Homeಮುಖಪುಟನಾವು ನಂಬರ್ ಒನ್... ಯಾವುದರಲ್ಲಿ - ದೇಶ ಮಾರುವುದರಲ್ಲಿ?

ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ?

- Advertisement -
- Advertisement -

ನಮ್ಮ ಹುಬ್ಬಳ್ಳಿ ಹುಡುಗರಿಗೆ ರೋಮಾಂಚನ ಆಗೋವಂಥ ಸುದ್ದಿಯೊಂದು ಕಂಪ್ಯೂಟರ್ ಕ್ಲೌಡು ಎಂಬೋ ನೀಲ ಗಗನದೊಳಗ ಓಡಾಡತಾ ಐತಿ.

ಅದು ಏನಪಾ ಅಂದ್ರ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಹುಡುಗ ಪ್ರಹ್ಲಾದ ಜೋಶಿ ಅವರಿಗೆ ಅಭಿನಂದನೆ ಹೇಳಿದ ವಿಡಿಯೋ.

ನನ್ಯ ಸಚಿವ ಸಂಪುಟದ ಸದಸ್ಯರಾದ ಪ್ರಹ್ಲಾದಜೀ ಅವರು ಈ ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು, ಕಲ್ಲಿದ್ದಲು ತಯಾರಿ ಕ್ಷೇತ್ರದಲ್ಲಿ ಭಾರತ ಮಹತ್ವಪೂರ್ಣ ಹೆಜ್ಜೆಗಳನ್ನು ಇಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಲಾಕ್‍ಡೌನ್‍ನಲ್ಲಿ ಕಲ್ಲಿದ್ದಲಿಗೆ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಮಗೆ ಹೊಸ ದಾರಿ ತೋರಿಸಿದ್ದಾರೆ. ಸಚಿವರು ಹಾಗೂ ಅವರ ಸಿಬ್ಬಂದಿಗೆ ನಾವು ಏನು ಅಂತಹ ದೊಡ್ಡ ಕೆಲಸ ಮಾಡಿಲ್ಲ ಅಂತ ಅನ್ನಿಸಬಹುದು, ಆದರೆ ನಾನು ಹೇಳುತ್ತೇನೆ. ನೀವು ಮಾಡಿದ್ದು ಅತ್ಯಂತ ಮಹತ್ವಪೂರ್ಣ ಕೆಲಸ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಅಂತ ಎರಡು ಸರತೆ ಚಪ್ಪಾಳೆ ಬಾರಿಸಿದ್ದಾರೆ.

ಇದನ್ನು ಕಲ್ಲಿದ್ದಲು ಸಚಿವರ ಹಿಂಬಾಲಕರು, ವಿರೋಧಿಗಳು ಎಲ್ಲರೂ ಸೇರಿ ಸಾವಿರಾರು ಸಲ ಹಂಚಿಕೊಂಡಾರ. ಇನ್ನ ನಮ್ಮ ಜೋಶಿ ಸಾಹೇಬರಿಗೆ ಟಿಕೆಟ್ ತಪ್ಪಿಸೋರು ಯಾರೂ ಇಲ್ಲಾ, ಅವರ ಕುರ್ಚಿ ಕಾಯಂ, ಇನ್ನೂ ಸ್ವಲ್ಪ ದಿವಸ ಆದರ ಅವರು ಪ್ರಧಾನಿ ಆಗಬಹುದು, ಉಪ ರಾಷ್ಟ್ರಪತಿ – ರಾಷ್ಟ್ರಪತಿನೂ ಆಗೋ ಛಾನ್ಸ್ ಅದ ಅಂತ ಹೇಳಿ ಅವರ ಬೆಂಬಲಿಗರು ಹೇಳಿಕೊಂಡು ಕುಣದಾಡಲಿಕ್ಕೆ ಹತ್ತಿದಾರು.

