Homeಅಂಕಣಗಳುಹಿಂಸೆಯನ್ನು ವಿರೋಧಿಸೋಣ, ಜೊತೆಗೆ.....

ಹಿಂಸೆಯನ್ನು ವಿರೋಧಿಸೋಣ, ಜೊತೆಗೆ…..

- Advertisement -
- Advertisement -

ಗೌರಿ ಲಂಕೇಶ್
ನವೆಂಬರ್ 23, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಹಿಂಸೆ. ಈ ಪದ ವಾಸ್ತವದಲ್ಲಿ ಪಡೆಯುವ ನಾನಾ ಸ್ವರೂಪಗಳ ಬಗ್ಗೆ ಇತ್ತೀಚೆಗೆ ನಾನಾ ಚರ್ಚೆಗಳು ನಡೆದಿವೆ. ನಮ್ಮದು ಅಹಿಂಸಾವಾದವನ್ನು ನಂಬಿರುವ ದೇಶ ಎಂದೇ ಹೇಳಿಕೊಂಡು ಬಂದಿರುವ ಭಾರತದಲ್ಲಿ ಇವತ್ತಿಗೂ ದುರ್ಬಲರ ಮೇಲೆ ದೌರ್ಜನ್ಯ ನಡೆಯಿತ್ತಲೇ ಇದೆ. ಅದನ್ನೆಲ್ಲ ನಮ್ಮ ಸಮಾಜದ ಹುಳುಕುಗಳು ಎಂದು ಹೇಳುತ್ತಾ ಸುಮ್ಮನಿದ್ದವರೆಲ್ಲ, ಯಾವಾಗ ಹಲವರು ಆ ಹುಳುಕುಗಳನ್ನು ನಿವಾರಿಸಲು ಹಿಂಸೆಯೆನಿಸುವ ಮಾರ್ಗಕ್ಕಿಳಿದರೋ, ಆಗ ಈ ಹಿಂಸಾತ್ಮಕ ಮಾರ್ಗಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ ಎಂದು ಸಿಡಿದೆದ್ದಿದ್ದಾರೆ.
ಹೌದು, ಹಿಂದೆಯನ್ನು ಎಂದಿಗೂ ಸಹಿಸಕೂಡದು. ಆದರೆ ನಮ್ಮ ಕಣ್ಣುಮುಂದೆಯೇ ನಮ್ಮ ಸುತ್ತಲು ನಡೆಯುತ್ತಿರುವ ಹಿಂಸೆಯ ಬಗ್ಗೆ ಯಾಕೆ ಎಲ್ಲರಿಗೂ ಜಾಣ ಕುರುಡು? ಇವತ್ತು ಪ್ರತಿನಿತ್ಯದ ಹಿಂಸೆ ಉದ್ಭವಿಸುತ್ತಿರುವುದು ಆ ಯುವಕರು ಹಿಡಿದಿರುವ ಬಂದೂಕುಗಳಿಂದಲ್ಲ, ಬದಲಾಗಿ ಸಮಾಜದ ಪುರುಷ ಪ್ರಧಾನ ಆಲೋಚನೆ, ಊಳಿಗಮಾನ್ಯ ವ್ಯವಸ್ಥೆ, ಉಳ್ಳವರ ಪರವಾಗಿರುವ ರಾಜಕೀಯ, ಜಾಗತೀಕರಣದಿಂದಾಗುತ್ತಿರುವ ಅನ್ಯಾಯ…. ಇಂಥದೆಲ್ಲ ವಿಭಿನ್ನ ಬಗೆಯ ಹಿಂಸೆಯ ರೂಪಗಳಿಂದ. ಇದು ನಮ್ಮ ಭಾರತೀಯ ಸಮಾಜಕ್ಕೆ ಮಾತ್ರ ಅನ್ವಯಿಸುವುದಿಲ್ಲ, ಬದಲಾಗಿ ಮೇಲೆ ಹೇಳಿದ ಅಂಶಗಳು ಜಾಗತಿಕ ಮಟ್ಟದಲ್ಲೂ ಹಿಂಸೆಯನ್ನು ಹುಟ್ಟುಹಾಕುತ್ತಿದೆ.
