Homeಮುಖಪುಟಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಇಂದು ಖ್ಯಾತ ಕಾದಂಬರಿಕಾರಿ ಜಾರ್ಜ್ ಆರ್ವೆಲ್ ಹುಟ್ಟಿದ ದಿನ. ಅವರ ಎರಡು ಕೃತಿಗಳನ್ನು ಇಂದಿನ ಭಾರತದ ಸಂದರ್ಭಕ್ಕೆ ಅನ್ವಯಿಸಿದ್ದಾರೆ ಡೇಟಾಮ್ಯಾಟಿಕ್ಸ್‌ರವರು.

- Advertisement -
- Advertisement -

ನಾವು ಸಣ್ಣವರಿದ್ದಾಗ ಭಾರತದ ಸ್ವರೂಪದ ಬಗ್ಗೆ ಒಂದು ಹಾಡು ಹೇಳತಿದ್ದೆವಿ- ಕೇಸರಿ – ಬಿಳಿ – ಹಸಿರು ಬಣ್ಣ ನಡುವೆ ಚಕ್ರವು ಅಂತ ಅದರಾಗ ಒಂದು ಸಾಲು ಇತ್ತು.

ಈ ಬಣ್ಣಗಳ ನಡುವೆ ರಾಜಕೀಯ ಹುಟ್ಟತದ ಅಂತ ನಮಗ ಗೊತ್ತಿರಲಿಲ್ಲ. ಇದರ ಬಗ್ಗೆ ಸ್ವಲ್ಪ ತಿಳಕೊಳ್ಳೋಣ.

ಮೊಟ್ಟ ಮೊದಲಿಗೆ, ಅಂದರ ಲಕ್ಷಾಂತರ ಮಂದಿಗೆ ಕೊರೋನಾ ಬಂದು, ಸಾವಿರಾರು ಜನ ಸತ್ತ ಮ್ಯಾಲೆ, ಭಾರತ ಸರಕಾರದ ಕಣ್ಣು ತೆರದು ಲಾಕಡೌನು (ಕೀಲಿ ಕಿಟಕ್) ಘೋಷಿಸಿತು. ಆಮ್ಯಾಲೆ ದೇಶದ 700 ಜಿಲ್ಲೆಗಳನ್ನ ಕೆಂಪು, ಕಿತ್ತಳೆ ಹಾಗೂ ಹಸಿರು ಅಂತ ಹೇಳಿ ವಿಭಜನೆ ಮಾಡಿತು.

ಅದರ ಹಿಂದಿನ ಕಾರಣ ಅಂದರೆ 1. ಯಾವುದೇ ಜಿಲ್ಲೆಯೊಳಗ ಒಂದು ಕೊರೊನಾ ಪ್ರಕರಣ ಇದ್ದರೂ ಅದು ಕೆಂಪು. 2. ಯಾವುದೇ ಪ್ರಕರಣ ಇರದಿದ್ದರ ಅದು ಹಸಿರು ಹಾಗೂ 3. ಕಳೆದ 14 ದಿನದಲ್ಲಿ ಒಂದೂ ಹೊಸ ಪ್ರಕರಣ ಇರಲಿಲ್ಲ ಅಂದರ ಅದು ಕಿತ್ತಳೆ.

ಕೆಂಪು ಜಿಲ್ಲೆಯೊಳಗ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲ, ಓಡಾಟ ಇಲ್ಲ. ಕಿತ್ತಳೆಯೊಳಗ ಬಹಳ ಮಟ್ಟಿಗೆ ಪ್ರತಿಬಂಧ ಹಾಗೂ ಹಸಿರಿನೊಳಗ ಎಲ್ಲ ರೀತಿಯ ಚಟುವಟಿಕೆ ಹಾಗೂ ಓಡಾಟ ಮುಕ್ತ.

ಆದರ ಸಮಸ್ಯಾ ಏನಪಾ ಅಂದರ ಎಂದಿನಂತೆ ಕೇಂದ್ರ ಸರಕಾರ ಕೀಲಿ ಕಿಟಕ್ ಆಗಲಿ, ಇತರ ಪರಿಹಾರ ಕ್ರಮಗಳನ್ನಾಗಲೀ ಸಾರಾಸಾರ ವಿಚಾರ ಮಾಡಿ ಮಾಡಿರಲಿಲ್ಲ.

ಇದರಿಂದ ದೊಡ್ಡ ಆಭಾಸ ಆತು. ಒಂದು ಸಾವಿರ ಕೇಸು ಇರೋ ಮುಂಬೈ ಕಿತ್ತಳೆ ವಲಯದಾಗ ಬಂದು, ಕರ್ನಾಟದ 14 ಜಿಲ್ಲೆ ಗಳು ಕೆಂಪು ವಲಯದಾಗ ಬಂದವು.

