HomeಮುಖಪುಟExplainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?

Explainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?

NDTV ಯೂಟ್ಯೂಬ್ ವೀಕ್ಷಕರು 80 ಲಕ್ಷ, ರಿಪಬ್ಲಿಕ್ ಟಿವಿ ಯೂಟ್ಯೂಬ್ ವೀಕ್ಷಕರು ಕೇವಲ 35 ಲಕ್ಷ ಮಾತ್ರ. ಇನ್ನು NDTV app ಡೌನಲೋಡ್ ಮಾಡಿಕೊಂದವರ ಸಂಖ್ಯೆ 5 ಮಿಲಿಯನ್‌ಗೂ ಹೆಚ್ಚು, ರಿಪಬ್ಲಿಕ್ ಟಿವಿ app ಡೌನಲೋಡ್ ಮಾದಿಕೊಂಡವರ ಸಂಖ್ಯೆ 1 ಮಿಲಿಯನ್ ಮಾತ್ರ.

- Advertisement -
- Advertisement -

ಪ್ರಸಕ್ತವಾಗಿ ದೇಶದಲ್ಲಿ ಅತಿಹೆಚ್ಚು ಚರ್ಚೆಗೆ ಮತ್ತು ಸುದ್ದಿಗೆ ಗ್ರಾಸವಾಗುತ್ತಿರುವ ವಿಚಾರ ಟಿಆರ್‌ಪಿ (TRP) ಅಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. ಮತ್ತು ಈ ವಿಚಾರ ಈ ಪ್ರಮಾಣದಲ್ಲಿ ಸದ್ದು ಮಾಡಲು ಕಾರಣ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ಇಂಗ್ಲಿಷ್ ಸುದ್ದಿ ಮಾಧ್ಯಮ “ರಿಪಬ್ಲಿಕ್ ಟಿವಿ”.

ಸುದ್ದಿ ಮಾಧ್ಯಮಗಳು ಕನ್ನಡವೇ ಇರಲಿ ಅಥವಾ ಯಾವ ಭಾಷೆಯದ್ದೇ ಇರಲಿ ಜಾಹೀರಾತುಗಳಿಲ್ಲದೆ ಉಳಿಯುವುದು ಕಷ್ಟ. ಜಾಹೀರಾತುಗಳು ಸಾಮಾನ್ಯವಾಗಿ ಆಯಾ ಸುದ್ದಿ ವಾಹಿನಿ ಪ್ರತಿವಾರ ಗಳಿಸುವ ಟಿಆರ್‌ಪಿ ಆಧಾರದಲ್ಲೇ ಲಭ್ಯವಾಗುತ್ತವೆೆ. ಅಲ್ಲದೆ, ಟಿಆರ್‌ಪಿ ಆಧಾರದಲ್ಲೇ ಆ ಜಾಹೀರಾತುಗಳಿಗೆ ಬೆಲೆಯೂ ನಿಗದಿಯಾಗುತ್ತದೆ ಎಂಬುದು ಮಾಧ್ಯಮ ಜಗತ್ತಿನ ಸಾಮಾನ್ಯ ಜ್ಞಾನ.

ಇದೇ ಕಾರಣಕ್ಕೆ ಎಲ್ಲಾ ಮಾಧ್ಯಮಗಳೂ ಟಿಆರ್‌ಪಿ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುವುದು ಮತ್ತು ಅದೇ ಕಾರಣಕ್ಕೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಕೆಲವು ಮಾಧ್ಯಮಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟಿಆರ್‌ಪಿ ರೇಟಿಂಗ್ ಅನ್ನೇ ತಿರುಚುವ ಕೆಲಸಕ್ಕೂ ಮುಂದಾಗಿವೆ! ಇದೀಗ ಇಂತಹದ್ದೇ ಒಂದು ಕೆಲಸಕ್ಕೆ ಕೈಹಾಕುವ ಮೂಲಕ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿ ಇದೀಗ ಪೇಚಿಗೆ ಸಿಲುಕಿದೆ.

