Homeಅಂಕಣಗಳುಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

ಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

- Advertisement -
- Advertisement -

ಧಾರವಾಡದಲ್ಲಿ ನಡೆಯಲಿರುವ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭಕ್ಕೆ, ಸಮ್ಮೇಳನಾಧ್ಯಕ್ಷರಿಗೆ ಸಾವಿರ ಮಂದಿ ‘ಸುಮಂಗಲಿ’ಯರಿಂದ ಪೂರ್ಣಕುಂಭ ಸ್ವಾಗತದ ವಿಚಾರ ಪತ್ರಿಕೆಗಳಲ್ಲಿ ಬರುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಸಾಹಿತ್ಯ ಮತ್ತು ಶಿಕ್ಷಣದ ವಿಚಾರದಲ್ಲಿ ನಾಡಿಗೆ ಹೆಸರಾಗಿರುವ ಧಾರವಾಡದ ಚಿಂತಕಿಯರು (ಮತ್ತು ಚಿಂತಕರೂ ಕೂಡಾ) ಹಾಗೂ ರಾಜ್ಯದ ಇತರೆಡೆಗಳ ಪ್ರಗತಿಪರ ಹೋರಾಟಗಾರ್ತಿಯರು, ಬರಹಗಾರ್ತಿಯರು ತೀವ್ರವಾಗಿ ಈ ಪೂರ್ಣಕುಂಭ ಸ್ವಾಗತದ ಸಂಗತಿಯನ್ನು ವಿರೋಧಿಸಿದರು. “‘ಸುಮಂಗಲಿ’ಯರಿಂದ ಸ್ವಾಗತ ಎಂದರೆ ಹಾಗಾದರೆ ಅಮಂಗಲೆಯರು ಯಾರು?”, “ಪೂರ್ಣಕುಂಭದ ಸ್ವಾಗತಕ್ಕೆ ಅಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವೋ ಸಾಹಿತ್ಯಿಕ ಕಾರ್ಯಕ್ರಮವೋ?”, “ಧಾರವಾಡದ ನೆಲಕ್ಕೆ ಬಂಡಾಯದ ಮೂಲಗುಣವಿದೆ, ಇಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಆಚರಣೆಗಳಿಗೆ ಹೇಗೆ ಅವಕಾಶ ನೀಡಲು ಸಾಧ್ಯ?” ಇವೇ ಮೊದಲಾದ ಪ್ರಶ್ನೆಗಳು ಧಾರವಾಡಿಗರು ಮತ್ತು ಇತರೆಡೆಗಳ ಸಾಹಿತ್ಯಪ್ರಿಯರಿಂದ ತೂರಿಬಂದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರನ್ನೇ ಗುರಿಯಾಗಿಸಿ ಆನ್‍ಲೈನ್ ಪತ್ರ ಚಳವಳಿಯೂ ನಡೆದು ಈ ವಿಷಯ ಗಂಭೀರ ತಿರುವು ಪಡೆದುಕೊಳ್ಳುವ ಲಕ್ಷಣ ಕಾಣಿಸಿತು. ಕನ್ನಡದ ಪತ್ರಿಕೆಗಳೂ ಕೂಡಾ ತಕ್ಷಣವೇ ಈ ವಿಚಾರಕ್ಕೆ ಸ್ಪಂದಿಸಿ ‘ಪೂರ್ಣಕುಂಭಕ್ಕೆ ವಿರೋಧ’ ಎಂಬ ಪತ್ರಗಳನ್ನು ಪ್ರಕಟಿಸಿದವು. ಒಟ್ಟಿನಲ್ಲಿ ಈ ಎಲ್ಲ ವಿರೋಧಗಳ ಬಿಸಿ ತಟ್ಟಿ ಕೊನೆಗೂ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತು ಈ ಆಚರಣೆಯಿಂದ ಹಿಂದೆ ಸರಿದಿದೆ. ಸಂಘಟಕರು ತಮ್ಮ ನಿರ್ಧಾರವನ್ನು ಸಮರ್ಥಿಸುವ ಅನೇಕ ವಾದಗಳನ್ನು ಮುಂದಿಟ್ಟರೂ ಕೂಡಾ ಅಂತಿಮವಾಗಿ ಪೂರ್ಣಕುಂಭದ ವಿಚಾರವನ್ನು ಕೈಬಿಡುವ ಹಾಗೆ ಕಾಣುತ್ತಿದೆ. ಇದು ಬಹಳ ಪ್ರಮುಖವಾದ ಬೆಳವಣಿಗೆ.
