Homeಪುಸ್ತಕ ವಿಮರ್ಶೆಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

ಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

- Advertisement -
- Advertisement -

ತಿರು ಎಂದರೆ ಶ್ರೀ ಎಂದು ಗೌರವಿಸುವ ಪದ. ಕುರಳ್ ಎಂದರೆ ಚಿಕ್ಕ. ತಮಿಳಿನಲ್ಲಿ ಛಂದಸ್ಸಿನ ಹೆಸರೂ ಹೌದು. ಕುರಳ್ ವೆಣ್ಬಾ ಎಂಬುದು ಆ ಛಂದಸ್ಸಿನ ಪೂರ್ಣ ಹೆಸರು. ನಾವು ಚುಟುಕ ಎನ್ನುವುದಿಲ್ಲವೇ ಹಾಗೆ.

ಇನ್ನು ಪುಟ್ಟ ಗಾತ್ರದ್ದಾಗಿ, ಬರಿಯ ಎರಡೇ ಸಾಲಿನದುದಾಗಿರುವ ವಚನಗಳ ಸಂಕಲನವಾಗಿರುವ ತಿರುಕ್ಕುಳ್ ತಮಿಳು ನಾಡಿನ ಅತ್ಯಂತ ಪ್ರಸಿದ್ಧವಾದ ಮತ್ತು ನಾಡು ನುಡಿಯಲ್ಲಿ ಬೆರೆತು ಹೋಗಿರುವ ಕೃತಿ. ಭಾಷೆ, ರಚನೆ, ವಿಷಯ ಮತ್ತು ಆಶಯ ಎಲ್ಲಾ ವಿಚಾರಗಳಲ್ಲೂ ಅದು ಸಾಮಾಜಿಕವಾಗಿ ಮನ್ನಣೆ ಪಡೆದುಕೊಂಡಿದೆ.

ನಿಜ, ತಿರುವಳ್ಳುವರ್ ಕರ್ನಾಟಕದ ಸರ್ವಜ್ಞರಂತೆ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಜೀವನ ದರ್ಶನವನ್ನು ಮಾಡಿಸುತ್ತಾರೆ. ಹಾಗೆಯೇ ಕಬೀರರಂತೆಯೇ ಇವರು ನೇಯ್ಗೆಯವರು. ನೇಯುವ ಕೆಲಸ ಮಾಡುತ್ತಿದ್ದ ತಿರುವಳ್ಳುವರ್ ಹೊಲಿಯುವ, ಬೆಸೆಯುವ, ಕೂಡಿಸುವ ಕೆಲಸವನ್ನೇ ತಮ್ಮ ಸಾಹಿತ್ಯದ ಮೂಲಕವೂ ಮಾಡುತ್ತಿದ್ದರು. ಅವರ ಸಾಹಿತ್ಯದ ವಸ್ತ್ರವು ಸಮಾಜ, ಅಧ್ಯಾತ್ಮ, ಆತ್ಮಾವಲೋಕನ, ವ್ಯವಸ್ಥೆಯ ವಿಮರ್ಶೆ, ಮನುಷ್ಯತ್ವ, ವಿನಯತೆ; ಹೀಗೆ ವ್ಯಕ್ತಿಗತವಾಗಿ ಒಬ್ಬನ ಹಿತವಾದ ಬದುಕು ಮತ್ತು ಸಮಾಜದಲ್ಲಿ ಹದವಾದ ಮಿಳಿತಗಳೊಂದಾಗಿರುವಂತೆ ಎಳೆಗಳು ಒಂದರೊಳಗೊಂದು ನೇಯ್ದುಕೊಂಡಿರುತ್ತಿದ್ದವು.

“ಸಾಸವೆಯ ಕೊರೆದು ಏಳ್ಕಡಲನೊಳಹೊಗಿಸಿ ಅಡಗುವೊಲು ಸಮರಿದುವು ಕುರಳು” ಅಂದರೆ ಸಾಸುವೆಯನ್ನು ಕೊರೆದು ಟೊಳ್ಳು ಮಾಡಿ ಏಳು ಸಮುದ್ರಗಳನ್ನೂ ಅದರೊಳಗೆ ನುಗ್ಗಿಸಿ ಅಡಗಿಸಿದ ಹಾಗೆ ಈ ಕುರಳು ಎಂದು ಅಭಿಮಾನದಿಂದ ವಿಮರ್ಶಕರೊಬ್ಬರು ಹೇಳುತ್ತಾರೆ. ಈ ಮಾತನ್ನು ಅತ್ಯುತ್ಪ್ರೇಕ್ಷೆ ಎಂದುಕೊಳ್ಳದೇ ರೂಪಕವೆಂದು ವ್ಯಾಕರಣದಲ್ಲಿ ಅಲಂಕಾರವೆಂದು ಬಗೆದರೆ ಒಪ್ಪಿಕೊಳ್ಳುವುದರಲ್ಲಿ ಸಮಸ್ಯೆಯೇನೂ ಇಲ್ಲ.

