Homeಮುಖಪುಟಮೋದಿಯವರು ಲೋಕಲ್‌ ವೋಕಲ್‌ ಭಾಷಣ: ಅವರು ಯಾವ ಲೋಕಲ್ ತಾಲೂಕದಾರಿ ಬಗ್ಗೆ ಮಾತಾಡತಾರ?

ಮೋದಿಯವರು ಲೋಕಲ್‌ ವೋಕಲ್‌ ಭಾಷಣ: ಅವರು ಯಾವ ಲೋಕಲ್ ತಾಲೂಕದಾರಿ ಬಗ್ಗೆ ಮಾತಾಡತಾರ?

- Advertisement -
- Advertisement -

ಈ ದೇಶದಾಗ ಲೋಕಲ್ ಅನ್ನೋ ಶಬ್ದಕ್ಕ ಬ್ಯಾರೆ ಬ್ಯಾರೆ ಕಡೆ ಬ್ಯಾರೆ ಬ್ಯಾರೆ ಅರ್ಥ ಅದಾವು. ಹಾವೇರಿ ಒಳಗ ಲೋಕಲ್ ಅಂದರ ದ್ಯಾಮನೂರು ಮೆಣಸಿನಕಾಯಿ, ಗುಲಬರ್ಗಾದಾಗ ಲೋಕಲ್ ಅಂದರ ಸಣ್ಣ ತೊಗರಿ ಬ್ಯಾಳಿ, ಮೈಸೂರಿನ್ಯಾಗ ಲೋಕಲ್ ಅಂದರ ಬನ್ನೂರು ಕುರಿ, ಇನ್ನ ಮುಂಬಯಿದಾಗ ಲೋಕಲ್ ಅಂದರ ಟ್ರೇನು.

ಹಂಗಾರ, ಹೋದ ಮಂಗಳವಾರ ಪಂತ ಪ್ರಧಾನರು ಠೀವಿಯೊಳಗ ಹೇಳಿದ ಲೋಕಲ್ ಅಂದರೆ ಏನು? ಅವರ ಭಾಷಣ ಇನ್ನೂ ಅರ್ಧ ಆಗಿರಲಿಲ್ಲ, ಆವಾಗನ ಐಟಿ ಸೆಲ್ಲಿನವರು ನೂರಾ ಎಂಟು ಮೀಮು ಮಾಡಿದರು. ಅವನ್ನು ನೀವು ಠೀವಿ ಪರದೆ ಬಿಟ್ಟು ನಿಮ್ಮ ಅಂಗೈಯೊಳಗಿನ ಪರದೆ ಮ್ಯಾಲೆ ಕಣ್ಣು ಹಾಕೋ ಕಿಂತ ಮುಂಚೆ

ಆ ಮೀಮುಗಳು ಒಂದು ಅಕ್ಷೋಷಿಣಿ ಸಂಖ್ಯೆಯೊಳಗ ಷೇರು, ಲೈಕು, ಕಮೆಂಟು ಆಗಿ ಹೋದವು.

ಅದರಾಗ ಒಂದು ಮೀಮು ʻಬಿ ವೋಕಲ್ ಅಬೌಟ್ ಲೋಕಲ್ʼ ಅಂತ ಇತ್ತು. ಅದನ್ನು ಪಂತ ಪ್ರಧಾನರು ಹೇಳಿರದಿದ್ದರೂ ಐಟಿ ಸೆಲ್ಲಿನವರು ಹೇಳಿದರು. ಒಮ್ಮೊಮ್ಮೆ ಇವರನ್ನ ನೋಡಿ ಅವರು ಮಾತಾಡತಾರೋ ಅಥವಾ ಅವರನ್ನು ನೋಡಿ ಇವರು ಮಾತಾಡತಾರೋ ಗೊತ್ತಾಗೋದಿಲ್ಲ. ಐಟಿ ಸೆಲ್ಲಿನವರ ಭಾಷಣ ಪಂತ ಪ್ರಧಾನರು ಬರೀತಾರೋ, ಅಥವಾ ಪಂತ ಪ್ರಧಾನರ ಭಾಷಣ ಐಟಿ ಸೆಲ್ಲಿನವರು ಬರೀತಾರೋ ಗೊತ್ತಿಲ್ಲ.

ಈ ಐಟಿ ಸೆಲ್ಲಿನವರು ಹಂಗ ಇದ್ದಾರ ಅಂದರ ನಮ್ಮ ನಾಯಕರು ನಮ್ಮದು ʻಸ್ವದೇಶಿ ಸಿದ್ಧಾಂತʼ ಅಂತ ಹೇಳಿದಾಗ ನಾವು ಚಪ್ಪಾಳೆ ಹೊಡೆಯೋ ಮಾಡತಾರ. ಸ್ವದೇಶಿ ಹಳೆಯದು, ಈಗ ಬೇಕಾಗಿರೋದು ʻಮೇಕ್ ಇನ್ ಇಂಡಿಯಾʼ ಅಂದಾಗುನೂ ಮಾಡತಾರ, ಕಡೀಕೆ ʻನಾವು ಆತ್ಮ ನಿರ್ಭರರಾಗಿ ಇರಬೇಕು. ನಾವೆಲ್ಲಾ ಲೋಕಲ್ ಕಡೆ ನೋಡಬೇಕುʼ ಅಂತ ಅಂದಾಗುನೂ ನಾವು ಅವರನ್ನ ಬೆಂಬಲಿಸೋಹಂಗ ಮಾಡತಾರ. ಅದು ಹೆಂಗ ಅಂದರ ತಲಿ ಅವರದು, ತಲಿ ಬುರಡಿ ನಮ್ಮದು. ಅಷ್ಟ ಆಗೋದರಾಗ ಬುರುಡಿ ಬಿಡೋರು ಯಾರು ಅಂತ ಗೊತ್ತಾಗೋದಿಲ್ಲ.

