Homeಅಂಕಣಗಳುಮೋದಿ ಬುದ್ದಿವಂತನಲವಂತೆ ನಿಜವೆ! - ಚಂದ್ರೇಗೌಡರ ಕಟ್ಟೆಪುರಾಣ

ಮೋದಿ ಬುದ್ದಿವಂತನಲವಂತೆ ನಿಜವೆ! – ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ.
“ಯಕ್ಕಾ, ಯಕ್ಕವ್, ಕೊರೋನಾ ವಿಷಯದಲ್ಲಿ ಒಂದಿಷ್ಟು ಹ್ವಸಾ ರೂಲ್ಸು ಬಂದವೆ ಹೇಳ್ಳ” ಎಂದ.
“ಏನು ಬ್ಯಾಡ. ನೀನು ಆ ಟಿವಿ ಸೂಳೆ ಮಕ್ಕಳಂಗೆ ಆಗಿದ್ದಿ.”
“ಯಕ್ಕವ್ ಟಿವಿ ಮುಂಡೆ ಮಕ್ಕಳಿಗೆ ಓಲುಸಬ್ಯಾಡ. ಹುಟ್ಟು ಭಯೋತ್ಪಾದಕರ ತರ ಆಗ್ಯವುರೆ ಅ ನನ್ ಮಕ್ಕಳು”.
“ಊ ಕಣೊ ವಾಟಿಸ್ಸೆ. ಆ ಮೈಸೂರು ಬಗ್ಗೆ ಒಸಿ ಸುಳ್ಳೆಳಿದರೇನೊ, ನಡುಗ್ತಾಯಿದೆ ಮೈಸೂರು ಅಂದ್ರು ಮೈಸೂರ ಮ್ಯಾಲೆ ಬರಸಿಡ್ಳು ಅಂದ್ರು. ನಾನು ಪೋನು ಮಾಡಿ ಕೇಳಿದ್ರೆ ಕರೋನಾ ಆದೊರ್ಯಲ್ಲ ಉಸರಾಗಿ ಮನಿಗೆಹೋಯ್ತಾ ಅವುರಂತೆ” ಎಂದ ಉಗ್ರಿ.
“ಅದ್ಯಾಕ್ಲ ಅಂಗೆ ಸುಳ್ಳೇಳತವೆ” ಎಂದಳು ಜುಮ್ಮಿ.
“ಅವುಕೆ ಸಂಬಳ ಕೊಡದೆ ಸುಳ್ಳೇಳಕ್ಕೆ ಕಣಕ್ಕ. ಬ್ಯಾರೆ ಟಿವಿಯೋರಿಗಿಂತ ನಾವೇ ಜಾಸ್ತಿ ಸುಳ್ಳೇಳಬೇಕು ಅಂತ ಪೈಪೋಟಿ ನ್ಯಡುಸ್ತವೆ”.
“ಅಯ್ಯೋ ಅವು ಬಾಯಿಗೆ ತನ್ನ ತೊಂಬ್ಲ ಹಾಕ ಹೋಗು”.
“ತೊಂಬಲ ಅನ್ನಬ್ಯಾಡ ಕಣಕ್ಕ. ಅದು ಸೆಕ್ಸ್ ಮ್ಯಾಟ್ರಾಯ್ತದೆ”.
“ಅದ್ಯಂಗಾಯ್ತದೊ ಎಂದ ಉಗ್ರಿ”.
“ತೊಂಬಲ ಅಂದ್ರೆ ಯಲೆ ಅಡಕೆ ಹದವಾಗಿ ಅಗದದ್ದು. ಒಂಥರ ವಳ್ಳೆ ಬೀಡಾತರ ಆಗಿರತದೆ ಅಂತದ್ನ ಟಿವಿ ಆಂಕರ್ ಬಾಯಿಗಾಕಿದ್ರೆ ಮಜವಾಗಿ ಬಾಯಾಡುಸ್ತರೆ ಬ್ಯಾರೆ ಹೇಳಕ್ಕ”.
“ಅವುರ ಬಾಯಿಗೆ ನನ್ನ ಎಂಜಲಾಕ ಅನ್ಲ”.
“ಅವುರ ಬಾಯಿಗೆ ಕೊರೋನಾ ಎಂಜಲಾಕ ಅನ್ನು”.
“ಅವುರುದು ವಟ್ಟೆ ಪಾಡು ಕಣಕ್ಕ. ನೀನೇನೊ ಮನೆವಳಗೆ ಮಜ್ಜಗೆ ಕಡಕಂಡು ತಂಪಾಗಿದ್ದಿ. ಅವು ನೋಡು ಇಡೀ ದಿನ ಕರೋನಾ, ಕರೋನಾ ಅಂತ ಗೊಬಳಿ ಮರದ ಮ್ಯಾಲೆ ಕುಂತ ಕಾಗೆತರ ಬಡಕತ್ತವೆ. ಕನಸು ಮಸನಲ್ಲೂ ಕರೋನಾ ಅಂತವೆ ಪಾಪ ಅಲವೆ”.
“ಅದ್ರು ಟಿವಿಗಳಿರದು ಕರೋನಾದಿಂದ ಆಗಿರೊ ಅನಾಹುತ ಹೇಳಕ್ಕೆ. ಸರಕಾರ ಹೊಗಳಕ್ಕಲ್ಲ ಕಣೊ” ಎಂದ ಉಗ್ರಿ.