ಹೌದು ಇಂಗ್ಲಿಷ್ ಮಾಧ್ಯಮವಾದ ರಿಪಬ್ಲಿಕ್ ಟಿವಿ ತನ್ನ ಟಿಆರ್‌ಪಿ ರೇಟಿಂಗ್‌ನಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಸಲುವಾಗಿ ಟಿಆರ್‌ಪಿ ರೇಟಿಂಗ್‌ಅನ್ನೇ ತಿರುಚುವ ಕೆಲಸಕ್ಕೆ ಮುಂದಾಗಿದೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಕೇವಲ ರಿಪಬ್ಲಿಕ್ ಟಿವಿ ಅಲ್ಲ 2 ಮರಾಠಿ ಚಾನೆಲ್‌ಗಳು ಇದೇ ಕಳ್ಳ ದಾರಿಯಲ್ಲಿದ್ದವು, ಹಾಗೆಂದು ಟಿಆರ್‌ಪಿ ಸಂಗ್ರಹಿಸುವ ಹನ್ಸ್ ಸಂಸ್ಥೆ ದೂರು ನೀಡಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಮರಾಠಿ ಚಾನಲ್‌ಗಳಿಗೆ ಸಂಬಂಧಪಟ್ಟಂತೆ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ಮುಂದುವರಿದ ತನಿಖೆಯಲ್ಲಿ ಮುಂಬೈ ಪೊಲೀಸರು ಮಂಗಳವಾರ ರಿಪಬ್ಲಿಕ್ ಟಿವಿಯ ಸಿಇಓ ವಿಕಾಸ್ ಖಾಂಚಂದಾನಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳ್ಳ ವ್ಯವಹಾರದ ಒಂದೊಂದೇ ಸತ್ಯಗಳು ಹೊರಬರಬೇಕಿದೆ. ಅಲ್ಲದೆ, ರಿಪಬ್ಲಿಕ್ ಟಿವಿಯ ಸಿಎಫಓ ಶಿವ ಸುಬ್ರಮಣಿಯನ್ ಸುಂದರಮ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಅಸಲಿಗೆ ಈ ಟಿಆರ್‌ಪಿ ಎಂದರೆ ಏನು? ಇದನ್ನು ಹೇಗೆ ಲೆಕ್ಕ ಮಾಡಲಾಗುತ್ತದೆ? ಯಾವ ಆಧಾರದಲ್ಲಿ ಜಾಹೀರಾತು ನೀಡಲಾಗುತ್ತದೆ? ಭಾರತದ ಮಾಧ್ಯಮಗಳ ಜಾಹೀರಾತು ಮೌಲ್ಯ ಎಷ್ಟು? ಮತ್ತು ಜಾಹೀರಾತುಗಳಿಗಾಗಿ ಈ ಟಿಆರ್‌ಪಿ ರೇಟಿಂಗ್ ಅನ್ನು ಹೇಗೆ ತಿರುಚಲಾಗುತ್ತದೆ? ಎಂಬ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

ಏನಿದು ಟಿಆರ್‌ಪಿ?
ನ್ಯೂಸ್ ಪೇಪರ್‌ಗಳ ಪ್ರಸಾರ ಸಂಖ್ಯೆಯ ಆಧಾರದ ಮೇಲೆ ಜಾಹೀರಾತು ದರ ನಿಗದಿಯಾಗುವಂತೆ ಟಿವಿ ಚಾನಲ್‌ಗಳಲ್ಲಿ ಟಿಆರ್‌ಪಿ ಆಧಾರದ ಮೇಲೆ ಜಾಹೀರಾತು ಮತ್ತು ಅದರ ದರ ನಿಗದಿಯಾಗುತ್ತದೆ.

ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂಬ ಪರಿಕಲ್ಪನೆಯು ಜಗತ್ತಿನ ಬಹುಮುಖ್ಯವಾದ ಸಾಂಸ್ಥಿತ ವಿಚಾರಧಾರೆ. ದೃಶ್ಯಮಾಧ್ಯಮದ ಬಹುಸ್ತರಗಳಾದ ಸುದ್ದಿವಾಹಿನಿ ಹಾಗೂ ಮನರಂಜನಾವಾಹಿನಿಗಳ ಏರಿಳಿತವನ್ನು ಪ್ರೇಕ್ಷಕರ ವೀಕ್ಷಣೆಯ ಆಧಾರದಿಂದ ನಿರ್ಧರಿಸಲಾಗುತ್ತದೆ. ಈ ಮೌಲ್ಯಮಾಪನವನ್ನು ಟಾರ್ಗೆಟ್ ಅಥವಾ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂದು ಕರೆಯುತ್ತಾರೆ.

ಟಿಆರ್‌ಪಿ ಹೇಗೆ ಲೆಕ್ಕ ಹಾಕಲಾಗುತ್ತದೆ?
ಟಿಆರ್‌ಪಿಯನ್ನು ಲೆಕ್ಕ ಹಾಕಲು ಬಾರ್ಕ್ ಬಾರೋ ಮೀಟರ್ ಅಥವಾ ಪೀಪಲ್ಸ್ ಮೀಟರ್ ಎಂಬ ಉಪಕರಣದಿಂದ ಅಳೆಯುತ್ತಾರೆ. ಮೈಸೂರು, ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಹಾಗೂ ದೇಶದ ಎಲ್ಲಾ ಪ್ರಮುಖ ನಗರ ಪ್ರದೇಶಗಳಲ್ಲಿ ಆಯ್ದು ಕೆಲವು ಮನೆಗಳಲ್ಲಿ ಬಾರೋ ಮೀಟರ್ ಅಥವಾ ಪಿಪಲ್ಸ್ ಮೀಟರ್ ಅಳವಡಿಸಲಾಗಿರುತ್ತದೆ. ಒಟ್ಟಾರೆ ದೇಶದಲ್ಲಿ ೪೪ ಸಾವಿರ ಬಾರೋ ಮೀಟರ್ ಅಥವಾ ಪೀಪಲ್ಸ್ ಮೀಟರ್ ಅಳವಡಿಸಲಾಗಿದ್ದು, ಅದರಲ್ಲಿ ೪೦ ಸಾವಿರ ಉಪಕರಣಗಳಿಂದ ಡಾಟಾ ಸಂಗ್ರಹಿಸಲಾಗುತ್ತದೆ. ಟಿಆರ್‌ಪಿ ಲೆಕ್ಕ ಹಾಕಲು ಆಯ್ಕೆ ಮಾಡಿದ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಐಡಿ ನೀಡಲಾಗಿರುತ್ತದೆ. ಅವರು ಟಿವಿ ವೀಕ್ಷಿಸುವಾಗ ತಮ್ಮ ಐಡಿ ಬಟನ್ ಒತ್ತಬೇಕು. ಯಾರ ಮನೆಯಲ್ಲಿ ಉಪಕರಣ ಇಡಲಾಗುತ್ತದೆ ಅನ್ನುವುದನ್ನು ಗೌಪ್ಯವಾಗಿಡಲಾಗುತ್ತದೆ. ಟಿಆರ್‌ಪಿ ಸಂಗ್ರಹಿಸಿ ಪ್ರಕಟಿಸುವ ಜವಾಬ್ದಾರಿ BARC ಸಂಸ್ಥೆಯದ್ದಾದರೆ, ಈ ಸಂಸ್ಥೆಗಾಗಿ ದತ್ತಾಂಶ ಸಂಗ್ರಹಿಸುವ ಕಾರ್ಯ ಹನ್ಸ್ ಸಂಸ್ಥೆಯದ್ದು.
ಪ್ರತ್ಯೇಕ ಐಡಿಗಳ ಮೂಲಕ ಅವರು ವೀಕ್ಷಿಸಿದ ಕಾರ್ಯಕ್ರಮಗಳು ಮತ್ತು ವೀಕ್ಷಣೆಯ ಸಮಯವನ್ನು ಬಾರ್ಕ್ ಬಾರೋ ಮೀಟರ್ ಎಂಬ ಉಪಕರಣದ ಮೂಲಕ ಸಂಗ್ರಹಿಸಲಾಗುತ್ತದೆ. ವಿವಿಧ ವಯೋಮಾನ, ವಿವಿಧ ಸಾಮಾಜಿಕ ಮತ್ತು ಆರ್ಥಿಕ ವಿಭಾಗಗಳ ಜನರು ಯಾವ ಟಿವಿ ಮತ್ತು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಎಂಬುದರ ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ವಾರಕ್ಕೊಮ್ಮೆ ಟಿಆರ್‌ಪಿಯನ್ನು ಲೆಕ್ಕ ಹಾಕಲಾಗುತ್ತದೆ.
ಈ ಮಾಪನವು ಯಾವ ಮನೆಯಲ್ಲಿ ಯಾವ ವಾಹಿನಿ ಅಥವಾ ಯಾವ ಕಾರ್ಯಕ್ರಮವನ್ನು ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ ಎಂಬುದನ್ನು ಸಂಖ್ಯೆಗಳ ಮೂಲಕ ನಿರ್ಧರಿಸುತ್ತದೆ.

