Homeಮುಖಪುಟಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

- Advertisement -
- Advertisement -

ಬಿದಿಕಲ್ಲು ಕಾರ ಕಾವಲಿಯಂತೆ ರಣಗುಡುತ್ತಿದ್ದವು. ಸರಿಯಾಗಿ ಒಂದು ಶತಮಾನದ ಹಿಂದಕ್ಕೆ ಊರು ನೆಗೆದಿತ್ತು. ಆಗಲೂ ಅಷ್ಟೇ, ಇಡೀ ಊರು ಕೆರೆಯ ಸಮೀಪಕ್ಕೆ ಸ್ಥಳಾಂತರಗೊಂಡು, ಊರು ಬಿಕೋ ಎನ್ನುತ್ತಿತ್ತು. ಅದಕ್ಕೆ ಕಾರಣ ಮಾರಿ ಭೀತಿ ಹುಟ್ಟಿಸಿದ್ದಳು. ಕೊರೊನಾ ಗುಂಗಿನಲ್ಲೇ ವಾಟಿಸ್ಸೆ ಜುಮ್ಮಿ ಮನೆಗೆ ಬಂದಾಗ, ಉಗ್ರಿಯೂ ಅಲ್ಲಿದ್ದ.

“ಯಕ್ಕಾ, ಯಕ್ಕವ್ ಯಂಗಿದ್ದಯಕ್ಕಾ.”

“ಅಲ್ಲೆ ನಿಂತಗಂಡು ಮಾತಾಡ್ಳ.”

“ಇದೇನಕ್ಕ ಹಿಂಗಂತಿ ಮತ್ತೆ ಉಗ್ರಿ ವಳಿಕೆ ಬಂದವುನೆ.”

“ಅವುನು ಕೈಕಾಲು ತೊಳಕಂಡು ಬಂದವುನೆ.”

“ಕೊಡು ಮತ್ತೆ ನೀರ.”

“ಅಲ್ಲೆ ಅವೆ ತ್ವಳಕಂಡು ಬಾರ್ಲ.”

“ಓಹೋ, ಯಲ್ಲಾ ಕಲ್ಚರ್ರು ರಿಟನ್ ಆಯ್ತಲ್ಲಪ್ಪಾ ಎಂದುಕೊಂಡ ವಾಟಿಸ್ಸೆ ತಾತ್ಸಾರದಿಂದ ನೀರು ಚುಟುಕಿಸಿಕೊಂಡು ಬಂದ.”

“ಅದೇನ್ಲ ಗ್ವಣಗತಿದ್ಯಲ್ಲ” ಎಂದಳು ಜುಮ್ಮಿ.

“ಅದೇ ಕಣಕ್ಕ ಹಿಂದ್ಲ ಕಾಲ್ದಲ್ಲಿ ಬಂದೋರ್ನ ಬಾಗಲಲ್ಲಿ ನಿಲ್ಲಿಸಿ, ನೀರುಕೊಟ್ಟು ಕೈಕಾಲು ಮಖ ತ್ವಳಕಂಡ ಮ್ಯಾಲೆ ವಳಿಕ್ಕರದು, ಚ್ಯಾಪೆ ಹಾಸಿ ಕುಂಡ್ರುಸಿ, ಕ್ವಾಣೆ ಬಾಗಲಲ್ಲಿ ನಿಂತಗಂಡು ಮಾತಾಡರು, ಅಂದ. ಆಗ ಉಗ್ರಿ,

“ಅಷ್ಟೇ ಅಲ್ಲ ಕಣಯ್ಯ, ಕೈಕಾಲು ತ್ವಳಿಯಕ್ಕೆ ನೀರು ಕೊಡೊರು ಕೂಡ ಸೆರಗಲ್ಲಿ ಚೊಂಬಿಡಕಂಡು, ಅದರಲ್ಲೇ ಕೈಗೆ ನೀರಾಯ್ಕಂಡು, ತ್ವಳಕಂಡು ನಂತರ ನಿನಿಗೆ ನೀರು ಕೊಡೊರು” ಎಂದ.

“ನಮ್ಮತ್ತೆ ನಮ್ಮವ್ವ ಯಲ್ಲ ಕಡಿಗಂಟ ಅಂಗೆ ಮಾಡಿದ್ರು ಕಂಡ್ಳ.”

“ನಿಜ ಕಣಕ್ಕ, ನಾನು ನೋಡಿದ್ದೆ. ಇದೇನು ಮಡಿ ಮೈಲಿಗೆ ಜನವಪ್ಪ ಅನ್ಸಿತ್ತು. ಇವತ್ತು ನೋಡಿದ್ರೆ, ನಮ್ಮ ಹಳೆ ಜನ ಇವುರಿಗಿಂತ ಎಚ್ಚರಾಗಿದ್ದುದ್ದು ಯಂಗೆ, ಅನ್ನಸ್ತದೆ.”

