Homeಮುಖಪುಟಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

ಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

- Advertisement -
- Advertisement -

ದಿನನಿತ್ಯದ ಊಟದ ಅಗತ್ಯವಿರುವಂತೆಯೇ ದಿನನಿತ್ಯದ ನ್ಯಾಯವೂ ಅಗತ್ಯ ಮತ್ತು ಅದು ದಿನದ ಕೆಲವು ಹೊತ್ತು ಕೂಡಾ ಅಗತ್ಯ ಎಂದು ನಾಟಕಕಾರ ಬರ್ಟೋಲ್ಡ್ ಬ್ರೆಷ್ಟ್ (ಬ್ರೆಕ್ಟ್- Bertolt Brecht) ಹೇಳಿದ್ದಾನೆ. ಸುಪ್ರೀಂಕೋರ್ಟ್ ಈ ವಿಷಯವನ್ನು ನೆನಪಿಡದಿದ್ದಲ್ಲಿ ಜಾರ್ಜ್ ಓರ್ವೆಲ್‌ನ ದಬ್ಬಾಳಿಕೆಯ ಪ್ರಪಂಚವು ಸುಲಭದಲ್ಲಿ ನಿಜವಾಗಬಹುದು.

ಎ.ಪಿ. ಶಾ (ದಿಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಧೀಶರು)

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನಾವು ಉದಾಸೀನದಿಂದ ಕಾಣುತ್ತಿರುವ ಅನೇಕ ಸ್ವಾತಂತ್ರ್ಯಗಳು ಅಭದ್ರ ನೆಲದ ಮೇಲೆ ನಿಂತಿವೆ ಎಂದು ಇತ್ತೀಚಿನ ಹಲವಾರು ಘಟನೆಗಳು ಸೂಚಿಸುತ್ತವೆ. ಸುಪ್ರೀಂಕೋರ್ಟ್ ನಿಜವಾಗಿಯೂ ನಮ್ಮ ಹಕ್ಕುಗಳನ್ನು ರಕ್ಷಿಸಲು ಸಮರ್ಥವೇ ಇಲ್ಲವೇ ಎಂದು ನಾವು ಸಂಶಯಪಡುವಂತೆ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಸುಪ್ರೀಂಕೋರ್ಟಿನ ಆದ್ಯತೆಗಳು ಪರಿಹಾರ ಕಾಣಬೇಕಾದ ವಿಷಯಗಳಿಗೆ ಸರಿಹೊಂದುವಂತೆಯೂ ಕಾಣುತ್ತಿಲ್ಲ. ಉದಾಹರಣೆಗೆ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಗೆ ಸಂಬಂಧಪಟ್ಟ ಪ್ರಕರಣಗಳು, 6,000 ಕೋಟಿ ರೂ.ಗಳನ್ನು ಸಂಗ್ರಹಿಸಲಾದ ಚುನಾವಣಾ ಬಾಂಡ್‌ಗಳ ಪ್ರಕರಣಗಳು ಯಾವುದೇ ಪ್ರಜಾಪ್ರಭುತ್ವವಾದಿ ಸಂಸ್ಥೆಗೆ ಕಾಳಜಿಯ ವಿಷಯವಾಗಿರಬೇಕಿತ್ತು.

1952ರಷ್ಟು ಹಿಂದೆಯೇ ಮದ್ರಾಸ್ ಸರಕಾರ ವಿರುದ್ಧ ವಿ.ಜಿ. ರಾವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನನ್ನು “ನಾಗರಿಕರ ಮೂಲಭೂತ ಹಕ್ಕುಗಳ ಸದಾ ಜಾಗೃತ (qui vive) ಕಾವಲುಗಾರ” ಎಂದು ಪರಿಗಣಿಸಿತ್ತು. ಆದರೆ, ಇಂದು ಈ ಕಾವಲುಗಾರ ಜಾಗೃತವಾಗಿರುವುದು ಹೌದೆ? ಆದುದರಿಂದಲೇ, ಕೇವಲ ಈಗಿನ ಕೋವಿಡ್- 19 ಪಿಡುಡು ಮಾತ್ರವಲ್ಲ, ಅದಕ್ಕಿಂತ ಸ್ವಲ್ಪ ಹಿಂದಿನ ಬಿಕ್ಕಟ್ಟುಗಳಲ್ಲಿ ಸುಪ್ರೀಂಕೋರ್ಟಿನ ಕಾರ್ಯಾಚರಣೆಯ ಕುರಿತು ಗಮನಹರಿಸಲು ನಾನು ನಿರ್ಧರಿಸಿದೆ.

