Homeಕರ್ನಾಟಕಉತ್ತರ ಕನ್ನಡದಲ್ಲಿ ಮೀಸಲಾತಿ ಮಸಲತ್ತು! ನೈಜ ಹಿಂದುಳಿದವರಿಗೆ ಸಾಮಾಜಿಕ ಅನ್ಯಾಯ!!

ಉತ್ತರ ಕನ್ನಡದಲ್ಲಿ ಮೀಸಲಾತಿ ಮಸಲತ್ತು! ನೈಜ ಹಿಂದುಳಿದವರಿಗೆ ಸಾಮಾಜಿಕ ಅನ್ಯಾಯ!!

- Advertisement -
- Advertisement -

ವಿಶಿಷ್ಟ ಭೌಗೋಳಿಕ ಪರಿಸರ, ವಿಭಿನ್ನ ಪಾರಂಪರಿಕ ಸಂಸ್ಕೃತಿಯ ಉತ್ತರ ಕನ್ನಡವು ರಾಜ್ಯದಲ್ಲಿ ಅತಿಹೆಚ್ಚು ಹಿಂದುಳಿದವರಿರುವ ಜಿಲ್ಲೆ. ಪ್ರಭಾವಿ ಬಹುಸಂಖ್ಯಾತ ಲಿಂಗಾಯತ ಸಮುದಾಯ ಸಣ್ಣ ಪ್ರಮಾಣದಲ್ಲಿರುವ ಜಿಲ್ಲೆಯಲ್ಲಿ ಕುರುಬರು ತೀರಾ ವಿರಳ. ಮತ್ತೊಂದು ಬಲಾಢ್ಯ ಸಮುದಾಯವಾದ ಒಕ್ಕಲಿಗರು ಇಲ್ಲಿಲ್ಲ. ಶೇ.10ರಷ್ಟಿರುವ ಬ್ರಾಹ್ಮಣರಲ್ಲಿ ಹವ್ಯಕ ಬ್ರಾಹ್ಮಣರ ಪಾಲೇ ದೊಡ್ಡದು. ಶೇ.10ರಷ್ಟು ಅಲ್ಪಸಂಖ್ಯಾತರಿದ್ದರೆ, ದಲಿತರಿರುವುದು ಬರೀ 5 ಪ್ರತಿಶತ. ಮುಕ್ಕಾಲು ಪಾಲು ಹಿಂದುಳಿದವರೇ ತುಂಬಿರುವ ಉತ್ತರ ಕನ್ನಡದಲ್ಲಿ ಶೇ.90 ಮಂದಿ ಜಾತಿ ಆಧಾರಿತ ಮೀಸಲಾತಿ ಪಡೆಯುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರು ಈ ಜಿಲ್ಲೆಯ ಮೂಲನಿವಾಸಿಗಳು. ನಿಜ ಅರ್ಥದಲ್ಲಿ ಶೋಷಿತರು ಮತ್ತು ತೀರಾ ಹಿಂದುಳಿದವರು. ವಿಶಿಷ್ಟ ಜಾನಪದ ರೀತಿ-ರಿವಾಜು, ಉಡುಗೆ-ತೊಡುಗೆಯ ಈ ಜನಜಾತಿ ಇತ್ತೀಚೆಗಷ್ಟೇ ನಾಗರಿಕತೆಗೆ ತೆರೆದುಕೊಳ್ಳುತ್ತಿದೆ. ದುರಂತ ಎಂದರೆ ಧ್ವನಿ ಇಲ್ಲದ ಈ ಮಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಜಾರಿಗೊಳಿಸಿರುವ ಮೀಸಲಾತಿ ನೀತಿಯಲ್ಲಿ ಘನಘೋರ ಅನ್ಯಾಯ-ವಂಚನೆ ಆಗುತ್ತಿದೆ. 1970ರ ಹಾವನೂರು ವರದಿಯಲ್ಲಿ ಹಾಲಕ್ಕಿ ಒಕ್ಕಲಿಗರನ್ನು ಅತಿ ಹಿಂದುಳಿದ ಜಾತಿಗಳ ಪಟ್ಟಿ ‘ಬಿಸಿಟಿ’ಯಲ್ಲಿ ಸೇರಿಸಲಾಗಿತ್ತು. ಆದರೆ ಇದೇ ಪಟ್ಟಿಯಲ್ಲಿ ಪ್ರಬಲ ‘ನಾಡವರು’ ಇದ್ದರು. ಹಾಗಾಗಿ ಹಾಲಕ್ಕಿ ಮತ್ತು ಮೀನುಗಾರರಂಥ ದಮನಿತ ಸಮುದಾಯಕ್ಕೆ ದೊಡ್ಡ ಮೋಸವಾಯಿತು!!

