Homeಅಂಕಣಗಳುಮೋದಿ ಬುದ್ದಿವಂತನಲವಂತೆ ನಿಜವೆ! - ಚಂದ್ರೇಗೌಡರ ಕಟ್ಟೆಪುರಾಣ

ಮೋದಿ ಬುದ್ದಿವಂತನಲವಂತೆ ನಿಜವೆ! – ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ.
“ಯಕ್ಕಾ, ಯಕ್ಕವ್, ಕೊರೋನಾ ವಿಷಯದಲ್ಲಿ ಒಂದಿಷ್ಟು ಹ್ವಸಾ ರೂಲ್ಸು ಬಂದವೆ ಹೇಳ್ಳ” ಎಂದ.
“ಏನು ಬ್ಯಾಡ. ನೀನು ಆ ಟಿವಿ ಸೂಳೆ ಮಕ್ಕಳಂಗೆ ಆಗಿದ್ದಿ.”
“ಯಕ್ಕವ್ ಟಿವಿ ಮುಂಡೆ ಮಕ್ಕಳಿಗೆ ಓಲುಸಬ್ಯಾಡ. ಹುಟ್ಟು ಭಯೋತ್ಪಾದಕರ ತರ ಆಗ್ಯವುರೆ ಅ ನನ್ ಮಕ್ಕಳು”.
“ಊ ಕಣೊ ವಾಟಿಸ್ಸೆ. ಆ ಮೈಸೂರು ಬಗ್ಗೆ ಒಸಿ ಸುಳ್ಳೆಳಿದರೇನೊ, ನಡುಗ್ತಾಯಿದೆ ಮೈಸೂರು ಅಂದ್ರು ಮೈಸೂರ ಮ್ಯಾಲೆ ಬರಸಿಡ್ಳು ಅಂದ್ರು. ನಾನು ಪೋನು ಮಾಡಿ ಕೇಳಿದ್ರೆ ಕರೋನಾ ಆದೊರ್ಯಲ್ಲ ಉಸರಾಗಿ ಮನಿಗೆಹೋಯ್ತಾ ಅವುರಂತೆ” ಎಂದ ಉಗ್ರಿ.
“ಅದ್ಯಾಕ್ಲ ಅಂಗೆ ಸುಳ್ಳೇಳತವೆ” ಎಂದಳು ಜುಮ್ಮಿ.
“ಅವುಕೆ ಸಂಬಳ ಕೊಡದೆ ಸುಳ್ಳೇಳಕ್ಕೆ ಕಣಕ್ಕ. ಬ್ಯಾರೆ ಟಿವಿಯೋರಿಗಿಂತ ನಾವೇ ಜಾಸ್ತಿ ಸುಳ್ಳೇಳಬೇಕು ಅಂತ ಪೈಪೋಟಿ ನ್ಯಡುಸ್ತವೆ”.
“ಅಯ್ಯೋ ಅವು ಬಾಯಿಗೆ ತನ್ನ ತೊಂಬ್ಲ ಹಾಕ ಹೋಗು”.
“ತೊಂಬಲ ಅನ್ನಬ್ಯಾಡ ಕಣಕ್ಕ. ಅದು ಸೆಕ್ಸ್ ಮ್ಯಾಟ್ರಾಯ್ತದೆ”.
“ಅದ್ಯಂಗಾಯ್ತದೊ ಎಂದ ಉಗ್ರಿ”.
“ತೊಂಬಲ ಅಂದ್ರೆ ಯಲೆ ಅಡಕೆ ಹದವಾಗಿ ಅಗದದ್ದು. ಒಂಥರ ವಳ್ಳೆ ಬೀಡಾತರ ಆಗಿರತದೆ ಅಂತದ್ನ ಟಿವಿ ಆಂಕರ್ ಬಾಯಿಗಾಕಿದ್ರೆ ಮಜವಾಗಿ ಬಾಯಾಡುಸ್ತರೆ ಬ್ಯಾರೆ ಹೇಳಕ್ಕ”.
“ಅವುರ ಬಾಯಿಗೆ ನನ್ನ ಎಂಜಲಾಕ ಅನ್ಲ”.
“ಅವುರ ಬಾಯಿಗೆ ಕೊರೋನಾ ಎಂಜಲಾಕ ಅನ್ನು”.
“ಅವುರುದು ವಟ್ಟೆ ಪಾಡು ಕಣಕ್ಕ. ನೀನೇನೊ ಮನೆವಳಗೆ ಮಜ್ಜಗೆ ಕಡಕಂಡು ತಂಪಾಗಿದ್ದಿ. ಅವು ನೋಡು ಇಡೀ ದಿನ ಕರೋನಾ, ಕರೋನಾ ಅಂತ ಗೊಬಳಿ ಮರದ ಮ್ಯಾಲೆ ಕುಂತ ಕಾಗೆತರ ಬಡಕತ್ತವೆ. ಕನಸು ಮಸನಲ್ಲೂ ಕರೋನಾ ಅಂತವೆ ಪಾಪ ಅಲವೆ”.
“ಅದ್ರು ಟಿವಿಗಳಿರದು ಕರೋನಾದಿಂದ ಆಗಿರೊ ಅನಾಹುತ ಹೇಳಕ್ಕೆ. ಸರಕಾರ ಹೊಗಳಕ್ಕಲ್ಲ ಕಣೊ” ಎಂದ ಉಗ್ರಿ.
