Homeಮುಖಪುಟಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

ಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

- Advertisement -
- Advertisement -

ದಿನನಿತ್ಯದ ಊಟದ ಅಗತ್ಯವಿರುವಂತೆಯೇ ದಿನನಿತ್ಯದ ನ್ಯಾಯವೂ ಅಗತ್ಯ ಮತ್ತು ಅದು ದಿನದ ಕೆಲವು ಹೊತ್ತು ಕೂಡಾ ಅಗತ್ಯ ಎಂದು ನಾಟಕಕಾರ ಬರ್ಟೋಲ್ಡ್ ಬ್ರೆಷ್ಟ್ (ಬ್ರೆಕ್ಟ್- Bertolt Brecht) ಹೇಳಿದ್ದಾನೆ. ಸುಪ್ರೀಂಕೋರ್ಟ್ ಈ ವಿಷಯವನ್ನು ನೆನಪಿಡದಿದ್ದಲ್ಲಿ ಜಾರ್ಜ್ ಓರ್ವೆಲ್‌ನ ದಬ್ಬಾಳಿಕೆಯ ಪ್ರಪಂಚವು ಸುಲಭದಲ್ಲಿ ನಿಜವಾಗಬಹುದು.

ಎ.ಪಿ. ಶಾ (ದಿಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಧೀಶರು)

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನಾವು ಉದಾಸೀನದಿಂದ ಕಾಣುತ್ತಿರುವ ಅನೇಕ ಸ್ವಾತಂತ್ರ್ಯಗಳು ಅಭದ್ರ ನೆಲದ ಮೇಲೆ ನಿಂತಿವೆ ಎಂದು ಇತ್ತೀಚಿನ ಹಲವಾರು ಘಟನೆಗಳು ಸೂಚಿಸುತ್ತವೆ. ಸುಪ್ರೀಂಕೋರ್ಟ್ ನಿಜವಾಗಿಯೂ ನಮ್ಮ ಹಕ್ಕುಗಳನ್ನು ರಕ್ಷಿಸಲು ಸಮರ್ಥವೇ ಇಲ್ಲವೇ ಎಂದು ನಾವು ಸಂಶಯಪಡುವಂತೆ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಸುಪ್ರೀಂಕೋರ್ಟಿನ ಆದ್ಯತೆಗಳು ಪರಿಹಾರ ಕಾಣಬೇಕಾದ ವಿಷಯಗಳಿಗೆ ಸರಿಹೊಂದುವಂತೆಯೂ ಕಾಣುತ್ತಿಲ್ಲ. ಉದಾಹರಣೆಗೆ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಗೆ ಸಂಬಂಧಪಟ್ಟ ಪ್ರಕರಣಗಳು, 6,000 ಕೋಟಿ ರೂ.ಗಳನ್ನು ಸಂಗ್ರಹಿಸಲಾದ ಚುನಾವಣಾ ಬಾಂಡ್‌ಗಳ ಪ್ರಕರಣಗಳು ಯಾವುದೇ ಪ್ರಜಾಪ್ರಭುತ್ವವಾದಿ ಸಂಸ್ಥೆಗೆ ಕಾಳಜಿಯ ವಿಷಯವಾಗಿರಬೇಕಿತ್ತು.

1952ರಷ್ಟು ಹಿಂದೆಯೇ ಮದ್ರಾಸ್ ಸರಕಾರ ವಿರುದ್ಧ ವಿ.ಜಿ. ರಾವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನನ್ನು “ನಾಗರಿಕರ ಮೂಲಭೂತ ಹಕ್ಕುಗಳ ಸದಾ ಜಾಗೃತ (qui vive) ಕಾವಲುಗಾರ” ಎಂದು ಪರಿಗಣಿಸಿತ್ತು. ಆದರೆ, ಇಂದು ಈ ಕಾವಲುಗಾರ ಜಾಗೃತವಾಗಿರುವುದು ಹೌದೆ? ಆದುದರಿಂದಲೇ, ಕೇವಲ ಈಗಿನ ಕೋವಿಡ್- 19 ಪಿಡುಡು ಮಾತ್ರವಲ್ಲ, ಅದಕ್ಕಿಂತ ಸ್ವಲ್ಪ ಹಿಂದಿನ ಬಿಕ್ಕಟ್ಟುಗಳಲ್ಲಿ ಸುಪ್ರೀಂಕೋರ್ಟಿನ ಕಾರ್ಯಾಚರಣೆಯ ಕುರಿತು ಗಮನಹರಿಸಲು ನಾನು ನಿರ್ಧರಿಸಿದೆ.