‘ಪೂರ್ಣಕುಂಭದ ಸ್ವಾಗತ ನಡೆಯುತ್ತಿರುವುದು ಇದೇ ಮೊದಲ ಸಲವಲ್ಲ; ಈ ಹಿಂದೆಯೂ ನಡೆಯುತ್ತಾ ಬಂದಿದೆ; ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್‍ರಂತಹ ಬಂಡಾಯದ ಸಾಹಿತಿಗಳ ಅಧ್ಯಕ್ಷತೆಯಲ್ಲೂ ಕೂಡಾ ಇಂತಹವೆಲ್ಲ ನಡೆದಿದ್ದವು. ಆದರೆ ಈ ಬಾರಿ ಮಾತ್ರ ವಿರೋಧ ಯಾಕೋ ಅರ್ಥವಾಗುತ್ತಿಲ್ಲ’ ಎಂಬಂತೆ ಸಾಹಿತ್ಯ ಪರಿಷತ್ತು ಸಮರ್ಥನೆ ಕೊಟ್ಟುಕೊಂಡಿದೆ. ಈ ಹಿಂದೆ ಒಂದು ವೇಳೆ ಇಂತಹವು ನಡೆದದ್ದು ನಿಜವಾದರೆ ಅದೂ ಕೂಡಾ ಖಂಡನಾರ್ಹ. ಆದರೆ, ಹಿಂದೆ ನಡೆದಿತ್ತು; ಪ್ರಗತಿಪರರೇ ಇದ್ದಾಗ ನಡೆದಿತ್ತು ಎಂಬುದರ ಅರ್ಥ ಈಗಲೂ ನಡೆಯಲಿ ಎಂಬುದಂತೂ ಆಗಬಾರದು. ಈ ಬಾರಿ ವಿರೋಧ ಬಂದಿದೆ, ವಿರೋಧ ಸಕಾರಣವಾದುದಾಗಿದೆ. ಆದ್ದರಿಂದ ಇಂತಹ ಆಚರಣೆ ನಿಲ್ಲಬೇಕು, ಈ ಬಾರಿ ಮಾತ್ರವಲ್ಲ ಮುಂದೆಯೂ ನಡೆಯಬಾರದು ಎಂಬುದಂತೂ ಖಚಿತ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಆಚರಣೆಗಳು ಸದ್ದಿಲ್ಲದೆ ನುಸುಳುತ್ತಾ ಸಾರ್ವಜನಿಕ ಸಭೆ ಸಮಾರಂಭಗಳ ಭಾಗವಾಗುತ್ತಿರುವುದು ಸಹಜವೆಂಬಂತೆ ನಡೆಯುತ್ತಿದೆ. ಈ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭದ ವಿಚಾರಕ್ಕೆ ಬಂದ ಸಮರ್ಥನೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ. ಈ ಹಿಂದೆ ನಡೆದಿತ್ತೆಂಬುದಷ್ಟೇ ಅಲ್ಲ, ಇದು ನಮ್ಮ ದೇಶದ ಸಂಸ್ಕøತಿ, ಅದನ್ನು ಆಚರಿಸಿದರೆ ತಪ್ಪೇನಿದೆ ಎಂಬರ್ಥದಲ್ಲಿ ಹಲವಾರು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದರಲ್ಲೂ ಮಹಿಳಾ ಚಿಂತಕಿಯರು ಯಾರು ಇದನ್ನೆಲ್ಲ ವಿರೋಧಿಸುತ್ತಿದ್ದರೋ, ಅವರುಗಳನ್ನು ಸಂಸ್ಕøತಿ ವಿರೋಧಿಗಳೆಂಬಂತೆ ಪರೋಕ್ಷವಾಗಿ ದೂಷಿಸುವ ಕೆಲಸವೂ ನಡೆಯಿತು. ಇದು ನಿಜಕ್ಕೂ ಈ ದೇಶದ ಸಾಮಾನ್ಯ ಸಂಪ್ರದಾಯಕ್ಕೆ ವಿರುದ್ಧವಾದುದೆಂಬುದು ಹೆಚ್ಚು ಮುನ್ನೆಲೆಗೆ ಬರಲಿಲ್ಲ. ಸಾರ್ವಜನಿಕ ಕಾರ್ಯಕ್ರಮವೊಂದು ಧರ್ಮ ನಿರಪೇಕ್ಷವಾಗಿರಬೇಕು ಹಾಗೂ ತನ್ನ ಮೂಲ ಆಶಯಕ್ಕೆ ಪೂರಕವಾದ ರೀತಿಯಲ್ಲಿ ನಡೆಯಬೇಕು ಎಂಬುದು ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಈ ದೇಶದ ಸಾಮಾನ್ಯ ಜ್ಞಾನ. ಅಸಂಖ್ಯಾತ ಧರ್ಮಗಳಿರುವ ಈ ದೇಶದಲ್ಲಿ ಸೌಹಾರ್ದತೆ ಉಳಿಯಬೇಕಾದರೆ ಪಾಲಿಸಲೇಬೇಕಾದ ಮೂಲಭೂತ ಸಂಗತಿಗಳಲ್ಲಿ ಇದೂ ಒಂದು. ಆದರೆ, ಈ ಸಾಮಾನ್ಯ ಜ್ಞಾನವನ್ನು ಮೀರುವ ರೀತಿಯಲ್ಲಿ ಸಾಂಸ್ಕøತಿಕ ಹೇರಿಕೆಯ ವಾತಾವರಣ ಬಲಿಯುತ್ತಿರುವುದು ಆತಂಕದ ಸಂಗತಿ. ಆದ್ದರಿಂದಲೇ, ಈ ಹಿಂದೆ ಅಷ್ಟು ಚರ್ಚೆಗೆ ಗ್ರಾಸವಾಗದಿದ್ದ ಪೂರ್ಣಕುಂಭದಂತಹ ವಿಚಾರಗಳು ಶಾಂತಿ ಸೌಹಾರ್ದತೆ ಬಯಸುವವರು ಈ ವಾತಾವರಣದಲ್ಲಿ ಹೆಚ್ಚು ಎಚ್ಚರಿಕೆಯ ನೋಟ ಹೊಂದುತ್ತಿರುವುದರಿಂದ ಕಂಡುಬಂದಿರಲೂ ಬಹುದು.
