Homeಮುಖಪುಟ12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

- Advertisement -
- Advertisement -

ಕೆ.ಆರ್. ಶ್ಯಾಮ ಸುಂದರ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಇದೇ ಎಪ್ರಿಲ್ 15ರಂದು ಕೇಂದ್ರ ಗೃಹ ಸಚಿವಾಲಯವು ಒಂದು ವಿವರವಾದ ಅಧಿಸೂಚನೆಯನ್ನು ಹೊರಡಿಸಿತು. ಅದು ದಿಗ್ಬಂಧಿತವಲ್ಲದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾಂಭಿಸಬಹುದಾದ ಶರತ್ತುಗಳನ್ನು ವಿವರಿಸಿತ್ತು.

ಈ ಆದೇಶವು- “ಸಾಮಾಜಿಕ ಅಂತರ” (ದೈಹಿಕ ಅಂತರ), ಕಾರ್ಮಿಕರಿಗೆ ಖಾಸಗಿ ಸಾರಿಗೆ, ವೈದ್ಯಕೀಯ ವಿಮೆ ಮುಂತಾದ ಕಡ್ಡಾಯವಾದ “ಮಾಡು”, “ಮಾಡಬೇಡ” ನಿಯಮಗಳನ್ನು ಹೇರಿದೆ. ಈ ನಿರ್ದೇಶನಗಳ ಯಾವುದೇ ಉಲ್ಲಂಘನೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆ 2005 (ಎನ್‌ಡಿಎಂಎ)ರ ಅಡಿಯಲ್ಲಿ ಸೆರೆವಾಸ ಸೇರಿದಂತೆ ಭಾರೀ ದಂಡ ವಿಧಿಸಬಹುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಇದಕ್ಕಿಂತ ಎರಡು ದಿನಗಳ ಮೊದಲು, ಅಂದರೆ ಎಪ್ರಿಲ್ 13ರಂದು ಭಾರತದ ಕೇಂದ್ರೀಯ ಕಾರ್ಮಿಕ ಸಂಘ (ಸಿಟಿಯು)ಗಳು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ಸರಕಾರವು ಪರಿಗಣಿಸುತ್ತಿರುವುದಾಗಿ ಹೇಳಲಾದ ಕಾರ್ಖಾನೆ ಕಾಯಿದೆ, 1948 (ಎಫ್‌ಎ)ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಈ ತಿದ್ದುಪಡಿಯು ಕಂಪೆನಿಗಳಿಗೆ ಕಾರ್ಖಾನೆಗಳ ಕಾರ್ಮಿಕರಿಗೆ ಕೆಲಸದ ಅವಧಿಯನ್ನು ಈಗಿರುವ- ದಿನಕ್ಕೆ ಎಂಟು ಗಂಟೆ, ವಾರಕ್ಕೆ ಆರು ದಿನ (48ಗಂಟೆ)ದಿಂದ, ದಿನಕ್ಕೆ 12 ಗಂಟೆ, ವಾರಕ್ಕೆ ಆರು ದಿನ (72 ಗಂಟೆ)ಕ್ಕೆ ಹೆಚ್ಚಿಸಲು ಅವಕಾಶ ಮಾಡಿಕೊಡುತ್ತಿತ್ತು.

ಈ ನಡೆಯು ವಿವಾದಾಸ್ಪದವಾಗಿದೆ. ಏಕೆಂದರೆ, ವಾರಕ್ಕೆ 48 ಗಂಟೆಗಳ ಕೆಲಸವು ಜಾಗತಿಕವಾಗಿ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ಐಎಲ್ಓ)ದಿಂದ ಒಪ್ಪಿತವಾದ ನಿಯಮವಾಗಿದೆ. ಹಾಗೆ ನೋಡುವುದಾದಲ್ಲಿ ಐಎಲ್ಓ ಅಂಗೀಕರಿಸಿದ ಮೊತ್ತಮೊದಲ ಒಪ್ಪಂದವೇ ಕೆಲಸದ ಅವಧಿ (ಕೈಗಾರಿಕೆ) ಒಪ್ಪಂದ 1919 (ನಂ.1) ಆಗಿದೆ. ಇದಕ್ಕೆ ಭಾರತವು 1921ರಲ್ಲಿಯೇ ಸಹಿ ಹಾಕಿ, ವಾರಕ್ಕೆ 48 ಗಂಟೆಗಳ ಕೆಲಸವನ್ನು ನಿಗದಿಪಡಿಸಿತ್ತು.

ಸರಕಾರವು ಇನ್ನೂ ಕಾರ್ಖಾನೆ ಕಾಯಿದೆಯನ್ನು ತಿದ್ದುಪಡಿ ಮಾಡಿಲ್ಲವಾದರೂ, ಕನಿಷ್ಟ ನಾಲ್ಕು ಸರಕಾರಗಳು ಕಳೆದ ಕೆಲವು ದಿನಗಳ ಅವಧಿಯಲ್ಲಿ ಮೇಲೆ ಹೇಳಿರುವ ರೀತಿಯಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ ಅಧಿಸೂಚನೆಗಳನ್ನು ಹೊರಡಿಸಿವೆ. ಅವುಗಳೆಂದರೆ, ರಾಜಸ್ಥಾನ (ಎಪ್ರಿಲ್ 11), ಗುಜರಾತ್ (ಎಪ್ರಿಲ್ 17), ಪಂಜಾಬ್ (ಎಪ್ರಿಲ್ 20) ಮತ್ತು ಹಿಮಾಚಲ ಪ್ರದೇಶ (ಎಪ್ರಿಲ್ 21).

