Homeಅಂಕಣಗಳುಪ್ರಧಾನ ಚೌಕಿದಾರರ ಕುರಿತೂ ಎಚ್ಚರವಿರಲಿ!

ಪ್ರಧಾನ ಚೌಕಿದಾರರ ಕುರಿತೂ ಎಚ್ಚರವಿರಲಿ!

- Advertisement -
- Advertisement -

ನಿಖಿಲ್ ಕೊಲ್ಫೆ |

ಕಳೆದ ಎರಡು ಸಂಚಿಕೆಗಳಲ್ಲಿ ಸರ್ವಾಧಿಕಾರದ ಮುಖ್ಯ ಗುಣಲಕ್ಷಣಗಳು, ಇನ್ನಷ್ಟು ಗುಣಲಕ್ಷಣಗಳನ್ನು ಮೇಲುಮೇಲಿಗೆ ನೋಡಿದೆವು. ಈ ಸಂಚಿಕೆಯಲ್ಲಿ ಅದರ ಮತ್ತಷ್ಟು ಗುಣಲಕ್ಷಣಗಳನ್ನು ನೋಡೋಣ.
ಸಾಮಾನ್ಯವಾಗಿ ಎಲ್ಲಾ ಸರ್ವಾಧಿಕಾರಿಗಳು, ಧರ್ಮದ ನೆಲೆಯಲ್ಲಿ (ಲಿಬಿಯಾ, ಸುಡಾನ್ ಮುಂತಾದ ಮುಸ್ಲಿಂ ರಾಷ್ಟ್ರಗಳು), ಭಾಷೆಯ ನೆಲೆಯಲ್ಲಿ (ಸ್ಪೇನ್‍ನಲ್ಲಿ ಸ್ಪಾನಿಷ್- ಬಾಸ್ಕ್), ಜನಾಂಗದ ನೆಲೆಯಲ್ಲಿ (ಜರ್ಮನಿಯ ಜನಾಂಗೀಯ ರಾಷ್ಟ್ರೀಯವಾದ, ದಕ್ಷಿಣ ಆಫ್ರಿಕಾದಲ್ಲಿದ್ದ ಅಪಾರ್ಥೀಡ್ ವರ್ಣಭೇದ ನೀತಿ), ಬುಡಕಟ್ಟುಗಳ ನೆಲೆಯಲ್ಲಿ (ಹೆಚ್ಚಿನ ಆಫ್ರಿಕನ್ ದೇಶಗಳು), ಸುಳ್ಳು ತತ್ವಗಳ ನೆಲೆಯಲ್ಲಿ (ಕಾಂಬೋಡಿಯಾ ಇತ್ಯಾದಿ) ರಾಷ್ಟ್ರೀಯತೆಯ ನೆಲೆಯಲ್ಲಿ (ಇಟಲಿ, ಅಜೆರ್ಂಟೀನಾ, ಮ್ಯಾನ್ಮಾರ್, ಫಿಲಿಪೈನ್ಸ್ ಇತ್ಯಾದಿ) ತಮ್ಮ ಬಲವನ್ನು ಪಡೆದುಕೊಂಡಿದ್ದರು, ಪಡೆದುಕೊಂದಿದ್ದಾರೆ. ನೆರೆಯ ರಾಷ್ಟ್ರಗಳನ್ನು, ಬೇರೆ, ಭಾಷೆ, ಬುಡಕಟ್ಟು, ಜನಾಂಗಗಳ ಜನರನ್ನು ಶತ್ರುಗಳಂತೆ ಬಿಂಬಿಸಿ, ಆಂತರಿಕ ಒಗ್ಗಟ್ಟನ್ನು ಪ್ರತಿಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಸರ್ವಾಧಿಕಾರಿಗಳ ಪ್ರಮುಖ ಕಾರ್ಯತಂತ್ರ.
