Homeಮುಖಪುಟಕಾರ್ಖಾನೆಗಳಿಗೆ ಕೊರೊನಾ ಜ್ವರ, ಕಾರ್ಮಿಕರಿಗೆ ಬರೆ!

ಕಾರ್ಖಾನೆಗಳಿಗೆ ಕೊರೊನಾ ಜ್ವರ, ಕಾರ್ಮಿಕರಿಗೆ ಬರೆ!

ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚುಹೆಚ್ಚಾಗಿ ಕಾರ್ಮಿಕ ಸಂಘಗಳನ್ನು ಒಳಗೊಳ್ಳಬೇಕಾದ ಸಮಯದಲ್ಲಿ ಅವುಗಳನ್ನು ದೂರಮಾಡಿ, ದಮನಕಾರಿ ಕಾನೂನುಗಳನ್ನು ತರುವ ಪ್ರಯತ್ನಗಳನ್ನು ಮೋದಿ ಸರಕಾರ ಮಾಡುತ್ತಿದೆ. ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ

- Advertisement -
- Advertisement -

ನರೇಂದ್ರ ಮೋದಿ ಸರಕಾರವು ಕೊರೊನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸುವ ಕಾನೂನುಗಳನ್ನು ರಾಜ್ಯ ಸರಕಾರಗಳ ಮೂಲಕ ಹಿಂದಿನ ಬಾಗಿಲಿನಿಂದ ತರುತ್ತಿದೆ. ಈ ಕಾನೂನುಗಳಲ್ಲಿ ಹಲವು ದೋಷಗಳೂ, ಮಾಲಕರು ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದಾದ ರಂಧ್ರಗಳೂ ಇವೆ. ಅದಲ್ಲದೇ ಈ ಕರಾಳ ನಿರ್ಧಾರದ ಸಾಮಾಜಿಕ, ಅರೋಗ್ಯ ಮತ್ತಿತರ ವಿಷಯಗಳ ಮೇಲಾಗುವ ಪರಿಣಾಮಗಳು ಏನು? ಓದಿ…

ಮೂಲ: ಕೆ.ಆರ್. ಶ್ಯಾಮ ಸುಂದರ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಸರಕಾರವು ಕಾರ್ಮಿಕರ ಕೆಲಸದ ಅವಧಿಯನ್ನು- 1921ರಲ್ಲಿಯೇ ಅಂತರರಾಷ್ಟ್ರೀಯವಾಗಿ ಒಪ್ಪಿತವಾದ ದಿನಕ್ಕೆ ಎಂಟು ಗಂಟೆಗಳ ಕೆಲಸದ ನಿಯಮವನ್ನು ಬದಿಗೊತ್ತಿ, ರಾಜ್ಯ ಸರಕಾರಗಳ ಮೂಲಕ ಹಿಂಬಾಗಿಲಿನಿಂದ 12 ಗಂಟೆಗಳಿಗೆ ಏರಿಸುವುದರ ಕೆಲವು ಪರಿಣಾಮಗಳನ್ನು ಇಲ್ಲಿ ನೋಡೋಣ.

ಮೊತ್ತಮೊದಲಾಗಿ, 12 ಗಂಟೆಗಳ ಕೆಲಸದ ಅವಧಿಗೆ ನೀಡಲಾಗಿರುವ ಕಾನೂನು ಸಮರ್ಥನೆಗಳಲ್ಲಿಯೇ ಹಲವಾರು ಲೋಪದೋಷಗಳಿವೆ. ಕಾರ್ಖಾನೆಗಳ ಕಾಯಿದೆ, 1948ರ ವಿಧಿ 51ರ ಪ್ರಕಾರ ಯಾವುದೇ ಕಾರ್ಮಿಕ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು. ಅದರಂತೆ, ವಿಧಿ 54 ರ ಪ್ರಕಾರ ದಿನಕ್ಕೆ ಒಂಭತ್ತು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಅವಕಾಶ ನೀಡಬಾರದು. ವಿರಾಮವೂ ಸೇರಿದಂತೆ ಇಡೀ ಕಾಲಾವಧಿಯು ಹತ್ತೂವರೆ ಗಂಟೆಗಳನ್ನು ಮೀರಬಾರದು ಎಂದು ವಿಧಿ 56 ಹೇಳುತ್ತದೆ. ವಿಧಿ 51 ಮತ್ತು 54 ಅನ್ವಯಿಸುವಂತೆ ಹೆಚ್ಚುವರಿ ಕೆಲಸದ ಅವಧಿಗೆ ಸಾಮಾನ್ಯ ಅವಧಿಗಿಂತ ದುಪ್ಪಟ್ಟು ಸಂಬಳ ನೀಡಬೇಕು ಎಂದು ವಿಧಿ 59 ಹೇಳುತ್ತದೆ.