“ಟಿವಿ ನ್ಯಡಸೊವಷ್ಟು ದುಡ್ಡು ಮೋದಿನೆ ಕೊಟ್ಟಿರುವಾಗ ಹೋಗಳಲೇಬೇಕಲ್ಲೊ ಅದ್ಕೆ ಕರೋನಾ ಸುದ್ದಿ ಹೇಳುವಾಗ ಅವುನ ಪೋಟಾ ಹಾಕದು” ಎಂದ ವಾಟಿಸ್ಸೆ.
“ಅವುನೇನೊ ಅಂತ ಬುದ್ದಿವಂತಲವಂತಲ್ಲಾ” ಎಂದಳು ಜುಮ್ಮಿ.
“ಅವುನು ಬುದ್ದಿವಂತ ಅಂತ ಯಾರಕ್ಕ ಹೇಳಿದ್ದು”.
“ಆ ಸುಳ್ಳೇಗೌಡ್ರು ಅನಂತ ಅಂಗಂದಿದ್ದ”.
“ಸುಳ್ಳೇಗೌಡರ ಅನಂತ ನಿಜ ಹೇಳಕ್ಕಾಯ್ತದೇನಕ್ಕ ಈ ಮೋದಿ ಯಾವತ್ತು ಅರ್ಧ ರಾತ್ರಿಲಿ ನೋಟ ಬ್ಯಾನು ಮಾಡಿದ್ನೋ ಅವತ್ತೆ ಇವುನೆಷ್ಟು ಮಟ್ಟಿಗೆ ಬುದ್ದಿವಂತ ಅಂತ ಇಡೀ ಜಗತ್ತಿಗೆ ಗೊತ್ತಾಯ್ತು. ದೇಸ ಅದೋಗತಿಗೆ ಹ್ಹಂಡಕ್ಕೆ ಸುರುಮಾಡಿದ್ದು ಅವತ್ತೆಯ. ಇನ್ಯಾವ ಡಿಗ್ರಿ ಸರ್ಟಿಫಿಕೇಟ್ ತೊರಿದ್ರು ಜನ ನಂಬದಿಲ್ಲ ಬುಡು”.
“ನೀನಂಗಂತಿ ಕಣೊ ಜನ ಮೋದಿ ಮೋದಿ ಅಂತವೆ”.
“ಯಾಕಗಂತರೆ ಗೊತ್ತೇನೊ ಅವುನೆದ್ರಿಗ್ಯಾರು ಇಲ್ಲ ಅದಕೆ”.
“ಅದು ನಿಜ ಬುಡು”.
“ಆ ಡೆಲ್ಲಿಗೆ ಒಂದು ಚರಿತ್ರೆ ಅದೆ. ಅಲ್ಲೊಬ್ಬ ತುಘಲಕ್ ಅಂತ ದ್ವರೆ ಇದ್ದ. ವಿಪರೀತ ಬುದ್ದಿವಂತ. ಅವುನು ಈ ಡೆಲ್ಲಿ ಇಲ್ಲಿದ್ರೆ ವೈರಿಗಾಳ ದಾಳಿ ನ್ಯಡಿತಾಯಿರತದೆ ಅಂತ ಯಲ್ಲ ದೇವಗಿರಿಗೆ ವಂಡಿ ಅಂದ. ಸರಿ ಇಡೀ ಡೆಲ್ಲಿ ದೇವಗಿರಿಗೋಯ್ತು. ಆ ಊರು ರಾಜಾದಾನಿ ಅಗಕ್ಕೆ ಸರಿಲ್ಲ ತಿರಗ ಯಲ್ಲ ಡೆಲ್ಲಿಗೆ ಹೊಂಡಿ ಅಂದ. ಆಗ ತಿರಗ ಡೆಲ್ಲಿ ಹಾದಿಲಿ ನ್ಯಡಕಂಡು ವಂಟ್ರು ಹೋಗುವಾಗ ಕಾಲುಬಾಗ ಸತ್ತಿದ್ರು. ಬರುವಾಗ ಅದ್ರ ಜನ ಸತೃ. ದೊರೆ ತಿಕ್ಕಲ ಪ್ರತಿಭಟಿಸಕ್ಕೆ ಜನಗಳೆ ಇರಲಿಲ್ಲ ಈಗ್ಲು ಕೊರೋನಾ ವಿಷಯದಲ್ಲಿ ಅಂಗೆ ಆಗ್ಯದೆ ನೋಡು”.
“ನೀನೇಳಿದ್ದು ನಿಜ ಕಣೊ ಉಗ್ರಿ ದೇಶಕಟ್ಟೊ ಜನ ಬಿದಿಲಿ, ದಾರಿಲಿ, ರೈಲ್ವೆಹಳಿ ಮ್ಯಾಲೆ ಸಾಯ್ತಾ ಅವುರೆ ಪಾಪ ಅವರಿಗೆ ನಮ್ಮನ್ನ ಕಾಪಾಡೋರು ಯಾರೂ ಇಲ್ಲ ಅನ್ನಸ್ಯದೆ ಇದು ಮೋದಿಗೆ ಗೊತ್ತಾಗದಿಲ್ಲ ಅಂದ್ರೆ ಅವುನು ದಡ್ಡನೇ ಸರಿ”.
“ಅದೇನಾರ ಆಗ್ಲಿ ಜನಗಳ್ಯಲ್ಲ ಸತ್ತೋದ್ರಲ್ಲ ಹೇಳೂ” ಅಂದಳು ಜುಮ್ಮಿ.
“ !?


ಇದನ್ನೂ ಓದಿ: ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...