Homeಅಂಕಣಗಳುಪ್ರಧಾನ ಚೌಕಿದಾರರ ಕುರಿತೂ ಎಚ್ಚರವಿರಲಿ!

ಪ್ರಧಾನ ಚೌಕಿದಾರರ ಕುರಿತೂ ಎಚ್ಚರವಿರಲಿ!

- Advertisement -
- Advertisement -

ನಿಖಿಲ್ ಕೊಲ್ಫೆ |

ಕಳೆದ ಎರಡು ಸಂಚಿಕೆಗಳಲ್ಲಿ ಸರ್ವಾಧಿಕಾರದ ಮುಖ್ಯ ಗುಣಲಕ್ಷಣಗಳು, ಇನ್ನಷ್ಟು ಗುಣಲಕ್ಷಣಗಳನ್ನು ಮೇಲುಮೇಲಿಗೆ ನೋಡಿದೆವು. ಈ ಸಂಚಿಕೆಯಲ್ಲಿ ಅದರ ಮತ್ತಷ್ಟು ಗುಣಲಕ್ಷಣಗಳನ್ನು ನೋಡೋಣ.
ಸಾಮಾನ್ಯವಾಗಿ ಎಲ್ಲಾ ಸರ್ವಾಧಿಕಾರಿಗಳು, ಧರ್ಮದ ನೆಲೆಯಲ್ಲಿ (ಲಿಬಿಯಾ, ಸುಡಾನ್ ಮುಂತಾದ ಮುಸ್ಲಿಂ ರಾಷ್ಟ್ರಗಳು), ಭಾಷೆಯ ನೆಲೆಯಲ್ಲಿ (ಸ್ಪೇನ್‍ನಲ್ಲಿ ಸ್ಪಾನಿಷ್- ಬಾಸ್ಕ್), ಜನಾಂಗದ ನೆಲೆಯಲ್ಲಿ (ಜರ್ಮನಿಯ ಜನಾಂಗೀಯ ರಾಷ್ಟ್ರೀಯವಾದ, ದಕ್ಷಿಣ ಆಫ್ರಿಕಾದಲ್ಲಿದ್ದ ಅಪಾರ್ಥೀಡ್ ವರ್ಣಭೇದ ನೀತಿ), ಬುಡಕಟ್ಟುಗಳ ನೆಲೆಯಲ್ಲಿ (ಹೆಚ್ಚಿನ ಆಫ್ರಿಕನ್ ದೇಶಗಳು), ಸುಳ್ಳು ತತ್ವಗಳ ನೆಲೆಯಲ್ಲಿ (ಕಾಂಬೋಡಿಯಾ ಇತ್ಯಾದಿ) ರಾಷ್ಟ್ರೀಯತೆಯ ನೆಲೆಯಲ್ಲಿ (ಇಟಲಿ, ಅಜೆರ್ಂಟೀನಾ, ಮ್ಯಾನ್ಮಾರ್, ಫಿಲಿಪೈನ್ಸ್ ಇತ್ಯಾದಿ) ತಮ್ಮ ಬಲವನ್ನು ಪಡೆದುಕೊಂಡಿದ್ದರು, ಪಡೆದುಕೊಂದಿದ್ದಾರೆ. ನೆರೆಯ ರಾಷ್ಟ್ರಗಳನ್ನು, ಬೇರೆ, ಭಾಷೆ, ಬುಡಕಟ್ಟು, ಜನಾಂಗಗಳ ಜನರನ್ನು ಶತ್ರುಗಳಂತೆ ಬಿಂಬಿಸಿ, ಆಂತರಿಕ ಒಗ್ಗಟ್ಟನ್ನು ಪ್ರತಿಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಸರ್ವಾಧಿಕಾರಿಗಳ ಪ್ರಮುಖ ಕಾರ್ಯತಂತ್ರ.