“ಟಿವಿ ನ್ಯಡಸೊವಷ್ಟು ದುಡ್ಡು ಮೋದಿನೆ ಕೊಟ್ಟಿರುವಾಗ ಹೋಗಳಲೇಬೇಕಲ್ಲೊ ಅದ್ಕೆ ಕರೋನಾ ಸುದ್ದಿ ಹೇಳುವಾಗ ಅವುನ ಪೋಟಾ ಹಾಕದು” ಎಂದ ವಾಟಿಸ್ಸೆ.
“ಅವುನೇನೊ ಅಂತ ಬುದ್ದಿವಂತಲವಂತಲ್ಲಾ” ಎಂದಳು ಜುಮ್ಮಿ.
“ಅವುನು ಬುದ್ದಿವಂತ ಅಂತ ಯಾರಕ್ಕ ಹೇಳಿದ್ದು”.
“ಆ ಸುಳ್ಳೇಗೌಡ್ರು ಅನಂತ ಅಂಗಂದಿದ್ದ”.
“ಸುಳ್ಳೇಗೌಡರ ಅನಂತ ನಿಜ ಹೇಳಕ್ಕಾಯ್ತದೇನಕ್ಕ ಈ ಮೋದಿ ಯಾವತ್ತು ಅರ್ಧ ರಾತ್ರಿಲಿ ನೋಟ ಬ್ಯಾನು ಮಾಡಿದ್ನೋ ಅವತ್ತೆ ಇವುನೆಷ್ಟು ಮಟ್ಟಿಗೆ ಬುದ್ದಿವಂತ ಅಂತ ಇಡೀ ಜಗತ್ತಿಗೆ ಗೊತ್ತಾಯ್ತು. ದೇಸ ಅದೋಗತಿಗೆ ಹ್ಹಂಡಕ್ಕೆ ಸುರುಮಾಡಿದ್ದು ಅವತ್ತೆಯ. ಇನ್ಯಾವ ಡಿಗ್ರಿ ಸರ್ಟಿಫಿಕೇಟ್ ತೊರಿದ್ರು ಜನ ನಂಬದಿಲ್ಲ ಬುಡು”.
“ನೀನಂಗಂತಿ ಕಣೊ ಜನ ಮೋದಿ ಮೋದಿ ಅಂತವೆ”.
“ಯಾಕಗಂತರೆ ಗೊತ್ತೇನೊ ಅವುನೆದ್ರಿಗ್ಯಾರು ಇಲ್ಲ ಅದಕೆ”.
“ಅದು ನಿಜ ಬುಡು”.
“ಆ ಡೆಲ್ಲಿಗೆ ಒಂದು ಚರಿತ್ರೆ ಅದೆ. ಅಲ್ಲೊಬ್ಬ ತುಘಲಕ್ ಅಂತ ದ್ವರೆ ಇದ್ದ. ವಿಪರೀತ ಬುದ್ದಿವಂತ. ಅವುನು ಈ ಡೆಲ್ಲಿ ಇಲ್ಲಿದ್ರೆ ವೈರಿಗಾಳ ದಾಳಿ ನ್ಯಡಿತಾಯಿರತದೆ ಅಂತ ಯಲ್ಲ ದೇವಗಿರಿಗೆ ವಂಡಿ ಅಂದ. ಸರಿ ಇಡೀ ಡೆಲ್ಲಿ ದೇವಗಿರಿಗೋಯ್ತು. ಆ ಊರು ರಾಜಾದಾನಿ ಅಗಕ್ಕೆ ಸರಿಲ್ಲ ತಿರಗ ಯಲ್ಲ ಡೆಲ್ಲಿಗೆ ಹೊಂಡಿ ಅಂದ. ಆಗ ತಿರಗ ಡೆಲ್ಲಿ ಹಾದಿಲಿ ನ್ಯಡಕಂಡು ವಂಟ್ರು ಹೋಗುವಾಗ ಕಾಲುಬಾಗ ಸತ್ತಿದ್ರು. ಬರುವಾಗ ಅದ್ರ ಜನ ಸತೃ. ದೊರೆ ತಿಕ್ಕಲ ಪ್ರತಿಭಟಿಸಕ್ಕೆ ಜನಗಳೆ ಇರಲಿಲ್ಲ ಈಗ್ಲು ಕೊರೋನಾ ವಿಷಯದಲ್ಲಿ ಅಂಗೆ ಆಗ್ಯದೆ ನೋಡು”.
“ನೀನೇಳಿದ್ದು ನಿಜ ಕಣೊ ಉಗ್ರಿ ದೇಶಕಟ್ಟೊ ಜನ ಬಿದಿಲಿ, ದಾರಿಲಿ, ರೈಲ್ವೆಹಳಿ ಮ್ಯಾಲೆ ಸಾಯ್ತಾ ಅವುರೆ ಪಾಪ ಅವರಿಗೆ ನಮ್ಮನ್ನ ಕಾಪಾಡೋರು ಯಾರೂ ಇಲ್ಲ ಅನ್ನಸ್ಯದೆ ಇದು ಮೋದಿಗೆ ಗೊತ್ತಾಗದಿಲ್ಲ ಅಂದ್ರೆ ಅವುನು ದಡ್ಡನೇ ಸರಿ”.
“ಅದೇನಾರ ಆಗ್ಲಿ ಜನಗಳ್ಯಲ್ಲ ಸತ್ತೋದ್ರಲ್ಲ ಹೇಳೂ” ಅಂದಳು ಜುಮ್ಮಿ.
“ !?


ಇದನ್ನೂ ಓದಿ: ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...