Homeಮುಖಪುಟಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ರಣವೀರ್ ಸಿಂಗ್ ಎಂಬ 29ರ ಯುವಕ ತನ್ನೂರಿಗೆ ನಡೆಯುತ್ತಲೇ ಪ್ರಾಣಬಿಟ್ಟ ಕಣ್ಣೀರ ಕಥೆಯನ್ನು ಕಣ್ಮುಂದೆ ಕಟ್ಟಿಕೊಡುವ ಲೇಖನ

- Advertisement -
- Advertisement -

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಕಳೆದ ದಿನ ತನ್ನ ಅಧಿಕೃತ ನಿವಾಸದಲ್ಲಿ ‘ರಾಮಾಯಣ’ ಧಾರವಾಹಿ ನೋಡಿ ಆನಂದಿಸುತ್ತಿದ್ದಾಗಲೇ, ರಣವೀರ್ ಸಿಂಗ್ ಎಂಬ ಯುವಕ ದೆಹಲಿಯ ಸರಹದ್ದು ದಾಟಿಯಾಗಿರಬೇಕು. ರಾಷ್ಟ್ರದ ರಾಜಧಾನಿಯಲ್ಲಿ ದಿನಗೂಲಿಗಾಗಿ ರೆಸ್ಟೋರೆಂಟ್‌ಗಳಲ್ಲಿ ಡೆಲಿವರಿ ಏಜೆಂಟ್ ಕೆಲಸ ಮಾಡುವ ಒಬ್ಬ ಸಾಮಾನ್ಯ ವ್ಯಕಿಯಾಗಿದ್ದ ರಣವೀರ್.

ಕೋವಿಡ್-19ರ ಹಿನ್ನೆಲೆಯಲ್ಲಿ, ಪ್ರತ್ಯೇಕವಾದ ಪೂರ್ವ ತಯಾರಿಗಳಿಲ್ಲದೆ ಮಾರ್ಚ್ 24 ಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದಾಗ, ಬೀದಿಗೆ ಬಿದ್ದ ಸಾವಿರಾರು ಜನರ ಪೈಕಿ ಅವನೂ ಒಬ್ಬ.

ಅತ್ತ ದುಡಿಮೆಯೂ, ಇತ್ತ ಆಹಾರವೂ ಇಲ್ಲದೆ ದೆಹಲಿಯಲ್ಲಿ ಕೂಡುವುದು ಕಷ್ಟಸಾಧ್ಯವೆಂಬುದನ್ನು ಅರಿತ ರಣವೀರ್, ಮಧ್ಯ ಪ್ರದೇಶದ ಮೊರೋನಾ ಜಿಲ್ಲೆಯ ತನ್ನ ಹುಟ್ಟೂರಿಗೆ ಹಿಂತಿರುಗಲು ತೀರ್ಮಾನಿಸಿದ. 200 ಕಿ.ಮೀ.ಗಿಂತಲೂ ಹೆಚ್ಚು ದೂರದ ಪ್ರದೇಶವದು. ಇತರ ಸಂಪರ್ಕ ವ್ಯವಸ್ಥೆಗಳಿಲ್ಲದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಹಾಗೇ ಮರುದಿನ ರಾತ್ರಿ ಹೊತ್ತಲ್ಲಿ, ಕುಡಿಯಲು ನೀರೂ ಕೂಡಾ ಜೊತೆಗಿಲ್ಲದೆ ನಡೆಯಲು ಆರಂಭಿಸಿದ.

ಅದಾಗಲೇ ರಣವೀರ್ ಸುಮಾರು 100 ಕಿ.ಮೀ ದೂರವನ್ನು ಬರಿಗಾಲಲ್ಲೇ ಕ್ರಮಿಸಿಯಾಗಿತ್ತು. ಇದರ ನಡುವೆ ಯಾರೋ ದಾರಿ ನಡುವೆ ಸಿಕ್ಕ ವ್ಯಾಪಾರಿಯೋರ್ವರು ಕೊಟ್ಟ ಚಹಾ ಮತ್ತು ಬಿಸ್ಕತ್ತು ಮಾತ್ರವಾಗಿತ್ತು ದಾರಿಯುದ್ದಕ್ಕೂ ಆಹಾರ. ನಡೆದಾಡಿ ಬಳಲಿದ ಆ 29ರ ಹರೆಯದ ಯುವಕ, ತನ್ನ ಗ್ರಾಮ ತಲುಪುವುದಕ್ಕಿಂತಲೂ ಬಹಳ ದೂರದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದನೆಂದಾಗಿತ್ತು ವರದಿ.