ಇರಲಿ, ಲೋಕಲ್ಲು ಅನ್ನೋದರ ಅರ್ಥ ʻಸ್ಥಳೀಯʼ, ʻಮಕಾಮಿʼ, ಅಥವಾ ʻತಾಲೂಕದಾರಿʼ ಅಂತ ಆಗತದ. ಹಂಗಂದರೇನು? ಹಂಗಂದರ ಸ್ಥಳೀಯರ ದುಡ್ಡು, ಅಧಿಕಾರ, ಅವರ ಜೀವಕ್ಕ ಸಂಬಂಧ ಪಟ್ಟ ನಿರ್ಧಾರಗಳನ್ನ ಅವರೇ ತೊಗೋಬೇಕು ಅನ್ನೋದು. ಅಧಿಕಾರ ಅನ್ನೋದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಹರಿದು ಬರಬೇಕು, ಆಡಳಿತದೊಳಗ ಸರಿಸಮನಾದ ಭಾಗಿದಾರಿ ಇರಬೇಕು. ಇದನ್ನ ಮಾಡಲಿಕ್ಕೆ ಈ ಸರಕಾರದವರು ತಯಾರು ಇದ್ದಾರೇನು?

ಮೊದಲಿಗೆ ಆ ಕಿತ್ತಳೆ ಪಕ್ಷದವರು ಒಕ್ಕೂಟ ವ್ಯವಸ್ಥೆಯೊಳಗ ನಂಬಿಕೆ ಇಟಗೋಬೇಕು. ಅದರ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು. ನೀತಿ ನಿರೂಪಣೆಯೊಳಗ, ಕಾರ್ಯಕ್ರಮ ಜಾರಿಯೊಳಗ ಭಾಗವಹಿಸಲಿಕ್ಕೆ ರಾಜ್ಯಗಳಿಗೆ ಅವಕಾಶ ಕೊಡಬೇಕು. ಇದನ್ನ ಇವರು ಈಗಂತೂ ಮಾಡಲಿಕ್ಕೆ ಹತ್ತಿಲ್ಲ. ಇವರು ಬಂದಾಗಿನಿಂದ ಕೇಂದ್ರೀಕರಣನ ಜಾಸ್ತಿ ಆಗೇದ ಹೊರತು ವಿಕೇಂದ್ರೀಕರಣ ಇಲ್ಲ. ಯಾರು ಏಕೋಪಾಧ್ಯಾಯ ಶಾಲೆ ರೀತಿಯೊಳಗ ಏಕ ವ್ಯಕ್ತಿ ಸರಕಾರ ನಡಸತಾರೋ, ಯಾರು ಇರೋಬರೋ ಅಧಿಕಾರನ್ನೆಲ್ಲಾ ಕೇಂದ್ರದ ಮಂತ್ರಿಮಂಡಲಕ್ಕಿಂತ ಪ್ರಧಾನಿ ಕಚೇರಿಯೊಂದರ ಒಳಗ ತುರುಕಿ ಬಿಟ್ಟಾರೋ, ಅವರು ಗ್ರಾಮ ಪಂಚಾಯಿತಿ ಮಟ್ಟಕ್ಕ ಅಧಿಕಾರ ವಿಕೇಂದ್ರೀಕರಣ ಮಾಡರಿ ಅಂದರ ಕೇಳತಾರ?