“ಯುದ್ಧದ ಸಮಯದಲ್ಲಿ ಕಾನೂನು ಮೌನವಾಗುತ್ತದೆ (Inter arma enim silent lēgēs) ಎಂಬ ಪ್ರಖ್ಯಾತ ಮಾತುಗಳನ್ನು ರೋಮನ್ ಮುತ್ಸದ್ಧಿ, ತತ್ವಶಾಸ್ತ್ರಜ್ಞ ಸಿಸೆರೊ (Cicero) ಹೇಳಿದ್ದನೆಂದು ನಂಬಲಾಗಿದೆ. ಆದರೆ, ಈ ಹೇಳಿಕೆಯನ್ನು- ಕನಿಷ್ಟ ಆಧುನಿಕ ಕಾಲದಲ್ಲಾದರೂ- ಮತ್ತೆ ಮತ್ತೆ ತಿರಸ್ಕರಿಸಲಾಗಿದೆ. ಇವುಗಳಲ್ಲಿ “ಶಸ್ತ್ರಗಳ ತಾಕಲಾಟದ ನಡುವೆ ಕಾನೂನುಗಳು ಮೌನವಾಗಿಲ್ಲ” ಎಂಬ ಬ್ರಿಟನ್‌ನ ಲಾರ್ಡ್ ಅಟ್ಕಿನ್ ಹೇಳಿಕೆ ಹೆಚ್ಚು ಪರಿಚಿತ.

ದಶಕಗಳ ನಂತರ ಎಡಿಎಂ ಜಬ್ಬಲ್ಪುರ್ ಪ್ರಕರಣದ ತನ್ನ ಸ್ಮರಣಾರ್ಹ ಬಿನ್ನಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಇದೇ ಭಾವನೆಯನ್ನು ನಮಗೆ ಮತ್ತೊಮ್ಮೆ ನೆನಪಿಸಿದ್ದಾರೆ. “ಸರಕಾರದ ಉದ್ದೇಶಗಳು ಉದಾರವಾದಿಯಾಗಿದ್ದಾಗ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಹೆಚ್ಚು ಎಚ್ಚರದಲ್ಲಿರಬೇಕು ಎಂದು ಅನುಭವವವು ನಮಗೆ ಕಲಿಸಬೇಕಾಗಿದೆ…..ಸ್ವಾತಂತ್ರ್ಯಕ್ಕೆ ಅತೀದೊಡ್ಡ ಅಪಾಯವಿರುವುದು ಕಾನೂನಿನ ಆಡಳಿತದ ಬಗ್ಗೆ ಗೌರವವಿಲ್ಲದ ಅತ್ಯುತ್ಸಾಹದ ವ್ಯಕ್ತಿಗಳು- ಅವರ ಉದ್ದೇಶವು ಎಷ್ಟೇ ಒಳ್ಳೆಯದಾಗಿದ್ದರೂ ಕೂಡಾ- ಕಪಟದಿಂದ ಅದನ್ನು ಆಕ್ರಮಿಸಿಕೊಳ್ಳುವುದು” ಎಂದು ಅವರು ಹೇಳಿದ್ದಾರೆ. ವಕೀಲ ಉಪೇಂದ್ರ ಬಕ್ಷಿ ಅವರೂ ಈ ಮಾತುಗಳನ್ನು ಪ್ರತಿಧ್ವನಿಸುತ್ತಾರೆ. ಸಿಸೆರೋನ ಮಾತುಗಳನ್ನು ನಾವು ಒಕ್ಕೊರಲಿನಿಂದ ಇಂದು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಇವೆಲ್ಲವೂ ಈಗ ಏಕೆ ಪ್ರಸ್ತುತ? ನಾವೀಗ ಯುದ್ಧದಲ್ಲಿ ಇಲ್ಲದೇ ಇರಬಹುದು ಆದರೆ, ಹಿಂದೆಂದೂ ಕಾಣದಷ್ಟು ದೊಡ್ಡ ತುರ್ತು ಸ್ಥಿತಿಯಲ್ಲಿ ಇದ್ದೇವೆ. ಇಂತಹಾ ಸಮಯದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯಪ್ರವೇಶ ಅಥವಾ ಮೇಲುಸ್ತುವಾರಿ ಇಲ್ಲದೆ ಕಾರ್ಯಾಂಗವು ಎಷ್ಟರ ಮಟ್ಟಿನ ಅನಿರ್ಬಂಧಿತ ಅಧಿಕಾರವನ್ನು ಹೊಂದಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜಕೀಯ ಮತ್ತು ನೀತಿ ನಿರೂಪಕರ ವಲಯದಲ್ಲಿ ಮಾತ್ರವಲ್ಲ, ಕಾನೂನು ವಲಯದಲ್ಲಿಯೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಕ್ರಿಯವಾಗಿರುವ ವಕೀಲರ ನಡುವೆಯಂತೂ ಇದು ಎರಡು ಧ್ರುವಗಳಷ್ಟು ತದ್ವಿರುದ್ಧವಾದ ಅಭಿಪ್ರಾಯಗಳಿಗೆ ಕಾರಣವಾಗಿದೆ. ವಕೀಲ ದುಷ್ಯಂತ ದವೆ ಹೇಳುತ್ತಾರೆ- “ಕಾರ್ಯಾಂಗ ಮಾತ್ರ ಅದರ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಸಂಸತ್ತು ವಿರಾಮದಲ್ಲಿದೆ. ನ್ಯಾಯಾಂಗವು ಕೊಮಾದಲ್ಲಿದೆ”. “ಕೋಟ್ಯಂತರ ಜನರ ಪ್ರಸ್ತುತ ಸಂಕಷ್ಟಗಳ ಬಗ್ಗೆ ಸಂಸತ್ತು ಮತ್ತು ನ್ಯಾಯಾಂಗ ಏಕೆ ಸಂಪೂರ್ಣ ಮೌನವಹಿಸಿವೆ?” ಎಂದವರು ಕೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹರೀಶ್ ಸಾಳ್ವೆ ಅವರು- ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಸ್ಪಕ್ಷಪಾತದ ಆಡಳಿತದಲ್ಲಿ ಕಾರ್ಯಾಂಗದ ವಿವೇಚನೆಯು ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಒಳಪಟ್ಟಿರಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ.

