Homeಅಂಕಣಗಳುಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

ಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

- Advertisement -
- Advertisement -

ಧಾರವಾಡದಲ್ಲಿ ನಡೆಯಲಿರುವ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭಕ್ಕೆ, ಸಮ್ಮೇಳನಾಧ್ಯಕ್ಷರಿಗೆ ಸಾವಿರ ಮಂದಿ ‘ಸುಮಂಗಲಿ’ಯರಿಂದ ಪೂರ್ಣಕುಂಭ ಸ್ವಾಗತದ ವಿಚಾರ ಪತ್ರಿಕೆಗಳಲ್ಲಿ ಬರುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಸಾಹಿತ್ಯ ಮತ್ತು ಶಿಕ್ಷಣದ ವಿಚಾರದಲ್ಲಿ ನಾಡಿಗೆ ಹೆಸರಾಗಿರುವ ಧಾರವಾಡದ ಚಿಂತಕಿಯರು (ಮತ್ತು ಚಿಂತಕರೂ ಕೂಡಾ) ಹಾಗೂ ರಾಜ್ಯದ ಇತರೆಡೆಗಳ ಪ್ರಗತಿಪರ ಹೋರಾಟಗಾರ್ತಿಯರು, ಬರಹಗಾರ್ತಿಯರು ತೀವ್ರವಾಗಿ ಈ ಪೂರ್ಣಕುಂಭ ಸ್ವಾಗತದ ಸಂಗತಿಯನ್ನು ವಿರೋಧಿಸಿದರು. “‘ಸುಮಂಗಲಿ’ಯರಿಂದ ಸ್ವಾಗತ ಎಂದರೆ ಹಾಗಾದರೆ ಅಮಂಗಲೆಯರು ಯಾರು?”, “ಪೂರ್ಣಕುಂಭದ ಸ್ವಾಗತಕ್ಕೆ ಅಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವೋ ಸಾಹಿತ್ಯಿಕ ಕಾರ್ಯಕ್ರಮವೋ?”, “ಧಾರವಾಡದ ನೆಲಕ್ಕೆ ಬಂಡಾಯದ ಮೂಲಗುಣವಿದೆ, ಇಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಆಚರಣೆಗಳಿಗೆ ಹೇಗೆ ಅವಕಾಶ ನೀಡಲು ಸಾಧ್ಯ?” ಇವೇ ಮೊದಲಾದ ಪ್ರಶ್ನೆಗಳು ಧಾರವಾಡಿಗರು ಮತ್ತು ಇತರೆಡೆಗಳ ಸಾಹಿತ್ಯಪ್ರಿಯರಿಂದ ತೂರಿಬಂದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರನ್ನೇ ಗುರಿಯಾಗಿಸಿ ಆನ್‍ಲೈನ್ ಪತ್ರ ಚಳವಳಿಯೂ ನಡೆದು ಈ ವಿಷಯ ಗಂಭೀರ ತಿರುವು ಪಡೆದುಕೊಳ್ಳುವ ಲಕ್ಷಣ ಕಾಣಿಸಿತು. ಕನ್ನಡದ ಪತ್ರಿಕೆಗಳೂ ಕೂಡಾ ತಕ್ಷಣವೇ ಈ ವಿಚಾರಕ್ಕೆ ಸ್ಪಂದಿಸಿ ‘ಪೂರ್ಣಕುಂಭಕ್ಕೆ ವಿರೋಧ’ ಎಂಬ ಪತ್ರಗಳನ್ನು ಪ್ರಕಟಿಸಿದವು. ಒಟ್ಟಿನಲ್ಲಿ ಈ ಎಲ್ಲ ವಿರೋಧಗಳ ಬಿಸಿ ತಟ್ಟಿ ಕೊನೆಗೂ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತು ಈ ಆಚರಣೆಯಿಂದ ಹಿಂದೆ ಸರಿದಿದೆ. ಸಂಘಟಕರು ತಮ್ಮ ನಿರ್ಧಾರವನ್ನು ಸಮರ್ಥಿಸುವ ಅನೇಕ ವಾದಗಳನ್ನು ಮುಂದಿಟ್ಟರೂ ಕೂಡಾ ಅಂತಿಮವಾಗಿ ಪೂರ್ಣಕುಂಭದ ವಿಚಾರವನ್ನು ಕೈಬಿಡುವ ಹಾಗೆ ಕಾಣುತ್ತಿದೆ. ಇದು ಬಹಳ ಪ್ರಮುಖವಾದ ಬೆಳವಣಿಗೆ.
