Homeಪುಸ್ತಕ ವಿಮರ್ಶೆಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

ಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

- Advertisement -
- Advertisement -

ತಿರು ಎಂದರೆ ಶ್ರೀ ಎಂದು ಗೌರವಿಸುವ ಪದ. ಕುರಳ್ ಎಂದರೆ ಚಿಕ್ಕ. ತಮಿಳಿನಲ್ಲಿ ಛಂದಸ್ಸಿನ ಹೆಸರೂ ಹೌದು. ಕುರಳ್ ವೆಣ್ಬಾ ಎಂಬುದು ಆ ಛಂದಸ್ಸಿನ ಪೂರ್ಣ ಹೆಸರು. ನಾವು ಚುಟುಕ ಎನ್ನುವುದಿಲ್ಲವೇ ಹಾಗೆ.

ಇನ್ನು ಪುಟ್ಟ ಗಾತ್ರದ್ದಾಗಿ, ಬರಿಯ ಎರಡೇ ಸಾಲಿನದುದಾಗಿರುವ ವಚನಗಳ ಸಂಕಲನವಾಗಿರುವ ತಿರುಕ್ಕುಳ್ ತಮಿಳು ನಾಡಿನ ಅತ್ಯಂತ ಪ್ರಸಿದ್ಧವಾದ ಮತ್ತು ನಾಡು ನುಡಿಯಲ್ಲಿ ಬೆರೆತು ಹೋಗಿರುವ ಕೃತಿ. ಭಾಷೆ, ರಚನೆ, ವಿಷಯ ಮತ್ತು ಆಶಯ ಎಲ್ಲಾ ವಿಚಾರಗಳಲ್ಲೂ ಅದು ಸಾಮಾಜಿಕವಾಗಿ ಮನ್ನಣೆ ಪಡೆದುಕೊಂಡಿದೆ.

ನಿಜ, ತಿರುವಳ್ಳುವರ್ ಕರ್ನಾಟಕದ ಸರ್ವಜ್ಞರಂತೆ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಜೀವನ ದರ್ಶನವನ್ನು ಮಾಡಿಸುತ್ತಾರೆ. ಹಾಗೆಯೇ ಕಬೀರರಂತೆಯೇ ಇವರು ನೇಯ್ಗೆಯವರು. ನೇಯುವ ಕೆಲಸ ಮಾಡುತ್ತಿದ್ದ ತಿರುವಳ್ಳುವರ್ ಹೊಲಿಯುವ, ಬೆಸೆಯುವ, ಕೂಡಿಸುವ ಕೆಲಸವನ್ನೇ ತಮ್ಮ ಸಾಹಿತ್ಯದ ಮೂಲಕವೂ ಮಾಡುತ್ತಿದ್ದರು. ಅವರ ಸಾಹಿತ್ಯದ ವಸ್ತ್ರವು ಸಮಾಜ, ಅಧ್ಯಾತ್ಮ, ಆತ್ಮಾವಲೋಕನ, ವ್ಯವಸ್ಥೆಯ ವಿಮರ್ಶೆ, ಮನುಷ್ಯತ್ವ, ವಿನಯತೆ; ಹೀಗೆ ವ್ಯಕ್ತಿಗತವಾಗಿ ಒಬ್ಬನ ಹಿತವಾದ ಬದುಕು ಮತ್ತು ಸಮಾಜದಲ್ಲಿ ಹದವಾದ ಮಿಳಿತಗಳೊಂದಾಗಿರುವಂತೆ ಎಳೆಗಳು ಒಂದರೊಳಗೊಂದು ನೇಯ್ದುಕೊಂಡಿರುತ್ತಿದ್ದವು.

“ಸಾಸವೆಯ ಕೊರೆದು ಏಳ್ಕಡಲನೊಳಹೊಗಿಸಿ ಅಡಗುವೊಲು ಸಮರಿದುವು ಕುರಳು” ಅಂದರೆ ಸಾಸುವೆಯನ್ನು ಕೊರೆದು ಟೊಳ್ಳು ಮಾಡಿ ಏಳು ಸಮುದ್ರಗಳನ್ನೂ ಅದರೊಳಗೆ ನುಗ್ಗಿಸಿ ಅಡಗಿಸಿದ ಹಾಗೆ ಈ ಕುರಳು ಎಂದು ಅಭಿಮಾನದಿಂದ ವಿಮರ್ಶಕರೊಬ್ಬರು ಹೇಳುತ್ತಾರೆ. ಈ ಮಾತನ್ನು ಅತ್ಯುತ್ಪ್ರೇಕ್ಷೆ ಎಂದುಕೊಳ್ಳದೇ ರೂಪಕವೆಂದು ವ್ಯಾಕರಣದಲ್ಲಿ ಅಲಂಕಾರವೆಂದು ಬಗೆದರೆ ಒಪ್ಪಿಕೊಳ್ಳುವುದರಲ್ಲಿ ಸಮಸ್ಯೆಯೇನೂ ಇಲ್ಲ.

