Homeಫ್ಯಾಕ್ಟ್‌ಚೆಕ್ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

- Advertisement -
- Advertisement -

ನ್ಯೂಯಾರ್ಕ್ ಮೂಲದ ಜಾಹೀರಾತು ಸಂಸ್ಥೆಯೊಂದು ರಾಮನ ಚಿತ್ರಗಳನ್ನು ಟೈಮ್ಸ್ ಸ್ಕ್ವೇರ್‌ನಲ್ಲಿ ಜಾಹೀರಾತು ಫಲಕಗಳಲ್ಲಿ ಪ್ರಸಾರ ಮಾಡಲು ನಿರಾಕರಿಸಿದ ನಂತರ, ಹಲವಾರು ಸುದ್ದಿ ವೆಬ್‌ಸೈಟ್‌ಗಳು, ಇದು ಅಮೆರಿಕಾದಲ್ಲಿನ “ಮುಸ್ಲಿಂ ಗುಂಪುಗಳು” ನಡೆಸಿದ ಅಭಿಯಾನದ ಫಲಿತಾಂಶವಾಗಿದೆ ಎಂದು ವರದಿ ಮಾಡಿವೆ.

ಆದರೆ ನಿಜವೇನೆಂದರೆ ಈ ವರದಿಗಳಿಗೆ ವಿರುದ್ದವಾಗಿ ಜಾಹೀರಾತುಗಳನ್ನು ಹಾಕದಂತೆ ಪ್ರತಿಭಟಿಸಿರುವವರಲ್ಲಿ ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮಗಳ ನಾಗರಿಕ ಹಕ್ಕುಗಳ ಸಂಘಟನೆಯ ಜನರು ಇದ್ದರು ಎಂಬುವುದಾಗಿದೆ.

ಒಪಿಇಂಡಿಯಾ ಮತ್ತು ಇಂಡಿಯಾ.ಕಾಂನಂತಹ ಸುದ್ದಿ ಸಂಸ್ಥೆಗಳು ನಾಸ್ಡಾಕ್ ಬಿಲ್‌ಬೋರ್ಡ್ ಅನ್ನು ನಿರ್ವಹಿಸುವ ಜಾಹೀರಾತು ಕಂಪನಿಯಾದ ಬ್ರಾಂಡೆಡ್ ಸಿಟೀಸ್ ನೆಟ್ವರ್ಕ್ ಮುಸ್ಲಿಂ ಸಂಘಟನೆಗಳು ಇದರ ವಿರುದ್ಧ ಅರ್ಜಿಯನ್ನು ಸಲ್ಲಿಸಿದ ನಂತರ ಬಿಲ್‌ಬೋರ್ಡ್ ನೀಡಲು ನಿರಾಕರಿಸಿದೆ ಎಂದು ವರದಿಗಳನ್ನು ಪ್ರಕಟಿಸಿತು.

ದಕ್ಷಿಣ ಏಷ್ಯಾದ ನಾಗರಿಕ ಹಕ್ಕುಗಳ ಗುಂಪುಗಳ ಒಕ್ಕೂಟದ ಪ್ರತಿಭಟನೆಯಿಂದಾಗಿ ಜಾಹೀರಾತುಗಳನ್ನು ಹಾಕಲು ಕಂಪನಿ ನಿರಾಕರಿಸಿದ ನಂತರ ಸುಳ್ಳು ಹೇಳಿಕೆಗಳನ್ನು ಒಳಗೊಂಡ ಸುದ್ದಿಗಳನ್ನು ಈ ವೆಬ್‌ಸೈಟ್‌ಗಳು ವರದಿ ಮಾಡುತ್ತುದೆ.

ನಡೆದದ್ದೇನು ಅಥವಾ ಧ್ವೇಷ ಅಭಿಯಾನ ನಡೆಸುವ ವೆಬ್‌ಸೈಟ್ ಹೇಳಿದ್ದೇನು?