‘ಪೂರ್ಣಕುಂಭದ ಸ್ವಾಗತ ನಡೆಯುತ್ತಿರುವುದು ಇದೇ ಮೊದಲ ಸಲವಲ್ಲ; ಈ ಹಿಂದೆಯೂ ನಡೆಯುತ್ತಾ ಬಂದಿದೆ; ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್‍ರಂತಹ ಬಂಡಾಯದ ಸಾಹಿತಿಗಳ ಅಧ್ಯಕ್ಷತೆಯಲ್ಲೂ ಕೂಡಾ ಇಂತಹವೆಲ್ಲ ನಡೆದಿದ್ದವು. ಆದರೆ ಈ ಬಾರಿ ಮಾತ್ರ ವಿರೋಧ ಯಾಕೋ ಅರ್ಥವಾಗುತ್ತಿಲ್ಲ’ ಎಂಬಂತೆ ಸಾಹಿತ್ಯ ಪರಿಷತ್ತು ಸಮರ್ಥನೆ ಕೊಟ್ಟುಕೊಂಡಿದೆ. ಈ ಹಿಂದೆ ಒಂದು ವೇಳೆ ಇಂತಹವು ನಡೆದದ್ದು ನಿಜವಾದರೆ ಅದೂ ಕೂಡಾ ಖಂಡನಾರ್ಹ. ಆದರೆ, ಹಿಂದೆ ನಡೆದಿತ್ತು; ಪ್ರಗತಿಪರರೇ ಇದ್ದಾಗ ನಡೆದಿತ್ತು ಎಂಬುದರ ಅರ್ಥ ಈಗಲೂ ನಡೆಯಲಿ ಎಂಬುದಂತೂ ಆಗಬಾರದು. ಈ ಬಾರಿ ವಿರೋಧ ಬಂದಿದೆ, ವಿರೋಧ ಸಕಾರಣವಾದುದಾಗಿದೆ. ಆದ್ದರಿಂದ ಇಂತಹ ಆಚರಣೆ ನಿಲ್ಲಬೇಕು, ಈ ಬಾರಿ ಮಾತ್ರವಲ್ಲ ಮುಂದೆಯೂ ನಡೆಯಬಾರದು ಎಂಬುದಂತೂ ಖಚಿತ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಆಚರಣೆಗಳು ಸದ್ದಿಲ್ಲದೆ ನುಸುಳುತ್ತಾ ಸಾರ್ವಜನಿಕ ಸಭೆ ಸಮಾರಂಭಗಳ ಭಾಗವಾಗುತ್ತಿರುವುದು ಸಹಜವೆಂಬಂತೆ ನಡೆಯುತ್ತಿದೆ. ಈ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭದ ವಿಚಾರಕ್ಕೆ ಬಂದ ಸಮರ್ಥನೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ. ಈ ಹಿಂದೆ ನಡೆದಿತ್ತೆಂಬುದಷ್ಟೇ ಅಲ್ಲ, ಇದು ನಮ್ಮ ದೇಶದ ಸಂಸ್ಕøತಿ, ಅದನ್ನು ಆಚರಿಸಿದರೆ ತಪ್ಪೇನಿದೆ ಎಂಬರ್ಥದಲ್ಲಿ ಹಲವಾರು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದರಲ್ಲೂ ಮಹಿಳಾ ಚಿಂತಕಿಯರು ಯಾರು ಇದನ್ನೆಲ್ಲ ವಿರೋಧಿಸುತ್ತಿದ್ದರೋ, ಅವರುಗಳನ್ನು ಸಂಸ್ಕøತಿ ವಿರೋಧಿಗಳೆಂಬಂತೆ ಪರೋಕ್ಷವಾಗಿ ದೂಷಿಸುವ ಕೆಲಸವೂ ನಡೆಯಿತು. ಇದು ನಿಜಕ್ಕೂ ಈ ದೇಶದ ಸಾಮಾನ್ಯ ಸಂಪ್ರದಾಯಕ್ಕೆ ವಿರುದ್ಧವಾದುದೆಂಬುದು ಹೆಚ್ಚು ಮುನ್ನೆಲೆಗೆ ಬರಲಿಲ್ಲ. ಸಾರ್ವಜನಿಕ ಕಾರ್ಯಕ್ರಮವೊಂದು ಧರ್ಮ ನಿರಪೇಕ್ಷವಾಗಿರಬೇಕು ಹಾಗೂ ತನ್ನ ಮೂಲ ಆಶಯಕ್ಕೆ ಪೂರಕವಾದ ರೀತಿಯಲ್ಲಿ ನಡೆಯಬೇಕು ಎಂಬುದು ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಈ ದೇಶದ ಸಾಮಾನ್ಯ ಜ್ಞಾನ. ಅಸಂಖ್ಯಾತ ಧರ್ಮಗಳಿರುವ ಈ ದೇಶದಲ್ಲಿ ಸೌಹಾರ್ದತೆ ಉಳಿಯಬೇಕಾದರೆ ಪಾಲಿಸಲೇಬೇಕಾದ ಮೂಲಭೂತ ಸಂಗತಿಗಳಲ್ಲಿ ಇದೂ ಒಂದು. ಆದರೆ, ಈ ಸಾಮಾನ್ಯ ಜ್ಞಾನವನ್ನು ಮೀರುವ ರೀತಿಯಲ್ಲಿ ಸಾಂಸ್ಕøತಿಕ ಹೇರಿಕೆಯ ವಾತಾವರಣ ಬಲಿಯುತ್ತಿರುವುದು ಆತಂಕದ ಸಂಗತಿ. ಆದ್ದರಿಂದಲೇ, ಈ ಹಿಂದೆ ಅಷ್ಟು ಚರ್ಚೆಗೆ ಗ್ರಾಸವಾಗದಿದ್ದ ಪೂರ್ಣಕುಂಭದಂತಹ ವಿಚಾರಗಳು ಶಾಂತಿ ಸೌಹಾರ್ದತೆ ಬಯಸುವವರು ಈ ವಾತಾವರಣದಲ್ಲಿ ಹೆಚ್ಚು ಎಚ್ಚರಿಕೆಯ ನೋಟ ಹೊಂದುತ್ತಿರುವುದರಿಂದ ಕಂಡುಬಂದಿರಲೂ ಬಹುದು.
