Homeಕರ್ನಾಟಕಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ.

- Advertisement -
- Advertisement -

ಹಚ್ಚ ಹಸಿರು ಕಾನನ-ಗಿರಿ-ತೊರೆಗಳ ಅನನ್ಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಉತ್ತರಕನ್ನಡದ ಜೋಯಿಡಾ ತಾಲ್ಲೂಕಿನ ‘ಉಳವಿ’ 12ನೇ ಶತಮಾನದಲ್ಲಾದ ಶರಣ ಚಳುವಳಿಯ ಅಚ್ಚಳಿಯದ ಗುರುತುಗಳಲ್ಲೊಂದು. ಕಾರವಾರದಿಂದ 75 ಕಿ.ಮೀ ದೂರದಲ್ಲಿರುವ ಉಳವಿಯನ್ನು ಕಾಳಿ ನದಿ ದಾಟಿ ತಲುಪಬಹುದು; ರಸ್ತೆ ಮೂಲಕವಾದರೆ ದಾಂಡೇಲಿಯಿಂದ 11 ಕಿ.ಮೀ ಅಂತರದಲ್ಲಿರುವ ಪಾಟೋಲಿ ಕ್ರಾಸ್‍ಗೆ ಬಂದರೆ, ಎರಡು ಮಾರ್ಗಗಳಿವೆ. ‘ಉಳವಿ’ ಎಂದರೆ ‘ನಾನು ಇಲ್ಲಿ ಉಳಿಯುವೆ’ ಎಂದರ್ಥ ಎಂಬ ಅಭಿಪ್ರಾಯವಿದೆ.

PC : ಪ್ರಜಾವಾಣಿ, (ಬಸವಣ್ಣ)

