Homeಮುಖಪುಟಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

- Advertisement -
- Advertisement -

ಬಿದಿಕಲ್ಲು ಕಾರ ಕಾವಲಿಯಂತೆ ರಣಗುಡುತ್ತಿದ್ದವು. ಸರಿಯಾಗಿ ಒಂದು ಶತಮಾನದ ಹಿಂದಕ್ಕೆ ಊರು ನೆಗೆದಿತ್ತು. ಆಗಲೂ ಅಷ್ಟೇ, ಇಡೀ ಊರು ಕೆರೆಯ ಸಮೀಪಕ್ಕೆ ಸ್ಥಳಾಂತರಗೊಂಡು, ಊರು ಬಿಕೋ ಎನ್ನುತ್ತಿತ್ತು. ಅದಕ್ಕೆ ಕಾರಣ ಮಾರಿ ಭೀತಿ ಹುಟ್ಟಿಸಿದ್ದಳು. ಕೊರೊನಾ ಗುಂಗಿನಲ್ಲೇ ವಾಟಿಸ್ಸೆ ಜುಮ್ಮಿ ಮನೆಗೆ ಬಂದಾಗ, ಉಗ್ರಿಯೂ ಅಲ್ಲಿದ್ದ.

“ಯಕ್ಕಾ, ಯಕ್ಕವ್ ಯಂಗಿದ್ದಯಕ್ಕಾ.”

“ಅಲ್ಲೆ ನಿಂತಗಂಡು ಮಾತಾಡ್ಳ.”

“ಇದೇನಕ್ಕ ಹಿಂಗಂತಿ ಮತ್ತೆ ಉಗ್ರಿ ವಳಿಕೆ ಬಂದವುನೆ.”

“ಅವುನು ಕೈಕಾಲು ತೊಳಕಂಡು ಬಂದವುನೆ.”

“ಕೊಡು ಮತ್ತೆ ನೀರ.”

“ಅಲ್ಲೆ ಅವೆ ತ್ವಳಕಂಡು ಬಾರ್ಲ.”

“ಓಹೋ, ಯಲ್ಲಾ ಕಲ್ಚರ್ರು ರಿಟನ್ ಆಯ್ತಲ್ಲಪ್ಪಾ ಎಂದುಕೊಂಡ ವಾಟಿಸ್ಸೆ ತಾತ್ಸಾರದಿಂದ ನೀರು ಚುಟುಕಿಸಿಕೊಂಡು ಬಂದ.”

“ಅದೇನ್ಲ ಗ್ವಣಗತಿದ್ಯಲ್ಲ” ಎಂದಳು ಜುಮ್ಮಿ.

“ಅದೇ ಕಣಕ್ಕ ಹಿಂದ್ಲ ಕಾಲ್ದಲ್ಲಿ ಬಂದೋರ್ನ ಬಾಗಲಲ್ಲಿ ನಿಲ್ಲಿಸಿ, ನೀರುಕೊಟ್ಟು ಕೈಕಾಲು ಮಖ ತ್ವಳಕಂಡ ಮ್ಯಾಲೆ ವಳಿಕ್ಕರದು, ಚ್ಯಾಪೆ ಹಾಸಿ ಕುಂಡ್ರುಸಿ, ಕ್ವಾಣೆ ಬಾಗಲಲ್ಲಿ ನಿಂತಗಂಡು ಮಾತಾಡರು, ಅಂದ. ಆಗ ಉಗ್ರಿ,

“ಅಷ್ಟೇ ಅಲ್ಲ ಕಣಯ್ಯ, ಕೈಕಾಲು ತ್ವಳಿಯಕ್ಕೆ ನೀರು ಕೊಡೊರು ಕೂಡ ಸೆರಗಲ್ಲಿ ಚೊಂಬಿಡಕಂಡು, ಅದರಲ್ಲೇ ಕೈಗೆ ನೀರಾಯ್ಕಂಡು, ತ್ವಳಕಂಡು ನಂತರ ನಿನಿಗೆ ನೀರು ಕೊಡೊರು” ಎಂದ.

“ನಮ್ಮತ್ತೆ ನಮ್ಮವ್ವ ಯಲ್ಲ ಕಡಿಗಂಟ ಅಂಗೆ ಮಾಡಿದ್ರು ಕಂಡ್ಳ.”

“ನಿಜ ಕಣಕ್ಕ, ನಾನು ನೋಡಿದ್ದೆ. ಇದೇನು ಮಡಿ ಮೈಲಿಗೆ ಜನವಪ್ಪ ಅನ್ಸಿತ್ತು. ಇವತ್ತು ನೋಡಿದ್ರೆ, ನಮ್ಮ ಹಳೆ ಜನ ಇವುರಿಗಿಂತ ಎಚ್ಚರಾಗಿದ್ದುದ್ದು ಯಂಗೆ, ಅನ್ನಸ್ತದೆ.”