ಆಗಿನ ಸಮಾಜ ಸುಧಾರಣಾ ದೃಷ್ಟಿಯಿಂದ ಆಗಿನ ಸುಧಾರಕರು ತಮ್ಮ ಕೃತಿಗಳಲ್ಲಿ ವ್ಯವಸ್ಥೆಯ ಅಮಾನವೀಯತೆಯನ್ನು ಧಿಕ್ಕರಿಸಿರುತ್ತಾರೆ, ಅನ್ಯಾಯವನ್ನು ವಿರೋಧಿಸಿರುತ್ತಾರೆ, ಆಗ ಕೊರತೆಯಿರುವ ಮಾನವೀಯತೆಯನ್ನು ಎತ್ತಿ ಹಿಡಿದಿರುತ್ತಾರೆ, ವರ್ಣ ಮತ್ತು ವರ್ಗ ಬೇಧಗಳ ಶೋಷಣೆಯನ್ನು, ಮೌಢ್ಯ, ಅಂಧಾನುಕರಣೆ ಮತ್ತು ಶುಷ್ಕ ಆಚರಣೆಗಳನ್ನು ಖಂಡಿಸಿರುತ್ತಾರೆ. ಆ ಕೃತಿಗಳು ಈಗಲೂ ಪ್ರಸ್ತುತವಾಗಿವೆ ಎಂದರೆ ಆಗಿದ್ದ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಎಂದೇ ಅರ್ಥ. ಯಾವಾಗ ಪ್ರಾಚೀನ ಸಮಾಜ ಸುಧಾರಕರ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಆ ಕೃತಿಕಾರರ ಆರಾಧಕರು ಅಭಿಮಾನದಿಂದ ಹೇಳಿಕೊಳ್ಳುವಾಗ ನನಗೆ ನಾಚಿಕೆಯಾಗುತ್ತದೆ. ಇಷ್ಟು ಹೊತ್ತಿಗೆ ಅವುಗಳು ಅಪ್ರಸ್ತುತವಾಗಬೇಕಿತ್ತು. ಆಗಿಲ್ಲ ಎಂದರೆ ನಮ್ಮ ಸಮಾಜ ಇನ್ನೂ ಸುಧಾರಿಸಿಲ್ಲ ಎಂದೇ ಅರ್ಥ. ಹಳೆಯ ಸಮಸ್ಯೆಗಳು ಹೊಸಹೊಸ ರೂಪಗಳನ್ನು ತಾಳಿಕೊಂಡು ನಮ್ಮೊಡನೆ ಇರುವುದರಿಂದ ಇನ್ನೂ ಬುದ್ಧ, ಬಸವ, ಸರ್ವಜ್ಞ, ತಿರುವಳ್ಳುವರ್, ಕಬೀರ್, ಅಂಬೇಡ್ಕರ್, ಗಾಂಧಿ ಎಲ್ಲಾ ಪ್ರಸ್ತುತವಾಗಿಯೇ ಇರುವುದು.