ಪ್ರಧಾನಿಯವರು ತಮ್ಮ ಎಂದಿನ ರೂಢಿಯಂತೆ, ಬರೀ ಒಳ್ಳೆ ಸುದ್ದಿ ಹೇಳುವ, ಹುರಿದುಂಬಿಸುವ, ಧನಾತ್ಮಕ ವಿಷಯವನ್ನೇ ತಿಳಿಸುವ ತಮ್ಮ ಇಮೇಜಿಗೆ ತಕ್ಕುದಾಗಿ ಯಾವ ಸಣ್ಣ ಮಾಹಿತಿಯನ್ನೂ ಕೊಡದಂತೆ, ಇದು ಒಳ್ಳೆಯದು ಅಂತ ಅಪ್ಪಣೆ ಕೊಟ್ಟಿದ್ದಾರೆ. ಅವರು ಯಾವ ಅಧ್ಯಯನ ಮಾಡಿದರು, ಅವರ ಯಾವ ನಡೆಗಳು ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ, ಅದರಿಂದ ಈ ದೇಶದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ ಆಗುತ್ತದೆ ಅಂತ ಅವರು ತಿಳಿಸಿ ಹೇಳಲಿಲ್ಲ.

ಬರೀ ಒಳ್ಳೆ ಮಾತಾಡುವ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಕೋಚ್ ಗೋಡ್ಬೋಲೆ (ಸವಿ ಮಾತಾಡುವ) ಅವರಂತೆ `ನಾ ಬ್ರೂಯಾತ ಅಪ್ರಿಯಂ ಸತ್ಯಂ’ ಅಂತ ಕೆಲವು ವಿಷಯ ಹೇಳದೇ ಬಿಟ್ಟರು, ನಾವು `ಇದಮಿತ್ಥಂ’ ಅಂತ ನಂಬಿಬಿಟ್ಟಿವಿ.

ಹಂಗಾರ ನಮ್ಮ ಸಚಿವರು ಮಾಡಿದ್ದಾದರೂ ಏನು ?

ಅದನ್ನು ಕಂಡುಹಿಡಿಯುವುದು ಅಷ್ಟೇನೂ ಕಷ್ಟವಿಲ್ಲ. ಈ ಅಭಿನಂದನೆ ನೀಡಿದ ಸಭೆಯಲ್ಲಿಯೇ ಅವರು ಒಂದು ಘೋಷಣೆ ಮಾಡಿದರು. ಭಾರತ ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರ. ನಾವು ಎರಡನೇ ಸ್ಥಾನದಲ್ಲಿ ಯಾಕೆ ಇರಬೇಕು? ಮೊದಲನೇ ಸ್ಥಾನದಲ್ಲಿ ಯಾಕ ಇರಬಾರದು? ಅಂತ ಪ್ರಶ್ನೆ ಕೇಳಿದರು.

ಜೋಶಿಜಿ ಅವರು ಆ ಮೊದಲನೇ ಸ್ಥಾನದ ದಾರಿ ತೋರಿಸಿಕೊಟ್ಟರು.

ಜೂನ್ ತಿಂಗಳ ಲಾಕ್‍ಡೌನ್‍ದಾಗ, ಲೋಕಸಭೆ- ರಾಜ್ಯಸಭೆ ಎರಡೂ ನಡೆಯದಾಗ, ರಾಜ್ಯಗಗಳ ವಿಧಾನ ಸಭೆ -ವಿಧಾನ ಪರಿಷತ್ತು ಬಂದ್ ಆದಾಗ, ಕೇಂದ್ರ ಸರಕಾರ ಈ ದೇಶದ 41 ಕಡೆಗಳಲ್ಲಿ ಭೂ ಗರ್ಭದಾಗ ಇರೋ ಕಲ್ಲಿದ್ದಲು ಗಣಿಗಳನ್ನು ಖಾಸಗಿಕರಣ ಮಾಡೋ ನಿರ್ಧಾರ ತೊಗೋಂಡಿತು. ಅದಕ್ಕ ಬೇಕಾದ ಪರಿಸರ ಇಲಾಖೆ, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆ ಸಮ್ಮತಿಯನ್ನು ಗಡಿಬಿಡಿಯಿಂದ ತೊಗೊಂಡು ಇನ್ನೂ ಗಡಿಬಿಡಿಯಿಂದ ಘೋಷಿಸಿತು.

