Homeಕರ್ನಾಟಕಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ.

- Advertisement -
- Advertisement -

ಹಚ್ಚ ಹಸಿರು ಕಾನನ-ಗಿರಿ-ತೊರೆಗಳ ಅನನ್ಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಉತ್ತರಕನ್ನಡದ ಜೋಯಿಡಾ ತಾಲ್ಲೂಕಿನ ‘ಉಳವಿ’ 12ನೇ ಶತಮಾನದಲ್ಲಾದ ಶರಣ ಚಳುವಳಿಯ ಅಚ್ಚಳಿಯದ ಗುರುತುಗಳಲ್ಲೊಂದು. ಕಾರವಾರದಿಂದ 75 ಕಿ.ಮೀ ದೂರದಲ್ಲಿರುವ ಉಳವಿಯನ್ನು ಕಾಳಿ ನದಿ ದಾಟಿ ತಲುಪಬಹುದು; ರಸ್ತೆ ಮೂಲಕವಾದರೆ ದಾಂಡೇಲಿಯಿಂದ 11 ಕಿ.ಮೀ ಅಂತರದಲ್ಲಿರುವ ಪಾಟೋಲಿ ಕ್ರಾಸ್‍ಗೆ ಬಂದರೆ, ಎರಡು ಮಾರ್ಗಗಳಿವೆ. ‘ಉಳವಿ’ ಎಂದರೆ ‘ನಾನು ಇಲ್ಲಿ ಉಳಿಯುವೆ’ ಎಂದರ್ಥ ಎಂಬ ಅಭಿಪ್ರಾಯವಿದೆ.

PC : ಪ್ರಜಾವಾಣಿ, (ಬಸವಣ್ಣ)

