Homeಮುಖಪುಟಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ರಣವೀರ್ ಸಿಂಗ್ ಎಂಬ 29ರ ಯುವಕ ತನ್ನೂರಿಗೆ ನಡೆಯುತ್ತಲೇ ಪ್ರಾಣಬಿಟ್ಟ ಕಣ್ಣೀರ ಕಥೆಯನ್ನು ಕಣ್ಮುಂದೆ ಕಟ್ಟಿಕೊಡುವ ಲೇಖನ

- Advertisement -
- Advertisement -

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಕಳೆದ ದಿನ ತನ್ನ ಅಧಿಕೃತ ನಿವಾಸದಲ್ಲಿ ‘ರಾಮಾಯಣ’ ಧಾರವಾಹಿ ನೋಡಿ ಆನಂದಿಸುತ್ತಿದ್ದಾಗಲೇ, ರಣವೀರ್ ಸಿಂಗ್ ಎಂಬ ಯುವಕ ದೆಹಲಿಯ ಸರಹದ್ದು ದಾಟಿಯಾಗಿರಬೇಕು. ರಾಷ್ಟ್ರದ ರಾಜಧಾನಿಯಲ್ಲಿ ದಿನಗೂಲಿಗಾಗಿ ರೆಸ್ಟೋರೆಂಟ್‌ಗಳಲ್ಲಿ ಡೆಲಿವರಿ ಏಜೆಂಟ್ ಕೆಲಸ ಮಾಡುವ ಒಬ್ಬ ಸಾಮಾನ್ಯ ವ್ಯಕಿಯಾಗಿದ್ದ ರಣವೀರ್.

ಕೋವಿಡ್-19ರ ಹಿನ್ನೆಲೆಯಲ್ಲಿ, ಪ್ರತ್ಯೇಕವಾದ ಪೂರ್ವ ತಯಾರಿಗಳಿಲ್ಲದೆ ಮಾರ್ಚ್ 24 ಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದಾಗ, ಬೀದಿಗೆ ಬಿದ್ದ ಸಾವಿರಾರು ಜನರ ಪೈಕಿ ಅವನೂ ಒಬ್ಬ.

ಅತ್ತ ದುಡಿಮೆಯೂ, ಇತ್ತ ಆಹಾರವೂ ಇಲ್ಲದೆ ದೆಹಲಿಯಲ್ಲಿ ಕೂಡುವುದು ಕಷ್ಟಸಾಧ್ಯವೆಂಬುದನ್ನು ಅರಿತ ರಣವೀರ್, ಮಧ್ಯ ಪ್ರದೇಶದ ಮೊರೋನಾ ಜಿಲ್ಲೆಯ ತನ್ನ ಹುಟ್ಟೂರಿಗೆ ಹಿಂತಿರುಗಲು ತೀರ್ಮಾನಿಸಿದ. 200 ಕಿ.ಮೀ.ಗಿಂತಲೂ ಹೆಚ್ಚು ದೂರದ ಪ್ರದೇಶವದು. ಇತರ ಸಂಪರ್ಕ ವ್ಯವಸ್ಥೆಗಳಿಲ್ಲದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಹಾಗೇ ಮರುದಿನ ರಾತ್ರಿ ಹೊತ್ತಲ್ಲಿ, ಕುಡಿಯಲು ನೀರೂ ಕೂಡಾ ಜೊತೆಗಿಲ್ಲದೆ ನಡೆಯಲು ಆರಂಭಿಸಿದ.

ಅದಾಗಲೇ ರಣವೀರ್ ಸುಮಾರು 100 ಕಿ.ಮೀ ದೂರವನ್ನು ಬರಿಗಾಲಲ್ಲೇ ಕ್ರಮಿಸಿಯಾಗಿತ್ತು. ಇದರ ನಡುವೆ ಯಾರೋ ದಾರಿ ನಡುವೆ ಸಿಕ್ಕ ವ್ಯಾಪಾರಿಯೋರ್ವರು ಕೊಟ್ಟ ಚಹಾ ಮತ್ತು ಬಿಸ್ಕತ್ತು ಮಾತ್ರವಾಗಿತ್ತು ದಾರಿಯುದ್ದಕ್ಕೂ ಆಹಾರ. ನಡೆದಾಡಿ ಬಳಲಿದ ಆ 29ರ ಹರೆಯದ ಯುವಕ, ತನ್ನ ಗ್ರಾಮ ತಲುಪುವುದಕ್ಕಿಂತಲೂ ಬಹಳ ದೂರದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದನೆಂದಾಗಿತ್ತು ವರದಿ.