ಈಗ ರಾಜ್ಯ ಸರಕಾರಗಳು ಕೆಲಸದ ಅವಧಿಯನ್ನು ವಿಸ್ತರಿಸುವುದಕ್ಕೆ ನೀಡಿರುವ ಕಾರಣಗಳು ಅಥವಾ ಸಬೂಬುಗಳು ಕೆಲವಿವೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ “ಕಾರ್ಮಿಕರ ಕೊರತೆ” ಉಂಟಾಗಿರುವುದು! ಮಾನವ ಶಕ್ತಿಯ ಅಗತ್ಯವನ್ನು “33 ಶೇಕಡಾದಷ್ಟು” ಇಳಿಸುವುದು ಮತ್ತು ಕಾರ್ಮಿಕರ ಓಡಾಟವನ್ನು ಕಡಿಮೆ ಮಾಡುವುದು (ರಾಜಸ್ಥಾನ), ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಾಯುವುದಕ್ಕಾಗಿ (ಗುಜರಾತ್). ಹಿಮಾಚಲ ಪ್ರದೇಶ ತನ್ನ ನಿರ್ಧಾರಕ್ಕೆ ಯಾವುದೇ ಕಾರಣ ನೀಡಿಲ್ಲ. (ಲಕ್ಷಾಂತರ ಜನರು ಒಂದು ದಿನದ ಕೆಲಸಕ್ಕೆ ತಹತಹಿಸುತ್ತಿರುವ ಕಾಲದಲ್ಲಿ ಈ ಹೇಳಿಕೆಗಳು ದುರುದ್ದೇಶಪೂರಿತ ಎಂಬುದು ಸ್ಪಷ್ಟವಾಗುತ್ತದೆ.)

(ಯಂತ್ರದ ಬಿಡಿಭಾಗವಾದ ಮಾನವ: ಚಾರ್ಲಿ ಚಾಪ್ಲಿನ್‌ನ “ಮೋಡರ್ನ್ ಟೈಮ್ಸ್”)

ಎಲ್ಲರೂ ಗರಿಷ್ಟ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆ ಮತ್ತು ವಾರಕ್ಕೆ 72 ಗಂಟೆಗಳಿಗೆ ಏರಿಸಿರುವಾಗ, ರಾಜಸ್ಥಾನ ಮತ್ತು ಪಂಜಾಬ್ ಹೆಚ್ಚುವರಿ ಸಂಬಳ ಅಥವಾ ಓವರ್ ಟೈಮ್ (ಓಟಿ) ಬಗ್ಗೆ ಸ್ಪಷ್ಟವಾಗಿ ಮಾತಾಡಿವೆ. ಓಟಿಯು ಕಾರ್ಖಾನೆಗಳ ಕಾಯಿದೆಯ ವಿಧಿ 59ರಲ್ಲಿ ಹೇಳಿದಂತೆ ಮಾಮೂಲಿ ಸಂಬಳದ ಎರಡರಷ್ಟು ಇರುವುದೆಂದು ಪಂಜಾಬಿನ ಅಧಿಸೂಚನೆಯು ಸ್ಪಷ್ಟಪಡಿಸಿದೆ. ಆದರೆ, ಗುಜರಾತ್ ಮಾತ್ರ ಈಗಿರುವ ದರದಲ್ಲೇ ಹೆಚ್ಚುವರಿ ಸಂಬಳ ನೀಡುವುದಾಗಿ ಹೇಳಿದೆ. ಉದಾಹರಣೆಗೆ ಎಂಟು ಗಂಟೆಗಳ ಕೆಲಸಕ್ಕೆ 80 ರೂ. ಮಜೂರಿ ಆಗಿದ್ದರೆ, 12 ಗಂಟೆಗಳಿಗೆ 120 ರೂ. ನೀಡಲಾಗುವುದು. ವಾಸ್ತವವಾಗಿ ವಿಧಿ 59ರ ಪ್ರಕಾರ 160 ರೂ. ನೀಡಬೇಕು. ಅಂದರೆ, ಕಾರ್ಮಿಕರಿಗೆ 40 ರೂ. ಮೋಸ.