ಭಾರತದಲ್ಲಿ ಸರ್ವಾಧಿಕಾರಿ ಆಡಳಿತ ಎಂದಾದರೂ ಬಂದರೆ, ಅದು ಧರ್ಮ, ಜಾತಿ ಮತ್ತು ಹುಸಿ ರಾಷ್ಟ್ರೀಯತೆ ಮತ್ತು ಪೊಳ್ಳು ದೇಶಪ್ರೇಮದ ಹೆಸರಲ್ಲಿ ಬರಲಿದೆ. ಅದುದರಿಂದಲೇ ಇಲ್ಲಿ ಸದ್ಯಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಭಯ ಹುಟ್ಟಿಸುತ್ತಿರುವುದು! ಹಿಂದೂತ್ವದ ಹೆಸರಿನಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯಗಳ ದೇಶಪ್ರೇಮವನ್ನು ಶಂಕಿಸುವಂತೆ ಮಾಡಿ, ಅವುಗಳ ವಿರುದ್ಧ ಅಸಹನೆಯನ್ನು ಮೂಡಿಸುವ ಪ್ರಯತ್ನಗಳನ್ನು- ಆರ್ಯನ್ ಶ್ರೇಷ್ಟತೆಯ ಹೆಸರಿನಲ್ಲಿ ಯಹೂದಿಗಳ ವಿರುದ್ಧ ಜರ್ಮನಿಯ ಸಾಮಾನ್ಯ ಪ್ರಜೆಗಳನ್ನು ಎತ್ತಿಕಟ್ಟಿದ ಹಿಟ್ಲರನ ನಾಜಿತಂತ್ರಗಳ ಕಡೆಗೆ ಇಟ್ಟ ಹೆಜ್ಜೆ ಎಂದು ಊಹಿಸಿದರೆ ತಪ್ಪಿಲ್ಲ. ಗೋಮಾಂಸ, ಸಾಗಿಸುತ್ತಿದ್ದರು, ಮನೆಯ ಫ್ರಿಜ್ಜಿನಲ್ಲಿ ಗೋಮಾಂಸ ಇಟ್ಟಿದ್ದಾರೆ ಎಂಬ ಸಂಶಯ ಇತ್ಯಾದಿ ಕ್ಷುಲ್ಲಕ ಕಾರಣಗಳಿಗಾಗಿ ನಡೆದ ದಾಳಿಗಳನ್ನು ಈ ನಿಟ್ಟಿನಲ್ಲಿ ನೋಡಬೇಕು.
‘ಹಿಂದೂ ಒಂದು’ ಎನ್ನುವ ಘೋಷಣೆಯ ಬೆನ್ನಲ್ಲೇ, ಕುದುರೆ ಮೇಲೆ ಕುಳಿತರು, ಬೂಟುಧರಿಸಿದರು, ಬಾವಿಯ ನೀರು ತೆಗೆದರು ಇತ್ಯಾದಿ ನೆಪಗಳನ್ನು ಮುಂದಿಟ್ಟು ಸವರ್ಣೀಯರು ದಲಿತರನ್ನು ಥಳಿಸಿದ ಬೆತ್ತಲೆಗೊಳಿಸಿದ, ಕೊಂದ ಘಟನೆಗಳಿಗೆ ಬೇರೇನು ವಿವರಣೆ ಕೊಡೋಣ!? ಜರ್ಮನಿಯಲ್ಲಿಯೂ ಅಲೆಮಾರಿ ಜಿಪ್ಸಿಗಳನ್ನು ನಿಷ್ಪ್ರಯೋಜಕ ಕೀಳು ಜನಾಂಗ ಎಂದು ಕಂಡಕಂಡಲ್ಲಿ ತಂಡೋಪತಂಡವಾಗಿ ಕೊಲ್ಲಲಾಗಿತ್ತು.
ನಾಜಿ ಜರ್ಮನಿಯು ನೆರೆಯ ಪೋಲೆಂಡ್ ನಮ್ಮದು, ಆಸ್ಟ್ರಿಯಾ ನಮ್ಮದು ಎಂದು ಹೇಳುತ್ತಲೇ, ಜರ್ಮನ್ ಜನರಲ್ಲಿ ದ್ವೇಷ ಹುಟ್ಟಿಸಿ ಅವುಗಳ ಮತ್ತು ಫ್ರಾನ್ಸ್, ಸ್ಕ್ಯಾಂಡಿನೇವಿಯನ್ ದೇಶಗಳ ಸಹಿತ ನೆರೆಹೊರೆಯ ದೇಶಗಳ ಮೇಲೆ ದಂಡೆತ್ತಿಹೋಗಿತ್ತು. ನಮ್ಮಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್ ಒಳಗೊಂಡಂತಹ ಅಖಂಡ ಭಾರತದ ಸಂಘ ಪರಿವಾರದ ಕಲ್ಪನೆಗೂ ಇದಕ್ಕೂ ಏನಾದರೂ ಸಾಮ್ಯ ಕಾಣುತ್ತಿದೆಯೆ!?
