Homeಮುಖಪುಟಉತ್ತರ ಕನ್ನಡದಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತುಗಳು

ಉತ್ತರ ಕನ್ನಡದಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತುಗಳು

ಗಾಂಧೀಜಿ ಕಾರವಾರಕ್ಕೆ ಬಂದಿದ್ದು ಆ ವೇಳೆ ಅಡಿಯಾಗಿದ್ದ ಅಸ್ಪೃಶ್ಯತೆ ಮತ್ತು ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧದ ಜನಜಾಗೃತಿ ಮೂಡಿಸಲೆಂದಾಗಿತ್ತು.

- Advertisement -
- Advertisement -

ಉತ್ತರ ಕನ್ನಡದ ಹಲವೆಡೆ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು ಇವತ್ತಿಗೂ ಅಚ್ಚಳಿಯದೇ ಉಳಿದಿದೆ! ಜಿಲ್ಲೆಗೆ ಹಲವು ಬಾರಿ ಗಾಂಧೀಜಿ ಬಂದುಹೋಗಿದ್ದಾರೆ. ಗಾಂಧೀಜಿ ಉತ್ತರ ಕನ್ನಡಕ್ಕೆ ಆಗಮಿಸುತ್ತಿದ್ದುದು ಸ್ವಾತಂತ್ರ್ಯ ಚಳವಳಿ ಜಾಗೃತಿಗೆಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಗಾಂಧೀ ಹೊರಟರೆಂದರೆ ಬರೀ ಸ್ವರಾಜ್ಯ ಕನಸಷ್ಟೇ ಅಲ್ಲ, ಸಾಮಾಜಿಕ ಮತ್ತು ಜೀವಪರ ತುಡಿತವೂ ಇರುತ್ತಿತ್ತು. ಉಪ್ಪು ತಯಾರಿಕೆ ಮತ್ತು ಮಾರಾಟವನ್ನು ಬ್ರಿಟಿ‍‍‍ಷ್ ಸರ್ಕಾರ ನಿಷೇಧಿಸಿದಾಗ ಗಾಂಧೀಜಿ ಆದಿಯಾಗಿ ಹಿರಿಯ ರಾಷ್ಟ್ರೀಯ ನೇತಾರರು ತಿರುಗಿ ಬಿದ್ದಿದ್ದರು. ಅಸಹಕಾರ ಚಳುವಳಿಯೊಂದೇ ಈ ಸಮಸ್ಯೆ ಪರಿಹಾರಕ್ಕೆ ತಾರಕ ತಂತ್ರವೆಂಬ ತೀರ್ಮಾನಕ್ಕೆ ಬಂದಿದ್ದರು. 20-2-1930ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ್ ಕಾಂಗ್ರೆಸ್ ಸಮಿತಿ ಉತ್ತರ ಕನ್ನಡದ ಅಂಕೋಲಾ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಸರಿಯಾದ ಸ್ಥಳವೆಂದು ನಿರ್ಧರಿಸಿತ್ತು.

ಪೊಲೀಸರ ಅಡೆತಡೆಯನ್ನೆಲ್ಲ ಕಡೆಗಣಿಸಿ ಏಪ್ರಿಲ್ 13ರಂದು ಭರ್ಜರಿ ಮೆರವಣಿಗೆಯೊಂದಿಗೆ ಅಂಕೋಲೆಯ ಜನಸಾಗರ ಕಡಲ ಕಿನಾರೆಯತ್ತ ಹೊರಟಿತ್ತು! ಅಲ್ಲಿ ಬ್ರಿಟಿಷ್ ಸರ್ಕಾರದ ಕಾನೂನು ಧಿಕ್ಕರಿಸಿ ಉಪ್ಪು ತಯಾರಿಕೆ, ಮಾರಾಟ ಮಾಡಲಾಯಿತು. ಅಂಕೋಲೆಯ ಹಳ್ಳಿಹಳ್ಳಿಯಲ್ಲಿ ಚಳವಳಿ ಭುಗಿಲೆದ್ದಿತು! ಅಸಹಕಾರ ಚಳವಳಿ, ಕರಬಂಧಿ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಅಂಕೋಲೆ ನಿರ್ಣಾಯಕ ಪಾತ್ರ ವಹಿಸಿತ್ತು. ಹೋರಾಟಗಾರ ರೈತರು ತಮ್ಮ ಭೂಮಿ ಕಳಕೊಳ್ಳಬೇಕಾಗಿ ಬಂತು; ಆದರೂ ಅಂಜದೆ ಅಳುಕದೆ ಪೊಲೀಸರ ಲಾಠಿಗೆ ಎದೆಗೊಟ್ಟು ನಿಂತರು! ಗುಜರಾತಿನ ಬಾರ್ಡೋಲಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಮಾದರಿಯಲ್ಲೇ ಅಂಕೋಲೆಯಲ್ಲೂ ಚಳುವಳಿ ಆಗಿತ್ತು. ಅಂಕೋಲೆಗೆ ಕರ್ನಾಟಕದ ಬಾರ್ಡೋಲಿಯೆಂದು ಹೆಸರು ಬಂದಿದ್ದೇ ಈ ಯಶಸ್ವೀ ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹದಿಂದ! ಈ ಹೊತ್ತಲ್ಲಿ ಅಂಕೋಲೆಗೆ ಬಂದಿದ್ದ ಗಾಂಧೀಜಿ ಸ್ಪೂರ್ತಿಯ ಚಿಲುಮೆಯಾಗಿದ್ದರು.

