Homeಮುಖಪುಟಕಾಯಕ ತತ್ವವೇ ಸಮಾನತೆಯ ತತ್ವ ಅದನ್ನು ಆಚರಿಸೋಣ

ಕಾಯಕ ತತ್ವವೇ ಸಮಾನತೆಯ ತತ್ವ ಅದನ್ನು ಆಚರಿಸೋಣ

- Advertisement -
- Advertisement -

ರೈತಾಪಿ ಜನರು, ಕಾಯಕ ಜೀವಿಗಳು, ಮಹಿಳೆಯರು ಮತ್ತು ಕೆಳವರ್ಗದ ಜನರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ವಗದ ಜನರಿಗಾಗಿ ತಮ್ಮ ಬದುಕಿನ ಎಲ್ಲ ಸುಖಭೋಗಗಳು ಅವರಿಗೆ ಧಾರೆಯರೆದು ಕೃತಜ್ಞರಾಗಿರುವ ಭಾವನೆ ಇತಿಹಾಸದ ಪುಟಗಳಲ್ಲಿ ನಾವು ನೋಡಬಹುದಾಗಿದೆ. ಕಾಯಕ ಯೋಗಿಯಾಗಿ ಕಾಯಕವಂತು ಮಾಡಲ್ಲಿಲ್ಲಾ ಆದರೆ ಎಲ್ಲಾ ಸೌಲಭ್ಯಗಳು ಮೆಲ್ಜಾತಿಯ ಜನರಿಗೆ ಮೀಸಲಾಗಿದ್ದವು.

ಎಂಟು ಶತಮಾನಗಳ ಹಿಂದೆ ಭಾರತದಲ್ಲಿ ವೈದಿಕಶಾಹಿ ಅತ್ಯಂತ ಪ್ರಬಲ ಶಾಲಿಯಾಗಿದ್ದ ಕಾಲವದು. ಚತುರ್ವಣಗಳನ್ನು ಮಾಡಿಕೊಂಡು, ಈ ನಾಲ್ಕೂ ವರ್ಣದಿಂದ ಹೊರಗಿರುವವರನ್ನು ಅಸ್ಪೃಶ್ಯರೆಂದು ಕರೆದು, ಅವರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ಅಂದು ಇಲ್ಲಿ ಅನೇಕ ಮೂಢನಂಬಿಕೆಗಳು, ಗೊಡ್ಡು ಸಂಪ್ರದಾಯಗಳು, ಬಹುದೇವತೋಪಾಸನೆ, ಸ್ತ್ರೀಶೋಷಣೆ ಅನ್ಯಾಯಗಳಂತಹ ಅನೇಕ ಸಂಪ್ರದಾಯಗಳು ರುದ್ರ ತಾಂಡವಾಡುತ್ತಿದ್ದ ಕಾಲವದು – ಕಾಲವಾಗಿತ್ತು. ದೀನ, ದಲಿತರ ಶೋಷಣೆಯಂತೂ ಹೇಳತೀರದು, ಅತಿರೇಕದ ವರ್ತನೆಯಾಗಿತ್ತು. ಸ್ತ್ರೀಯನ್ನು ಕೇವಲ ಭೋಗದ ಗೊಂಬೆಯನ್ನಾಗಿ ಮಾಡಿಕೊಂಡು, ಅವಳಿಗೆ ಯಾವುದೇ ಧರ್ಮ ಸಂಸ್ಕಾರವಿಲ್ಲದೆ ನೋಡಿಕೊಳ್ಳುತ್ತಿದ್ದರು. ವಿಧವೆಯಾದವರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದ ಕಾಲವದು.