ಇದೇ ಹೊತ್ತಿಗೆ, ಭಾರತದಲ್ಲಿ ಐತಿಹಾಸಿಕವಾಗಿಯೂ ಹಾಗೂ ಇತ್ತೀಚಿನ ವರೆಗೂ ಇದು ಕಾರ್ಮಿಕ ಕಾನೂನುಗಳ “ಸುಧಾರಣೆ” (ವಾಸ್ತವವಾಗಿ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ)ಗಳನ್ನು ಜಾರಿಗೊಳಿಸಲು ಅತ್ಯಂತ ಅನುಕೂಲಕರ ಕಾರ್ಯತಂತ್ರವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಮಾರುಕಟ್ಟೆ “ಸುಧಾರಣೆ”ಗಳನ್ನು ಕಾರ್ಮಿಕ ಚಳವಳಿಯು ಸಾಕಷ್ಟು ಒಗ್ಗಟ್ಟಿನಿಂದ ಕೋಟ್ಯಂತರ ಕಾರ್ಮಿಕರ ಬೃಹತ್ ಮುಷ್ಕರಗಳ ಮೂಲಕ ಮತ್ತು ತ್ರಿಪಕ್ಷೀಯ ವೇದಿಕೆಗಳಲ್ಲೂ ಬಲವಾಗಿ ಎದುರಿಸುತ್ತಾ ಬಂದಿದೆ. ಆಗೊಮ್ಮೆ, ಈಗೊಮ್ಮೆ ಅವಕಾಶವಾದಿ ರಾಜಕೀಯ ಪ್ರತಿಪಕ್ಷಗಳ ಬೆಂಬಲವೂ ಅವುಗಳಿಗೆ ಸಿಕ್ಕಿದೆ.

“ಗೊತ್ತುಮಾಡಿ-ವಜಾಮಾಡಿ” (Hire and Fire) ಎಂಬ ಸುಲಭವಾದ “ಸುಧಾರಣೆ”ಗಳು ನಿರುದ್ಯೋಗದಂತಹ ಋಣಾತ್ಮಕ ಪರಿಣಾಮ ಉಂಟುಮಾಡಿ, ಆಳುವ ಪಕ್ಷಗಳಿಗೆ ಪ್ರತಿಕೂಲವಾಗಿ ಪರಿಣಮಿಸಿ ನಷ್ಟ ಉಂಟುಮಾಡುತ್ತವೆ. ಈ ಕಾರಣದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಕಾಯಿದೆಗಳ ಮೂಲಭೂತ ಸುಧಾರಣೆಯು ಆಳುವ ಪಕ್ಷಗಳಿಗೆ ಸಮಸ್ಯೆ ಉಂಟುಮಾಡುವಂತವುಗಳಾಗಿರುತ್ತದೆ.

ಆಗ, ಇದರಿಂದ ಹೊರಬರಲು ಕೇಂದ್ರ ಸರಕಾರದ ದಾರಿ ಯಾವುದಾಗಿರುತ್ತದೆ? “ಕಾರ್ಮಿಕ” ಎಂಬುದು ಕೇಂದ್ರ ಮತ್ತು ರಾಜ್ಯಗಳ ಸಮಾನ ಪಟ್ಟಿಯಲ್ಲಿ ಬರುವ ವಿಷಯವಾಗಿರುವುದರಿಂದ, ಕೇಂದ್ರ ಸರಕಾರವು ಮನಸ್ಸಿರುವ ರಾಜ್ಯಗಳಿಗೆ ಈ “ಸುಧಾರಣೆ”ಗಳನ್ನು ಅನುಷ್ಟಾನಗೊಳಿಸಲು ಒತ್ತಾಸೆ ನೀಡುತ್ತದೆ. ನಂತರ, ಮೂಲತಃ ಕೇಂದ್ರ ಸಂಪುಟದ ನಿರ್ಧಾರವೇ ಆಗಿರುವ ರಾಷ್ಟ್ರಪತಿಯವರ ಅಂಗೀಕಾರ ಅವುಗಳಿಗೆ ಸಿಗುತ್ತದೆ.

