Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

ಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

- Advertisement -
- Advertisement -

ಷಿಕಾರಿಪುರದಲ್ಲಿದ್ದಿರಬಹುದಾದ ಚಾವುಂಡರಾಯನ ಕಾಲ ಪ್ರಾಯಶಃ ಶಕ 969 ಕ್ರಿ. ಶ. 1042. ಈತ ರಚಿಸಿರುವ ಗ್ರಂಥದ ಹೆಸರೇ ಲೋಕೋಪಕಾರಂ. ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ಕೆತ್ತಿಸಿದ ಚಾವುಂಡರಾಯನಿಗೂ ಮತ್ತು ಲೋಕೋಪಕಾರಂ ಗ್ರಂಥದ ಕರ್ತೃವಿಗೂ ಏನೂ ಸಂಬಂಧವಿಲ್ಲ. ಈತನ ಹೆಸರನ್ನು ಕೇಳಿ ಬಹುಶಃ ಜೈನ ಮತಸ್ಥನಿರಬೇಕೆಂದುಕೊಂಡರೆ ಅದೂ ಅಲ್ಲ. ಈತ ಸಕಲ ವಿದ್ಯಾ ಸಂಪನ್ನ ಬ್ರಾಹ್ಮಣ.

ಇನ್ನು ಈ ಶೀರ್ಷಿಕೆಯ ಪ್ರಕಾರ ಲೋಕ ಎಂದರೆ ಭೌತಿಕವಾದ ಜಗತ್ತಲ್ಲ. ಜನರೆಂದು ಅರ್ಥ. ಜನೋಪಕಾರ ಎನ್ನುವುದನ್ನೇ ಲೋಕೋಪಕಾರ ಎನ್ನುತ್ತಿದ್ದಾರೆ ಈ ಕರ್ತೃ.

ಈ ಭೂಮಂಡಲದಲ್ಲಿ ಜನ್ಮಿಸಿದ ಸಮಸ್ತ ಪ್ರಾಣಿಗಳಿಗೂ ಸುಖವು ಬೇಕು. ಹಾಗಾಗಿ ಜನರಿಗೆ ಸುಖವನ್ನು ಉಂಟುಮಾಡುವ ಸಮಸ್ತ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.

ಯಾವುದಪ್ಪಾ ಆ ವಿಷಯಗಳೆಂದರೆ, ವೃಕ್ಷಾರ್ಯುವೇದ, ಸೂಪಶಾಸ್ತ್ರ, ಪಶುಗಳಿಗೆ ವೈದ್ಯ, ಬಾಲ ವೈದ್ಯ, ಅಶ್ವ ವೈದ್ಯ, ಗಜವೈದ್ಯ, ನರಾದಿವೈದ್ಯ, ವಿಷವೈದ್ಯ, ಲೈಂಗಿಕ ಸಮಸ್ಯೆ, ಕೃಷಿ, ಪಶು ಸಾಕಣೆ, ಮನೆ ಮದ್ದು, ಜ್ಯೋತಿಷ್ಯ, ಶಕುನಗಳು; ಹೀಗೆ ಆ ಕಾಲಘಟ್ಟದಲ್ಲಿ ಜನರು ತಮ್ಮ ಸುಖಾನ್ವೇಷಣೆಯಲ್ಲಿ ಏನೇನಲ್ಲಾ ಅನುಸರಿಸುತ್ತಿದ್ದರೋ ಅಥವಾ ಅವಲಂಬಿಸುತ್ತಿದ್ದರೋ ಆ ವಿಷಯಗಳನ್ನೆಲ್ಲಾ ಈ ಪುಸ್ತಕವು ಒಳಗೊಂಡಿದೆ.

ಪುಸ್ತಕವು ಆಸಕ್ತಿಯಿಂದ ಕೂಡಿರುವುದೇಕೆಂದರೆ, ಆ ಕಾಲಘಟ್ಟದಲ್ಲಿ ಜನರು ಸಾಮಾನ್ಯವಾಗಿ ಪರಿಗಣಿಸುತ್ತಿದ್ದ ಮತ್ತು ಶ್ರದ್ಧೆಯನ್ನು ತೋರುತ್ತಿದ್ದ ವಿಷಯಗಳನ್ನೆಲ್ಲಾ ಬರಹಗಾರ ದಾಖಲು ಮಾಡಿದ್ದಾರೆ. ಆ ಜನರ ನಂಬಿಕೆಗಳು, ಆಸಕ್ತಿಗಳು, ಅಗತ್ಯಗಳು, ಅಭಿರುಚಿಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಉದಾಹರಣೆಗೊಂದು ನೋಡಿ, “ಒಂದೆಲದ, ಹೊನಗನ್ನೆ, ಅಮರ್ದುವಳ್ಳಿ, ಕೊಳುಗುಳಿಕೆ ಈ ಔಷಧಿಗಳಲ್ಲಿ ದೊರಕಿದ ಒಂದೊಂದರ ರಸಮಂ ಕೊಂಡು ಸಕ್ಕರೆಯಂ ಬೆರಸಿ ಕುಡಿಸಿದಡೆ ಪಿತ್ತಂ ಕಿಡುವುದು.”

