Homeಮುಖಪುಟಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ.

- Advertisement -
- Advertisement -

-ಅಭಿಜಿತ್ ಅಯ್ಯರ್-ಮಿತ್ರ

ಅನುವಾದ: ನಿಖಿಲ್ ಕೋಲ್ಪೆ

ಕೊರೋನಾ ಬಿಕ್ಕಟ್ಟನ್ನು ಉಂಟುಮಾಡಿರುವ ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಘೋಷಿಸಲಾಗಿರುವ 21 ದಿನಗಳ ದಿಗ್ಭಂದನ ಅಥವಾ ಲಾಕ್‌ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿದ ಎರಡನೇ ಭಾಷಣವು ಅವರು ಹಿಂದಿನ ತಪ್ಪುಗಳಿಂದ ಕಲಿತಿಲ್ಲ ಅಥವಾ ಅವರಿಗೆ ಕಲಿಯುವ ಮನಸ್ಸೇ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಅವರು ಚುನಾವಣೆಗಳನ್ನು ಗೆಲ್ಲಬಹುದು; ಬೇರೇನನ್ನೂ ಮಾಡಲು ಅಸಮರ್ಥ ಎಂದೂ ಈ ಭಾಷಣ ತೋರಿಸಿಕೊಟ್ಟಿದೆ.

ದೇಶದ ನಾಡಿ ಮಿಡಿತವನ್ನು ಕಂಡುಕೊಂಡ ವ್ಯಕ್ತಿಯೊಬ್ಬರು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಅದನ್ನು ಸಂಪೂರ್ಣ ಕಳೆದುಕೊಳ್ಳುವುದಾದರೂ ಹೇಗೆ? ಆದರೆ, 21 ದಿನಗಳ ಕೊರೋನಾ ವೈರಸ್ ಲಾಕ್‌ಡೌನ್ ಕುರಿತು ನರೇಂದ್ರ ಮೋದಿಯ ಮಂಗಳವಾರದ ಭಾಷಣ ಅದು ಸಾಧ್ಯ ಎಂದು ತೋರಿಸಿದೆ.

ಬಿಕ್ಕಟ್ಟಿನ ಸಮಯದಲ್ಲಿ ಎರಡು ರೀತಿಯ ಭಾಷಣಗಳನ್ನು ಮಾಡಲಾಗುತ್ತದೆ. ಮೊದಲನೆಯದು- ವಿನ್‌ಸ್ಟನ್ ಚರ್ಚಿಲ್‌ರ ಯುದ್ಧಕಾಲದ ಭಾಷಣಗಳಂತೆ ಮನೋಬಲ ಹೆಚ್ಚಿಸುವಂತವುಗಳು ಮತ್ತು ಎರಡನೆಯವು ನಿರ್ದಿಷ್ಟವಾಗಿ ಏನು ಮಾಡಬೇಕು ಎಂದು ಸೈನಿಕರಿಗೆ ಸ್ಪಷ್ಟ ನಿರ್ದೇಶನ ನೀಡುವಂತವುಗಳು. ಮೊದಲನೆಯದು ಅಸ್ಪಷ್ಟವಾಗಿದ್ದರೆ, ಎರಡನೆಯದು ನಿಖರ ಮತ್ತು ನಿರ್ದಿಷ್ಟ ವಿವರಗಳನ್ನು ಒಳಕೊಡಿರುವಂತದ್ದಾಗಿರುತ್ತದೆ. ಸಮಸ್ಯೆಯೆಂದರೆ ನೋವೆಲ್ ಕೊರೋನಾ ವೈರಸ್ ಅಥವಾ ಕೋವಿಡ್-19 ಸಂದರ್ಭದಲ್ಲಿ ನಾವು ಪ್ರಜೆಗಳಲ್ಲಿ ಪ್ರತಿಯೊಬ್ಬರೂ ಸೈನಿಕರಾಗಬೇಕಾಗುತ್ತದೆ. ನಮಗೆ ಮಾನೋಬಲ ಹೆಚ್ಚಿಸುವಂತವುಗಳೂ ಬೇಕು; ನಿರ್ದಿಷ್ಟ ವಿವರ, ನಿರ್ದೇಶನ ನೀಡುವಂತವುಗಳೂ ಬೇಕು. ಈ ನಿಟ್ಟಿನಲ್ಲಿ ಮೋದಿಯವರ ಮಂಗಳವಾರದ ಭಾಷಣ ದಯನೀಯವಾಗಿ ಸೋತಿತು.