1986ರಲ್ಲಿ ವೆಂಕಟಸ್ವಾಮಿ ವರದಿ ಬಂದಾಗ ಜಿಲ್ಲೆಯ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಹೆಗಡೆಜೀ ಒತ್ತಾಸೆಯಿಂದ ಹಾಲಕ್ಕಿ ಒಕ್ಕಲಿಗರು ಮತ್ತು ಗ್ರಾಮ ಒಕ್ಕಲಿಗರು Cat-I ಮೀಸಲಾತಿ ಪಟ್ಟಿಗೆ ಸೇರಿಸಲ್ಪಟ್ಟಿದ್ದರು. ಆದರೆ ಸಾಮಾಜಿಕ-ಶೈಕ್ಷಣಿಕ ಹಿಂಜರಿತದ ಈ ಮುಗ್ಧ ಸಮುದಾಯಕ್ಕೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಲಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ಹಾಲಕ್ಕಿಗಳು ತಮ್ಮನ್ನು ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸೇರಿಸುವಂತೆ ಮನವಿ ಮಾಡುತ್ತಿದ್ದಾರೆ. ಬಿನ್ನವತ್ತಳೆ, ದಿಲ್ಲಿಯಾತ್ರೆ, ಸಮ್ಮೇಳನ, ನಿಯೋಗ ಹೊರಡುವುದೆಲ್ಲಾ ನಡೆಯುತ್ತಲೇ ಇದೆ. ಈ ಬುಡಕಟ್ಟು ಜನಜಾತಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಲು ಸಕಲ ಅರ್ಹತೆ ಹೊಂದಿದ್ದರೂ ಜಿಲ್ಲೆಯ ಸುದೀರ್ಘ ಕಾಲದ ಧುರೀಣರಾದ ಸಂಸದ ಅನಂತಕುಮಾರ್ ಹೆಗಡೆ, ಮಾಜಿ ಮಂತ್ರಿ ದೇಶಪಾಂಡೆಗಳ ಇಚ್ಛಾಶಕ್ತಿಯ ಕೊರತೆಯಿಂದ ಇದು ಕೈಗೂಡುತ್ತಿಲ್ಲ. ಹಾಲಕ್ಕಿಗಳು ಎಸ್‍ಟಿ ಮೀಸಲಾತಿ ಪಡೆದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಮುಂದೊಂದು ದಿನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುವ ದೂ(ದು)ರಾಲೋಚನೆಯಿಂದ ವೈದಿಕ ಮುಂದಾಳುಗಳು ಅಡ್ಡಗಾಲು ಹಾಕಿ ಕುಂತಿದ್ದಾರೆಂಬ ವರ್ತಮಾನವೂ ಜಿಲ್ಲೆಯಲ್ಲಿ ತೇಲಾಡುತ್ತಿದೆ.