ಈ ಎಲ್ಲಾ ಅಂಕಿಅಂಶಗಳನ್ನಾಧರಿಸಿ ವಾಹಿನಿಗಳು ಮಾಧ್ಯಮ ಪ್ರಭುತ್ವದ ಚುಕ್ಕಾಣಿ ಹಿಡಿಯುವುದರೊಂದಿಗೆ ಜಾಹೀರಾತುದಾರರನ್ನು ತನ್ನತ್ತ ಸೆಳೆದುಕೊಳುತ್ತವೆ. ಇದರ ಆಧಾರದಲ್ಲಿ ಜಾಹೀರಾತು ನೀಡುವವರು ಯಾವ ಚಾನಲ್‌ನ ಯಾವ ಕಾರ್ಯಕ್ರಮಕ್ಕೆ ಜಾಹೀರಾತು ನೀಡಬಹುದು ಎಂಬುದನ್ನು ನಿರ್ಧರಿಸುತ್ತವೆ. ಟಿವಿ ಚಾನಲ್‌ಗಳು ಇದರ ಆಧಾರದ ಮೇಲೆಯೇ ಜಾಹೀರಾತು ದರಗಳನ್ನೂ ಪರಿಷ್ಕರಿಸುತ್ತವೆ.
ಆದರೆ, ಈ ಟಿಆರ್‌ಪಿಯಲ್ಲಿ ಇಡೀ ದೇಶದ ವೀಕ್ಷಕರು ಯಾವ ಟಿವಿ ಚಾನಲ್‌ಅನ್ನು ಮತ್ತು ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಕೇವಲ ಬಾರೋಮೀಟರ್ ಅಳವಡಿಸಿರುವ ಮನೆಗಳಲ್ಲಿ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದು ಮಾತ್ರ ಲೆಕ್ಕಕ್ಕೆ ಬರುತ್ತದೆ. ಹಾಗಾಗಿಯೇ ಟಿಆರ್‌ಪಿಯನ್ನು ತಿರುಚಲು ಮಾಡಿದ ಇಂತಹ ಹಲವು ಪ್ರಯತ್ನಗಳು ಹಲವು ಬಾರಿ ವರದಿಯಾಗುತ್ತಲೇ ಇವೆ.

