಪ್ರತ್ಯೇಕ ಲೇಖನವನ್ನು ನಿರೀಕ್ಷಿಸಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...