Homeಮುಖಪುಟಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ರಣವೀರ್ ಸಿಂಗ್ ಎಂಬ 29ರ ಯುವಕ ತನ್ನೂರಿಗೆ ನಡೆಯುತ್ತಲೇ ಪ್ರಾಣಬಿಟ್ಟ ಕಣ್ಣೀರ ಕಥೆಯನ್ನು ಕಣ್ಮುಂದೆ ಕಟ್ಟಿಕೊಡುವ ಲೇಖನ

- Advertisement -
- Advertisement -

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಕಳೆದ ದಿನ ತನ್ನ ಅಧಿಕೃತ ನಿವಾಸದಲ್ಲಿ ‘ರಾಮಾಯಣ’ ಧಾರವಾಹಿ ನೋಡಿ ಆನಂದಿಸುತ್ತಿದ್ದಾಗಲೇ, ರಣವೀರ್ ಸಿಂಗ್ ಎಂಬ ಯುವಕ ದೆಹಲಿಯ ಸರಹದ್ದು ದಾಟಿಯಾಗಿರಬೇಕು. ರಾಷ್ಟ್ರದ ರಾಜಧಾನಿಯಲ್ಲಿ ದಿನಗೂಲಿಗಾಗಿ ರೆಸ್ಟೋರೆಂಟ್‌ಗಳಲ್ಲಿ ಡೆಲಿವರಿ ಏಜೆಂಟ್ ಕೆಲಸ ಮಾಡುವ ಒಬ್ಬ ಸಾಮಾನ್ಯ ವ್ಯಕಿಯಾಗಿದ್ದ ರಣವೀರ್.

ಕೋವಿಡ್-19ರ ಹಿನ್ನೆಲೆಯಲ್ಲಿ, ಪ್ರತ್ಯೇಕವಾದ ಪೂರ್ವ ತಯಾರಿಗಳಿಲ್ಲದೆ ಮಾರ್ಚ್ 24 ಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದಾಗ, ಬೀದಿಗೆ ಬಿದ್ದ ಸಾವಿರಾರು ಜನರ ಪೈಕಿ ಅವನೂ ಒಬ್ಬ.

ಅತ್ತ ದುಡಿಮೆಯೂ, ಇತ್ತ ಆಹಾರವೂ ಇಲ್ಲದೆ ದೆಹಲಿಯಲ್ಲಿ ಕೂಡುವುದು ಕಷ್ಟಸಾಧ್ಯವೆಂಬುದನ್ನು ಅರಿತ ರಣವೀರ್, ಮಧ್ಯ ಪ್ರದೇಶದ ಮೊರೋನಾ ಜಿಲ್ಲೆಯ ತನ್ನ ಹುಟ್ಟೂರಿಗೆ ಹಿಂತಿರುಗಲು ತೀರ್ಮಾನಿಸಿದ. 200 ಕಿ.ಮೀ.ಗಿಂತಲೂ ಹೆಚ್ಚು ದೂರದ ಪ್ರದೇಶವದು. ಇತರ ಸಂಪರ್ಕ ವ್ಯವಸ್ಥೆಗಳಿಲ್ಲದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಹಾಗೇ ಮರುದಿನ ರಾತ್ರಿ ಹೊತ್ತಲ್ಲಿ, ಕುಡಿಯಲು ನೀರೂ ಕೂಡಾ ಜೊತೆಗಿಲ್ಲದೆ ನಡೆಯಲು ಆರಂಭಿಸಿದ.

ಅದಾಗಲೇ ರಣವೀರ್ ಸುಮಾರು 100 ಕಿ.ಮೀ ದೂರವನ್ನು ಬರಿಗಾಲಲ್ಲೇ ಕ್ರಮಿಸಿಯಾಗಿತ್ತು. ಇದರ ನಡುವೆ ಯಾರೋ ದಾರಿ ನಡುವೆ ಸಿಕ್ಕ ವ್ಯಾಪಾರಿಯೋರ್ವರು ಕೊಟ್ಟ ಚಹಾ ಮತ್ತು ಬಿಸ್ಕತ್ತು ಮಾತ್ರವಾಗಿತ್ತು ದಾರಿಯುದ್ದಕ್ಕೂ ಆಹಾರ. ನಡೆದಾಡಿ ಬಳಲಿದ ಆ 29ರ ಹರೆಯದ ಯುವಕ, ತನ್ನ ಗ್ರಾಮ ತಲುಪುವುದಕ್ಕಿಂತಲೂ ಬಹಳ ದೂರದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದನೆಂದಾಗಿತ್ತು ವರದಿ.