ಇಲ್ಲೊಂದು ವೈರುಧ್ಯವಿರುವುದನ್ನೂ ಗಮನಿಸಬೇಕು. ಒಂದೆಡೆ, ಕನ್ನಡದ ಸಾಹಿತ್ಯ ಲೋಕ ಹೆಚ್ಚು ಸಂವೇದನಾಶೀಲವಾದುದು, ಜಾತ್ಯತೀತವಾದುದು ಮತ್ತು ಜನಪರ ಕಾಳಜಿಗಳಿಗೆ ಬೇಗ ತನ್ನನ್ನು ತಾನು ಒಗ್ಗಿಸಿಕೊಂಡಂಥದ್ದು ಎಂಬ ಒಂದು ವಿಚಾರ. ಅದೇ ಸಮಯದಲ್ಲಿ ಮತ್ತೊಂದೆಡೆ ಈ ದೇಶದ ಸಾಂಸ್ಕøತಿಕ ಸಾಮಾಜಿಕ ಇತಿಹಾಸವು ಅನೇಕಾನೇಕ ತಾರತಮ್ಯ, ವಿರೋಧಾಭಾಸ ಮತ್ತು ಶ್ರೇಣೀಕರಣಗಳನ್ನು ಹೊಂದಿ, ಅವುಗಳನ್ನು ಆಚರಿಸುತ್ತಾ, ವಿರೋಧ ಬಂದಾಗೆಲ್ಲ ಎತ್ತಿಹಿಡಿದು ಬಲವಾಗಿ ಸಮರ್ಥಿಸುತ್ತಾ ಬಂದಿರುವಂಥದ್ದು. ಆದ್ದರಿಂದಲೇ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಕಾಯಕ್ರಮಗಳೂ ಎಷ್ಟೋ ಬಾರಿ ಇಂತಹ ಶ್ರೇಣೀಕರಣ ಅಥವಾ ಅಸೂಕ್ಷ್ಮತೆಗಳನ್ನು ಪ್ರದರ್ಶಿಸುವಂತಿರುತ್ತವೆ. ಆಳ್ವಾಸ್ ನುಡಿಸಿರಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಬೋವಿ ಸಮುದಾಯದ ಪುರುಷರು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಿದ್ದ ಆಚರಣೆ ನೆನೆಯಬಹುದು. ಆದ್ದರಿಂದ, ಎಲ್ಲ ಬಗೆಯ ತಾರತಮ್ಯದ ಆಚರಣೆಗಳಿಂದ ಮುಕ್ತಿ ಬಯಸುವ ವಿಚಾರವಂತರು ಸದಾ ಎಚ್ಚರದಲ್ಲೇ ಇರಬೇಕಾಗುವ, ಸ್ವಲ್ಪ ಮೈಮರೆತರೂ ಇಂತಹ ಅನೇಕ ಆಚರಣೆಗಳು ಸಹಜವೆಂಬಂತೆ ಒಳತೂರುವ ಸನ್ನಿವೇಶವೇ ಇಂದೂ ಇದೆ (ಅಥವಾ ಈ ಅಪಾಯ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ) ಎಂಬ ವಾಸ್ತವವನ್ನು ಮರೆಯಲು ಸಾಧ್ಯವಿಲ್ಲ! ಕೆಲವೊಮ್ಮೆ ಸ್ವಲ್ಪ ಅತಿ ಎನ್ನಿಸಿದರೂ, ಇಂತಹವನ್ನು ವಿರೋಧಿಸಬೇಕಾದ್ದು ಇಂದು ಅನಿವಾರ್ಯವೂ ಕೂಡಾ.
ಆದ್ದರಿಂದ, ‘ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ’ದ ಆಚರಣೆಯನ್ನು ಬಹಳ ಬೇಗ ಗಮನಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ತಮ್ಮ ಸಕಾಲಿಕ ಮಧ್ಯಪ್ರವೇಶದಿಂದ ಅದನ್ನು ನಿಲ್ಲಿಸಲು ಪ್ರಯತ್ನಿಸಿದ ಕನ್ನಡದ ಎಚ್ಚೆತ್ತ ಮಹಿಳೆಯರನ್ನು ‘ನ್ಯಾಯಪಥ’ ಅಭಿನಂದಿಸುತ್ತದೆ. ಇಂತಹ ಎಚ್ಚರ ಇಂದಿನ ತುರ್ತು. ಆದ್ದರಿಂದ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...