ಇದೇ ರೀತಿಯಲ್ಲಿ ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನ) ಕಾಯಿದೆ 1970ಕ್ಕೆ ಆಗಿನ ‘ಏಕೀಕೃತ’ ಆಂಧ್ರಪ್ರದೇಶವು 2003ರಲ್ಲಿ, ರಾಜಸ್ಥಾನ 2014ರಲ್ಲಿ ಮತ್ತು ಮಹಾರಾಷ್ಟ್ರ 2017ರಲ್ಲಿ ತಿದ್ದುಪಡಿ ತಂದು “ಸುಧಾರಣೆ”ಗಳನ್ನು ಜಾರಿಗೊಳಿಸಿದ್ದವು. ಅದೇ ರೀತಿಯಲ್ಲಿ, 100 ಕಾರ್ಮಿಕರು ಇರುವ ಕೈಗಾರಿಕಾ ಸ್ಥಾಪನೆಗಳಿಗೆ ಅನ್ವಯವಾಗುತ್ತಿದ್ದುದನ್ನು 300ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿರುವ ಸ್ಥಾಪನೆಗಳಿಗೆ ಮಾತ್ರ ಅನ್ವಯವಾಗುವಂತೆ ರಾಜಸ್ಥಾನವು 2014ರಲ್ಲಿ ಅಧ್ಯಾಯ ‘V-ಬಿ’ಗೆ “ಸುಧಾರಣೆ”ಗಳನ್ನು ಜಾರಿಗೊಳಿಸಿತು. ಇದಾದ ಕೂಡಲೇ 2016ರಲ್ಲಿ ಜಾರ್ಖಂಡ್ ಸೇರಿದಂತೆ ಇತರ ಅನೇಕ ರಾಜ್ಯಗಳು ಇದನ್ನು ಅನುಸರಿಸಿದವು.

ಅಂದರೆ, ಕೇಂದ್ರ ಸರಕಾರಕ್ಕೆ ನೇರವಾಗಿ ಜಾರಿಗೊಳಿಸಲು ಸಾಮಾನ್ಯವಾಗಿ ಧೈರ್ಯವಿಲ್ಲದ “ಕಠಿಣ”ವಾದ ಕಾರ್ಮಿಕ ಕಾಯಿದೆ “ಸುಧಾರಣೆ”ಗಳನ್ನು- ಜಾರಿಗೊಳಿಸುವ ಧೈರ್ಯತೋರುವ ರಾಜ್ಯ ಸರಕಾರಗಳತ್ತ ಕೇಂದ್ರವು ತಳ್ಳುತ್ತಿದೆ. ರಾಜ್ಯ ಸರಕಾರಗಳು ಇಂತಹಾ ಕಾನೂನುಗಳನ್ನು ತರಲು ಅರ್ಹವಾಗಿರುವುದರಿಂದ ತಾನು ಏನನ್ನೂ ಮಾಡುವಂತಿಲ್ಲ ಎಂಬ ಅಸಹಾಯಕತೆಯ ಪ್ರದರ್ಶನ ಕೇಂದ್ರ ಸರಕಾರಕ್ಕೆ ಮಾಮೂಲಿಯಾಗಿದೆ.

ಇದೀಗ ಕೋವಿಡ್- 19 ಪಿಡುಗಿನ ಸಂದರ್ಭದಲ್ಲಿ ಇಂತದ್ದೇ ಕಾರ್ಯತಂತ್ರವನ್ನು ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಏರಿಸಲು ಬಳಸಿಕೊಳ್ಳುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಹಲವಾರು ಕಾನೂನು ದೋಷಗಳು, ಮಾಲಕರು ತಪ್ಪಿಸಿಕೊಳ್ಳಲು ಸಾಧ್ಯವಾಗುವ ರಂಧ್ರಗಳು ಇತ್ಯಾದಿಗಳು ಇವೆ. ಇವುಗಳಿಗೆ ಹೊರತಾಗಿ ಕಾರ್ಮಿಕರ ಆರೋಗ್ಯ, ಅವರಿಗೆ ಹಕ್ಕಿನಿಂದ ಸಿಗಬೇಕಾದ ವೇತನ- ಸೌಲಭ್ಯಗಳಲ್ಲಿ ಮೋಸ, ಉಳಿದ ಅರ್ಹ/ ಸಶಕ್ತ ಕಾರ್ಮಿಕರಿಗೆ ಉದ್ಯೋಗಾವಕಾಶ ನಷ್ಟ, ಕೈಗಾರಿಕಾ ಸಂಬಂಧಗಳ ಬಿಗಡಾಯಿಸುವಿಕೆ ಮುಂತಾದ ಹಲವಾರು ಸಮಸ್ಯೆಗಳಿದ್ದು, ಈ ಕುರಿತು ಪ್ರತ್ಯೇಕ ಲೇಖನವನ್ನೇ ಬರೆಯಬಹುದು.

ಇಷ್ಟಿದ್ದರೂ ಸರಕಾರವು ಕೊರೋನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆ ಗೆ ಹೆಚ್ಚಿಸಿ, ಹಿಂಬಾಗಿಲಿನ ಮೂಲಕ ಅವರಿಗೆ ಘೋರ ಮೋಸ ಮಾಡುತ್ತಿದೆ.

(ಲೇಖಕ  ಕೆ.ಆರ್. ಶ್ಯಾಮ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರು).


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ನರ್ಸ್‌ ಆಗಿ ಬದಲಾದ ಮುಂಬೈ ಮೇಯರ್‌: ಭಾರೀ ಮೆಚ್ಚುಗೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...