Homeಕರ್ನಾಟಕಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ.

- Advertisement -
- Advertisement -

ಹಚ್ಚ ಹಸಿರು ಕಾನನ-ಗಿರಿ-ತೊರೆಗಳ ಅನನ್ಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಉತ್ತರಕನ್ನಡದ ಜೋಯಿಡಾ ತಾಲ್ಲೂಕಿನ ‘ಉಳವಿ’ 12ನೇ ಶತಮಾನದಲ್ಲಾದ ಶರಣ ಚಳುವಳಿಯ ಅಚ್ಚಳಿಯದ ಗುರುತುಗಳಲ್ಲೊಂದು. ಕಾರವಾರದಿಂದ 75 ಕಿ.ಮೀ ದೂರದಲ್ಲಿರುವ ಉಳವಿಯನ್ನು ಕಾಳಿ ನದಿ ದಾಟಿ ತಲುಪಬಹುದು; ರಸ್ತೆ ಮೂಲಕವಾದರೆ ದಾಂಡೇಲಿಯಿಂದ 11 ಕಿ.ಮೀ ಅಂತರದಲ್ಲಿರುವ ಪಾಟೋಲಿ ಕ್ರಾಸ್‍ಗೆ ಬಂದರೆ, ಎರಡು ಮಾರ್ಗಗಳಿವೆ. ‘ಉಳವಿ’ ಎಂದರೆ ‘ನಾನು ಇಲ್ಲಿ ಉಳಿಯುವೆ’ ಎಂದರ್ಥ ಎಂಬ ಅಭಿಪ್ರಾಯವಿದೆ.

PC : ಪ್ರಜಾವಾಣಿ, (ಬಸವಣ್ಣ)

