Homeಮುಖಪುಟಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

ಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

- Advertisement -
- Advertisement -

ದಿನನಿತ್ಯದ ಊಟದ ಅಗತ್ಯವಿರುವಂತೆಯೇ ದಿನನಿತ್ಯದ ನ್ಯಾಯವೂ ಅಗತ್ಯ ಮತ್ತು ಅದು ದಿನದ ಕೆಲವು ಹೊತ್ತು ಕೂಡಾ ಅಗತ್ಯ ಎಂದು ನಾಟಕಕಾರ ಬರ್ಟೋಲ್ಡ್ ಬ್ರೆಷ್ಟ್ (ಬ್ರೆಕ್ಟ್- Bertolt Brecht) ಹೇಳಿದ್ದಾನೆ. ಸುಪ್ರೀಂಕೋರ್ಟ್ ಈ ವಿಷಯವನ್ನು ನೆನಪಿಡದಿದ್ದಲ್ಲಿ ಜಾರ್ಜ್ ಓರ್ವೆಲ್‌ನ ದಬ್ಬಾಳಿಕೆಯ ಪ್ರಪಂಚವು ಸುಲಭದಲ್ಲಿ ನಿಜವಾಗಬಹುದು.

ಎ.ಪಿ. ಶಾ (ದಿಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಧೀಶರು)

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನಾವು ಉದಾಸೀನದಿಂದ ಕಾಣುತ್ತಿರುವ ಅನೇಕ ಸ್ವಾತಂತ್ರ್ಯಗಳು ಅಭದ್ರ ನೆಲದ ಮೇಲೆ ನಿಂತಿವೆ ಎಂದು ಇತ್ತೀಚಿನ ಹಲವಾರು ಘಟನೆಗಳು ಸೂಚಿಸುತ್ತವೆ. ಸುಪ್ರೀಂಕೋರ್ಟ್ ನಿಜವಾಗಿಯೂ ನಮ್ಮ ಹಕ್ಕುಗಳನ್ನು ರಕ್ಷಿಸಲು ಸಮರ್ಥವೇ ಇಲ್ಲವೇ ಎಂದು ನಾವು ಸಂಶಯಪಡುವಂತೆ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಸುಪ್ರೀಂಕೋರ್ಟಿನ ಆದ್ಯತೆಗಳು ಪರಿಹಾರ ಕಾಣಬೇಕಾದ ವಿಷಯಗಳಿಗೆ ಸರಿಹೊಂದುವಂತೆಯೂ ಕಾಣುತ್ತಿಲ್ಲ. ಉದಾಹರಣೆಗೆ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಗೆ ಸಂಬಂಧಪಟ್ಟ ಪ್ರಕರಣಗಳು, 6,000 ಕೋಟಿ ರೂ.ಗಳನ್ನು ಸಂಗ್ರಹಿಸಲಾದ ಚುನಾವಣಾ ಬಾಂಡ್‌ಗಳ ಪ್ರಕರಣಗಳು ಯಾವುದೇ ಪ್ರಜಾಪ್ರಭುತ್ವವಾದಿ ಸಂಸ್ಥೆಗೆ ಕಾಳಜಿಯ ವಿಷಯವಾಗಿರಬೇಕಿತ್ತು.

1952ರಷ್ಟು ಹಿಂದೆಯೇ ಮದ್ರಾಸ್ ಸರಕಾರ ವಿರುದ್ಧ ವಿ.ಜಿ. ರಾವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನನ್ನು “ನಾಗರಿಕರ ಮೂಲಭೂತ ಹಕ್ಕುಗಳ ಸದಾ ಜಾಗೃತ (qui vive) ಕಾವಲುಗಾರ” ಎಂದು ಪರಿಗಣಿಸಿತ್ತು. ಆದರೆ, ಇಂದು ಈ ಕಾವಲುಗಾರ ಜಾಗೃತವಾಗಿರುವುದು ಹೌದೆ? ಆದುದರಿಂದಲೇ, ಕೇವಲ ಈಗಿನ ಕೋವಿಡ್- 19 ಪಿಡುಡು ಮಾತ್ರವಲ್ಲ, ಅದಕ್ಕಿಂತ ಸ್ವಲ್ಪ ಹಿಂದಿನ ಬಿಕ್ಕಟ್ಟುಗಳಲ್ಲಿ ಸುಪ್ರೀಂಕೋರ್ಟಿನ ಕಾರ್ಯಾಚರಣೆಯ ಕುರಿತು ಗಮನಹರಿಸಲು ನಾನು ನಿರ್ಧರಿಸಿದೆ.