“ಊ ಕಣೋ ವಾಟಿಸ್ಸೆ, ಉಣ್ಣುವಾಗ ಯಾರಾರ ಬಂದ್ರೆ ಕಾಲ್ದೂಳಾಯ್ತದೆ ಅಲ್ಲೇ ಇರಿ ಅಂತಿದ್ರು. ಅವುನ್ಯಂಥಾ ದ್ವಡ್ಡ ಮನುಸ್ನೆ ಆಗ್ಲಿ, ಮುಚ್ಕಂಡು ಕುಂತಿದ್ದು ಅಮ್ಯಾಲೆ ವಳಿಕೆ ಬರೋನು.”

“ನಾನು ನೋಡಿದ್ದೆ ಕಣೋ ಉಗ್ರಿ, ಆಗೊಂದು ಸತಿ ಮಂಡೇವುದತ್ರ ಅಳ್ಳಕ್ಯರಿಗೋಗಿದ್ದಾಗ ದಳ್ಳಾಳಿ ತಮ್ಮಣ್ಣಗೌಡನ ಮನೆ ಉಣತಾಯಿದ್ದೊ, ಆಗ ತಮ್ಮಣ್ಣಗೌಡ ಬಂದ ಅವುನೆಂಡ್ತಿ ‘ಅಯ್ಯವ್ ಅಲ್ಲೆ ಇರು ವಳಿಕೆ ಬರಬ್ಯಾಡ ಉಣತಾ ಅವುರೆ’ ಅಂದ್ಲು ತಮ್ಮಣ್ಣಗೌಡ ಉಸುರು ಬುಡದಂಗೆ ಅಲ್ಲೇ ಕುತಗಂಡ ಅವ್ಯಲ್ಲ ಇವತ್ತು ಜ್ಞಾಪುಕಕ್ಕೆ ಬತ್ತಾ ಅವೆ” ಎಂದು ವಾಟಿಸ್ಸೆ ಹೇಳುವಾಗ ಜುಮ್ಮಿ ಕೆಮ್ಮಿದಳು.

“ಇದ್ಯಾಕಕ್ಕ ಕೆಮ್ತಿ.”

“ಸುಮ್ಮನೆ ಕಂಡ್ಳ.”

“ಸುಮ್ಮನೆ ಕೆಮ್ಮೊ ಸಿಚುಯೇಷನ್ ಅಲ್ಲ ಇದು. ಯಾವುದ್ಕು ತೋರಿಸಿಗಂಡುಬುಡದು ವಳ್ಳೇದು.”

“ಲೈ ಹಿಟ್ಲಕ್ಕ ಕರಾನ ಬರದಕ್ಕಿಂತ ಮದ್ಲಿಂದ ಕೆಮ್ಮುತಿದ್ದೆ ಕಂಡ್ಳ ಅದೊಂತರ ವಣಕೆಮ್ಮುಗ.”

“ಅಯ್ಯೋ ಚೆಕಪ್ ಮಾಡಸಕ್ಕೊದ್ರೆ ಜುಮ್ಮಿ ಬುಟ್ಟರೇನೊ ವಾಟಿಸ್ಸೆ. ಅಲ್ಲೆ ಕುಂಡ್ರಿಸಿಗತ್ತರೆ, ಜ್ವತಿಗೆ ಅವುಳ ಮನೆಲಿದ್ದ ನಮ್ಮನ್ನೂ ಅಲ್ಲೆ ಇರಿ ನಿಮಿಗೂ ಚೆಕಪ್ ಮಾಡ್ತಿವಿ ಅಂತರೆ ಇದು ಬೇರೆ ನಿಂಗೆ.”

“ಅಂಗಲ್ಲ ಕಣೊ ಉಗ್ರಿ, ಈ ನಮ್ಮ ಜುಮ್ಮಕ್ಕ ಪಂಚಾತಿ ಮಂಬ್ರು ಕಾಂಟ್ಯಾಕ್ಟವುಳೆ, ಅದ್ರಿಂದ ಸಣ್ಣ ಕೆಮ್ಮುಗೂ ನೆಗ್ಲೆಟ್ ಮಾಡಂಗಿಲ್ಲ ಚೆಕಪ್ ಮಾಡುಸಬೇಕು.”

“ಇವತ್ತು ದೇಶ ಇಂಗಾಗಿರದೆ ನಿನ್ನಂಥೋನಿಂದ ಕಣೊ. ಆ ಟಿವಿ ಮುಂಡೆಮಕ್ಕಳಿಗೆ ಮದ್ಲು ಕೊರೊನ ಬಂದ್ರು ನೀಟಾಗ್ಯದೆ.”

“ಅವುರ ಬಂಬಾಯಿ ನಿಲ್ಲುಸಬೇಕಾದ್ರೆ, ಯಾವನಾರ ಕೊರೊನಾ ರೋಗಿಯ ಕಳಿಸಿ, ಒಂದು ರವುಂಡ್ ವಡಕಂಡು ಬಾ ಅನ್ನಬೇಕು ಕಣೊ. ಆಗ ಆ ನನ್ನ ಮಕ್ಕಳ ಬಾಯಿ ಬಂದಾಯ್ತದೆ.”