ಅಲ್ಲಿ ಮಾಡಿದಂತೆಯೇ ಇಲ್ಲಿಯೂ ಬುದ್ಧಿಜೀವಿಗಳ ಕೊಲೆಗಳು, ಅವರ ಮೇಲೆ ದಾಳಿಗಳು ನಡೆಯುತ್ತಿವೆ! ವಿರೋಧಿಸಿದವರಿಗೆ ದೇಶದ್ರೋಹಿ ಪಟ್ಟಕಟ್ಟಿ ಪಾಕಿಸ್ತಾನಕ್ಕೆ ಕಳಿಸುವ ಮಾತಾಗುತ್ತಿರುವುದು ಬರೇ ಕಾಕತಾಳೀಯವೇ? ಅಥವಾ ಯೋಜಿತ ಸಂಚಿನ ಭಾಗವೆ? ಇವೆಲ್ಲವನ್ನೂ ಮುಂದೆ ನೋಡೋಣ.
ಸರ್ವಾಧಿಕಾರದ ಇನ್ನೊಂದು ಲಕ್ಷಣವೆಂದರೆ ಏಕಪಕ್ಷೀಯ ನಿರ್ಧಾರ. ಒಬ್ಬ ವ್ಯಕ್ತಿ ಅಥವಾ ಒಂದು ಜಂಟಾ ಅಥವಾ ಗುಂಪಿನದ್ದೇ ಕಾರುಬಾರು. ಅವರ ನಿರ್ಧಾರಗಳನ್ನು ವಿರೋಧಿಸುವ ಧೈರ್ಯ ಮಾಡಿದವರು ಮೂಲೆಗುಂಪು. ಗಡಿಪಾರು, ಮರಣದಂಡನೆ ಇತ್ಯಾದಿಗಳು ಕ್ರೂರ ಸರ್ವಾಧಿಕಾರಗಳಲ್ಲಿ ಕಟ್ಟಿಟ್ಟ ಬುತ್ತಿ. ನಮ್ಮ ದೇಶದಲ್ಲೇ ನಡೆಯುತ್ತಿರುವ ವ್ಯಕ್ತಿಪೂಜೆಯನ್ನು ನೋಡಿದರೆ, ಇದು ಪ್ರಜಾಪ್ರಭಯತ್ವವು ಪರೋಕ್ಷ ಸರ್ವಾಧಿಕಾರದತ್ತ ಹೊರಳುವ ಲಕ್ಷಣದಂತೆ ಕಾಣುತ್ತಿದೆ. ಬಿಜೆಪಿಯಲ್ಲಿಯೇ ಆಡ್ವಾಣಿ, ಯಶವಂತ ಸಿನ್ಹಾ ಅವರಂತಹ ಹಿರಿಯ ನಾಯಕರನ್ನು ಹೇಗೆ ಮೂಲೆಗುಂಪು ಮಾಡಲಾಯಿತು ಎಂಬುದನ್ನು ನಾವು ಗಮನಿಸಬಹುದು.
ಇನ್ನೊಂದು ಲಕ್ಷಣವೆಂದರೆ, ಮಾನವ ಮತ್ತು ವೈಯಕ್ತಿಕ ಹಕ್ಕುಗಳ ದಮನ. ಪ್ರಜೆಯ ಅಧಿಕಾರಗಳನ್ನು ಮೊಟಕುಗೊಳಿಸುವುದು, ಅವರ ಚಲನವಲನಗಳ ಮೇಲೆ ಗುಪ್ತವಾಗಿ ಕಣ್ಣಿಡುವುದು, ಕಿರುಕುಳ ನೀಡುವುದು. ಇಂತಹ ಹಲವಾರು ಉದಾಹರಣೆಗಳನ್ನು ಓದುಗರು ಗಮನಿಸಿರಬಹುದು. ‘ನಗರ ನಕ್ಸಲ್’ ಪಿಳ್ಳೆ ನೆಪದ ಮೇಲೆ ಬುದ್ಧಿಜೀವಿಗಳ ಬಂಧನ, ಸಂಘಟಿತ ಅಪರಾಧಗಳ ಕಾಯ್ದೆಗಳ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಇತ್ಯಾದಿ ಮತ್ತಿನ್ನೇನು? ‘ಅಧಾರ್’ ಬಗ್ಗೆ ವ್ಯಕ್ತವಾಗಿರುವ ಅತಂಕಗಳ ಹಿಂದೆ ಇದೇ ಕಾರಣವಿದೆ. ಹತ್ತು ತನಿಖಾ ಸಂಸ್ಥೆಗಳಿಗೆ ನಾಗರಿಕರ ಇ-ಮೇಲ್ ಸಹಿತ ಸಾಮಾಜಿಕ ಜಾಲತಾಣಗಳ ಮಾಹಿತಿ ಪಡೆಯುವ ಅಧಿಕಾರ ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದೆ?