ನರೇಂದ್ರ ಮೋದಿಯ ಎಂಟು ಗಂಟೆಯ ಘೋಷಣೆಯಿಂದ ಉಂಟಾದ ಆಘಾತದಿಂದಾಗಿ, ಇದರಂತೆಯೇ ಲಕ್ಷಾಂತರ ರಣವೀರ್‌ಗಳು ‘ಕಾಲ್ನಡಿಗೆ’ ಆರಂಭಿಸಿದ ದೃಶ್ಯಗಳನ್ನು ಎಲ್ಲೆಡೆ ಕಂಡಿದ್ದೇವೆ. ನೆರೆಯ ರಾಜ್ಯಗಳಿಂದ ಕೆಲಸ ಹುಡುಕುತ್ತಾ ದೆಹಲಿ ತಲುಪಿದ್ದ ಕಾರ್ಮಿಕರು ಲಾಕ್‌ಡೌನ್‌ ಕಾರಣದಿಂದಾಗಿ ಅವರ ಕುಟುಂಬಗಳೊಂದಿಗೆ ಸಾಲು ಸಾಲಾಗಿ ಗುಳೆ ಹೊರಟಿರುವ ದಯನೀಯ ದೃಶ್ಯಗಳು ದೇಶಕ್ಕೆ ಕೋವಿಡ್ ವೈರಾಣುವಿನಷ್ಟೇ ಭೀತಿಜನಕವಾದುದು.

ದೆಹಲಿ- ಯು.ಪಿ ಗಡಿಭಾಗದ ಗಾಜಿಯಾಬಾದ್‌ನಲ್ಲೂ ಅಂತೆಯೇ ಇನ್ನಿತರ ಪ್ರದೇಶಗಳಲ್ಲೂ ಊರು ಸೇರಲು ಲಾಕ್‌ಡೌನ್ ಉಲ್ಲಂಘಿಸಿ, ಬಸ್ಸಿಗಾಗಿ ಕಾಯುತ್ತಿರುವ ಈ ಜನರ ಗುಂಪು, ಎಲ್ಲಾ ಗಡಿಗಳಲ್ಲೂ ಇದೀಗ ‘ನಿರಾಶ್ರಿತ ವಲಸಿಗರು’  ಎಂಬ ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ.

ಉತ್ತರ ಆಫ್ರಿಕಾದ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷ ಭೂಮಿಯಿಂದ ಮುಕ್ತಿ ಹೊಂದಿ, ಯುರೋಪಿಯನ್ ಯೂನಿಯನ್ನಿನ ಪ್ರವೇಶ ಕವಾಟಗಳಾದ ಮಾಸಿಡೋನಿಯ ಹಾಗೂ ಇತರೆಡೆಗಳಲ್ಲಿ ಅಭಯ ಯಾಚಿಸುತ್ತಾ ಕಾದು ನಿಂತಿರುವ ಲಕ್ಷಾಂತರ ಜನರನ್ನು ನೆನೆಪಿಸುತ್ತಿದೆ ಈ ಜನಸಾಗರ. ಜೀವನದ ಹೊಸ ನಿರ್ಣಾಯಕ ದಡವನ್ನು ಸೇರುವ ಆಸೆಯಿಂದ ಯುರೋಪಿನತ್ತ ಹಲವರು ಮೆಡಿಟೆರೇನಿಯನ್ ಸಮುದ್ರವನ್ನು ಈಜುತ್ತಾ ದಾಟಿ ಬಂದರೆ, ಇಲ್ಲಿ ಕಾಲ್ನಡಿಗೆ ಸಂಚಾರ ಎನ್ನುವ ವ್ಯತ್ಯಾಸ ಮಾತ್ರ. ಪಲಾಯನದ ಉದ್ದೇಶ ಮಾತ್ರ ಒಂದೇ. ಒಂದು ಹೊತ್ತಿನ ತುತ್ತು ಅನ್ನ.