ಪಿತ್ತ ಕಳಕೊಂಡರಾ, ಇನ್ನು ನಿಮ್ಮ ಮುಖವು ಚಂದ್ರನ ಕಾಂತಿಯಲ್ಲಿ ಹೊಳೆಯಬೇಕಾದರೆ, “ಜವೆ, ಕೋಷ್ಠಂ, ಲೋಧ್ರಂ ಇವುರೊಳಗೆ ಆವುದೊಂದು ದ್ಕೊರಕಿದುದಂ ಕೊಂಡು ಉದಕದಲ್ಲರೆದು ಮುಸುಡಂ ಪೂಸಲ್ ಮುಸುಡು ಚಂದ್ರನ ಮರ್ಯಾದೆಯಲ್ಲಿ ಕಾಂತಿಯಪ್ಪುದು – ಬೇಗಮಪ್ಪುದು.”

ಫೇರ್ ಅಂಡ್ ಲೌವ್ಲೀ ಜಾಹಿರಾತಿನಂತೆ ಇಲ್ಲಿ ಚಾವುಂಡರಾಯರೂ ಆಶ್ವಾಸನೆ ಕೊಡುತ್ತಾರೆ “ಬೇಗಮಪ್ಪುದು” ಎಂದು.

ಅತ್ಯಂತ ಕುತೂಹಲಕರವಾದ ವಿಷಯಗಳೆಂದರೆ ಭೂಮಿಯ ಮೇಲ್ಭಾಗವನ್ನು ನೋಡಿ, ಅಲ್ಲಿರುವ ಗಿಡಗಳು, ಮರಗಳು ಯಾವುವು, ಹೇಗೆ ಬೆಳೆದಿವೆ ಎಂಬುದನ್ನೆಲ್ಲಾ ನೋಡಿ, ಬಾವಿ ತೋಡಲು ನೀರಿನ ನೆಲೆಯನ್ನು ಪತ್ತೆ ಹಚ್ಚುವುದು.

ತರಾವರಿ ಸುಗಂಧಗಳ ಗಟ್ಟಿಯಾದ ಮೊಸರು ಮಾಡುವುದು, ಕಡಿಮೆ ವಸ್ತುಗಳನ್ನು ಬಳಸಿ ಅಡಿಗೆಯನ್ನು ರುಚಿಕರವಾಗಿ ಮಾಡುವುದು, ತರಕಾರಿಗಳನ್ನು, ಹಣ್ಣುಗಳನು ಗುರುತಿಸುವ ಬಗೆ ಇತ್ಯಾದಿಗಳನ್ನೆಲ್ಲಾ ವಿವರಿಸಿದ್ದಾರೆ.

ಪ್ರಾಣಿಗಳ ಮೇಲಿನ ದಯೆ, ಗಿಡಗಳನ್ನು ಗುರುತಿಸುವುದು, ಕೃಷಿಗೆ ಅಗತ್ಯ ಸಲಹೆ; ಹೀಗೆ ಎಲ್ಲಾ ವಿಷಯಗಳಲ್ಲೂ ಪಾರಂಗತರಾಗದಿದ್ದರೂ ತಕ್ಷಣಕ್ಕೆ ಒಂದಿಷ್ಟುಮಾಹಿತಿಯನ್ನು ಪಡೆದುಕೊಂಡು ಕೆಲಸಕ್ಕೆ ತೊಡಗಲು ಸಾಧ್ಯವಾಗುವ ಹಾಗೆ ವಿಷಯಗಳು ಹೆಣೆಯಲ್ಪಟ್ಟಿವೆ. ಒಂದು ಮನೆ ಎಂದರೆ ತಕ್ಷಣಕ್ಕೆ ಏನಾದರೂ ಜ್ವರ, ಗಾಯ, ಅಥವಾ ವಿಷ ಸೇವನೆ ಎಂತಾದರೂ ಆಗಿಬಿಡಬಹುದು. ಅದಕ್ಕೆ ಈ ಪುಸ್ತಕ ಮನೆಗಳಲ್ಲಿರಬೇಕು ಎಂಬುದು ಗ್ರಂಥಕರ್ತನ ಆಶಯ.

ಗೃಹಸಂಗಾತಿ ಎಂಬ ಪುಸ್ತಕವೊಂದು ಆಧುನಿಕ, ಸರಳ ಕನ್ನಡದಲ್ಲಿದೆ. ಅದೂ ಕೂಡಾ ಹೀಗೆಯೇ. ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲೊಬ್ಬರು ಈ ಆಲೋಚನೆ, ಆಶಯದಲ್ಲಿ ಒಂದು ಗ್ರಂಥ ರಚನೆ ಮಾಡಿರುವುದು ನಿಜಕ್ಕೂ ವಿಶೇಷ. ಪುಸ್ತಕವನ್ನು ಓದುತ್ತಿದ್ದರೆ ಆ ಜನರ ಆಸಕ್ತಿ, ಅಭಿರುಚಿ, ಚಾತುರ್ಯಗಳೆಲ್ಲಾ ತಿಳಿಯುತ್ತಾ ಹೋಗುತ್ತದೆ. ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಈ ಪುಸ್ತಕದ ಸಂಪಾದಕರು ಹೆಚ್ ಶೇಷ ಅಯ್ಯಂಗಾರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...