ಇದನ್ನೂ ಓದಿ:  12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ


ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ವಿಧಿ 5 ಮತ್ತು ಪಂಜಾಬ್ ಸರಕಾರ ವಿಧಿ 65ರ ಅವಕಾಶಗಳನ್ನು ಬಳಸಿದ್ದರೆ, ರಾಜಸ್ಥಾನ ಸರಕಾರವು ಯಾವುದೇ ನಿಯಮಗಳನ್ನು ಉಲ್ಲೇಖಿಸದೆ, ಕಾರ್ಮಿಕರ ಭವಿಷ್ಯವನ್ನು ಮಾಲಕರ ಕೈಗೆಕೊಟ್ಟಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳು “ಸಾರ್ವಜನಿಕ ತುರ್ತುಸ್ಥಿತಿ”ಯಲ್ಲಿ ಬಳಸಬಹುದಾದ ವಿಧಿ 5ನ್ನು ಅಕಾರಣವಾಗಿ ಬಳಸಿ ಕಾರ್ಮಿಕರನ್ನು ವಂಚಿಸುತ್ತಿವೆ. ಈ ವಿಧಿಯು ಬಾಲಕಾರ್ಮಿಕರಿಗೆ ಸಂಬಂಧಪಟ್ಟ ವಿಧಿ 67ನ್ನು ಹೊರತುಪಡಿಸಿ, ಕಾರ್ಖಾನೆಗಳ ಕಾಯಿದೆಯ ಯಾವುದೇ ಅಥವಾ ಎಲ್ಲಾ ವಿಧಿಗಳಿಂದ ಕಾರ್ಖಾನೆಗಳಿಗೆ ವಿನಾಯಿತಿ ನೀಡುತ್ತದೆ.

ಈ ಕ್ರಮವು ಪ್ರಶ್ನಾರ್ಹವಾಗಿದೆ. “ಸಾರ್ವಜನಿಕ ತುರ್ತುಸ್ಥಿತಿ” ಎಂದರೆ, “ಭಾರತದ ಅಥವಾ ಅದರ ಭೂಭಾಗದ ಯಾವುದೇ ಪ್ರದೇಶವು ಯುದ್ಧ ಅಥವಾ ಬಾಹ್ಯ ಆಕ್ರಮಣ, ಇಲ್ಲವೇ ಆಂತರಿಕ ಕ್ಷೋಭೆಯಿಂದ ಬೆದರಿಕೆಗೆ ಒಳಗಾದ ಕಾರಣದಿಂದ ಉಂಟಾಗುವ ಗಂಭೀರ ತುರ್ತುಸ್ಥಿತಿ” ಎಂದು ಅರ್ಥ. (26.10.1976ರಿಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪರಿಚಯಿಸಲಾದ ನಿಯಮ).

ಆದರೆ, ಕೊರೊನಾ ದಿಂದ ಉಂಟಾಗಿರುವ ಕೊರೊನಾ ಬಿಕ್ಕಟ್ಟು- ಜೈವಿಕವಾದ ಆರೋಗ್ಯ ಸಮಸ್ಯೆಯ ಪರಿಣಾಮವಾಗಿದ್ದು, ಯಾವುದೇ ರೀತಿಯಲ್ಲಿ ಕಾರ್ಖಾನೆಗಳ ಕಾಯಿದೆಯ ವಿಧಿ 5ರಲ್ಲಿ ನೀಡಲಾದ “ಸಾರ್ವಜನಿಕ ತುರ್ತುಸ್ಥಿತಿ” ಅಥವಾ ಭಾರತದ ಭದ್ರತೆಗೆ ಅಪಾಯ ಒಡ್ಡಬಲ್ಲ ನೆಲೆಯಲ್ಲಿ “ಆಂತರಿಕ ಕ್ಷೋಭೆ”ಯ ವ್ಯಾಖ್ಯೆಯ ಅಡಿಯಲ್ಲಿ ಬರುವುದಿಲ್ಲ.

ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ

ಕಾರ್ಖಾನೆಗಳ ಕಾಯಿದೆಯ ವಿಧಿ 65(2) ರಾಜ್ಯ ಸರಕಾರಗಳಿಗೆ ಶರತ್ತುಗಳಿಗೆ ಒಳಪಟ್ಟು ಕೆಲವು ವಿಧಿಗಳನ್ನು ಬದಲಿಸುವ ಅಧಿಕಾರಗಳನ್ನು ನೀಡಿದೆ. ಆದರೆ, ಯಾವುದೇ ಕಾರಣಕ್ಕೆ ಕೆಲಸದ ಅವಧಿಯು ವಾರಕ್ಕೆ 60 ಗಂಟೆಗಳನ್ನು ಮೀರಬಾರದು ಎಂಬುದು ಈ ಶರತ್ತುಗಳಲ್ಲಿ ಒಂದು. ಪಂಜಾಬ್ ಸರಕಾರ ಮಾತ್ರ ಓಟಿಗೆ ಸಂಬಂಧಿಸಿ ವಿಧಿ 69ನ್ನು ಸರಿಯಾಗಿ ಅನುಸರಿಸಿದೆ. ಆದರೆ, ಎಲ್ಲಾ ಸರಕಾಗಳು ತಮ್ಮ ಅಧಿಸೂಚನೆಗಳಲ್ಲಿ ಕೆಲಸದ ಅವಧಿಯನ್ನು 72 ಗಂಟೆಗಳಿಗೆ ಏರಿಸಿರುವುದು ಎಲ್ಲಾ ನಿಯಮಗಳನ್ನು ಮೀರಿರುವುದರಿಂದ ಪ್ರಶ್ನಾರ್ಹವಾಗಿದೆ.

 

ಇದರ ಹೊರತಾಗಿ, ಕಾರ್ಮಿಕರ ಆರೋಗ್ಯ, ಉತ್ಪಾದಕತೆ ಉಳಿದ ಕಾರ್ಮಿಕರಿಗೆ ಉದ್ಯೋಗಾವಕಾಶಗಳ ವಂಚನೆ, ಗಂಭೀರವಾದ ಕೈಗಾರಿಕಾ ಸಂಬಂಧ ಇತ್ಯಾದಿಯಾಗಿ ಹಲವಾರು ಪ್ರಶ್ನೆಗಳಿವೆ.

ಕಾರ್ಮಿಕರ ಕೊರತೆ, “ಸಾಮಾಜಿಕ ಅಂತರ” ಕಾಯ್ದುಕೊಳ್ಳುವುದರ ಅಗತ್ಯ ಇತ್ಯಾದಿಗಳನ್ನು ನೆಪವಾಗಿ ನೀಡಲಾಗುತ್ತಿದೆ. ವಾಸ್ತವವಾಗಿ ಸರಕಾರ ಆದೇಶಿಸಿರುವ ಹೆಚ್ಚುವರಿ ಸುರಕ್ಷಾ ಕ್ರಮಗಳ ವೆಚ್ಚವನ್ನು ಮಾಲಕರ ಹೆಗಲಿನಿಂದ ಇಳಿಸಿ, ಕಾರ್ಮಿಕರ ಹೆಗಲಿಗೆ ಹೊರಿಸುವ ಹುನ್ನಾರವಿದು. ಅದಕ್ಕಾಗಿ ಕಾರ್ಮಿಕರು ಎಂಟು ಗಂಟೆಯ ಸಂಬಳಕ್ಕೆ 12 ಗಂಟೆ ದುಡಿಯುವಂತೆ ಮಾಡಿ, ಕೊರೋನ ಹೆಸರಲ್ಲಿ ಕಾರ್ಮಿಕರ ರಕ್ತ ಹೀರಲಾಗುತ್ತಿದೆ.(ಹನ್ನೆರಡು ಗಂಟೆಗಳ ಕೆಲಸ: ಯಾಂತ್ರೀಕೃತ ಬದುಕಿನ ವಿಸ್ತರಣೆ)

ಕಾರ್ಮಿಕರ ಕೊರತೆ ನಿಜವಾಗಿಯೂ ಇರುವ ಕಡೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಮಾಲಕರು ಮತ್ತು ಕಾರ್ಮಿಕರು ಚರ್ಚಿಸಿ ಈಗಿರುವ ಕಾರ್ಖಾನೆಗಳ ಕಾಯಿದೆ ಪ್ರಕಾರವೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ, ಇಂತಹಾ ಯಾವುದೇ ಪರಿಗಣನೆಯನ್ನೂ ಮಾಡದೆ, ಕಾನೂನಿನಲ್ಲಿರುವ ತುರ್ತು ಅವಕಾಶಗಳನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಇನ್ನೂ ಪ್ರಮುಖವಾದ ವಿಷಯವೆಂದರೆ, ಈ 12 ಗಂಟೆಗಳ ಕೆಲಸದ ಅವಧಿಯು ಕಾರ್ಮಿಕರಿಗಿರುವ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ 30 ಮಂದಿ ಕಾರ್ಮಿಕರು ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು 20 ಕಾರ್ಮಿಕರು 12 ಗಂಟೆಗಳ ಎರಡು ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾದರೆ, ಉಳಿದ 10 ಮಂದಿ ಕಾರ್ಮಿಕರಿಗೆ ಕೆಲಸವಿಲ್ಲವೆಂದು ಅರ್ಥ. ಈ 30 ಕಾರ್ಮಿಕರಿಗೆ ಸರದಿಯಂತೆ ಕೆಲಸ ಹಂಚುವುದಿದ್ದರೂ ಮೂರನೇ ಒಂದರಷ್ಟು ಕಾರ್ಮಿಕರು ಮನೆಯಲ್ಲಿಯೇ ಉಳಿಯಬೇಕಾಗುತ್ತದೆ. 30 ಕಾರ್ಮಿಕರಲ್ಲಿ 20 ಮಂದಿಯ ಆಯ್ಕೆ ಮಾಡುವಾಗಲೂ ತಾರತಮ್ಯ ಮಾಡಬಹುದು, ಒತ್ತಡ ಹೇರಬಹುದು. ಇಂತಹಾ ಹಲವು ವಾಸ್ತವಿಕ ಪರಿಸ್ಥಿತಿಗಳನ್ನು ಕಲ್ಪಿಸಿಕೊಳ್ಳಬಹುದು.