ಶೋಷಣೆರಹಿತ ಸಮಸಮಾಜದ ಕನಸು ಕಂಡ ಸಾಮಾಜಿಕ ಹೋರಾಟದ ಹರಿಕಾರ ಬಸವಣ್ಣನವರ ಅಕ್ಕ ನಾಗಲಾಂಬಿಕೆಯ ಮಗ ಚನ್ನಬಸವಣ್ಣಾದಿ ಶರಣರು ವೈದಿಕಶಾಹಿಯ ಕ್ರೌರ್ಯ ತಾಳಲಾರದೆ ವಚನ ಸಾಹಿತ್ಯ ಸಂರಕ್ಷಣೆಗಾಗಿ ಈ ಕಾಡು-ಮೇಡಿನ ಉಳವಿಗೆ ಬಂದುಳಿದಿದ್ದರು. ಹಾಗಾಗಿ ಉಳವಿ ಎಂಬ ಹೆಸರು ಬಂತೆನ್ನಲಾದ ಈ ಊರಿಗೆ ಮೊದಲು ‘ವೃಶಾಪುರ’ ಎನ್ನಲಾಗುತ್ತಿತ್ತಂತೆ. ಪ್ರಪಂಚದಲ್ಲೇ ಮೊಟ್ಟಮೊದಲು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ ತತ್ವದರ್ಶನಗಳು ಹುಟ್ಟಿಕೊಂಡ ದಿನಮಾನವೆಂದರೆ ಅದು ಶರಣರ ಯುಗ! ಕಾಯಕ ವರ್ಗ ಸಮಾನತೆಯ ಬದುಕಿಗಾಗಿ ಒಂದೆಡೆ ಸೇರಿ ವೈಚಾರಿಕ-ವೈಜ್ಞಾನಿಕವಾಗಿ ಸತ್ಯ ಶೋಧಿಸುತ್ತಲೇ ಅಸಮಾನತೆಯ ವರ್ಣ ವ್ಯವಸ್ಥೆ, ಅಮಾನವೀಯ ಜಾತಿ ವ್ಯವಸ್ಥೆ, ಅಜ್ಞಾನದ ಲಿಂಗತಾರತಮ್ಯ ಹಾಗೂ ಅವಿವೇಕದ ಕಂದಾಚಾರಗಳಂಥ ವೈದಿಕ ಸ್ಥಾಪಿತ ಹೇಯ-ಬರ್ಬರ ವ್ಯವಸ್ಥೆಯ ವಿರುದ್ಧ ಬಂಡೆದ್ದು ಚಳುವಳಿ ರೂಪಿಸಿದ್ದ ಕ್ರಾಂತಿಕಾರಿ ಕಾಲವದು. ಇಂಥದೊಂದು ಕ್ರಾಂತಿ ವಿಶ್ವದಲ್ಲೇ ಮೊದಲು ನಡೆದದ್ದು ಕನ್ನಡ ನಾಡಲ್ಲಿ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಭವ ಮಂಟಪ ನಿರ್ಮಿಸಿ ಬಸವಣ್ಣ ಅದರ ನಾಯಕತ್ವವನ್ನು ತಳಸಮುದಾಯಗಳಿಗೆ ಕೊಡುತ್ತಾರೆ. 770 ಶರಣರ(ಪ್ರತಿನಿಧಿಗಳ) ಈ ಅನುಭವ ಪಂಟಪ ಪ್ರಪಂಚದ ಮೊದಲ ಪಾರ್ಲಿಮೆಂಟ್. ಈ ಪಾರ್ಲಿಮೆಂಟ್‍ನ ಮೊದಲ ಸ್ಪೀಕರ್(ಶೂನ್ಯ ಪೀಠಾಧ್ಯಕ್ಷ) ದಲಿತ ಅಲ್ಲಮಪ್ರಭು! ಅಲ್ಲಿ ಸಮಗಾರ ಹರಳಯ್ಯ, ಮಡಿವಾಳ ಮಾಚಯ್ಯ, ಮಾದಾರ ದೊಳಯ್ಯ, ಬ್ರಾಹ್ಮಣ ಮಧುವರಸ, ಚನ್ನಬಸವಣ್ಣ, ಕುರುಬರ ಬೊಮ್ಮಣ್ಣ, ಡೋಹರ ಕಕ್ಕಯ್ಯ…ಮುಂತಾದ ಶರಣರು ಮತ್ತು ಮಹಿಳಾ ಶರಣೆಯರಾದ ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆಸಂಕವ್ವ, ಸತ್ಯಕ್ಕ ಹೀಗೆ ಹಲವು ಜಾತಿಯ ಶರಣ-ಶರಣೆಯರು ಸೇರಿ ಸಮಾಜದ ಗುಣಾವಗುಣ, ನಾಡಿನ ಸಮಸ್ಯೆ, ತಮ್ಮ ಕಾರ್ಯನಿರತ ಅನುಭವಗಳನ್ನೆಲ್ಲ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿಶ್ವದ ಯಾವ ದೇಶದಲ್ಲೂ ಸಂವಿಧಾನವೇ ರಚನೆಯಾಗದ ಸಂದರ್ಭದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಸಮಾನತೆ, ಸ್ವಾತಂತ್ರ್ಯ, ಸೋದರತೆ, ಮೀಸಲಾತಿ, ಧಾರ್ಮಿಕ ಹಕ್ಕುಗಳ ಬಗೆಗೆ ಎಲ್ಲ ವೈಚಾರಿಕ-ವೈಜ್ಞಾನಿಕ ವಚನ ರಚಿಸಿದ್ದು ಅಚ್ಚಳಿಯದೆ ಐತಿಹಾಸಿಕ ದಾಖಲೆಯೇ ಸರಿ!