ಕೇಂದ್ರದ ಆಳುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ಕೊಟ್ಟ ಖಾಸಗಿ ಕಂಪನಿಗಳು ಸರಕಾರದ ಮೇಲೆ ಒತ್ತಡ ಹಾಕಿದರು. ಮುಂಬೈ- ಅಹಮದಾಬಾದು- ಸುರತ ಮುಂತಾದ ಕಡೆ ಕಾರಖಾನೆ- ಅಂಗಡಿ ತೆಗೆಯಬಹುದಾದರೆ ನಮ್ಮಲ್ಲೆ ಯಾಕೆ ಬೇಡ ಅಂತ ತಕರಾರು ಮಾಡಿದರು. ಅವರು ತಮ್ಮ ತಮ್ಮ ನೌಕರರಿಗೆ ಸಂಬಳ ಕೊಟ್ಟಿದ್ದರೋ ಇಲ್ಲೋ, ಆದರೆ ಪಿಎಂ ಕೇರ್ಸ ಅನ್ನೋ ಹುಂಡಿಗೆ ರೊಕ್ಕ ಹಾಕಿ ಭಕ್ತಿಯಿಂದ ಕೈ ಮುಗದಿದ್ದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ದಕ್ಕ ಜನರಿಗೆ ತೊಂದರೆ ಆಗಿತ್ತು. ಸರಕಾರಕ್ಕೆ ತೆರಿಗೆ ಸಿಗಲಾರದ ಹಂಗ ಆಗಿತ್ತು. ಸರಕಾರಿ ನೌಕರರಿಗೆ ಸಂಬಳ ತಡಾ ಆಗಲಿಕ್ಕೆ ಸುರು ಆಗಿತ್ತು. ವಿಶ್ವಬ್ಯಾಂಕು, ಮೋಡಿ, ಮತ್ತು ಇತರ ಸಂಸ್ಥೆಗಳು ಭಾರತದ ನಿವ್ವಳ ಉತ್ಪನ್ನ ಶೇಕಡಾ 1-2 ರ ಒಳಗೆ ಇಳಿಯಲಿದೆ ಅಂತ ಭವಿಷ್ಯ ಹೇಳಲಿಕ್ಕೆ ಸುರು ಮಾಡಿದರು.

ಅಷ್ಟರೊಳಗೆ ಪಂತ ಪ್ರಧಾನ ನಮೋ ಅವರು ಮೂರನೇ ಕೀಲಿ ಕಿಟಕ್ ಘೋಷಣೆ ಮಾಡಿದ್ದರು. ಇನ್ನು ಅದನ್ನು ಹೆಂಗ ಸರಿ ಮಾಡಬೇಕು ಅಂತ ಯಾರಿಗೂ ಗೊತ್ತಿರಲಿಲ್ಲ.

ಎಪ್ರಿಲ 30 ರಂದು ಕೇಂದ್ರದ ಕೆಲವು ಅಧಿಕಾರಿಗಳು ಒಂದು ಸಭೆ ನಡೆಸಿದರು. ಅದರಾಗ ಈ ಹಿಂದೆ ಮಾಡಿದ ಕಲರ ಕೋಡಿಂಗ (ವರ್ಣಾಧಾರಿತ ವಿಭಜನೆ) ಸರಿ ಇಲ್ಲ. ಅದನ್ನ ಬದಲಾಯಿಸಬೇಕು. ಬರೇ ಪ್ರಕರಣ ಪತ್ತೆ ಆಗೋದು ಮುಖ್ಯ ಅಲ್ಲ. ಅದರ ಸಂಖ್ಯೆ ಎಷ್ಟು ದಿನದೊಳಗ ದುಪ್ಪಟ್ಟು ಆಗತಾವು, ಎಷ್ಟು ಜನ ಗುಣ ಆಗಿದ್ದಾರ, ರಾಜ್ಯ ಹಾಗೂ ಜಿಲ್ಲೆ ಆಡಳಿತ ಎಷ್ಟರ ಮಟ್ಟಿಗೆ ತಯಾರು ಆಗಿದಾರು ಮುಂತಾದ ವಿಷಯಗಳನ್ನ ಆಧರಿಸಿ ಕೆಂಪು ನಿರ್ಧರಿಸೋಣ. ಕಳೆದ 21 ದಿನದೊಳಗ ಪ್ರಕರಣ ಇಲ್ಲಾ ಅಂದರ ಅದು ಹಸಿರು ಅಂತ ಅನ್ನೋಣ. ಇವು ಎರಡೂ ಇಲ್ಲದವು ಕಿತ್ತಳೆ ಜಿಲ್ಲೆಗಳು ಅಂತ ಆಗಲಿ ಅಂತ ಹೇಳಿದರು.