ಟಿಆರ್‌ಪಿ ಲೆಕ್ಕ ಹಾಕುವವರು ಯಾರು?
ಅಡ್ವರ್ಟೈಸಿಂಗ್ ಏಜೆನ್ಸೀಸ್ ಅಸೋಸಿಯೇಷನ್ ಆಫ್ ಇಂಡಿಯಾ (AAAI), ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೆಡರೇಷನ್ (IBF) ಮತ್ತು ಇಡಿಯನ್ ಸೊಸೈಟಿ ಆಫ್ ಅಡ್ವರ್ಟೈಸರ್ಸ್ (ISA) ಪ್ರತಿನಿಧಿಗಳು, ಜಾಹೀರಾತುದಾರರು, ಬ್ರಾಡ್‌ಕಾಸ್ಟಿಂಗ್ ಕಂಪನಿಗಳ ಪ್ರತಿನಿಧಿಗಳನ್ನು ಒಳಗೊಂಡ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್  (BARC) ಎಂಬ ಸಂಸ್ಥೆಯನ್ನು 2010ರಲ್ಲಿ ಸ್ಥಾಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2014ರ ಜನವರಿ 10ರಂದು ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಬಳಿಕ 2015ರ ಜುಲೈನಲ್ಲಿ ಬಾರ್ಕ್ಅನ್ನು ನೋಂದಣಿ ಮಾಡಲಾಗಿದೆ.
ಈ ಬಾರ್ಕ್ ಎಂಬ ಸಂಸ್ಥೆಯೇ ಇದೀಗ ಪ್ರತಿ ವಾರ ಎಲ್ಲಾ ಮಾಧ್ಯಮಗಳ ಒಟ್ಟಾರೆ ರೇಟಿಂಗ್ ಪಾಯಿಂಟ್‌ಅನ್ನು ಲೆಕ್ಕಹಾಕಿ ಪ್ರಚುರಪಡಿಸುತ್ತಿದೆ.

ಟಿಆರ್‌ಪಿಯನ್ನು ಹೇಗೆ ತಿರುಚಲಾಗುತ್ತದೆ?
ಬಾರೋಮೀಟರ್ ಅಳವಡಿಸಿರುವ ಮನೆಗಳ ಸಂಖ್ಯೆ ಹೆಚ್ಚಿದ್ದಷ್ಟೂ ಟಿಆರ್‌ಪಿಯನ್ನು ತಿರುಚುವುದು ಕಷ್ಟ. ಆದರೆ ಮನೆಗಳ ಸಂಖ್ಯೆ ಕಡಿಮೆ ಇದ್ದರೆ ಇದನ್ನು ತಡೆಯುವುದು ಹೆಚ್ಚು ಸವಾಲಿನ ಕೆಲಸವಾಗಲಿದೆ ಎಂದು ಟ್ರಾಯ್ ಈ ಹಿಂದೆಯೇ ತಿಳಿಸಿತ್ತು. ಅದರಂತೆಯೇ ಬಾರ್ಕ್ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಹನ್ಸ್ ರಿಸರ್ಚ್ ಎಂಬ ಕಂಪನಿಯ ಮಾಜಿ ಉದ್ಯೋಗಿಗಳು ಟಿಆರ್‌ಪಿ ತಿರುಚುವಲ್ಲಿ ನಿರತರಾಗಿದ್ದರು ಎಂಬುದು ಬಹಿರಂಗವಾಗಿದೆ.

ಇವರು ರಿಪಬ್ಲಿಕ್ ಟಿವಿ, ಮರಾಠಿಯ ಫಕ್ಟ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ಪರವಾಗಿ ಬಾರೋ ಮೀಟರ್ ಅಳವಡಿಸಿರುವವರ ಮನೆಗೆ ತೆರಳಿ ಅವರಿಗೆ ಹಣದ ಆಮಿಷ ಒಡ್ಡಿ ನಿರ್ದಿಷ್ಟ ಚಾನಲ್ ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಮನವೊಲಿಸುತ್ತಿದ್ದರು. ಇದೇ ರೀತಿ ಅವರು ಮುಂಬೈನಲ್ಲಿ ಟಿಆರ್‌ಪಿಯನ್ನು ತಿರುಚಲು 2000 ಬಾರೋ ಮೀಟರ್ ಅಳವಡಿಸಿರುವ ಮನೆಗಳನ್ನು ಬಳಸಿಕೊಂಡಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ ಬಾರೋಮೀಟರ್ ಅಳವಡಿಸಿರುವ ಕೆಲವು ಮನೆಯವರು ಆರೋಪಿಗಳು ತಮಗೆ ಹಣ ನೀಡುತ್ತಿದ್ದ ಕುರಿತು ಮಾಹಿತಿ ನೀಡಿದ್ದ ವಿಚಾರವೂ ಬಹಿರಂಗವಾಗಿದೆ.

