Homeಮುಖಪುಟಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳ ಪಟ್ಟಿ: ರಾಜ್ಯೋತ್ಸವದಂದು ಸಿದ್ದರಾಮಯ್ಯ ಆಕ್ರೋಶ

ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳ ಪಟ್ಟಿ: ರಾಜ್ಯೋತ್ಸವದಂದು ಸಿದ್ದರಾಮಯ್ಯ ಆಕ್ರೋಶ

- Advertisement -
- Advertisement -

ಒಂದು ಕಾಲದಲ್ಲಿ ನರ್ಮದಾ ನದಿಯವರೆಗೆ ವ್ಯಾಪಿಸಿದ್ದ ಕನ್ನಡ ನಾಡು ಕುಗ್ಗಿ ಕುಗ್ಗಿ ಇವತ್ತಿನ ಮಟ್ಟಕ್ಕೆ ಬಂದು ತಲುಪಿದೆ. ಕನ್ನಡದ ಪ್ರಾಚೀನ ಕೃತಿ ಕವಿರಾಜ ಮಾರ್ಗ ಕೃತಿಯಲ್ಲಿ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿ ಕೊಂಡಿತ್ತು ಎಂಬ ಉಲ್ಲೇಖವಿದೆ. ಹೀಗಿದ್ದ ನಾಡನ್ನು ಬ್ರಿಟಿಷರು ಹರಿದು ಹಂಚಿ ಹಾಕಿದ್ದರು. ನಮ್ಮ ಹಿರಿಯರು ಜಾತಿ, ಧರ್ಮಗಳನ್ನು ಮೀರಿ ತ್ಯಾಗ ಬಲಿದಾನಗಳ ಮೂಲಕ ನಾಡು ಏಕೀಕೃತವಾಗಲು ಕಾರಣವಾದರು. ಭಾವನಾತ್ಮಕವಾಗಿ, ಆಡಳಿತಾತ್ಮಕವಾಗಿ ಒಗ್ಗೂಡಲು ಕಾರಣವಾದರು. ನಾಡಿಗಾಗಿ ಪ್ರಾಣವನ್ನು, ಬದುಕನ್ನು ತ್ಯಾಗ ಮಾಡಿದ ಎಲ್ಲ ಹಿರಿಯರನ್ನು ಹೃದಯದಾಳದಿಂದ ಸ್ಮರಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ಮಟ್ಟಿಗೆ ಮಾತ್ರ ಇಂದು ನಾವು ಒಗ್ಗೂಡಿದ್ದೇವೆ. ದೇಶದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಜ್ಞಾನಸೃಷ್ಟಿಯಲ್ಲಿ ಸರೀಕ ರಾಜ್ಯಗಳ ಜೊತೆ ತಲೆ ಎತ್ತಿ ಬದುಕುವಂಥ ಸ್ಥಿತಿಗೆ ತಲುಪಿದ್ದೆವು. ಕನ್ನಡಿಗರು ಎಂಬ ಆತ್ಮ ವಿಶ್ವಾಸ ನಮ್ಮೊಳಗೆ ಹುಟ್ಟಿ ಮೊರೆಯಲು ಸಾಧ್ಯವಾಗಿತ್ತು. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ನೆನಪಿಸಿಕೊಂಡು, ಕನ್ನಡಕ್ಕೆ ಇಂದು ಏನಾಗಿದೆ ಎಂದು ತುಸು ದೀರ್ಘವಾಗಿ ಪ್ರಸ್ತಾಪಿಸುತ್ತೇನೆ. ಕನ್ನಡಿಗರ ಜೀವನ್ಮರಣದ ಸಂಗತಿಯಾದ ಈ ವಿಚಾರಗಳನ್ನು ಮಾಧ್ಯಮಗಳು ಜನರ ಮನಸ್ಸಿಗೆ ತಲುಪಿಸಬೇಕೆಂದು ಕೋರುತ್ತೇನೆ. ಕಾಳಜಿ ಇರುವವರೆಲ್ಲ ಪಕ್ಷಾತೀತವಾಗಿ, ಜಾತಿ, ಧರ್ಮಗಳನ್ನು ಮೀರಿ ನಾಡಿನ ಹಿತ ಬಯಸಬೇಕೆಂದು ವಿನಂತಿಸುತ್ತೇನೆ ಎಂದಿದ್ದಾರೆ.

ದೇಶವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಕಳೆದು ಹೋದವು. ನಮ್ಮ ಸಂವಿಧಾನದಲ್ಲಿ ಎಲ್ಲೂ ಕೂಡ ಕೇಂದ್ರ ಅಥವಾ ಕೇಂದ್ರ ಸರಕಾರ ಎಂಬ ಪದಗಳನ್ನು ಬಳಸಿಲ್ಲ. ಒಕ್ಕೂಟ, ಒಕ್ಕೂಟ ರಾಜ್ಯ ವ್ಯವಸ್ಥೆ ಎಂದು ಕರೆಯಲಾಗಿದೆ. ಹಲವು ರಾಜ್ಯಗಳು ಸೇರಿ ಪರಸ್ಪರ ಪೂರಕ ವಾತಾವರಣವನ್ನು ನಿರ್ಮಿಸಿಕೊಂಡು ವಿವಿಧತೆಯಲ್ಲಿ ಏಕವಾದ ಮತ್ತು ಸಾರ್ವಭೌಮವಾದ ಸಮಾಜವಾದಿ ವ್ಯವಸ್ಥೆಯ , ಸರ್ವ ಧರ್ಮಗಳನ್ನು ಒಳಗೊಂಡ ಪ್ರಜಾಸತ್ತಾತ್ಮಕವಾದ ಗಣರಾಜ್ಯ ಎಂದು ಹೆಸರಿಸಲಾಗಿದೆ. ಸಂವಿಧಾನವೇ ನಮ್ಮನ್ನು ಕೈ ಹಿಡಿದು ನಡೆಸುವ, ಕೈ ದೀವಿಗೆಯಂತಹ ಗ್ರಂಥ. ಯಾವ ಸಂದೇಹಗಳಿಗೂ, ಗೊಂದಲಗಳಿಗೂ ಅವಕಾಶವಿಲ್ಲದಂತೆ ಆಡಳಿತ ನಡೆಸುವ ಮತ್ತು ಜನರು ಬದುಕುವ ಕುರಿತು ಸ್ಪಷ್ಟ ತಿಳಿವಳಿಕೆಯನ್ನು ನೀಡುವ ನಕಾಶೆಯಂತಹ ಗ್ರಂಥವಾಗಿದೆ. ರಾಜ್ಯಗಳು ಸಂವಿಧಾನ ಬದ್ಧವಾಗಿ ರಚನೆಯಾಗಿವೆ. ನಮ್ಮ ರಾಜ್ಯವೂ 1956 ರಲ್ಲಿ ಅಧಿಕೃತವಾಗಿ ಏಕೀಕೃತಗೊಂಡು ರಚನೆಯಾಗಿದೆ ಎಂದಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ಪಾಲು ಪಡೆಯುವ ರಾಜ್ಯಗಳಲ್ಲಿ 14 ನೇ ಹಣಕಾಸು ಆಯೋಗದ ಪ್ರಕಾರ 7ನೇ ಸ್ಥಾನದಲ್ಲಿದ್ದ ಕರ್ನಾಟಕ 15 ನೇ ಹಣಕಾಸು ಆಯೋಗದ ಶಿಫಾರಸ್ಸುಗಳಲ್ಲಿ 10 ನೇ ಸ್ಥಾನಕ್ಕೆ ಕುಸಿಯಿತು. ಇಡೀ ದೇಶದಲ್ಲಿಯೆ ಶೇ.1.067 ರಷ್ಟು ತೆರಿಗೆ ಕಡಿಮೆಯಾದ ಏಕೈಕ ರಾಜ್ಯ ಕರ್ನಾಟಕ. ಅಂದರೆ 100 ರೂಪಾಯಿಯಲ್ಲಿ ನಮಗೆ ಇದುವರೆಗೆ ಹತ್ತತ್ತಿರ 4.8 ರೂಪಾಯಿ ಸಿಗುತ್ತಿತ್ತು. ಈಗ ಅದು 3.64 ರೂಗಳಿಗೆ ಇಳಿದಿದೆ. ನಮ್ಮ ರಾಜ್ಯದ ಜನರು ಒಂದು ರೂಪಾಯಿ ತೆರಿಗೆ ಕಟ್ಟಿದರೆ ನಮಗೆ ವಾಪಸ್ಸು ಸಿಗುವುದು ಸರಿ ಸುಮಾರಾಗಿ 45 ಪೈಸೆ. ಅದೇ ಉತ್ತರದ ಕೆಲವು ರಾಜ್ಯಗಳಿಗೆ 2.80 ರೂಪಾಯಿಗಳ ವರೆಗೂ ಪಾಲು ನೀಡಲಾಗುತ್ತಿದೆ. ಇದು ನಮ್ಮ ರಾಜ್ಯಕ್ಕೆ ಬಗೆದ ಬಹಳ ದೊಡ್ಡ ದ್ರೋಹವಲ್ಲವೆ? ಕಷ್ಟದಲ್ಲಿರುವ ನಮಗಿಂತ ಹೆಚ್ಚು ಬಡತನದಲ್ಲಿರುವ ರಾಜ್ಯಗಳಿಗೆ ತುಸು ಹೆಚ್ಚು ಅನುದಾನವನ್ನು ಕೇಂದ್ರವು ತನ್ನ ಪಾಲಿನಲ್ಲಿ ಕೊಟ್ಟು ಕಾಪಾಡಬಹುದಾಗಿದೆ. ಆದರೆ ನಮ್ಮ ತೆರಿಗೆ ಪಾಲನ್ನು ನಮಗೆ ಸಮರ್ಪಕವಾಗಿ ನೀಡಿದರೆ ಸಾಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

45 ವರ್ಷಗಳಲ್ಲೇ ಕೇಳಿ ಕಂಡರಿಯದ ಬರಗಾಲ 2017 ರಲ್ಲಿ ರಾಜ್ಯಕ್ಕೆ ಬಂದೆರಗಿತ್ತು. ಆದರೆ ರಾಜ್ಯಕ್ಕೆ ಕೇಂದ್ರ ಕೊಟ್ಟಿದ್ದು 1435.95 ಕೋಟಿ ಮಾತ್ರ. ಇದೇ ವೇಳೆಯಲ್ಲಿ ಮಹಾರಾಷ್ಟ್ರಕ್ಕೆ 8195 ಕೋಟಿ. ಗುಜರಾತಿಗೆ 3894 ಕೋಟಿ, ರಾಜಸ್ತಾನಕ್ಕೆ 2153 ಕೋಟಿ ಕೊಟ್ಟರು. ಪ್ರವಾಹ, ಬರಗಾಲ, ಜಿಎಸ್ಟಿ ಏನೇ ಇದ್ದರೂ ಎಲ್ಲದರಲ್ಲೂ ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುವುದನ್ನು ಬಿಜೆಪಿ ಪಕ್ಷ ಸಂಪ್ರದಾಯದಂತೆ ಪಾಲಿಸಿಕೊಂಡು ಬರುತ್ತಿದೆ.
