ದೆಹಲಿಯ ತಬ್ಲೀಘ್ ಜಮಾತ್ ನ ನಿಜಾಮುದ್ದೀನ್ ಕೇಂದ್ರದಿಂದ ಕೊರೊನಾ ಸೋಂಕು ಹರಡಿರುವ ಕುರಿತು ಮಾಧ್ಯಮಗಳು ಉನ್ಮಾದದಲ್ಲಿದ್ದಾಗ ಬಿಜೆಪಿ ರಾಜಕಾರಣಿ ಬಬಿತಾ ಫೋಗತ್ ಮುಸಲ್ಮಾನರನ್ನು ‘ಅಜ್ಞಾನಿ ಹಂದಿಗಳು’ ಎಂದು ಟ್ವೀಟ್ ಮಾಡಿದ್ದರು.
ಈಗ ನಗರದ ಆರ್ಎಸ್ಎಸ್ ಕಛೇರಿಯಲ್ಲಿರುವ ಕಾರ್ಯಕರ್ತರಿಗೆ ಹೆಚ್ಚಾಗಿ ಸೋಂಕು ಹರಡುತ್ತಿರುವುದರ ಕುರಿತು ಜಬಲ್ ಪುರದ ಮುಸ್ಲಿಂ ಯುವಕನೊಬ್ಬ ಅದೇ ಪದವನ್ನು ಬಳಸಿದ್ದಾರೆ. ಕೋಮುದ್ವೇಷ ಹರಡುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಜುಲೈ 20 ರಂದು ಪೊಲೀಸರು ಜಬಲ್ ಪುರ್ ಜಿಲ್ಲೆಯ ಮನ್ಸೂರಾಬಾದ್ ಗೋಹಲ್ಪುರದ ನಿವಾಸಿ, ರಾಣಿ ದುರ್ಗಾವತಿ ವಿಶ್ವವಿದ್ಯಾಲಯದಲ್ಲಿ ಬಿ. ಫಾರ್ಮ್ನ ಅಂತಿಮ ವರ್ಷದ ಜಿಯಾ-ಉಲ್-ಹಕ್ ಎಂಬ 23 ವರ್ಷದ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆಕ್ಷನ್ 295 (ಎ) ಅಡಿಯಲ್ಲಿ (‘ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶವನ್ನು ಹೊಂದಿವೆ’) ಮತ್ತು ಭಾರತೀಯರ 505 (‘ಕಿಡಿಗೇಡಿತನಕ್ಕೆ ಕಾರಣವಾಗುವ ಸಾರ್ವಜನಿಕ ಹೇಳಿಕೆಗಳು’) ದಂಡ ಸಂಹಿತೆ ಪ್ರಕಾರ ತಕ್ಷಣ ಆತನನ್ನು ಬಂಧಿಸಲಾಯಿತು.
ಜುಲೈ 19 ರಂದು ಜಬಲ್ಪುರ ಸಂಘದ ಕಚೇರಿಯಲ್ಲಿ 12 ಆರ್ಎಸ್ಎಸ್ ಕಾರ್ಯಕರ್ತರು ಕೊರೊನಾ ವೈರಸ್ಗೆ ತುತ್ತಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳ ನಂತರ, ಜಿಯಾ-ಉಲ್-ಹಕ್ ಅವರು ‘NSUI Group Jabalpur VVV’ಯ ಫೇಸ್ಬುಕ್ ಪುಟದಲ್ಲಿ ಈ ಪೋಸ್ಟ್ ಮಾಡಿದ್ದರು.
ಸ್ಥಳೀಯ ಟಿವಿ ನ್ಯೂಸ್ ಚಾನೆಲ್ನಿಂದ ಸುದ್ದಿಯ ಸ್ಕ್ರೀನ್ಶಾಟ್ ಹಂಚಿಕೊಂಡ ಅವರು, 12 ಹಂದಿಗಳು ಇಂದು ನಮ್ಮ ನಗರದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿವೆ. ಈ ಹಂದಿಗಳು ದೇಶಾದ್ಯಂತ ಕೊರೊನಾವನ್ನು ಹರಡುತ್ತಿದ್ದಾರೆ.
ವಿದ್ಯರ್ಥಿಯ ಫೇಸ್ಬುಕ್ ಪೋಸ್ಟ್ನಿಂದ ಕೋಪಗೊಂಡ ಆರ್ಎಸ್ಎಸ್ ಕಾರ್ಯಕರ್ತರು ಮತ್ತು ಬಲಪಂಥೀಯ ಹಿಂದೂ ಧರ್ಮ ಸೇನಾ ಸದಸ್ಯರು ಮರುದಿನ ಜಬಲ್ಪುರ್ ಕಂಟೋನ್ಮೆಂಟ್ ಪೊಲೀಸ್ ಠಾಣೆಗೆ ಈ ವಿಷಯವನ್ನು ವರದಿ ಮಾಡಿದ್ದಾರೆ.
