Homeಅಂಕಣಗಳುಮೋದಿ ಬುದ್ದಿವಂತನಲವಂತೆ ನಿಜವೆ! - ಚಂದ್ರೇಗೌಡರ ಕಟ್ಟೆಪುರಾಣ

ಮೋದಿ ಬುದ್ದಿವಂತನಲವಂತೆ ನಿಜವೆ! – ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ.
“ಯಕ್ಕಾ, ಯಕ್ಕವ್, ಕೊರೋನಾ ವಿಷಯದಲ್ಲಿ ಒಂದಿಷ್ಟು ಹ್ವಸಾ ರೂಲ್ಸು ಬಂದವೆ ಹೇಳ್ಳ” ಎಂದ.
“ಏನು ಬ್ಯಾಡ. ನೀನು ಆ ಟಿವಿ ಸೂಳೆ ಮಕ್ಕಳಂಗೆ ಆಗಿದ್ದಿ.”
“ಯಕ್ಕವ್ ಟಿವಿ ಮುಂಡೆ ಮಕ್ಕಳಿಗೆ ಓಲುಸಬ್ಯಾಡ. ಹುಟ್ಟು ಭಯೋತ್ಪಾದಕರ ತರ ಆಗ್ಯವುರೆ ಅ ನನ್ ಮಕ್ಕಳು”.
“ಊ ಕಣೊ ವಾಟಿಸ್ಸೆ. ಆ ಮೈಸೂರು ಬಗ್ಗೆ ಒಸಿ ಸುಳ್ಳೆಳಿದರೇನೊ, ನಡುಗ್ತಾಯಿದೆ ಮೈಸೂರು ಅಂದ್ರು ಮೈಸೂರ ಮ್ಯಾಲೆ ಬರಸಿಡ್ಳು ಅಂದ್ರು. ನಾನು ಪೋನು ಮಾಡಿ ಕೇಳಿದ್ರೆ ಕರೋನಾ ಆದೊರ್ಯಲ್ಲ ಉಸರಾಗಿ ಮನಿಗೆಹೋಯ್ತಾ ಅವುರಂತೆ” ಎಂದ ಉಗ್ರಿ.
“ಅದ್ಯಾಕ್ಲ ಅಂಗೆ ಸುಳ್ಳೇಳತವೆ” ಎಂದಳು ಜುಮ್ಮಿ.
“ಅವುಕೆ ಸಂಬಳ ಕೊಡದೆ ಸುಳ್ಳೇಳಕ್ಕೆ ಕಣಕ್ಕ. ಬ್ಯಾರೆ ಟಿವಿಯೋರಿಗಿಂತ ನಾವೇ ಜಾಸ್ತಿ ಸುಳ್ಳೇಳಬೇಕು ಅಂತ ಪೈಪೋಟಿ ನ್ಯಡುಸ್ತವೆ”.
“ಅಯ್ಯೋ ಅವು ಬಾಯಿಗೆ ತನ್ನ ತೊಂಬ್ಲ ಹಾಕ ಹೋಗು”.
“ತೊಂಬಲ ಅನ್ನಬ್ಯಾಡ ಕಣಕ್ಕ. ಅದು ಸೆಕ್ಸ್ ಮ್ಯಾಟ್ರಾಯ್ತದೆ”.
“ಅದ್ಯಂಗಾಯ್ತದೊ ಎಂದ ಉಗ್ರಿ”.
“ತೊಂಬಲ ಅಂದ್ರೆ ಯಲೆ ಅಡಕೆ ಹದವಾಗಿ ಅಗದದ್ದು. ಒಂಥರ ವಳ್ಳೆ ಬೀಡಾತರ ಆಗಿರತದೆ ಅಂತದ್ನ ಟಿವಿ ಆಂಕರ್ ಬಾಯಿಗಾಕಿದ್ರೆ ಮಜವಾಗಿ ಬಾಯಾಡುಸ್ತರೆ ಬ್ಯಾರೆ ಹೇಳಕ್ಕ”.
“ಅವುರ ಬಾಯಿಗೆ ನನ್ನ ಎಂಜಲಾಕ ಅನ್ಲ”.
“ಅವುರ ಬಾಯಿಗೆ ಕೊರೋನಾ ಎಂಜಲಾಕ ಅನ್ನು”.
“ಅವುರುದು ವಟ್ಟೆ ಪಾಡು ಕಣಕ್ಕ. ನೀನೇನೊ ಮನೆವಳಗೆ ಮಜ್ಜಗೆ ಕಡಕಂಡು ತಂಪಾಗಿದ್ದಿ. ಅವು ನೋಡು ಇಡೀ ದಿನ ಕರೋನಾ, ಕರೋನಾ ಅಂತ ಗೊಬಳಿ ಮರದ ಮ್ಯಾಲೆ ಕುಂತ ಕಾಗೆತರ ಬಡಕತ್ತವೆ. ಕನಸು ಮಸನಲ್ಲೂ ಕರೋನಾ ಅಂತವೆ ಪಾಪ ಅಲವೆ”.
“ಅದ್ರು ಟಿವಿಗಳಿರದು ಕರೋನಾದಿಂದ ಆಗಿರೊ ಅನಾಹುತ ಹೇಳಕ್ಕೆ. ಸರಕಾರ ಹೊಗಳಕ್ಕಲ್ಲ ಕಣೊ” ಎಂದ ಉಗ್ರಿ.