ಆಗಿನ ಸಮಾಜ ಸುಧಾರಣಾ ದೃಷ್ಟಿಯಿಂದ ಆಗಿನ ಸುಧಾರಕರು ತಮ್ಮ ಕೃತಿಗಳಲ್ಲಿ ವ್ಯವಸ್ಥೆಯ ಅಮಾನವೀಯತೆಯನ್ನು ಧಿಕ್ಕರಿಸಿರುತ್ತಾರೆ, ಅನ್ಯಾಯವನ್ನು ವಿರೋಧಿಸಿರುತ್ತಾರೆ, ಆಗ ಕೊರತೆಯಿರುವ ಮಾನವೀಯತೆಯನ್ನು ಎತ್ತಿ ಹಿಡಿದಿರುತ್ತಾರೆ, ವರ್ಣ ಮತ್ತು ವರ್ಗ ಬೇಧಗಳ ಶೋಷಣೆಯನ್ನು, ಮೌಢ್ಯ, ಅಂಧಾನುಕರಣೆ ಮತ್ತು ಶುಷ್ಕ ಆಚರಣೆಗಳನ್ನು ಖಂಡಿಸಿರುತ್ತಾರೆ. ಆ ಕೃತಿಗಳು ಈಗಲೂ ಪ್ರಸ್ತುತವಾಗಿವೆ ಎಂದರೆ ಆಗಿದ್ದ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಎಂದೇ ಅರ್ಥ. ಯಾವಾಗ ಪ್ರಾಚೀನ ಸಮಾಜ ಸುಧಾರಕರ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಆ ಕೃತಿಕಾರರ ಆರಾಧಕರು ಅಭಿಮಾನದಿಂದ ಹೇಳಿಕೊಳ್ಳುವಾಗ ನನಗೆ ನಾಚಿಕೆಯಾಗುತ್ತದೆ. ಇಷ್ಟು ಹೊತ್ತಿಗೆ ಅವುಗಳು ಅಪ್ರಸ್ತುತವಾಗಬೇಕಿತ್ತು. ಆಗಿಲ್ಲ ಎಂದರೆ ನಮ್ಮ ಸಮಾಜ ಇನ್ನೂ ಸುಧಾರಿಸಿಲ್ಲ ಎಂದೇ ಅರ್ಥ. ಹಳೆಯ ಸಮಸ್ಯೆಗಳು ಹೊಸಹೊಸ ರೂಪಗಳನ್ನು ತಾಳಿಕೊಂಡು ನಮ್ಮೊಡನೆ ಇರುವುದರಿಂದ ಇನ್ನೂ ಬುದ್ಧ, ಬಸವ, ಸರ್ವಜ್ಞ, ತಿರುವಳ್ಳುವರ್, ಕಬೀರ್, ಅಂಬೇಡ್ಕರ್, ಗಾಂಧಿ ಎಲ್ಲಾ ಪ್ರಸ್ತುತವಾಗಿಯೇ ಇರುವುದು.