ಶೋಷಣೆರಹಿತ ಸಮಸಮಾಜದ ಕನಸು ಕಂಡ ಸಾಮಾಜಿಕ ಹೋರಾಟದ ಹರಿಕಾರ ಬಸವಣ್ಣನವರ ಅಕ್ಕ ನಾಗಲಾಂಬಿಕೆಯ ಮಗ ಚನ್ನಬಸವಣ್ಣಾದಿ ಶರಣರು ವೈದಿಕಶಾಹಿಯ ಕ್ರೌರ್ಯ ತಾಳಲಾರದೆ ವಚನ ಸಾಹಿತ್ಯ ಸಂರಕ್ಷಣೆಗಾಗಿ ಈ ಕಾಡು-ಮೇಡಿನ ಉಳವಿಗೆ ಬಂದುಳಿದಿದ್ದರು. ಹಾಗಾಗಿ ಉಳವಿ ಎಂಬ ಹೆಸರು ಬಂತೆನ್ನಲಾದ ಈ ಊರಿಗೆ ಮೊದಲು ‘ವೃಶಾಪುರ’ ಎನ್ನಲಾಗುತ್ತಿತ್ತಂತೆ. ಪ್ರಪಂಚದಲ್ಲೇ ಮೊಟ್ಟಮೊದಲು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ ತತ್ವದರ್ಶನಗಳು ಹುಟ್ಟಿಕೊಂಡ ದಿನಮಾನವೆಂದರೆ ಅದು ಶರಣರ ಯುಗ! ಕಾಯಕ ವರ್ಗ ಸಮಾನತೆಯ ಬದುಕಿಗಾಗಿ ಒಂದೆಡೆ ಸೇರಿ ವೈಚಾರಿಕ-ವೈಜ್ಞಾನಿಕವಾಗಿ ಸತ್ಯ ಶೋಧಿಸುತ್ತಲೇ ಅಸಮಾನತೆಯ ವರ್ಣ ವ್ಯವಸ್ಥೆ, ಅಮಾನವೀಯ ಜಾತಿ ವ್ಯವಸ್ಥೆ, ಅಜ್ಞಾನದ ಲಿಂಗತಾರತಮ್ಯ ಹಾಗೂ ಅವಿವೇಕದ ಕಂದಾಚಾರಗಳಂಥ ವೈದಿಕ ಸ್ಥಾಪಿತ ಹೇಯ-ಬರ್ಬರ ವ್ಯವಸ್ಥೆಯ ವಿರುದ್ಧ ಬಂಡೆದ್ದು ಚಳುವಳಿ ರೂಪಿಸಿದ್ದ ಕ್ರಾಂತಿಕಾರಿ ಕಾಲವದು. ಇಂಥದೊಂದು ಕ್ರಾಂತಿ ವಿಶ್ವದಲ್ಲೇ ಮೊದಲು ನಡೆದದ್ದು ಕನ್ನಡ ನಾಡಲ್ಲಿ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಭವ ಮಂಟಪ ನಿರ್ಮಿಸಿ ಬಸವಣ್ಣ ಅದರ ನಾಯಕತ್ವವನ್ನು ತಳಸಮುದಾಯಗಳಿಗೆ ಕೊಡುತ್ತಾರೆ. 770 ಶರಣರ(ಪ್ರತಿನಿಧಿಗಳ) ಈ ಅನುಭವ ಪಂಟಪ ಪ್ರಪಂಚದ ಮೊದಲ ಪಾರ್ಲಿಮೆಂಟ್. ಈ ಪಾರ್ಲಿಮೆಂಟ್‍ನ ಮೊದಲ ಸ್ಪೀಕರ್(ಶೂನ್ಯ ಪೀಠಾಧ್ಯಕ್ಷ) ದಲಿತ ಅಲ್ಲಮಪ್ರಭು! ಅಲ್ಲಿ ಸಮಗಾರ ಹರಳಯ್ಯ, ಮಡಿವಾಳ ಮಾಚಯ್ಯ, ಮಾದಾರ ದೊಳಯ್ಯ, ಬ್ರಾಹ್ಮಣ ಮಧುವರಸ, ಚನ್ನಬಸವಣ್ಣ, ಕುರುಬರ ಬೊಮ್ಮಣ್ಣ, ಡೋಹರ ಕಕ್ಕಯ್ಯ…ಮುಂತಾದ ಶರಣರು ಮತ್ತು ಮಹಿಳಾ ಶರಣೆಯರಾದ ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆಸಂಕವ್ವ, ಸತ್ಯಕ್ಕ ಹೀಗೆ ಹಲವು ಜಾತಿಯ ಶರಣ-ಶರಣೆಯರು ಸೇರಿ ಸಮಾಜದ ಗುಣಾವಗುಣ, ನಾಡಿನ ಸಮಸ್ಯೆ, ತಮ್ಮ ಕಾರ್ಯನಿರತ ಅನುಭವಗಳನ್ನೆಲ್ಲ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿಶ್ವದ ಯಾವ ದೇಶದಲ್ಲೂ ಸಂವಿಧಾನವೇ ರಚನೆಯಾಗದ ಸಂದರ್ಭದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಸಮಾನತೆ, ಸ್ವಾತಂತ್ರ್ಯ, ಸೋದರತೆ, ಮೀಸಲಾತಿ, ಧಾರ್ಮಿಕ ಹಕ್ಕುಗಳ ಬಗೆಗೆ ಎಲ್ಲ ವೈಚಾರಿಕ-ವೈಜ್ಞಾನಿಕ ವಚನ ರಚಿಸಿದ್ದು ಅಚ್ಚಳಿಯದೆ ಐತಿಹಾಸಿಕ ದಾಖಲೆಯೇ ಸರಿ!