ಶೋಷಣೆರಹಿತ ಸಮಸಮಾಜದ ಕನಸು ಕಂಡ ಸಾಮಾಜಿಕ ಹೋರಾಟದ ಹರಿಕಾರ ಬಸವಣ್ಣನವರ ಅಕ್ಕ ನಾಗಲಾಂಬಿಕೆಯ ಮಗ ಚನ್ನಬಸವಣ್ಣಾದಿ ಶರಣರು ವೈದಿಕಶಾಹಿಯ ಕ್ರೌರ್ಯ ತಾಳಲಾರದೆ ವಚನ ಸಾಹಿತ್ಯ ಸಂರಕ್ಷಣೆಗಾಗಿ ಈ ಕಾಡು-ಮೇಡಿನ ಉಳವಿಗೆ ಬಂದುಳಿದಿದ್ದರು. ಹಾಗಾಗಿ ಉಳವಿ ಎಂಬ ಹೆಸರು ಬಂತೆನ್ನಲಾದ ಈ ಊರಿಗೆ ಮೊದಲು ‘ವೃಶಾಪುರ’ ಎನ್ನಲಾಗುತ್ತಿತ್ತಂತೆ. ಪ್ರಪಂಚದಲ್ಲೇ ಮೊಟ್ಟಮೊದಲು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ ತತ್ವದರ್ಶನಗಳು ಹುಟ್ಟಿಕೊಂಡ ದಿನಮಾನವೆಂದರೆ ಅದು ಶರಣರ ಯುಗ! ಕಾಯಕ ವರ್ಗ ಸಮಾನತೆಯ ಬದುಕಿಗಾಗಿ ಒಂದೆಡೆ ಸೇರಿ ವೈಚಾರಿಕ-ವೈಜ್ಞಾನಿಕವಾಗಿ ಸತ್ಯ ಶೋಧಿಸುತ್ತಲೇ ಅಸಮಾನತೆಯ ವರ್ಣ ವ್ಯವಸ್ಥೆ, ಅಮಾನವೀಯ ಜಾತಿ ವ್ಯವಸ್ಥೆ, ಅಜ್ಞಾನದ ಲಿಂಗತಾರತಮ್ಯ ಹಾಗೂ ಅವಿವೇಕದ ಕಂದಾಚಾರಗಳಂಥ ವೈದಿಕ ಸ್ಥಾಪಿತ ಹೇಯ-ಬರ್ಬರ ವ್ಯವಸ್ಥೆಯ ವಿರುದ್ಧ ಬಂಡೆದ್ದು ಚಳುವಳಿ ರೂಪಿಸಿದ್ದ ಕ್ರಾಂತಿಕಾರಿ ಕಾಲವದು. ಇಂಥದೊಂದು ಕ್ರಾಂತಿ ವಿಶ್ವದಲ್ಲೇ ಮೊದಲು ನಡೆದದ್ದು ಕನ್ನಡ ನಾಡಲ್ಲಿ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಭವ ಮಂಟಪ ನಿರ್ಮಿಸಿ ಬಸವಣ್ಣ ಅದರ ನಾಯಕತ್ವವನ್ನು ತಳಸಮುದಾಯಗಳಿಗೆ ಕೊಡುತ್ತಾರೆ. 770 ಶರಣರ(ಪ್ರತಿನಿಧಿಗಳ) ಈ ಅನುಭವ ಪಂಟಪ ಪ್ರಪಂಚದ ಮೊದಲ ಪಾರ್ಲಿಮೆಂಟ್. ಈ ಪಾರ್ಲಿಮೆಂಟ್‍ನ ಮೊದಲ ಸ್ಪೀಕರ್(ಶೂನ್ಯ ಪೀಠಾಧ್ಯಕ್ಷ) ದಲಿತ ಅಲ್ಲಮಪ್ರಭು! ಅಲ್ಲಿ ಸಮಗಾರ ಹರಳಯ್ಯ, ಮಡಿವಾಳ ಮಾಚಯ್ಯ, ಮಾದಾರ ದೊಳಯ್ಯ, ಬ್ರಾಹ್ಮಣ ಮಧುವರಸ, ಚನ್ನಬಸವಣ್ಣ, ಕುರುಬರ ಬೊಮ್ಮಣ್ಣ, ಡೋಹರ ಕಕ್ಕಯ್ಯ…ಮುಂತಾದ ಶರಣರು ಮತ್ತು ಮಹಿಳಾ ಶರಣೆಯರಾದ ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆಸಂಕವ್ವ, ಸತ್ಯಕ್ಕ ಹೀಗೆ ಹಲವು ಜಾತಿಯ ಶರಣ-ಶರಣೆಯರು ಸೇರಿ ಸಮಾಜದ ಗುಣಾವಗುಣ, ನಾಡಿನ ಸಮಸ್ಯೆ, ತಮ್ಮ ಕಾರ್ಯನಿರತ ಅನುಭವಗಳನ್ನೆಲ್ಲ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿಶ್ವದ ಯಾವ ದೇಶದಲ್ಲೂ ಸಂವಿಧಾನವೇ ರಚನೆಯಾಗದ ಸಂದರ್ಭದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಸಮಾನತೆ, ಸ್ವಾತಂತ್ರ್ಯ, ಸೋದರತೆ, ಮೀಸಲಾತಿ, ಧಾರ್ಮಿಕ ಹಕ್ಕುಗಳ ಬಗೆಗೆ ಎಲ್ಲ ವೈಚಾರಿಕ-ವೈಜ್ಞಾನಿಕ ವಚನ ರಚಿಸಿದ್ದು ಅಚ್ಚಳಿಯದೆ ಐತಿಹಾಸಿಕ ದಾಖಲೆಯೇ ಸರಿ!