ಅವರ ಹಿಂದಿನ ಭಾಷಣ “ಒಗ್ಗಟ್ಟಿನ ದಿನ” ಅಥವಾ “ಜನತಾ ಕರ್ಫ್ಯೂ”- ಸ್ಥೈರ್ಯದ ಕುರಿತು ಇದ್ದರೆ, ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ ಎರಡನೇ ಭಾಷಣವು ಮಿಲಿಟರಿ ಮಾದರಿ ಕಾರ್ಯಾಚರಣೆಯ ಕುರಿತಂತೆ ಇತ್ತು. ಇದನ್ನು ಅವರು ದಿಲ್ಲಿ ಗಲಭೆಗಳನ್ನು ಹೇಗೆ ನಿಭಾಯಿಸಿದರು ಎಂಬುದರ ಜೊತೆ ಜೋಡಿಸಿಕೊಂಡರೆ, ಒಂದು ನಿರ್ದಿಷ್ಟ ಮಾದರಿಯು ಗೋಚರಿಸುತ್ತದೆ. ಅದು ಈ ಮೂರು ವಿಷಯಗಳಲ್ಲಿ ಒಂದನ್ನು ತೋರಿಸುತ್ತದೆ: ಕೆಟ್ಟ ನಿರ್ವಹಣೆ, ಸೋಮಾರಿತನ ಅಥವಾ ದುರಂಹಂಕಾರ.

ಗುಜರಾತ್ ಗಲಭೆಗಳು

ಈ ಮಾದರಿ ಹೀಗಿದೆ: ಸಂದೇಶ ನೀಡುವುದು, ಕಾನೂನು ಮತ್ತು ಶಿಸ್ತು ಹಾಗೂ ಕೈಕಾಲು ಬಿಡುವುದು. ಪ್ರತಿಯೊಂದು ಸಂದರ್ಭದಲ್ಲಿ ಹಿಂದಿನ ತಪ್ಪುಗಳನ್ನು ಮತ್ತೆಮತ್ತೆ ಮಾಡಲಾಗುತ್ತಿರುವುದನ್ನು ನಾವು ನೋಡುತ್ತೇವೆ. ಹೀಗಿದ್ದರೂ, ಇವು ವಾಸ್ತವವಾಗಿ ತಪ್ಪುಗಳಲ್ಲ; ಉದ್ದೇಶಪೂರ್ವಕವಾಗಿ ಮಾಡಿದಂತವುಗಳು ಎಂಬ ಕಂಗೆಡಿಸುವ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ.

ಮೋದಿ ಸಂದೇಶ ನೀಡುವುದರಲ್ಲಿ ನಿಷ್ಣಾತರು ಮತ್ತು ತನ್ನ ವಿಚಾರಗಳನ್ನು ಹೇಗೆ ಪ್ಯಾಕೇಜ್ ಮಾಡಿ ಮಾರಬೇಕು ಎಂಬುದು ಅವರಿಗೆ ಗೊತ್ತಿದೆ ಎಂಬುದಕ್ಕೆ ಸಂಸತ್ತಿನಲ್ಲಿ 303 ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿ. ಹೀಗಿದ್ದರೂ ಅವರ ಸಂದೇಶ ಪ್ರಭಾವ ಬೀರುವುದು ಮುಖ್ಯವಾಗಿ ಕೆಳಹಂತದ ಜನಸಾಮಾನ್ಯರ ಮೇಲೆ ಮಾತ್ರ.