ನರೇಂದ್ರ ಮೋದಿಯ ಎಂಟು ಗಂಟೆಯ ಘೋಷಣೆಯಿಂದ ಉಂಟಾದ ಆಘಾತದಿಂದಾಗಿ, ಇದರಂತೆಯೇ ಲಕ್ಷಾಂತರ ರಣವೀರ್‌ಗಳು ‘ಕಾಲ್ನಡಿಗೆ’ ಆರಂಭಿಸಿದ ದೃಶ್ಯಗಳನ್ನು ಎಲ್ಲೆಡೆ ಕಂಡಿದ್ದೇವೆ. ನೆರೆಯ ರಾಜ್ಯಗಳಿಂದ ಕೆಲಸ ಹುಡುಕುತ್ತಾ ದೆಹಲಿ ತಲುಪಿದ್ದ ಕಾರ್ಮಿಕರು ಲಾಕ್‌ಡೌನ್‌ ಕಾರಣದಿಂದಾಗಿ ಅವರ ಕುಟುಂಬಗಳೊಂದಿಗೆ ಸಾಲು ಸಾಲಾಗಿ ಗುಳೆ ಹೊರಟಿರುವ ದಯನೀಯ ದೃಶ್ಯಗಳು ದೇಶಕ್ಕೆ ಕೋವಿಡ್ ವೈರಾಣುವಿನಷ್ಟೇ ಭೀತಿಜನಕವಾದುದು.

ದೆಹಲಿ- ಯು.ಪಿ ಗಡಿಭಾಗದ ಗಾಜಿಯಾಬಾದ್‌ನಲ್ಲೂ ಅಂತೆಯೇ ಇನ್ನಿತರ ಪ್ರದೇಶಗಳಲ್ಲೂ ಊರು ಸೇರಲು ಲಾಕ್‌ಡೌನ್ ಉಲ್ಲಂಘಿಸಿ, ಬಸ್ಸಿಗಾಗಿ ಕಾಯುತ್ತಿರುವ ಈ ಜನರ ಗುಂಪು, ಎಲ್ಲಾ ಗಡಿಗಳಲ್ಲೂ ಇದೀಗ ‘ನಿರಾಶ್ರಿತ ವಲಸಿಗರು’  ಎಂಬ ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ.

ಉತ್ತರ ಆಫ್ರಿಕಾದ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷ ಭೂಮಿಯಿಂದ ಮುಕ್ತಿ ಹೊಂದಿ, ಯುರೋಪಿಯನ್ ಯೂನಿಯನ್ನಿನ ಪ್ರವೇಶ ಕವಾಟಗಳಾದ ಮಾಸಿಡೋನಿಯ ಹಾಗೂ ಇತರೆಡೆಗಳಲ್ಲಿ ಅಭಯ ಯಾಚಿಸುತ್ತಾ ಕಾದು ನಿಂತಿರುವ ಲಕ್ಷಾಂತರ ಜನರನ್ನು ನೆನೆಪಿಸುತ್ತಿದೆ ಈ ಜನಸಾಗರ. ಜೀವನದ ಹೊಸ ನಿರ್ಣಾಯಕ ದಡವನ್ನು ಸೇರುವ ಆಸೆಯಿಂದ ಯುರೋಪಿನತ್ತ ಹಲವರು ಮೆಡಿಟೆರೇನಿಯನ್ ಸಮುದ್ರವನ್ನು ಈಜುತ್ತಾ ದಾಟಿ ಬಂದರೆ, ಇಲ್ಲಿ ಕಾಲ್ನಡಿಗೆ ಸಂಚಾರ ಎನ್ನುವ ವ್ಯತ್ಯಾಸ ಮಾತ್ರ. ಪಲಾಯನದ ಉದ್ದೇಶ ಮಾತ್ರ ಒಂದೇ. ಒಂದು ಹೊತ್ತಿನ ತುತ್ತು ಅನ್ನ.