ರಾಜ್ಯದ ಹಿಂದುಳಿದ ವರ್ಗದ ಪಟ್ಟಿಯ II(a)ಗೆ ಸೇರ್ಪಡೆಯಾದರೆ ಆ ಸಮುದಾಯದ ಭಾಗ್ಯದ ಬಾಗಿಲು ತೆರೆದಂತೆಯೇ ಎಂಬ ಭಾವನೆಯಿದೆ. ಹಾಗಾಗಿ ಸದ್ರಿ ಪಟ್ಟಿ ಸೇರಲು ರಾಜ್ಯದಲ್ಲಿ ದೊಡ್ಡ ಪೈಪೋಟಿಯೇ ನಡೆದಿದೆ. ಶೇ.15 ಮೀಸಲಾತಿಯಿರುವ ಈ II(a)ದಲ್ಲಿ ಉತ್ತರ ಕನ್ನಡದಲ್ಲಿ ಮುಂದುವರಿಕೆಯಲ್ಲಿ ಹೆಚ್ಚು-ಕಮ್ಮಿ ಬ್ರಾಹ್ಮಣರಿಗೆ ಸರಿಸಮನಾಗಿರುವ ‘ನಾಡವರು’ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಹಾವನೂರು ವರದಿಯಲ್ಲಿ ಈ ಸಬಲ ನಾಡವ ವರ್ಗ ಅತ್ಯಂತ ಹಿಂದುಳಿದ ಜಾತಿಗಳ ಪಟ್ಟಿ (ಬಿಸಿಟಿ)ಯಲ್ಲಿತ್ತು. ಅಂದು ಹಾವನೂರರ ಬಳಿ ಜೂನಿಯರ್ ಆಗಿದ್ದ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್‍ರ ಸ್ವಜಾತಿ ವ್ಯಾಮೋಹದ ಕೈಚಳಕದಿಂದ ಇದಾಯಿತೇ ಎಂಬ ಪ್ರಶ್ನೆ ಹಲವರಲ್ಲಿ ಉಳಿದುಬಿಟ್ಟಿದೆ. ಇದು ನಾಡವರಿಗೆ ವರವಾದರೆ ಜಿಲ್ಲೆಯ ಅರ್ಹ ಹಿಂದುಳಿದ ಜಾತಿಗಳಿಗೆ ದೊಡ್ಡ ಶಾಪವಾಗಿಬಿಟ್ಟಿತ್ತು!! ಸಾಮಾಜಿಕವಾಗಿ ಹಿಂದುಳಿದಿದ್ದ ದೀವರನ್ನು (ನಾಮಧಾರಿಗಳು) ಹಾವನೂರು ವರದಿಯಲ್ಲಿ ಮುಂದುವರಿದ ಹಿಂದುಳಿದವರ ಪಟ್ಟಿ(ಬಿಸಿಎಂ)ಗೆ ಸೇರಿಸಲಾಗಿತ್ತು. ಬಲಾಢ್ಯ ನಾಡವರೊಂದಿಗೆ ಸ್ಫರ್ಧಿಸಲಾಗದೆ ದೀವರು, ಹಾಲಕ್ಕಿ, ಅಂಬಿಗ, ಹರಿಕಾಂಡ… ಮುಂತಾದ ಹಿಂದುಳಿದವರು ಮತ್ತಷ್ಟು ಹಿಂದಕ್ಕೆಳೆಯಲ್ಪಟ್ಟರು!! ಮೀಸಲಾತಿ ಸಿಕ್ಕರೂ ಸಿಗದಂತಾಯಿತು. ಈಗಲೂ ಕೋಮಾರಪಂಚ, ಕ್ಷೌರಿಕ, ಬಡಿಗ, ಕುಂಬಾರ… ಮುಂತಾದವರು II (a)ದಲ್ಲಿ ನಾಡವರೊಂದಿಗೆ ಮತ್ತು ಇತ್ತೀಚೆಗೆ ಅಭಿವೃದ್ಧಿ-ಪ್ರಗತಿ ಕಂಡಿರುವ ನಾಮಧಾರಿಗಳ ಜತೆ ಸೆಣಸಾಡಬೇಕಾಗಿದೆ.