ವರ್ಣ ವ್ಯವಸ್ಥೆಯ ಕಟ್ಟಕಡೆಯ ಅಸ್ಪೃಶ್ಯ ದಲಿತ ಸಮುದಾಯದ ಸಮಗಾರ ಹರಳಯ್ಯ ಕೂಡ ಈ ವ್ಯವಸ್ಥೆಯಲ್ಲಿ ಲಿಂಗ ದೀಕ್ಷೆ ಪಡೆಯುತ್ತಾರೆ; ಬಿಜ್ಜಳನ ಆಸ್ಥಾನದ ಮಧುವರಸ ತನ್ನ ಪೂರ್ವಿಕರು ಮಾಡಿದ ಮೋಸ-ವಂಚನೆ ಗೊತ್ತಾಗಿ ಬಸವಣ್ಣನ ಬಳಿ ಬಂದು ಲಿಂಗವಂತನಾಗುತ್ತಾನೆ. ಇದು ಜಾತಿ ವಿನಾಶದ ನಾಂದಿಗೆ ಸುಸಂದರ್ಭವೆಂದು ಬಗೆದ ಬಸವಣ್ಣ ಮತ್ತು ಶರಣರು ಮಧುವರಸನ ಮಗಳು ಕಲ್ಯಾಣವತಿ ಮತ್ತು ಹರಳಯ್ಯನ ಮಗ ಶೀಲವಂತನಿಗೆ ಮದುವೆ ಮಾಡಿಸಲು ಮುಂದಾಗುತ್ತಾರೆ.

PC : ಬಸವ ಸೇನೆ, (ಚನ್ನಬಸವಣ್ಣ)

ಇದು ಕರ್ಮಠ ಮನುವಾದಿಗಳನ್ನು ಬೆಚ್ಚಿಬೀಳಿಸುತ್ತದೆ! ಕೆರಳಿದ ವೈದಿಕರು ಇದೊಂದು ಧರ್ಮಬಾಹಿರ, ರಾಜಧರ್ಮ ವಿರುದ್ಧದ ಮದುವೆಯೆಂದು ಗುಲ್ಲೆಬ್ಬಿಸಿ ಗಲಾಟೆ-ಹಿಂಸೆ-ರಕ್ತಪಾತಕ್ಕೆ ಪ್ರಚೋದಿಸುತ್ತಾರೆ! ರಾಜ ಬಿಜ್ಜಳ ಮತ್ತು ವೈದಿಕಶಾಹಿಯ ವಿರೋಧ, ಈ ಮಾನವಹಕ್ಕು ಮತ್ತು ಮಾನವೀಯತೆ ಪ್ರತಿಪಾದಿಸುವ ಈ ಅಂತರ್ಜಾತಿ ವಿವಾಹಕ್ಕಿದ್ದರೂ ಶರಣರು ಅಂಜದೆ-ಅಳುಕದೆ ಮದುವೆ ಮಾಡಿಮುಗಿಸುತ್ತಾರೆ. ತಮ್ಮ ಶೋಷಕ ವೃತ್ತಿಗಿದು ಗಂಡಾಂತರಕಾರಿ ಪರಿವರ್ತನೆಯೆಂದು ಭಾವಿಸಿದ ಸತಾತನವಾದಿಗಳು ಸಿಕ್ಕಸಿಕ್ಕ ಶರಣರ ಮಾರಣಹೋಮ ನಡೆಸುತ್ತಾರೆ; ವಿಭೂತಿ-ರುದ್ರಾಕ್ಷಿ-ವಚನಗಳನ್ನು ಕಂಡಲ್ಲಿ ಸುಟ್ಟುಹಾಕುತ್ತಾರೆ. ಶರಣ ಕಣ್ಣುಗಳನ್ನು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಎಳೆಸುತ್ತಾರೆ. ಗಜ ಕಾಲುಗಳಿಂದ ನೂರಾರು ಶರಣರ ತಲೆ ತುಳಿಸಿ ಕೊಂದುಹಾಕುತ್ತಾರೆ. ಶರಣ ಸಿದ್ಧಾಂತದ ಸಂಪತ್ತಾಗಿದ್ದ ವಚನಗಳ ಉಳಿಸಲು ಶರಣರು ದೇಶಾಂತರ ಹೋಗಬೇಕಾಗಿ ಬರುತ್ತದೆ. ಇವೆಲ್ಲಾ ಶರಣರ ಬಗ್ಗೆ ಮೂಡಿರುವ ಪುರಾಣಗಳಲ್ಲಿ ದಾಖಲಾಗಿರುವ ಸಂಗತಿಗಳು.

