Homeಮುಖಪುಟವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

- Advertisement -
- Advertisement -

ನಿನ್ನೆ ಒಂದು ಧಾರುಣ ಘಟನೆ ಜರುಗಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಹೊರಟಿದ್ದ 16 ಜನ ವಲಸೆ ಕಾರ್ಮಿಕರು ವಿಶ್ರಾಂತಿಗಾಗಿ ರೈಲ್ವೆ ಹಳಿಯ ಮೇಲೆ ಮಲಗಿದ್ದಾಗ ರೈಲು ಹರಿದು ಎಲ್ಲರ ಪ್ರಾಣ ತೆಗೆಯಿತು. ಲಾಕ್‌ಡೌನ್‌ ಕಾರಣಕ್ಕೆ ರೈಲುಗಳಿಲ್ಲ ಎಂದು ತಿಳಿದು ಕಾಲ್ನಡಿಗೆಯಲ್ಲಿ ಹೊರಟಿದ್ದ ಅವರನ್ನು ಅದೇ ರೈಲು ಹರಿದು ಕೊಂದಿರುವುದು ದುರಾದೃಷ್ಟಕರ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಭುಗಿಲೆದ್ದಿವೆ. ಕೆಲವು ಜನರು ಅವರೇಕೆ ರೈಲು ಹಳಿಗಳ ಮೇಲೆ ಮಲಗಬೇಕಿತ್ತು? ಎಂಬ ಪ್ರಶ್ನೆಗೆ ಅವರು ನಡೆದು ಹೋಗಬೇಕಾದ ಪರಿಸ್ಥಿತಿ ಏಕೆ ಬಂತು ಎಂಬ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಅವರ ಬಳಿ ಉತ್ತರಗಳಿಲ್ಲ.

ಇನ್ನು ಇವರ ಸಾವು ಆಳುವ ಸರ್ಕಾರಗಳಿಗೆ ದೊಡ್ಡ ಪ್ರಮಾದ ಎನ್ನಿಸಲೇ ಇಲ್ಲ. ಅವರ ಜೀವಕ್ಕೆ ತಲಾ 5 ಲಕ್ಷ ಬೆಲೆ ಕಟ್ಟಿ ಕೈತೊಳೆದುಕೊಂಡಿವೆ. ಅವರ ಸಾವಿಗೆ ಮಮ್ಮಲ ಮರುಗಿದ ನಾವು ಕೂಡ ಒಂದೆರೆಡು ದಿನಗಳಲ್ಲಿ ಅವರನ್ನು ಮರೆತು ಮುಂದಕ್ಕೆ ಹೋಗುತ್ತೇವೆ. ಏಕೀಗೆ? ಅವರ ನೋವು ಆಳುವವರಿಗೆ ತಟ್ಟುವುದಿಲ್ಲ ಏಕೆ? ಈ ಕುರಿತು ಕನಿಷ್ಠ ಯೋಚಿಸಬೇಕಲ್ಲವೇ?

ಇದೊಂದೆ ಘಟನೆಯಲ್ಲ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ದೇಶದಲ್ಲಿರುವ ಕೋಟ್ಯಾಂತರ ವಲಸೆ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಅವರಿಗೆ ಸಮರ್ಪಕ ದಿನಸಿಗಳು, ಊಟ ಸಿಕ್ಕಿಲ್ಲ. ಸರಿ ತಮ್ಮ ಊರಿಗೆ ಹೋಗಲು ಸಾರಿಗೆ ಇಲ್ಲ. ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆ.

ಈ ಕುರಿತು ಯೋಚಿಸಿದಾಗ ನಮಗೆ ಕಾಡುವ ಒಂದು ಪದವೆಂದರೆ ಅದು ವಲಸಿಗ ಎಂಬುದಾಗಿದೆ. ವಲಸಿಗ ಎಂಬ ಪದದ ಅರ್ಥವೇ ನಮ್ಮವನಲ್ಲ ಎಂಬುದಾಗಿದೆ. ವಲಸೆ ಕಾರ್ಮಿಕರ ಈ ಪರಿಸ್ಥಿತಿಯನ್ನ ರಾಜ್ಯಶಾಸ್ತ್ರ ದೃಷ್ಟಿಯಿಂದ ಇಂದ ಅಧ್ಯಯನ ಮಾಡಿದರೆ ಇವರಿಗೆ ನಾವು stateless population ಎಂದು ಕರೆಯುತ್ತೇವೆ. ಅಂದರೆ ಈ ಕಾರ್ಮಿಕರು ನಮ್ಮದೇ ದೇಶದಲ್ಲಿ ಪರಕೀಯರಾಗಿ ಉಳಿದಿದ್ದಾರೆ.

ಈ ಕಾರ್ಮಿಕರು ನಮ್ಮ ದೇಶ ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದಾರೆ. ಇವರಿಲ್ಲದೇ ಅಭಿವೃದ್ದಿ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಡತನದ ಕಾರಣಕ್ಕಾಗಿ ಉದ್ಯೋಗ ಸಿಗದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಬಂದಿರುವ ಇವರು ತಮ್ಮ ರಾಜ್ಯಕ್ಕೂ ಬೇಡವಾಗಿರುತ್ತಾರೆ ಮತ್ತು ತಾವಿರುವ ರಾಜ್ಯದಲ್ಲಿಯೂ ಸಹ ಅನ್ಯರಾಗಿರುತ್ತಾರೆ.

