Homeಮುಖಪುಟಸುಧಾಕರ್‌ v/s ಶ್ರೀರಾಮುಲು : ಕೊರೋನಾ ಎಮರ್ಜೆನ್ಸಿ ನಡುವೆ ಸ್ವಪ್ರತಿಷ್ಠೆಯೇ ಹೆಚ್ಚಾಯ್ತಾ ಸಚಿವರಿಗೆ?

ಸುಧಾಕರ್‌ v/s ಶ್ರೀರಾಮುಲು : ಕೊರೋನಾ ಎಮರ್ಜೆನ್ಸಿ ನಡುವೆ ಸ್ವಪ್ರತಿಷ್ಠೆಯೇ ಹೆಚ್ಚಾಯ್ತಾ ಸಚಿವರಿಗೆ?

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಾವಿರಾರು ಕೋಟಿ ರೂ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಳ್ಳುವ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರ ಡಾ|ಕೆ. ಸುಧಾಕರ್ ಅವರಿಗೆ ನೀಡಿದೆ ಎನ್ನಲಾಗುತ್ತಿದೆ.

- Advertisement -
- Advertisement -

ಇಡೀ ವಿಶ್ವದ ಎದುರು ಕೊರೋನಾ ಎಂಬ ಮಾರಣಾಂತಿಕ ವೈರಸ್ ಸೃಷ್ಟಿಸಿರುವ ಮೃತ್ಯಕೂಪ ಊಹೆಗೂ ನಿಲುಕದಷ್ಟು ದೊಡ್ಡದಾಗಿ ಬೆಳೆದಿದೆ. ಚೀನಾ ದೇಶದ ವುಹಾನ್ ಎಂಬ ಪಟ್ಟಣದ ಮಾಂಸದ ಅಂಗಡಿಯೊಂದರ ಬಳಿ ಸೃಷ್ಟಿಯಾದ ಈ ವೈರಸ್ ಜಗತ್ತಿನಾದ್ಯಂತ ಸುಮಾರು 35,000 ಸಾವಿರ ಜೀವಗಳನ್ನು ಆಹುತಿ ತೆಗೆದುಕೊಂಡಿದೆ, 7 ಲಕ್ಷ ಜನರಿಗೆ ಈ ಸೋಂಕು ವ್ಯಾಪಿಸಿದೆ ಹಾಗೂ 186 ರಾಷ್ಟ್ರಗಳಿಗೆ ಸಾವಿನ ಬೆದರಿಕೆ ಒಡ್ಡಿದೆ ಎಂದರೆ ಈ ವೈರಸ್ ಹುಟ್ಟುಹಾಕಿರುವ ಭೀತಿಯನ್ನು ನೀವೆ ಊಹಿಸಬಹುದು.

ಈ ಹಿಂದೆಯೂ ಜಗತ್ತು ಇದ್ದಕಿಂತ ಮಾರಣಾಂತಿಕ ವೈರಸ್‌ ಅನ್ನು ಕಂಡಿದೆ. ಆದರೆ, ಜಗತ್ತನ್ನು ಈ ಪರಿ ಬಿಡದಂತೆ ಕಾಡಿದ ಮತ್ತೊಂದು ವೈರಸ್ ಇರಲಿಕ್ಕಿಲ್ಲ ಎನ್ನುತ್ತಿದೆ ವೈಜ್ಞಾನಿಕ ಜಗತ್ತು.

ಜನವರಿ ತಿಂಗಳಲ್ಲೇ ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೋನಾ ವೈರಸ್ ಹಾವಳಿ ಭಾರತಕ್ಕೆ ಅಷ್ಟಾಗಿ ಬರಲು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ಅಸಡ್ಡೆ ತೋರಿದ್ದವು. ಆದರೆ, ಊರ ಸುಟ್ಟ ಕಿಡಿ ಇಂದು ಮನೆಗೂ ವ್ಯಾಪಿಸಿದೆ.

