Homeಮುಖಪುಟದೆಹಲಿ ಗಲಭೆ: ಕೊಲೆ ಆರೋಪದಲ್ಲಿ ಆರ್‌ಎಸ್‌ಎಸ್ ಸದಸ್ಯರ ಬಂಧನ

ದೆಹಲಿ ಗಲಭೆ: ಕೊಲೆ ಆರೋಪದಲ್ಲಿ ಆರ್‌ಎಸ್‌ಎಸ್ ಸದಸ್ಯರ ಬಂಧನ

- Advertisement -
- Advertisement -

“ಈ ಜನರು ನನ್ನ ತಂದೆಯನ್ನು ಕೊಂದಂತೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುತ್ತಾರೆ ಎಂದು ನನಗೆ ಭಯವಾಗುತ್ತಿದೆ. ಈ ದೂರನ್ನು ನೋಂದಾಯಿಸಲು ನನ್ನ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸುತ್ತಿದ್ದೇನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಮತ್ತು ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ಸಾಹಿಲ್ ಪರ್ವೇಜ್ ಮಾರ್ಚ್ 19 ರಂದು ಈಶಾನ್ಯ ದೆಹಲಿ ಗಲಭೆಯ ನಂತರ ಸ್ಥಾಪಿಸಲಾದ ಇಡ್ಗಾ ಪರಿಹಾರ ಶಿಬಿರದಲ್ಲಿ ನೀಡಿದ ದೂರಿನಲ್ಲಿ ಬರೆದಿದ್ದಾರೆ.

ಫೆಬ್ರವರಿ 25 ರಂದು ಅವರ ತಂದೆಯ ಮರಣದ ಸಮಯದಲ್ಲಿ, ಎಫ್‌ಐಆರ್‌ನಲ್ಲಿ ಐಪಿಸಿ (ಕೊಲೆ) ಯ ಸೆಕ್ಷನ್ 302 ಅನ್ನು ಮಾತ್ರ ಲಗತ್ತಿಸಿತ್ತು, ಆದರೆ ಸಾಹಿಲ್ ಅವರ ವಿವರವಾದ ದೂರಿನ ನಂತರ ಸಂಬಂಧಿತ ಸೆಕ್ಷನ್‌ಗಳನ್ನು ಅಸ್ತಿತ್ವದಲ್ಲಿರುವ ಎಫ್‌ಐಆರ್‌ಗೆ ಸೇರಿಸಲಾಗಿದೆ. ಪರಿಣಾಮವಾಗಿ, ಉತ್ತರ ಘೋಂಡಾದಿಂದ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಲಾಯಿತು ಮತ್ತು 16 ಜನರನ್ನು ಬಂಧಿಸಲಾಯಿತು ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ಈ ಹದಿನಾರು ಆರೋಪಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಕ್ರಿಯ ಸದಸ್ಯರಾಗಿದ್ದು, ಹಲವು ಹುದ್ದೆಗಳನ್ನು ಹೊಂದಿದ್ದರು ಎನ್ನಲಾಗಿದೆ.

ಕೊಲೆ (ಸೆಕ್ಷನ್ 302), ಗಲಭೆ (ಸೆಕ್ಷನ್ 147), ಮಾರಣಾಂತಿಕ ಆಯುಧದಿಂದ ಶಸ್ತ್ರಸಜ್ಜಿತವಾದ ಗಲಭೆ (ಸೆಕ್ಷನ್ 148), ಕಾನೂನುಬಾಹಿರ ಗುಂಪುಸೇರುವಿಕೆ (ಸೆಕ್ಷನ್ 149) ಮತ್ತು ಕ್ರಿಮಿನಲ್ ಪಿತೂರಿ (ಸೆಕ್ಷನ್ 120 ಬಿ) ಸೆಕ್ಷನ್‌ಗಳನ್ನು ಹಾಕಿ ಏಪ್ರಿಲ್ 9 ರಂದು ಬಂಧಿಸಲಾಯಿತು. ಪ್ರಕರಣದ ಚಾರ್ಜ್‌ಶೀಟ್ ಕೂಡ ಸಲ್ಲಿಸಲಾಗಿದೆ.

ದಿ ಕ್ವಿಂಟ್‌ ದೆಹಲಿ ಗಲಭೆಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಿದೆ. ಏಕೆಂದರೆ ಇತ್ತೀಚೆಗೆ ಪೊಲೀಸರು ಸಲ್ಲಿಸುತ್ತಿರುವ ಚಾರ್ಜ್‌‌ಶೀಟ್‌ಗಳಲ್ಲಿ ಕೇವಲ ಪ್ರಗತಿಪರ, ಎಡಪಂಥೀಯ ಮತ್ತು ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ದೋಷಾರೋಪಣೆ ಮಾಡಿದ್ದು, ಗಲಭೆಗೆ ಪ್ರಚೋದನೆ ನೀಡಿದ ಮತ್ತು ಗಲಭೆಯಲ್ಲಿ ಭಾಗವಹಿಸಿದ ಬಿಜೆಪಿ ಮತ್ತು ಅದರ ಅಂಗಸಂಘಟನೆಗಳ ಸದಸ್ಯರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ.

ತನ್ನ ದೂರಿನಲ್ಲಿ ಪರ್ವೇಜ್ ಹೆಸರಿಸಿರುವ ದೇವೇಶ್ ಮಿಶ್ರಾ ಅವರನ್ನು ಇನ್ನೂ ಬಂಧಿಸಿಲ್ಲ ಅಥವಾ ಚಾರ್ಜ್‌ಶೀಟ್ ನಲ್ಲಿ ಅವರನ್ನು ಉಲ್ಲೇಖಿಸಿಲ್ಲ. ಅವರು 1996 ರಿಂದ ಸಂಘದೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ ಎಂಟು ವರ್ಷಗಳಿಂದ ಆರ್‌ಎಸ್‌ಎಸ್‌ನ ಯಮುನಾ ವಿಹಾರ್ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರನ್ನು ವಿಶ್ವ ಹಿಂದೂ ಪರಿಷತ್‌ಗೆ ಸ್ಥಳಾಂತರಿಸಲಾಯಿತು ಮತ್ತು ಈಗ ಅವರ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

ದೂರಿನಲ್ಲಿ ಹೆಸರಿಸಲಾದ ಇನ್ನೊಬ್ಬ ವ್ಯಕ್ತಿ ಸುಭಾಷ್ ತ್ಯಾಗಿಯನ್ನು ಸಹ ಇದುವರೆಗೆ ಬಂಧಿಸಿಲ್ಲ. ಇವರು ಕೂಡ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಹೆಚ್ಚಿನ ಮಾಹಿತಿಗೆ ಕ್ವಿಂಟ್ ವರದಿ ಓದಿ


ಇದನ್ನೂ ಓದಿ: ಸಫೂರಾ ಜರ್ಗರ್‌ಗೆ ಮಾನವೀಯ ಆಧಾರದ ಮೇಲೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...