“ಯುದ್ಧದ ಸಮಯದಲ್ಲಿ ಕಾನೂನು ಮೌನವಾಗುತ್ತದೆ (Inter arma enim silent lēgēs) ಎಂಬ ಪ್ರಖ್ಯಾತ ಮಾತುಗಳನ್ನು ರೋಮನ್ ಮುತ್ಸದ್ಧಿ, ತತ್ವಶಾಸ್ತ್ರಜ್ಞ ಸಿಸೆರೊ (Cicero) ಹೇಳಿದ್ದನೆಂದು ನಂಬಲಾಗಿದೆ. ಆದರೆ, ಈ ಹೇಳಿಕೆಯನ್ನು- ಕನಿಷ್ಟ ಆಧುನಿಕ ಕಾಲದಲ್ಲಾದರೂ- ಮತ್ತೆ ಮತ್ತೆ ತಿರಸ್ಕರಿಸಲಾಗಿದೆ. ಇವುಗಳಲ್ಲಿ “ಶಸ್ತ್ರಗಳ ತಾಕಲಾಟದ ನಡುವೆ ಕಾನೂನುಗಳು ಮೌನವಾಗಿಲ್ಲ” ಎಂಬ ಬ್ರಿಟನ್‌ನ ಲಾರ್ಡ್ ಅಟ್ಕಿನ್ ಹೇಳಿಕೆ ಹೆಚ್ಚು ಪರಿಚಿತ.

ದಶಕಗಳ ನಂತರ ಎಡಿಎಂ ಜಬ್ಬಲ್ಪುರ್ ಪ್ರಕರಣದ ತನ್ನ ಸ್ಮರಣಾರ್ಹ ಬಿನ್ನಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಇದೇ ಭಾವನೆಯನ್ನು ನಮಗೆ ಮತ್ತೊಮ್ಮೆ ನೆನಪಿಸಿದ್ದಾರೆ. “ಸರಕಾರದ ಉದ್ದೇಶಗಳು ಉದಾರವಾದಿಯಾಗಿದ್ದಾಗ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಹೆಚ್ಚು ಎಚ್ಚರದಲ್ಲಿರಬೇಕು ಎಂದು ಅನುಭವವವು ನಮಗೆ ಕಲಿಸಬೇಕಾಗಿದೆ…..ಸ್ವಾತಂತ್ರ್ಯಕ್ಕೆ ಅತೀದೊಡ್ಡ ಅಪಾಯವಿರುವುದು ಕಾನೂನಿನ ಆಡಳಿತದ ಬಗ್ಗೆ ಗೌರವವಿಲ್ಲದ ಅತ್ಯುತ್ಸಾಹದ ವ್ಯಕ್ತಿಗಳು- ಅವರ ಉದ್ದೇಶವು ಎಷ್ಟೇ ಒಳ್ಳೆಯದಾಗಿದ್ದರೂ ಕೂಡಾ- ಕಪಟದಿಂದ ಅದನ್ನು ಆಕ್ರಮಿಸಿಕೊಳ್ಳುವುದು” ಎಂದು ಅವರು ಹೇಳಿದ್ದಾರೆ. ವಕೀಲ ಉಪೇಂದ್ರ ಬಕ್ಷಿ ಅವರೂ ಈ ಮಾತುಗಳನ್ನು ಪ್ರತಿಧ್ವನಿಸುತ್ತಾರೆ. ಸಿಸೆರೋನ ಮಾತುಗಳನ್ನು ನಾವು ಒಕ್ಕೊರಲಿನಿಂದ ಇಂದು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಇವೆಲ್ಲವೂ ಈಗ ಏಕೆ ಪ್ರಸ್ತುತ? ನಾವೀಗ ಯುದ್ಧದಲ್ಲಿ ಇಲ್ಲದೇ ಇರಬಹುದು ಆದರೆ, ಹಿಂದೆಂದೂ ಕಾಣದಷ್ಟು ದೊಡ್ಡ ತುರ್ತು ಸ್ಥಿತಿಯಲ್ಲಿ ಇದ್ದೇವೆ. ಇಂತಹಾ ಸಮಯದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯಪ್ರವೇಶ ಅಥವಾ ಮೇಲುಸ್ತುವಾರಿ ಇಲ್ಲದೆ ಕಾರ್ಯಾಂಗವು ಎಷ್ಟರ ಮಟ್ಟಿನ ಅನಿರ್ಬಂಧಿತ ಅಧಿಕಾರವನ್ನು ಹೊಂದಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜಕೀಯ ಮತ್ತು ನೀತಿ ನಿರೂಪಕರ ವಲಯದಲ್ಲಿ ಮಾತ್ರವಲ್ಲ, ಕಾನೂನು ವಲಯದಲ್ಲಿಯೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಕ್ರಿಯವಾಗಿರುವ ವಕೀಲರ ನಡುವೆಯಂತೂ ಇದು ಎರಡು ಧ್ರುವಗಳಷ್ಟು ತದ್ವಿರುದ್ಧವಾದ ಅಭಿಪ್ರಾಯಗಳಿಗೆ ಕಾರಣವಾಗಿದೆ. ವಕೀಲ ದುಷ್ಯಂತ ದವೆ ಹೇಳುತ್ತಾರೆ- “ಕಾರ್ಯಾಂಗ ಮಾತ್ರ ಅದರ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಸಂಸತ್ತು ವಿರಾಮದಲ್ಲಿದೆ. ನ್ಯಾಯಾಂಗವು ಕೊಮಾದಲ್ಲಿದೆ”. “ಕೋಟ್ಯಂತರ ಜನರ ಪ್ರಸ್ತುತ ಸಂಕಷ್ಟಗಳ ಬಗ್ಗೆ ಸಂಸತ್ತು ಮತ್ತು ನ್ಯಾಯಾಂಗ ಏಕೆ ಸಂಪೂರ್ಣ ಮೌನವಹಿಸಿವೆ?” ಎಂದವರು ಕೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹರೀಶ್ ಸಾಳ್ವೆ ಅವರು- ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಸ್ಪಕ್ಷಪಾತದ ಆಡಳಿತದಲ್ಲಿ ಕಾರ್ಯಾಂಗದ ವಿವೇಚನೆಯು ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಒಳಪಟ್ಟಿರಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ.