ವರ್ಣ ವ್ಯವಸ್ಥೆಯ ಕಟ್ಟಕಡೆಯ ಅಸ್ಪೃಶ್ಯ ದಲಿತ ಸಮುದಾಯದ ಸಮಗಾರ ಹರಳಯ್ಯ ಕೂಡ ಈ ವ್ಯವಸ್ಥೆಯಲ್ಲಿ ಲಿಂಗ ದೀಕ್ಷೆ ಪಡೆಯುತ್ತಾರೆ; ಬಿಜ್ಜಳನ ಆಸ್ಥಾನದ ಮಧುವರಸ ತನ್ನ ಪೂರ್ವಿಕರು ಮಾಡಿದ ಮೋಸ-ವಂಚನೆ ಗೊತ್ತಾಗಿ ಬಸವಣ್ಣನ ಬಳಿ ಬಂದು ಲಿಂಗವಂತನಾಗುತ್ತಾನೆ. ಇದು ಜಾತಿ ವಿನಾಶದ ನಾಂದಿಗೆ ಸುಸಂದರ್ಭವೆಂದು ಬಗೆದ ಬಸವಣ್ಣ ಮತ್ತು ಶರಣರು ಮಧುವರಸನ ಮಗಳು ಕಲ್ಯಾಣವತಿ ಮತ್ತು ಹರಳಯ್ಯನ ಮಗ ಶೀಲವಂತನಿಗೆ ಮದುವೆ ಮಾಡಿಸಲು ಮುಂದಾಗುತ್ತಾರೆ.

PC : ಬಸವ ಸೇನೆ, (ಚನ್ನಬಸವಣ್ಣ)

ಇದು ಕರ್ಮಠ ಮನುವಾದಿಗಳನ್ನು ಬೆಚ್ಚಿಬೀಳಿಸುತ್ತದೆ! ಕೆರಳಿದ ವೈದಿಕರು ಇದೊಂದು ಧರ್ಮಬಾಹಿರ, ರಾಜಧರ್ಮ ವಿರುದ್ಧದ ಮದುವೆಯೆಂದು ಗುಲ್ಲೆಬ್ಬಿಸಿ ಗಲಾಟೆ-ಹಿಂಸೆ-ರಕ್ತಪಾತಕ್ಕೆ ಪ್ರಚೋದಿಸುತ್ತಾರೆ! ರಾಜ ಬಿಜ್ಜಳ ಮತ್ತು ವೈದಿಕಶಾಹಿಯ ವಿರೋಧ, ಈ ಮಾನವಹಕ್ಕು ಮತ್ತು ಮಾನವೀಯತೆ ಪ್ರತಿಪಾದಿಸುವ ಈ ಅಂತರ್ಜಾತಿ ವಿವಾಹಕ್ಕಿದ್ದರೂ ಶರಣರು ಅಂಜದೆ-ಅಳುಕದೆ ಮದುವೆ ಮಾಡಿಮುಗಿಸುತ್ತಾರೆ. ತಮ್ಮ ಶೋಷಕ ವೃತ್ತಿಗಿದು ಗಂಡಾಂತರಕಾರಿ ಪರಿವರ್ತನೆಯೆಂದು ಭಾವಿಸಿದ ಸತಾತನವಾದಿಗಳು ಸಿಕ್ಕಸಿಕ್ಕ ಶರಣರ ಮಾರಣಹೋಮ ನಡೆಸುತ್ತಾರೆ; ವಿಭೂತಿ-ರುದ್ರಾಕ್ಷಿ-ವಚನಗಳನ್ನು ಕಂಡಲ್ಲಿ ಸುಟ್ಟುಹಾಕುತ್ತಾರೆ. ಶರಣ ಕಣ್ಣುಗಳನ್ನು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಎಳೆಸುತ್ತಾರೆ. ಗಜ ಕಾಲುಗಳಿಂದ ನೂರಾರು ಶರಣರ ತಲೆ ತುಳಿಸಿ ಕೊಂದುಹಾಕುತ್ತಾರೆ. ಶರಣ ಸಿದ್ಧಾಂತದ ಸಂಪತ್ತಾಗಿದ್ದ ವಚನಗಳ ಉಳಿಸಲು ಶರಣರು ದೇಶಾಂತರ ಹೋಗಬೇಕಾಗಿ ಬರುತ್ತದೆ. ಇವೆಲ್ಲಾ ಶರಣರ ಬಗ್ಗೆ ಮೂಡಿರುವ ಪುರಾಣಗಳಲ್ಲಿ ದಾಖಲಾಗಿರುವ ಸಂಗತಿಗಳು.