ವರ್ಣ ವ್ಯವಸ್ಥೆಯ ಕಟ್ಟಕಡೆಯ ಅಸ್ಪೃಶ್ಯ ದಲಿತ ಸಮುದಾಯದ ಸಮಗಾರ ಹರಳಯ್ಯ ಕೂಡ ಈ ವ್ಯವಸ್ಥೆಯಲ್ಲಿ ಲಿಂಗ ದೀಕ್ಷೆ ಪಡೆಯುತ್ತಾರೆ; ಬಿಜ್ಜಳನ ಆಸ್ಥಾನದ ಮಧುವರಸ ತನ್ನ ಪೂರ್ವಿಕರು ಮಾಡಿದ ಮೋಸ-ವಂಚನೆ ಗೊತ್ತಾಗಿ ಬಸವಣ್ಣನ ಬಳಿ ಬಂದು ಲಿಂಗವಂತನಾಗುತ್ತಾನೆ. ಇದು ಜಾತಿ ವಿನಾಶದ ನಾಂದಿಗೆ ಸುಸಂದರ್ಭವೆಂದು ಬಗೆದ ಬಸವಣ್ಣ ಮತ್ತು ಶರಣರು ಮಧುವರಸನ ಮಗಳು ಕಲ್ಯಾಣವತಿ ಮತ್ತು ಹರಳಯ್ಯನ ಮಗ ಶೀಲವಂತನಿಗೆ ಮದುವೆ ಮಾಡಿಸಲು ಮುಂದಾಗುತ್ತಾರೆ.

PC : ಬಸವ ಸೇನೆ, (ಚನ್ನಬಸವಣ್ಣ)

ಇದು ಕರ್ಮಠ ಮನುವಾದಿಗಳನ್ನು ಬೆಚ್ಚಿಬೀಳಿಸುತ್ತದೆ! ಕೆರಳಿದ ವೈದಿಕರು ಇದೊಂದು ಧರ್ಮಬಾಹಿರ, ರಾಜಧರ್ಮ ವಿರುದ್ಧದ ಮದುವೆಯೆಂದು ಗುಲ್ಲೆಬ್ಬಿಸಿ ಗಲಾಟೆ-ಹಿಂಸೆ-ರಕ್ತಪಾತಕ್ಕೆ ಪ್ರಚೋದಿಸುತ್ತಾರೆ! ರಾಜ ಬಿಜ್ಜಳ ಮತ್ತು ವೈದಿಕಶಾಹಿಯ ವಿರೋಧ, ಈ ಮಾನವಹಕ್ಕು ಮತ್ತು ಮಾನವೀಯತೆ ಪ್ರತಿಪಾದಿಸುವ ಈ ಅಂತರ್ಜಾತಿ ವಿವಾಹಕ್ಕಿದ್ದರೂ ಶರಣರು ಅಂಜದೆ-ಅಳುಕದೆ ಮದುವೆ ಮಾಡಿಮುಗಿಸುತ್ತಾರೆ. ತಮ್ಮ ಶೋಷಕ ವೃತ್ತಿಗಿದು ಗಂಡಾಂತರಕಾರಿ ಪರಿವರ್ತನೆಯೆಂದು ಭಾವಿಸಿದ ಸತಾತನವಾದಿಗಳು ಸಿಕ್ಕಸಿಕ್ಕ ಶರಣರ ಮಾರಣಹೋಮ ನಡೆಸುತ್ತಾರೆ; ವಿಭೂತಿ-ರುದ್ರಾಕ್ಷಿ-ವಚನಗಳನ್ನು ಕಂಡಲ್ಲಿ ಸುಟ್ಟುಹಾಕುತ್ತಾರೆ. ಶರಣ ಕಣ್ಣುಗಳನ್ನು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಎಳೆಸುತ್ತಾರೆ. ಗಜ ಕಾಲುಗಳಿಂದ ನೂರಾರು ಶರಣರ ತಲೆ ತುಳಿಸಿ ಕೊಂದುಹಾಕುತ್ತಾರೆ. ಶರಣ ಸಿದ್ಧಾಂತದ ಸಂಪತ್ತಾಗಿದ್ದ ವಚನಗಳ ಉಳಿಸಲು ಶರಣರು ದೇಶಾಂತರ ಹೋಗಬೇಕಾಗಿ ಬರುತ್ತದೆ. ಇವೆಲ್ಲಾ ಶರಣರ ಬಗ್ಗೆ ಮೂಡಿರುವ ಪುರಾಣಗಳಲ್ಲಿ ದಾಖಲಾಗಿರುವ ಸಂಗತಿಗಳು.