ಗುಜರಾತ್ ಗಲಭೆಯ ಚಿತ್ರ

ಇದನ್ನು ಪರಿಗಣಿಸಿ: ಮೋದಿ ಮುಖ್ಯಮಂತ್ರಿಯಾಗಿದ್ದಾಗ ನಡೆದ 2002ರ ಗೋದ್ರಾ ಗಲಭೆಗಳ ನಂತರ ಎರಡು ಹಂತಗಳ ಸಂದೇಶಗಳನ್ನು ನೀಡಲಾಗಿತ್ತು. ವಿದೇಶಿ ಮತ್ತು ದೇಶಿ ಮಾಧ್ಯಮಗಳ ಮಟ್ಟಿಗೆ ಈ ಗಲಭೆಗಳಲ್ಲಿ ಸರಕಾರದ ಶಾಮೀಲಾತಿ ಇತ್ತು. ಆದರೆ, ಮಾಧ್ಯಮಗಳನ್ನು ನಂಬದವರಿಗೆ (ತೀವ್ರವಾದ ಜಾತಿ ಸಂಘರ್ಷದ ಪ್ರದೇಶವಾದ ದಕ್ಷಿಣ ಆರ್ಕಾಟ್‌ನಲ್ಲಿ ನಡೆದ ಗಲಭೆಗಳನ್ನು ಬಾಲ್ಯದಲ್ಲಿ ಕಂಡ ನಾನು, ನನ್ನನ್ನು ಈ ಗುಂಪಿನಲ್ಲಿ ಸೇರಿಸುತ್ತೇನೆ) ಇದು ಯಾವುದೇ ಸುಳಿವಿಲ್ಲದ, ತಿಳುವಳಿಕೆ ಇಲ್ಲದ ಮಾಧ್ಯಮಗಳಿಂದ ದಾಳಿಗೊಳಗಾದ ವ್ಯಕ್ತಿಯೊಬ್ಬನ ಕತೆಯಾಗಿತ್ತು.

ದಿಲ್ಲಿ ಗಲಭೆಗಳು

ಈ ಎರಡು ರೀತಿಯ ತದ್ವಿರುದ್ಧ ನಿರೂಪಣೆಯು ಮೋದಿಗೆ ಚೆನ್ನಾಗಿ ಉಪಯೋಗಕ್ಕೆ ಬಂತು. ಅದು ಆತನಿಗೆ 2020ರ ಈಶಾನ್ಯ ದಿಲ್ಲಿ ಗಲಭೆಗಳಿಗೆ ದಾರಿ ತೋರಿಸಿತು. ಗುಜರಾತ್ ಗಲಭೆಗಳು ಭಾರತ, ಗುಜರಾತ್ ಮತ್ತು ಸ್ವತಃ ಮೋದಿಗೆ ಉಂಟುಮಾಡಿದ ಗೌರವಹಾನಿಯು ಮೋದಿ ದಿಲ್ಲಿ ಗಲಭೆಗಳನ್ನು ನಿಭಾಯಿಸಿದ ರೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ತರಲಿಲ್ಲ. ಸುರಕ್ಷಾ ಬಲಗಳನ್ನು ನಿಯೋಜಿಸುವುದರಲ್ಲಿ ಅದೇ ವಿಳಂಬ, ಅದೇ ರೀತಿಯಲ್ಲಿ ಪೊಲೀಸರು ಒಂದೇ ಪಕ್ಷವನ್ನು ವಹಿಸಿ ಸಕ್ರಿಯವಾಗಿ ದೊಂಬಿಯಲ್ಲಿ ಭಾಗವಹಿಸಿದುದು ಮತ್ತು ಅದೇ ಹತ್ಯಾಕಾಂಡದ ಅರೋಪಗಳು. ವ್ಯತ್ಯಾಸಗಳೇನಿಲ್ಲ.