ದೆಹಲಿಯಲ್ಲಿರುವ ಕೂಲಿ ಕಾರ್ಮಿಕರ ಸಂಖ್ಯೆ 20 ಲಕ್ಷಕ್ಕಿಂತಲೂ ಹೆಚ್ಚು. ಲಾಕ್‌ಡೌನ್ ಘೋಷಿಸಿದಾಗ ಇದರಲ್ಲಿ ಹೆಚ್ಚಿನ ಪ್ರಮಾಣದ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ದೆಹಲಿ ಸರ್ಕಾರದ ಗಣತಿಯಂತೆ, ಈಗಾಗಲೇ ನಾಲ್ಕು ಲಕ್ಷದಷ್ಟು ಬರುವ ಜನರಿಗಾಗುವಷ್ಟು ಮಾತ್ರ ಆಹಾರ ಮತ್ತು ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.  ಕೇಂದ್ರ ಸರಕಾರವೋ ಬಂದ್ ಮಾಡಿ ಅನ್ನೋ ಘೋಷಣೆ ಬಿಟ್ಟು ಕ್ರಿಯಾತ್ಮಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಗುಳೆ ಹೊರಡುವುದು ಸ್ವಾಭಾವಿಕ.

ಸರಕಾರವು ಗುರುತರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವಾಗ, ವಲಸೆ ಕಾರ್ಮಿಕರು ಗುಳೆ ಹೊರಟಿರುವುದರ ಹಿಂದಿನ ಉದ್ದೇಶ ನಿಜವಾಗಿಯೂ ಹಸಿವಿನಿಂದ ಬರುವ ಸಾವುಗಳನ್ನ ಪ್ರತಿರೋಧಿಸುವುದಕ್ಕಾಗಿಯೇ ಆಗಿದೆ. ಈ ಸಾಮೂಹಿಕ ಗುಳೆಯ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾದಾಗ, ವಲಸಿಗರನ್ನು ಕರೆತರಲು ನೆರೆಯ ರಾಜ್ಯಗಳು ಬಸ್ಸುಗಳನ್ನು ಕಳುಹಿಸಲು ಮುಂದೆ ಬಂದವು.  ಇದು ಬರಿ ದೆಹಲಿಯ ದೃಶ್ಯಗಳಾಗಿವೆ ಅಂದುಕೊಂಡರೆ ಅದು ತಪ್ಪು. ಮುಂಬೈ , ಕಲ್ಕತ್ತಾ, ಚೆನ್ನೈ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿನ ಬೀದಿಗಳಿಂದೆಲ್ಲಾ, ಈ ರೀತಿಯ ಸಾಮೂಹಿಕ ಪಲಾಯನದ ಸುದ್ದಿಗಳು ವರದಿಯಾಗುತ್ತಿವೆ.

ಗಾಜಿಯಾಬಾದ್ ಮತ್ತು ಇತರೆಡೆಗಳಲ್ಲಿ ಬಸ್ಸುಗಳಿಗಾಗಿ ಕಾಯುತಿರುವ ಹಲವರು ಆಡುವ ಮಾತು “ನಮ್ಮಲ್ಲಿ ಹಲವರಿಗೆ ಆಧಾರ್ ನಂತಹ ಯಾವುದೇ ಗುರುತು ಚೀಟಿಗಳಿಲ್ಲ” ಎಂದಾಗಿದೆ. ಅಂದರೆ, ನಾಮಮಾತ್ರವಾದರೂ, ಈ ಸಮಯದಲ್ಲಿ ಸರಕಾರ ನೀಡುವ ಯಾವುದೇ ಸೌಜನ್ಯ ಸವಲತ್ತುಗಳಿಗೆ ಅವರು ಅನರ್ಹರು. ಇವೆಲ್ಲವೂ ವರ್ತಮಾನ ಭಾರತದ ಅವ್ಯವಸ್ಥೆಯ ನೇರನೋಟಗಳಾಗಿವೆ ಎಂಬುದನ್ನು ಮನಗಾಣಬೇಕಿದೆ.