ಅಧಿಕಾರಸ್ಥರ ಅಸಡ್ಡೆಗೆ ಭಾರತದಲ್ಲೂ ಕೊರೋನಾ ಸುಮಾರು 50 ಜನರನ್ನು ಬಲಿ ಪಡೆದಿದೆ. ಮೊದಲ ಕೊರೋನಾ ಸಾವು ಕರ್ನಾಟಕದಲ್ಲೇ ದಾಖಲಾಗಿತ್ತು ಎಂಬುದು ಉಲ್ಲೇಖಾರ್ಹ. ಇನ್ನೂ ಸುಮಾರು 2000ಕ್ಕೂ ಹೆಚ್ಚು ಜನರಿಗೆ ಈ ಸೋಂಕು ಹರಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಘೋಷಿಸಲಾದ ಲಾಕ್ಡೌನ್ ನಡುವೆಯೂ ದೇಶದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದರೆ ಪರಿಸ್ಥಿತಿಯನ್ನು ಊಹಿಸಬಹುದು.
ಇಂತಹ ಸಂದರ್ಭದಲ್ಲಿ ಆಡಳಿತರೂಢ ಪಕ್ಷದವರು ತುಸು ಹೆಚ್ಚೇ ಎಂಬಂತೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿಟ್ಟು ಜನರನ್ನು ಈ ಮಹಾಮಾರಿಯಿಂದ ಕಾಪಾಡಬೇಕಾದ ತುರ್ತು ಅಗತ್ಯವಿದೆ. ಆದರೆ, ಜನ ಜೀವ ಭಯದಲ್ಲಿ ದಿನದೂಡುತ್ತಿರುವ ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ರಾಜ್ಯದ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಇಬ್ಬರು ಸಚಿವರುಗಳ ತಮ್ಮ ಸ್ವ ಪ್ರತಿಷ್ಠೆಗಾಗಿ ಬೀದಿಕಾಳಗಕ್ಕಿಳಿದಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಅಪಕ್ವತೆಯನ್ನು ಬಟಾಬಯಲು ಮಾಡಿದ್ದಾರೆ.

ಶ್ರೀರಾಮುಲು v/s ಸುಧಾಕರ್ ಅಧಿಕಾರದ ಕಿತ್ತಾಟ

ಮಾರ್ಚ್ ಮೊದಲ ವಾರದವರೆಗೆ ರಾಜ್ಯದಲ್ಲಿ ಎಲ್ಲವೂ ಸರಿಯಾಗೇ ಇತ್ತು. ಚೀನಾ, ಸ್ಪೈನ್ ಇಟಲಿಯಲ್ಲಿ ಸಾಲು ಸಾಲು ಜನರ ಹೆಣ ಬೀಳಿಸಿದ್ದ ಕೊರೋನಾ ಭಾರತದಲ್ಲಿ ಆಗಿನ್ನು ತನ್ನ ಖಾತೆಯನ್ನು ತೆರೆದಿರಲಿಲ್ಲ. ಹೀಗಾಗಿ ರಾಜ್ಯ ಮತ್ತು ರಾಷ್ಟ್ರ ತಣ್ಣಗೇ ಇತ್ತು. ಆರೋಗ್ಯ ಸಚಿವ ಶ್ರೀರಾಮುಲು ಸಹ ತನ್ನ ಮಗಳ ಮದುವೆಯಲ್ಲಿ ತಲ್ಲೀನರಾಗಿದ್ದರು.

ಆದರೆ, ಮಾರ್ಚ್ 12 ರಂದು ಕಲಬುರ್ಗಿಯಲ್ಲಿ 76 ವರ್ಷದ ವೃದ್ಧ ಕೊರೋನಾಗೆ ದೇಶದಲ್ಲೇ ಮೊದಲ ವ್ಯಕ್ತಿಯಾಗಿ ಸಾವಿಗೀಡಾಗುತ್ತಿದ್ದಂತೆ ರಾಜ್ಯ ಮಾತ್ರವಲ್ಲ ಇಡೀ ದೇಶ ಎಚ್ಚೆತ್ತಿತ್ತು. ಆಗಿನ್ನೂ ನಿದ್ದೆಯಿಂದ ಎದ್ದಿದ್ದ ಎರಡೂ ಸರ್ಕಾರಗಳು ಕೊರೋನಾ ಹರಡದಂತೆ ತಡೆಯಲು ನಾನಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದವು. ಆದರೆ, ಆಗಲೂ ಸಹ ಸಚಿವ ಶ್ರೀರಾಮುಲು ಮಾತ್ರ ಇನ್ನೂ ಎಚ್ಚೆತ್ತಿರಲಿಲ್ಲ.