“ಟಿವಿ ನ್ಯಡಸೊವಷ್ಟು ದುಡ್ಡು ಮೋದಿನೆ ಕೊಟ್ಟಿರುವಾಗ ಹೋಗಳಲೇಬೇಕಲ್ಲೊ ಅದ್ಕೆ ಕರೋನಾ ಸುದ್ದಿ ಹೇಳುವಾಗ ಅವುನ ಪೋಟಾ ಹಾಕದು” ಎಂದ ವಾಟಿಸ್ಸೆ.
“ಅವುನೇನೊ ಅಂತ ಬುದ್ದಿವಂತಲವಂತಲ್ಲಾ” ಎಂದಳು ಜುಮ್ಮಿ.
“ಅವುನು ಬುದ್ದಿವಂತ ಅಂತ ಯಾರಕ್ಕ ಹೇಳಿದ್ದು”.
“ಆ ಸುಳ್ಳೇಗೌಡ್ರು ಅನಂತ ಅಂಗಂದಿದ್ದ”.
“ಸುಳ್ಳೇಗೌಡರ ಅನಂತ ನಿಜ ಹೇಳಕ್ಕಾಯ್ತದೇನಕ್ಕ ಈ ಮೋದಿ ಯಾವತ್ತು ಅರ್ಧ ರಾತ್ರಿಲಿ ನೋಟ ಬ್ಯಾನು ಮಾಡಿದ್ನೋ ಅವತ್ತೆ ಇವುನೆಷ್ಟು ಮಟ್ಟಿಗೆ ಬುದ್ದಿವಂತ ಅಂತ ಇಡೀ ಜಗತ್ತಿಗೆ ಗೊತ್ತಾಯ್ತು. ದೇಸ ಅದೋಗತಿಗೆ ಹ್ಹಂಡಕ್ಕೆ ಸುರುಮಾಡಿದ್ದು ಅವತ್ತೆಯ. ಇನ್ಯಾವ ಡಿಗ್ರಿ ಸರ್ಟಿಫಿಕೇಟ್ ತೊರಿದ್ರು ಜನ ನಂಬದಿಲ್ಲ ಬುಡು”.
“ನೀನಂಗಂತಿ ಕಣೊ ಜನ ಮೋದಿ ಮೋದಿ ಅಂತವೆ”.
“ಯಾಕಗಂತರೆ ಗೊತ್ತೇನೊ ಅವುನೆದ್ರಿಗ್ಯಾರು ಇಲ್ಲ ಅದಕೆ”.
“ಅದು ನಿಜ ಬುಡು”.
“ಆ ಡೆಲ್ಲಿಗೆ ಒಂದು ಚರಿತ್ರೆ ಅದೆ. ಅಲ್ಲೊಬ್ಬ ತುಘಲಕ್ ಅಂತ ದ್ವರೆ ಇದ್ದ. ವಿಪರೀತ ಬುದ್ದಿವಂತ. ಅವುನು ಈ ಡೆಲ್ಲಿ ಇಲ್ಲಿದ್ರೆ ವೈರಿಗಾಳ ದಾಳಿ ನ್ಯಡಿತಾಯಿರತದೆ ಅಂತ ಯಲ್ಲ ದೇವಗಿರಿಗೆ ವಂಡಿ ಅಂದ. ಸರಿ ಇಡೀ ಡೆಲ್ಲಿ ದೇವಗಿರಿಗೋಯ್ತು. ಆ ಊರು ರಾಜಾದಾನಿ ಅಗಕ್ಕೆ ಸರಿಲ್ಲ ತಿರಗ ಯಲ್ಲ ಡೆಲ್ಲಿಗೆ ಹೊಂಡಿ ಅಂದ. ಆಗ ತಿರಗ ಡೆಲ್ಲಿ ಹಾದಿಲಿ ನ್ಯಡಕಂಡು ವಂಟ್ರು ಹೋಗುವಾಗ ಕಾಲುಬಾಗ ಸತ್ತಿದ್ರು. ಬರುವಾಗ ಅದ್ರ ಜನ ಸತೃ. ದೊರೆ ತಿಕ್ಕಲ ಪ್ರತಿಭಟಿಸಕ್ಕೆ ಜನಗಳೆ ಇರಲಿಲ್ಲ ಈಗ್ಲು ಕೊರೋನಾ ವಿಷಯದಲ್ಲಿ ಅಂಗೆ ಆಗ್ಯದೆ ನೋಡು”.
“ನೀನೇಳಿದ್ದು ನಿಜ ಕಣೊ ಉಗ್ರಿ ದೇಶಕಟ್ಟೊ ಜನ ಬಿದಿಲಿ, ದಾರಿಲಿ, ರೈಲ್ವೆಹಳಿ ಮ್ಯಾಲೆ ಸಾಯ್ತಾ ಅವುರೆ ಪಾಪ ಅವರಿಗೆ ನಮ್ಮನ್ನ ಕಾಪಾಡೋರು ಯಾರೂ ಇಲ್ಲ ಅನ್ನಸ್ಯದೆ ಇದು ಮೋದಿಗೆ ಗೊತ್ತಾಗದಿಲ್ಲ ಅಂದ್ರೆ ಅವುನು ದಡ್ಡನೇ ಸರಿ”.
“ಅದೇನಾರ ಆಗ್ಲಿ ಜನಗಳ್ಯಲ್ಲ ಸತ್ತೋದ್ರಲ್ಲ ಹೇಳೂ” ಅಂದಳು ಜುಮ್ಮಿ.
“ !?


ಇದನ್ನೂ ಓದಿ: ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...