ಭಾರತದಲ್ಲಿ ಸರ್ವಾಧಿಕಾರಿ ಆಡಳಿತ ಎಂದಾದರೂ ಬಂದರೆ, ಅದು ಧರ್ಮ, ಜಾತಿ ಮತ್ತು ಹುಸಿ ರಾಷ್ಟ್ರೀಯತೆ ಮತ್ತು ಪೊಳ್ಳು ದೇಶಪ್ರೇಮದ ಹೆಸರಲ್ಲಿ ಬರಲಿದೆ. ಅದುದರಿಂದಲೇ ಇಲ್ಲಿ ಸದ್ಯಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಭಯ ಹುಟ್ಟಿಸುತ್ತಿರುವುದು! ಹಿಂದೂತ್ವದ ಹೆಸರಿನಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯಗಳ ದೇಶಪ್ರೇಮವನ್ನು ಶಂಕಿಸುವಂತೆ ಮಾಡಿ, ಅವುಗಳ ವಿರುದ್ಧ ಅಸಹನೆಯನ್ನು ಮೂಡಿಸುವ ಪ್ರಯತ್ನಗಳನ್ನು- ಆರ್ಯನ್ ಶ್ರೇಷ್ಟತೆಯ ಹೆಸರಿನಲ್ಲಿ ಯಹೂದಿಗಳ ವಿರುದ್ಧ ಜರ್ಮನಿಯ ಸಾಮಾನ್ಯ ಪ್ರಜೆಗಳನ್ನು ಎತ್ತಿಕಟ್ಟಿದ ಹಿಟ್ಲರನ ನಾಜಿತಂತ್ರಗಳ ಕಡೆಗೆ ಇಟ್ಟ ಹೆಜ್ಜೆ ಎಂದು ಊಹಿಸಿದರೆ ತಪ್ಪಿಲ್ಲ. ಗೋಮಾಂಸ, ಸಾಗಿಸುತ್ತಿದ್ದರು, ಮನೆಯ ಫ್ರಿಜ್ಜಿನಲ್ಲಿ ಗೋಮಾಂಸ ಇಟ್ಟಿದ್ದಾರೆ ಎಂಬ ಸಂಶಯ ಇತ್ಯಾದಿ ಕ್ಷುಲ್ಲಕ ಕಾರಣಗಳಿಗಾಗಿ ನಡೆದ ದಾಳಿಗಳನ್ನು ಈ ನಿಟ್ಟಿನಲ್ಲಿ ನೋಡಬೇಕು.
‘ಹಿಂದೂ ಒಂದು’ ಎನ್ನುವ ಘೋಷಣೆಯ ಬೆನ್ನಲ್ಲೇ, ಕುದುರೆ ಮೇಲೆ ಕುಳಿತರು, ಬೂಟುಧರಿಸಿದರು, ಬಾವಿಯ ನೀರು ತೆಗೆದರು ಇತ್ಯಾದಿ ನೆಪಗಳನ್ನು ಮುಂದಿಟ್ಟು ಸವರ್ಣೀಯರು ದಲಿತರನ್ನು ಥಳಿಸಿದ ಬೆತ್ತಲೆಗೊಳಿಸಿದ, ಕೊಂದ ಘಟನೆಗಳಿಗೆ ಬೇರೇನು ವಿವರಣೆ ಕೊಡೋಣ!? ಜರ್ಮನಿಯಲ್ಲಿಯೂ ಅಲೆಮಾರಿ ಜಿಪ್ಸಿಗಳನ್ನು ನಿಷ್ಪ್ರಯೋಜಕ ಕೀಳು ಜನಾಂಗ ಎಂದು ಕಂಡಕಂಡಲ್ಲಿ ತಂಡೋಪತಂಡವಾಗಿ ಕೊಲ್ಲಲಾಗಿತ್ತು.
ನಾಜಿ ಜರ್ಮನಿಯು ನೆರೆಯ ಪೋಲೆಂಡ್ ನಮ್ಮದು, ಆಸ್ಟ್ರಿಯಾ ನಮ್ಮದು ಎಂದು ಹೇಳುತ್ತಲೇ, ಜರ್ಮನ್ ಜನರಲ್ಲಿ ದ್ವೇಷ ಹುಟ್ಟಿಸಿ ಅವುಗಳ ಮತ್ತು ಫ್ರಾನ್ಸ್, ಸ್ಕ್ಯಾಂಡಿನೇವಿಯನ್ ದೇಶಗಳ ಸಹಿತ ನೆರೆಹೊರೆಯ ದೇಶಗಳ ಮೇಲೆ ದಂಡೆತ್ತಿಹೋಗಿತ್ತು. ನಮ್ಮಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್ ಒಳಗೊಂಡಂತಹ ಅಖಂಡ ಭಾರತದ ಸಂಘ ಪರಿವಾರದ ಕಲ್ಪನೆಗೂ ಇದಕ್ಕೂ ಏನಾದರೂ ಸಾಮ್ಯ ಕಾಣುತ್ತಿದೆಯೆ!?
ಅಲ್ಲಿ ಮಾಡಿದಂತೆಯೇ ಇಲ್ಲಿಯೂ ಬುದ್ಧಿಜೀವಿಗಳ ಕೊಲೆಗಳು, ಅವರ ಮೇಲೆ ದಾಳಿಗಳು ನಡೆಯುತ್ತಿವೆ! ವಿರೋಧಿಸಿದವರಿಗೆ ದೇಶದ್ರೋಹಿ ಪಟ್ಟಕಟ್ಟಿ ಪಾಕಿಸ್ತಾನಕ್ಕೆ ಕಳಿಸುವ ಮಾತಾಗುತ್ತಿರುವುದು ಬರೇ ಕಾಕತಾಳೀಯವೇ? ಅಥವಾ ಯೋಜಿತ ಸಂಚಿನ ಭಾಗವೆ? ಇವೆಲ್ಲವನ್ನೂ ಮುಂದೆ ನೋಡೋಣ.
ಸರ್ವಾಧಿಕಾರದ ಇನ್ನೊಂದು ಲಕ್ಷಣವೆಂದರೆ ಏಕಪಕ್ಷೀಯ ನಿರ್ಧಾರ. ಒಬ್ಬ ವ್ಯಕ್ತಿ ಅಥವಾ ಒಂದು ಜಂಟಾ ಅಥವಾ ಗುಂಪಿನದ್ದೇ ಕಾರುಬಾರು. ಅವರ ನಿರ್ಧಾರಗಳನ್ನು ವಿರೋಧಿಸುವ ಧೈರ್ಯ ಮಾಡಿದವರು ಮೂಲೆಗುಂಪು. ಗಡಿಪಾರು, ಮರಣದಂಡನೆ ಇತ್ಯಾದಿಗಳು ಕ್ರೂರ ಸರ್ವಾಧಿಕಾರಗಳಲ್ಲಿ ಕಟ್ಟಿಟ್ಟ ಬುತ್ತಿ. ನಮ್ಮ ದೇಶದಲ್ಲೇ ನಡೆಯುತ್ತಿರುವ ವ್ಯಕ್ತಿಪೂಜೆಯನ್ನು ನೋಡಿದರೆ, ಇದು ಪ್ರಜಾಪ್ರಭಯತ್ವವು ಪರೋಕ್ಷ ಸರ್ವಾಧಿಕಾರದತ್ತ ಹೊರಳುವ ಲಕ್ಷಣದಂತೆ ಕಾಣುತ್ತಿದೆ. ಬಿಜೆಪಿಯಲ್ಲಿಯೇ ಆಡ್ವಾಣಿ, ಯಶವಂತ ಸಿನ್ಹಾ ಅವರಂತಹ ಹಿರಿಯ ನಾಯಕರನ್ನು ಹೇಗೆ ಮೂಲೆಗುಂಪು ಮಾಡಲಾಯಿತು ಎಂಬುದನ್ನು ನಾವು ಗಮನಿಸಬಹುದು.
ಇನ್ನೊಂದು ಲಕ್ಷಣವೆಂದರೆ, ಮಾನವ ಮತ್ತು ವೈಯಕ್ತಿಕ ಹಕ್ಕುಗಳ ದಮನ. ಪ್ರಜೆಯ ಅಧಿಕಾರಗಳನ್ನು ಮೊಟಕುಗೊಳಿಸುವುದು, ಅವರ ಚಲನವಲನಗಳ ಮೇಲೆ ಗುಪ್ತವಾಗಿ ಕಣ್ಣಿಡುವುದು, ಕಿರುಕುಳ ನೀಡುವುದು. ಇಂತಹ ಹಲವಾರು ಉದಾಹರಣೆಗಳನ್ನು ಓದುಗರು ಗಮನಿಸಿರಬಹುದು. ‘ನಗರ ನಕ್ಸಲ್’ ಪಿಳ್ಳೆ ನೆಪದ ಮೇಲೆ ಬುದ್ಧಿಜೀವಿಗಳ ಬಂಧನ, ಸಂಘಟಿತ ಅಪರಾಧಗಳ ಕಾಯ್ದೆಗಳ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಇತ್ಯಾದಿ ಮತ್ತಿನ್ನೇನು? ‘ಅಧಾರ್’ ಬಗ್ಗೆ ವ್ಯಕ್ತವಾಗಿರುವ ಅತಂಕಗಳ ಹಿಂದೆ ಇದೇ ಕಾರಣವಿದೆ. ಹತ್ತು ತನಿಖಾ ಸಂಸ್ಥೆಗಳಿಗೆ ನಾಗರಿಕರ ಇ-ಮೇಲ್ ಸಹಿತ ಸಾಮಾಜಿಕ ಜಾಲತಾಣಗಳ ಮಾಹಿತಿ ಪಡೆಯುವ ಅಧಿಕಾರ ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದೆ?