ಮಗಳ ಮದುವೆ ಮೂಡ್‌ನಲ್ಲೇ ಇದ್ದ ಆರೋಗ್ಯ ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆದು ಕೆಲ ಸಭೆ ನಡೆಸಿ ಸೂಚನೆ ನೀಡುವ ಗಿಮಿಕ್ ಮಾಡಿದರಾದರೂ ಸರಿಯಾದ ಅಂಕಿಅಂಶಗಳಿಲ್ಲದೆ ಸುದ್ದಿಗೋಷ್ಠಿಗಳಲ್ಲಿ ಪೇಚಿಗೆ ಸಿಲುಕಿ ಆಡಳಿತ ಸರ್ಕಾರವನ್ನೂ ಮುಜುಗರಕ್ಕೆ ಒಳಪಡಿಸಿದ್ದ ಘಟನೆಗಳು ನಡೆದಿದ್ದವು. ಅಲ್ಲದೆ, ಗಂಭೀರ ವಿಚಾರದ ಕುರಿತ ಶ್ರೀರಾಮುಲು ಅವರ ಈ ಮಟ್ಟದ ಅಸಡ್ಡೆ ಸ್ವತಃ ಸಿಎಂ ಯಡಿಯೂರಪ್ಪ ಅವರ ಕೆಂಗಣ್ಣಿಗೂ ಗುರಿಯಾಗಿತ್ತು.

ಆದರೆ, ಇಂತಹದ್ದೇ ಸಂದರ್ಭಕ್ಕೆ ಕಾದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ. ಸುಧಾಕರ್ ಸಚಿವ ಶ್ರೀರಾಮುಲು ಅವರ ಅನುಪಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರದಲ್ಲಿ ತನ್ನ ಮೂಗು ತೂರಿಸಿದ್ದರು. ಅಷ್ಟೇ ಅಲ್ಲ ರಾಜ್ಯದ ಉದ್ದಗಲಕ್ಕೂ ಓಡಾಡುವ ಮೂಲಕ ತಾನೇ ಆರೋಗ್ಯ ಸಚಿವ ಎಂಬಂತೆ ಮಾಧ್ಯಮಗಳ ಎದುರು ಸಾಕಷ್ಟು ಸ್ಕೋಪ್ ಸಹ ತೆಗೆದುಕೊಂಡಿದ್ದರು. ಈ ಘಟನೆ ಇದೀಗ ಇಬ್ಬರು ಸಚಿವರ ಪ್ರತಿಷ್ಠೆಗೆ ಕಾರಣವಾಗಿದೆ.

ಬಡ್ತಿ ಪಡೆದ ಕೆ. ಸುಧಾಕರ್

ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಮೂಲಕ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದಿದ್ದ ಡಾ|ಕೆ. ಸುಧಾಕರ್ ಅವರಿಗೆ ಕೊರೋನಾ ಕುರಿತ ಶ್ರೀರಾಮಲು ಅವರ ಅಸಡ್ಡೆ ಲಾಭವಾಯಿತು ಮತ್ತು ಜನರ-ಮಾಧ್ಯಮದ ಎದುರು ಒಳ್ಳೆಯ ಹೆಸರು ಗಳಿಸಲೂ ಅನುಕೂಲವಾಯಿತು.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದಂತೆ ರಾಜ್ಯದ ಉದ್ದಗಲಕ್ಕೂ ಓಡಾಡಿದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಎಲ್ಲಾ ಜಿಲ್ಲೆಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಲು ಆರಂಭಿಸಿದರು. ಪ್ರತಿದಿನ ಸಂಜೆ ಪತ್ರಿಕಾಗೋಷ್ಠಿ ನಡೆಸಲು ಮುಂದಾದರು. ಒಂದರ್ಥದಲ್ಲಿ ತಾವೇ ಆರೋಗ್ಯ ಇಲಾಖೆ ಸಚಿವ ಎಂಬಂತೆ ಬಿಂಬಿತವಾಗಲಾರಂಭಿಸಿದರು.