ಇವುಗಳಲ್ಲಿ ಶೇಕಡಾ 80 ರಷ್ಟು ಆದಿವಾಸಿಗಳು ಇರೋ ಪ್ರದೇಶಗಳು. ಆದರೆ ಅಲ್ಲಿನ ಜನರನ್ನ ಕೇಳಲಿಲ್ಲ. ಅವರ ಗ್ರಾಮಸಭೆ, ಗ್ರಾಮ ಅರಣ್ಯ ಸಮಿತಿ ಸಭೆ ನಡೆಸಲಿಲ್ಲ. ಸುಪ್ರೀಂ ಕೋರ್ಟ್‍ನ ಹಲವಾರು ಆದೇಶಗಳನ್ನು ಅಡವಿಯ ಕುಳಿರ್ ಗಾಳಿಗೆ ತೂರಿ ಬಿಟ್ಟು, ಟೆಂಡರ್ ಕರೆಯಲು ಸಜ್ಜಾದರು.

ಕಳೆದ ನೇಹರೂವಿನ್ ದಶಕಗಳಲ್ಲಿ, ಸುಮಾರು ಆರು ಕೋಟಿ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಲಾಗಿದೆ. ಅವರಲ್ಲಿ ಸುಮಾರು 25 ಶೇಕಡಾ ಜನರಿಗೆ ಪರಿಹಾರ ಸಿಕ್ಕರೂ ಅವರ ಪುನರ್ವಸತಿ ಸರಿಯಾಗಿ ಆಗಿಲ್ಲ. ಅಲ್ಲಿನ ಜಲಮೂಲ, ವನ್ಯ ಜೀವಿ, ಹಕ್ಕಿ, ಇತರ ಪರಿಸರ ಕಲುಷಿತ ಆದ ನಂತರ ಅರಣ್ಯ ಪ್ರದೇಶದ ಯೋಜನೆಗಳಿಗೆ ಒಪ್ಪಿಗೆ ಕೊಡೋ ವೇಗ ಕಮ್ಮಿ ಆಯಿತು.

ಆಗಿನ ಸರ್ಕಾರಗಳು ತಮ್ಮ ಯಂತ್ರಾತ್ಮಕ್ಕೆ ಅಂಜದೇ ಇದ್ದರೂ ಜನರಿಗೆ, ಮಾಧ್ಯಮಗಳಿಗೆ, ನ್ಯಾಯಾಲಯಕ್ಕೆ, ಹೆದರುತ್ತಿದ್ದರು.

ಇವು ಯಾವುದಕ್ಕೂ ಹೆದರದೇ ಇರೋದು ಅಂದ್ರ ಅದು ಯಾ ಪರಿ ಧೈರ್ಯ ಇರಬೇಕು ನಮ್ಮ ಸಚಿವರಿಗೆ ಇರಬೇಕು? ನೀವೇ ನೋಡ್ರಿ.

ಈ 41 ಗಣಿಗಳು, ಐದು ರಾಜ್ಯಗಳ ಹಸಿರು ಪಟ್ಟಿಗಳಲ್ಲಿ ಬರತಾವು. ಅಲ್ಲಿ ಅರಣ್ಯ ಅಭಿವೃದ್ಧಿ ಚಟುವಟಿಕೆ ಬಿಟ್ಟು ಬೇರೆ ಏನೂ ಮಾಡಬಾರದು ಅಂತ ಒಂದು ತೀರ್ಪು ಐತಿ. ಸರ್ಕಾರವಾಗಲಿ, ಖಾಸಗಿ ಕಂಪನಿ ಆಗಲಿ, ಯಾವ ಕೆಲಸ ಮಾಡಿದರೂ ಕೂಡ, ಆದಿವಾಸಿಗಳ ಭಾಗೀದಾರಿಕೆಯಲ್ಲಿಯೇ ಮಾಡಬೇಕು ಅಂತ ಒಂದು ತೀರ್ಪು ಐತಿ. ಪರಿಸರ ಅಂದ್ರ ಬರೇ ಮಣ್ಣು, ನೀರು ಅಲ್ಲ, ಅಲ್ಲಿನ ಜನರ ಹಿತರಕ್ಷಣೆಯೂ ಆದರಾಗ ಸೇರೇತಿ ಅಂತ ಮತ್ತೊಂದು ತೀರ್ಪು ಐತಿ. ಅರಣ್ಯ, ಸಹಜ ಬೆಳೆ ಅಥವಾ ಬಹು ಬೆಳೆ ಜಮೀನನ್ನು ಭೂ ಸ್ವಾಧೀನ ಕಾಯಿದೆಯೊಳಗೆ ಸರಕಾರ ತೊಗೊಳಿಕ್ಕೆ ಬರೋದಿಲ್ಲ ಅಂತ ಇನ್ನೊಂದು ಐತಿ.