ಹಿಂದೂ ಧರ್ಮ ಸೇನಾದ ರಾಜ್ಯ ಉಪಾಧ್ಯಕ್ಷ ಮತ್ತು ತನ್ನನ್ನು ಆರ್ಎಸ್ಎಸ್ ಕಾರ್ಯಕರ್ತ ಎಂದು ಬಣ್ಣಿಸಿಕೊಂಡಿರುವ ನೀರಜ್ ರಜಪೂತ್ ಅವರ ದೂರಿನ ಆಧಾರದ ಮೇಲೆ, ಒಂದು ಗುಂಪಿನ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ್ದಕ್ಕಾಗಿ ಜಬಲ್ಪುರ್ ಪೊಲೀಸರು ಜಿಯಾ-ಉಲ್-ಹಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರ್ಎಸ್ಎಸ್ ಸದಸ್ಯರ ವಿರುದ್ಧ ಹಕ್, “ಅಸಭ್ಯ, ನಾಚಿಕೆಗೇಡು ಮತ್ತು ಅಸಹನೀಯ” ಹೇಳಿಕೆಗಳನ್ನು ನೀಡಿದ್ದಾನೆ ಎಂದು ಎಫ್ಐಆರ್ನಲ್ಲಿ ದೂರುದಾರರು ಆರೋಪಿಸಿದ್ದಾರೆ.
ಮುಸ್ಲಿಂ ಯುವಕ “ರಾಷ್ಟ್ರೀಯವಾದಿ ಸಂಘಟನೆಯ” ವಿರುದ್ಧದ ಇಂತಹ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಅವರು ಹೇಳಿದರು. “ಆರ್ಎಸ್ಎಸ್ ದೇಶಭಕ್ತಿ ಮತ್ತು ಸಾಮಾಜಿಕ ಕಾರ್ಯ ಸಂಸ್ಥೆಯಾಗಿದ್ದು, ಈ ದೇಶದಲ್ಲಿ ಕೋಟ್ಯಂತರ ಸದಸ್ಯರನ್ನು ಹೊಂದಿದೆ. ಅಂತಹ ಸಂಘಟನೆಯ ಬಗ್ಗೆ ಮುಸ್ಲಿಂ ಯುವಕನ ಅಸಭ್ಯ ಉಲ್ಲೇಖವು ಸಾಮಾಜಿಕ ಸಾಮರಸ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ.”
“ಈತ ಮಾಡಿದ ನಿಂದನೀಯ ಉಲ್ಲೇಖವು ರಾಷ್ಟ್ರೀಯವಾದಿ ಮತ್ತು ಸಾಮಾಜಿಕ ಸೇವೆಯ ನನ್ನ ಭಾವನೆಗಳನ್ನು ಘಾಸಿಗೊಳಿಸಿದೆ” ಎಂದು ದೂರುದಾರ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
“ಮುಸ್ಲಿಂ ಯುವಕರ” ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಆತನನ್ನು ಬಂಧಿಸುವಂತೆ ಆಗ್ರಹಿಸಿದ ಅವರು ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದುಎಂದು ಎಚ್ಚರಿಕೆ ನೀಡಿದರು.
ಕುತೂಹಲಕಾರಿ ಸಂಗತಿಯೆಂದರೆ, ಮುಸ್ಲಿಂ ಯುವಕ, ಆರ್ಎಸ್ಎಸ್ ಮತ್ತು ಅದರ ಸದಸ್ಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ ಎಂಬ ಆರೋಪ ಇದ್ದರೂ, ಪೊಲೀಸರು ಐಪಿಸಿಯ ಸೆಕ್ಷನ್ 295 (ಎ) (ಉದ್ದೇಶಪೂರ್ವಕವಾಗಿ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಲಾಗಿದೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಇದರ ಕುರಿತು ಪ್ರಶ್ನೆಯನ್ನು ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಬಹುಗುನಾಗೆ ಕೇಳಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಮತ್ತು ತಮ್ಮ ಅಧೀನ ಅಧಿಕಾರಿಗಳೊಂದಿಗೆ ಮಾತನಾಡಲು ಸಲಹೆ ನೀಡಿದರು ಎಂದು ದಿ ವೈರ್ಗೆ ವರದಿ ಮಾಡಿದೆ.
ಅಷ್ಟೇ ಅಲ್ಲದೆ, ಜಿಯಾ-ಉಲ್-ಹಕ್ ಪರ ವಕೀಲ ವಿಕಾಶ್ ರಾಥೌರ್ ಜುಲೈ 21 ರಂದು ಜಬಲ್ಪುರ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದಾಗ, ಅಪರಾಧವು ಗಂಭೀರವಾಗಿದೆ ಎಂದು ಆರೋಪಿಸಿ ಜಾಮೀನು ನಿರಾಕರಿಸಿದ ನ್ಯಾಯಾಲಯ ಅವರನ್ನು ಜುಲೈ 24 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಜಿಯಾ-ಉಲ್-ಹಕ್ ಪರವಾಗಿ ಮಧ್ಯಪ್ರದೇಶದ ಹೈಕೋರ್ಟ್ ವಕೀಲ ನಯೀಮ್ ಖಾನ್, ಈ ವಿಷಯವು ಮಾನಹಾನಿಗೆ ಸಂಬಂಧಿಸಿದೆ ಮತ್ತು ಯಾರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲ ಎಂದು ಹೇಳಿದ್ದಾರೆ.
“ಹಿಂದಿನ ವಕೀಲರು ಈ ಪ್ರಕರಣವನ್ನು ಸರಿಯಾಗಿ ಸಮರ್ಥಿಸಲಿಲ್ಲ. ಆದ್ದರಿಂದ, ಜುಲೈ 24 ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ಈ ಪ್ರಕರಣವು ಇತ್ಯರ್ಥವಾಗುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ದೆಹಲಿ ಗಲಭೆ: ಕೊಲೆ ಆರೋಪದಲ್ಲಿ ಆರ್ಎಸ್ಎಸ್ ಸದಸ್ಯರ ಬಂಧನ