ಇನ್ನು ಬಹುಮುಖ್ಯ ಕಾರಣ ಇವರ ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆಯಿದೆ. ಇವರುಗಳ ಮತದಾನದ ಗುರುತಿನ ಚೀಟಿ ತಮ್ಮ ಸ್ವಂತ ರಾಜ್ಯದಲ್ಲಿರುತ್ತದೆ. ಆದರೆ ದೂರದ ಇನ್ಯಾವುದೋ ರಾಜ್ಯದಲ್ಲಿ ಕೂಲಿ ಮಾಡಿಕೊಂಡು ಸ್ಲಂಗಳಲ್ಲಿ ವಾಸಿಸುತ್ತಿರುತ್ತಾರೆ. ಚುನಾವಣೆ ಬಂದಾಗ ತಮ್ಮ ಸ್ವಂತ ರಾಜ್ಯಕ್ಕೆ ತೆರಳಿ ಮತದಾನ ಮಾಡುವಷ್ಟ ಶಕ್ತಿ ಅವರಿಗೆ ಇರುವುದಿಲ್ಲ. ಇನ್ನು ಅವರಿರುವ ರಾಜ್ಯಗಳಲ್ಲಿ ಸಹ ಮತದಾನ ಮಾಡಲಾಗುವುದಿಲ್ಲ. ದೇಶದಲ್ಲಿ ಓಟು ಹಾಕುವ ರೈತರ ಬಗ್ಗೆಯೇ ಕಾಳಜಿ ವಹಿಸದ ಸರ್ಕಾರ ಇನ್ನು ಓಟೇ ಹಾಕದ ಇವರ ಮೇಲೆ ನಮ್ಮ ರಾಜಕಾರಣಿಗಳಿಗೆ, ಆಳುವವರಿಗೆ ಕಾಳಜಿ ಬರಲು ಹೇಗೆ ಸಾಧ್ಯ?

ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಒಂದೆರೆಡು ಘಟನೆಗಳನ್ನು ನೋಡಬೇಕಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕೋವಿಡ್‌ ಪರಿಹಾರಕ್ಕಾಗಿ ಬಳಸಬಹುದೆಂದು ಸರ್ಕಾರ ತೀರ್ಮಾನಿಸಿತು. ಅದಾದ ನಂತರ ಶಾಸಕರುಗಳ ನೇತೃತ್ವದಲ್ಲಿ ದಿನಸಿ ಮತ್ತಿತರ ಕಿಟ್‌ಗಳನ್ನು ಕೊಡಲು ನಿರ್ಧರಿಸಿದಾಗ ಬೆಂಗಳೂರಿನ ಮಹಾದೇವಪುರದ ಶಾಸಕ ಅರವಿಂದ ಲಿಂಬಾವಳಿಯವರು ಕಿಟ್‌ಗಳ ಮೇಲೆ ತಮ್ಮ ಮತ್ತು ಬಿಜೆಪಿಯ ಭಾವಚಿತ್ರವನ್ನು ಹಾಕಿಸಿಕೊಂಡರು. ಅಷ್ಟು ಮಾತ್ರವಲ್ಲದೇ ಅದನ್ನು ನಿಜಕ್ಕೂ ಅಗತ್ಯವಿದ್ದ ವಲಸೆ ಕಾರ್ಮಿಕರಿಗೆ ಕೊಡುವ ಬದಲು ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹಂಚಿದರು. ಏಕೆಂದರೆ ಅವರಿಗೆ ಸ್ಪಷ್ಟತೆಯಿದೆ ತನಗೆ ಓಟು ಹಾಕಿರುವವರು ಬಿಜೆಪಿ ಕಾರ್ಯಕರ್ತರೇ ಹೊರತು, ವಲಸೆ ಕಾರ್ಮಿಕರಲ್ಲ ಎಂಬುದಾಗಿದೆ.

ಹಾಗಾಗಿಯೇ ಈ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ರೈಲು ವ್ಯವಸ್ಥೆ ಮಾಡಿದಾಗಲೂ ಕಾರ್ಮಿಕರಿಂದ ಟಿಕೆಟ್‌ಗಾಗಿ ಹಣ ವಸೂಲಿ ಮಾಡಲಾಗುತ್ತಿತ್ತು. ಆನಂತರ ಉಚಿತವಾದರೂ ಅದೇ ಸಮಯಕ್ಕೆ ಕರ್ನಾಟಕ ಸರ್ಕಾರ ಅವರು ಹೊರಟುಬಿಟ್ಟರೆ ಇಲ್ಲಿ ಚಟುವಟಿಕೆ ನಡೆಸುವುದು ಕಷ್ಟ ಎಂದು ರೈಲುಸೇವೆಯನ್ನೇ ರದ್ದುಗೊಳಿಸಿದರು. ಜನರ ಒತ್ತಡಕ್ಕೆ ಮಣಿದು ಅವರು ರೈಲುಸೇವೆಯನ್ನು ಪುನರ್‌ ಆರಂಭಿಸಿದಾಗ ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳ ಮತ್ತು ಓಡಿಸ್ಸಾದಂತಹ ರಾಜ್ಯಗಳು ವಲಸೆ ಕಾರ್ಮಿಕರು ಸದ್ಯಕ್ಕೆ ನಮ್ಮ ರಾಜ್ಯಗಳಿಗೆ ಬರುವುದು ಬೇಡ ಎಂದು ರೈಲುಗಳಿಗೆ ಅನುಮತಿ ನಿರಾಕರಿಸಿವೆ.

