Homeಮುಖಪುಟವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

- Advertisement -
- Advertisement -

ನಿನ್ನೆ ಒಂದು ಧಾರುಣ ಘಟನೆ ಜರುಗಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಹೊರಟಿದ್ದ 16 ಜನ ವಲಸೆ ಕಾರ್ಮಿಕರು ವಿಶ್ರಾಂತಿಗಾಗಿ ರೈಲ್ವೆ ಹಳಿಯ ಮೇಲೆ ಮಲಗಿದ್ದಾಗ ರೈಲು ಹರಿದು ಎಲ್ಲರ ಪ್ರಾಣ ತೆಗೆಯಿತು. ಲಾಕ್‌ಡೌನ್‌ ಕಾರಣಕ್ಕೆ ರೈಲುಗಳಿಲ್ಲ ಎಂದು ತಿಳಿದು ಕಾಲ್ನಡಿಗೆಯಲ್ಲಿ ಹೊರಟಿದ್ದ ಅವರನ್ನು ಅದೇ ರೈಲು ಹರಿದು ಕೊಂದಿರುವುದು ದುರಾದೃಷ್ಟಕರ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಭುಗಿಲೆದ್ದಿವೆ. ಕೆಲವು ಜನರು ಅವರೇಕೆ ರೈಲು ಹಳಿಗಳ ಮೇಲೆ ಮಲಗಬೇಕಿತ್ತು? ಎಂಬ ಪ್ರಶ್ನೆಗೆ ಅವರು ನಡೆದು ಹೋಗಬೇಕಾದ ಪರಿಸ್ಥಿತಿ ಏಕೆ ಬಂತು ಎಂಬ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಅವರ ಬಳಿ ಉತ್ತರಗಳಿಲ್ಲ.

ಇನ್ನು ಇವರ ಸಾವು ಆಳುವ ಸರ್ಕಾರಗಳಿಗೆ ದೊಡ್ಡ ಪ್ರಮಾದ ಎನ್ನಿಸಲೇ ಇಲ್ಲ. ಅವರ ಜೀವಕ್ಕೆ ತಲಾ 5 ಲಕ್ಷ ಬೆಲೆ ಕಟ್ಟಿ ಕೈತೊಳೆದುಕೊಂಡಿವೆ. ಅವರ ಸಾವಿಗೆ ಮಮ್ಮಲ ಮರುಗಿದ ನಾವು ಕೂಡ ಒಂದೆರೆಡು ದಿನಗಳಲ್ಲಿ ಅವರನ್ನು ಮರೆತು ಮುಂದಕ್ಕೆ ಹೋಗುತ್ತೇವೆ. ಏಕೀಗೆ? ಅವರ ನೋವು ಆಳುವವರಿಗೆ ತಟ್ಟುವುದಿಲ್ಲ ಏಕೆ? ಈ ಕುರಿತು ಕನಿಷ್ಠ ಯೋಚಿಸಬೇಕಲ್ಲವೇ?

ಇದೊಂದೆ ಘಟನೆಯಲ್ಲ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ದೇಶದಲ್ಲಿರುವ ಕೋಟ್ಯಾಂತರ ವಲಸೆ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಅವರಿಗೆ ಸಮರ್ಪಕ ದಿನಸಿಗಳು, ಊಟ ಸಿಕ್ಕಿಲ್ಲ. ಸರಿ ತಮ್ಮ ಊರಿಗೆ ಹೋಗಲು ಸಾರಿಗೆ ಇಲ್ಲ. ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆ.

ಈ ಕುರಿತು ಯೋಚಿಸಿದಾಗ ನಮಗೆ ಕಾಡುವ ಒಂದು ಪದವೆಂದರೆ ಅದು ವಲಸಿಗ ಎಂಬುದಾಗಿದೆ. ವಲಸಿಗ ಎಂಬ ಪದದ ಅರ್ಥವೇ ನಮ್ಮವನಲ್ಲ ಎಂಬುದಾಗಿದೆ. ವಲಸೆ ಕಾರ್ಮಿಕರ ಈ ಪರಿಸ್ಥಿತಿಯನ್ನ ರಾಜ್ಯಶಾಸ್ತ್ರ ದೃಷ್ಟಿಯಿಂದ ಇಂದ ಅಧ್ಯಯನ ಮಾಡಿದರೆ ಇವರಿಗೆ ನಾವು stateless population ಎಂದು ಕರೆಯುತ್ತೇವೆ. ಅಂದರೆ ಈ ಕಾರ್ಮಿಕರು ನಮ್ಮದೇ ದೇಶದಲ್ಲಿ ಪರಕೀಯರಾಗಿ ಉಳಿದಿದ್ದಾರೆ.

ಈ ಕಾರ್ಮಿಕರು ನಮ್ಮ ದೇಶ ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದಾರೆ. ಇವರಿಲ್ಲದೇ ಅಭಿವೃದ್ದಿ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಡತನದ ಕಾರಣಕ್ಕಾಗಿ ಉದ್ಯೋಗ ಸಿಗದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಬಂದಿರುವ ಇವರು ತಮ್ಮ ರಾಜ್ಯಕ್ಕೂ ಬೇಡವಾಗಿರುತ್ತಾರೆ ಮತ್ತು ತಾವಿರುವ ರಾಜ್ಯದಲ್ಲಿಯೂ ಸಹ ಅನ್ಯರಾಗಿರುತ್ತಾರೆ.