ಬಡವರು, ಶೋಷಿತರು, ನೊಂದವರು, ಸ್ತ್ರೀಯರು ಒಕ್ಕೂರಲಿನಿಂದ ತಮ್ಮನ್ನುದ್ಧರಿಸುವ ಮಹಾಪುರುಷನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಕಾಲದಲ್ಲಿ, ನೊಂದವರ ನಂದಾ ದೀಪವಾಗಿ,ಬಡವರ ಭಾಗ್ಯದ ಸಂಜೀವಿನಿಯಾಗಿ, ನಿರ್ಗತಿಕರ ಬಂಧುವಾಗಿ, ಶೋಷಿತರ ದ್ವನಿಯಾಗಿ, ಸ್ತ್ರೀಕುಲೋದ್ಧಾರಕರಾಗಿ, ಮಾನವತೆಯ ಸಾಕಾರ ಮೂರ್ತಿಯಾಗಿ, ದಿವ್ಯ ಜ್ಯೋತಿಯಾಗಿ,ಕಾಯಕ ತತ್ತ್ವದ ಕ್ರಾಂತಿ ಪುರುಷ ರಾಗಿ ಈ ನಾಡಿನಲ್ಲಿ ಜನ್ಮತಾಳಿದವರು ಬಸವಣ್ಣನವರು. ಪ್ರಯುಕ್ತ ಕಾಯಕ ವರ್ಗದ ಜನರಿಗೆ ಸರಿಯಾದ ಗೌರವ ನೀಡದೇ ಇರುವ ಕಾಲದಲ್ಲಿ ಕಾಯಕದ ಸಮಾನತೆಯ ಬಗೆ ಅಂದಿನ ಜನರಿಗೆ ಸಂಪೂರ್ಣ ಸರಿಯಾದ ತಿಳುವಳಿಕೆ ಕೊಡುವ – ನೀಡುವ ಮೂಲಕ ಕಾಯಕದ ಶ್ರೇಷ್ಠತೆಯ ಪ್ರಜ್ಞೆಯನ್ನು ಪ್ರತಿಯೊಬ್ಬ ಶರಣರ ಹೃನ್ಮಮಂದಿರದಲ್ಲಿ ತುಂಬಿದರು. ತರುವಾಯ ಕಾಯಕದ ಗೌರವ ಮತ್ತು ಮೌಲ್ಯಗಳನ್ನು ಸಮಸ್ತ ಶರಣ ಸಂಕುಲಕ್ಕೆ ತಿಳಿ ಹೇಳುವ ಕಾರ್ಯ ನಿರ್ವಹಿಸಿದರು, ಈ ಮೂಲಕ ಕಾಯಕ ವರ್ಗದ ಶರಣರನ್ನು ಒಟ್ಟು ಗೊಡಿಸುವ ಕಾರ್ಯದೊಂದಿಗೆ ಕಲ್ಯಾಣ ಕಾಯಕ ಕ್ರಾಂತಿಗೆ ಕಾರಣಿಭೊತರಾದರು ನಮ್ಮ ಅಣ್ಣ ಬಸವಣ್ಣನವರು.

ಕಾಯಕ ತತ್ವ:

ಕಾಯಕ ಮಾನವನ ಬದುಕಿನ ಬಹು ದೊಡ್ಡ ಅಂಗ,ಈ ಅಂಗದಿಂದಲೇ ನಮ್ಮ ಬದುಕು, ಬದುಕಿಗಾಗಿ ಕಾಯಕ ಮಾಡಲೇಬೇಕು,ಅಂದಾಗಲೇ ಮನುಷ್ಯನ ಬಾಳಿಗೊಂದು ಸುಂದರ ಅರ್ಥ ಬರುತ್ತದೆ. ಆದ್ದರಿಂದ ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿಯೇ ಕಾಯಕ,ಅದರಲ್ಲಿ ಮೇಲುಕೀಳೆಂಬುದಿಲ್ಲ. ಕಾಯಕ ಮಾಡದವರು ಊಟ ಮಾಡಲು ಯೋಗ್ಯರಲ್ಲ. ವೈಚಾರಿಕತೆಯ ಧರ್ಮದೃಷ್ಟಿಯಿಂದ ನ್ಯಾಯವಾದ ರೀತಿಯಲ್ಲಿ ತಮ್ಮ ಕಾಯಕವನ್ನು ಮಾಡಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹಾಗಾಗಿ ಪ್ರತಿಯೊಬ್ಬ ಮಾನವರೂ ಉದ್ಯೋಗಶೀಲನಾಗಬೇಕು. ತನಗೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಆವಶ್ಯಕವಾದ ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವದಿಂದ ಹಂಚಿಕೊಂಡು ಭಕ್ತಿ, ಭಾವ, ಶ್ರದ್ಧೆಯಿಂದ ಮಾಡಬೇಕು. ಮಾಡಿದಾಗಲೇ ಮನಸ್ಸಿಗೊಂದು ನೆಮ್ಮದಿಯ ನಿಟ್ಟುಸಿರು.