ಉದಾಹರಣೆಗೆ ದೇಶಾದ್ಯಂತ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುವವರ ಪ್ರಮಾಣ ಶೇ.1.5ರಷ್ಟಿದೆ. 45 ಸಾವಿರ ಮನೆಗಳ ಪೈಕಿ ಸುಮಾರು 700 ಮನೆಗಳಲ್ಲಿ ಮಾತ್ರ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುತ್ತಾರೆ. ಅದರಲ್ಲೂ ಕೇವಲ 350 ಮನೆಗಳಲ್ಲಿ ಮಾತ್ರ ದಿನವೂ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುತ್ತಾರೆ. ಇದರಲ್ಲಿ ಅತಿ ಹೆಚ್ಚಿನ ಸಮಯ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುವ ಕೇವಲ 10 ಮನೆಗಳಲ್ಲಿ ಟಿಆರ್‌ಪಿ ತಿರುಚಿದರೆ ಇಂಗ್ಲಿಷ್ ನ್ಯೂಸ್ ಚಾನಲ್‌ಗಳ ಒಟ್ಟಾರೆ ಟಿಆರ್‌ಪಿ ರೇಟಿಂಗ್‌ನಲ್ಲಿ ಭಾರಿ ವ್ಯತ್ಯಾಸ ಉಂಟಾಗುತ್ತದೆ.

ಕೇವಲ 50 ಮನೆಗಳಲ್ಲಿ ಟಿಆರ್‌ಪಿಯನ್ನು ತಿರುಚಿದರೆ ಚಾನೆಲ್‌ಗಳು ಆಗುವ ಬದಲಾವಣೆಯ ಉದಾಹರಣೆಯೊಂದಿಗೆ ನೋಡೋಣ. 20 ಟಿಆರ್‌ಪಿ ರೇಟಿಂಗ್ ಪಡೆಯುತ್ತಿದ್ದ ಹಿಂದಿ ಮನರಂಜನಾ ಚಾನೆಲ್ ತಿರುಚಿದ ಟಿಆರ್‌ಪಿಯಲ್ಲಿ 21.5 ಪ್ರತಿಶತ ಪಡೆಯುತ್ತದೆ. 20  ಟಿಆರ್‌ಪಿ ರೇಟಿಂಗ್ ಪಡೆಯುತ್ತಿದ್ದ ಹಿಂದಿ ನ್ಯೂಸ್ ಚಾನಲ್ 25.8% ಪಡೆಯುತ್ತದೆ. ಈ ಬದಲಾವಣೆ ರ‍್ಯಾಕಿಂಗ್ ಪಟ್ಟಿಯಲ್ಲಿ ಅದರ ಸ್ಥಾನವನ್ನು ಬಹಳಷ್ಟು ಬದಲಾವಣೆ ಮಾಡುತ್ತದೆ. ಜೊತೆಗೆ ವಾರ್ಷಿಕ 40 ರಿಂದ 50 ಕೋಟಿ ರೂಪಾಯಿ ಹೆಚ್ಚಿನ ಆದಾಯ ತಂದುಕೊಡುತ್ತದೆ. ಇನ್ನು 20 ಟಿಆರ್‌ಪಿ ರೇಟಿಂಗ್ ಪಡೆಯುತ್ತಿದ್ದ ಇಂಗ್ಲೀಷ ನ್ಯೂಸ್ ಚಾನಲ್ ಅನ್ನು ೫೦ ಮನೆಗಳಲ್ಲಿ ಪ್ರತಿ ದಿನ 5 ಗಂಟೆಯಂತೆ ಮನೆಯಲ್ಲಿನ 4 ಸದಸ್ಯರು ಒಂದೆ ಚಾನಲ್ ನೋಡಿದರೆ ಅದರ ಟಿಆರ್‌ಪಿಯಲ್ಲಿ ಆಗುವ ಬದಲಾವಣೆ ಅಷ್ಟಿಷ್ಟಲ್ಲ – ಅದು 70.4% ಅಲ್ಲಿಗೆ ಅದು ಇಂಗ್ಲಿಷ್ ನ್ಯೂಸ್ ವಿಭಾಗದ ಬಹುತೇಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುತ್ತೆ. ಉಳದೆಲ್ಲ ವಾಹಿನಿಗಳು ಕೇವಲ 20%ನಲ್ಲಿ ಸೆಣಸಾಡಬೇಕು.