“ಯುದ್ಧದ ಸಮಯದಲ್ಲಿ ಕಾನೂನು ಮೌನವಾಗುತ್ತದೆ (Inter arma enim silent lēgēs) ಎಂಬ ಪ್ರಖ್ಯಾತ ಮಾತುಗಳನ್ನು ರೋಮನ್ ಮುತ್ಸದ್ಧಿ, ತತ್ವಶಾಸ್ತ್ರಜ್ಞ ಸಿಸೆರೊ (Cicero) ಹೇಳಿದ್ದನೆಂದು ನಂಬಲಾಗಿದೆ. ಆದರೆ, ಈ ಹೇಳಿಕೆಯನ್ನು- ಕನಿಷ್ಟ ಆಧುನಿಕ ಕಾಲದಲ್ಲಾದರೂ- ಮತ್ತೆ ಮತ್ತೆ ತಿರಸ್ಕರಿಸಲಾಗಿದೆ. ಇವುಗಳಲ್ಲಿ “ಶಸ್ತ್ರಗಳ ತಾಕಲಾಟದ ನಡುವೆ ಕಾನೂನುಗಳು ಮೌನವಾಗಿಲ್ಲ” ಎಂಬ ಬ್ರಿಟನ್‌ನ ಲಾರ್ಡ್ ಅಟ್ಕಿನ್ ಹೇಳಿಕೆ ಹೆಚ್ಚು ಪರಿಚಿತ.

ದಶಕಗಳ ನಂತರ ಎಡಿಎಂ ಜಬ್ಬಲ್ಪುರ್ ಪ್ರಕರಣದ ತನ್ನ ಸ್ಮರಣಾರ್ಹ ಬಿನ್ನಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಇದೇ ಭಾವನೆಯನ್ನು ನಮಗೆ ಮತ್ತೊಮ್ಮೆ ನೆನಪಿಸಿದ್ದಾರೆ. “ಸರಕಾರದ ಉದ್ದೇಶಗಳು ಉದಾರವಾದಿಯಾಗಿದ್ದಾಗ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಹೆಚ್ಚು ಎಚ್ಚರದಲ್ಲಿರಬೇಕು ಎಂದು ಅನುಭವವವು ನಮಗೆ ಕಲಿಸಬೇಕಾಗಿದೆ…..ಸ್ವಾತಂತ್ರ್ಯಕ್ಕೆ ಅತೀದೊಡ್ಡ ಅಪಾಯವಿರುವುದು ಕಾನೂನಿನ ಆಡಳಿತದ ಬಗ್ಗೆ ಗೌರವವಿಲ್ಲದ ಅತ್ಯುತ್ಸಾಹದ ವ್ಯಕ್ತಿಗಳು- ಅವರ ಉದ್ದೇಶವು ಎಷ್ಟೇ ಒಳ್ಳೆಯದಾಗಿದ್ದರೂ ಕೂಡಾ- ಕಪಟದಿಂದ ಅದನ್ನು ಆಕ್ರಮಿಸಿಕೊಳ್ಳುವುದು” ಎಂದು ಅವರು ಹೇಳಿದ್ದಾರೆ. ವಕೀಲ ಉಪೇಂದ್ರ ಬಕ್ಷಿ ಅವರೂ ಈ ಮಾತುಗಳನ್ನು ಪ್ರತಿಧ್ವನಿಸುತ್ತಾರೆ. ಸಿಸೆರೋನ ಮಾತುಗಳನ್ನು ನಾವು ಒಕ್ಕೊರಲಿನಿಂದ ಇಂದು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಇವೆಲ್ಲವೂ ಈಗ ಏಕೆ ಪ್ರಸ್ತುತ? ನಾವೀಗ ಯುದ್ಧದಲ್ಲಿ ಇಲ್ಲದೇ ಇರಬಹುದು ಆದರೆ, ಹಿಂದೆಂದೂ ಕಾಣದಷ್ಟು ದೊಡ್ಡ ತುರ್ತು ಸ್ಥಿತಿಯಲ್ಲಿ ಇದ್ದೇವೆ. ಇಂತಹಾ ಸಮಯದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯಪ್ರವೇಶ ಅಥವಾ ಮೇಲುಸ್ತುವಾರಿ ಇಲ್ಲದೆ ಕಾರ್ಯಾಂಗವು ಎಷ್ಟರ ಮಟ್ಟಿನ ಅನಿರ್ಬಂಧಿತ ಅಧಿಕಾರವನ್ನು ಹೊಂದಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜಕೀಯ ಮತ್ತು ನೀತಿ ನಿರೂಪಕರ ವಲಯದಲ್ಲಿ ಮಾತ್ರವಲ್ಲ, ಕಾನೂನು ವಲಯದಲ್ಲಿಯೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಕ್ರಿಯವಾಗಿರುವ ವಕೀಲರ ನಡುವೆಯಂತೂ ಇದು ಎರಡು ಧ್ರುವಗಳಷ್ಟು ತದ್ವಿರುದ್ಧವಾದ ಅಭಿಪ್ರಾಯಗಳಿಗೆ ಕಾರಣವಾಗಿದೆ. ವಕೀಲ ದುಷ್ಯಂತ ದವೆ ಹೇಳುತ್ತಾರೆ- “ಕಾರ್ಯಾಂಗ ಮಾತ್ರ ಅದರ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಸಂಸತ್ತು ವಿರಾಮದಲ್ಲಿದೆ. ನ್ಯಾಯಾಂಗವು ಕೊಮಾದಲ್ಲಿದೆ”. “ಕೋಟ್ಯಂತರ ಜನರ ಪ್ರಸ್ತುತ ಸಂಕಷ್ಟಗಳ ಬಗ್ಗೆ ಸಂಸತ್ತು ಮತ್ತು ನ್ಯಾಯಾಂಗ ಏಕೆ ಸಂಪೂರ್ಣ ಮೌನವಹಿಸಿವೆ?” ಎಂದವರು ಕೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹರೀಶ್ ಸಾಳ್ವೆ ಅವರು- ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಸ್ಪಕ್ಷಪಾತದ ಆಡಳಿತದಲ್ಲಿ ಕಾರ್ಯಾಂಗದ ವಿವೇಚನೆಯು ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಒಳಪಟ್ಟಿರಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ.