ಈ ಹಿನ್ನೆಲೆಯಲ್ಲಿ 12ನೇ ಶತಮಾನದ ಬಸವಾದಿ ಪ್ರಮಥರು ಅಂದು ಕೈಗೊಂಡ ಹಲವಾರು ಸಮಾಜ ಮುಖಿ ಸೇವೆಗಳ ಕಾರ್ಯಗಳು, ಕಾಯಕ ತತ್ವದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅವರ ಕೊಡುಗೆ ಅಪಾರವಾದುದು. ಇವರಲ್ಲಿ ಅಗ್ರಗಣ್ಯ ನಾಯಕನೆಂದರೆ ಬಸವಣ್ಣನವರು. ಹಾಗಾಗಿ ಕಾಯಕ ತತ್ವದ ಪ್ರಮುಖ ರೂವಾರಿ, ಸಮಾನತೆಯ ಯುಗ ಪುರುಷ, ಭಕ್ತಿ ಬಂಢಾರಿ ಬಸವಣ್ಣನವರು ಕೈಗೊಂಡ ಕಾಯಕ ಧ್ಯೇಯದ ಕ್ರಾಂತಿಕಾರಿ ವಿಚಾರಗಳ ಹೆಜ್ಜೆಗಳು ಇಂದಿನ ಕಾರ್ಮಿಕ ಸಮಾಜಕ್ಕೆ ಅತ್ಯಗತ್ಯವಾಗಿವೆ.ಆದಕಾರಣ ಅವರ ಕಾಯಕ ತತ್ವವನ್ನು ನಾವೆಲ್ಲರೂ ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ.ಕೇವಲ ತೋರಿಕೆಗಾಗಿ ಮಾಡದೇ, ಆತ್ಮತೃಪ್ತಿಗಾಗಿ ಮಾಡುವುದು ಲೇಸು ಹಾಗೂ ಕುಟುಂಬ ವರ್ಗಕ್ಕೂ, ನಾಡಿಗೂ, ದೇಶಕ್ಕೂ ಒಳ್ಳೆಯದು ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ, ನಮ್ಮೆಲ್ಲರ ಭವಿಷ್ಯ ಉಜ್ವಲವಾಗುತ್ತದೆ.

ಕಾಯಕ ನಿಷ್ಠೆ:

ದುಡಿದುಣ್ಣುವುದು ಮನುಷ್ಯ ಸಹಜ ಧರ್ಮ. ಆಹಾರ ದಕ್ಕಿಸಿಕೊಂಡ ಮಾತ್ರಕ್ಕೆ ಮನುಷ್ಯನ ಜವಾಬ್ದಾರಿ ಮುಗಿಯುವುದಿಲ್ಲ. ದುಡಿಮೆ ಮನುಷ್ಯನಿಗೆ ಸ್ವಾಭಿಮಾನವನ್ನೂ ಆತ್ಮವಿಶ್ವಾಸವನ್ನೂ ಜವಾಬ್ದಾರಿಯನ್ನೂ ಗಳಿಕೆ ಹಂಚಿಕೊಳ್ಳುವ ದಾಸೋಹ (ಸೇವಾ ಕಾರ್ಯಗಳು)ನಡೆಸುವ ಅವಕಾಶವನ್ನೂ ನೀಡುತ್ತದೆ. ಕಾಯಕನಿಷ್ಠೆ ಬದುಕನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಕದಲ್ಲಿ ತೊಡಗಿದವರು ತಪ್ಪು ಕಾರ್ಯಗಳನ್ನು ಮಾಡುವ ಪ್ರಮೇಯವೇ ಬರುವುದಿಲ್ಲ! ಹಾಗೆಂದೇ ಬಸವಣ್ಣನವರು ಕಾಯಕ ಪರಂಪರಕ್ಕೆ ಇನ್ನಿಲ್ಲದ ಮಹತ್ವ ನೀಡಿದರು. ಕಾಯಕ ಒಂದು ಅದ್ಭುತ ಪ್ರಕ್ರಿಯೆ. ನಮ್ಮ ನಮ್ಮ ಕೆಲಸವನ್ನು ನಾವು ಕಾಯಾ ವಾಚಾ ಭಕ್ತಿ, ಭಾವ,
ನಿಸ್ವಾರ್ಥ ಮನಸ್ಸಿನಿಂದ ಮಾಡಬೇಕು. ನಮ್ಮ ದೇಹದ ಪ್ರತಿ ಕಣವನ್ನೂ ನಾವು ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಒಂದೊಳ್ಳೆ ಸಿಹಿ ತಿನಿಸನ್ನು ನಾವು ತಿನ್ನುವಾಗ ನಮ್ಮ ಇಡೀ ದೇಹದ ಅಸ್ತಿತ್ವವೇ ಅದರ ಆಸ್ವಾದನೆಯಲ್ಲಿ ತೊಡಗಿಸಿಕೊಳ್ಳುತ್ತೇವೇ ಹಾಗೆ ನಮ್ಮ ಕೆಲಸದಲ್ಲೂ ತೊಡಗಿಸಿಕೊಳ್ಳಬೇಕು. ಆಗ ಸಹಜವಾಗಿ ನಮ್ಮ ಕೆಲಸದ ಮೇಲೆ ನಮಗೆ ಅಭಿಮಾನ, ಪ್ರೀತಿ ಮೂಡುವುದು. ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು ಜನಸಾಮಾನ್ಯರಿಗೆ ಕರೆ ಕೊಟ್ಟಿದ್ದಾರೆ.

ಇದಲ್ಲದೆ ವಚನಗಳು ಬರೆಯುವ ಮೂಲಕ ಪರಿಣಾಮಕಾರಿಯಾಗಿ ಸಮಾಜವನ್ನು ತಿದ್ದುವ ಕಾರ್ಯ ಸಹ ಮಾಡಿದ್ದಾರೆ. ಅವರ ಕಾಯಕ ನಿಷ್ಠೆಯ ವಚನಗಳು ಇಂದಿನ ಸಮಾಜಕ್ಕೆ ಅತಿ ಹೆಚ್ಚು ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ನಾವೆಲ್ಲರೂ ಪಾಲಿಸಿದ್ದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಆದಕಾರಣ ನಮ್ಮ ಅಹಂಕಾರ ತೇಜಿಸಿ, ಮುಕ್ತ ನಿರ್ಮಲವಾದ ಮನಸ್ಸಿನಿಂದ ಕಾಯಕ ಮಾಡಲು ಆತ್ಮಸಾಕ್ಷಿಯಾಗಿ ಮುಂದಾಗೋಣ,ಮುಂದಾಗುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಸಿಗುವಂತೆ ನೋಡಿಕೋಳ್ಳೋಣ. ಗೌರವ ಸೀಗಬೇಕು, ಸಮೃದ್ಧಿ ಜೀವನವನ್ನು ಅವರು ಈ ಸಮಾಜದಲ್ಲಿ ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬಾಳಬೇಕು. ಅಂದಾಗಲೇ ಬಸವಣ್ಣನವರ ಕಾಯಕ ನಿಷ್ಯಯ ವೈಚಾರಿಕ ವಿಚಾರಗಳಿಗೆ ನಾವೆಲ್ಲರೂ ಬೆಲೆ ನೀಡಿದಂತಾಗುತ್ತದೆ.