ವ್ಯಕ್ತಿ ಪೂಜೆಯ ಗಮ್ಮತ್ತಿನಲ್ಲಿ ಕೆಲವೊಮ್ಮೆ ಆ ಕೃತಿಕಾರರ ಎಡವಟ್ಟುಗಳಿಗೆ ನಾವು ಒಂದೋ ಕುರುಡರಾಗಿಬಿಡುತ್ತೇವೆ ಅಥವಾ ಸಮರ್ಥಿಸಿಕೊಂಡು ಬಿಡುತ್ತೇವೆ. ಕುರುಡರಾಗುವುದು ತಪ್ಪು ಆದರೆ ಸಮರ್ಥಿಸುವುದು ಅಪರಾಧ. ತಿರುವಳ್ಳುವರ್ ವಿಷಯದಲ್ಲೇ ತೆಗೆದುಕೊಂಡರೆ, ಅವರ ಹೆಂಡತಿ ವಾಸುಗಿ ತಾನು ಪತಿವ್ರತೆಯೆಂದು ನಿರೂಪಿಸಲು ಮರಳಿನಲ್ಲಿ ಅನ್ನವನ್ನು ಮಾಡುತ್ತಾಳಂತೆ. ಇದೊಂದು ದಂತಕತೆಯೇ ಆಗಿದ್ದರೂ, ತಿರುವಳ್ಳುವರ್ ಹೆಣ್ಣಿನ ಪಾತಿವ್ರತ್ಯವನ್ನು ಎತ್ತಿ ಹಿಡಿಯುವ ಧೋರಣೆ ತೋರುತ್ತಾರೆ. ಇನ್ನು ತಿರುಕ್ಕುರಳಿನಲ್ಲಿಯೂ ಹೆಣ್ಣಾದವಳು ಮನೆಗಷ್ಟೇ ಶೋಭೆ ಮತ್ತು ಅವಳ ಬದ್ಧತೆ ಅವಳ ಸಂಸಾರವನ್ನು ಕಾಪಾಡುವುದು ಎಂದೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅವರ ಕಾಲಘಟ್ಟದ ಅಗತ್ಯವೇ ಅವರಿಗೆ ಹಾಗೆ ನುಡಿಸಿರುತ್ತದೆ. ಪುರುಷರು ವ್ಯಾಪಾರಕ್ಕೆ, ವ್ಯವಹಾರಕ್ಕೆ, ಯುದ್ಧಕ್ಕೆ, ಇನ್ನಿತರ ಕಾರ್ಯಗಳಿಗೆಂದು ಮರಳಿ ಬರುವ ಭರವಸೆಯೇ ಇಲ್ಲದಂತೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಮನೆಯಲ್ಲಿ ಹಿರಿಯರನ್ನು, ಮಕ್ಕಳನ್ನು, ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಗಳು ಇರುತ್ತಿದ್ದವು. ಆದರೆ ಅವು ಈಗ ನಮಗೆ ಪ್ರಸ್ತುತವಲ್ಲ. ಹಾಗೆಯೇ ಮನಸ್ಸಿನ ನಿಯಂತ್ರಣದ ಬಗ್ಗೆ, ಕೋಪವು ಉಂಟು ಮಾಡುವ ಕೆಡಕುಗಳ ಬಗ್ಗೆ ಹೇಳುವಂತಹ, ಆತ್ಮಾವಲೋಕನದ ಕುರಿತಾದ ಮಾತುಗಳು, ಅಲ್ಲಲ್ಲಿ ಒಂದಿಷ್ಟು ವ್ಯತ್ಯಾಸಗಳಿದ್ದರೂ, ಸಾಕಷ್ಟು ಅನ್ವಯವಾಗುವಂತವೇ ಆಗಿರುತ್ತವೆ. ಒಟ್ಟಾರೆ ಅವರೆಂತಹ ಮಹಾತ್ಮರೇ ಆಗಿರಲಿ, ಅವರೆಷ್ಟೇ ಜನಪ್ರಿಯರೇ ಆಗಿರಲಿ, ಅವರ ಮಾತುಗಳನ್ನು ಮತ್ತು ಅಭಿಪ್ರಾಯಗಳನ್ನು ತೆಗೆದುಕೊಳ್ಳುವಾಗ ಪ್ರಸ್ತುತ ಕಾಲದ ನಮ್ಮ ಬದುಕಿನಲ್ಲಿ, ನಾವಿರುವ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದನ್ನು ಗಮನಿಸುವಷ್ಟರ ಮಟ್ಟಿಗಿನ ಪ್ರಜ್ಞೆಯ ಅವಶ್ಯಕತೆಯಂತೂ ಇದ್ದೇ ಇರುತ್ತದೆ.

ತಿರುವಳ್ಳುವರ್ ದೇವರ ಹಿರಿಮೆಯನ್ನು ವೈಭವೀಕರಿಸುವುದನ್ನು ನೋಡಿದಾಗ ಮನುಷ್ಯನ ಅಹಂಕಾರವನ್ನು ಮಣಿಸಿ ವಿನಯ ವಿಧೇಯತೆಯನ್ನು ತೋರಲು ಪ್ರಯತ್ನಿಸುವಂತೆ ತೋರುತ್ತದೆ. ತಿರುಕ್ಕುರಳ್ ಕೂಡಾ ಸುಂದರವಾದ ಮತ್ತು ಮೌಲ್ಯಗಳಿಂದ ಕೂಡಿರುವ ಕೃತಿಯೇ. ನಮ್ಮ ಈಗಿನ ಮಣ್ಣಿನಲ್ಲಿ ಬಿತ್ತಬೇಕಾದ ಬೀಜಗಳನ್ನು ಗೌರವದಿಂದಲೇ ಆಯ್ದುಕೊಳ್ಳಬೇಕು.

