Homeಅಂಕಣಗಳುಹಿಂಸೆಯನ್ನು ವಿರೋಧಿಸೋಣ, ಜೊತೆಗೆ.....

ಹಿಂಸೆಯನ್ನು ವಿರೋಧಿಸೋಣ, ಜೊತೆಗೆ…..

- Advertisement -
- Advertisement -

ಗೌರಿ ಲಂಕೇಶ್
ನವೆಂಬರ್ 23, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಹಿಂಸೆ. ಈ ಪದ ವಾಸ್ತವದಲ್ಲಿ ಪಡೆಯುವ ನಾನಾ ಸ್ವರೂಪಗಳ ಬಗ್ಗೆ ಇತ್ತೀಚೆಗೆ ನಾನಾ ಚರ್ಚೆಗಳು ನಡೆದಿವೆ. ನಮ್ಮದು ಅಹಿಂಸಾವಾದವನ್ನು ನಂಬಿರುವ ದೇಶ ಎಂದೇ ಹೇಳಿಕೊಂಡು ಬಂದಿರುವ ಭಾರತದಲ್ಲಿ ಇವತ್ತಿಗೂ ದುರ್ಬಲರ ಮೇಲೆ ದೌರ್ಜನ್ಯ ನಡೆಯಿತ್ತಲೇ ಇದೆ. ಅದನ್ನೆಲ್ಲ ನಮ್ಮ ಸಮಾಜದ ಹುಳುಕುಗಳು ಎಂದು ಹೇಳುತ್ತಾ ಸುಮ್ಮನಿದ್ದವರೆಲ್ಲ, ಯಾವಾಗ ಹಲವರು ಆ ಹುಳುಕುಗಳನ್ನು ನಿವಾರಿಸಲು ಹಿಂಸೆಯೆನಿಸುವ ಮಾರ್ಗಕ್ಕಿಳಿದರೋ, ಆಗ ಈ ಹಿಂಸಾತ್ಮಕ ಮಾರ್ಗಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ ಎಂದು ಸಿಡಿದೆದ್ದಿದ್ದಾರೆ.
ಹೌದು, ಹಿಂದೆಯನ್ನು ಎಂದಿಗೂ ಸಹಿಸಕೂಡದು. ಆದರೆ ನಮ್ಮ ಕಣ್ಣುಮುಂದೆಯೇ ನಮ್ಮ ಸುತ್ತಲು ನಡೆಯುತ್ತಿರುವ ಹಿಂಸೆಯ ಬಗ್ಗೆ ಯಾಕೆ ಎಲ್ಲರಿಗೂ ಜಾಣ ಕುರುಡು? ಇವತ್ತು ಪ್ರತಿನಿತ್ಯದ ಹಿಂಸೆ ಉದ್ಭವಿಸುತ್ತಿರುವುದು ಆ ಯುವಕರು ಹಿಡಿದಿರುವ ಬಂದೂಕುಗಳಿಂದಲ್ಲ, ಬದಲಾಗಿ ಸಮಾಜದ ಪುರುಷ ಪ್ರಧಾನ ಆಲೋಚನೆ, ಊಳಿಗಮಾನ್ಯ ವ್ಯವಸ್ಥೆ, ಉಳ್ಳವರ ಪರವಾಗಿರುವ ರಾಜಕೀಯ, ಜಾಗತೀಕರಣದಿಂದಾಗುತ್ತಿರುವ ಅನ್ಯಾಯ…. ಇಂಥದೆಲ್ಲ ವಿಭಿನ್ನ ಬಗೆಯ ಹಿಂಸೆಯ ರೂಪಗಳಿಂದ. ಇದು ನಮ್ಮ ಭಾರತೀಯ ಸಮಾಜಕ್ಕೆ ಮಾತ್ರ ಅನ್ವಯಿಸುವುದಿಲ್ಲ, ಬದಲಾಗಿ ಮೇಲೆ ಹೇಳಿದ ಅಂಶಗಳು ಜಾಗತಿಕ ಮಟ್ಟದಲ್ಲೂ ಹಿಂಸೆಯನ್ನು ಹುಟ್ಟುಹಾಕುತ್ತಿದೆ.
ಇತ್ತೀಚೆಗೆ ಪ್ಯಾರಿಸ್ ನಗರದಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು. ಎಲ್ಲ ರೀತಿಯಲ್ಲೂ ಸಮಾನವಾದ ಅರ್ಹತೆಗಳನ್ನುಳ್ಳ ಎರಡು ಅರ್ಜಿಗಳನ್ನು-ಒಂದರಲ್ಲಿ ಕ್ರಿಶ್ಚಿಯನ್ ಹೆಸರನ್ನು ಹಾಗೂ ಪ್ರತಿಷ್ಠಿತ ಬಡಾವಣೆಯ ವಿಳಾಸವನ್ನು, ಮತ್ತೊಂದರಲ್ಲಿ ಮುಸ್ಲಿಂ ಹೆಸರನ್ನು ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಏರಿಯಾದ ವಿಳಾಸವನ್ನು ನಮೂದಿಸಿ-ಕೆಲಸಕ್ಕೆ ಅಹ್ವಾನಿಸಿದ್ದ ಕಚೇರಿಗಳಿಗೆ ಕಳುಹಿಸಲಾಗಿತ್ತು. ಸ್ವರ್ಗದಂತಹ ಪ್ಯಾರಿಸ್‍ನಲ್ಲೂ ನರಕಗಳಿರುತ್ತವೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕ್ರಿಶ್ಚಿಯನ್ ಹೆಸರಿನ, ಪ್ರತಿಷ್ಠಿತ ಬಡಾವಣೆಯ ಅರ್ಜಿಗೆ ಐದು ಅಹ್ವಾನಗಳು ಬಂದರೆ, ಮುಸ್ಲಿಂ ಹೆಸರಿನ ಬಡವರ್ಗಗಳ ಏರಿಯಾದ ಅರ್ಜಿಗೆ ಒಂದೇ ಒಂದು ಆಹ್ವಾನ ಬಂದಿತ್ತು.
ಇಂಥಾ ಅಸಮಾನತೆಯೂ ಒಂದು ಬಗೆಯ ಹಿಂಸೆ. ಈ ಹಿಂಸೆಯನ್ನು ಅದೆಷ್ಟು ದಿನ ತಾನೆ ಅಹಿಂಸೆಯ ನೆಪದಿಂದ ಸಹಿಸಿಕೊಳ್ಳಲು ಸಾಧ್ಯ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಪ್ಯಾರಿಸ್‍ನ ಬಿಸಿರಕ್ತದ ಹುಡುಗರು ಗಲಭೆಗಿಳಿದಿದ್ದಾರೆ. ಆ ಗಲಭೆಗಳನ್ನು ವಿರೋಧಿಸುವುದು ಎಷ್ಟು ಜರೂರೋ, ಆ ಗಲಭೆಗೆ ಕಾರಣವಾದ ನಮ್ಮ ಸಮಾಜದ ಅಂತರ್ಗತ ಹಿಂಸೆಗಳನ್ನು ಹೋಗಲಾಡಿಸಬೇಕಾದ್ದೂ ನಮ್ಮೆಲ್ಲರ ಮೇಲಿರುವ ಹೊಣೆ. ಇಲ್ಲವಾದಲ್ಲಿ ಹಿಂಸೆಯನ್ನು ವಿರೋಧಿಸುವ ಹಕ್ಕನ್ನೇ ನಾವೆಲ್ಲ ಕಳೆದುಕೊಂಡುಬಿಡುತ್ತೇವೆ.
ಅದಕ್ಕೆ ಮೊದಲೇ ಹೇಳಿದ್ದು. ‘ಹಿಂಸೆ’ ಎಂದ ಕೂಡಲೇ “ಸಹಿಸಕೂಡದು” ಎಂದು ಅರಚುವ ಬದಲಾಗಿ ಆ ಹಿಂಸೆಯ ಮೂಲ ಎಲ್ಲಿದೆ ಎಂದು ವಿಶ್ಲೇಷಿಸುವ ಅಗತ್ಯ ಇವತ್ತಿನ ತುರ್ತು ಎಂದು. ಏಕೆಂದರೆ ಪ್ಯಾರಿಸ್‍ಗೆ ಬೆಂಕಿ ಹಚ್ಚಿರುವವರು ಹಿಂಸಾವಾದಿಗಳೂ ಅಲ್ಲ, ಭಯೋತ್ಪಾದಕರೂ ಅಲ್ಲ, ಬದಲಾಗಿ ಅದು ಅಲ್ಲಿನ ವ್ಯವಸ್ಥೆಯಲ್ಲೇ ಅಡಗಿರುವ ಹಿಂಸೆಗೆ ಬಲಿಯಾದವರ ಪ್ರತಿಕ್ರಿಯೆ ಅಷ್ಟೇ. ಇಂತಹ ಪ್ರತಿಕ್ರಿಯೆಯನ್ನು ನಿಷೇಧಾಜ್ಞೆಯಿಂದಾಗಲಿ, ಸ್ಪೆಷಲ್ ಸ್ಕ್ವಾಡ್‍ಗಳಿಂದಾಗಲಿ, ಗೋಲಿಬಾರ್‍ನಿಂದಾಗಲಿ ತಡೆಯಲಾಗುವುದಿಲ್ಲ.
ಇದೆಲ್ಲ ನಾವು ಕೈಕಟ್ಟಿ ಕೂತಿರುವಷ್ಟು ಕಾಲ ನಡೆಯುತ್ತಲೇ ಇರುತ್ತೆ. ಜನರಿಗೆ ಅನ್ಯಾಯದ ಬಗ್ಗೆ ಅರಿವು ಮೂಡಿದ ನಂತರವೂ ಅವರು ಕೈಕಟ್ಟಿ ಕೂತಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಹಾಗೊಮ್ಮೆ ಅವರು ಪ್ಯಾರಿಸ್ ಯುವಕರಂತೆ ಕಾರ್ಯೋನ್ಮುಖರಾದರೆ ಅವರಿಗೆ ಆಗ ಅಹಿಂಸೆಯ ಪಾಠ ಬೋಧಿಸಲಾಗುವುದಿಲ್ಲ. ಆದ್ದರಿಂದಲೇ ಹಿಂಸೆಯ ವಿವಿಧ ವ್ಯಾಖ್ಯಾನಗಳಿಗಿಂತ ಅದರ ಬೇರು ಎಲ್ಲಿದೆ ಎಂದು ಹುಡುಕಬೇಕಿದೆ. ಈ ಪ್ರಶ್ನೆಯನ್ನು ಗಾಂಧೀಜಿಯವರೂ ನಿರಾಕರಿಸಿರಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...