ರಾಜ್ಯ ಸರಕಾರಗಳು ಕೆಂಪು- ಕಿತ್ತಳೆ ಇದ್ದದ್ದನ್ನು ಹಸಿರು ಮಾಡಬಹುದು. ಆದರೆ ಉಲ್ಟಾ ಮಾಡಲು ಬರೋದಿಲ್ಲ. ಪಟ್ಟಿ ಬದಲಾವಣೆ ಮಾಡೋದಾದರ ನಾವು ಮಾಡತೇವಿ ಅಂದರು. ಕರ್ನಾಟಕದಲ್ಲಿ ಇದ್ದ 14 ಕೆಂಪು ಜಿಲ್ಲೆಗಳ ಸಂಖ್ಯೆ ಮೂರಕ್ಕೆ ಇಳಿಯಿತು.

ಹಿಂಗಾಗಿ ಮೂರನೇ ಹಂತದ ಲಾಕ್ ಡೌನ ಇದ್ದರೂ ಕೂಡ ಕಾರ್ಖಾನೆ- ಅಂಗಡಿ ತೆರೆಯಲಾಯಿತು. ಅತಿ ಕಮ್ಮಿ ಪ್ರಕರಣ ಇದ್ದಾಗ ಬಂದು ಮಾಡಿದ ಅಂಗಡಿಗಳು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೇಲೆ ತೆರೆದುಕೊಂಡವು. ಇದೇ ನಿರ್ಧಾರ ತೊಗೊಳ್ಳೋದು ಆಗಿದ್ದರ ಇಷ್ಟೆಲ್ಲಾ ಸರ್ಕಸ್ಸು ಯಾಕ ಮಾಡಬೇಕಾಗಿತ್ತು. ಮೊದಲನೇ ದಿವಸವೇ ಈ ನಿರ್ಧಾರ ತೊಗೊಂಡಿದ್ದರ ಅಷ್ಟೊಂದು ಆರ್ಥಿಕ ಹಿನ್ನಡೆ ಆಗತಿರಲಿಲ್ಲ.

ಈ ಬಣ್ಣಗಳ ರಾಜಕಾರಣಕ್ಕೆ ವರ್ಣಕಾರಣ ಅನ್ನಬಹುದು. ಯಾಕ ಹಿಂಗಂದರ, ಸರಕಾರದ ನಿರ್ಧಾರಗಳು ವಿಜ್ಞಾನಿಗಳ ಮಾತು ಕೇಳಿ ನಡೆಯುತ್ತಿಲ್ಲ. ಅವು ಕೆಲವು ಐಎಎಸ್ಸು ಅಧಿಕಾರಿಗಳು ಹಾಗೂ ಕೆಲವೇ ಕೆಲವು ರಾಜಕಾರಣಿಗಳ ಮನಸೋಇಚ್ಛಿ ನಿರ್ಧಾರಗಳು. ಇವುಗಳಿಂದ ಯಾರಿಗೂ ಸ್ಪಷ್ಟತೆ ಇಲ್ಲ. ಯಾರಿಗೂ ಇವು ಸರಿಯಾಗಿ ಅರ್ಥವಾಗಿಲ್ಲ. ಇವುಗಳ ಬಗ್ಗೆ ಯಾರೂ ವೈಯಕ್ತಿಯ ಜವಾಬುದಾರಿ ತೊಗೊಳ್ಳೋದಿಲ್ಲ. ಸಧ್ಯಕ್ಕಂತೂ ಈ ಮುಖ ಇಲ್ಲದ ನಿರ್ಧಾರಗಳಿಂದ ನಮಗ ಮುಕ್ತಿ ಇಲ್ಲವೇನೋ.

ದೂರದರ್ಶಿ ಸಾಹಿತಿ ಭವಿಷ್ಯದಲ್ಲಿ ನಡಿಯೋದನ್ನು ಇಂದೇ ನಡೆದಂತೆ ಚಿತ್ರಿಸಿದ ಜಾರ್ಜ್ ಆರ್ವೆಲ್ ಅವರ ಅತಿ ಜನಪ್ರಿಯ ಕಾದಂಬರಿಯ ಹೆಸರು ʻ1984ʼ. ಅದರೊಳಗೆ ಕೆಲವು ಜನ ತಮ್ಮ ದೇಶದ ಜನರನ್ನ ಕತ್ತಲೆಯೊಳಗೆ ಇಟ್ಟು ಸರಕಾರ ನಡೆಸತಾರ. ಕಾಲ್ಪನಿಕ ʻಹಿರಿಯ ಅಣ್ಣʼನ ಹೆದರಿಕೆಯಿಂದ ಜನರ ಮೇಲೆ ದಬ್ಬಾಳಿಕೆ ನಡಸತಾರ.

