Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

ಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

- Advertisement -
- Advertisement -

ಷಿಕಾರಿಪುರದಲ್ಲಿದ್ದಿರಬಹುದಾದ ಚಾವುಂಡರಾಯನ ಕಾಲ ಪ್ರಾಯಶಃ ಶಕ 969 ಕ್ರಿ. ಶ. 1042. ಈತ ರಚಿಸಿರುವ ಗ್ರಂಥದ ಹೆಸರೇ ಲೋಕೋಪಕಾರಂ. ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ಕೆತ್ತಿಸಿದ ಚಾವುಂಡರಾಯನಿಗೂ ಮತ್ತು ಲೋಕೋಪಕಾರಂ ಗ್ರಂಥದ ಕರ್ತೃವಿಗೂ ಏನೂ ಸಂಬಂಧವಿಲ್ಲ. ಈತನ ಹೆಸರನ್ನು ಕೇಳಿ ಬಹುಶಃ ಜೈನ ಮತಸ್ಥನಿರಬೇಕೆಂದುಕೊಂಡರೆ ಅದೂ ಅಲ್ಲ. ಈತ ಸಕಲ ವಿದ್ಯಾ ಸಂಪನ್ನ ಬ್ರಾಹ್ಮಣ.

ಇನ್ನು ಈ ಶೀರ್ಷಿಕೆಯ ಪ್ರಕಾರ ಲೋಕ ಎಂದರೆ ಭೌತಿಕವಾದ ಜಗತ್ತಲ್ಲ. ಜನರೆಂದು ಅರ್ಥ. ಜನೋಪಕಾರ ಎನ್ನುವುದನ್ನೇ ಲೋಕೋಪಕಾರ ಎನ್ನುತ್ತಿದ್ದಾರೆ ಈ ಕರ್ತೃ.

ಈ ಭೂಮಂಡಲದಲ್ಲಿ ಜನ್ಮಿಸಿದ ಸಮಸ್ತ ಪ್ರಾಣಿಗಳಿಗೂ ಸುಖವು ಬೇಕು. ಹಾಗಾಗಿ ಜನರಿಗೆ ಸುಖವನ್ನು ಉಂಟುಮಾಡುವ ಸಮಸ್ತ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.

ಯಾವುದಪ್ಪಾ ಆ ವಿಷಯಗಳೆಂದರೆ, ವೃಕ್ಷಾರ್ಯುವೇದ, ಸೂಪಶಾಸ್ತ್ರ, ಪಶುಗಳಿಗೆ ವೈದ್ಯ, ಬಾಲ ವೈದ್ಯ, ಅಶ್ವ ವೈದ್ಯ, ಗಜವೈದ್ಯ, ನರಾದಿವೈದ್ಯ, ವಿಷವೈದ್ಯ, ಲೈಂಗಿಕ ಸಮಸ್ಯೆ, ಕೃಷಿ, ಪಶು ಸಾಕಣೆ, ಮನೆ ಮದ್ದು, ಜ್ಯೋತಿಷ್ಯ, ಶಕುನಗಳು; ಹೀಗೆ ಆ ಕಾಲಘಟ್ಟದಲ್ಲಿ ಜನರು ತಮ್ಮ ಸುಖಾನ್ವೇಷಣೆಯಲ್ಲಿ ಏನೇನಲ್ಲಾ ಅನುಸರಿಸುತ್ತಿದ್ದರೋ ಅಥವಾ ಅವಲಂಬಿಸುತ್ತಿದ್ದರೋ ಆ ವಿಷಯಗಳನ್ನೆಲ್ಲಾ ಈ ಪುಸ್ತಕವು ಒಳಗೊಂಡಿದೆ.

ಪುಸ್ತಕವು ಆಸಕ್ತಿಯಿಂದ ಕೂಡಿರುವುದೇಕೆಂದರೆ, ಆ ಕಾಲಘಟ್ಟದಲ್ಲಿ ಜನರು ಸಾಮಾನ್ಯವಾಗಿ ಪರಿಗಣಿಸುತ್ತಿದ್ದ ಮತ್ತು ಶ್ರದ್ಧೆಯನ್ನು ತೋರುತ್ತಿದ್ದ ವಿಷಯಗಳನ್ನೆಲ್ಲಾ ಬರಹಗಾರ ದಾಖಲು ಮಾಡಿದ್ದಾರೆ. ಆ ಜನರ ನಂಬಿಕೆಗಳು, ಆಸಕ್ತಿಗಳು, ಅಗತ್ಯಗಳು, ಅಭಿರುಚಿಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಉದಾಹರಣೆಗೊಂದು ನೋಡಿ, “ಒಂದೆಲದ, ಹೊನಗನ್ನೆ, ಅಮರ್ದುವಳ್ಳಿ, ಕೊಳುಗುಳಿಕೆ ಈ ಔಷಧಿಗಳಲ್ಲಿ ದೊರಕಿದ ಒಂದೊಂದರ ರಸಮಂ ಕೊಂಡು ಸಕ್ಕರೆಯಂ ಬೆರಸಿ ಕುಡಿಸಿದಡೆ ಪಿತ್ತಂ ಕಿಡುವುದು.”

