Homeಅಂಕಣಗಳುಮೋದಿ ಬುದ್ದಿವಂತನಲವಂತೆ ನಿಜವೆ! - ಚಂದ್ರೇಗೌಡರ ಕಟ್ಟೆಪುರಾಣ

ಮೋದಿ ಬುದ್ದಿವಂತನಲವಂತೆ ನಿಜವೆ! – ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ.
“ಯಕ್ಕಾ, ಯಕ್ಕವ್, ಕೊರೋನಾ ವಿಷಯದಲ್ಲಿ ಒಂದಿಷ್ಟು ಹ್ವಸಾ ರೂಲ್ಸು ಬಂದವೆ ಹೇಳ್ಳ” ಎಂದ.
“ಏನು ಬ್ಯಾಡ. ನೀನು ಆ ಟಿವಿ ಸೂಳೆ ಮಕ್ಕಳಂಗೆ ಆಗಿದ್ದಿ.”
“ಯಕ್ಕವ್ ಟಿವಿ ಮುಂಡೆ ಮಕ್ಕಳಿಗೆ ಓಲುಸಬ್ಯಾಡ. ಹುಟ್ಟು ಭಯೋತ್ಪಾದಕರ ತರ ಆಗ್ಯವುರೆ ಅ ನನ್ ಮಕ್ಕಳು”.
“ಊ ಕಣೊ ವಾಟಿಸ್ಸೆ. ಆ ಮೈಸೂರು ಬಗ್ಗೆ ಒಸಿ ಸುಳ್ಳೆಳಿದರೇನೊ, ನಡುಗ್ತಾಯಿದೆ ಮೈಸೂರು ಅಂದ್ರು ಮೈಸೂರ ಮ್ಯಾಲೆ ಬರಸಿಡ್ಳು ಅಂದ್ರು. ನಾನು ಪೋನು ಮಾಡಿ ಕೇಳಿದ್ರೆ ಕರೋನಾ ಆದೊರ್ಯಲ್ಲ ಉಸರಾಗಿ ಮನಿಗೆಹೋಯ್ತಾ ಅವುರಂತೆ” ಎಂದ ಉಗ್ರಿ.
“ಅದ್ಯಾಕ್ಲ ಅಂಗೆ ಸುಳ್ಳೇಳತವೆ” ಎಂದಳು ಜುಮ್ಮಿ.
“ಅವುಕೆ ಸಂಬಳ ಕೊಡದೆ ಸುಳ್ಳೇಳಕ್ಕೆ ಕಣಕ್ಕ. ಬ್ಯಾರೆ ಟಿವಿಯೋರಿಗಿಂತ ನಾವೇ ಜಾಸ್ತಿ ಸುಳ್ಳೇಳಬೇಕು ಅಂತ ಪೈಪೋಟಿ ನ್ಯಡುಸ್ತವೆ”.
“ಅಯ್ಯೋ ಅವು ಬಾಯಿಗೆ ತನ್ನ ತೊಂಬ್ಲ ಹಾಕ ಹೋಗು”.
“ತೊಂಬಲ ಅನ್ನಬ್ಯಾಡ ಕಣಕ್ಕ. ಅದು ಸೆಕ್ಸ್ ಮ್ಯಾಟ್ರಾಯ್ತದೆ”.
“ಅದ್ಯಂಗಾಯ್ತದೊ ಎಂದ ಉಗ್ರಿ”.
“ತೊಂಬಲ ಅಂದ್ರೆ ಯಲೆ ಅಡಕೆ ಹದವಾಗಿ ಅಗದದ್ದು. ಒಂಥರ ವಳ್ಳೆ ಬೀಡಾತರ ಆಗಿರತದೆ ಅಂತದ್ನ ಟಿವಿ ಆಂಕರ್ ಬಾಯಿಗಾಕಿದ್ರೆ ಮಜವಾಗಿ ಬಾಯಾಡುಸ್ತರೆ ಬ್ಯಾರೆ ಹೇಳಕ್ಕ”.
“ಅವುರ ಬಾಯಿಗೆ ನನ್ನ ಎಂಜಲಾಕ ಅನ್ಲ”.
“ಅವುರ ಬಾಯಿಗೆ ಕೊರೋನಾ ಎಂಜಲಾಕ ಅನ್ನು”.
“ಅವುರುದು ವಟ್ಟೆ ಪಾಡು ಕಣಕ್ಕ. ನೀನೇನೊ ಮನೆವಳಗೆ ಮಜ್ಜಗೆ ಕಡಕಂಡು ತಂಪಾಗಿದ್ದಿ. ಅವು ನೋಡು ಇಡೀ ದಿನ ಕರೋನಾ, ಕರೋನಾ ಅಂತ ಗೊಬಳಿ ಮರದ ಮ್ಯಾಲೆ ಕುಂತ ಕಾಗೆತರ ಬಡಕತ್ತವೆ. ಕನಸು ಮಸನಲ್ಲೂ ಕರೋನಾ ಅಂತವೆ ಪಾಪ ಅಲವೆ”.
“ಅದ್ರು ಟಿವಿಗಳಿರದು ಕರೋನಾದಿಂದ ಆಗಿರೊ ಅನಾಹುತ ಹೇಳಕ್ಕೆ. ಸರಕಾರ ಹೊಗಳಕ್ಕಲ್ಲ ಕಣೊ” ಎಂದ ಉಗ್ರಿ.