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ. ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಪಶ್ಚಿಮ ಘಟ್ಟಗಳ ದುರ್ಗಮ ಕಾಡಿನ ದಾರಿ ಹಿಡಿದ ಮೂಲ ಉದ್ದೇಶವೇ ವಿಧ್ವಂಸಕ ವೈದಿಕರಿಂದ ವಚನ ಸಾಹಿತ್ಯ ಕಾಪಾಡುವುದಾಗಿತ್ತು. ತನ್ನ 12ನೇ ವರ್ಷದಷ್ಟು ಸಣ್ಣ ವಯಸ್ಸಿನಲ್ಲೇ ಅನುಭವ ಮಂಟಪದ ಚರ್ಚಾವೇದಿಕೆಯಲ್ಲಿ ಭಾಗವಹಿಸಿದ್ದ ಹೆಗ್ಗಳಿಕೆಯ ಚನ್ನಬಸವಣ್ಣ ಅಪಾರ ವಿದ್ವತ್ತಿನ ಶರಣ. ಆಧ್ಯಾತ್ಮಿಕ ತರ್ಕ, ಸಮಾನತೆಯ ವಿಚಾರಧಾರೆ, ಪ್ರಬುದ್ಧ ವಚನ ರಚನೆಗಳ ಮೂಲಕ ಅಜ್ಞಾನ, ಅಸಮಾನತೆ, ಅಸ್ಪೃಶ್ಯತೆಯಂಥ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಲು ಪ್ರಯತ್ನಿಸಿದ್ದವನು. ಸಾಂಪ್ರದಾಯಿಕ ವಚನಗಳ ಪರಿಷ್ಕರಿಸಿ ಷಟ್‍ಸ್ಥಲ ವಚನ ಸಂಪ್ರದಾಯ ಶುರುಮಾಡಿದ್ದವನು. ತಮ್ಮ 24ನೇ ವಯಸ್ಸಿನಲ್ಲಿ ಚನ್ನಬಸವಣ್ಣ ಉಳವಿಯಲ್ಲೇ ಜೀವಂತ ಸಮಾಧಿಯಾದರೆಂಬ ಉಲ್ಲೇಖಗಳಿವೆ.

ಸಮಾಧಿ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ. ಉಳವಿ ಧಾರ್ಮಿಕ ಕಾರಣಕ್ಕಾಗಷ್ಟೇ ಅಲ್ಲ, ನಿಸರ್ಗ ಸೊಬಗು, ಗುಹೆಗಳು ಮತ್ತು ನೀರ್ಗೋಲುಗಳಿಂದ ಆಕರ್ಷಣೀಯ ತಾಣವೂ ಆಗಿದೆ. ಉಳವಿ ಸುತ್ತಮುತ್ತ ಚನ್ನಬಸವ ಜಲಪಾತ, ವಚನಕಾರ ಹರಳಯ್ಯ ಚಿಲುಮೆ, ಶರಣೆ ಅಕ್ಕನಾಗಮ್ಮ ಗವಿ, ರುದ್ರಾಕ್ಷಿ ಮಂಟಪ, ವಿಭೂತಿ ಕಣಜ, ಆಕಳ ಗವಿ, ಬೊಮ್ಮಯ್ಯ ನದಿ, ಮಹಾಗವಿ ಮತ್ತು ಪಂಚಲಿಂಗೇಶ್ವರ ಗವಿಗಳಿವೆ. ಸಮಾನತೆಗಾಗಿ ಶ್ರಮಿಸಿದ ಶರಣಚಳವಳಿಯನ್ನು ಮುಗಿಸಿದ ವೈದಿಕರ ಪಾತಕ ಪುರಾಣ ಹೇಳುವ ರೂಪಕಗಳಾಗಿ ನಿಂತಿವೆ.


ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...