ಇತ್ತೀಚೆಗೆ ಪ್ಯಾರಿಸ್ ನಗರದಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು. ಎಲ್ಲ ರೀತಿಯಲ್ಲೂ ಸಮಾನವಾದ ಅರ್ಹತೆಗಳನ್ನುಳ್ಳ ಎರಡು ಅರ್ಜಿಗಳನ್ನು-ಒಂದರಲ್ಲಿ ಕ್ರಿಶ್ಚಿಯನ್ ಹೆಸರನ್ನು ಹಾಗೂ ಪ್ರತಿಷ್ಠಿತ ಬಡಾವಣೆಯ ವಿಳಾಸವನ್ನು, ಮತ್ತೊಂದರಲ್ಲಿ ಮುಸ್ಲಿಂ ಹೆಸರನ್ನು ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಏರಿಯಾದ ವಿಳಾಸವನ್ನು ನಮೂದಿಸಿ-ಕೆಲಸಕ್ಕೆ ಅಹ್ವಾನಿಸಿದ್ದ ಕಚೇರಿಗಳಿಗೆ ಕಳುಹಿಸಲಾಗಿತ್ತು. ಸ್ವರ್ಗದಂತಹ ಪ್ಯಾರಿಸ್‍ನಲ್ಲೂ ನರಕಗಳಿರುತ್ತವೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕ್ರಿಶ್ಚಿಯನ್ ಹೆಸರಿನ, ಪ್ರತಿಷ್ಠಿತ ಬಡಾವಣೆಯ ಅರ್ಜಿಗೆ ಐದು ಅಹ್ವಾನಗಳು ಬಂದರೆ, ಮುಸ್ಲಿಂ ಹೆಸರಿನ ಬಡವರ್ಗಗಳ ಏರಿಯಾದ ಅರ್ಜಿಗೆ ಒಂದೇ ಒಂದು ಆಹ್ವಾನ ಬಂದಿತ್ತು.
ಇಂಥಾ ಅಸಮಾನತೆಯೂ ಒಂದು ಬಗೆಯ ಹಿಂಸೆ. ಈ ಹಿಂಸೆಯನ್ನು ಅದೆಷ್ಟು ದಿನ ತಾನೆ ಅಹಿಂಸೆಯ ನೆಪದಿಂದ ಸಹಿಸಿಕೊಳ್ಳಲು ಸಾಧ್ಯ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಪ್ಯಾರಿಸ್‍ನ ಬಿಸಿರಕ್ತದ ಹುಡುಗರು ಗಲಭೆಗಿಳಿದಿದ್ದಾರೆ. ಆ ಗಲಭೆಗಳನ್ನು ವಿರೋಧಿಸುವುದು ಎಷ್ಟು ಜರೂರೋ, ಆ ಗಲಭೆಗೆ ಕಾರಣವಾದ ನಮ್ಮ ಸಮಾಜದ ಅಂತರ್ಗತ ಹಿಂಸೆಗಳನ್ನು ಹೋಗಲಾಡಿಸಬೇಕಾದ್ದೂ ನಮ್ಮೆಲ್ಲರ ಮೇಲಿರುವ ಹೊಣೆ. ಇಲ್ಲವಾದಲ್ಲಿ ಹಿಂಸೆಯನ್ನು ವಿರೋಧಿಸುವ ಹಕ್ಕನ್ನೇ ನಾವೆಲ್ಲ ಕಳೆದುಕೊಂಡುಬಿಡುತ್ತೇವೆ.