ಸರ್ವಾಧಿಕಾರಗಳಲ್ಲಿ ಮಾತ್ರ ಇದು ಅತಿರೇಕಕ್ಕೆ ಹೋಗುತ್ತದೆ. ವಿರೋಧಿಗಳು ಮತ್ತು ಸರಕಾರದ ವಿರುದ್ಧ ಇರುವ ನಾಗರಿಕರನ್ನು ಗುರುತಿಸಿ, ಗುಪ್ತಚರ್ಯೆ ನಡೆಸಿ, ದಮನಿಸಲು ಜರ್ಮನಿಯಲ್ಲಿ ಅತ್ಯಂತ ಕ್ರೂರ ಗುಪ್ತ ರಾಜಕೀಯ ಪೊಲೀಸ್ ಪಡೆಯಾಗಿದ್ದ ‘ಗೆಸ್ಟಾಪೋ’ವನ್ನು ಸ್ಥಾಪಿಸಲಾಗಿತ್ತು. ಈ ಹೆಸರು ಕೇಳಿದರೆ ನಾಗರಿಕರು ಮಾತ್ರವಲ್ಲ, ಸಾಮಾನ್ಯ ಪೊಲೀಸರೂ ಗಡಗಡ ನಡುಗುತ್ತಿದ್ದರು. ಲಕ್ಷಾಂತರ ಜರ್ಮನರನ್ನು ಮತ್ತು ಆಕ್ರಮಿತ ದೇಶಗಳ ಪ್ರಜೆಗಳನ್ನು ಚಿತ್ರಹಿಂಸೆ ಮಾಡಿ ಕೊಂದ ಕುಖ್ಯಾತಿ ಈ ‘ಗೆಸ್ಟಾಪೋ’ ರಾಕ್ಷಸರಿಗಿದೆ. ಹಿಟ್ಲರ್ ಬಾಲಬಡುಕ ಹೈನ್ರಿಚ್ ಮ್ಯುಲ್ಲರ್ ಇದರ ಮುಖ್ಯಸ್ಥನಾಗಿದ್ದ.
ಸರ್ವಾಧಿಕಾರಕ್ಕೆ ಮಾನವ ಹಕ್ಕುಗಳ ಮೇಲೆ ಎಳ್ಳಷ್ಟು ಕಾಳಜಿ ಇರುವುದಿಲ್ಲ! ಮ್ಯಾನ್ಮಾರ್ ಉದಾಹರಣೆ ತೆಗೆದುಕೊಂಡರೆ 2008ರಲ್ಲಿ ದೇಶವು ಭಾರೀ ಚಂಡಮಾರುತಕ್ಕೆ ತುತ್ತಾಗಿ ಜನರು ಅನ್ನ, ನೀರು, ಆಶ್ರಯವಿಲ್ಲದೇ ಸಾಯುತ್ತಿದ್ದಾಗ ಅಲ್ಲಿನ ಸರ್ವಾಧಿಕಾರವು ಬರಲಿದ್ದ ಅಣಕು ಚುನಾವಣೆಯಲ್ಲಿ ಜನರು ತನ್ನನ್ನು ಗೆಲ್ಲಿಸುವ ತನಕ ಹರಿದುಬಂದ ವಿದೇಶಿ ನೆರವನ್ನು ಹಂಚದೇ ತಡೆಹಿಡಿದಿತ್ತು. ಭಾರತ ಸರಕಾರ ಸುನಾಮಿ ಮತ್ತು ಕೇರಳ ದುರಂತ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳು ಕೊಡಮಾಡಿದ ನೆರವನ್ನೂ ಧಾಷ್ರ್ಯದಿಂದ ನಿರಾಕರಿಸಿರುವುದು ಓದುಗರಿಗೆ ನೆನಪಿರಬಹುದು.