photo courtesy : Banglore Mirror

ಕರನಿರಾಕರಣೆ ಚಳವಳಿಯು ಕರಾವಳಿ ದಾಟಿ ಮಲೆನಾಡಿಗೂ ವ್ಯಾಪಿಸಿತ್ತು. ಗಾಂಧೀಜಿ ಕುಮಟಾ-ಶಿರಸಿ-ಸಿದ್ದಾಪುರಕ್ಕೂ ಹೋಗಿ ಹೋರಾಟ ಹುರಿಗೊಳ್ಳುವಂತೆ ಮಾಡಿದ್ದರು. 1934ರಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರ್ತಿ ಮಹಾದೇವಿತಾಯಿಯವರ ಮನೆಗೂ ಭೇಟಿ ಕೊಟ್ಟಿದ್ದರು. ಈ ಮಹಾದೇವಿತಾಯಿ ಸಿದ್ದಾಪುರದ ಪ್ರತಿಷ್ಠಿತ “ದೊಡ್ಮನೆ ಹೆಗಡೆ” ಕುಟುಂಬದವರು; ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಡಪ್ಪನ ಮಗಳು. ಒಂದು ಮೂಲದ ಪ್ರಕಾರ ಮಹಾದೇವಿ ಬಾಲವಿಧವೆ; ಆಕೆಗೆ ಕೇಶಮುಂಡನ ಮಾಡಲಾಗಿತ್ತು. ಆಕೆಗಾಗುತ್ತಿದ್ದ ಹಿಂಸೆಯ ಸುದ್ದಿ ತಿಳಿದಿದ್ದ ಗಾಂಧೀಜಿ ಇದೊಂದು ಹೇಯ-ಬರ್ಬರ ದೌರ್ಜನ್ಯವೆಂದು ಹೇಳಿದ್ದರು; ಇಲ್ಲಾಕೆಗೆ ನೆಮ್ಮದಿಯಿಂದಿರಲು ಸಾಧ್ಯವಾಗದಿದ್ದರೆ ತಮ್ಮ ಆಶ್ರಮಕ್ಕೆ ಕರೆದೊಯ್ಯುವುದಾಗಿ ಹೇಳಿದರು. ಮಹಾದೇವಿಯೂ ಒಪ್ಪಿ ಗಾಂಧಿ ಆಶ್ರಮ ಸೇರಿಕೊಳ್ಳುತ್ತಾರೆ. ಅಕ್ಕನ ಉತ್ತರ ಭಾರತದ ಸಂಪರ್ಕ ಬಳಸಿಕೊಂಡು ರಾಮಕೃಷ್ಣ ಹೆಗಡೆ ಬನಾರಸ್ ವಿಶ್ವವಿದ್ಯಾಲಯ ಸೇರಿಕೊಳ್ಳುತ್ತಾರೆ. ಅಲ್ಲಿ ಹಿಂದಿ-ಇಂಗ್ಲಿಷ್‌ನಲ್ಲಿ ಪಾರಂಗತರಾದ ಹೆಗಡೆ ಆ ಭಾಷಾ ಚಾಕಚಾಕ್ಯತೆಯಿಂದಲೇ ರಾಷ್ಟ್ರ ನಾಯಕರ ಸಾಲಿನಲ್ಲಿ ಮಿಂಚಲು ಅವಕಾಶವೂ ಆಯಿತು!