ಅದಕ್ಕೆ ಮೊದಲೇ ಹೇಳಿದ್ದು. ‘ಹಿಂಸೆ’ ಎಂದ ಕೂಡಲೇ “ಸಹಿಸಕೂಡದು” ಎಂದು ಅರಚುವ ಬದಲಾಗಿ ಆ ಹಿಂಸೆಯ ಮೂಲ ಎಲ್ಲಿದೆ ಎಂದು ವಿಶ್ಲೇಷಿಸುವ ಅಗತ್ಯ ಇವತ್ತಿನ ತುರ್ತು ಎಂದು. ಏಕೆಂದರೆ ಪ್ಯಾರಿಸ್‍ಗೆ ಬೆಂಕಿ ಹಚ್ಚಿರುವವರು ಹಿಂಸಾವಾದಿಗಳೂ ಅಲ್ಲ, ಭಯೋತ್ಪಾದಕರೂ ಅಲ್ಲ, ಬದಲಾಗಿ ಅದು ಅಲ್ಲಿನ ವ್ಯವಸ್ಥೆಯಲ್ಲೇ ಅಡಗಿರುವ ಹಿಂಸೆಗೆ ಬಲಿಯಾದವರ ಪ್ರತಿಕ್ರಿಯೆ ಅಷ್ಟೇ. ಇಂತಹ ಪ್ರತಿಕ್ರಿಯೆಯನ್ನು ನಿಷೇಧಾಜ್ಞೆಯಿಂದಾಗಲಿ, ಸ್ಪೆಷಲ್ ಸ್ಕ್ವಾಡ್‍ಗಳಿಂದಾಗಲಿ, ಗೋಲಿಬಾರ್‍ನಿಂದಾಗಲಿ ತಡೆಯಲಾಗುವುದಿಲ್ಲ.
ಇದೆಲ್ಲ ನಾವು ಕೈಕಟ್ಟಿ ಕೂತಿರುವಷ್ಟು ಕಾಲ ನಡೆಯುತ್ತಲೇ ಇರುತ್ತೆ. ಜನರಿಗೆ ಅನ್ಯಾಯದ ಬಗ್ಗೆ ಅರಿವು ಮೂಡಿದ ನಂತರವೂ ಅವರು ಕೈಕಟ್ಟಿ ಕೂತಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಹಾಗೊಮ್ಮೆ ಅವರು ಪ್ಯಾರಿಸ್ ಯುವಕರಂತೆ ಕಾರ್ಯೋನ್ಮುಖರಾದರೆ ಅವರಿಗೆ ಆಗ ಅಹಿಂಸೆಯ ಪಾಠ ಬೋಧಿಸಲಾಗುವುದಿಲ್ಲ. ಆದ್ದರಿಂದಲೇ ಹಿಂಸೆಯ ವಿವಿಧ ವ್ಯಾಖ್ಯಾನಗಳಿಗಿಂತ ಅದರ ಬೇರು ಎಲ್ಲಿದೆ ಎಂದು ಹುಡುಕಬೇಕಿದೆ. ಈ ಪ್ರಶ್ನೆಯನ್ನು ಗಾಂಧೀಜಿಯವರೂ ನಿರಾಕರಿಸಿರಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋವಾ ನೈಟ್ ಕ್ಲಬ್ ಮಾಲೀಕರ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ: ಥೈಲ್ಯಾಂಡ್‌ನಿಂದಲೂ ಗಡಿಪಾರು ಪ್ರಕ್ರಿಯೆ ಆರಂಭ 

