Homeಮುಖಪುಟಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ.

- Advertisement -
- Advertisement -

-ಅಭಿಜಿತ್ ಅಯ್ಯರ್-ಮಿತ್ರ

ಅನುವಾದ: ನಿಖಿಲ್ ಕೋಲ್ಪೆ

ಕೊರೋನಾ ಬಿಕ್ಕಟ್ಟನ್ನು ಉಂಟುಮಾಡಿರುವ ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಘೋಷಿಸಲಾಗಿರುವ 21 ದಿನಗಳ ದಿಗ್ಭಂದನ ಅಥವಾ ಲಾಕ್‌ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿದ ಎರಡನೇ ಭಾಷಣವು ಅವರು ಹಿಂದಿನ ತಪ್ಪುಗಳಿಂದ ಕಲಿತಿಲ್ಲ ಅಥವಾ ಅವರಿಗೆ ಕಲಿಯುವ ಮನಸ್ಸೇ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಅವರು ಚುನಾವಣೆಗಳನ್ನು ಗೆಲ್ಲಬಹುದು; ಬೇರೇನನ್ನೂ ಮಾಡಲು ಅಸಮರ್ಥ ಎಂದೂ ಈ ಭಾಷಣ ತೋರಿಸಿಕೊಟ್ಟಿದೆ.

ದೇಶದ ನಾಡಿ ಮಿಡಿತವನ್ನು ಕಂಡುಕೊಂಡ ವ್ಯಕ್ತಿಯೊಬ್ಬರು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಅದನ್ನು ಸಂಪೂರ್ಣ ಕಳೆದುಕೊಳ್ಳುವುದಾದರೂ ಹೇಗೆ? ಆದರೆ, 21 ದಿನಗಳ ಕೊರೋನಾ ವೈರಸ್ ಲಾಕ್‌ಡೌನ್ ಕುರಿತು ನರೇಂದ್ರ ಮೋದಿಯ ಮಂಗಳವಾರದ ಭಾಷಣ ಅದು ಸಾಧ್ಯ ಎಂದು ತೋರಿಸಿದೆ.

ಬಿಕ್ಕಟ್ಟಿನ ಸಮಯದಲ್ಲಿ ಎರಡು ರೀತಿಯ ಭಾಷಣಗಳನ್ನು ಮಾಡಲಾಗುತ್ತದೆ. ಮೊದಲನೆಯದು- ವಿನ್‌ಸ್ಟನ್ ಚರ್ಚಿಲ್‌ರ ಯುದ್ಧಕಾಲದ ಭಾಷಣಗಳಂತೆ ಮನೋಬಲ ಹೆಚ್ಚಿಸುವಂತವುಗಳು ಮತ್ತು ಎರಡನೆಯವು ನಿರ್ದಿಷ್ಟವಾಗಿ ಏನು ಮಾಡಬೇಕು ಎಂದು ಸೈನಿಕರಿಗೆ ಸ್ಪಷ್ಟ ನಿರ್ದೇಶನ ನೀಡುವಂತವುಗಳು. ಮೊದಲನೆಯದು ಅಸ್ಪಷ್ಟವಾಗಿದ್ದರೆ, ಎರಡನೆಯದು ನಿಖರ ಮತ್ತು ನಿರ್ದಿಷ್ಟ ವಿವರಗಳನ್ನು ಒಳಕೊಡಿರುವಂತದ್ದಾಗಿರುತ್ತದೆ. ಸಮಸ್ಯೆಯೆಂದರೆ ನೋವೆಲ್ ಕೊರೋನಾ ವೈರಸ್ ಅಥವಾ ಕೋವಿಡ್-19 ಸಂದರ್ಭದಲ್ಲಿ ನಾವು ಪ್ರಜೆಗಳಲ್ಲಿ ಪ್ರತಿಯೊಬ್ಬರೂ ಸೈನಿಕರಾಗಬೇಕಾಗುತ್ತದೆ. ನಮಗೆ ಮಾನೋಬಲ ಹೆಚ್ಚಿಸುವಂತವುಗಳೂ ಬೇಕು; ನಿರ್ದಿಷ್ಟ ವಿವರ, ನಿರ್ದೇಶನ ನೀಡುವಂತವುಗಳೂ ಬೇಕು. ಈ ನಿಟ್ಟಿನಲ್ಲಿ ಮೋದಿಯವರ ಮಂಗಳವಾರದ ಭಾಷಣ ದಯನೀಯವಾಗಿ ಸೋತಿತು.