ಇದೇ ಸಿದ್ದಾಪುರ ಹುಡದೀಬೈಲ್‍ನಲ್ಲಿ 1934ರ ಮಾರ್ಚ್‍ನಲ್ಲಿ ಗಾಂಧೀಯವರ ಭಾಷಣ ಕಾರ್ಯಕ್ರಮವಿತ್ತು. ದೊಡ್ಡ ಜನಸ್ತೋಮವೇ ನೆರೆದಿತ್ತು! ಸಿದ್ದಾಪುರದ ಮುಖಂಡರು ‘ದೇವಿ ಶಿವಪ್ಪ ಹಸ್ಲರ್’ ಎಂಬ ದಲಿತ ಮಹಿಳೆಯನ್ನು ವಾದ್ಯದೊಂದಿಗೆ ವೇದಿಕೆಗೆ ಕರೆತರುತ್ತಾರೆ. ಶಂಕರ ಗುಲ್ವಾಡಿ ಎಂಬುವರು ದೇವಿಯನ್ನು ಗಾಂಧೀಜಿಗೆ ಪರಿಚಯಿಸುತ್ತಾರೆ. ಸ್ವಾತಂತ್ರ್ಯ ಚಳವಳಿಗೆ ತನ್ನದೇ ರೀತಿಯಲ್ಲಿ ಅರ್ಪಿಸಿಕೊಂಡಿದ್ದ ಆಕೆಯ ಉದಾತ್ತತೆ-ಪ್ರಾಮಾಣಿಕತೆ ಕೇಳಿ ಗಾಂಧೀಜಿ ಕಣ್ಣಲ್ಲಿ ನೀರು ಬರುತ್ತದೆ!! “ದೇವಿಯಂಥ ಪುಣ್ಯಾತ್ಮರು ಈ ಧರೆಯಲ್ಲಿರುವುದರಿಂದಲೇ ಜಗತ್ತು ನಡೆದಿದೆ” ಎಂದವರು ಉದ್ಘರಿಸುತ್ತಾರೆ!! ಗಾಂಧೀಜಿ ಕೈಯಿಂದ ಆಕೆಗೆ ಸನ್ಮಾನವೂ ಆಗುತ್ತದೆ.