ಮತ್ತೊಂದು ಲಕ್ಷಣವೆಂದರೆ ಸಮಾನಾಂತರ ವ್ಯವಸ್ಥೆ. ಸಾಮಾನ್ಯ ಸೇನಾಪಡೆಗಳಿಗೆ ಸಮಾನಂತರವಾಗಿ ‘ವಾಫೆನ್ ಎಸ್‍ಎಸ್’ ಎಂಬ ಪಡೆಗಳನ್ನು ಸ್ಥಾಪಿಸಲಾಗಿತ್ತು. ಎಸ್‍ಎಸ್ ಎಂದರೆ ‘ಶುಡ್ಝ್ ಸ್ಟ್ರಾಫೆಲ್’ ಎಂಬುದರ ಸಂಕ್ಷಿಪ್ತ. ಅದು ಅಡಳಿತ ಪಕ್ಷದ ಘಟಕ! ಅದರ ಸೇನಾ ವಿಭಾಗವೇ ವಾಫೆನ್ ಎಸ್‍ಎಸ್. ಇದರಲ್ಲಿ ಇದ್ದದ್ದು ಹಿಟ್ಲರನ ಕುರುಡು ಭಕ್ತರು! ‘ವರ್‍ಮ್ಯಾಷ್’ ಎಂದು ಕರೆಯಲ್ಪಡುತ್ತಿದ್ದ ಸಾಮಾನ್ಯ ಸೇನೆಯ ಹಿರಿಯ ಅಧಿಕಾರಿ ಕೂಡಾ ಈ ಎಸ್‍ಎಸ್‍ನ ಕಿರಿಯ ಅಧಿಕಾರಿಗೂ ಹೆದರಬೇಕಾಗಿತ್ತು! ಹೈನ್ರಿಚ್ ಹಿಮ್ಲರ್ ಎಂಬ ಬುದ್ಧಿವಂತ ಕ್ರೂರಿ ಇದರ ಮುಖ್ಯಸ್ಥನಾಗಿದ್ದ.
ಮಾಧ್ಯಮಗಳ ನಿಯಂತ್ರಣ ಸರ್ವಾಧಿಕಾರದ ಇನ್ನೊಂದು ಲಕ್ಷಣ. ನಾಜಿ ಜರ್ಮನಿಯಲ್ಲಿ ಎಲ್ಲಾ ಸರಕಾರಿ ವಿರೋಧಿ ಪತ್ರಿಕೆಗಳನ್ನು ನಿಷೇಧಿಸಿ, ಮುಟ್ಟುಗೋಲು ಹಾಕಲಾಗಿತ್ತು. ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿತ್ತು. ನಾಜಿ ಪಕ್ಷವೇ ಸರಕಾರದ ತುತ್ತೂರಿ ಊದುವ, ವಿರೋಧಿಗಳು ಮತ್ತು ಯಹೂದಿ, ಕಮ್ಯುನಿಸ್ಟರ ಮೇಲೆ ವಿಷಕಾರುವ ಮುಖವಾಣಿಗಳನ್ನು ನಡೆಸುತ್ತಿತ್ತು. ರೇಡಿಯೋದಲ್ಲಿ ಹಿಟ್ಲರನ ಗುಣಗಾನ ಮಾಡಿ ಅತನನ್ನು ಸರ್ವಗುಣಸಂಪನ್ನ ವಿಶ್ವನಾಯಕನಂತೆ ಬಿಂಬಿಸಲಾಗಿತ್ತು. ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ, ನೃತ್ಯ ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ನಾಜಿ ಪಕ್ಷವೇ ನಿಯಂತ್ರಿಸುತ್ತಿತ್ತು. ನಮ್ಮಲ್ಲಿನ ಮಾಧ್ಯಮಗಳ ಗುಲಾಮಿ ಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನಂತ ಚಲನಚಿತ್ರ ಚಿತ್ರರಂಗಕ್ಕೂ ಈ ರೋಗ ವ್ಯಾಪಿಸುತ್ತಿರುವುದರ ಲಕ್ಷಣವಾಗಿದೆ. ಈ ಕುರಿತು ವಿವರವಾಗಿ ಮುಂದೆ ನೋಡೋಣ.