ಅವರ ಹಿಂದಿನ ಭಾಷಣ “ಒಗ್ಗಟ್ಟಿನ ದಿನ” ಅಥವಾ “ಜನತಾ ಕರ್ಫ್ಯೂ”- ಸ್ಥೈರ್ಯದ ಕುರಿತು ಇದ್ದರೆ, ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ ಎರಡನೇ ಭಾಷಣವು ಮಿಲಿಟರಿ ಮಾದರಿ ಕಾರ್ಯಾಚರಣೆಯ ಕುರಿತಂತೆ ಇತ್ತು. ಇದನ್ನು ಅವರು ದಿಲ್ಲಿ ಗಲಭೆಗಳನ್ನು ಹೇಗೆ ನಿಭಾಯಿಸಿದರು ಎಂಬುದರ ಜೊತೆ ಜೋಡಿಸಿಕೊಂಡರೆ, ಒಂದು ನಿರ್ದಿಷ್ಟ ಮಾದರಿಯು ಗೋಚರಿಸುತ್ತದೆ. ಅದು ಈ ಮೂರು ವಿಷಯಗಳಲ್ಲಿ ಒಂದನ್ನು ತೋರಿಸುತ್ತದೆ: ಕೆಟ್ಟ ನಿರ್ವಹಣೆ, ಸೋಮಾರಿತನ ಅಥವಾ ದುರಂಹಂಕಾರ.

ಗುಜರಾತ್ ಗಲಭೆಗಳು

ಈ ಮಾದರಿ ಹೀಗಿದೆ: ಸಂದೇಶ ನೀಡುವುದು, ಕಾನೂನು ಮತ್ತು ಶಿಸ್ತು ಹಾಗೂ ಕೈಕಾಲು ಬಿಡುವುದು. ಪ್ರತಿಯೊಂದು ಸಂದರ್ಭದಲ್ಲಿ ಹಿಂದಿನ ತಪ್ಪುಗಳನ್ನು ಮತ್ತೆಮತ್ತೆ ಮಾಡಲಾಗುತ್ತಿರುವುದನ್ನು ನಾವು ನೋಡುತ್ತೇವೆ. ಹೀಗಿದ್ದರೂ, ಇವು ವಾಸ್ತವವಾಗಿ ತಪ್ಪುಗಳಲ್ಲ; ಉದ್ದೇಶಪೂರ್ವಕವಾಗಿ ಮಾಡಿದಂತವುಗಳು ಎಂಬ ಕಂಗೆಡಿಸುವ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ.

ಮೋದಿ ಸಂದೇಶ ನೀಡುವುದರಲ್ಲಿ ನಿಷ್ಣಾತರು ಮತ್ತು ತನ್ನ ವಿಚಾರಗಳನ್ನು ಹೇಗೆ ಪ್ಯಾಕೇಜ್ ಮಾಡಿ ಮಾರಬೇಕು ಎಂಬುದು ಅವರಿಗೆ ಗೊತ್ತಿದೆ ಎಂಬುದಕ್ಕೆ ಸಂಸತ್ತಿನಲ್ಲಿ 303 ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿ. ಹೀಗಿದ್ದರೂ ಅವರ ಸಂದೇಶ ಪ್ರಭಾವ ಬೀರುವುದು ಮುಖ್ಯವಾಗಿ ಕೆಳಹಂತದ ಜನಸಾಮಾನ್ಯರ ಮೇಲೆ ಮಾತ್ರ.