ಸಚಿವ ಸುಧಾಕರ್ ಅವರ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೂ ಬಂದು ಮೆಚ್ಚುಗೆಗೂ ಪಾತ್ರವಾಗಿತ್ತು. ಮಾಧ್ಯಮಗಳೂ ಸಹ ಸುಧಾಕರ್ ಕೆಲಸಕ್ಕೆ ಮೆಚ್ಚುಗೆಯನ್ನು ತೋರಿದ್ದವು. ಇಷ್ಟು ಸಾಕಿತ್ತು ಶ್ರೀರಾಮುಲು ಕಣ್ಣು ಕೆಂಪಾಗಿಸಲು.

ಕೊರೋನಾ ಟಾಸ್ಕ್ ಫೋರ್ಸ್‌ ಬಯಲು ಮಾಡಿತು ಇವರ ಒಣ ಜಗಳ

ಕೊರೋನಾ ವಿಚಾರದಲ್ಲಿ ಸಚಿವ ಸುಧಾಕರ್ ಅವರ ಕೆಲಸಕ್ಕೆ ಮಣೆ ಹಾಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಇಲಾಖೆಯಲ್ಲಿ ಅವರಿಗೂ ಅಧಿಕಾರವನ್ನು ಹಂಚಿಕೆ ಮಾಡಿದ್ದರು. ಅಲ್ಲದೆ, ಕೊರೋನಾ ನಿಯಂತ್ರಣಕ್ಕೆ ರಚಿಸಲಾಗಿದ್ದ “ಕೊರೋನಾ ಟಾಸ್ಕ್ ಫೋರ್ಸ್‌” ಜವಾಬ್ದಾರಿಯನ್ನು ಸುಧಾಕರ್‌ಗೆ ನೀಡಲಾಯಿತು. ಟಾಸ್ಕ್ ಫೋರ್ಸ್‌ ಬೆಂಗಳೂರು ಜವಾಬ್ದಾರಿಯನ್ನು ಸುಧಾಕರ್‌ಗೂ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲುಗೂ ಹಂಚಿಕೆ ಮಾಡಲಾಗಿತ್ತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸರಿ ಸಮಾನವಾಗಿ ಅಧಿಕಾರ ಹಂಚಿದ್ದಕ್ಕೆ ರಾಮುಲು ಸಿಎಂ ಬಿಎಸ್‌ವೈ ಬಳಿ ಗರಂ ಆಗಿದ್ದರು. ಸುಧಾಕರ್‌ಗೆ ನನ್ನ ಇಲಾಖೆಯಲ್ಲಿ ಸರಿಸಮಾನ ಅಧಿಕಾರ ನೀಡಿರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ಟಾಸ್ಕ್ ಫೋರ್ಸ್‌ ಕುರಿತ ಆದೇಶವನ್ನು ಮಾರ್ಪಾಡು ಮಾಡುವಂತೆ ಸಿಎಂಗೆ ಶ್ರೀರಾಮುಲು ಒತ್ತಡ ಹಾಕಿದ್ದರು.