ದವೆ ಮತ್ತು ಸಾಳ್ವೆ ಅವರಿಬ್ಬರೂ ನೇರವಾಗಿ ಯಾವುದೇ ಪ್ರಕರಣವನ್ನು ಉಲ್ಲೇಖಿಸಿಲ್ಲ. ಆದರೆ, ಅವರಿಬ್ಬರೂ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸಲ್ಲಿಸಲಾದ ಸುಪ್ರೀಂಕೋರ್ಟ್ ಪ್ರಕರಣಗಳನ್ನು ಉಲ್ಲೇಖಿಸುತ್ತಿದ್ದಾರೆಂದು ನಾವು ಊಹಿಸಬಹುದು. ನಾನು ಈ ಅರ್ಜಿಗಳು ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಅನಗತ್ಯವಾಗಿ ಇಸ್ಲಾಮೋಫೋಬಿಕ್ ತಿರುವನ್ನು ಪಡೆದ ಹಿನ್ನೆಲೆಯಲ್ಲಿ ನಾನಿಲ್ಲಿ ಚರ್ಚಿಸುತ್ತೇನೆ.

ಮಾರ್ಚ್ 25, 2020ರಿಂದ ಆರಂಭಗೊಂಡ ಹಠಾತ್ ಲಾಕ್‌ಡೌನ್‌ನಿಂದಾಗಿ, ಕೆಲಸ ಹುಡುಕಿಕೊಂಡು ದೇಶದಾದ್ಯಂತ ಪ್ರಯಾಣಬೆಳೆಸಿದ್ದ ಲಕ್ಷಾಂತರ, ಬಹುಶಃ ಕೋಟ್ಯಂತರ ವಲಸೆ ಕಾರ್ಮಿಕರು ಜೀವನೋಪಾಯ, ಆದಾಯ, ಭದ್ರತೆ ಮತ್ತು ಗೌರವ ಎಲ್ಲವನ್ನೂ ಕಳೆದುಕೊಂಡರು. ಇವೆಲ್ಲವೂ ಕೇವಲ ಒಂದು ತಿಂಗಳ ಒಳಗಾಗಿ ನಡೆಯಿತು. ತಾವು ಅನಿರ್ದಿಷ್ಟಾವಧಿಗೆ ಯಾವುದೇ ಆಹಾರ, ಆಶ್ರಯ, ಸಾರಿಗೆ ಇಲ್ಲದೇ ಉಪವಾಸ ಕಳೆಯಬೇಕಾಗಬಹುದು ಎಂದು ಅವರಲ್ಲಿ ಬಹುತೇಕರು ಊಹಿಸಿಯೇ ಇರಲಾರರು.