ಸರ್ವಾಧಿಕಾರಗಳಲ್ಲಿ ಮಾತ್ರ ಇದು ಅತಿರೇಕಕ್ಕೆ ಹೋಗುತ್ತದೆ. ವಿರೋಧಿಗಳು ಮತ್ತು ಸರಕಾರದ ವಿರುದ್ಧ ಇರುವ ನಾಗರಿಕರನ್ನು ಗುರುತಿಸಿ, ಗುಪ್ತಚರ್ಯೆ ನಡೆಸಿ, ದಮನಿಸಲು ಜರ್ಮನಿಯಲ್ಲಿ ಅತ್ಯಂತ ಕ್ರೂರ ಗುಪ್ತ ರಾಜಕೀಯ ಪೊಲೀಸ್ ಪಡೆಯಾಗಿದ್ದ ‘ಗೆಸ್ಟಾಪೋ’ವನ್ನು ಸ್ಥಾಪಿಸಲಾಗಿತ್ತು. ಈ ಹೆಸರು ಕೇಳಿದರೆ ನಾಗರಿಕರು ಮಾತ್ರವಲ್ಲ, ಸಾಮಾನ್ಯ ಪೊಲೀಸರೂ ಗಡಗಡ ನಡುಗುತ್ತಿದ್ದರು. ಲಕ್ಷಾಂತರ ಜರ್ಮನರನ್ನು ಮತ್ತು ಆಕ್ರಮಿತ ದೇಶಗಳ ಪ್ರಜೆಗಳನ್ನು ಚಿತ್ರಹಿಂಸೆ ಮಾಡಿ ಕೊಂದ ಕುಖ್ಯಾತಿ ಈ ‘ಗೆಸ್ಟಾಪೋ’ ರಾಕ್ಷಸರಿಗಿದೆ. ಹಿಟ್ಲರ್ ಬಾಲಬಡುಕ ಹೈನ್ರಿಚ್ ಮ್ಯುಲ್ಲರ್ ಇದರ ಮುಖ್ಯಸ್ಥನಾಗಿದ್ದ.
ಸರ್ವಾಧಿಕಾರಕ್ಕೆ ಮಾನವ ಹಕ್ಕುಗಳ ಮೇಲೆ ಎಳ್ಳಷ್ಟು ಕಾಳಜಿ ಇರುವುದಿಲ್ಲ! ಮ್ಯಾನ್ಮಾರ್ ಉದಾಹರಣೆ ತೆಗೆದುಕೊಂಡರೆ 2008ರಲ್ಲಿ ದೇಶವು ಭಾರೀ ಚಂಡಮಾರುತಕ್ಕೆ ತುತ್ತಾಗಿ ಜನರು ಅನ್ನ, ನೀರು, ಆಶ್ರಯವಿಲ್ಲದೇ ಸಾಯುತ್ತಿದ್ದಾಗ ಅಲ್ಲಿನ ಸರ್ವಾಧಿಕಾರವು ಬರಲಿದ್ದ ಅಣಕು ಚುನಾವಣೆಯಲ್ಲಿ ಜನರು ತನ್ನನ್ನು ಗೆಲ್ಲಿಸುವ ತನಕ ಹರಿದುಬಂದ ವಿದೇಶಿ ನೆರವನ್ನು ಹಂಚದೇ ತಡೆಹಿಡಿದಿತ್ತು. ಭಾರತ ಸರಕಾರ ಸುನಾಮಿ ಮತ್ತು ಕೇರಳ ದುರಂತ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳು ಕೊಡಮಾಡಿದ ನೆರವನ್ನೂ ಧಾಷ್ರ್ಯದಿಂದ ನಿರಾಕರಿಸಿರುವುದು ಓದುಗರಿಗೆ ನೆನಪಿರಬಹುದು.