ಮೀನುಗಾರ ಪಂಗಡದ ‘ಮೊಗೇರ’ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡುವ ವಿವಾದವಿನ್ನೂ ಬಗೆಹರಿದಿಲ್ಲ. ಕೊಳ್ಳೆಗಾಲ, ಸುಳ್ಯ ಕಡೆಯಲ್ಲಿ ಮೊಲ ಬೇಟೆಯಾಡಿ ಜೀವಿಸುವ ಮೊಗೇರ ಎಂಬ ಪಕ್ಕಾ ದಲಿತ ಪಂಗಡಕ್ಕೆ ನೀಡುವ ಪರಿಶಿಷ್ಟ ಜಾತಿ ಮೀಸಲಾತಿಗೆ ಉತ್ತರ ಕನ್ನಡದ ಮೊಗೇರರೂ ಅರ್ಹರಾಗುವಂತೆ ಮಾಡಿದ್ದು ದೇವರಾಜ ಅರಸು ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ಎಸ್.ಎಂ.ಯಾಹ್ಯಾ ಅವರು. ತನ್ನ ಭಟ್ಕಳ ಕ್ಷೇತ್ರದಲ್ಲಿ ಗಣನೀಯವಾಗಿದ್ದ ಮೊಗೇರರ ಓಟಿಗಾಗಿ ಮೀಸಲಾತಿ ತಂತ್ರಗಾರಿಕೆಯನ್ನು ಯಾಹ್ಯಾ ಮಾಡಿದ್ದರು. ಜಿಲ್ಲೆಯ ಪರಿಶಿಷ್ಟರು ಈ ವಂಚನೆಯನ್ನು ವಿರೋಧಿಸುತ್ತ ಬಂದಿದ್ದರು. ಎಸ್.ಎಂ.ಕೃಷ್ಣರ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಶಿವರಾಮ್ ಉತ್ತರ ಕನ್ನಡದ ಮೊಗೇರರಿಗೆ ಎಸ್‍ಸಿ ಪ್ರಮಾಣಪತ್ರ ಕೊಡುವುದನ್ನು ತಡೆಹಿಡಿದರು. ಈ ತಗಾದೆ ಸುಪ್ರೀಂಕೋರ್ಟ್‍ವರೆಗೂ ಹೋಯಿತು. 2007ರ ನಂತರ ಮೊಗೇರರಿಗೆ ಎಸ್‍ಸಿ ಮೀಸಲಾತಿ ಸಿಗುತ್ತಿಲ್ಲವಾದರೂ ಹಿಂದೆ ಪಡೆದವರು ಅದನ್ನ ಬಳಸಿ ಸವಲತ್ತು ಕಬಳಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಉತ್ತರ ಕನ್ನಡದ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್!!