ಇನ್ನು ಬಹುಮುಖ್ಯ ಕಾರಣ ಇವರ ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆಯಿದೆ. ಇವರುಗಳ ಮತದಾನದ ಗುರುತಿನ ಚೀಟಿ ತಮ್ಮ ಸ್ವಂತ ರಾಜ್ಯದಲ್ಲಿರುತ್ತದೆ. ಆದರೆ ದೂರದ ಇನ್ಯಾವುದೋ ರಾಜ್ಯದಲ್ಲಿ ಕೂಲಿ ಮಾಡಿಕೊಂಡು ಸ್ಲಂಗಳಲ್ಲಿ ವಾಸಿಸುತ್ತಿರುತ್ತಾರೆ. ಚುನಾವಣೆ ಬಂದಾಗ ತಮ್ಮ ಸ್ವಂತ ರಾಜ್ಯಕ್ಕೆ ತೆರಳಿ ಮತದಾನ ಮಾಡುವಷ್ಟ ಶಕ್ತಿ ಅವರಿಗೆ ಇರುವುದಿಲ್ಲ. ಇನ್ನು ಅವರಿರುವ ರಾಜ್ಯಗಳಲ್ಲಿ ಸಹ ಮತದಾನ ಮಾಡಲಾಗುವುದಿಲ್ಲ. ದೇಶದಲ್ಲಿ ಓಟು ಹಾಕುವ ರೈತರ ಬಗ್ಗೆಯೇ ಕಾಳಜಿ ವಹಿಸದ ಸರ್ಕಾರ ಇನ್ನು ಓಟೇ ಹಾಕದ ಇವರ ಮೇಲೆ ನಮ್ಮ ರಾಜಕಾರಣಿಗಳಿಗೆ, ಆಳುವವರಿಗೆ ಕಾಳಜಿ ಬರಲು ಹೇಗೆ ಸಾಧ್ಯ?

ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಒಂದೆರೆಡು ಘಟನೆಗಳನ್ನು ನೋಡಬೇಕಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕೋವಿಡ್‌ ಪರಿಹಾರಕ್ಕಾಗಿ ಬಳಸಬಹುದೆಂದು ಸರ್ಕಾರ ತೀರ್ಮಾನಿಸಿತು. ಅದಾದ ನಂತರ ಶಾಸಕರುಗಳ ನೇತೃತ್ವದಲ್ಲಿ ದಿನಸಿ ಮತ್ತಿತರ ಕಿಟ್‌ಗಳನ್ನು ಕೊಡಲು ನಿರ್ಧರಿಸಿದಾಗ ಬೆಂಗಳೂರಿನ ಮಹಾದೇವಪುರದ ಶಾಸಕ ಅರವಿಂದ ಲಿಂಬಾವಳಿಯವರು ಕಿಟ್‌ಗಳ ಮೇಲೆ ತಮ್ಮ ಮತ್ತು ಬಿಜೆಪಿಯ ಭಾವಚಿತ್ರವನ್ನು ಹಾಕಿಸಿಕೊಂಡರು. ಅಷ್ಟು ಮಾತ್ರವಲ್ಲದೇ ಅದನ್ನು ನಿಜಕ್ಕೂ ಅಗತ್ಯವಿದ್ದ ವಲಸೆ ಕಾರ್ಮಿಕರಿಗೆ ಕೊಡುವ ಬದಲು ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹಂಚಿದರು. ಏಕೆಂದರೆ ಅವರಿಗೆ ಸ್ಪಷ್ಟತೆಯಿದೆ ತನಗೆ ಓಟು ಹಾಕಿರುವವರು ಬಿಜೆಪಿ ಕಾರ್ಯಕರ್ತರೇ ಹೊರತು, ವಲಸೆ ಕಾರ್ಮಿಕರಲ್ಲ ಎಂಬುದಾಗಿದೆ.

ಹಾಗಾಗಿಯೇ ಈ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ರೈಲು ವ್ಯವಸ್ಥೆ ಮಾಡಿದಾಗಲೂ ಕಾರ್ಮಿಕರಿಂದ ಟಿಕೆಟ್‌ಗಾಗಿ ಹಣ ವಸೂಲಿ ಮಾಡಲಾಗುತ್ತಿತ್ತು. ಆನಂತರ ಉಚಿತವಾದರೂ ಅದೇ ಸಮಯಕ್ಕೆ ಕರ್ನಾಟಕ ಸರ್ಕಾರ ಅವರು ಹೊರಟುಬಿಟ್ಟರೆ ಇಲ್ಲಿ ಚಟುವಟಿಕೆ ನಡೆಸುವುದು ಕಷ್ಟ ಎಂದು ರೈಲುಸೇವೆಯನ್ನೇ ರದ್ದುಗೊಳಿಸಿದರು. ಜನರ ಒತ್ತಡಕ್ಕೆ ಮಣಿದು ಅವರು ರೈಲುಸೇವೆಯನ್ನು ಪುನರ್‌ ಆರಂಭಿಸಿದಾಗ ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳ ಮತ್ತು ಓಡಿಸ್ಸಾದಂತಹ ರಾಜ್ಯಗಳು ವಲಸೆ ಕಾರ್ಮಿಕರು ಸದ್ಯಕ್ಕೆ ನಮ್ಮ ರಾಜ್ಯಗಳಿಗೆ ಬರುವುದು ಬೇಡ ಎಂದು ರೈಲುಗಳಿಗೆ ಅನುಮತಿ ನಿರಾಕರಿಸಿವೆ.