ವ್ಯಕ್ತಿ ಪೂಜೆಯ ಗಮ್ಮತ್ತಿನಲ್ಲಿ ಕೆಲವೊಮ್ಮೆ ಆ ಕೃತಿಕಾರರ ಎಡವಟ್ಟುಗಳಿಗೆ ನಾವು ಒಂದೋ ಕುರುಡರಾಗಿಬಿಡುತ್ತೇವೆ ಅಥವಾ ಸಮರ್ಥಿಸಿಕೊಂಡು ಬಿಡುತ್ತೇವೆ. ಕುರುಡರಾಗುವುದು ತಪ್ಪು ಆದರೆ ಸಮರ್ಥಿಸುವುದು ಅಪರಾಧ. ತಿರುವಳ್ಳುವರ್ ವಿಷಯದಲ್ಲೇ ತೆಗೆದುಕೊಂಡರೆ, ಅವರ ಹೆಂಡತಿ ವಾಸುಗಿ ತಾನು ಪತಿವ್ರತೆಯೆಂದು ನಿರೂಪಿಸಲು ಮರಳಿನಲ್ಲಿ ಅನ್ನವನ್ನು ಮಾಡುತ್ತಾಳಂತೆ. ಇದೊಂದು ದಂತಕತೆಯೇ ಆಗಿದ್ದರೂ, ತಿರುವಳ್ಳುವರ್ ಹೆಣ್ಣಿನ ಪಾತಿವ್ರತ್ಯವನ್ನು ಎತ್ತಿ ಹಿಡಿಯುವ ಧೋರಣೆ ತೋರುತ್ತಾರೆ. ಇನ್ನು ತಿರುಕ್ಕುರಳಿನಲ್ಲಿಯೂ ಹೆಣ್ಣಾದವಳು ಮನೆಗಷ್ಟೇ ಶೋಭೆ ಮತ್ತು ಅವಳ ಬದ್ಧತೆ ಅವಳ ಸಂಸಾರವನ್ನು ಕಾಪಾಡುವುದು ಎಂದೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅವರ ಕಾಲಘಟ್ಟದ ಅಗತ್ಯವೇ ಅವರಿಗೆ ಹಾಗೆ ನುಡಿಸಿರುತ್ತದೆ. ಪುರುಷರು ವ್ಯಾಪಾರಕ್ಕೆ, ವ್ಯವಹಾರಕ್ಕೆ, ಯುದ್ಧಕ್ಕೆ, ಇನ್ನಿತರ ಕಾರ್ಯಗಳಿಗೆಂದು ಮರಳಿ ಬರುವ ಭರವಸೆಯೇ ಇಲ್ಲದಂತೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಮನೆಯಲ್ಲಿ ಹಿರಿಯರನ್ನು, ಮಕ್ಕಳನ್ನು, ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಗಳು ಇರುತ್ತಿದ್ದವು. ಆದರೆ ಅವು ಈಗ ನಮಗೆ ಪ್ರಸ್ತುತವಲ್ಲ. ಹಾಗೆಯೇ ಮನಸ್ಸಿನ ನಿಯಂತ್ರಣದ ಬಗ್ಗೆ, ಕೋಪವು ಉಂಟು ಮಾಡುವ ಕೆಡಕುಗಳ ಬಗ್ಗೆ ಹೇಳುವಂತಹ, ಆತ್ಮಾವಲೋಕನದ ಕುರಿತಾದ ಮಾತುಗಳು, ಅಲ್ಲಲ್ಲಿ ಒಂದಿಷ್ಟು ವ್ಯತ್ಯಾಸಗಳಿದ್ದರೂ, ಸಾಕಷ್ಟು ಅನ್ವಯವಾಗುವಂತವೇ ಆಗಿರುತ್ತವೆ. ಒಟ್ಟಾರೆ ಅವರೆಂತಹ ಮಹಾತ್ಮರೇ ಆಗಿರಲಿ, ಅವರೆಷ್ಟೇ ಜನಪ್ರಿಯರೇ ಆಗಿರಲಿ, ಅವರ ಮಾತುಗಳನ್ನು ಮತ್ತು ಅಭಿಪ್ರಾಯಗಳನ್ನು ತೆಗೆದುಕೊಳ್ಳುವಾಗ ಪ್ರಸ್ತುತ ಕಾಲದ ನಮ್ಮ ಬದುಕಿನಲ್ಲಿ, ನಾವಿರುವ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದನ್ನು ಗಮನಿಸುವಷ್ಟರ ಮಟ್ಟಿಗಿನ ಪ್ರಜ್ಞೆಯ ಅವಶ್ಯಕತೆಯಂತೂ ಇದ್ದೇ ಇರುತ್ತದೆ.

ತಿರುವಳ್ಳುವರ್ ದೇವರ ಹಿರಿಮೆಯನ್ನು ವೈಭವೀಕರಿಸುವುದನ್ನು ನೋಡಿದಾಗ ಮನುಷ್ಯನ ಅಹಂಕಾರವನ್ನು ಮಣಿಸಿ ವಿನಯ ವಿಧೇಯತೆಯನ್ನು ತೋರಲು ಪ್ರಯತ್ನಿಸುವಂತೆ ತೋರುತ್ತದೆ. ತಿರುಕ್ಕುರಳ್ ಕೂಡಾ ಸುಂದರವಾದ ಮತ್ತು ಮೌಲ್ಯಗಳಿಂದ ಕೂಡಿರುವ ಕೃತಿಯೇ. ನಮ್ಮ ಈಗಿನ ಮಣ್ಣಿನಲ್ಲಿ ಬಿತ್ತಬೇಕಾದ ಬೀಜಗಳನ್ನು ಗೌರವದಿಂದಲೇ ಆಯ್ದುಕೊಳ್ಳಬೇಕು.