ಗುಜರಾತ್ ಗಲಭೆಯ ಚಿತ್ರ

ಇದನ್ನು ಪರಿಗಣಿಸಿ: ಮೋದಿ ಮುಖ್ಯಮಂತ್ರಿಯಾಗಿದ್ದಾಗ ನಡೆದ 2002ರ ಗೋದ್ರಾ ಗಲಭೆಗಳ ನಂತರ ಎರಡು ಹಂತಗಳ ಸಂದೇಶಗಳನ್ನು ನೀಡಲಾಗಿತ್ತು. ವಿದೇಶಿ ಮತ್ತು ದೇಶಿ ಮಾಧ್ಯಮಗಳ ಮಟ್ಟಿಗೆ ಈ ಗಲಭೆಗಳಲ್ಲಿ ಸರಕಾರದ ಶಾಮೀಲಾತಿ ಇತ್ತು. ಆದರೆ, ಮಾಧ್ಯಮಗಳನ್ನು ನಂಬದವರಿಗೆ (ತೀವ್ರವಾದ ಜಾತಿ ಸಂಘರ್ಷದ ಪ್ರದೇಶವಾದ ದಕ್ಷಿಣ ಆರ್ಕಾಟ್‌ನಲ್ಲಿ ನಡೆದ ಗಲಭೆಗಳನ್ನು ಬಾಲ್ಯದಲ್ಲಿ ಕಂಡ ನಾನು, ನನ್ನನ್ನು ಈ ಗುಂಪಿನಲ್ಲಿ ಸೇರಿಸುತ್ತೇನೆ) ಇದು ಯಾವುದೇ ಸುಳಿವಿಲ್ಲದ, ತಿಳುವಳಿಕೆ ಇಲ್ಲದ ಮಾಧ್ಯಮಗಳಿಂದ ದಾಳಿಗೊಳಗಾದ ವ್ಯಕ್ತಿಯೊಬ್ಬನ ಕತೆಯಾಗಿತ್ತು.

ದಿಲ್ಲಿ ಗಲಭೆಗಳು

ಈ ಎರಡು ರೀತಿಯ ತದ್ವಿರುದ್ಧ ನಿರೂಪಣೆಯು ಮೋದಿಗೆ ಚೆನ್ನಾಗಿ ಉಪಯೋಗಕ್ಕೆ ಬಂತು. ಅದು ಆತನಿಗೆ 2020ರ ಈಶಾನ್ಯ ದಿಲ್ಲಿ ಗಲಭೆಗಳಿಗೆ ದಾರಿ ತೋರಿಸಿತು. ಗುಜರಾತ್ ಗಲಭೆಗಳು ಭಾರತ, ಗುಜರಾತ್ ಮತ್ತು ಸ್ವತಃ ಮೋದಿಗೆ ಉಂಟುಮಾಡಿದ ಗೌರವಹಾನಿಯು ಮೋದಿ ದಿಲ್ಲಿ ಗಲಭೆಗಳನ್ನು ನಿಭಾಯಿಸಿದ ರೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ತರಲಿಲ್ಲ. ಸುರಕ್ಷಾ ಬಲಗಳನ್ನು ನಿಯೋಜಿಸುವುದರಲ್ಲಿ ಅದೇ ವಿಳಂಬ, ಅದೇ ರೀತಿಯಲ್ಲಿ ಪೊಲೀಸರು ಒಂದೇ ಪಕ್ಷವನ್ನು ವಹಿಸಿ ಸಕ್ರಿಯವಾಗಿ ದೊಂಬಿಯಲ್ಲಿ ಭಾಗವಹಿಸಿದುದು ಮತ್ತು ಅದೇ ಹತ್ಯಾಕಾಂಡದ ಅರೋಪಗಳು. ವ್ಯತ್ಯಾಸಗಳೇನಿಲ್ಲ.