ಇನ್ನ ವಿಕೇಂದ್ರೀಕೃತ ಆರ್ಥಿಕತೆ. ಸರಳವಾಗಿ ಹೇಳಬೇಕಂದರ ಅದು ಹಳ್ಳೀ ಸಾಮಾನು ಹಳ್ಳಿಯೊಳಗ ಮಾರಾಟ ಆಗಬೇಕು, ಅನ್ನೂ ಸೂತ್ರದ ಮ್ಯಾಲೆ ನಿಂತಿರೋದು. ಇದರಾಗ ಇವರಿಗೆ ನಿಜವಾಗಿಯೂ ನಂಬಿಕೆ ಅದ ಏನು? ತಾವು ನೂರಾರು ವರ್ಷದಿಂದ ಹೇಳತಾ ಬಂದಿದ್ದ ಸ್ವದೇಶಿ ಸೂತ್ರವನ್ನು ಧಡಕ್ಕನೇ ಬದಲಾಯಿಸಿ ಮೇಕ್ ಇನ್ ಇಂಡಿಯಾ ತಂದವರು ಇವರು. ಭಾರತೀಯ ಕಂಪನಿಗೆ ಕಾರುಬಾರು-ಲಾಭ ಸಿಗಬೇಕು. ಅದಕ್ಕ ನೀವು ಕಾಲ್ಗೇಟು ಬಿಟ್ಟು ಉಪ್ಪಿನಿಂದ ಹಲ್ಲು ತಿಕ್ಕರಿ, ಹಾಲಿನಿಂದ ದಾಡಿ ಮಾಡಿಕೊಳ್ಳಿರಿ ಅಂತ ಹೇಳತಿದ್ದವರು ಏಕಾಏಕಿ ಯಾವ ದೇಶದ ಕಂಪನಿ ಆದರೇನು ಭಾರತದಾಗ ಕಾರಖಾನೆ ಹಾಕಿದರ ಸಾಕು ಅಂತ ಭಾರತದಲ್ಲಿ ತಯಾರಿಸಿ ಅಂತ ಫರಮಾನು ಕೊಟ್ಟರು. ಈಗ ಈ ಕೊರೋನಾದಾಗ ಅದು ಉಲ್ಟಾ ಹೊಡದಂಗ ಕಾಣೋದಕ್ಕ ಮತ್ತ ಲೋಕಲ್ಲಿಗೆ ಬಂದಾರ.

ಗ್ರಾಮ ಉದ್ಯೋಗ, ಖಾದಿ, ಹಳ್ಳಿಗಳ ಕಾಯಿಪಲ್ಯಾ ಸಂತಿ- ದನದ ಸಂತಿ, ಉತ್ಸವ- ಜಾತ್ರಿ- ತೇರು ಇವು ಈ ದೇಶದ ಆರ್ಥಿಕತೆಗೆ ಎಷ್ಟು ಕೊಡುಗೆ ಕೊಡತಿದ್ದವು ಅನ್ನೋದು ಎಲ್ಲಾರಿಗೂ ಮರತು ಹೋಗುವಂತೆ ಮಾಡಿ. ಬರೇ ಐಟಿ-ಬಿಟಿ, ಮೈನಿಂಗು, ಅದಾನಿ -ಅಂಬಾನಿ, ಮಾತ್ರ ಖರೇ. ಬ್ಯಾರೆ ಎಲ್ಲಾ ಸುಳ್ಳು ಅಂತ ನಮ್ಮನ್ನ ನಂಬಿಸಿದರು.

ಇವರು ಲೋಕಲ್ಲಿನ ಬಗ್ಗೆ ವೋಕಲ್ಲು ಆಗೋದನ್ನ ನಂಬಲಿಕ್ಕೆ ಸಾಧ್ಯ ಇಲ್ಲ.

ಹಂಗಾದರ ಇಷ್ಟು ದಿವಸ ಜಾಗತಿಕ ಮಟ್ಟದ ಯೋಚನೆ ಇಟಗೋರಿ, ಇಡೀ ಜಗತ್ತಿನ ಮಾರುಕಟ್ಟೆಯೊಳಗ ಸ್ಪರ್ಧೆ ಮಾಡೋವಂಥಾ ಉತ್ಪನ್ನ ತಯಾರು ಮಾಡ್ರಿ, ನಿಮ್ಮ ಐಟಿ, ಬಿಟಿ ಸೇವೆ ಹೆಂಗ ಇರಬೇಕು ಅಂದರ ಅದು ವಿಶ್ವದ ಇತರ ದೇಶಗಳನ್ನ ಸೋಲಿಸಿ ಮುಂಚೂಣಿಗೆ ಬರಬೇಕು, ಅಂತ ಭಾಷಣ ಕುಟ್ಟತಿದ್ದರಲ್ಲಾ ಅದು ಏನಾತು?

ʻʻಸ್ವಾತಂತ್ರ‍್ಯ ಅಂದರ ವಿಕೇಂದ್ರೀಕರಣ. ವಿಕೇಂದ್ರೀಕರಣ ಇಲ್ಲದಿದ್ದರೆ ಸ್ವಾತಂತ್ರ‍್ಯಕ್ಕೆ ಅರ್ಥ ಇಲ್ಲ.

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಉಳಿಯದಿದ್ದರೆ ಈ ದೇಶ ಉಳಿಯೋದಿಲ್ಲʼʼ ಅಂತ ಹಿಂದೊಮ್ಮೆ ಇನ್ನೊಬ್ಬ ಗುಜರಾತಿ ನಾಯಕ ಹೇಳಿದ್ದರು. ಈ ದುರಿತ ಕಾಲದಾಗ ನಾವು ಆ ವಿಚಾರಗಳನ್ನು ನಮ್ಮ ಮುಂದ ಇಟ್ಟ ಮೋಹನದಾಸ ಗಾಂಧಿ ಅವರನ್ನು ನೆನಪು ಮಾಡಕೊಳ್ಳೋದು ನಮಗ ಸ್ವಲ್ಪವಾದರೂ ಸಮಾಧಾನ ತರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...