ಇವು ಯಾವುವೂ ಕೇಂದ್ರದ ಕಲ್ಲಿದ್ದಲು ಹಾಗೂ ಸಂಸದೀಯ ಖಾತೆ ಸಚಿವರಿಗೆ ನೆನಪು ಬರಲಿಲ್ಲ. ಬಂದರೂ ಸಹಿತ ತಮ್ಮ ಅಗಾಧ ಮರೆವಿನ ಶಕ್ತಿಯಿಂದ ಅದನ್ನು ಅವರು ಗೆದ್ದಿರಬಹುದು.

ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಇರೋ ಸಂವಿಧಾನದ ಏಳನೇ ಭಾಗದ ಕಲಂಗಳಾಗಲಿ, ಪೆಸಾ ಕಾಯಿದೆಯಾಗಲಿ, ಸುಪ್ರೀಂ ಕೋರ್ಟಿನ ಸಮಾತಾ ತೀರ್ಪು, ಆದಿವಾಸಿ ಸಲಹಾ ಸಮಿತಿ ರಚನೆ, ಅಥವಾ ನೆಲದ ಒಡೆಯನೇ ನೆಲದಾಳದ ಅದಿರಿನ ಒಡೆಯ ಎನ್ನುವ 2013ರ ತೀರ್ಪು ಆಗಲಿ, ಅವರಿಗೆ ಮುಖ್ಯ ಅನ್ನಿಸಲಿಲ್ಲ.

ಇಷ್ಟು ದಿನ ಅರಣ್ಯ ಅಧಿಕಾರಿಗಳು ಯಾವುದು ಯಾವುದೋ ತೀರ್ಪಿನ ಹೆಸರು ಹೇಳಿ ಅಡವಿಯಲ್ಲಿ ಅಡುಗೆ ಮನೆಗೆ ಬೇಕಾದ ಕಟ್ಟಿಗೆ ತರಲು ಹೋಗುತ್ತಿದ್ದವರನ್ನು ಜೈಲಿಗೆ ಹಾಕುತ್ತಿದ್ದರು. ಅಂತಾದ್ದರಲ್ಲಿ ಇಷ್ಟು ಧಾಡಸಿತನದಿಂದ, ಪರಿಸರಕ್ಕೆ ಆಗಬಹುದಾದ ಹಾನಿಯನ್ನು ಕಲ್ಲು ಮನಸಿನಿಂದ ಸಹಿಸಿಕೊಂಡು ರಾಷ್ಟ್ರದ ಆರ್ಥಿಕತೆಗೆ ಕುಮ್ಮಕ್ಕು ಕೊಡೋ ದೃಷ್ಟಿಯಿಂದ ಕಲ್ಲಿದ್ದಲು ಗಣಿಗಾರಿಕೆಗೆ ಅನುವು ಮಾಡಿಕೊಡೋದು ಅಂದರೆ ಸುಮ್ಮನೇ ಏನು?

ಅದಕ್ಕೇ ಅವರು ಅವರನ್ನ ಅಭಿನಂದಿಸಿದ್ದು.


ಇದನ್ನು ಓದಿ: ದಲಿತ ಚಿಂತಕರನ್ನು ಮುಗಿಸಲು ಎಲ್ಗರ್ ಪರಿಷತ್ ಪ್ರಕರಣ ವರ್ಗಾವಣೆ: ಬಾಂಬೆ ಹೈಕೋರ್ಟ್‌‌ನಲ್ಲಿ ಅರ್ಜಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...