ಹಾಲಕ್ಕಿ ಒಕ್ಕಲಿಗರು

ಮೊಗೇರರು ಅಡ್ಡದಾರಿಯಲ್ಲಿ ಪಡೆಯುತ್ತಿದ್ದ ಮೀಸಲಾತಿಯು ಜಿಲ್ಲೆಯ ರಾಜಕೀಯ ಸಮೀಕರಣವನ್ನು ಬದಲಿಸಿತ್ತು. ಮೊಗೇರರ ಪರವಾಗಿದ್ದ ಮ್ಯಾಗಿಗೆ ಇಲೆಕ್ಷನ್‍ನಲ್ಲಿ ಇದು ದುಬಾರಿಯಾಗಿಬಿಟ್ಟಿತು. ಪರಿಶಿಷ್ಟರು ಆಕೆಗೆ ತಿರುಗಿಬಿದ್ದಿದ್ದರು. ವಿಧಾನಸಭೆಯಲ್ಲಿ ಮೊಗೇರರ ಪರ ಮಾತಾಡಿದ್ದ ಹಳಿಯಾಳದ ಅಂದಿನ ಶಾಸಕ ಸುನಿಲ್ ಹೆಗಡೆ ಸೋಲಬೇಕಾಗಿ ಬಂತು. ಸುನಿಲ್‍ಹೆಗಡೆಗೆ ಕುಮ್ಮಕ್ಕು ಕೊಟ್ಟಿದ್ದ ಕುಮಟೆಯ ದಿನಕರಶೆಟ್ಟಿಯೂ ಆಗ ಗೆಲ್ಲಲಾಗಿರಲಿಲ್ಲ. ಜಿಲ್ಲೆಯಮಟ್ಟಿಗೆ ಮೀಸಲಾತಿ ಬಲಾಢ್ಯರಿಗೆ ಫಾಯ್ದೆ ಮಾಡುತ್ತಿದೆ. ವರ್ಣವ್ಯವಸ್ಥೆಯಲ್ಲಿ ಕ್ಷತ್ರಿಯರೆಂದು ಹೇಳುವವರು ಮೀಸಲಾತಿ ಪ್ರಶ್ನೆ ಬಂದಾಗ ಹಿಂದುಳಿದವರಾಗಿ ಬಿಡುತ್ತಾರೆ; ತಾವು ಬ್ರಾಹ್ಮಣರೆಂದು ಬೀಗುವ ದೈವಜ್ಞ ಬ್ರಾಹ್ಮಣ ಸಮುದಾಯದವರು ಹಿಂದುಳಿದ ವರ್ಗದ II (a) ಪಟ್ಟಿಯ 11 (n)ದಲ್ಲಿ ಸೇರಿ ಮೀಸಲಾತಿ ಅನುಭವಿಸುತ್ತಿದ್ದಾರೆ. ಇದು ಬ್ರಾಹ್ಮಣರ ಮೀಸಲಾತಿಗೆ ಜೀವಂತ ನಿದರ್ಶನದಂತಿದೆ.

ಹಿಂದುಳಿದವರಿಗೆ ಮೀಸಲಾತಿ ಪಡೆಯುವಾಗ ಕೆನೆಪದರು (Creamy Layer) ವ್ಯಾಪ್ತಿಗೆ ಒಳಪಡಬಾರದೆಂಬ ನಿಯಮವಿದೆ. ಆದರೆ ಇದನ್ನು ಯೋಜನಾಬದ್ಧವಾಗಿ ಮುರಿದು ಭರ್ಜರಿ ಲಾಭ ಹೊಡೆಯಲಾಗುತ್ತಿದೆ. ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಪ್ರಬಲರು ಅದಕ್ಕಾಗಿ ವಿವಾಹ ವಿಚ್ಛೇದನ, ದತ್ತಕ, ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದರೆ ಒಬ್ಬರ ಆದಾಯ ಮರೆಮಾಚುವುದು… ಹೀಗೆ ನಾನಾ ನಮೂನೆಯ ಹಿಕಮತ್ತಿನಿಂದ II (a) ಮೀಸಲಾತಿ ದಕ್ಕಿಸಿಕೊಳ್ಳಲಾಗುತ್ತಿದೆ. ಮೂರು ವರ್ಷದ ಹಿಂದೆ ಕುಮಟಾದಲ್ಲಿ ವೈದ್ಯಕೀಯ ವೃತ್ತಿ ನಡೆಸುವವರೊಬ್ಬರು ಲೀಲಾಜಾಲವಾಗಿ II (a) ಪ್ರಮಾಣಪತ್ರ ಪಡೆದು ತಮ್ಮ ಕುಲಪುತ್ರಿಗೆ ಮೆಡಿಕಲ್ ಸೀಟು ಗಿಟ್ಟಿಸಿದ್ದರು! ಕಾರವಾರ ಮೆಡಿಕಲ್ ಕಾಲೇಜಿನ ಪ್ರಭಾರ ಡೀನ್ ಡಾ. ಗಜಾನನ ನಾಯಕ್ ಸಹ ಫೋರ್ಜರಿ II (a) ಮೀಸಲಾತಿಯ ಫಲಾನುಭವಿಯೇ!!