ಪಿತ್ತ ಕಳಕೊಂಡರಾ, ಇನ್ನು ನಿಮ್ಮ ಮುಖವು ಚಂದ್ರನ ಕಾಂತಿಯಲ್ಲಿ ಹೊಳೆಯಬೇಕಾದರೆ, “ಜವೆ, ಕೋಷ್ಠಂ, ಲೋಧ್ರಂ ಇವುರೊಳಗೆ ಆವುದೊಂದು ದ್ಕೊರಕಿದುದಂ ಕೊಂಡು ಉದಕದಲ್ಲರೆದು ಮುಸುಡಂ ಪೂಸಲ್ ಮುಸುಡು ಚಂದ್ರನ ಮರ್ಯಾದೆಯಲ್ಲಿ ಕಾಂತಿಯಪ್ಪುದು – ಬೇಗಮಪ್ಪುದು.”

ಫೇರ್ ಅಂಡ್ ಲೌವ್ಲೀ ಜಾಹಿರಾತಿನಂತೆ ಇಲ್ಲಿ ಚಾವುಂಡರಾಯರೂ ಆಶ್ವಾಸನೆ ಕೊಡುತ್ತಾರೆ “ಬೇಗಮಪ್ಪುದು” ಎಂದು.

ಅತ್ಯಂತ ಕುತೂಹಲಕರವಾದ ವಿಷಯಗಳೆಂದರೆ ಭೂಮಿಯ ಮೇಲ್ಭಾಗವನ್ನು ನೋಡಿ, ಅಲ್ಲಿರುವ ಗಿಡಗಳು, ಮರಗಳು ಯಾವುವು, ಹೇಗೆ ಬೆಳೆದಿವೆ ಎಂಬುದನ್ನೆಲ್ಲಾ ನೋಡಿ, ಬಾವಿ ತೋಡಲು ನೀರಿನ ನೆಲೆಯನ್ನು ಪತ್ತೆ ಹಚ್ಚುವುದು.

ತರಾವರಿ ಸುಗಂಧಗಳ ಗಟ್ಟಿಯಾದ ಮೊಸರು ಮಾಡುವುದು, ಕಡಿಮೆ ವಸ್ತುಗಳನ್ನು ಬಳಸಿ ಅಡಿಗೆಯನ್ನು ರುಚಿಕರವಾಗಿ ಮಾಡುವುದು, ತರಕಾರಿಗಳನ್ನು, ಹಣ್ಣುಗಳನು ಗುರುತಿಸುವ ಬಗೆ ಇತ್ಯಾದಿಗಳನ್ನೆಲ್ಲಾ ವಿವರಿಸಿದ್ದಾರೆ.

ಪ್ರಾಣಿಗಳ ಮೇಲಿನ ದಯೆ, ಗಿಡಗಳನ್ನು ಗುರುತಿಸುವುದು, ಕೃಷಿಗೆ ಅಗತ್ಯ ಸಲಹೆ; ಹೀಗೆ ಎಲ್ಲಾ ವಿಷಯಗಳಲ್ಲೂ ಪಾರಂಗತರಾಗದಿದ್ದರೂ ತಕ್ಷಣಕ್ಕೆ ಒಂದಿಷ್ಟುಮಾಹಿತಿಯನ್ನು ಪಡೆದುಕೊಂಡು ಕೆಲಸಕ್ಕೆ ತೊಡಗಲು ಸಾಧ್ಯವಾಗುವ ಹಾಗೆ ವಿಷಯಗಳು ಹೆಣೆಯಲ್ಪಟ್ಟಿವೆ. ಒಂದು ಮನೆ ಎಂದರೆ ತಕ್ಷಣಕ್ಕೆ ಏನಾದರೂ ಜ್ವರ, ಗಾಯ, ಅಥವಾ ವಿಷ ಸೇವನೆ ಎಂತಾದರೂ ಆಗಿಬಿಡಬಹುದು. ಅದಕ್ಕೆ ಈ ಪುಸ್ತಕ ಮನೆಗಳಲ್ಲಿರಬೇಕು ಎಂಬುದು ಗ್ರಂಥಕರ್ತನ ಆಶಯ.

ಗೃಹಸಂಗಾತಿ ಎಂಬ ಪುಸ್ತಕವೊಂದು ಆಧುನಿಕ, ಸರಳ ಕನ್ನಡದಲ್ಲಿದೆ. ಅದೂ ಕೂಡಾ ಹೀಗೆಯೇ. ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲೊಬ್ಬರು ಈ ಆಲೋಚನೆ, ಆಶಯದಲ್ಲಿ ಒಂದು ಗ್ರಂಥ ರಚನೆ ಮಾಡಿರುವುದು ನಿಜಕ್ಕೂ ವಿಶೇಷ. ಪುಸ್ತಕವನ್ನು ಓದುತ್ತಿದ್ದರೆ ಆ ಜನರ ಆಸಕ್ತಿ, ಅಭಿರುಚಿ, ಚಾತುರ್ಯಗಳೆಲ್ಲಾ ತಿಳಿಯುತ್ತಾ ಹೋಗುತ್ತದೆ. ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಈ ಪುಸ್ತಕದ ಸಂಪಾದಕರು ಹೆಚ್ ಶೇಷ ಅಯ್ಯಂಗಾರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...