ನವದೆಹಲಿ: ಕಳೆದ ವಾರ ಕನಿಷ್ಠ 25 ಜನರ ಸಾವಿಗೆ ಕಾರಣವಾಗಿದ್ದ, ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುಥ್ರಾಸ್ ಅವರ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು...

ಮಾದಕ ದ್ರವ್ಯ ಬಳಕೆ-ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ: ಪರಮೇಶ್ವರ್

ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಗುರುವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ...

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ 'ಟ್ರಂಪ್ ಗೋಲ್ಡ್ ಕಾರ್ಡ್'ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ. 'ಟ್ರಂಪ್ ಗೋಲ್ಡ್...

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲು ಶಿಕ್ಷೆ ಅಮಾನತು ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್

1996 ರ ಮಾದಕ ದ್ರವ್ಯ ವಶ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಗುರುವಾರ ಅವರ ಬಿಡುಗಡೆಗಾಗಿನ ಪ್ರಯತ್ನ...

ಅರುಣಾಚಲ ಪ್ರದೇಶ: ಟ್ರಕ್ ಕಂದಕಕ್ಕೆ ಉರುಳಿ ಅಸ್ಸಾಂ ಮೂಲದ 21 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ, 18 ಮೃತದೇಹಗಳು ಪತ್ತೆ

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಅಸ್ಸಾಂನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಉರುಳಿದ್ದು, 21 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲಿಯವರೆಗೆ 18 ಶವಗಳನ್ನು ಹೊರತೆಗೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.  ಡಿಸೆಂಬರ್ 8ನೇ...

ಜಾರ್ಖಂಡ್‌ನ 27 ಮಕ್ಕಳು ನೇಪಾಳಕ್ಕೆ ಕಳ್ಳಸಾಗಣೆ; ತನಿಖೆ ಆರಂಭಿಸಿದ ಪೊಲೀಸರು

ಉತ್ತಮ ಶಿಕ್ಷಣ ಒದಗಿಸುವ ನೆಪದಲ್ಲಿ 27 ಮಕ್ಕಳನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಪೊಲೀಸರು ಗುರುವಾರ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಕ್ಕಳನ್ನು...

ಉಮರ್ ಖಾಲಿದ್‌ಗೆ 14 ದಿನಗಳ ಮಧ್ಯಂತರ ಜಾಮೀನು; ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ

ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ಡಿಸೆಂಬರ್ 27 ರಂದು ನಿಗದಿಯಾಗಿದ್ದ ತಮ್ಮ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 16 ರಿಂದ 29 ರವರೆಗೆ 14 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು....

ಜಾತ್ಯತೀತತೆಯನ್ನು ಮಾತ್ರ ನಂಬುತ್ತೇನೆ; ಕೋಮುವಾದವನ್ನಲ್ಲ: ಮಮತಾ ಬ್ಯಾನರ್ಜಿ

ನಾನು ಕೋಮುವಾದದಲ್ಲಿ ನಂಬಿಕೆ ಇಡುವುದಿಲ್ಲ. ಜಾತ್ಯತೀತತೆಯನ್ನು ಮಾತ್ರ ನಂಬುತ್ತೇನೆ. ಚುನಾವಣೆ ಸಮೀಪಿಸಿದಾಗಲೆಲ್ಲಾ, ಬಿಜೆಪಿ ಹಣವನ್ನು ಬಳಸಿ ಇತರ ರಾಜ್ಯಗಳಿಂದ ಜನರನ್ನು ಕರೆತಂದು ಸಾರ್ವಜನಿಕರನ್ನು ವಿಭಜಿಸಲು ಪ್ರಯತ್ನಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ...

ಅತ್ಯಾಚಾರ ಪ್ರಕರಣದ ವಿಚಾರಣೆ ವರ್ಗಾವಣೆ ಕೋರಿ ಪ್ರಜ್ವಲ್ ರೇವಣ್ಣ ಮನವಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರುವ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳನ್ನು ಬೇರೆ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್‌...

ಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಲಕ್ಷ ಕಂಠ ಗೀತಾ ಪಾರಾಯಣ (ಸುಮಾರು 5 ಲಕ್ಷ ಜನರಿಂದ ಭಗವದ್ಗೀತೆ ಪಾರಾಯಣ) ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಬಡ ಮುಸ್ಲಿಂ ವ್ಯಾಪಾರಿಗೆ ಥಳಿಸಿದ ಘಟನೆ ಭಾನುವಾರ (ಡಿಸೆಂಬರ್ 7) ಕೋಲ್ಕತ್ತಾದ ಬ್ರಿಗೇಡ್...