Homeಮುಖಪುಟಮೋದಿಯವರು ಲೋಕಲ್‌ ವೋಕಲ್‌ ಭಾಷಣ: ಅವರು ಯಾವ ಲೋಕಲ್ ತಾಲೂಕದಾರಿ ಬಗ್ಗೆ ಮಾತಾಡತಾರ?

ಮೋದಿಯವರು ಲೋಕಲ್‌ ವೋಕಲ್‌ ಭಾಷಣ: ಅವರು ಯಾವ ಲೋಕಲ್ ತಾಲೂಕದಾರಿ ಬಗ್ಗೆ ಮಾತಾಡತಾರ?

- Advertisement -
- Advertisement -

ಈ ದೇಶದಾಗ ಲೋಕಲ್ ಅನ್ನೋ ಶಬ್ದಕ್ಕ ಬ್ಯಾರೆ ಬ್ಯಾರೆ ಕಡೆ ಬ್ಯಾರೆ ಬ್ಯಾರೆ ಅರ್ಥ ಅದಾವು. ಹಾವೇರಿ ಒಳಗ ಲೋಕಲ್ ಅಂದರ ದ್ಯಾಮನೂರು ಮೆಣಸಿನಕಾಯಿ, ಗುಲಬರ್ಗಾದಾಗ ಲೋಕಲ್ ಅಂದರ ಸಣ್ಣ ತೊಗರಿ ಬ್ಯಾಳಿ, ಮೈಸೂರಿನ್ಯಾಗ ಲೋಕಲ್ ಅಂದರ ಬನ್ನೂರು ಕುರಿ, ಇನ್ನ ಮುಂಬಯಿದಾಗ ಲೋಕಲ್ ಅಂದರ ಟ್ರೇನು.

ಹಂಗಾರ, ಹೋದ ಮಂಗಳವಾರ ಪಂತ ಪ್ರಧಾನರು ಠೀವಿಯೊಳಗ ಹೇಳಿದ ಲೋಕಲ್ ಅಂದರೆ ಏನು? ಅವರ ಭಾಷಣ ಇನ್ನೂ ಅರ್ಧ ಆಗಿರಲಿಲ್ಲ, ಆವಾಗನ ಐಟಿ ಸೆಲ್ಲಿನವರು ನೂರಾ ಎಂಟು ಮೀಮು ಮಾಡಿದರು. ಅವನ್ನು ನೀವು ಠೀವಿ ಪರದೆ ಬಿಟ್ಟು ನಿಮ್ಮ ಅಂಗೈಯೊಳಗಿನ ಪರದೆ ಮ್ಯಾಲೆ ಕಣ್ಣು ಹಾಕೋ ಕಿಂತ ಮುಂಚೆ

ಆ ಮೀಮುಗಳು ಒಂದು ಅಕ್ಷೋಷಿಣಿ ಸಂಖ್ಯೆಯೊಳಗ ಷೇರು, ಲೈಕು, ಕಮೆಂಟು ಆಗಿ ಹೋದವು.

ಅದರಾಗ ಒಂದು ಮೀಮು ʻಬಿ ವೋಕಲ್ ಅಬೌಟ್ ಲೋಕಲ್ʼ ಅಂತ ಇತ್ತು. ಅದನ್ನು ಪಂತ ಪ್ರಧಾನರು ಹೇಳಿರದಿದ್ದರೂ ಐಟಿ ಸೆಲ್ಲಿನವರು ಹೇಳಿದರು. ಒಮ್ಮೊಮ್ಮೆ ಇವರನ್ನ ನೋಡಿ ಅವರು ಮಾತಾಡತಾರೋ ಅಥವಾ ಅವರನ್ನು ನೋಡಿ ಇವರು ಮಾತಾಡತಾರೋ ಗೊತ್ತಾಗೋದಿಲ್ಲ. ಐಟಿ ಸೆಲ್ಲಿನವರ ಭಾಷಣ ಪಂತ ಪ್ರಧಾನರು ಬರೀತಾರೋ, ಅಥವಾ ಪಂತ ಪ್ರಧಾನರ ಭಾಷಣ ಐಟಿ ಸೆಲ್ಲಿನವರು ಬರೀತಾರೋ ಗೊತ್ತಿಲ್ಲ.

ಈ ಐಟಿ ಸೆಲ್ಲಿನವರು ಹಂಗ ಇದ್ದಾರ ಅಂದರ ನಮ್ಮ ನಾಯಕರು ನಮ್ಮದು ʻಸ್ವದೇಶಿ ಸಿದ್ಧಾಂತʼ ಅಂತ ಹೇಳಿದಾಗ ನಾವು ಚಪ್ಪಾಳೆ ಹೊಡೆಯೋ ಮಾಡತಾರ. ಸ್ವದೇಶಿ ಹಳೆಯದು, ಈಗ ಬೇಕಾಗಿರೋದು ʻಮೇಕ್ ಇನ್ ಇಂಡಿಯಾʼ ಅಂದಾಗುನೂ ಮಾಡತಾರ, ಕಡೀಕೆ ʻನಾವು ಆತ್ಮ ನಿರ್ಭರರಾಗಿ ಇರಬೇಕು. ನಾವೆಲ್ಲಾ ಲೋಕಲ್ ಕಡೆ ನೋಡಬೇಕುʼ ಅಂತ ಅಂದಾಗುನೂ ನಾವು ಅವರನ್ನ ಬೆಂಬಲಿಸೋಹಂಗ ಮಾಡತಾರ. ಅದು ಹೆಂಗ ಅಂದರ ತಲಿ ಅವರದು, ತಲಿ ಬುರಡಿ ನಮ್ಮದು. ಅಷ್ಟ ಆಗೋದರಾಗ ಬುರುಡಿ ಬಿಡೋರು ಯಾರು ಅಂತ ಗೊತ್ತಾಗೋದಿಲ್ಲ.