“ಮನದಲ್ಲಿ ತೊರೆಯದವರು, ತೊರೆದವರ ಹಾಗೆ ವಂಚಿಸುತ”
“ಬಾಳುವವರು, ಇವರಿಗಿಂತಲು ಬೇರೆ ಕಟುಕರಿಲ್ಲ.”
ಇದು ಮನಸ್ಸಿನಲ್ಲಿ ವೈರಾಗ್ಯವಿಲ್ಲದೇ ಹೆಸರಿಗೆ ಸಂನ್ಯಾಸಿಗಳಾಗಿರುವವರನ್ನು ಕುರಿತು ಮಾಡುವ ಟೀಕೆ.
“ತನ್ನ ತಾನ್ ಕಾಪಾಡಿಕೊಳ್ಳುವರೆ ಮುನಿಸ ತಡಕೊಳಬೇಕು
ತಡೆಯದಿರೆ ನನ್ನನೆ ಕೊಲ್ಲುವುದು ಮುನಿಸು”
“ತನಗೆ ಅಹಿತ ಎಂಬುದನು ತಾನು ಅರಿತವನು
ಬೇರೆ ಪ್ರಾಣಿಗೆ ಅಹಿತ ಮಾಡುವುದದೆಂತೊ.”
“ನುಣ್ಣನೆಯ ಶಾಸ್ತ್ರಗಳ ಹಲವ ಕಲಿತರೂ ತನ್ನ
ಸಹಜದರಿವೇ ಮತ್ತೆ ಮಿಕ್ಕು ನಿಲ್ಲುವುದು.”
ತಿರುವಳ್ಳುವರ್ ಸಂತೆಯಲ್ಲಿ ತಾವು ನೇಯ್ದ ವಸ್ತ್ರವನ್ನು ಮಾರಲು ಹೋದಾಗ ಮದಿಸಿದ ಯುವಕನೊಬ್ಬ ಬೆಲೆ ಕೇಳುತ್ತಾನೆ. ಅವರು ಎರಡು ಪಣ ಎನ್ನುತ್ತಾರೆ. ಅವನು ವಸ್ತ್ರವನ್ನು ಅರ್ಧಕ್ಕೆ ಹರಿದು ಕೇಳುತ್ತಾನೆ. ಅವರು ಒಂದು ಪಣವೆನ್ನುತ್ತಾರೆ. ಅದನ್ನೂ ಹರಿದ ಮೇಲೆ ಅರ್ಧ ಪಣ ಎನ್ನುತ್ತಾರೆ. ಆ ಯುವಕನು ವಸ್ತ್ರವನ್ನು ಸಂಪೂರ್ಣ ಹರಿದು ಚೂರು ಚೂರು ಮಾಡಿದ ಮೇಲೆ ಇದಕ್ಕೆ ಬೆಲೆ ಇಲ್ಲ. ನೀನೇ ತೆಗೆದಿಕೋ ಎನ್ನುತ್ತಾರೆ ತಿರುವಳ್ಳುವರ್. ನಿಮಗೇಕೆ ಕೋಪ ಬರಲಿಲ್ಲ ಎಂದು ಯುವಕ ಕೇಳಿದಾಗ ‘ತಾಳ್ಮೆ ಮತ್ತು ಕ್ಷಮೆಯ ಪಾಠ ನಿನಗೆ ಈಗ ಸಿಕ್ಕಿದೆ. ಅದರ ಮುಂದೆ ಈ ವಸ್ತ್ರದ ಬೆಲೆ ಏನು’ ಎಂದರಂತೆ. ಆತನಿಗೆ ತನ್ನ ಕೃತ್ಯದ ಬಗ್ಗೆ ನಾಚಿಕೆ ಎನಿಸಿ ಕ್ಷಮೆ ಕೇಳಿದನಂತೆ.

ಆಯ್ದಾದುಕೊಂಡಂತೆ ಹಲವು ಮುತ್ತುಗಳು ತಿರುಕ್ಕುರಳ್ಳಿನ ಸಾಗರದಲ್ಲಿ ಸಿಕ್ಕೇ ಸಿಗುವವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...