ಇಲ್ಲಿಯೂ ಅದೇ ವಲಸೆ ನೀತಿ ಕೆಲಸ ಮಾಡಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಮಿಕರು ಬಹಳಷ್ಟು ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಒಟ್ಟಿಗೆ ಬಂದರೆ ಅವರನ್ನು ನಿಭಾಯಿಸುವುದು ಹೇಗೆ? ಮೊದಲನೇಯದು ಕೊರೊನಾ ಹರಡುವ ಭಯ. ಎರಡನೆಯದು ಕೊರೊನಾ ನಿಂತರೂ ಅವರಿಗೆ ಅನ್ನ ಆಹಾರ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ. ಅವರೇನಿದ್ದರೂ ನಮಗೆ ಓಟು ಹಾಕುವವರಲ್ಲವಲ್ಲ ಎಂಬ ಅಸಡ್ಡೆ ಬೇರೆ.

ಇದು ರಾಜ್ಯಸರ್ಕಾರಗಳ ಕಥೆಯಾದರೆ ಕೇಂದ್ರ ಸರ್ಕಾರದ್ದು ಅದಕ್ಕಿಂತ ಕ್ರೂರವಾದುದ್ದು. ಲಾಕ್‌ಡೌನ್‌ ಮಾಡಿದಾಗ ಕೇವಲ 4 ಗಂಟೆ ಸಮಯ ಕೊಟ್ಟ ಸರ್ಕಾರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ಬಿಡಿಗಾಸನ್ನೂ ಬಿಚ್ಚಲಿಲ್ಲ. ಆಗಲೇ ಹೇಳಿದ ಹಾಗೆ ರೈಲು ದರಕ್ಕೂ ಕಾರ್ಮಿಕರಿಂದ ವಸೂಲಿಗಿಳಿದ ಕೇಂದ್ರ, ಅವರನ್ನು ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ನಯಾಪೈಸೆ ಕೊಡಲಿಲ್ಲ. ಪಿಎಂ ಕೇರ್ಸ್‌‌ಗೆ 30 ಸಾವಿರ ಕೋಟಿಗೂ ಅಧಿಕ ಹಣ ಹರಿದುಬಂದಿದ್ದರೂ ಅದರಿಂದ ಪ್ರಧಾನಿಗಳು ಒಂದು ರೂಪಾಯಿ ಸಹ ಖರ್ಚು ಮಾಡಿದ ಉದಾಹರಣೆಯಿಲ್ಲ. ಕೋವಿಡ್‌ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ಕಾರ್ಮಿಕರು ಸಾಯುತ್ತಿರುವಾಗ ಖರ್ಚು ಮಾಡದೇ ಇನ್ಯಾವಾಗ ಮಾಡುತ್ತಾರೆ?

ಪರಿಹಾರವೇನು?

ವಲಸೆ ಕಾರ್ಮಿಕರು ಅಸಂಘಟಿತ ವಲಯಕ್ಕೆ ಬರುತ್ತಾರೆ. ಕಾರ್ಮಿಕ ಸಂಘಟನೆಗಳು ಇವರನ್ನು ಸಂಘಟಿಸಲು ಪ್ರಯತ್ನಸಿದರೂ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಇವರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿ ಅವರೊಂದು ರಾಜಕೀಯ ಶಕ್ತಿಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ. ಅದು ಮಾತ್ರವೇ ಈ ಸಂಕಷ್ಟದಿಂದ ವಲಸೆ ಕಾರ್ಮಿಕರನ್ನು ಪಾರು ಮಾಡುತ್ತದೆ. ಕಾರ್ಲ್‌‌ಮಾರ್ಕ್ಸ್‌‌ರವರು ಹೇಳಿದಂತೆ ಕಾರ್ಮಿಕರು ಈಗ ಕಳೆದುಕೊಳ್ಳಲು ಸಂಕೋಲೆಯನ್ನು ಹೊರತಪಡಿಸಿ ಕಳೆದುಕೊಳ್ಳಲು ಮತ್ತೇನೂ ಇಲ್ಲ. ಅದೇ ರೀತಿ ಬುದ್ದ ನಮ್ಮ ಅಂದರೆ ಕಾರ್ಮಿಕರ ವಿಮೋಚನೆ ನಮ್ಮಿಂದಲೇ ಸಾಧ್ಯ ಹೊರತು ಮತ್ಯಾರಿಂದಲೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...