ಈ ಪ್ರಾಮಾಣಿಕತೆಯ ಬಗ್ಗೆ ಒಂದು ಕತೆಯೂ ಇದೆ: ಕರ ನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿದವರನ್ನು ಬಂಧಿಸುವುದು ಕ್ರೂರವಾಗಿ ದಂಡಿಸುವುದು ಬ್ರಿಟಿಷರ “ನೀತಿ”ಯಾಗಿದ್ದ ಕಾಲವದು. ಸಿದ್ದಾಪುರದ ಕೆಳಗಿನ ಮನೆ ನಾಗೇಶ ಹೆಗಡೆ ತನ್ನನ್ನು ಪೊಲೀಸರು ಬಂಧಿಸುತ್ತಾರೆಂದು ಖಾತ್ರಿಯಾದಾಗ ಮನೆಯಲ್ಲಿದ್ದ ಬಂಗಾರವನ್ನೆಲ್ಲ ಒಂದು ತಪ್ಪಲಿಯಲ್ಲಿ ಹಾಕಿ ಕಿರಿಯ ಮಗನಿಗೆ ಕೊಡುತ್ತಾರೆ. ಆತ ಆ ತಪ್ಪಲಿಯನ್ನು ತೋಟದಲ್ಲಿ ಹುಗಿದಿಡುತ್ತಾನೆ. ಅದು ದೇವಿಗೆ ಗೊತ್ತಿರುತ್ತದೆ. ಕೆಲವು ದಿನಗಳಲ್ಲಿ ಆತನೂ ಜೈಲು ಪಾಲಾಗುತ್ತಾನೆ. ಒಂದು ದಿನ ಜೋರು ಮಳೆಯಲ್ಲಿ ಆ ತಪ್ಪಲಿ ತೇಲಿ ಬರುವುದು ಕಂಡ ದೇವಿ ಅದನ್ನು ಜೋಪಾನವಾಗಿ ಇಡುತ್ತಾಳೆ. ಪರಮ ಕುಡುಕನಾದ ಗಂಡ ಪೀಡಿಸಿದರೂ, ಪೊಲೀಸರು ಸತಾಯಿಸಿದರೂ ದೇವಿ ಆ ಬಂಗಾರ ಮಾತ್ರ ಕೊಡುವುದಿಲ್ಲ. ನಾಗೇಶ್ ಹೆಗಡೆ ಬಿಡುಗಡೆ ಆಗುವುದನ್ನೇ ಕಾಯುತ್ತಿದ್ದ ದೇವಿ ಅಂದೇ ನಡುರಾತ್ರಿ ಆತನ ಮನೆಗ್ಹೋಗಿ ಬಂಗಾರದ ತಪ್ಪಲಿ ಒಪ್ಪಿಸುತ್ತಾಳೆ. ನಾಗೇಶ್ ಹೆಗಡೆ ಒಂದು ಬಂಗಾರದ ಸರ ಆಕೆಗೆ ಕೊಡಲು ಮುಂದಾದಾಗ ಒಲ್ಲೆ ಅಂತಾಳೆ!! ಈ ಬಂಗಾರ ತನ್ನಲ್ಲಿರುವ ತನಕ ತಾನೆಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ; ಈ ಚಿನ್ನ ಸಂರಕ್ಷಣೆಯಲ್ಲೇ ಗಂಡನನ್ನೂ ಕಳಕೊಂಡೆ ಎನ್ನುತ್ತ ಮನೆಯೆಡೆ ಹೆಜ್ಜೆ ಹಾಕುತ್ತಾಳೆ.

photo courtesy : Kamat Potpouri

ಗಾಂಧೀಜಿ ಶಿರಸಿಗೆ ಹಲವು ಬಾರಿ ಬಂದುಹೋಗಿದ್ದಾರೆ. ಆದರೆ ದಾಖಲೆಯಲ್ಲಿರುವುದು ಕೆಲವು ಸಂದರ್ಭಗಳಷ್ಟೇ. 1934 ಮಾರ್ಚ್ 1ರಂದು ಶಿರಸಿಯ ಬಿಡಕಿಬೈಲ್‍ನಲ್ಲಿ ಗಾಂಧೀಜಿಯವರ ಸಾರ್ವಜನಿಕ ಸಭೆ ಏರ್ಪಾಡಾಗಿತ್ತು. ಸಭೆಯ ನಂತರ ಆ ಬಯಲಲ್ಲೇ ಹೋರಾಟಗಾರರ ಜತೆ ಗಾಂಧೀಜಿ ಸಂವಾದ ನಡೆಸುತ್ತಾರೆ. ಇದಾದ ಬಳಿಕ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಎಸ್.ಎನ್ ಕೇಶವೈನ್ ದೇವಾಲಯಕ್ಕೆ ಹೋಗೋಣ ಎನ್ನುತ್ತಾರೆ. “ನಾನು ಬರಬೇಕೆಂದಿದ್ದರೆ ದೇವಾಲಯದಲ್ಲಿ ನಡೆಯುವ ಕೋಣಬಲಿ ನಿಲ್ಲಿಸಬೇಕು; ಜಾತಿ ಭೇದವಿಲ್ಲದೆ ಎಲ್ಲರಿಗೂ ಪ್ರವೇಶ ಕಲ್ಪಿಸಬೇಕು” ಎಂದು ಗಾಂಧಿ ಹಠ ಹಿಡಿಯುತ್ತಾರೆ. ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಒಪ್ಪಿದ ನಂತರವೇ ದರ್ಶನಕ್ಕೆ ಹೋಗುತ್ತಾರೆ. ಅಂದಿನಿಂದ ಶಿರಸಿ ಜಾತ್ರೆ ಹೊತ್ತಲ್ಲಿ ನಡೆಯುತ್ತಿದ್ದ ಪ್ರಾಣಿ ವಧೆ ನಿಷೇಧಿಸಲಾಗಿದೆ. ಆದರೂ ಸಿರಿಂಜ್‍ನಿಂದ ಕೋಣನ ರಕ್ತ ತೆಗೆದು “ಬ್ರಾಹ್ಮಣ ದೇವಿಗೆ” ಅರ್ಪಣೆ ಮಾಡಿ ಆಕೆ ಚಮಗಾರ (ದಲಿತ) ಯುವಕನ ಮೋಹಿಸಿ ಮೋಸಹೋದೆನೆಂದು ಜಿದ್ದಿಗೆ ಬಿದ್ದ “ಪುರಾಣ” ಬೇಡವೆಂದರೂ ನೆನಪಾಗುವಂತೆ ಮಾಡಲಾಗುತ್ತಿದೆ.…