ಗೃಹ ಸಚಿವ ಅಮಿತ್ ಶಾ ಘೋಷಿಸಿದ ಎನ್‌ಆರ್‌ಸಿ ದೇಶವ್ಯಾಪಿಯಾಗಿ ಪ್ರಾಬಲ್ಯಕ್ಕೆ ಬಂದರೆ, ಗುರುತು ತೋರಿಸಲು ದಾಖಲೆಗಳಿಲ್ಲದ ಈ ಜನರ ಸ್ಥಿತಿ ಏನಾಗಬಹುದೆಂಬುದು ಈ ಮೂಲಕ ಊಹಿಸಬಹುದಾಗಿದೆ. ಆದ್ದರಿಂದ ಹಲವರ ನಿರೀಕ್ಷಿಸಿದಂತೆ, ಮೋದಿಯ ಲಾಕ್‌ಡೌನ್ ಘೋಷಣೆಯು ಹಳೆಯ ನೋಟು ನಿಷೇಧವನ್ನಲ್ಲ ನೆನೆಪಿಸೋದು. ಬದಲಾಗಿ, ಇನ್ನೇನು ಜಾರಿಗೊಳಿಸಲಿರುವ ಎನ್‌ಆರ್‌ಸಿಯ ಪ್ರತ್ಯಾಘಾತ ಎಂಬಂತೆ, ದೇಶದುದ್ದಕ್ಕೂ ಪ್ರತ್ಯಕ್ಷವಾಗಲು ಸಾಧ್ಯತೆಗಳಿರುವ ಬಹುದೊಡ್ಡ ಸಂಖ್ಯೆಯ  ನಿರಾಶ್ರಿತ ಸಮೂಹಗಳ ಸೂಕ್ತ ಮುನ್ಸೂಚನೆಯೇ ಆಗಿದೆ ಈ ಬಸ್ಸು ಕಾಯುತ್ತಿರುವ ಜನ ಸಮೂಹ ಅನ್ನುವುದು ಸ್ಪಷ್ಟ.

ಈ ಸಾಮೂಹಿಕವಾಗಿ ಗುಳೆ ಹೊರಟವರೊಂದಿಗಿನ ಅಧಿಕಾರಿಗಳ ಮನೋಭಾವ ಕೂಡಾ ಅತ್ಯಂತ ದಯನೀಯವಾದುದು. ಲಾಕ್‌ಡೌನ್ ಅನ್ನುವ ಕಠಿಣ ನಿರ್ಧಾರವನ್ನು ತಳೆದಿದ್ದಕ್ಕಾಗಿ ಜನತೆಯೊಂದಿಗೆ ಕ್ಷಮೆ ಯಾಚಿಸುತ್ತೇನೆ ಎಂದಾಗಿತ್ತು ಕಳೆದೆರಡು ದಿನಗಳ ಹಿಂದಿನ ಮೋದಿಯ ಪ್ರಸ್ತಾವನೆ. ಯಾವುದೇ ಪೂರ್ವ ತಯಾರಿಗಳಿಲ್ಲದೆ, ನಾಲ್ಕು ಗಂಟೆಗಳ ಸಮಯವನ್ನು ಮಾತ್ರ ನೀಡಿ, 130 ಕೋಟಿ ಜನರನ್ನು ನಿರ್ದಾಕ್ಷಿಣ್ಯ ಲಾಕ್‌ಡೌನ್ ನತ್ತ ತಳ್ಳಿಹಾಕಿ, ನಂತರದ ಈ ಕ್ಷಮಾಪಣೆಯಲ್ಲಿ ಯಾವುದೇ ಅರ್ಥವಿಲ್ಲ.

ನೋಟ್ ಬ್ಯಾನ್‌ನ ನಂತರ, 50 ದಿನಗಳ ಸಮಯಾವಕಾಶ ಕೋರಿದ, ಅದೇ ‘ಪ್ರಾಮಾಣ ಕತೆ’ಯಷ್ಟೇ ಈ ಪ್ರಸ್ತಾವನೆಗೂ ಇರುವುದು. ಅಂದು ನೋಟು ಬ್ಯಾನ್‌ನಲ್ಲಿ ಕ್ಯೂ ನಿಂತು ಅಸ್ವಸ್ಥರಾದವರೇ ಇಂದೂ ಬೀದಿಗೆ ಬಂದಿರುವುದು. ಆ ಜನರೊಂದಿಗೆ ‘ಮನೆಯೊಳಗೇ ಕುಳಿತುಕೊಂಡಿರಿ’ ಎಂಬುದಾಗಿದೆ ಈಗಲೂ ನೀಡಿರುವ ಎಚ್ಚರಿಕೆ. ಹಾಗಾದರೆ ಇದಕ್ಕೂ ಮುನ್ನವೇ ಸೂರು ಕಳೆದುಕೊಂಡ ಬಡಜನರು ಎತ್ತ ಹೋಗಬೇಕು..? ಸಂಘರಾಜಕೀಯದ ವಿಷಬೀಜಗಳು ಬಿತ್ತಿದ ರಾಮಾನಂದ ಸಾಗರನ ‘ಸೀರಿಯಲ್ ನಾಸ್ಟಾಲ್ಜಿಯ’ದ ಮೂಲಕ ಜನರ ಹಸಿವು ನೀಗುತ್ತದೆ ಎಂದಾಗಿದೆಯೋ ಈ ಆಡಳಿತಾರೂಢರು ಅಂದ್ಕೊಂಡಿರೋದು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...