ಸರ್ವಾಧಿಕಾರದ ಅರಂಭಿಕ ಲಕ್ಷಣಗಳಲ್ಲಿ ಒಂದೆಂದರೆ, ಪಕ್ಷದ ಕಾರ್ಯಕರ್ತರ ಗೂಂಡಾ ಪೊಲೀಸ್‍ಗಿರಿ. ಜರ್ಮನಿಯಲ್ಲಿ ಮೊದಲೇ ಉಲ್ಲೇಖಿಸಿದಂತಹ ಎಸ್‍ಎಸ್ ಪಡೆಗಳನ್ನು ಸ್ಥಾಪಿಸಲಾಗಿತ್ತು. ಇದನ್ನು ಮೊದಲು ಸ್ಥಾಪಿಸಿದ್ದು 1925ರಲ್ಲಿ- ಪಕ್ಷದ ಸಭೆಗಳಿಗೆ ಸೆಕ್ಯೂರಿಟಿ ಗಾರ್ಡುಗಳಾಗಿ! ವೃತ್ತಿಪರ ಗೂಂಡಾಗಳು, ನಿರುದ್ಯೋಗಿ ಕುರುಡು ಭಕ್ತರು ದೇಶ ಪ್ರೇಮದ ಹೆಸರಿನಲ್ಲಿ, ಜನಾಂಗೀಯ ಶ್ರೇಷ್ಟತೆಯ ಹೆಸರಿನಲ್ಲಿ ವಿರೋಧಿಗಳ ಸದ್ದಡಗಿಸುತ್ತಿದ್ದರು. ಇದೇ ಮುಂದೆ ಸರಕಾರಿ ಗೂಂಡಾಪಡೆಯಾಯಿತು.
ಜೊತೆಗೆ ಯೂತ್ ಲೀಗ್, ವಿಮೆನ್ಸ್ ಲೀಗ್ ಇತ್ಯಾದಿ ಬೇರೆ ಬೇರೆ ಹೆಸರುಗಳಲ್ಲಿ ಹಲವು ಸಂಘಟನೆಗಳನ್ನು ರಚಿಸಲಾಯಿತು. ಉದ್ದೇಶ ಮಾತ್ರ ಒಂದೇ! ನಮ್ಮಲ್ಲಿ ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಕಾಣಬಹುದು! ಅನೇಕ ಸಂಘಟನೆಗಳು- ಉದ್ದೇಶ ಮಾತ್ರ ಒಂದೇ! ಅವರಿಗಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದರೆ, ಇಲ್ಲಿಯೂ ಬರೇ ‘ದಂಡ’ ಸಾಕಾಗದೆಂದು ಸರಕಾರಿ ಆಶ್ರಯದಲ್ಲಿ ರಾಜಾರೋಷವಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇವೆಲ್ಲವೂ ಏನನ್ನು ಸೂಚಿಸುತ್ತವೆ?! ಈ ಕುರಿತು ಕೂಡಾ ಮುಂದೆ ವಿವರವಾಗಿ ನೋಡೋಣ.
ಇನ್ನೊಂದು ವಿಷಯವೆಂದರೆ, ಸರ್ವಾಧಿಕಾರಿಗಳು ಯಾವತ್ತೂ ತಮ್ಮನ್ನು ಹಾಗೆಂದು ಕರೆದುಕೊಂಡಿಲ್ಲ. ದೇವರ ಪ್ರತಿನಿಧಿ, ಧರ್ಮರಕ್ಷಕ, ದೇಶರಕ್ಷಕ, ಅಧ್ಯಕ್ಷ, ಹಿಟ್ಲರನಂತೆ ಪರಮೋಚ್ಛ ನಾಯಕ (ಫ್ಯುರರ್) ಇತ್ಯಾದಿ ಕರೆದುಕೊಂಡಿದ್ದಾರೆ. ಅದುದರಿಂದ ನಾವು ವಿಶ್ವಗುರುಗಳು, ಪ್ರಧಾನ ಸೇವಕರು, ಚೌಕಿದಾರರ ಕುರಿತೂ ಎಚ್ಚರದಿಂದ ಇರಬೇಕಾದ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...