ನರೇಂದ್ರ ಮೋದಿಯ ಎಂಟು ಗಂಟೆಯ ಘೋಷಣೆಯಿಂದ ಉಂಟಾದ ಆಘಾತದಿಂದಾಗಿ, ಇದರಂತೆಯೇ ಲಕ್ಷಾಂತರ ರಣವೀರ್‌ಗಳು ‘ಕಾಲ್ನಡಿಗೆ’ ಆರಂಭಿಸಿದ ದೃಶ್ಯಗಳನ್ನು ಎಲ್ಲೆಡೆ ಕಂಡಿದ್ದೇವೆ. ನೆರೆಯ ರಾಜ್ಯಗಳಿಂದ ಕೆಲಸ ಹುಡುಕುತ್ತಾ ದೆಹಲಿ ತಲುಪಿದ್ದ ಕಾರ್ಮಿಕರು ಲಾಕ್‌ಡೌನ್‌ ಕಾರಣದಿಂದಾಗಿ ಅವರ ಕುಟುಂಬಗಳೊಂದಿಗೆ ಸಾಲು ಸಾಲಾಗಿ ಗುಳೆ ಹೊರಟಿರುವ ದಯನೀಯ ದೃಶ್ಯಗಳು ದೇಶಕ್ಕೆ ಕೋವಿಡ್ ವೈರಾಣುವಿನಷ್ಟೇ ಭೀತಿಜನಕವಾದುದು.

ದೆಹಲಿ- ಯು.ಪಿ ಗಡಿಭಾಗದ ಗಾಜಿಯಾಬಾದ್‌ನಲ್ಲೂ ಅಂತೆಯೇ ಇನ್ನಿತರ ಪ್ರದೇಶಗಳಲ್ಲೂ ಊರು ಸೇರಲು ಲಾಕ್‌ಡೌನ್ ಉಲ್ಲಂಘಿಸಿ, ಬಸ್ಸಿಗಾಗಿ ಕಾಯುತ್ತಿರುವ ಈ ಜನರ ಗುಂಪು, ಎಲ್ಲಾ ಗಡಿಗಳಲ್ಲೂ ಇದೀಗ ‘ನಿರಾಶ್ರಿತ ವಲಸಿಗರು’  ಎಂಬ ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ.

ಉತ್ತರ ಆಫ್ರಿಕಾದ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷ ಭೂಮಿಯಿಂದ ಮುಕ್ತಿ ಹೊಂದಿ, ಯುರೋಪಿಯನ್ ಯೂನಿಯನ್ನಿನ ಪ್ರವೇಶ ಕವಾಟಗಳಾದ ಮಾಸಿಡೋನಿಯ ಹಾಗೂ ಇತರೆಡೆಗಳಲ್ಲಿ ಅಭಯ ಯಾಚಿಸುತ್ತಾ ಕಾದು ನಿಂತಿರುವ ಲಕ್ಷಾಂತರ ಜನರನ್ನು ನೆನೆಪಿಸುತ್ತಿದೆ ಈ ಜನಸಾಗರ. ಜೀವನದ ಹೊಸ ನಿರ್ಣಾಯಕ ದಡವನ್ನು ಸೇರುವ ಆಸೆಯಿಂದ ಯುರೋಪಿನತ್ತ ಹಲವರು ಮೆಡಿಟೆರೇನಿಯನ್ ಸಮುದ್ರವನ್ನು ಈಜುತ್ತಾ ದಾಟಿ ಬಂದರೆ, ಇಲ್ಲಿ ಕಾಲ್ನಡಿಗೆ ಸಂಚಾರ ಎನ್ನುವ ವ್ಯತ್ಯಾಸ ಮಾತ್ರ. ಪಲಾಯನದ ಉದ್ದೇಶ ಮಾತ್ರ ಒಂದೇ. ಒಂದು ಹೊತ್ತಿನ ತುತ್ತು ಅನ್ನ.