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ. ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಪಶ್ಚಿಮ ಘಟ್ಟಗಳ ದುರ್ಗಮ ಕಾಡಿನ ದಾರಿ ಹಿಡಿದ ಮೂಲ ಉದ್ದೇಶವೇ ವಿಧ್ವಂಸಕ ವೈದಿಕರಿಂದ ವಚನ ಸಾಹಿತ್ಯ ಕಾಪಾಡುವುದಾಗಿತ್ತು. ತನ್ನ 12ನೇ ವರ್ಷದಷ್ಟು ಸಣ್ಣ ವಯಸ್ಸಿನಲ್ಲೇ ಅನುಭವ ಮಂಟಪದ ಚರ್ಚಾವೇದಿಕೆಯಲ್ಲಿ ಭಾಗವಹಿಸಿದ್ದ ಹೆಗ್ಗಳಿಕೆಯ ಚನ್ನಬಸವಣ್ಣ ಅಪಾರ ವಿದ್ವತ್ತಿನ ಶರಣ. ಆಧ್ಯಾತ್ಮಿಕ ತರ್ಕ, ಸಮಾನತೆಯ ವಿಚಾರಧಾರೆ, ಪ್ರಬುದ್ಧ ವಚನ ರಚನೆಗಳ ಮೂಲಕ ಅಜ್ಞಾನ, ಅಸಮಾನತೆ, ಅಸ್ಪೃಶ್ಯತೆಯಂಥ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಲು ಪ್ರಯತ್ನಿಸಿದ್ದವನು. ಸಾಂಪ್ರದಾಯಿಕ ವಚನಗಳ ಪರಿಷ್ಕರಿಸಿ ಷಟ್‍ಸ್ಥಲ ವಚನ ಸಂಪ್ರದಾಯ ಶುರುಮಾಡಿದ್ದವನು. ತಮ್ಮ 24ನೇ ವಯಸ್ಸಿನಲ್ಲಿ ಚನ್ನಬಸವಣ್ಣ ಉಳವಿಯಲ್ಲೇ ಜೀವಂತ ಸಮಾಧಿಯಾದರೆಂಬ ಉಲ್ಲೇಖಗಳಿವೆ.

ಸಮಾಧಿ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ. ಉಳವಿ ಧಾರ್ಮಿಕ ಕಾರಣಕ್ಕಾಗಷ್ಟೇ ಅಲ್ಲ, ನಿಸರ್ಗ ಸೊಬಗು, ಗುಹೆಗಳು ಮತ್ತು ನೀರ್ಗೋಲುಗಳಿಂದ ಆಕರ್ಷಣೀಯ ತಾಣವೂ ಆಗಿದೆ. ಉಳವಿ ಸುತ್ತಮುತ್ತ ಚನ್ನಬಸವ ಜಲಪಾತ, ವಚನಕಾರ ಹರಳಯ್ಯ ಚಿಲುಮೆ, ಶರಣೆ ಅಕ್ಕನಾಗಮ್ಮ ಗವಿ, ರುದ್ರಾಕ್ಷಿ ಮಂಟಪ, ವಿಭೂತಿ ಕಣಜ, ಆಕಳ ಗವಿ, ಬೊಮ್ಮಯ್ಯ ನದಿ, ಮಹಾಗವಿ ಮತ್ತು ಪಂಚಲಿಂಗೇಶ್ವರ ಗವಿಗಳಿವೆ. ಸಮಾನತೆಗಾಗಿ ಶ್ರಮಿಸಿದ ಶರಣಚಳವಳಿಯನ್ನು ಮುಗಿಸಿದ ವೈದಿಕರ ಪಾತಕ ಪುರಾಣ ಹೇಳುವ ರೂಪಕಗಳಾಗಿ ನಿಂತಿವೆ.


ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...

ಕಾವೇರಿ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ಹೇಳಿಕೆ : ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉದಯನಿಧಿ ಬಂಧನಕ್ಕೂ...

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...