ಇಲ್ಲೊಂದು ಮಾದರಿ ಗಮನಿಸಿ

ಒಮ್ಮೆ ಮುಖ್ಯಮಂತ್ರಿಯಾಗಿ, ಮತ್ತೊಮ್ಮೆ ಪ್ರಧಾನಿಯಾಗಿ ಎರಡು ಗಲಭೆಗಳ ಅಧ್ಯಕ್ಷತೆ ವಹಿಸಿದ ಹೊರತಾಗಿಯೂ ಮೋದಿ ಮಾಡದೇ ಇರುವ ಅಚ್ಚರಿಕಾರಕ ವಿಷಯವೊಂದಿದೆ. ಅದೆಂದರೆ, ಯಾವುದೇ ರೀತಿಯ ಪೊಲೀಸ್ ಸುಧಾರಣೆ ಆರಂಭಿಸದಿರುವುದು ಅಥವಾ ನಿರ್ದಿಷ್ಟ ಕಾರ್ಯಸೂಚಿಯನ್ನು ರೂಪಿಸದೇ ಇರುವುದು. ಗುಂಪನ್ನು ನಿಯಂತ್ರಿಸಲು ಅತೀ ಮುಖ್ಯವಾದುದೆಂದರೆ, ಮೊತ್ತ ಮೊದಲಾಗಿ ಗುಂಪು ಸೇರುವುದನ್ನು ತಡೆಯುವುದು ಎಂದು ಯಾವುದೇ ವೃತ್ತಿಪರ ಕಾನೂನು ಮತ್ತು ಶಿಸ್ತು ತಜ್ಞರು ನಿಮಗೆ ಹೇಳುತ್ತಾರೆ. ಒಮ್ಮೆ ಗುಂಪು ಸೇರಿಬಿಟ್ಟರೆ ಮುಗಿಯಿತು; ಆಗಲೇ ಆಟ ಸೋತಂತೆ. ಹೀಗಿದ್ದರೂ, ನಾವು ಯಾವುದೇ ಗುಪ್ತಚರ ಅಥವಾ ಕಣ್ಗಾವಲು ಸುಧಾರಣೆಗಳನ್ನು ಮೋದಿ ಅಡಿಯಲ್ಲಿ ನೋಡಿಲ್ಲ.

ಒಂದೋ ಮೋದಿ ಆಲಿಸುವುದಿಲ್ಲ, ಇಲ್ಲವೇ ಅವರಿಗೆ ಅದು ಬೇಕಾಗಿಲ್ಲ. ಇನ್ನೊಂದು ಕಳವಳಕಾರಿ ತೀರ್ಮಾನಕ್ಕೆ ಬರಬಹುದು: ಅದೆಂದರೆ, ಅವರುಗೆ ಬೇಕಾಗಿರುವುದು ಅದೇ. ದಿಲ್ಲಿಯಲ್ಲಿ ಏನು ನಡೆಯಿತು ಎಂಬ ಬಗ್ಗೆ ನಮಗೆ ಇನ್ನೂ ಯಾವುದೇ ಸರಿಯಾದ ಸರಕಾರಿ ವಿವರಣೆ ದೊರೆತಿಲ್ಲ ಎಂಬ ವಾಸ್ತವವು, ಮೋದಿಗೆ ಈಗ ನೀಡಲಾಗುತ್ತಿರುವ ಹತ್ಯಾಕಾಂಡದ ವಿವರಣೆಯಿಂದ ಸಾಕಷ್ಟು ಸಂತೋಷವಾಗಿದೆ ಎಂಬುದನ್ನು ಸೂಚಿಸುವಂತಿದೆ. ಆತ ಇದರ ಲಾಭವನ್ನು ಬಾಚಿಕೊಳ್ಳಬಹುದು. ಆದರೆ, ಭಾರತ ಮಾತ್ರ ನಷ್ಟ ಅನುಭವಿಸಬೇಕಾಗುತ್ತದೆ.