ಹಳಿಯಾಳದ ಮರಾಠರು II (a)ಗೆ ತಮ್ಮನ್ನು ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದೇ ಸಮುದಾಯದ ಎಮ್ಮೆಲ್ಸಿ ಎಸ್.ಎಲ್.ಘೋಟನೇಕರ್ ಮತ್ತು ದೇಶಪಾಂಡೆ ಸಾಹೇಬರಿಗೆ ಇದ್ಯಾಕೋ ಇಷ್ಟವಿಲ್ಲ. ಮರಾಠರು ಪ್ರಬಲರಾದರೆ ತಮ್ಮ ಮಂಕುಬೂದಿ ರಾಜಕಾರಣ ನಡೆಯದೆಂಬ ಭೀತಿ ಈ ಘೋಟನೇಕರ್, ದೇಶಪಾಂಡೆ ಮತ್ತು ಬಿಜೆಪಿಯ ಸುನಿಲ್‍ಹೆಗಡೆಗೆ. ಹಾಗಾಗಿ ಹಿಂದುಳಿದ ವರ್ಗದ ಆಯೋಗದ ಹಿಂದಿನ ಅಧ್ಯಕ್ಷ ಶಂಕರಪ್ಪ ಮರಾಠರನ್ನು II (a)ಸೇರಿಸಲು ಶಿಫಾರಸ್ಸು ಮಾಡಿದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕೈಗೂಡಿಲ್ಲ.

ಗ್ರಾಮೀಣ ಮೀಸಲಾತಿಯದು ಮತ್ತೊಂದು ಬಗೆಯ ಘಾತುಕ ಇತಿಹಾಸ. ಕಾಡಿನ ಜಿಲ್ಲೆಯಾದ ಉತ್ತರ ಕನ್ನಡದ ಹಲವು ಹಳ್ಳಿಗಳು ನಾಗರಿಕ ಸೌಲಭ್ಯ, ಮೂಲಸೌಕರ್ಯಗಳಿಲ್ಲದೆ ಒದ್ದಾಡುತ್ತಿವೆ. ಇಂಥ ಹಳ್ಳಿಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪಟ್ಟಣದ ವಸತಿನಿಲಯದಲ್ಲಿದ್ದು ಕಲಿಕೆ ನಡೆಸಬೇಕಾಗಿದೆ. ನೈಜ ಅರ್ಹ ಗ್ರಾಮೀಣ ಹಿನ್ನೆಲೆಯಿದ್ದರೂ ಪಟ್ಟಣದ ಶಾಲೆಯಲ್ಲಿ ಕಲಿತಿದ್ದರಿಂದ ಅವರಿಗೆ ‘ಗ್ರಾಮೀಣ ಮೀಸಲಾತಿ’ ಸಿಗುತ್ತಿಲ್ಲ. ಹಾಗಂತ ಪಟ್ಟಣದ ವಿದ್ಯಾರ್ಥಿಗಳು ಪಟ್ಟಣದ ಅಂಚಿನಲ್ಲಿರುವ ಎಲ್ಲ ಸೌಲಭ್ಯದ ಖಾಸಗಿಶಾಲೆಯಲ್ಲಿ ಕಲಿತರೂ ಅವರಿಗೆ ಆ ಶಾಲೆ ಕಂದಾಯ ಇಲಾಖೆ ದಾಖಲೆಯಂತೆ ಹಳ್ಳಿಯಲ್ಲಿದೆ ಎಂಬ ಕಾರಣಕ್ಕೆ ಗ್ರಾಮೀಣ ಮೀಸಲಾತಿ ದೊರಕುತ್ತಿದೆ. ಅರ್ಹರಿಗೆ ಅನ್ಯಾಯ, ಅನರ್ಹರಿಗೆ ಅವಕಾಶ. ಇದು ಗ್ರಾಮೀಣ ಮೀಸಲಾತಿ ಅವಾಂತರ. ಆಳುವ ಪ್ರಭೃತಿಗಳು ಇತ್ತ ಗಮನ ಹರಿಸುವರೇ?!


ಇದನ್ನು ಓದಿ: ದಲಿತ ವ್ಯಕ್ತಿಯ ನಿಗೂಢ ಸಾವು ಪ್ರಕರಣ: ಹಾಲಿ, ಮಾಜಿ ಶಾಸಕರ ಜಾಣಮೌನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...