“ಟಿವಿ ನ್ಯಡಸೊವಷ್ಟು ದುಡ್ಡು ಮೋದಿನೆ ಕೊಟ್ಟಿರುವಾಗ ಹೋಗಳಲೇಬೇಕಲ್ಲೊ ಅದ್ಕೆ ಕರೋನಾ ಸುದ್ದಿ ಹೇಳುವಾಗ ಅವುನ ಪೋಟಾ ಹಾಕದು” ಎಂದ ವಾಟಿಸ್ಸೆ.
“ಅವುನೇನೊ ಅಂತ ಬುದ್ದಿವಂತಲವಂತಲ್ಲಾ” ಎಂದಳು ಜುಮ್ಮಿ.
“ಅವುನು ಬುದ್ದಿವಂತ ಅಂತ ಯಾರಕ್ಕ ಹೇಳಿದ್ದು”.
“ಆ ಸುಳ್ಳೇಗೌಡ್ರು ಅನಂತ ಅಂಗಂದಿದ್ದ”.
“ಸುಳ್ಳೇಗೌಡರ ಅನಂತ ನಿಜ ಹೇಳಕ್ಕಾಯ್ತದೇನಕ್ಕ ಈ ಮೋದಿ ಯಾವತ್ತು ಅರ್ಧ ರಾತ್ರಿಲಿ ನೋಟ ಬ್ಯಾನು ಮಾಡಿದ್ನೋ ಅವತ್ತೆ ಇವುನೆಷ್ಟು ಮಟ್ಟಿಗೆ ಬುದ್ದಿವಂತ ಅಂತ ಇಡೀ ಜಗತ್ತಿಗೆ ಗೊತ್ತಾಯ್ತು. ದೇಸ ಅದೋಗತಿಗೆ ಹ್ಹಂಡಕ್ಕೆ ಸುರುಮಾಡಿದ್ದು ಅವತ್ತೆಯ. ಇನ್ಯಾವ ಡಿಗ್ರಿ ಸರ್ಟಿಫಿಕೇಟ್ ತೊರಿದ್ರು ಜನ ನಂಬದಿಲ್ಲ ಬುಡು”.
“ನೀನಂಗಂತಿ ಕಣೊ ಜನ ಮೋದಿ ಮೋದಿ ಅಂತವೆ”.
“ಯಾಕಗಂತರೆ ಗೊತ್ತೇನೊ ಅವುನೆದ್ರಿಗ್ಯಾರು ಇಲ್ಲ ಅದಕೆ”.
“ಅದು ನಿಜ ಬುಡು”.
“ಆ ಡೆಲ್ಲಿಗೆ ಒಂದು ಚರಿತ್ರೆ ಅದೆ. ಅಲ್ಲೊಬ್ಬ ತುಘಲಕ್ ಅಂತ ದ್ವರೆ ಇದ್ದ. ವಿಪರೀತ ಬುದ್ದಿವಂತ. ಅವುನು ಈ ಡೆಲ್ಲಿ ಇಲ್ಲಿದ್ರೆ ವೈರಿಗಾಳ ದಾಳಿ ನ್ಯಡಿತಾಯಿರತದೆ ಅಂತ ಯಲ್ಲ ದೇವಗಿರಿಗೆ ವಂಡಿ ಅಂದ. ಸರಿ ಇಡೀ ಡೆಲ್ಲಿ ದೇವಗಿರಿಗೋಯ್ತು. ಆ ಊರು ರಾಜಾದಾನಿ ಅಗಕ್ಕೆ ಸರಿಲ್ಲ ತಿರಗ ಯಲ್ಲ ಡೆಲ್ಲಿಗೆ ಹೊಂಡಿ ಅಂದ. ಆಗ ತಿರಗ ಡೆಲ್ಲಿ ಹಾದಿಲಿ ನ್ಯಡಕಂಡು ವಂಟ್ರು ಹೋಗುವಾಗ ಕಾಲುಬಾಗ ಸತ್ತಿದ್ರು. ಬರುವಾಗ ಅದ್ರ ಜನ ಸತೃ. ದೊರೆ ತಿಕ್ಕಲ ಪ್ರತಿಭಟಿಸಕ್ಕೆ ಜನಗಳೆ ಇರಲಿಲ್ಲ ಈಗ್ಲು ಕೊರೋನಾ ವಿಷಯದಲ್ಲಿ ಅಂಗೆ ಆಗ್ಯದೆ ನೋಡು”.
“ನೀನೇಳಿದ್ದು ನಿಜ ಕಣೊ ಉಗ್ರಿ ದೇಶಕಟ್ಟೊ ಜನ ಬಿದಿಲಿ, ದಾರಿಲಿ, ರೈಲ್ವೆಹಳಿ ಮ್ಯಾಲೆ ಸಾಯ್ತಾ ಅವುರೆ ಪಾಪ ಅವರಿಗೆ ನಮ್ಮನ್ನ ಕಾಪಾಡೋರು ಯಾರೂ ಇಲ್ಲ ಅನ್ನಸ್ಯದೆ ಇದು ಮೋದಿಗೆ ಗೊತ್ತಾಗದಿಲ್ಲ ಅಂದ್ರೆ ಅವುನು ದಡ್ಡನೇ ಸರಿ”.
“ಅದೇನಾರ ಆಗ್ಲಿ ಜನಗಳ್ಯಲ್ಲ ಸತ್ತೋದ್ರಲ್ಲ ಹೇಳೂ” ಅಂದಳು ಜುಮ್ಮಿ.
“ !?


ಇದನ್ನೂ ಓದಿ: ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...