ದೆಹಲಿಯಲ್ಲಿರುವ ಕೂಲಿ ಕಾರ್ಮಿಕರ ಸಂಖ್ಯೆ 20 ಲಕ್ಷಕ್ಕಿಂತಲೂ ಹೆಚ್ಚು. ಲಾಕ್‌ಡೌನ್ ಘೋಷಿಸಿದಾಗ ಇದರಲ್ಲಿ ಹೆಚ್ಚಿನ ಪ್ರಮಾಣದ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ದೆಹಲಿ ಸರ್ಕಾರದ ಗಣತಿಯಂತೆ, ಈಗಾಗಲೇ ನಾಲ್ಕು ಲಕ್ಷದಷ್ಟು ಬರುವ ಜನರಿಗಾಗುವಷ್ಟು ಮಾತ್ರ ಆಹಾರ ಮತ್ತು ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.  ಕೇಂದ್ರ ಸರಕಾರವೋ ಬಂದ್ ಮಾಡಿ ಅನ್ನೋ ಘೋಷಣೆ ಬಿಟ್ಟು ಕ್ರಿಯಾತ್ಮಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಗುಳೆ ಹೊರಡುವುದು ಸ್ವಾಭಾವಿಕ.

ಸರಕಾರವು ಗುರುತರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವಾಗ, ವಲಸೆ ಕಾರ್ಮಿಕರು ಗುಳೆ ಹೊರಟಿರುವುದರ ಹಿಂದಿನ ಉದ್ದೇಶ ನಿಜವಾಗಿಯೂ ಹಸಿವಿನಿಂದ ಬರುವ ಸಾವುಗಳನ್ನ ಪ್ರತಿರೋಧಿಸುವುದಕ್ಕಾಗಿಯೇ ಆಗಿದೆ. ಈ ಸಾಮೂಹಿಕ ಗುಳೆಯ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾದಾಗ, ವಲಸಿಗರನ್ನು ಕರೆತರಲು ನೆರೆಯ ರಾಜ್ಯಗಳು ಬಸ್ಸುಗಳನ್ನು ಕಳುಹಿಸಲು ಮುಂದೆ ಬಂದವು.  ಇದು ಬರಿ ದೆಹಲಿಯ ದೃಶ್ಯಗಳಾಗಿವೆ ಅಂದುಕೊಂಡರೆ ಅದು ತಪ್ಪು. ಮುಂಬೈ , ಕಲ್ಕತ್ತಾ, ಚೆನ್ನೈ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿನ ಬೀದಿಗಳಿಂದೆಲ್ಲಾ, ಈ ರೀತಿಯ ಸಾಮೂಹಿಕ ಪಲಾಯನದ ಸುದ್ದಿಗಳು ವರದಿಯಾಗುತ್ತಿವೆ.

ಗಾಜಿಯಾಬಾದ್ ಮತ್ತು ಇತರೆಡೆಗಳಲ್ಲಿ ಬಸ್ಸುಗಳಿಗಾಗಿ ಕಾಯುತಿರುವ ಹಲವರು ಆಡುವ ಮಾತು “ನಮ್ಮಲ್ಲಿ ಹಲವರಿಗೆ ಆಧಾರ್ ನಂತಹ ಯಾವುದೇ ಗುರುತು ಚೀಟಿಗಳಿಲ್ಲ” ಎಂದಾಗಿದೆ. ಅಂದರೆ, ನಾಮಮಾತ್ರವಾದರೂ, ಈ ಸಮಯದಲ್ಲಿ ಸರಕಾರ ನೀಡುವ ಯಾವುದೇ ಸೌಜನ್ಯ ಸವಲತ್ತುಗಳಿಗೆ ಅವರು ಅನರ್ಹರು. ಇವೆಲ್ಲವೂ ವರ್ತಮಾನ ಭಾರತದ ಅವ್ಯವಸ್ಥೆಯ ನೇರನೋಟಗಳಾಗಿವೆ ಎಂಬುದನ್ನು ಮನಗಾಣಬೇಕಿದೆ.