ಈ ಟಿಆರ್‌ಪಿ ಲೆಕ್ಕಾಚಾರ ಚುನಾವಣೆ ಸಮೀಕ್ಷೆ ಇದ್ದ ಹಾಗೆ. ಇದು ಸೈಂಟಿಫಿಕ್ ಅಲ್ಲ, ಆದರೆ ಇದಕ್ಕೆ ಪರ್ಯಾಯವೂ ಇಲ್ಲ. ಇದು ಎಷ್ಟು ಅವೈಜ್ಞಾನಿಕ ಅನ್ನುವುದಕ್ಕೂ ಉದಾಹರಣೆಯೆಂದರೆ NDTV ಯೂಟ್ಯೂಬ್ ವೀಕ್ಷಕರು 80 ಲಕ್ಷ, ರಿಪಬ್ಲಿಕ್ ಟಿವಿ ಯೂಟ್ಯೂಬ್ ವೀಕ್ಷಕರು ಕೇವಲ 35 ಲಕ್ಷ ಮಾತ್ರ. ಇನ್ನು NDTV app ಡೌನಲೋಡ್ ಮಾಡಿಕೊಂದವರ ಸಂಖ್ಯೆ 5 ಮಿಲಿಯನ್‌ಗೂ ಹೆಚ್ಚು, ರಿಪಬ್ಲಿಕ್ ಟಿವಿ app ಡೌನಲೋಡ್ ಮಾದಿಕೊಂಡವರ ಸಂಖ್ಯೆ 1 ಮಿಲಿಯನ್ ಮಾತ್ರ. NDTV website ವೀಕ್ಷಕರ ಸಂಖ್ಯೆ 80 ಮಿಲಿಯನ್ ಆದರೆ ರಿಪಬ್ಲಿಕ್ ಟಿವಿ website ವೀಕ್ಷಕರ ಸಂಖ್ಯೆ ಕೇವಲ 15 ಮಿಲಿಯನ್.

ಡಿಜಿಟಲ್ ದುನಿಯಾದಲ್ಲಿ ಇಷ್ಟೆಲ್ಲ ಮುಂದಿರುವ NDTV, TRP ಹೋರಾಟದಲ್ಲಿ ಅದರ ಪಾಲು ಕೇವಲ 1%, ರಿಪಬ್ಲಿಕ್ ಟಿವಿಯದ್ದು 77 ಪ್ರತಿಶತ. ಟಿಆರ್‌ಪಿಯಲ್ಲಿ ಮುಂದಿರುವುದು ಕೇವಲ ಜಾಹೀರಾತುಗಳ ಮೂಲಕ ಹಣ ಗಳಿಸಲು ಮಾತ್ರ ಬಳಕೆಯಾಗುವುದಿಲ್ಲ, ಇದು ನರೇಶನ್ ಸೆಟ್ ಮಾಡಲು False ಪ್ರಪಗಾಂಡಾ ಹರಡಲು ಬಳಕೆಯಾಗುತ್ತದೆ. ಇನ್ನು ಉಳಿದ ವಾಹಿನಿಗಳು ಟಿಆರ್‌ಪಿ ಯುದ್ಧದಲ್ಲಿ ಅಗ್ರ ಚಾನಲ್‌ನನ್ನೆ ಅನುಕರಣೆ ಮಾಡುವುದರಿಂದ ಆಗುವ ಹಾನಿ ಅಷ್ಟಿಷ್ಟಲ್ಲ.