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ. ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಪಶ್ಚಿಮ ಘಟ್ಟಗಳ ದುರ್ಗಮ ಕಾಡಿನ ದಾರಿ ಹಿಡಿದ ಮೂಲ ಉದ್ದೇಶವೇ ವಿಧ್ವಂಸಕ ವೈದಿಕರಿಂದ ವಚನ ಸಾಹಿತ್ಯ ಕಾಪಾಡುವುದಾಗಿತ್ತು. ತನ್ನ 12ನೇ ವರ್ಷದಷ್ಟು ಸಣ್ಣ ವಯಸ್ಸಿನಲ್ಲೇ ಅನುಭವ ಮಂಟಪದ ಚರ್ಚಾವೇದಿಕೆಯಲ್ಲಿ ಭಾಗವಹಿಸಿದ್ದ ಹೆಗ್ಗಳಿಕೆಯ ಚನ್ನಬಸವಣ್ಣ ಅಪಾರ ವಿದ್ವತ್ತಿನ ಶರಣ. ಆಧ್ಯಾತ್ಮಿಕ ತರ್ಕ, ಸಮಾನತೆಯ ವಿಚಾರಧಾರೆ, ಪ್ರಬುದ್ಧ ವಚನ ರಚನೆಗಳ ಮೂಲಕ ಅಜ್ಞಾನ, ಅಸಮಾನತೆ, ಅಸ್ಪೃಶ್ಯತೆಯಂಥ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಲು ಪ್ರಯತ್ನಿಸಿದ್ದವನು. ಸಾಂಪ್ರದಾಯಿಕ ವಚನಗಳ ಪರಿಷ್ಕರಿಸಿ ಷಟ್‍ಸ್ಥಲ ವಚನ ಸಂಪ್ರದಾಯ ಶುರುಮಾಡಿದ್ದವನು. ತಮ್ಮ 24ನೇ ವಯಸ್ಸಿನಲ್ಲಿ ಚನ್ನಬಸವಣ್ಣ ಉಳವಿಯಲ್ಲೇ ಜೀವಂತ ಸಮಾಧಿಯಾದರೆಂಬ ಉಲ್ಲೇಖಗಳಿವೆ.

ಸಮಾಧಿ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ. ಉಳವಿ ಧಾರ್ಮಿಕ ಕಾರಣಕ್ಕಾಗಷ್ಟೇ ಅಲ್ಲ, ನಿಸರ್ಗ ಸೊಬಗು, ಗುಹೆಗಳು ಮತ್ತು ನೀರ್ಗೋಲುಗಳಿಂದ ಆಕರ್ಷಣೀಯ ತಾಣವೂ ಆಗಿದೆ. ಉಳವಿ ಸುತ್ತಮುತ್ತ ಚನ್ನಬಸವ ಜಲಪಾತ, ವಚನಕಾರ ಹರಳಯ್ಯ ಚಿಲುಮೆ, ಶರಣೆ ಅಕ್ಕನಾಗಮ್ಮ ಗವಿ, ರುದ್ರಾಕ್ಷಿ ಮಂಟಪ, ವಿಭೂತಿ ಕಣಜ, ಆಕಳ ಗವಿ, ಬೊಮ್ಮಯ್ಯ ನದಿ, ಮಹಾಗವಿ ಮತ್ತು ಪಂಚಲಿಂಗೇಶ್ವರ ಗವಿಗಳಿವೆ. ಸಮಾನತೆಗಾಗಿ ಶ್ರಮಿಸಿದ ಶರಣಚಳವಳಿಯನ್ನು ಮುಗಿಸಿದ ವೈದಿಕರ ಪಾತಕ ಪುರಾಣ ಹೇಳುವ ರೂಪಕಗಳಾಗಿ ನಿಂತಿವೆ.


ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...