“ಏ ಪಾಪ ಅವುರ ವಟ್ಟಿಪಾಡ್ಯಂಗದೆ. ಅಂದ್ರೆ ಕೊರೊನಾಕ್ಕೂ ಹೆದರದಂಗಾಗ್ಯವುರೆ, ಬಟ್ಟೆ ಕಟಿಗಂಡೆ ಮಾತಾಡ್ತರೆ, ನಿಮಸಕ್ಕೊಂದು ಸತಿ ಮೋದಿ ಪೋಟಾ ಹಾಕಿ ಹೆದರಬ್ಯಾಡಿ ಪ್ರಧಾನಿ ಅವುನೆ ಅಂತರೆ, ಅವುನೇನು ಮಾಡ್ತನೆ ಅಂತ ಅಂಗಂತವೆ.”

“ಅವುರೇನು ಮಾಡಲ್ಲ, ಇಂತವುಕ್ಯಲ್ಲ ಹೆದರದೂ ಇಲ್ಲ ಅವುನು. ಗುಜರಾತಲ್ಲಿ ತಾನೇ ಆಜ್ಞೆ ಮಾಡಿ ಸಾವುರಾರು ಜನ ಸಾಬರ ಕೊಲ್ಲಿಸಿದೋನು, ಇನ್ನ ಕೊರೊನಾದಿಂದ ಜನ ಸತ್ರೆ ಹೆದರತನೇನೊ.”

“ಮತ್ತೆ ಜನಗಳಿಗೆ ಭಾರಿ ಎಚ್ಚರಿಕೆ ಹೇಳ್ತ ಕುಂತವುನೆ.”

“ಹೇಳ್ತನೆ, ಅವುರು ಬಳಸಿಗಳದ್ಯಲ್ಲ ಇಂತ ಸಿಚುಯೇಶನ್ನೇ ಅಲವೆ. ಜನಕ್ಕೆ ಆಗಬಾರದ್ದಾಬೇಕು. ಅಲ್ಲಿ ಆರೆಸ್ಸಿಸ್ಸಿನೋರು ಕಾಣಿಸಿಗಬೇಕು, ಚಿತ್ರಾನ್ನ ಮೊಸರನ್ನ ಹಂಚಬೇಕು, ನಮ್ಮ ಬುಟ್ರೆ ದೇಶಭಕ್ತರು ಇಲವೇಯಿಲ್ಲ ಅನ್ನಬೇಕು. ಇದರಲ್ಲೇ ಬಂದೋರವರು. ಇನ್ನ ಕೊರೊನಾ ಬುಡ್ತರೆನೋ. ನಮ್ಮ ಅವುತಾರ ಪುರುಸ ಮೋದಿ ಯದೆಕೊಟ್ಟು ನಿಂತಗಂಡು ಕೊರೊನಾ ಓಡಿಸಿದಾ ಅಂತ ಕೂಗತ್ತ ತಿರಗ್ತವೆ.”

“ಅದೇನೊ ಸಾಬರಮ್ಯಾಲೆ ಕಾನೂನು ತಂದ್ರಿದ್ರಂತಲ್ಲ ಏನಾಯಿತ್ಲ” ಎಂದಳು ಜುಮ್ಮಿ.

“ಅದು ಸಿಎಎ ಅಂತ ಕಣಕ್ಕ. ಸಾಬರನ್ಯಲ್ಲ ಸೊಸಿ ಅತ್ತಗೆ ಯಸಿಯೋ ಕಾನೂನು ತಂದಿದ್ರು. ಸಾಬರು ಎಲ್ಲ ಸೇರಿಕಂಡು ಅದ್ಯಂಗೆ ನಮ್ಮ ಬ್ಯಾರೆ ಮಾಡ್ತಿರಿ ನೋಡನ ಅಂತ ಎದ್ದು ನಿಂತಗಂಡ್ರು. ಅಷ್ಟರಲ್ಲಿ ಕೊರೊನಾ ಬಂದು ಯಲ್ಲಾರ್ನು ಅಮರಿಕತ್ತಾ ಅದೆ ಕಣಕ್ಕ.’’

“ಯಲ್ಲಾರ್ನು ಅಂದ್ರೆ ಚಪ್ಪನ್ನೈವತ್ತಾರು ದೇಸನೂ ಆವರಿಸಿಗಂಡದೆ ಕಣೆ. ಇಟಲಿದೇಸಕೆ ಜಾಸ್ತಿ ಅಮರಿಕಂಡದೆ.”

“ಸೋನಿಯಾಗಾಂಧಿ ಆ ಊರೊಳೆ ಅದ್ರವೆ.”

“ಆ ಊರೊಳೆಯ, ಅವುಳೇನಾರ ಅಲ್ಲಿಗೋಗಿ ಬಂದಿದ್ರೆ ಅವುಳೆ ಕೊರೊನಾ ತಂದ್ಲು ಅಂತ ಬಿಜೆಪಿಗಳು ಬಬ್ಬೆ ಹೊಡಿಯವು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...