ಒಂದು ಸ್ಥಾಪಿತ ಮಾದರಿ

ಮೋದಿಯ ಭಾಷಣದ ನಂತರ ರಾತ್ರಿ ಭಾರತದಾದ್ಯಂತ ಜನರು ಭಯದಿಂದ ಸರಕುಗಳನ್ನು ಕೊಳ್ಳಲು ನುಗ್ಗಿದುದರಲ್ಲಿ ನಾವು ಇದೇ ಮಾದರಿಯನ್ನು ನೋಡುತ್ತೇವೆ. 2016ರಲ್ಲಿ ತನ್ನ ನಾಯಕತ್ವದಲ್ಲೇ ನಡೆದ ನೋಟು ಅಮಾನ್ಯೀಕರಣವು ಉಂಟುಮಾಡಿದ ಭಯ ಮತ್ತು ಗೊಂದಲವನ್ನು ಕಂಡಿರುವ ಮೋದಿಗೆ ತನ್ನ ಭಾಷಣವು ಯಾವ ರೀತಿಯ ಭಯ ಮತ್ತು ಗೊಂದಲ ಉಂಟುಮಾಡುವುದು ಎಂಬುದು ಗೊತ್ತಿರಬೇಕಿತ್ತು ಮತ್ತು ಗೊತ್ತಿರಬೇಕಾದುದು ಅವರ ಕರ್ತವ್ಯವೂ ಆಗಿತ್ತು. ಮೋದಿ ಭಾಷಣವನ್ನು ಲೈವ್ ಟ್ವೀಟ್ ಮಾಡುತ್ತಿದ್ದಂತೆಯೇ ಭದ್ರತೆ ಮತ್ತು ಗುಂಪು ನಿಯಂತ್ರಣದಲ್ಲಿ ನನಗಿರುವ ಅಲ್ಪ ತರಬೇತಿಯೂ, ಭಯದ ಖರೀದಿ ಅನಿವಾರ್ಯ ಎಂದು ಸೂಚಿಸಿತ್ತು. ಹೀಗಿದ್ದರೂ ಭದ್ರತೆ ಮತ್ತು ಸಾಮಾಜಿಕ ತಜ್ಞರ ವಸ್ತುಶಃ ದಂಡಿನಿಂದಲೇ ಸುತ್ತುವರಿಯಲ್ಪಟ್ಟಿರುವ ಈ ಮನುಷ್ಯನಿಗೆ ಇದನ್ನು ಊಹಿಸಲು ಸಾಧ್ಯವಾಗಿಲ್ಲವೆ? ಒಂದೋ ಆತ ಆಲಿಸುವುದಿಲ್ಲ ಇಲ್ಲವೇ ಆತನಿಗೆ ಚಿಂತೆಯಿಲ್ಲ ಅಥವಾ ಆತನಿಗೆ ನಿಜಕ್ಕೂ ಬೇಕಾಗಿರುವುದು ಇದೇ.

ನಮಗೆ ಇನ್ನೊಂದು ಮಾದರಿಯ ಪರಿಚಯವಿದೆ. ಅದೆಂದರೆ, ‘ಮೊದಲ ದಿನ ಗರಿಷ್ಟ ಆಘಾತ’ ಎಂಬಂತಹ, ಹೆಚ್ಚು ಮಹತ್ವ ಇರುವ ಎರಡನೇ ಮತ್ತು ಮೂರನೇ ಹಂತದ ಪರಿಣಾಮಗಳನ್ನು ಸಂಪೂರ್ಣ ಕಡೆಗಣಿಸುವ ಮನೋಭಾವದ ಆತುರದ ಧೋರಣೆಗಳು. ಇದನ್ನು ನಾವು ಮತ್ತೆ ಮತ್ತೆ ನೋಡಿದ್ದೇವೆ- ಕೆಲವನ್ನೇ ಹೆಸರಿಸಬೇಕೆಂದರೆ: ಅಮಾನ್ಯೀಕರಣ, ಜಿಎ‌ಸ್‌ಟಿ, ಬಾಲಕೋಟ್ ಮತ್ತು ವಿಧಿ 370.

ಚುಟುಕಾಗಿ ಹೇಳುವುದಾದರೆ, ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ. ಅಕಾಡೆಮಿಕ್ ಆಗಿ ಒಂದು ಮಾದರಿಯನ್ನು ನಿರೂಪಿಸಿಲು ಮೂರು ನಿದರ್ಶನಗಳು ಬೇಕಾಗುತ್ತವೆ. ಈಗ ನಮ್ಮ ಬಳಿ ನಾಲ್ಕು ಇವೆ: ಗೋದ್ರಾ, ಅಮಾನ್ಯೀಕರಣ, ದಿಲ್ಲಿ ಗಲಭೆಗಳು ಮತ್ತು ಇದೀಗ ಕೊರೋನಾ ವೈರಸ್ ಲಾಕ್‌ಡೌನ್. ಮೋದಿ ಚುನಾವಣೆಗಳನ್ನು ಗೆಲ್ಲಬಹುದು, ಬೇರೇನನ್ನೂ ಮಾಡಲು ಅಸಮರ್ಥ.

(ಲೇಖಕರು ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಎಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್ ಸಂಸ್ಥೆಯಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ. ಅಭಿಪ್ರಾಯಗಳು ಲೇಖಕರವು.)

ಕೃಪೆ: ದಿ ಪ್ರಿಂಟ್ ಡಾಟ್ ಇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...