Homeಗೌರಿ ಕಣ್ಣೋಟಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರಿಸುತ್ತದೆ.

- Advertisement -
- Advertisement -

ಜೂಲಿಯಾ ಗಿಲ್ಲಾರ್ಡ್ ಆಸ್ಟ್ರೇಲಿಯಾ ದೇಶದ ಪ್ರಥಮ ಮಹಿಳಾ ಪ್ರಧಾನಿ. ವಿದ್ಯಾರ್ಥಿನಿ ಆಗಿದ್ದಾಗಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ ಜೂಲಿಯಾ ಸಮಾಜವಾದದಲ್ಲಿ ನಂಬಿಕೆ ಇಟ್ಟವಳು. ಆ ಕಾರಣಕ್ಕೆ ಆಸ್ಟ್ರೇಲಿಯಾದ ಎಡಪಂಥೀಯ ಒಲವನ್ನು ಹೊಂದಿರುವ ಲೇಬರ್ ಪಾರ್ಟಿಯನ್ನು ಸೇರಿಕೊಂಡು ಒಂದೊAದೇ ಮೆಟ್ಟಿಲುಗಳನ್ನು ಏರುತ್ತಾ ಹೋದರು. ಹಿಂದಿನ ಪ್ರಧಾನಿ ಕೆವಿನ್ ರುಡ್ ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಬೆಂಬಲವನ್ನು ಕಳೆದುಕೊಂಡಾಗ ಜೂಲಿಯಾ ಅವರನ್ನು ಪ್ರಧಾನಿಯಾಗಿ ಆ ಪಕ್ಷದ ಸಂಸದರು ಮನಸಿಲ್ಲದ ಮನಸ್ಸಿನೊಂದಿಗೆ ಆಯ್ಕೆ ಮಾಡಿದ್ದರು. ಅವರ ಹಿಂಜರಿಕೆಗೆ ಕಾರಣ ಜೂಲಿಯಾ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಳನ್ನು ಹೊಂದಿದ್ದಾರೋ ಇಲ್ಲವೂ ಎಂಬುದಾಗಿರಲಿಲ್ಲ. ಬದಲಾಗಿ ಈ ಮಹಿಳೆಗಿಂತ ಸೂಕ್ತವಾದ ಪುರುಷ ತಮ್ಮ ಮುಂದೆ ಇಲ್ಲವಲ್ಲ ಎಂಬ ಲಿಂಗ ತಾರತಮ್ಯ.

ಜೂಲಿಯಾ ಅವರಿಗೆ ಈಗ 51 ವರ್ಷ ವಯಸ್ಸು. ಮದುವೆ ಆಗಿರದ ಆಕೆ ಯಾವ ಮುಚ್ಚುಮರೆ ಇಲ್ಲದೆ ತನ್ನ ಪುರುಷ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಇತರೆ ದೇಶಗಳ ಮಹಿಳೆಯರಂತೆ ಜೂಲಿಯಾ ಕೂಡ ತನ್ನ ವೃತ್ತಿ ಬದುಕಿನಲ್ಲಿ ಲಿಂಗಬೇಧವನ್ನು ಎದುರಿಸುತ್ತಲೇ ಮುಂದೆ ಬಂದವರು. ಈಗ ಅವರು ಪ್ರಧಾನಿ ಆಗಿದ್ದರೂ ಆಕೆ ಮಹಿಳೆ ಆಗಿರುವುದರಿಂದಲೇ ಆಕೆಯನ್ನು ಟೀಕೆ ಮಾಡುವವರಿಗೆ ಲೆಕ್ಕವಿಲ್ಲ. ಜೂಲಿಯಾ ಅವರ ಆತ್ಮಸ್ಥೈರ್ಯವನ್ನು ಮುರಿದು ಹಾಕಲು ಆಕೆಯ ಟೀಕಾಕಾರರು ಮಾಡಿರುವ ಪ್ರಯತ್ನಗಳಲ್ಲಿ ಹಲವು ಹೇಸಿಗೆ ಹುಟ್ಟಿಸುವಂತಹವು. ಉದಾಹರಣೆಗೆ ಜೂಲಿಯಾ ಅವರು ಮಕ್ಕಳನ್ನು ಹೆತ್ತಿಲ್ಲ. ಅದನ್ನೇ ಅಸ್ತ್ರವಾಗಿಸಿಕೊಂಡು ಕೆಲವರು ಅವರನ್ನು “ಬೇಕಂತಲೇ ಬಂಜೆ ಆಗಿರುವವಳು’’ ಎಂದು ಜರಿಯುವ ಮಟ್ಟಕ್ಕೆ ಹೋಗಿದ್ದೂ ಉಂಟು. ಜೊತೆಗೆ “Ditch the Bitch’’ (ಈ ಹಾದರಗಿತ್ತಿಯನ್ನು ತೊಲಗಿಸಿ) ಎಂಬ ಕರೆ ಕೊಟ್ಟು ಆಕೆಯ ವಿರುದ್ಧ ಚುನಾವಣಾ ಪ್ರಚಾರವನ್ನೂ ಮಾಡಲಾಗಿತ್ತು.