“ಊ ಕಣೋ ವಾಟಿಸ್ಸೆ, ಉಣ್ಣುವಾಗ ಯಾರಾರ ಬಂದ್ರೆ ಕಾಲ್ದೂಳಾಯ್ತದೆ ಅಲ್ಲೇ ಇರಿ ಅಂತಿದ್ರು. ಅವುನ್ಯಂಥಾ ದ್ವಡ್ಡ ಮನುಸ್ನೆ ಆಗ್ಲಿ, ಮುಚ್ಕಂಡು ಕುಂತಿದ್ದು ಅಮ್ಯಾಲೆ ವಳಿಕೆ ಬರೋನು.”

“ನಾನು ನೋಡಿದ್ದೆ ಕಣೋ ಉಗ್ರಿ, ಆಗೊಂದು ಸತಿ ಮಂಡೇವುದತ್ರ ಅಳ್ಳಕ್ಯರಿಗೋಗಿದ್ದಾಗ ದಳ್ಳಾಳಿ ತಮ್ಮಣ್ಣಗೌಡನ ಮನೆ ಉಣತಾಯಿದ್ದೊ, ಆಗ ತಮ್ಮಣ್ಣಗೌಡ ಬಂದ ಅವುನೆಂಡ್ತಿ ‘ಅಯ್ಯವ್ ಅಲ್ಲೆ ಇರು ವಳಿಕೆ ಬರಬ್ಯಾಡ ಉಣತಾ ಅವುರೆ’ ಅಂದ್ಲು ತಮ್ಮಣ್ಣಗೌಡ ಉಸುರು ಬುಡದಂಗೆ ಅಲ್ಲೇ ಕುತಗಂಡ ಅವ್ಯಲ್ಲ ಇವತ್ತು ಜ್ಞಾಪುಕಕ್ಕೆ ಬತ್ತಾ ಅವೆ” ಎಂದು ವಾಟಿಸ್ಸೆ ಹೇಳುವಾಗ ಜುಮ್ಮಿ ಕೆಮ್ಮಿದಳು.

“ಇದ್ಯಾಕಕ್ಕ ಕೆಮ್ತಿ.”

“ಸುಮ್ಮನೆ ಕಂಡ್ಳ.”

“ಸುಮ್ಮನೆ ಕೆಮ್ಮೊ ಸಿಚುಯೇಷನ್ ಅಲ್ಲ ಇದು. ಯಾವುದ್ಕು ತೋರಿಸಿಗಂಡುಬುಡದು ವಳ್ಳೇದು.”

“ಲೈ ಹಿಟ್ಲಕ್ಕ ಕರಾನ ಬರದಕ್ಕಿಂತ ಮದ್ಲಿಂದ ಕೆಮ್ಮುತಿದ್ದೆ ಕಂಡ್ಳ ಅದೊಂತರ ವಣಕೆಮ್ಮುಗ.”

“ಅಯ್ಯೋ ಚೆಕಪ್ ಮಾಡಸಕ್ಕೊದ್ರೆ ಜುಮ್ಮಿ ಬುಟ್ಟರೇನೊ ವಾಟಿಸ್ಸೆ. ಅಲ್ಲೆ ಕುಂಡ್ರಿಸಿಗತ್ತರೆ, ಜ್ವತಿಗೆ ಅವುಳ ಮನೆಲಿದ್ದ ನಮ್ಮನ್ನೂ ಅಲ್ಲೆ ಇರಿ ನಿಮಿಗೂ ಚೆಕಪ್ ಮಾಡ್ತಿವಿ ಅಂತರೆ ಇದು ಬೇರೆ ನಿಂಗೆ.”

“ಅಂಗಲ್ಲ ಕಣೊ ಉಗ್ರಿ, ಈ ನಮ್ಮ ಜುಮ್ಮಕ್ಕ ಪಂಚಾತಿ ಮಂಬ್ರು ಕಾಂಟ್ಯಾಕ್ಟವುಳೆ, ಅದ್ರಿಂದ ಸಣ್ಣ ಕೆಮ್ಮುಗೂ ನೆಗ್ಲೆಟ್ ಮಾಡಂಗಿಲ್ಲ ಚೆಕಪ್ ಮಾಡುಸಬೇಕು.”

“ಇವತ್ತು ದೇಶ ಇಂಗಾಗಿರದೆ ನಿನ್ನಂಥೋನಿಂದ ಕಣೊ. ಆ ಟಿವಿ ಮುಂಡೆಮಕ್ಕಳಿಗೆ ಮದ್ಲು ಕೊರೊನ ಬಂದ್ರು ನೀಟಾಗ್ಯದೆ.”

“ಅವುರ ಬಂಬಾಯಿ ನಿಲ್ಲುಸಬೇಕಾದ್ರೆ, ಯಾವನಾರ ಕೊರೊನಾ ರೋಗಿಯ ಕಳಿಸಿ, ಒಂದು ರವುಂಡ್ ವಡಕಂಡು ಬಾ ಅನ್ನಬೇಕು ಕಣೊ. ಆಗ ಆ ನನ್ನ ಮಕ್ಕಳ ಬಾಯಿ ಬಂದಾಯ್ತದೆ.”