ದವೆ ಮತ್ತು ಸಾಳ್ವೆ ಅವರಿಬ್ಬರೂ ನೇರವಾಗಿ ಯಾವುದೇ ಪ್ರಕರಣವನ್ನು ಉಲ್ಲೇಖಿಸಿಲ್ಲ. ಆದರೆ, ಅವರಿಬ್ಬರೂ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸಲ್ಲಿಸಲಾದ ಸುಪ್ರೀಂಕೋರ್ಟ್ ಪ್ರಕರಣಗಳನ್ನು ಉಲ್ಲೇಖಿಸುತ್ತಿದ್ದಾರೆಂದು ನಾವು ಊಹಿಸಬಹುದು. ನಾನು ಈ ಅರ್ಜಿಗಳು ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಅನಗತ್ಯವಾಗಿ ಇಸ್ಲಾಮೋಫೋಬಿಕ್ ತಿರುವನ್ನು ಪಡೆದ ಹಿನ್ನೆಲೆಯಲ್ಲಿ ನಾನಿಲ್ಲಿ ಚರ್ಚಿಸುತ್ತೇನೆ.

ಮಾರ್ಚ್ 25, 2020ರಿಂದ ಆರಂಭಗೊಂಡ ಹಠಾತ್ ಲಾಕ್‌ಡೌನ್‌ನಿಂದಾಗಿ, ಕೆಲಸ ಹುಡುಕಿಕೊಂಡು ದೇಶದಾದ್ಯಂತ ಪ್ರಯಾಣಬೆಳೆಸಿದ್ದ ಲಕ್ಷಾಂತರ, ಬಹುಶಃ ಕೋಟ್ಯಂತರ ವಲಸೆ ಕಾರ್ಮಿಕರು ಜೀವನೋಪಾಯ, ಆದಾಯ, ಭದ್ರತೆ ಮತ್ತು ಗೌರವ ಎಲ್ಲವನ್ನೂ ಕಳೆದುಕೊಂಡರು. ಇವೆಲ್ಲವೂ ಕೇವಲ ಒಂದು ತಿಂಗಳ ಒಳಗಾಗಿ ನಡೆಯಿತು. ತಾವು ಅನಿರ್ದಿಷ್ಟಾವಧಿಗೆ ಯಾವುದೇ ಆಹಾರ, ಆಶ್ರಯ, ಸಾರಿಗೆ ಇಲ್ಲದೇ ಉಪವಾಸ ಕಳೆಯಬೇಕಾಗಬಹುದು ಎಂದು ಅವರಲ್ಲಿ ಬಹುತೇಕರು ಊಹಿಸಿಯೇ ಇರಲಾರರು.