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರುವುದರಿಂದ ಅವರ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇನೆ.

ನಾನು ಪ್ರಧಾನಿಯಾಗಿ ಈ ಕುರ್ಚಿಯಲ್ಲಿ ಕೂರುವ ನನ್ನ ಎದುರು ವಿರೋಧ ಪಕ್ಷದ ನಾಯಕರಾಗಿ ಕೂರುವ ಈ ಮನುಷ್ಯ ಮೊದಲಿನಿಂದಲೂ ಸ್ತ್ರೀದ್ವೇಷ ನೀತಿಯನ್ನೇ ಪ್ರದರ್ಶಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಒಮ್ಮೆ ಈ ಸಂಸತ್ತಿನಲ್ಲಿ ಮಾತನಾಡುತ್ತಾ ನಾನು ’ಗೌರವಾರ್ಹ ಮಹಿಳೆ’ಯಂತೆ ವರ್ತಿಸಬೇಕು ಎಂದಿದ್ದರು. ನನ್ನ ಜಾಗದಲ್ಲಿ ಪುರುಷನೊಬ್ಬ ಕೂತಿದ್ದರೆ ಆತನ ಬಗ್ಗೆ ಇಂತಹ ಪದಗಳನ್ನು ಉಪಯೋಗಿಸುತ್ತಿದ್ದರೆ? ಇಲ್ಲ. ವಿರೋಧ ಪಕ್ಷದ ನಾಯಕರು ಒಮ್ಮೆ ಸಂಸತ್ತಿನ ಹೊರಗಡೆ ನನ್ನ ವಿರುದ್ಧ ’Ditch the Bitch’ ಎಂದು ಬರೆಯಲಾಗಿದ್ದ ಪೋಸ್ಟರ್ ಪಕ್ಕ ನಿಂತರು. ಹಾಗೆಯೇ ಇನ್ನೊಮ್ಮೆ ನನ್ನನ್ನು ಯಾವುದೋ ಪುರಷನ ಹಾದರಗಿತ್ತಿ ಎಂದು ಬಣ್ಣಿಸಿದ್ದ ಪೋಸ್ಟರ್ ಪಕ್ಕ ನಿಂತರು. ಅದು ಮಹಿಳಾ ದ್ವೇಷ ನಿಲುವಲ್ಲದೆ ಇನ್ನೇನು? ಪ್ರತಿದಿನ, ಪ್ರತಿಹಂತದಲ್ಲಿ, ವಿವಿಧ ತರಹದಲ್ಲಿ ನಾನು ಈ ವ್ಯಕ್ತಿಯಿಂದ ಸ್ತ್ರೀದ್ವೇಷಿ ನಿಲುವನ್ನು, ಲಿಂಗಬೇಧ ತಾರತಮ್ಯವನ್ನು ಎದುರಿಸುತ್ತಿದ್ದೇನೆ.

ಇಂತಹ ಮನುಷ್ಯ ಈ ಸಂಸತನ್ನು ಪ್ರವೇಶಿಸಿ ಆಸ್ಟ್ರೇಲಿಯಾದ ಮಹಿಳೆಯರಲ್ಲಿ ಕ್ಷಮೆ ಕೇಳಿಲ್ಲ. ನನ್ನನ್ನು ಪದೇಪದೇ ಅವಮಾನಿಸಿದ್ದಕ್ಕೆ ನನಗೆ ಸಾರಿ ಹೇಳಿಲ್ಲ. ಆದರೆ ಇವತ್ತು ರಾಜಕೀಯ ದುರುದ್ದೇಶದಿಂದ ಮಹಿಳೆಯರ ಪರ ನಿಂತಿರುವುದಾಗಿ ಪೋಸು ಕೊಡುತ್ತಿದ್ದಾರೆ. ಇಂತಹ ಇಬ್ಬಂದಿ ನೀತಿಯನ್ನು ಯಾರೂ ಸಹಿಸಕೂಡದು.

ಆಕೆಯ ಭಾಷಣ ನನಗೆ ಇಷ್ಟವಾಗಿದ್ದರಿಂದ ಅದರ ಮುಖ್ಯ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ….

– ಗೌರಿ ಲಂಕೇಶ್

ಅಕ್ಟೋಬರ್ 31, 2012


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...