ಇರಲಿ, ಲೋಕಲ್ಲು ಅನ್ನೋದರ ಅರ್ಥ ʻಸ್ಥಳೀಯʼ, ʻಮಕಾಮಿʼ, ಅಥವಾ ʻತಾಲೂಕದಾರಿʼ ಅಂತ ಆಗತದ. ಹಂಗಂದರೇನು? ಹಂಗಂದರ ಸ್ಥಳೀಯರ ದುಡ್ಡು, ಅಧಿಕಾರ, ಅವರ ಜೀವಕ್ಕ ಸಂಬಂಧ ಪಟ್ಟ ನಿರ್ಧಾರಗಳನ್ನ ಅವರೇ ತೊಗೋಬೇಕು ಅನ್ನೋದು. ಅಧಿಕಾರ ಅನ್ನೋದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಹರಿದು ಬರಬೇಕು, ಆಡಳಿತದೊಳಗ ಸರಿಸಮನಾದ ಭಾಗಿದಾರಿ ಇರಬೇಕು. ಇದನ್ನ ಮಾಡಲಿಕ್ಕೆ ಈ ಸರಕಾರದವರು ತಯಾರು ಇದ್ದಾರೇನು?

ಮೊದಲಿಗೆ ಆ ಕಿತ್ತಳೆ ಪಕ್ಷದವರು ಒಕ್ಕೂಟ ವ್ಯವಸ್ಥೆಯೊಳಗ ನಂಬಿಕೆ ಇಟಗೋಬೇಕು. ಅದರ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು. ನೀತಿ ನಿರೂಪಣೆಯೊಳಗ, ಕಾರ್ಯಕ್ರಮ ಜಾರಿಯೊಳಗ ಭಾಗವಹಿಸಲಿಕ್ಕೆ ರಾಜ್ಯಗಳಿಗೆ ಅವಕಾಶ ಕೊಡಬೇಕು. ಇದನ್ನ ಇವರು ಈಗಂತೂ ಮಾಡಲಿಕ್ಕೆ ಹತ್ತಿಲ್ಲ. ಇವರು ಬಂದಾಗಿನಿಂದ ಕೇಂದ್ರೀಕರಣನ ಜಾಸ್ತಿ ಆಗೇದ ಹೊರತು ವಿಕೇಂದ್ರೀಕರಣ ಇಲ್ಲ. ಯಾರು ಏಕೋಪಾಧ್ಯಾಯ ಶಾಲೆ ರೀತಿಯೊಳಗ ಏಕ ವ್ಯಕ್ತಿ ಸರಕಾರ ನಡಸತಾರೋ, ಯಾರು ಇರೋಬರೋ ಅಧಿಕಾರನ್ನೆಲ್ಲಾ ಕೇಂದ್ರದ ಮಂತ್ರಿಮಂಡಲಕ್ಕಿಂತ ಪ್ರಧಾನಿ ಕಚೇರಿಯೊಂದರ ಒಳಗ ತುರುಕಿ ಬಿಟ್ಟಾರೋ, ಅವರು ಗ್ರಾಮ ಪಂಚಾಯಿತಿ ಮಟ್ಟಕ್ಕ ಅಧಿಕಾರ ವಿಕೇಂದ್ರೀಕರಣ ಮಾಡರಿ ಅಂದರ ಕೇಳತಾರ?