ದವೆ ಮತ್ತು ಸಾಳ್ವೆ ಅವರಿಬ್ಬರೂ ನೇರವಾಗಿ ಯಾವುದೇ ಪ್ರಕರಣವನ್ನು ಉಲ್ಲೇಖಿಸಿಲ್ಲ. ಆದರೆ, ಅವರಿಬ್ಬರೂ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸಲ್ಲಿಸಲಾದ ಸುಪ್ರೀಂಕೋರ್ಟ್ ಪ್ರಕರಣಗಳನ್ನು ಉಲ್ಲೇಖಿಸುತ್ತಿದ್ದಾರೆಂದು ನಾವು ಊಹಿಸಬಹುದು. ನಾನು ಈ ಅರ್ಜಿಗಳು ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಅನಗತ್ಯವಾಗಿ ಇಸ್ಲಾಮೋಫೋಬಿಕ್ ತಿರುವನ್ನು ಪಡೆದ ಹಿನ್ನೆಲೆಯಲ್ಲಿ ನಾನಿಲ್ಲಿ ಚರ್ಚಿಸುತ್ತೇನೆ.

ಮಾರ್ಚ್ 25, 2020ರಿಂದ ಆರಂಭಗೊಂಡ ಹಠಾತ್ ಲಾಕ್‌ಡೌನ್‌ನಿಂದಾಗಿ, ಕೆಲಸ ಹುಡುಕಿಕೊಂಡು ದೇಶದಾದ್ಯಂತ ಪ್ರಯಾಣಬೆಳೆಸಿದ್ದ ಲಕ್ಷಾಂತರ, ಬಹುಶಃ ಕೋಟ್ಯಂತರ ವಲಸೆ ಕಾರ್ಮಿಕರು ಜೀವನೋಪಾಯ, ಆದಾಯ, ಭದ್ರತೆ ಮತ್ತು ಗೌರವ ಎಲ್ಲವನ್ನೂ ಕಳೆದುಕೊಂಡರು. ಇವೆಲ್ಲವೂ ಕೇವಲ ಒಂದು ತಿಂಗಳ ಒಳಗಾಗಿ ನಡೆಯಿತು. ತಾವು ಅನಿರ್ದಿಷ್ಟಾವಧಿಗೆ ಯಾವುದೇ ಆಹಾರ, ಆಶ್ರಯ, ಸಾರಿಗೆ ಇಲ್ಲದೇ ಉಪವಾಸ ಕಳೆಯಬೇಕಾಗಬಹುದು ಎಂದು ಅವರಲ್ಲಿ ಬಹುತೇಕರು ಊಹಿಸಿಯೇ ಇರಲಾರರು.