ಆಶಯ ಮಾತು:

ಸ್ವಾರ್ಥ ಹೀನ ಮನುಷ್ಯರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದುವ ಮೂಲಕ ಹೊರಗಡೆ ಬನ್ನಿ, ಬರಬೇಕು. ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕಾಯಕ ಮಾಡಿ, ಮಾಡಬೇಕು. ಮಾಡುವ ಮೂಲಕ ಸರ್ವರಲ್ಲಿಯೊ ಕಾಯಕ ಪ್ರಜ್ಞೆಯ ಸ್ವೊರ್ತಿ ಮೂಡಿಸುವ ಕೆಲಸ ಆಗಬೇಕು.ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಪ್ರತಿಯೊಬ್ಬರು ಸ್ವಾಭಿಮಾನ – ಅಭಿಮಾನದಿಂದ, ಸ್ವಚ್ಚಂದವಾಗಿ, ನೆಮ್ಮದಿಯಿಂದ ಈ ದೇಶ ಹಾಗೂ ಈ ಸಮಾಜದಲ್ಲಿ ಬದುಕುವಂತಾಗಬೇಕೆಂಬುವುದೇ 12ನೇ ಶತಮಾನದ ಎಲ್ಲಾ ಶಿವಶರಣರ ಮಾಹಾದಾಶಯವಾಗಿದೆ. ಆದ್ದರಿಂದ ಕಾಯಕ ಸಮಾನತೆ ತತ್ವವನ್ನು ನಮ್ಮೆಲ್ಲರ ಅಃತಕರಣದ ಆತ್ಮಕ್ಕೆ ಜಾಗೃತಿ ಮೂಡಿಸಿರುವ ಬಸವಾದಿ ಪ್ರಮಥರನ್ನು ಈ ದಿನ ಸ್ಮರಿಸಬೇಕಾದ ಅಗತ್ಯವಿದೆ ಜೊತೆಗೆ ಕಾಲಘಟ್ಟದಲ್ಲಿ ಅನೇಕ ಶರಣರು ಕಾಯಕ ಲೋಕಕ್ಕೆ ಅನೇಕ ವಚನಗಳನ್ನು ನೀಡಿದ್ದಾರೆ,ಇಂದು ನಾವೆಲ್ಲರೂ ಅವರನ್ನು ನನೆಯುವ ಕೆಲಸ ಮಾಡಬೇಕಾಗಿದೆ.

ಇತಿಹಾಸದ ಪುಟಗಳಲ್ಲಿ ಅನೇಕ ಶರಣರು ಕಾಯಕ ಸಮಾನತೆಗಾಗಿ ತಮ್ಮ ಬದುಕಿನ ಜೀವನವನ್ನು ನಮ್ಮಗಾಗಿ ಧಾರೆಯೆರೆದಿದ್ದಾರೆ ಜೊತೆಗೆ ಬದಲಾವಣೆಗಾಗಿ ಶ್ರಮಿಸಿದ್ದಾರೆ ಎನ್ನುವುದು ನಾವ್ಯಾರು ಮರೆಯಬಾರದು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ. ನಡೆಯುವ ಮೂಲಕ ಸರ್ವರಿಗೂ ಕಾಯಕ ಸ್ನೇಹಿತರಾಗೋಣ, ಲೋಕಕ್ಕೆ ಮಾದರಿಯಾಗೋಣ.


ಇದನ್ನೂ ಓದಿ: 12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...