ದೆಹಲಿಯಲ್ಲಿರುವ ಕೂಲಿ ಕಾರ್ಮಿಕರ ಸಂಖ್ಯೆ 20 ಲಕ್ಷಕ್ಕಿಂತಲೂ ಹೆಚ್ಚು. ಲಾಕ್‌ಡೌನ್ ಘೋಷಿಸಿದಾಗ ಇದರಲ್ಲಿ ಹೆಚ್ಚಿನ ಪ್ರಮಾಣದ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ದೆಹಲಿ ಸರ್ಕಾರದ ಗಣತಿಯಂತೆ, ಈಗಾಗಲೇ ನಾಲ್ಕು ಲಕ್ಷದಷ್ಟು ಬರುವ ಜನರಿಗಾಗುವಷ್ಟು ಮಾತ್ರ ಆಹಾರ ಮತ್ತು ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.  ಕೇಂದ್ರ ಸರಕಾರವೋ ಬಂದ್ ಮಾಡಿ ಅನ್ನೋ ಘೋಷಣೆ ಬಿಟ್ಟು ಕ್ರಿಯಾತ್ಮಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಗುಳೆ ಹೊರಡುವುದು ಸ್ವಾಭಾವಿಕ.

ಸರಕಾರವು ಗುರುತರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವಾಗ, ವಲಸೆ ಕಾರ್ಮಿಕರು ಗುಳೆ ಹೊರಟಿರುವುದರ ಹಿಂದಿನ ಉದ್ದೇಶ ನಿಜವಾಗಿಯೂ ಹಸಿವಿನಿಂದ ಬರುವ ಸಾವುಗಳನ್ನ ಪ್ರತಿರೋಧಿಸುವುದಕ್ಕಾಗಿಯೇ ಆಗಿದೆ. ಈ ಸಾಮೂಹಿಕ ಗುಳೆಯ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾದಾಗ, ವಲಸಿಗರನ್ನು ಕರೆತರಲು ನೆರೆಯ ರಾಜ್ಯಗಳು ಬಸ್ಸುಗಳನ್ನು ಕಳುಹಿಸಲು ಮುಂದೆ ಬಂದವು.  ಇದು ಬರಿ ದೆಹಲಿಯ ದೃಶ್ಯಗಳಾಗಿವೆ ಅಂದುಕೊಂಡರೆ ಅದು ತಪ್ಪು. ಮುಂಬೈ , ಕಲ್ಕತ್ತಾ, ಚೆನ್ನೈ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿನ ಬೀದಿಗಳಿಂದೆಲ್ಲಾ, ಈ ರೀತಿಯ ಸಾಮೂಹಿಕ ಪಲಾಯನದ ಸುದ್ದಿಗಳು ವರದಿಯಾಗುತ್ತಿವೆ.

ಗಾಜಿಯಾಬಾದ್ ಮತ್ತು ಇತರೆಡೆಗಳಲ್ಲಿ ಬಸ್ಸುಗಳಿಗಾಗಿ ಕಾಯುತಿರುವ ಹಲವರು ಆಡುವ ಮಾತು “ನಮ್ಮಲ್ಲಿ ಹಲವರಿಗೆ ಆಧಾರ್ ನಂತಹ ಯಾವುದೇ ಗುರುತು ಚೀಟಿಗಳಿಲ್ಲ” ಎಂದಾಗಿದೆ. ಅಂದರೆ, ನಾಮಮಾತ್ರವಾದರೂ, ಈ ಸಮಯದಲ್ಲಿ ಸರಕಾರ ನೀಡುವ ಯಾವುದೇ ಸೌಜನ್ಯ ಸವಲತ್ತುಗಳಿಗೆ ಅವರು ಅನರ್ಹರು. ಇವೆಲ್ಲವೂ ವರ್ತಮಾನ ಭಾರತದ ಅವ್ಯವಸ್ಥೆಯ ನೇರನೋಟಗಳಾಗಿವೆ ಎಂಬುದನ್ನು ಮನಗಾಣಬೇಕಿದೆ.