ಗೃಹ ಸಚಿವ ಅಮಿತ್ ಶಾ ಘೋಷಿಸಿದ ಎನ್‌ಆರ್‌ಸಿ ದೇಶವ್ಯಾಪಿಯಾಗಿ ಪ್ರಾಬಲ್ಯಕ್ಕೆ ಬಂದರೆ, ಗುರುತು ತೋರಿಸಲು ದಾಖಲೆಗಳಿಲ್ಲದ ಈ ಜನರ ಸ್ಥಿತಿ ಏನಾಗಬಹುದೆಂಬುದು ಈ ಮೂಲಕ ಊಹಿಸಬಹುದಾಗಿದೆ. ಆದ್ದರಿಂದ ಹಲವರ ನಿರೀಕ್ಷಿಸಿದಂತೆ, ಮೋದಿಯ ಲಾಕ್‌ಡೌನ್ ಘೋಷಣೆಯು ಹಳೆಯ ನೋಟು ನಿಷೇಧವನ್ನಲ್ಲ ನೆನೆಪಿಸೋದು. ಬದಲಾಗಿ, ಇನ್ನೇನು ಜಾರಿಗೊಳಿಸಲಿರುವ ಎನ್‌ಆರ್‌ಸಿಯ ಪ್ರತ್ಯಾಘಾತ ಎಂಬಂತೆ, ದೇಶದುದ್ದಕ್ಕೂ ಪ್ರತ್ಯಕ್ಷವಾಗಲು ಸಾಧ್ಯತೆಗಳಿರುವ ಬಹುದೊಡ್ಡ ಸಂಖ್ಯೆಯ  ನಿರಾಶ್ರಿತ ಸಮೂಹಗಳ ಸೂಕ್ತ ಮುನ್ಸೂಚನೆಯೇ ಆಗಿದೆ ಈ ಬಸ್ಸು ಕಾಯುತ್ತಿರುವ ಜನ ಸಮೂಹ ಅನ್ನುವುದು ಸ್ಪಷ್ಟ.

ಈ ಸಾಮೂಹಿಕವಾಗಿ ಗುಳೆ ಹೊರಟವರೊಂದಿಗಿನ ಅಧಿಕಾರಿಗಳ ಮನೋಭಾವ ಕೂಡಾ ಅತ್ಯಂತ ದಯನೀಯವಾದುದು. ಲಾಕ್‌ಡೌನ್ ಅನ್ನುವ ಕಠಿಣ ನಿರ್ಧಾರವನ್ನು ತಳೆದಿದ್ದಕ್ಕಾಗಿ ಜನತೆಯೊಂದಿಗೆ ಕ್ಷಮೆ ಯಾಚಿಸುತ್ತೇನೆ ಎಂದಾಗಿತ್ತು ಕಳೆದೆರಡು ದಿನಗಳ ಹಿಂದಿನ ಮೋದಿಯ ಪ್ರಸ್ತಾವನೆ. ಯಾವುದೇ ಪೂರ್ವ ತಯಾರಿಗಳಿಲ್ಲದೆ, ನಾಲ್ಕು ಗಂಟೆಗಳ ಸಮಯವನ್ನು ಮಾತ್ರ ನೀಡಿ, 130 ಕೋಟಿ ಜನರನ್ನು ನಿರ್ದಾಕ್ಷಿಣ್ಯ ಲಾಕ್‌ಡೌನ್ ನತ್ತ ತಳ್ಳಿಹಾಕಿ, ನಂತರದ ಈ ಕ್ಷಮಾಪಣೆಯಲ್ಲಿ ಯಾವುದೇ ಅರ್ಥವಿಲ್ಲ.

ನೋಟ್ ಬ್ಯಾನ್‌ನ ನಂತರ, 50 ದಿನಗಳ ಸಮಯಾವಕಾಶ ಕೋರಿದ, ಅದೇ ‘ಪ್ರಾಮಾಣ ಕತೆ’ಯಷ್ಟೇ ಈ ಪ್ರಸ್ತಾವನೆಗೂ ಇರುವುದು. ಅಂದು ನೋಟು ಬ್ಯಾನ್‌ನಲ್ಲಿ ಕ್ಯೂ ನಿಂತು ಅಸ್ವಸ್ಥರಾದವರೇ ಇಂದೂ ಬೀದಿಗೆ ಬಂದಿರುವುದು. ಆ ಜನರೊಂದಿಗೆ ‘ಮನೆಯೊಳಗೇ ಕುಳಿತುಕೊಂಡಿರಿ’ ಎಂಬುದಾಗಿದೆ ಈಗಲೂ ನೀಡಿರುವ ಎಚ್ಚರಿಕೆ. ಹಾಗಾದರೆ ಇದಕ್ಕೂ ಮುನ್ನವೇ ಸೂರು ಕಳೆದುಕೊಂಡ ಬಡಜನರು ಎತ್ತ ಹೋಗಬೇಕು..? ಸಂಘರಾಜಕೀಯದ ವಿಷಬೀಜಗಳು ಬಿತ್ತಿದ ರಾಮಾನಂದ ಸಾಗರನ ‘ಸೀರಿಯಲ್ ನಾಸ್ಟಾಲ್ಜಿಯ’ದ ಮೂಲಕ ಜನರ ಹಸಿವು ನೀಗುತ್ತದೆ ಎಂದಾಗಿದೆಯೋ ಈ ಆಡಳಿತಾರೂಢರು ಅಂದ್ಕೊಂಡಿರೋದು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...