ಮತ್ತೊಂದೆಡೆ ಈ ಕುರಿತು ಮಾಧ್ಯಮಗಳಿಗೆ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿದ್ದ ಡಾ| ಸುಧಾಕರ್, “ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಬೆಂಗಳೂರಿನ ಜವಾಬ್ದಾರಿಯನ್ನು ನನಗೆ ಹಾಗೂ ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಿ ಸಿಎಂ ಆದೇಶಿಸಿದ್ದಾರೆ.
ಆದರೆ, ಟಾಸ್ಕ್ ಫೋರ್ಸ್ ನಿರ್ವಹಣೆ ಎಂಬುದು ಜವಾಬ್ದಾರಿಯುತ ಕೆಲಸವಾಗಿದ್ದು, ಇದನ್ನು ಒಬ್ಬರೇ ಮಾನಿಟರ್ ಮಾಡುವ ಹಾಗಿರಬೇಕು. ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಇದ್ದರೆ ಅವರು ಉತ್ತರದಾಯಿತ್ವರಾಗಬೇಕು. ಜವಾಬ್ದಾರಿಗಳು ಹರಿದು ಹಂಚಿ ಹೋಗುವುದರಿಂದ ಗೊಂದಲಗಳೇ ಅಧಿಕ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಡೀ ಟಾಸ್ಕ್ ಫೋರ್ಸ್‌ ಅಧಿಕಾರವನ್ನು ತನಗೇ ನೀಡಬೇಕು ಎಂಬಂತೆ ವರ್ತಿಸತೊಡಗಿದರು.

ಇದೀಗ ಈ ಟಾಸ್ಕ್ ಫೋರ್ಸ್‌ ರಾಜ್ಯದಲ್ಲಿ ನಿರ್ವಹಿಸುತ್ತಿರುವ ಕೆಲಸ ಏನು? ಸೋಂಕು ಹರಡದಂತೆ ತಡೆಯುವಲ್ಲಿ ಈ ಫೋರ್ಸ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಅಲ್ಲದೆ, ಕೆಲಸ ಮಾಡುವ ವಿಚಾರದಲ್ಲಿ ಈ ಇಬ್ಬರೂ ಸಚಿವರ ನಡುವೆ ಯಾವುದೇ ತಾಳ ಮೇಳ ಇದ್ದಂತೆಯೂ ಕಾಣಿಸುತ್ತಿಲ್ಲ. ಆದರೆ, ಪಕ್ಷದಲ್ಲಿ ಹಿರಿಯನಾದ ತನನ್ನು ವಲಸೆ ಸಚಿವ ಸುಧಾಕರ್ ಸೈಡ್‌ಲೈನ್ ಮಾಡಿರುವ ಸಿಟ್ಟು ರಾಮುಲು ಅವರ ವರ್ತನೆಯಲ್ಲಿ ಎದ್ದು ಕಾಣಿಸುತ್ತಿದೆ.

ಈ ನಡುವೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಳ್ಳುವ ಜವಾಬ್ದಾರಿಯನ್ನೂ ಸಹ ರಾಜ್ಯ ಸರ್ಕಾರ ಡಾ|ಕೆ. ಸುಧಾಕರ್ ಅವರಿಗೇ ನೀಡಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಎಲ್ಲಾ ಪ್ರಸಂಗಗಳನ್ನೂ ಬಿಜೆಪಿ ನಾಯಕರ ಒಣ ಪ್ರತಿಷ್ಠೆಯ ಕಿತ್ತಾಟವನ್ನು ಬಟಾಬಯಲು ಮಾಡಿದೆ.

ಒಂದೆಡೆ ಕೊರೋನಾ ಒಂದೊಂದೇ ದೇಶಗಳನ್ನು ಅಪೋಷನ ತೆಗೆದುಕೊಳ್ಳುತ್ತಿದೆ. ವಿಶ್ವದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯ ಹೊಂದಿರುವ ಅಮೆರಿಕದಂತಹಾ ಅಮೆರಿಕಾ ಸಹ ಕೊರೋನಾ ಎದುರು ಮಂಡಿಯೂರಿ ಕುಳಿತಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ನಮ್ಮದೇ ರಾಜ್ಯದಲ್ಲಿನ ಇಬ್ಬರು ಸಚಿವರುಗಳು ಅಧಿಕಾರಕ್ಕಾಗಿ ಹೀಗೆ ಕಿತ್ತಾಟ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಇಷ್ಟಕ್ಕೂ ಇದು ಅಧಿಕಾರ ಮುಖ್ಯವೇ? ಅಥವಾ ಜೀವ ಮುಖ್ಯವೇ? ಎಂದು ಯೋಚಿಸಬೇಕಾದ ಸಂದಿಗ್ಧ ಕಾಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...