ಗೃಹ ಸಚಿವ ಅಮಿತ್ ಶಾ ಘೋಷಿಸಿದ ಎನ್‌ಆರ್‌ಸಿ ದೇಶವ್ಯಾಪಿಯಾಗಿ ಪ್ರಾಬಲ್ಯಕ್ಕೆ ಬಂದರೆ, ಗುರುತು ತೋರಿಸಲು ದಾಖಲೆಗಳಿಲ್ಲದ ಈ ಜನರ ಸ್ಥಿತಿ ಏನಾಗಬಹುದೆಂಬುದು ಈ ಮೂಲಕ ಊಹಿಸಬಹುದಾಗಿದೆ. ಆದ್ದರಿಂದ ಹಲವರ ನಿರೀಕ್ಷಿಸಿದಂತೆ, ಮೋದಿಯ ಲಾಕ್‌ಡೌನ್ ಘೋಷಣೆಯು ಹಳೆಯ ನೋಟು ನಿಷೇಧವನ್ನಲ್ಲ ನೆನೆಪಿಸೋದು. ಬದಲಾಗಿ, ಇನ್ನೇನು ಜಾರಿಗೊಳಿಸಲಿರುವ ಎನ್‌ಆರ್‌ಸಿಯ ಪ್ರತ್ಯಾಘಾತ ಎಂಬಂತೆ, ದೇಶದುದ್ದಕ್ಕೂ ಪ್ರತ್ಯಕ್ಷವಾಗಲು ಸಾಧ್ಯತೆಗಳಿರುವ ಬಹುದೊಡ್ಡ ಸಂಖ್ಯೆಯ  ನಿರಾಶ್ರಿತ ಸಮೂಹಗಳ ಸೂಕ್ತ ಮುನ್ಸೂಚನೆಯೇ ಆಗಿದೆ ಈ ಬಸ್ಸು ಕಾಯುತ್ತಿರುವ ಜನ ಸಮೂಹ ಅನ್ನುವುದು ಸ್ಪಷ್ಟ.

ಈ ಸಾಮೂಹಿಕವಾಗಿ ಗುಳೆ ಹೊರಟವರೊಂದಿಗಿನ ಅಧಿಕಾರಿಗಳ ಮನೋಭಾವ ಕೂಡಾ ಅತ್ಯಂತ ದಯನೀಯವಾದುದು. ಲಾಕ್‌ಡೌನ್ ಅನ್ನುವ ಕಠಿಣ ನಿರ್ಧಾರವನ್ನು ತಳೆದಿದ್ದಕ್ಕಾಗಿ ಜನತೆಯೊಂದಿಗೆ ಕ್ಷಮೆ ಯಾಚಿಸುತ್ತೇನೆ ಎಂದಾಗಿತ್ತು ಕಳೆದೆರಡು ದಿನಗಳ ಹಿಂದಿನ ಮೋದಿಯ ಪ್ರಸ್ತಾವನೆ. ಯಾವುದೇ ಪೂರ್ವ ತಯಾರಿಗಳಿಲ್ಲದೆ, ನಾಲ್ಕು ಗಂಟೆಗಳ ಸಮಯವನ್ನು ಮಾತ್ರ ನೀಡಿ, 130 ಕೋಟಿ ಜನರನ್ನು ನಿರ್ದಾಕ್ಷಿಣ್ಯ ಲಾಕ್‌ಡೌನ್ ನತ್ತ ತಳ್ಳಿಹಾಕಿ, ನಂತರದ ಈ ಕ್ಷಮಾಪಣೆಯಲ್ಲಿ ಯಾವುದೇ ಅರ್ಥವಿಲ್ಲ.

ನೋಟ್ ಬ್ಯಾನ್‌ನ ನಂತರ, 50 ದಿನಗಳ ಸಮಯಾವಕಾಶ ಕೋರಿದ, ಅದೇ ‘ಪ್ರಾಮಾಣ ಕತೆ’ಯಷ್ಟೇ ಈ ಪ್ರಸ್ತಾವನೆಗೂ ಇರುವುದು. ಅಂದು ನೋಟು ಬ್ಯಾನ್‌ನಲ್ಲಿ ಕ್ಯೂ ನಿಂತು ಅಸ್ವಸ್ಥರಾದವರೇ ಇಂದೂ ಬೀದಿಗೆ ಬಂದಿರುವುದು. ಆ ಜನರೊಂದಿಗೆ ‘ಮನೆಯೊಳಗೇ ಕುಳಿತುಕೊಂಡಿರಿ’ ಎಂಬುದಾಗಿದೆ ಈಗಲೂ ನೀಡಿರುವ ಎಚ್ಚರಿಕೆ. ಹಾಗಾದರೆ ಇದಕ್ಕೂ ಮುನ್ನವೇ ಸೂರು ಕಳೆದುಕೊಂಡ ಬಡಜನರು ಎತ್ತ ಹೋಗಬೇಕು..? ಸಂಘರಾಜಕೀಯದ ವಿಷಬೀಜಗಳು ಬಿತ್ತಿದ ರಾಮಾನಂದ ಸಾಗರನ ‘ಸೀರಿಯಲ್ ನಾಸ್ಟಾಲ್ಜಿಯ’ದ ಮೂಲಕ ಜನರ ಹಸಿವು ನೀಗುತ್ತದೆ ಎಂದಾಗಿದೆಯೋ ಈ ಆಡಳಿತಾರೂಢರು ಅಂದ್ಕೊಂಡಿರೋದು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...