ಅದೇ ಲೇಖಕನ ಇನ್ನೊಂದು ಕಾದಂಬರಿ ʻಎನಿಮಲ್ ಫಾರ್ಮʼ.

ರೈತನೊಬ್ಬನ ಮನೆಯ ಹಿತ್ತಲದಲ್ಲಿ ನಡೆಯುವ ಕತೆ ಇದು. ಬರೀ ತಿಂದುಂಡು ಹಾಯಾಗಿ ಮಲಗುವ ಚಾಲಾಕಿ ಹಂದಿಗಳು ಸರಕಾರ ರಚಿಸಿ ತಾವೇ ರಾಜರಾಗಿ ಬಿಡತಾರ. ರೈತನ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಕುದುರೆಗಳನ್ನು ಕಾರ್ಮಿಕರನ್ನಾಗಿ ಮಾಡಿಕೊಳ್ಳತಾವು. ಆ ತೋಟದ ಮನೆಯಲ್ಲಿ ಒಂದು ಫಲಕ ಇರತೈತಿ. ಅದರ ಮೇಲೆ ಇವತ್ತಿನ ನೀತಿ- ನಿಯಮಗಳು ಅಂತ ಬರದಿರತಾವು. ಅದನ್ನ ಯಾರು ಬರದಿತಾರ ಅಂತ ಯಾರಿಗೂ ಗೊತ್ತಿರೋದಿಲ್ಲ. ಅದರಾಗ ಒಂದು – ಎರಡು ಅಂತ ಹೇಳಿ ನಿಯಮಗಳ ಪಟ್ಟಿನ ಇರತೈತಿ. ಅವನ್ನ ಎಲ್ಲ ಪ್ರಾಣಿಗಳು ಭಕ್ತಿಯಿಂದ ಪಾಲಿಸತಿರತಾವು.

ಆದರ ಅವರ ಮೇಲೆ ದ್ವೇಷ ಸಾಧಿಸೋ ದೃಷ್ಟಿಯಿಂದ ಆ ಹಂದಿಗಳು ಒಂದು ಸಂಚು ರೂಪಿಸತಾವು. ರಾತ್ರಿ ಎಲ್ಲರೂ ಮಲಗಿದಾಗ ಎದ್ದು ಬಂದು ಆ ಪಟ್ಟಿಯ ಕೊನೆಯ ನಿಯಮಗಳನ್ನ ಅಳಿಸಿ ಸಂಪೂರ್ಣ ತದ್ವಿರುದ್ಧ ವಾದ ನಿಯಮಗಳನ್ನ ಬರದು ಬಿಡತಾವು. ಮರು ದಿನ ಬೆಳಿಗ್ಗೆ ಎದ್ದು ನಿನ್ನೆ ಎಲ್ಲರೂ ನಿಯಮ ಉಲ್ಲಂಘಿಸಿದ್ದೀರಿ ಅಂತ ಹೇಳಿ ಶಿಕ್ಷೆ ಕೊಡತಾವು. ಉಳಿದ ಪ್ರಾಣಿಗಳು ʻಇಲ್ಲ. ನಾವು ಇದರಲ್ಲಿ ಬರೆದ ನಿಯಮಗಳನ್ನೇ ಪಾಲನೆ ಮಾಡಿದ್ದೇವೆʼ ಅಂತ ತಿರುಗಿ ವಾದ ಮಾಡಿದರೆ, ಎಲ್ಲಿದೆ ನೋಡಿ? ಇಲ್ಲಿರುವ ನಿಯಮವೇ ಬೇರೆ, ನೀವು ಮಾಡಿದ್ದೇ ಬೇರೆ ಅಂತ ಅವರನ್ನು ಹೆದರಿಸುತ್ತವೆʼ.

ಕೊನೆಗೂ ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ. ನಿಯಮ ಪಾಲಿಸುವರಿಗೂ, ಆರಕ್ಷಕರಿಗೂ, ನಿಯಮ ಮುರಿಯುವವರಿಗೂ, ಜನಸಾಮಾನ್ಯರಿಗೂ ಎಲ್ಲರಿಗೂ ಭಯದ ವಾತಾವರಣ ಇರುತ್ತದೆ.

ಇವತ್ತಿನ ಆಗುಹೋಗುಗಳು ನಮಗ ಎನಿಮಲ್ ಫಾರ್ಮಿನ ನೆನಪು ಮಾಡಿಕೊಡತಾವು. ಅಚ್ಛೇ ದಿನ್ ಹೋಗಲಿ, ಬೊಹುತ ಬೂರೆ ದಿನ ಆನೆವಾಲೆ ಹೈಂ ಅಂತ ಅನ್ನಿಸತೈತಿ.


ಇದನ್ನೂ ಓದಿ: ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...