ಇಲ್ಲೊಂದು ಮಾದರಿ ಗಮನಿಸಿ

ಒಮ್ಮೆ ಮುಖ್ಯಮಂತ್ರಿಯಾಗಿ, ಮತ್ತೊಮ್ಮೆ ಪ್ರಧಾನಿಯಾಗಿ ಎರಡು ಗಲಭೆಗಳ ಅಧ್ಯಕ್ಷತೆ ವಹಿಸಿದ ಹೊರತಾಗಿಯೂ ಮೋದಿ ಮಾಡದೇ ಇರುವ ಅಚ್ಚರಿಕಾರಕ ವಿಷಯವೊಂದಿದೆ. ಅದೆಂದರೆ, ಯಾವುದೇ ರೀತಿಯ ಪೊಲೀಸ್ ಸುಧಾರಣೆ ಆರಂಭಿಸದಿರುವುದು ಅಥವಾ ನಿರ್ದಿಷ್ಟ ಕಾರ್ಯಸೂಚಿಯನ್ನು ರೂಪಿಸದೇ ಇರುವುದು. ಗುಂಪನ್ನು ನಿಯಂತ್ರಿಸಲು ಅತೀ ಮುಖ್ಯವಾದುದೆಂದರೆ, ಮೊತ್ತ ಮೊದಲಾಗಿ ಗುಂಪು ಸೇರುವುದನ್ನು ತಡೆಯುವುದು ಎಂದು ಯಾವುದೇ ವೃತ್ತಿಪರ ಕಾನೂನು ಮತ್ತು ಶಿಸ್ತು ತಜ್ಞರು ನಿಮಗೆ ಹೇಳುತ್ತಾರೆ. ಒಮ್ಮೆ ಗುಂಪು ಸೇರಿಬಿಟ್ಟರೆ ಮುಗಿಯಿತು; ಆಗಲೇ ಆಟ ಸೋತಂತೆ. ಹೀಗಿದ್ದರೂ, ನಾವು ಯಾವುದೇ ಗುಪ್ತಚರ ಅಥವಾ ಕಣ್ಗಾವಲು ಸುಧಾರಣೆಗಳನ್ನು ಮೋದಿ ಅಡಿಯಲ್ಲಿ ನೋಡಿಲ್ಲ.

ಒಂದೋ ಮೋದಿ ಆಲಿಸುವುದಿಲ್ಲ, ಇಲ್ಲವೇ ಅವರಿಗೆ ಅದು ಬೇಕಾಗಿಲ್ಲ. ಇನ್ನೊಂದು ಕಳವಳಕಾರಿ ತೀರ್ಮಾನಕ್ಕೆ ಬರಬಹುದು: ಅದೆಂದರೆ, ಅವರುಗೆ ಬೇಕಾಗಿರುವುದು ಅದೇ. ದಿಲ್ಲಿಯಲ್ಲಿ ಏನು ನಡೆಯಿತು ಎಂಬ ಬಗ್ಗೆ ನಮಗೆ ಇನ್ನೂ ಯಾವುದೇ ಸರಿಯಾದ ಸರಕಾರಿ ವಿವರಣೆ ದೊರೆತಿಲ್ಲ ಎಂಬ ವಾಸ್ತವವು, ಮೋದಿಗೆ ಈಗ ನೀಡಲಾಗುತ್ತಿರುವ ಹತ್ಯಾಕಾಂಡದ ವಿವರಣೆಯಿಂದ ಸಾಕಷ್ಟು ಸಂತೋಷವಾಗಿದೆ ಎಂಬುದನ್ನು ಸೂಚಿಸುವಂತಿದೆ. ಆತ ಇದರ ಲಾಭವನ್ನು ಬಾಚಿಕೊಳ್ಳಬಹುದು. ಆದರೆ, ಭಾರತ ಮಾತ್ರ ನಷ್ಟ ಅನುಭವಿಸಬೇಕಾಗುತ್ತದೆ.