ಇವೆಲ್ಲವೂ ಎಪ್ರಿಲ್ 1ರಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಒಂದು ಪ್ರಮುಖ ಪ್ರಶ್ನೆಯಾಯಿತು. ವಲಸೆ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಈ ಅರ್ಜಿ ಕೋರಿತ್ತು.  ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆಯ ಅನ್ವಯ ಹೇರಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೂಲಕ ಸಂವಿಧಾನದ ವಿಧಿ 21ರಲ್ಲಿ ಖಾತರಿಪಡಿಸಲಾದ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಈ ಅರ್ಜಿಯಲ್ಲಿ ವಾದಿಸಲಾಗಿತ್ತು.

ಆದರೆ, ವಿಚಾರಣೆಯ ವೇಳೆಯಲ್ಲಿ ಸುಪ್ರೀಂಕೋರ್ಟ್ ಹೇಳಿಕೆಯು ವಿಶೇಷವಾಗಿ ನಿರಾಶಾದಾಯಕವಾಗಿತ್ತು. “ಮುಂದಿನ ಕೆಲವು ಕಾಲ ಮಧ್ಯಪ್ರವೇಶ ಮಾಡಲು” ತನಗೆ ಮನಸ್ಸಿಲ್ಲ ಎಂದು ಅದು ಹೇಳಿತು. ಇದು ಸರಕಾರದ ಧೋರಣೆಗೆ ಸಂಬಂಧಪಟ್ಟ ವಿಷಯವಾಗಿದ್ದು, ನ್ಯಾಯಾಲಯವು ಅತಿಕ್ರಮಣ ಮಾಡಲು ಬಯಸುವುದಿಲ್ಲ ಎಂದು ಕೂಡಾ ಹೇಳಿತು. ಅದು ಕೇಳಿದ ಇನ್ನೊಂದು ಪ್ರಶ್ನೆಯೆಂದರೆ, “ಸರಕಾರವೇ ಊಟಕೊಡುತ್ತಿರುವಾಗ, ವೇತನದ ಅಗತ್ಯವೇನು?” (ಸರಕಾರದ ಊಟದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ!)

ಸಾಂವಿಧಾನಿಕ ವಿದ್ವಾಂಸ ಗೌತಮ್ ಭಾಟಿಯಾ ಅವರು ಹೇಳುವಂತೆ, ಸರಕಾರದ ಕಾರ್ಯಾಚರಣೆಯು ವಲಸೆ ಕಾರ್ಮಿಕರ ಜೀವನೋಪಾಯ ನಷ್ಟಕ್ಕೆ ನೇರ ಹೊಣೆ. ಲಾಕ್‌ಡೌನ್ ಎಲ್ಲಾ ಸಂಪನ್ಮೂಲ ಮತ್ತು ಸಂಚಾರಕ್ಕೆ ತಡೆಯೊಡ್ಡಿತು. ಭಾರತದಾದ್ಯಂತ ಸುಮಾರು ನಾಲ್ಕು ಕೋಟಿಗಳಷ್ಟಿರುವ ವಲಸೆ ಕಾರ್ಮಿಕರು- ಮೊದಲಾಗಿ ಮತ್ತು ಅತ್ಯಂತ ಹೆಚ್ಚು ಬಾಧಿತರು. ಲಾಕ್‌ಡೌನ್ ಒಂದು ಧೋರಣಾತ್ಮಕ ನಿರ್ಧಾರವಾಗಿರಬಹುದು. ಆದರೆ, ಈ ಧೋರಣಾತ್ಮಕ ನಿರ್ಧಾರವು ಸಂವಿಧಾನದ ವಿಧಿ 21ರಲ್ಲಿ ಪ್ರತಿಷ್ಟಾಪಿಸಲಾಗಿರುವ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ವ್ಯಾವಹಾರಿಕವಾಗಿ ನೋಡಿದರೆ, ಸುಪ್ರೀಂಕೋರ್ಟ್ ಸರಕಾರದ ಕಾರ್ಯವನ್ನು ಪರಿಶೀಲಿಸಿ ಸಾಂವಿಧಾನಿಕ ಮಾನದಂಡದೊಂದಿಗೆ ತುಲನೆ ಮಾಡಲು ಕರ್ತವ್ಯಬದ್ಧವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...