“ಏ ಪಾಪ ಅವುರ ವಟ್ಟಿಪಾಡ್ಯಂಗದೆ. ಅಂದ್ರೆ ಕೊರೊನಾಕ್ಕೂ ಹೆದರದಂಗಾಗ್ಯವುರೆ, ಬಟ್ಟೆ ಕಟಿಗಂಡೆ ಮಾತಾಡ್ತರೆ, ನಿಮಸಕ್ಕೊಂದು ಸತಿ ಮೋದಿ ಪೋಟಾ ಹಾಕಿ ಹೆದರಬ್ಯಾಡಿ ಪ್ರಧಾನಿ ಅವುನೆ ಅಂತರೆ, ಅವುನೇನು ಮಾಡ್ತನೆ ಅಂತ ಅಂಗಂತವೆ.”

“ಅವುರೇನು ಮಾಡಲ್ಲ, ಇಂತವುಕ್ಯಲ್ಲ ಹೆದರದೂ ಇಲ್ಲ ಅವುನು. ಗುಜರಾತಲ್ಲಿ ತಾನೇ ಆಜ್ಞೆ ಮಾಡಿ ಸಾವುರಾರು ಜನ ಸಾಬರ ಕೊಲ್ಲಿಸಿದೋನು, ಇನ್ನ ಕೊರೊನಾದಿಂದ ಜನ ಸತ್ರೆ ಹೆದರತನೇನೊ.”

“ಮತ್ತೆ ಜನಗಳಿಗೆ ಭಾರಿ ಎಚ್ಚರಿಕೆ ಹೇಳ್ತ ಕುಂತವುನೆ.”

“ಹೇಳ್ತನೆ, ಅವುರು ಬಳಸಿಗಳದ್ಯಲ್ಲ ಇಂತ ಸಿಚುಯೇಶನ್ನೇ ಅಲವೆ. ಜನಕ್ಕೆ ಆಗಬಾರದ್ದಾಬೇಕು. ಅಲ್ಲಿ ಆರೆಸ್ಸಿಸ್ಸಿನೋರು ಕಾಣಿಸಿಗಬೇಕು, ಚಿತ್ರಾನ್ನ ಮೊಸರನ್ನ ಹಂಚಬೇಕು, ನಮ್ಮ ಬುಟ್ರೆ ದೇಶಭಕ್ತರು ಇಲವೇಯಿಲ್ಲ ಅನ್ನಬೇಕು. ಇದರಲ್ಲೇ ಬಂದೋರವರು. ಇನ್ನ ಕೊರೊನಾ ಬುಡ್ತರೆನೋ. ನಮ್ಮ ಅವುತಾರ ಪುರುಸ ಮೋದಿ ಯದೆಕೊಟ್ಟು ನಿಂತಗಂಡು ಕೊರೊನಾ ಓಡಿಸಿದಾ ಅಂತ ಕೂಗತ್ತ ತಿರಗ್ತವೆ.”

“ಅದೇನೊ ಸಾಬರಮ್ಯಾಲೆ ಕಾನೂನು ತಂದ್ರಿದ್ರಂತಲ್ಲ ಏನಾಯಿತ್ಲ” ಎಂದಳು ಜುಮ್ಮಿ.

“ಅದು ಸಿಎಎ ಅಂತ ಕಣಕ್ಕ. ಸಾಬರನ್ಯಲ್ಲ ಸೊಸಿ ಅತ್ತಗೆ ಯಸಿಯೋ ಕಾನೂನು ತಂದಿದ್ರು. ಸಾಬರು ಎಲ್ಲ ಸೇರಿಕಂಡು ಅದ್ಯಂಗೆ ನಮ್ಮ ಬ್ಯಾರೆ ಮಾಡ್ತಿರಿ ನೋಡನ ಅಂತ ಎದ್ದು ನಿಂತಗಂಡ್ರು. ಅಷ್ಟರಲ್ಲಿ ಕೊರೊನಾ ಬಂದು ಯಲ್ಲಾರ್ನು ಅಮರಿಕತ್ತಾ ಅದೆ ಕಣಕ್ಕ.’’

“ಯಲ್ಲಾರ್ನು ಅಂದ್ರೆ ಚಪ್ಪನ್ನೈವತ್ತಾರು ದೇಸನೂ ಆವರಿಸಿಗಂಡದೆ ಕಣೆ. ಇಟಲಿದೇಸಕೆ ಜಾಸ್ತಿ ಅಮರಿಕಂಡದೆ.”

“ಸೋನಿಯಾಗಾಂಧಿ ಆ ಊರೊಳೆ ಅದ್ರವೆ.”

“ಆ ಊರೊಳೆಯ, ಅವುಳೇನಾರ ಅಲ್ಲಿಗೋಗಿ ಬಂದಿದ್ರೆ ಅವುಳೆ ಕೊರೊನಾ ತಂದ್ಲು ಅಂತ ಬಿಜೆಪಿಗಳು ಬಬ್ಬೆ ಹೊಡಿಯವು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...