ಬಲಪಂಥೀಯ ವೆಬ್‌ಸೈಟ್‌ಗಳಾದ ಒಪಿಂಡಿಯಾ ಮತ್ತು ಇಂಡಿಯಾ.ಕಾಮ್ ತಮ್ಮ ವರದಿಗಳಲ್ಲಿ ಹೀಗೆ ಬರೆದಿದೆ “ಭಾರತೀಯ ಅಲ್ಪಸಂಖ್ಯಾತರ ವಕೀಲರ ನೆಟ್‌ವರ್ಕ್- (ಇಮಾನ್‌ನೆಟ್), ಜಸ್ಟಿಸ್ ಫಾರ್ ಆಲ್, ಕೊಯಿಲಿಷನ್ ಆಫ್ ಅಮೆರಿಕನ್ ಫಾರ್‌ ಪ್ಲೂರಲಿಸಂ ಇನ್ ಇಂಡಿಯಾ (ಸಿಎಪಿಐ), ಉತ್ತರ ಅಮೆರಿಕಾದ ಭಾರತೀಯ ಮುಸ್ಲಿಂ ಸಂಘ (ನೈಮಾ), ಇಸ್ಲಾಮಿಕ್ ಸರ್ಕಲ್ ಆಫ್ ನಾರ್ಥ್ ಅಮೆರಿಕಾ-ಸೋಷಿಯಲ್ ಜಸ್ಟಿಸ್ (ಐಸಿಎನ್‌ಎಎಸ್‌ಜೆ) ಮತ್ತು ದಿ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಪೀಸ್ ಅಂಡ್ ಜಸ್ಟೀಸ್ ಈ ಅರ್ಜಿಯನ್ನು ಸಲ್ಲಿಸಿ ಜಾಹೀರಾತು ಫಲಕಗಳಲ್ಲಿ ರಾಮನ ಚಿತ್ರ ಬಾರದಂತೆ ತಡೆ ಹಿಡಿದಿದ್ದಾರೆ”.

ಆದರೆ ಈ ಕ್ರಮವನ್ನು ವಿರೋಧಿಸುವ ಇತರ ಸಂಘಟನೆಗಳ ಬಗ್ಗೆ ವರದಿಯು ಮೌನವಾಗಿದೆ. ಆ ಮೂಲಕ ಕೇವಲ ಮುಸ್ಲಿಂ ಸಂಘಟನೆಗಳನ್ನು ಮಾತ್ರ ತನ್ನ ದ್ವೇಷ ಪ್ರಚಾರದ ಗುರಿಯಾಗಿಸಿಕೊಂಡಿದೆ.

ಕಂಪನಿಯು ಜಾಹಿರಾತು ಹಾಕುವುದನ್ನು ನಿರಾಕರಿಸಿರುವುದು “ಜಿಹಾದಿ ಪಡೆಗಳಿಗೆ” ತಲೆಬಾಗುವುದನ್ನು ಸಂಕೇತಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವರದಿಯನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ.

ಬಿಲ್‌ಬೋರ್ಡ್ ವಿರುದ್ದ ಪ್ರತಿಭಟಿಸಿದ ನಾಗರಿಕ ಹಕ್ಕುಗಳ ಸಂಘಟನೆ

ಜುಲೈ 31 ರಂದು ಅಮೆರಿಕಾದ ಹಲವಾರು ನಾಗರಿಕ ಹಕ್ಕುಗಳ ಸಂಘಟನೆಗಳಾದ ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೇರ್ಸ್ ಕಮಿಟಿ (ಎಐಪಿಎಸಿ) ನ್ಯೂಯಾರ್ಕ್ ನಗರದ ಮೇಯರ್‌ಗೆ ಆಗಸ್ಟ್ 5 ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ “ಇಸ್ಲಾಮೋಫೋಬಿಕ್” ಬಿಲ್‌ಬೋರ್ಡ್ ಅನ್ನು ಪ್ರದರ್ಶಿಸುವುದನ್ನು ತಡೆಯುವಂತೆ ಕೇಳಿಕೊಂಡಿದ್ದವು.

ಟೈಮ್ಸ್ ಸ್ಕ್ವೇರ್ನಲ್ಲಿ ಹಾಕಲಾಗುವ ಜಾಹೀರಾತುಗಳ ಪ್ರದರ್ಶನವು “ನಂಬಿಕೆಯ ಆಚರಣೆಯಲ್ಲ ಆದರೆ ದ್ವೇಷದ ಆಚರಣೆಯಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇವುಗಳಲ್ಲಿ ಕೊಯಿಲಿಷನ್ ಅಗೈನ್ಸ್ಟ್‌ ಫ್ಯಾಸಿಸಂ ಇನ್ ಇಂಡಿಯಾ (ಸಿಎಎಫ್‌ಐ), ಹಿಂದೂಸ್ ಫಾರ್‌ ಹ್ಯೂಮನ್ ರೈಟ್ (ಎಚ್‌ಎಫ್‌ಹೆಚ್ಆರ್), ಗ್ಲೋಬಲ್ ಇಂಡಿಯನ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಜಿಪಿಎ), ಅಸೋಸಿಯೇಷನ್ ಆಫ್ ಇಂಡಿಯನ್ ಮುಸ್ಲಿಸ್, ಸಾಧನಾ: ಕೊಲಿಷನ್ ಆಫ್ ಪ್ರೋಗ್ರೆಸಿವ್‌ ಹಿಂದೂಸ್ ಮತ್ತು ಇತರವು ಸೇರಿವೆ.