ಒಂದು ಸ್ಥಾಪಿತ ಮಾದರಿ

ಮೋದಿಯ ಭಾಷಣದ ನಂತರ ರಾತ್ರಿ ಭಾರತದಾದ್ಯಂತ ಜನರು ಭಯದಿಂದ ಸರಕುಗಳನ್ನು ಕೊಳ್ಳಲು ನುಗ್ಗಿದುದರಲ್ಲಿ ನಾವು ಇದೇ ಮಾದರಿಯನ್ನು ನೋಡುತ್ತೇವೆ. 2016ರಲ್ಲಿ ತನ್ನ ನಾಯಕತ್ವದಲ್ಲೇ ನಡೆದ ನೋಟು ಅಮಾನ್ಯೀಕರಣವು ಉಂಟುಮಾಡಿದ ಭಯ ಮತ್ತು ಗೊಂದಲವನ್ನು ಕಂಡಿರುವ ಮೋದಿಗೆ ತನ್ನ ಭಾಷಣವು ಯಾವ ರೀತಿಯ ಭಯ ಮತ್ತು ಗೊಂದಲ ಉಂಟುಮಾಡುವುದು ಎಂಬುದು ಗೊತ್ತಿರಬೇಕಿತ್ತು ಮತ್ತು ಗೊತ್ತಿರಬೇಕಾದುದು ಅವರ ಕರ್ತವ್ಯವೂ ಆಗಿತ್ತು. ಮೋದಿ ಭಾಷಣವನ್ನು ಲೈವ್ ಟ್ವೀಟ್ ಮಾಡುತ್ತಿದ್ದಂತೆಯೇ ಭದ್ರತೆ ಮತ್ತು ಗುಂಪು ನಿಯಂತ್ರಣದಲ್ಲಿ ನನಗಿರುವ ಅಲ್ಪ ತರಬೇತಿಯೂ, ಭಯದ ಖರೀದಿ ಅನಿವಾರ್ಯ ಎಂದು ಸೂಚಿಸಿತ್ತು. ಹೀಗಿದ್ದರೂ ಭದ್ರತೆ ಮತ್ತು ಸಾಮಾಜಿಕ ತಜ್ಞರ ವಸ್ತುಶಃ ದಂಡಿನಿಂದಲೇ ಸುತ್ತುವರಿಯಲ್ಪಟ್ಟಿರುವ ಈ ಮನುಷ್ಯನಿಗೆ ಇದನ್ನು ಊಹಿಸಲು ಸಾಧ್ಯವಾಗಿಲ್ಲವೆ? ಒಂದೋ ಆತ ಆಲಿಸುವುದಿಲ್ಲ ಇಲ್ಲವೇ ಆತನಿಗೆ ಚಿಂತೆಯಿಲ್ಲ ಅಥವಾ ಆತನಿಗೆ ನಿಜಕ್ಕೂ ಬೇಕಾಗಿರುವುದು ಇದೇ.

ನಮಗೆ ಇನ್ನೊಂದು ಮಾದರಿಯ ಪರಿಚಯವಿದೆ. ಅದೆಂದರೆ, ‘ಮೊದಲ ದಿನ ಗರಿಷ್ಟ ಆಘಾತ’ ಎಂಬಂತಹ, ಹೆಚ್ಚು ಮಹತ್ವ ಇರುವ ಎರಡನೇ ಮತ್ತು ಮೂರನೇ ಹಂತದ ಪರಿಣಾಮಗಳನ್ನು ಸಂಪೂರ್ಣ ಕಡೆಗಣಿಸುವ ಮನೋಭಾವದ ಆತುರದ ಧೋರಣೆಗಳು. ಇದನ್ನು ನಾವು ಮತ್ತೆ ಮತ್ತೆ ನೋಡಿದ್ದೇವೆ- ಕೆಲವನ್ನೇ ಹೆಸರಿಸಬೇಕೆಂದರೆ: ಅಮಾನ್ಯೀಕರಣ, ಜಿಎ‌ಸ್‌ಟಿ, ಬಾಲಕೋಟ್ ಮತ್ತು ವಿಧಿ 370.

ಚುಟುಕಾಗಿ ಹೇಳುವುದಾದರೆ, ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ. ಅಕಾಡೆಮಿಕ್ ಆಗಿ ಒಂದು ಮಾದರಿಯನ್ನು ನಿರೂಪಿಸಿಲು ಮೂರು ನಿದರ್ಶನಗಳು ಬೇಕಾಗುತ್ತವೆ. ಈಗ ನಮ್ಮ ಬಳಿ ನಾಲ್ಕು ಇವೆ: ಗೋದ್ರಾ, ಅಮಾನ್ಯೀಕರಣ, ದಿಲ್ಲಿ ಗಲಭೆಗಳು ಮತ್ತು ಇದೀಗ ಕೊರೋನಾ ವೈರಸ್ ಲಾಕ್‌ಡೌನ್. ಮೋದಿ ಚುನಾವಣೆಗಳನ್ನು ಗೆಲ್ಲಬಹುದು, ಬೇರೇನನ್ನೂ ಮಾಡಲು ಅಸಮರ್ಥ.

(ಲೇಖಕರು ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಎಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್ ಸಂಸ್ಥೆಯಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ. ಅಭಿಪ್ರಾಯಗಳು ಲೇಖಕರವು.)

ಕೃಪೆ: ದಿ ಪ್ರಿಂಟ್ ಡಾಟ್ ಇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...