ಇಲ್ಲೊಂದು ವೈರುಧ್ಯವಿರುವುದನ್ನೂ ಗಮನಿಸಬೇಕು. ಒಂದೆಡೆ, ಕನ್ನಡದ ಸಾಹಿತ್ಯ ಲೋಕ ಹೆಚ್ಚು ಸಂವೇದನಾಶೀಲವಾದುದು, ಜಾತ್ಯತೀತವಾದುದು ಮತ್ತು ಜನಪರ ಕಾಳಜಿಗಳಿಗೆ ಬೇಗ ತನ್ನನ್ನು ತಾನು ಒಗ್ಗಿಸಿಕೊಂಡಂಥದ್ದು ಎಂಬ ಒಂದು ವಿಚಾರ. ಅದೇ ಸಮಯದಲ್ಲಿ ಮತ್ತೊಂದೆಡೆ ಈ ದೇಶದ ಸಾಂಸ್ಕøತಿಕ ಸಾಮಾಜಿಕ ಇತಿಹಾಸವು ಅನೇಕಾನೇಕ ತಾರತಮ್ಯ, ವಿರೋಧಾಭಾಸ ಮತ್ತು ಶ್ರೇಣೀಕರಣಗಳನ್ನು ಹೊಂದಿ, ಅವುಗಳನ್ನು ಆಚರಿಸುತ್ತಾ, ವಿರೋಧ ಬಂದಾಗೆಲ್ಲ ಎತ್ತಿಹಿಡಿದು ಬಲವಾಗಿ ಸಮರ್ಥಿಸುತ್ತಾ ಬಂದಿರುವಂಥದ್ದು. ಆದ್ದರಿಂದಲೇ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಕಾಯಕ್ರಮಗಳೂ ಎಷ್ಟೋ ಬಾರಿ ಇಂತಹ ಶ್ರೇಣೀಕರಣ ಅಥವಾ ಅಸೂಕ್ಷ್ಮತೆಗಳನ್ನು ಪ್ರದರ್ಶಿಸುವಂತಿರುತ್ತವೆ. ಆಳ್ವಾಸ್ ನುಡಿಸಿರಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಬೋವಿ ಸಮುದಾಯದ ಪುರುಷರು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಿದ್ದ ಆಚರಣೆ ನೆನೆಯಬಹುದು. ಆದ್ದರಿಂದ, ಎಲ್ಲ ಬಗೆಯ ತಾರತಮ್ಯದ ಆಚರಣೆಗಳಿಂದ ಮುಕ್ತಿ ಬಯಸುವ ವಿಚಾರವಂತರು ಸದಾ ಎಚ್ಚರದಲ್ಲೇ ಇರಬೇಕಾಗುವ, ಸ್ವಲ್ಪ ಮೈಮರೆತರೂ ಇಂತಹ ಅನೇಕ ಆಚರಣೆಗಳು ಸಹಜವೆಂಬಂತೆ ಒಳತೂರುವ ಸನ್ನಿವೇಶವೇ ಇಂದೂ ಇದೆ (ಅಥವಾ ಈ ಅಪಾಯ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ) ಎಂಬ ವಾಸ್ತವವನ್ನು ಮರೆಯಲು ಸಾಧ್ಯವಿಲ್ಲ! ಕೆಲವೊಮ್ಮೆ ಸ್ವಲ್ಪ ಅತಿ ಎನ್ನಿಸಿದರೂ, ಇಂತಹವನ್ನು ವಿರೋಧಿಸಬೇಕಾದ್ದು ಇಂದು ಅನಿವಾರ್ಯವೂ ಕೂಡಾ.
ಆದ್ದರಿಂದ, ‘ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ’ದ ಆಚರಣೆಯನ್ನು ಬಹಳ ಬೇಗ ಗಮನಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ತಮ್ಮ ಸಕಾಲಿಕ ಮಧ್ಯಪ್ರವೇಶದಿಂದ ಅದನ್ನು ನಿಲ್ಲಿಸಲು ಪ್ರಯತ್ನಿಸಿದ ಕನ್ನಡದ ಎಚ್ಚೆತ್ತ ಮಹಿಳೆಯರನ್ನು ‘ನ್ಯಾಯಪಥ’ ಅಭಿನಂದಿಸುತ್ತದೆ. ಇಂತಹ ಎಚ್ಚರ ಇಂದಿನ ತುರ್ತು. ಆದ್ದರಿಂದ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...