ಇದರ ಹೊರತಾಗಿಯೂ ಇನ್ನೂ ಅನೇಕ ವಾಸ್ತವಿಕ ವಿಷಯಗಳಿವೆ. ಕೆಲಸದ ಅವಧಿಯ ಹೆಚ್ಚಳ ಮತ್ತು ಯಾಂತ್ರಿಕ ಕೆಲಸದಿಂದ ದೈಹಿಕ ಮತ್ತು ಮಾನಸಿಕ ದಣಿವು ಹೆಚ್ಚುತ್ತದೆ. ಇದು ಆರೋಗ್ಯದ ಮೇಲೆ ಮಾತ್ರವಲ್ಲ ಉತ್ಪಾದಕತೆರ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲಸದ ಸಮಯದಲ್ಲಿ ತಪ್ಪುಗಳು ಮತ್ತು ಅಪಘಾತಗಳೂ ಸಂಭವಿಸಬಹುದು. ಈ ಕೆಲಸದ ಅವಧಿಗೆ ಮನೆಯಿಂದ ಕೆಲಸದ ಸ್ಥಳಕ್ಕೆ ಹೋಗಿ, ಹಿಂತಿರುಗುವ ಸಮಯ ಮತ್ತು ಜಂಜಾಟವೂ ಸೇರಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಮನೆಯ ಕೆಲಸವನ್ನೂ, ಮಕ್ಕಳ ಲಾಲನೆಪಾಲನೆಯನ್ನೂ ಮಾಡಬೇಕಾದ ಮಹಿಳೆಯರ ಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ.

ಇಷ್ಟಲ್ಲದೇ ಕಾರ್ಖಾನೆಗಳು ಪುನರಾರಂಭವಾಗದಿರುವುದು, ಕಾರ್ಮಿಕರ ಕಡಿತ, ಕೆಲಸ ಕಡಿತ, ವೇತನ ಕಡಿತ ಮುಂತಾದ ಹಲವಾರು ಸಮಸ್ಯೆಗಳು ಕಾರ್ಮಿಕರನ್ನು ಎದುರುನೋಡುತ್ತಿದ್ದು, ಆ ಕುರಿತೇ ಪ್ರತ್ಯೇಕ ಲೇಖನವೊಂದನ್ನು ಬರೆಯಬಹುದು. ಒಟ್ಟಿನಲ್ಲಿ ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ. ಏಕೆಂದರೆ, ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚುಹೆಚ್ಚಾಗಿ ಕಾರ್ಮಿಕ ಸಂಘಗಳನ್ನು ಒಳಗೊಳ್ಳಬೇಕಾದ ಸಮಯದಲ್ಲಿ ಅವುಗಳನ್ನು ದೂರಮಾಡಿ, ದಮನಕಾರಿ ಕಾನೂನುಗಳನ್ನು ತರುವ ಪ್ರಯತ್ನಗಳನ್ನು ಮೋದಿ ಸರಕಾರ ಮಾಡುತ್ತಿದೆ.

(ಲೇಖಕ ಕೆ. ಆರ್. ಶ್ಯಾಮ್ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕರು.)


ಇದನ್ನೂ ಓದಿ: ಕಾರ್ಮಿಕರು 12 ಗಂಟೆ ದುಡಿಯಬೇಕೆಂಬುದು ಅನ್ಯಾಯದ ನಿರ್ಧಾರ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...