“ಮನದಲ್ಲಿ ತೊರೆಯದವರು, ತೊರೆದವರ ಹಾಗೆ ವಂಚಿಸುತ”
“ಬಾಳುವವರು, ಇವರಿಗಿಂತಲು ಬೇರೆ ಕಟುಕರಿಲ್ಲ.”
ಇದು ಮನಸ್ಸಿನಲ್ಲಿ ವೈರಾಗ್ಯವಿಲ್ಲದೇ ಹೆಸರಿಗೆ ಸಂನ್ಯಾಸಿಗಳಾಗಿರುವವರನ್ನು ಕುರಿತು ಮಾಡುವ ಟೀಕೆ.
“ತನ್ನ ತಾನ್ ಕಾಪಾಡಿಕೊಳ್ಳುವರೆ ಮುನಿಸ ತಡಕೊಳಬೇಕು
ತಡೆಯದಿರೆ ನನ್ನನೆ ಕೊಲ್ಲುವುದು ಮುನಿಸು”
“ತನಗೆ ಅಹಿತ ಎಂಬುದನು ತಾನು ಅರಿತವನು
ಬೇರೆ ಪ್ರಾಣಿಗೆ ಅಹಿತ ಮಾಡುವುದದೆಂತೊ.”
“ನುಣ್ಣನೆಯ ಶಾಸ್ತ್ರಗಳ ಹಲವ ಕಲಿತರೂ ತನ್ನ
ಸಹಜದರಿವೇ ಮತ್ತೆ ಮಿಕ್ಕು ನಿಲ್ಲುವುದು.”
ತಿರುವಳ್ಳುವರ್ ಸಂತೆಯಲ್ಲಿ ತಾವು ನೇಯ್ದ ವಸ್ತ್ರವನ್ನು ಮಾರಲು ಹೋದಾಗ ಮದಿಸಿದ ಯುವಕನೊಬ್ಬ ಬೆಲೆ ಕೇಳುತ್ತಾನೆ. ಅವರು ಎರಡು ಪಣ ಎನ್ನುತ್ತಾರೆ. ಅವನು ವಸ್ತ್ರವನ್ನು ಅರ್ಧಕ್ಕೆ ಹರಿದು ಕೇಳುತ್ತಾನೆ. ಅವರು ಒಂದು ಪಣವೆನ್ನುತ್ತಾರೆ. ಅದನ್ನೂ ಹರಿದ ಮೇಲೆ ಅರ್ಧ ಪಣ ಎನ್ನುತ್ತಾರೆ. ಆ ಯುವಕನು ವಸ್ತ್ರವನ್ನು ಸಂಪೂರ್ಣ ಹರಿದು ಚೂರು ಚೂರು ಮಾಡಿದ ಮೇಲೆ ಇದಕ್ಕೆ ಬೆಲೆ ಇಲ್ಲ. ನೀನೇ ತೆಗೆದಿಕೋ ಎನ್ನುತ್ತಾರೆ ತಿರುವಳ್ಳುವರ್. ನಿಮಗೇಕೆ ಕೋಪ ಬರಲಿಲ್ಲ ಎಂದು ಯುವಕ ಕೇಳಿದಾಗ ‘ತಾಳ್ಮೆ ಮತ್ತು ಕ್ಷಮೆಯ ಪಾಠ ನಿನಗೆ ಈಗ ಸಿಕ್ಕಿದೆ. ಅದರ ಮುಂದೆ ಈ ವಸ್ತ್ರದ ಬೆಲೆ ಏನು’ ಎಂದರಂತೆ. ಆತನಿಗೆ ತನ್ನ ಕೃತ್ಯದ ಬಗ್ಗೆ ನಾಚಿಕೆ ಎನಿಸಿ ಕ್ಷಮೆ ಕೇಳಿದನಂತೆ.

ಆಯ್ದಾದುಕೊಂಡಂತೆ ಹಲವು ಮುತ್ತುಗಳು ತಿರುಕ್ಕುರಳ್ಳಿನ ಸಾಗರದಲ್ಲಿ ಸಿಕ್ಕೇ ಸಿಗುವವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...