ಇಲ್ಲಿಯೂ ಅದೇ ವಲಸೆ ನೀತಿ ಕೆಲಸ ಮಾಡಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಮಿಕರು ಬಹಳಷ್ಟು ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಒಟ್ಟಿಗೆ ಬಂದರೆ ಅವರನ್ನು ನಿಭಾಯಿಸುವುದು ಹೇಗೆ? ಮೊದಲನೇಯದು ಕೊರೊನಾ ಹರಡುವ ಭಯ. ಎರಡನೆಯದು ಕೊರೊನಾ ನಿಂತರೂ ಅವರಿಗೆ ಅನ್ನ ಆಹಾರ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ. ಅವರೇನಿದ್ದರೂ ನಮಗೆ ಓಟು ಹಾಕುವವರಲ್ಲವಲ್ಲ ಎಂಬ ಅಸಡ್ಡೆ ಬೇರೆ.

ಇದು ರಾಜ್ಯಸರ್ಕಾರಗಳ ಕಥೆಯಾದರೆ ಕೇಂದ್ರ ಸರ್ಕಾರದ್ದು ಅದಕ್ಕಿಂತ ಕ್ರೂರವಾದುದ್ದು. ಲಾಕ್‌ಡೌನ್‌ ಮಾಡಿದಾಗ ಕೇವಲ 4 ಗಂಟೆ ಸಮಯ ಕೊಟ್ಟ ಸರ್ಕಾರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ಬಿಡಿಗಾಸನ್ನೂ ಬಿಚ್ಚಲಿಲ್ಲ. ಆಗಲೇ ಹೇಳಿದ ಹಾಗೆ ರೈಲು ದರಕ್ಕೂ ಕಾರ್ಮಿಕರಿಂದ ವಸೂಲಿಗಿಳಿದ ಕೇಂದ್ರ, ಅವರನ್ನು ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ನಯಾಪೈಸೆ ಕೊಡಲಿಲ್ಲ. ಪಿಎಂ ಕೇರ್ಸ್‌‌ಗೆ 30 ಸಾವಿರ ಕೋಟಿಗೂ ಅಧಿಕ ಹಣ ಹರಿದುಬಂದಿದ್ದರೂ ಅದರಿಂದ ಪ್ರಧಾನಿಗಳು ಒಂದು ರೂಪಾಯಿ ಸಹ ಖರ್ಚು ಮಾಡಿದ ಉದಾಹರಣೆಯಿಲ್ಲ. ಕೋವಿಡ್‌ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ಕಾರ್ಮಿಕರು ಸಾಯುತ್ತಿರುವಾಗ ಖರ್ಚು ಮಾಡದೇ ಇನ್ಯಾವಾಗ ಮಾಡುತ್ತಾರೆ?

ಪರಿಹಾರವೇನು?

ವಲಸೆ ಕಾರ್ಮಿಕರು ಅಸಂಘಟಿತ ವಲಯಕ್ಕೆ ಬರುತ್ತಾರೆ. ಕಾರ್ಮಿಕ ಸಂಘಟನೆಗಳು ಇವರನ್ನು ಸಂಘಟಿಸಲು ಪ್ರಯತ್ನಸಿದರೂ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಇವರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿ ಅವರೊಂದು ರಾಜಕೀಯ ಶಕ್ತಿಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ. ಅದು ಮಾತ್ರವೇ ಈ ಸಂಕಷ್ಟದಿಂದ ವಲಸೆ ಕಾರ್ಮಿಕರನ್ನು ಪಾರು ಮಾಡುತ್ತದೆ. ಕಾರ್ಲ್‌‌ಮಾರ್ಕ್ಸ್‌‌ರವರು ಹೇಳಿದಂತೆ ಕಾರ್ಮಿಕರು ಈಗ ಕಳೆದುಕೊಳ್ಳಲು ಸಂಕೋಲೆಯನ್ನು ಹೊರತಪಡಿಸಿ ಕಳೆದುಕೊಳ್ಳಲು ಮತ್ತೇನೂ ಇಲ್ಲ. ಅದೇ ರೀತಿ ಬುದ್ದ ನಮ್ಮ ಅಂದರೆ ಕಾರ್ಮಿಕರ ವಿಮೋಚನೆ ನಮ್ಮಿಂದಲೇ ಸಾಧ್ಯ ಹೊರತು ಮತ್ಯಾರಿಂದಲೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...