ಮತ್ತೊಂದು ಲಕ್ಷಣವೆಂದರೆ ಸಮಾನಾಂತರ ವ್ಯವಸ್ಥೆ. ಸಾಮಾನ್ಯ ಸೇನಾಪಡೆಗಳಿಗೆ ಸಮಾನಂತರವಾಗಿ ‘ವಾಫೆನ್ ಎಸ್‍ಎಸ್’ ಎಂಬ ಪಡೆಗಳನ್ನು ಸ್ಥಾಪಿಸಲಾಗಿತ್ತು. ಎಸ್‍ಎಸ್ ಎಂದರೆ ‘ಶುಡ್ಝ್ ಸ್ಟ್ರಾಫೆಲ್’ ಎಂಬುದರ ಸಂಕ್ಷಿಪ್ತ. ಅದು ಅಡಳಿತ ಪಕ್ಷದ ಘಟಕ! ಅದರ ಸೇನಾ ವಿಭಾಗವೇ ವಾಫೆನ್ ಎಸ್‍ಎಸ್. ಇದರಲ್ಲಿ ಇದ್ದದ್ದು ಹಿಟ್ಲರನ ಕುರುಡು ಭಕ್ತರು! ‘ವರ್‍ಮ್ಯಾಷ್’ ಎಂದು ಕರೆಯಲ್ಪಡುತ್ತಿದ್ದ ಸಾಮಾನ್ಯ ಸೇನೆಯ ಹಿರಿಯ ಅಧಿಕಾರಿ ಕೂಡಾ ಈ ಎಸ್‍ಎಸ್‍ನ ಕಿರಿಯ ಅಧಿಕಾರಿಗೂ ಹೆದರಬೇಕಾಗಿತ್ತು! ಹೈನ್ರಿಚ್ ಹಿಮ್ಲರ್ ಎಂಬ ಬುದ್ಧಿವಂತ ಕ್ರೂರಿ ಇದರ ಮುಖ್ಯಸ್ಥನಾಗಿದ್ದ.
ಮಾಧ್ಯಮಗಳ ನಿಯಂತ್ರಣ ಸರ್ವಾಧಿಕಾರದ ಇನ್ನೊಂದು ಲಕ್ಷಣ. ನಾಜಿ ಜರ್ಮನಿಯಲ್ಲಿ ಎಲ್ಲಾ ಸರಕಾರಿ ವಿರೋಧಿ ಪತ್ರಿಕೆಗಳನ್ನು ನಿಷೇಧಿಸಿ, ಮುಟ್ಟುಗೋಲು ಹಾಕಲಾಗಿತ್ತು. ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿತ್ತು. ನಾಜಿ ಪಕ್ಷವೇ ಸರಕಾರದ ತುತ್ತೂರಿ ಊದುವ, ವಿರೋಧಿಗಳು ಮತ್ತು ಯಹೂದಿ, ಕಮ್ಯುನಿಸ್ಟರ ಮೇಲೆ ವಿಷಕಾರುವ ಮುಖವಾಣಿಗಳನ್ನು ನಡೆಸುತ್ತಿತ್ತು. ರೇಡಿಯೋದಲ್ಲಿ ಹಿಟ್ಲರನ ಗುಣಗಾನ ಮಾಡಿ ಅತನನ್ನು ಸರ್ವಗುಣಸಂಪನ್ನ ವಿಶ್ವನಾಯಕನಂತೆ ಬಿಂಬಿಸಲಾಗಿತ್ತು. ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ, ನೃತ್ಯ ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ನಾಜಿ ಪಕ್ಷವೇ ನಿಯಂತ್ರಿಸುತ್ತಿತ್ತು. ನಮ್ಮಲ್ಲಿನ ಮಾಧ್ಯಮಗಳ ಗುಲಾಮಿ ಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನಂತ ಚಲನಚಿತ್ರ ಚಿತ್ರರಂಗಕ್ಕೂ ಈ ರೋಗ ವ್ಯಾಪಿಸುತ್ತಿರುವುದರ ಲಕ್ಷಣವಾಗಿದೆ. ಈ ಕುರಿತು ವಿವರವಾಗಿ ಮುಂದೆ ನೋಡೋಣ.