ಇವೆಲ್ಲವೂ ಎಪ್ರಿಲ್ 1ರಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಒಂದು ಪ್ರಮುಖ ಪ್ರಶ್ನೆಯಾಯಿತು. ವಲಸೆ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಈ ಅರ್ಜಿ ಕೋರಿತ್ತು.  ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆಯ ಅನ್ವಯ ಹೇರಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೂಲಕ ಸಂವಿಧಾನದ ವಿಧಿ 21ರಲ್ಲಿ ಖಾತರಿಪಡಿಸಲಾದ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಈ ಅರ್ಜಿಯಲ್ಲಿ ವಾದಿಸಲಾಗಿತ್ತು.

ಆದರೆ, ವಿಚಾರಣೆಯ ವೇಳೆಯಲ್ಲಿ ಸುಪ್ರೀಂಕೋರ್ಟ್ ಹೇಳಿಕೆಯು ವಿಶೇಷವಾಗಿ ನಿರಾಶಾದಾಯಕವಾಗಿತ್ತು. “ಮುಂದಿನ ಕೆಲವು ಕಾಲ ಮಧ್ಯಪ್ರವೇಶ ಮಾಡಲು” ತನಗೆ ಮನಸ್ಸಿಲ್ಲ ಎಂದು ಅದು ಹೇಳಿತು. ಇದು ಸರಕಾರದ ಧೋರಣೆಗೆ ಸಂಬಂಧಪಟ್ಟ ವಿಷಯವಾಗಿದ್ದು, ನ್ಯಾಯಾಲಯವು ಅತಿಕ್ರಮಣ ಮಾಡಲು ಬಯಸುವುದಿಲ್ಲ ಎಂದು ಕೂಡಾ ಹೇಳಿತು. ಅದು ಕೇಳಿದ ಇನ್ನೊಂದು ಪ್ರಶ್ನೆಯೆಂದರೆ, “ಸರಕಾರವೇ ಊಟಕೊಡುತ್ತಿರುವಾಗ, ವೇತನದ ಅಗತ್ಯವೇನು?” (ಸರಕಾರದ ಊಟದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ!)

ಸಾಂವಿಧಾನಿಕ ವಿದ್ವಾಂಸ ಗೌತಮ್ ಭಾಟಿಯಾ ಅವರು ಹೇಳುವಂತೆ, ಸರಕಾರದ ಕಾರ್ಯಾಚರಣೆಯು ವಲಸೆ ಕಾರ್ಮಿಕರ ಜೀವನೋಪಾಯ ನಷ್ಟಕ್ಕೆ ನೇರ ಹೊಣೆ. ಲಾಕ್‌ಡೌನ್ ಎಲ್ಲಾ ಸಂಪನ್ಮೂಲ ಮತ್ತು ಸಂಚಾರಕ್ಕೆ ತಡೆಯೊಡ್ಡಿತು. ಭಾರತದಾದ್ಯಂತ ಸುಮಾರು ನಾಲ್ಕು ಕೋಟಿಗಳಷ್ಟಿರುವ ವಲಸೆ ಕಾರ್ಮಿಕರು- ಮೊದಲಾಗಿ ಮತ್ತು ಅತ್ಯಂತ ಹೆಚ್ಚು ಬಾಧಿತರು. ಲಾಕ್‌ಡೌನ್ ಒಂದು ಧೋರಣಾತ್ಮಕ ನಿರ್ಧಾರವಾಗಿರಬಹುದು. ಆದರೆ, ಈ ಧೋರಣಾತ್ಮಕ ನಿರ್ಧಾರವು ಸಂವಿಧಾನದ ವಿಧಿ 21ರಲ್ಲಿ ಪ್ರತಿಷ್ಟಾಪಿಸಲಾಗಿರುವ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ವ್ಯಾವಹಾರಿಕವಾಗಿ ನೋಡಿದರೆ, ಸುಪ್ರೀಂಕೋರ್ಟ್ ಸರಕಾರದ ಕಾರ್ಯವನ್ನು ಪರಿಶೀಲಿಸಿ ಸಾಂವಿಧಾನಿಕ ಮಾನದಂಡದೊಂದಿಗೆ ತುಲನೆ ಮಾಡಲು ಕರ್ತವ್ಯಬದ್ಧವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...