27 ಫೆಬ್ರುವರಿ 1934 ರಂದು ಗಾಂಧೀಜಿ ಕಡಲನಗರಿ ಕಾರವಾರಕ್ಕೆ ಬಂದಿದ್ದರು. ಮರುದಿನ ಗಾಂಧೀಜಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡುವುದಿತ್ತು. ಅಂದು ಅವರು ಕಾರವಾರಾಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಸಂದೇಶ ಸಾರಲು ಬಂದಿದ್ದರೆಂಬುದು ಸಾಮಾನ್ಯ ಅಭಿಪ್ರಾಯ. ವಾಸ್ತವವೆಂದರೆ, ಗಾಂಧೀಜಿ ಕಾರವಾರಕ್ಕೆ ಬಂದಿದ್ದು ಆ ವೇಳೆ ಅಡಿಯಾಗಿದ್ದ ಅಸ್ಪೃಶ್ಯತೆ ಮತ್ತು ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧದ ಜನಜಾಗೃತಿ ಮೂಡಿಸಲೆಂದಾಗಿತ್ತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕಾರವಾರದ ಸುಬ್ಬರಾವ್ ಹಳದೀಪುರ್ಕರ್ ಸಹೋದರ ಕೃಷ್ಣರಾವ್ ಆಸ್ಥೆಯಿಂದ ಗಾಂಧಿಜೀಯವರನ್ನು ಕರೆಸಿದ್ದರು.

ಕುಂದಾಪುರದಿಂದ ‘ದಯಾವತಿ’ ಎಂಬ ಬೋಟ್‍ನಲ್ಲಿ ಕಾರವಾರ ತಲುಪಿದ್ದ ಗಾಂಧೀಜಿ ಹಳದಿಪುರ್ಕರ್ ಮನೆಯಲ್ಲೇ ವಾಸ್ತವ್ಯ ಮಾಡಿದ್ದರು. ಮರುದಿನದ ಸಭೆಗಾಗಿ ರಾತ್ರಿ ಸಮಾಲೋಚನೆ ನಡೆಸಿದ್ದರು. ಗೀತಾಂಜಲಿ ಟಾಕೀಸ್ ಹಿಂದಿನ ಬಯಲಲ್ಲಿ ಸಾರ್ವಜನಿಕ ಸಭೆಯ ವೇದಿಕೆ ಸಿದ್ಧ ಮಾಡಲಾಗಿತ್ತು. ಅಲ್ಲಿ ಗಾಂಧೀಜಿಗೆ ಶ್ರೀಗಂಧದ ಪೆಟ್ಟಿಗೆ ಮತ್ತು ಬೆಳ್ಳಿ ಡಬ್ಬಿಯಲ್ಲಿ “ಮಾನಪತ್ರ” ಅರ್ಪಿಸಲಾಗಿತ್ತು. ಕಾಣಿಕೆ ಪಡೆಯಲು ನಯವಾಗಿ ನಿರಾಕರಿಸಿದ ಗಾಂಧೀಜಿ ಅದನ್ನು ಅದೇ ಸಭೆಯಲ್ಲಿ ಹರಾಜು ಹಾಕಿದ್ದರು. ಉತ್ತರ ಕನ್ನಡಕ್ಕೆ ಗಾಂಧೀಜಿಯವರ ಚಿಂತನೆಗಳ ಜತೆಜತೆಗೇ ಒಡನಾಟವೂ ಸಿಕ್ಕಿದ್ದು ವಿಶೇಷವಾಗಿದೆ!

  • ಶುದ್ದೋಧನ

ಇದನ್ನೂ ಓದಿ: ಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...