ಇನ್ನ ವಿಕೇಂದ್ರೀಕೃತ ಆರ್ಥಿಕತೆ. ಸರಳವಾಗಿ ಹೇಳಬೇಕಂದರ ಅದು ಹಳ್ಳೀ ಸಾಮಾನು ಹಳ್ಳಿಯೊಳಗ ಮಾರಾಟ ಆಗಬೇಕು, ಅನ್ನೂ ಸೂತ್ರದ ಮ್ಯಾಲೆ ನಿಂತಿರೋದು. ಇದರಾಗ ಇವರಿಗೆ ನಿಜವಾಗಿಯೂ ನಂಬಿಕೆ ಅದ ಏನು? ತಾವು ನೂರಾರು ವರ್ಷದಿಂದ ಹೇಳತಾ ಬಂದಿದ್ದ ಸ್ವದೇಶಿ ಸೂತ್ರವನ್ನು ಧಡಕ್ಕನೇ ಬದಲಾಯಿಸಿ ಮೇಕ್ ಇನ್ ಇಂಡಿಯಾ ತಂದವರು ಇವರು. ಭಾರತೀಯ ಕಂಪನಿಗೆ ಕಾರುಬಾರು-ಲಾಭ ಸಿಗಬೇಕು. ಅದಕ್ಕ ನೀವು ಕಾಲ್ಗೇಟು ಬಿಟ್ಟು ಉಪ್ಪಿನಿಂದ ಹಲ್ಲು ತಿಕ್ಕರಿ, ಹಾಲಿನಿಂದ ದಾಡಿ ಮಾಡಿಕೊಳ್ಳಿರಿ ಅಂತ ಹೇಳತಿದ್ದವರು ಏಕಾಏಕಿ ಯಾವ ದೇಶದ ಕಂಪನಿ ಆದರೇನು ಭಾರತದಾಗ ಕಾರಖಾನೆ ಹಾಕಿದರ ಸಾಕು ಅಂತ ಭಾರತದಲ್ಲಿ ತಯಾರಿಸಿ ಅಂತ ಫರಮಾನು ಕೊಟ್ಟರು. ಈಗ ಈ ಕೊರೋನಾದಾಗ ಅದು ಉಲ್ಟಾ ಹೊಡದಂಗ ಕಾಣೋದಕ್ಕ ಮತ್ತ ಲೋಕಲ್ಲಿಗೆ ಬಂದಾರ.

ಗ್ರಾಮ ಉದ್ಯೋಗ, ಖಾದಿ, ಹಳ್ಳಿಗಳ ಕಾಯಿಪಲ್ಯಾ ಸಂತಿ- ದನದ ಸಂತಿ, ಉತ್ಸವ- ಜಾತ್ರಿ- ತೇರು ಇವು ಈ ದೇಶದ ಆರ್ಥಿಕತೆಗೆ ಎಷ್ಟು ಕೊಡುಗೆ ಕೊಡತಿದ್ದವು ಅನ್ನೋದು ಎಲ್ಲಾರಿಗೂ ಮರತು ಹೋಗುವಂತೆ ಮಾಡಿ. ಬರೇ ಐಟಿ-ಬಿಟಿ, ಮೈನಿಂಗು, ಅದಾನಿ -ಅಂಬಾನಿ, ಮಾತ್ರ ಖರೇ. ಬ್ಯಾರೆ ಎಲ್ಲಾ ಸುಳ್ಳು ಅಂತ ನಮ್ಮನ್ನ ನಂಬಿಸಿದರು.

ಇವರು ಲೋಕಲ್ಲಿನ ಬಗ್ಗೆ ವೋಕಲ್ಲು ಆಗೋದನ್ನ ನಂಬಲಿಕ್ಕೆ ಸಾಧ್ಯ ಇಲ್ಲ.

ಹಂಗಾದರ ಇಷ್ಟು ದಿವಸ ಜಾಗತಿಕ ಮಟ್ಟದ ಯೋಚನೆ ಇಟಗೋರಿ, ಇಡೀ ಜಗತ್ತಿನ ಮಾರುಕಟ್ಟೆಯೊಳಗ ಸ್ಪರ್ಧೆ ಮಾಡೋವಂಥಾ ಉತ್ಪನ್ನ ತಯಾರು ಮಾಡ್ರಿ, ನಿಮ್ಮ ಐಟಿ, ಬಿಟಿ ಸೇವೆ ಹೆಂಗ ಇರಬೇಕು ಅಂದರ ಅದು ವಿಶ್ವದ ಇತರ ದೇಶಗಳನ್ನ ಸೋಲಿಸಿ ಮುಂಚೂಣಿಗೆ ಬರಬೇಕು, ಅಂತ ಭಾಷಣ ಕುಟ್ಟತಿದ್ದರಲ್ಲಾ ಅದು ಏನಾತು?

ʻʻಸ್ವಾತಂತ್ರ‍್ಯ ಅಂದರ ವಿಕೇಂದ್ರೀಕರಣ. ವಿಕೇಂದ್ರೀಕರಣ ಇಲ್ಲದಿದ್ದರೆ ಸ್ವಾತಂತ್ರ‍್ಯಕ್ಕೆ ಅರ್ಥ ಇಲ್ಲ.

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಉಳಿಯದಿದ್ದರೆ ಈ ದೇಶ ಉಳಿಯೋದಿಲ್ಲʼʼ ಅಂತ ಹಿಂದೊಮ್ಮೆ ಇನ್ನೊಬ್ಬ ಗುಜರಾತಿ ನಾಯಕ ಹೇಳಿದ್ದರು. ಈ ದುರಿತ ಕಾಲದಾಗ ನಾವು ಆ ವಿಚಾರಗಳನ್ನು ನಮ್ಮ ಮುಂದ ಇಟ್ಟ ಮೋಹನದಾಸ ಗಾಂಧಿ ಅವರನ್ನು ನೆನಪು ಮಾಡಕೊಳ್ಳೋದು ನಮಗ ಸ್ವಲ್ಪವಾದರೂ ಸಮಾಧಾನ ತರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...