ಸರ್ವಾಧಿಕಾರದ ಅರಂಭಿಕ ಲಕ್ಷಣಗಳಲ್ಲಿ ಒಂದೆಂದರೆ, ಪಕ್ಷದ ಕಾರ್ಯಕರ್ತರ ಗೂಂಡಾ ಪೊಲೀಸ್‍ಗಿರಿ. ಜರ್ಮನಿಯಲ್ಲಿ ಮೊದಲೇ ಉಲ್ಲೇಖಿಸಿದಂತಹ ಎಸ್‍ಎಸ್ ಪಡೆಗಳನ್ನು ಸ್ಥಾಪಿಸಲಾಗಿತ್ತು. ಇದನ್ನು ಮೊದಲು ಸ್ಥಾಪಿಸಿದ್ದು 1925ರಲ್ಲಿ- ಪಕ್ಷದ ಸಭೆಗಳಿಗೆ ಸೆಕ್ಯೂರಿಟಿ ಗಾರ್ಡುಗಳಾಗಿ! ವೃತ್ತಿಪರ ಗೂಂಡಾಗಳು, ನಿರುದ್ಯೋಗಿ ಕುರುಡು ಭಕ್ತರು ದೇಶ ಪ್ರೇಮದ ಹೆಸರಿನಲ್ಲಿ, ಜನಾಂಗೀಯ ಶ್ರೇಷ್ಟತೆಯ ಹೆಸರಿನಲ್ಲಿ ವಿರೋಧಿಗಳ ಸದ್ದಡಗಿಸುತ್ತಿದ್ದರು. ಇದೇ ಮುಂದೆ ಸರಕಾರಿ ಗೂಂಡಾಪಡೆಯಾಯಿತು.
ಜೊತೆಗೆ ಯೂತ್ ಲೀಗ್, ವಿಮೆನ್ಸ್ ಲೀಗ್ ಇತ್ಯಾದಿ ಬೇರೆ ಬೇರೆ ಹೆಸರುಗಳಲ್ಲಿ ಹಲವು ಸಂಘಟನೆಗಳನ್ನು ರಚಿಸಲಾಯಿತು. ಉದ್ದೇಶ ಮಾತ್ರ ಒಂದೇ! ನಮ್ಮಲ್ಲಿ ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಕಾಣಬಹುದು! ಅನೇಕ ಸಂಘಟನೆಗಳು- ಉದ್ದೇಶ ಮಾತ್ರ ಒಂದೇ! ಅವರಿಗಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದರೆ, ಇಲ್ಲಿಯೂ ಬರೇ ‘ದಂಡ’ ಸಾಕಾಗದೆಂದು ಸರಕಾರಿ ಆಶ್ರಯದಲ್ಲಿ ರಾಜಾರೋಷವಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇವೆಲ್ಲವೂ ಏನನ್ನು ಸೂಚಿಸುತ್ತವೆ?! ಈ ಕುರಿತು ಕೂಡಾ ಮುಂದೆ ವಿವರವಾಗಿ ನೋಡೋಣ.
ಇನ್ನೊಂದು ವಿಷಯವೆಂದರೆ, ಸರ್ವಾಧಿಕಾರಿಗಳು ಯಾವತ್ತೂ ತಮ್ಮನ್ನು ಹಾಗೆಂದು ಕರೆದುಕೊಂಡಿಲ್ಲ. ದೇವರ ಪ್ರತಿನಿಧಿ, ಧರ್ಮರಕ್ಷಕ, ದೇಶರಕ್ಷಕ, ಅಧ್ಯಕ್ಷ, ಹಿಟ್ಲರನಂತೆ ಪರಮೋಚ್ಛ ನಾಯಕ (ಫ್ಯುರರ್) ಇತ್ಯಾದಿ ಕರೆದುಕೊಂಡಿದ್ದಾರೆ. ಅದುದರಿಂದ ನಾವು ವಿಶ್ವಗುರುಗಳು, ಪ್ರಧಾನ ಸೇವಕರು, ಚೌಕಿದಾರರ ಕುರಿತೂ ಎಚ್ಚರದಿಂದ ಇರಬೇಕಾದ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...