ಇವೆಲ್ಲವೂ ಎಪ್ರಿಲ್ 1ರಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಒಂದು ಪ್ರಮುಖ ಪ್ರಶ್ನೆಯಾಯಿತು. ವಲಸೆ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಈ ಅರ್ಜಿ ಕೋರಿತ್ತು.  ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆಯ ಅನ್ವಯ ಹೇರಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೂಲಕ ಸಂವಿಧಾನದ ವಿಧಿ 21ರಲ್ಲಿ ಖಾತರಿಪಡಿಸಲಾದ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಈ ಅರ್ಜಿಯಲ್ಲಿ ವಾದಿಸಲಾಗಿತ್ತು.

ಆದರೆ, ವಿಚಾರಣೆಯ ವೇಳೆಯಲ್ಲಿ ಸುಪ್ರೀಂಕೋರ್ಟ್ ಹೇಳಿಕೆಯು ವಿಶೇಷವಾಗಿ ನಿರಾಶಾದಾಯಕವಾಗಿತ್ತು. “ಮುಂದಿನ ಕೆಲವು ಕಾಲ ಮಧ್ಯಪ್ರವೇಶ ಮಾಡಲು” ತನಗೆ ಮನಸ್ಸಿಲ್ಲ ಎಂದು ಅದು ಹೇಳಿತು. ಇದು ಸರಕಾರದ ಧೋರಣೆಗೆ ಸಂಬಂಧಪಟ್ಟ ವಿಷಯವಾಗಿದ್ದು, ನ್ಯಾಯಾಲಯವು ಅತಿಕ್ರಮಣ ಮಾಡಲು ಬಯಸುವುದಿಲ್ಲ ಎಂದು ಕೂಡಾ ಹೇಳಿತು. ಅದು ಕೇಳಿದ ಇನ್ನೊಂದು ಪ್ರಶ್ನೆಯೆಂದರೆ, “ಸರಕಾರವೇ ಊಟಕೊಡುತ್ತಿರುವಾಗ, ವೇತನದ ಅಗತ್ಯವೇನು?” (ಸರಕಾರದ ಊಟದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ!)

ಸಾಂವಿಧಾನಿಕ ವಿದ್ವಾಂಸ ಗೌತಮ್ ಭಾಟಿಯಾ ಅವರು ಹೇಳುವಂತೆ, ಸರಕಾರದ ಕಾರ್ಯಾಚರಣೆಯು ವಲಸೆ ಕಾರ್ಮಿಕರ ಜೀವನೋಪಾಯ ನಷ್ಟಕ್ಕೆ ನೇರ ಹೊಣೆ. ಲಾಕ್‌ಡೌನ್ ಎಲ್ಲಾ ಸಂಪನ್ಮೂಲ ಮತ್ತು ಸಂಚಾರಕ್ಕೆ ತಡೆಯೊಡ್ಡಿತು. ಭಾರತದಾದ್ಯಂತ ಸುಮಾರು ನಾಲ್ಕು ಕೋಟಿಗಳಷ್ಟಿರುವ ವಲಸೆ ಕಾರ್ಮಿಕರು- ಮೊದಲಾಗಿ ಮತ್ತು ಅತ್ಯಂತ ಹೆಚ್ಚು ಬಾಧಿತರು. ಲಾಕ್‌ಡೌನ್ ಒಂದು ಧೋರಣಾತ್ಮಕ ನಿರ್ಧಾರವಾಗಿರಬಹುದು. ಆದರೆ, ಈ ಧೋರಣಾತ್ಮಕ ನಿರ್ಧಾರವು ಸಂವಿಧಾನದ ವಿಧಿ 21ರಲ್ಲಿ ಪ್ರತಿಷ್ಟಾಪಿಸಲಾಗಿರುವ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ವ್ಯಾವಹಾರಿಕವಾಗಿ ನೋಡಿದರೆ, ಸುಪ್ರೀಂಕೋರ್ಟ್ ಸರಕಾರದ ಕಾರ್ಯವನ್ನು ಪರಿಶೀಲಿಸಿ ಸಾಂವಿಧಾನಿಕ ಮಾನದಂಡದೊಂದಿಗೆ ತುಲನೆ ಮಾಡಲು ಕರ್ತವ್ಯಬದ್ಧವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...