ಹಿಂದೂಸ್ ಫಾರ್‌ ಹ್ಯೂಮನ್ ರೈಟ್ (ಎಚ್‌ಎಫ್‌ಹೆಚ್‌ಆರ್) ಸಂಘಟನೆಯ ಸಹ-ಸಂಸ್ಥಾಪಕಿ ಮತ್ತು ಮಂಡಳಿಯ ಸದಸ್ಯೆ ಸುನೀತಾ ವಿಶ್ವನಾಥ್ ಅವರು “ಕೆಲವನ್ನು ಹೊರತುಪಡಿಸಿ ಎಲ್ಲಾ ಸಂಘಟನೆಗಳು ಮುಸ್ಲಿಮರದ್ದಲ್ಲ. ನಾವೆಲ್ಲರೂ ನ್ಯೂಯಾರ್ಕ್ ಚುನಾಯಿತ ಅಧಿಕಾರಿಗಳಿಗೆ ಜಾಹೀರಾತು ಫಲಕಗಳ ಮಾಲೀಕರ ಮೇಲೆ ಒತ್ತಡ ಹೇರಿದ್ದೇವೆ ಮತ್ತು ನಮ್ಮ ಧ್ವನಿಯನ್ನು ಗಟ್ಟಿಯಾದ ರೀತಿಯಲ್ಲಿ ಎತ್ತಿದ್ದೇವೆ” ಎಂದಿದ್ದಾರೆ

“ವಿವಿಧ ರೀತಿಯ ಭಾರತೀಯ ವಲಸೆಗಾರರು ಭಾರತೀಯ ಪ್ರಜಾಪ್ರಭುತ್ವಕ್ಕಾಗಿ ಮಾತನಾಡಲು ಒಂದಾಗಬೇಕು ಮತ್ತು ಸಂಘಪರಿವಾರವನ್ನು ಸೋಲಿಸಲು ಸಹಾಯ ಮಾಡಬೇಕು. ಪ್ರತಿರೋಧ ಚಳವಳಿಯು ಹಿಂದೂ ಎಂದು ಗುರುತಿಸುವವರು ಸೇರಿದಂತೆ ಎಲ್ಲರನ್ನೂ ಸೇರಿಸುವ ಅಗತ್ಯವಿದೆ” ಎಂದು ಸುನಿತಾ ವಿಶ್ವನಾಥ್ ಹೇಳಿದ್ದಾರೆ.

ಒಕ್ಕೂಟದ ಭಾಗವಾಗಿದ್ದ ಗ್ಲೋಬಲ್ ಇಂಡಿಯಾ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಜಿಐಪಿಎ) ಯ ಪ್ರತಿನಿಧಿ ಪ್ರತಿಭಟನೆಗಳು ಭಾರತೀಯ-ಅಮೇರಿಕನ್ ವಲಸೆಗಾರರಿಂದಲೇ ಹೊರತು ಯಾವುದೇ ಒಂದು ನಿರ್ದಿಷ್ಟ ನಂಬಿಕೆ ಅಥವಾ ಧರ್ಮದ ಜನರಿಂದ ಅಲ್ಲ ಎಂದು ಹೇಳಿದರು.

ಆಗಸ್ಟ್ 5 ರಂದು ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮ ಮಂದಿರದ ಜಾಹಿರಾತು ಹಾಕದಿರುವಂತೆ ನಾಗರಿಕ ಹಕ್ಕುಗಳ ಗುಂಪು ಒತ್ತಡ ಹಾಕಿದ್ದರಿಂದ ಜಾಹೀರಾತು ಸಂಸ್ಥೆ ಜಾಹಿರಾತು ಪ್ರಸಾರ ಮಾಡಲು ನಿರಾಕರಿಸಿತು. ಆದರೆ ಈ ಪ್ರತಿಭಟನೆಯು ವಿವಿಧ ನಾಗರಿಕ ಹಕ್ಕುಗಳ ಗುಂಪುಗಳ ಸಾಮೂಹಿಕ ಪ್ರಯತ್ನವಾಗಿತ್ತು ಹಾಗೂ ಅದು ಕೇವಲ ಮುಸ್ಲಿಮರ ಗುಂಪುಗಳದ್ದು ಮಾತ್ರವಾಗಿರಲಿಲ್ಲ.

ಕೃಪೆ: ದಿ ಕ್ವಿಂಟ್


ಓದಿ: ಫ್ಯಾಕ್ಟ್‌ಚೆಕ್: ನ್ಯೂಯಾರ್ಕ್‌ನ ’ಟೈಮ್ಸ್‌ ‌ಸ್ಕ್ವೇರ್’ನಲ್ಲಿ ರಾಮನ ಚಿತ್ರ ಬಿತ್ತರಿಸಲಾಗಿದೆಯೆ?


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...