ಎಫ್‌ಐಸಿಸಿಐಇವೈ ವರದಿಯ ಪ್ರಕಾರ ಭಾರತದಲ್ಲಿ ಟಿವಿ ಉದ್ಯಮದ ಒಟ್ಟು ಜಾಹೀರಾತು ಮಾರುಕಟ್ಟೆ 2019 ರಲ್ಲಿ 78,700 ಕೋಟಿ ರೂ ಇತ್ತು. ಪ್ರಸ್ತುತ ಈ ಪ್ರಮಾಣ ಇನ್ನೂ ಅಧಿಕವಾಗಿರುವ ಸಾಧ್ಯತೆ ಇದೆ. ಹಾಗಾಗಿಯೇ ಟಿವಿ ಚಾನಲ್‌ಗಳು ಹೆಚ್ಚಿನ ಟಿಆರ್‌ಪಿ ಪಡೆಯಲು ಹಾಗೂ ಆ ಮೂಲಕ ಹೆಚ್ಚಿನ ಆದಾಯ ಗಳಿಸಲು ಒಂದಲ್ಲಾ ಒಂದು ಅಡ್ಡ ದಾರಿಗೆ ಮುಂದಾಗುತ್ತಲೇ ಇರುತ್ತವೆ. ಭಾರತದ ಮಾಧ್ಯಮ ಲೋಕದ ಮಟ್ಟಿಗೆ ಹೀಗೆ ಟಿಆರ್‌ಪಿ ತಿರುಚಲು ಮುಂದಾಗಿರುವ ಪ್ರಕರಣ ಇದೇ ಮೊದಲೇನಲ್ಲ. ಬಹುಶಃ ಇದು ಕೊನೆಯೂ ಅಲ್ಲ.
ಆದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅ ನಿಟ್ಟಿನಲ್ಲಿ ಟಿಆರ್‌ಪಿ ತಿರುಚಿರುವ ಪ್ರಕರಣ ಇದೀಗ ರಿಪಬ್ಲಿಕ್ ಟಿವಿ ಕೊರಳಿಗೆ ಉರುಳಾಗಿ ಪರಿಣಮಿಸಿದೆ. ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಇತರೆ ಮಾಧ್ಯಮದವರು ಕೆಂಡಕಾರುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಡುವೆ ಬಜಾಜ್, ಪಾರ್ಲೆಜಿಯಂತಹ ಕೆಲವು ಕಂಪೆನಿಗಳು ಸಮಾಜದಲ್ಲಿ ಕೋಮು ದ್ವೇಷ ಬಿತ್ತುವವರಿಗೆ ತಾವು ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಅಲ್ಲದೆ, ಬಾಲಿವುಡ್‌ನ ಹಲವು ಸ್ಟಾರ್ ನಟ ನಟಿಯರು ಇಂಗ್ಲಿಷ್ ಮಾದ್ಯಮಗಳು ತಮ್ಮದೇ ಅಜೆಂಡಾವನ್ನು ಮುಂದಿಟ್ಟು ಬಾಲಿವುಡ್‌ಅನ್ನು ಗುರಿ ಮಾಡುತ್ತಿವೆ ಎಂದು ಮಾಧ್ಯಮಗಳ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ಬಾಣಗಳು ಇದೀಗ ನೇರವಾಗಿ ರಿಪಬ್ಲಿಕ್ ಟಿವಿಯನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಈ ನಿಟ್ಟಿನಲ್ಲಿ ಟಿಆರ್‌ಪಿ ತಿರುಚಲಾಗಿರುವ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ? ರಿಪಬ್ಲಿಕ್ ಟಿವಿಯ ಸ್ಥಿತಿ ಏನಾಗಲಿದೆ? ಎಂಬುದನ್ನು ಕಾದುನೋಡಬೇಕಿದೆ.

  • ಗೌತಮ್ ಮತ್ತು ಸುನೀಲ್ ಸಿರಸಂಗಿ

ಇದನ್ನೂ ಓದಿ: TRP ಹಗರಣ: ಎಲ್ಲರಂತೆ ಹೈಕೋರ್ಟ್‌ಗೆ ಹೋಗಿ ಎಂದ ಸುಪ್ರೀಂ, ರಿಪಬ್ಲಿಕ್ ಅರ್ನಾಬ್‌ಗೆ ಮುಖಭಂಗ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...