2017 ರಲ್ಲಿ ವಿಪರೀತ ಬರ ಬಂದೆರಗಿದ ಕಾರಣಕ್ಕೆ ರಾಜ್ಯ ಸರಕಾರ ರೈತರು ಸಹಕಾರ ಬ್ಯಾಂಕ್ ಗಳಿಂದ ಪಡೆದಿದ್ದ 8165 ಕೋಟಿ ಸಾಲವನ್ನು ಮನ್ನಾ ಮಾಡಲಾಯಿತು. 50 ಸಾವಿರದ ವರೆಗಿನ ಪ್ರತಿಯೊಬ್ಬ ರೈತರ ಸಾಲವನ್ನು ಮನ್ನಾ ಮಾಡಿದ್ದರಿಂದ ಇದರ ಲಾಭ ರಾಜ್ಯದ 22,27,506 ರೈತರಿಗೆ ದೊರೆಯಿತು. ಇತರೆ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದ ಸಾಲವನ್ನೂ ಮನ್ನಾ ಮಾಡಲು ರಾಜ್ಯ ಸರಕಾರ ಮುಂದಾಗಿ ಕೇಂದ್ರದ ಸಹಕಾರ ಕೋರಿತು. ಆದರೆ ಮೋದಿ ಅವರು ರಾಜ್ಯದ ಜನರಿಗೆ ವಂಚಿಸುವ ಪರಿಪಾಠವನ್ನು ಮುಂದುವರೆಸಿದರು. ಯಾವ ನೆರವನ್ನೂ ನೀಡಲಿಲ್ಲ. ಆದರೆ ಕೆಲವೆ ಬಂಡವಾಳಿಗ, ಕೈಗಾರಿಕೋದ್ಯಮಿಗಳಿಗೆ ಆರ್ಥಿಕವಾಗಿ ಅನುಕೂಲವಾಗುವ ನೀತಿಗಳನ್ನು ಮಾತ್ರ ನಿರಂತರವಾಗಿ ಜಾರಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓವರ್ ಹೆಡ್ ಟ್ಯಾಂಕಿನಲ್ಲಿ ನೀರಿದ್ದರೆ ನಲ್ಲಿಗಳಲ್ಲಿ ಬರುವ ನೀರಿಗಾಗಿ ನಾವು ಒಂದಿಷ್ಟು ಚೌಕಾಸಿ, ಜಗಳ ಎಲ್ಲ ಮಾಡಿಕೊಳ್ಳಬಹುದು. ಆದರೆ ನೀರಿನ ಟ್ಯಾಂಕನ್ನು ಖಾಲಿ ಮಾಡಿ ನಲ್ಲಿಗಳಲ್ಲಿ ಹೂಸು ಬಿಡುತ್ತಾ ಕೂತವರನ್ನು ನಂಬುವ ದುರಂತಕ್ಕೆ ನಮ್ಮ ಯುವಕರನ್ನು ತಳ್ಳಿದ್ದಾರಲ್ಲ ಇವರನ್ನು ಏನನ್ನುವುದು?. ದಮನಿತ ಸಮುದಾಯಗಳ ಪರಿಸ್ಥಿತಿ ಇಂದು ತೋಳದ ಬಳಿಗೆ ನ್ಯಾಯ ಹೇಳಲು ಹೋದ ಕುರಿಗಳಂತಾಗಿದೆ. ಇವರು ಖಂಡಿತ ಮೀಸಲಾತಿಯ ಪರ ಇರುವವರಲ್ಲ. ಹಾಗಾಗಿ ದಲಿತ. ಓಬಿಸಿ, ಕನ್ನಡ ಮಾಧ್ಯಮದಲ್ಲಿ ಕಲಿತವರು, ಗ್ರಾಮೀಣ ಪ್ರದೇಶದಲ್ಲಿ ಕಲಿತವರು, ಮಹಿಳೆಯರು, ಹಿಂದುಳಿದವರು, ವಿಶೇಷ ಚೇತನರು, ಮುಂದುವರಿದ ಜಾತಿಗಳಲ್ಲಿದ್ದು ಶೇ 10 ರಷ್ಟು ಮೀಸಲಾತಿ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದವರು ಮುಂತಾದವರೆಲ್ಲ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಇವರೆಲ್ಲ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ತಮ್ಮ ಉಳಿವಿಗಾಗಿ ಪ್ರಬುದ್ಧ ರೀತಿಯಲ್ಲಿ ಪ್ರಶ್ನೆಗಳನ್ನೆತ್ತಬೇಕಾಗಿದೆ ಮತ್ತು ಪ್ರತಿಭಟಿಸಲೇಬೇಕಾಗಿದೆ. ಮಕ್ಕಳು, ಯುವಕರು ವಾಟ್ಸಾಪುಗಳ ಮೂಲಕ ಹರಿದು ಬರುವ ಸುಳ್ಳು ಸುದ್ಧಿಗಳನ್ನು ನಂಬಿಕೊಂಡು ಅಭಿಪ್ರಾಯ ರೂಪಿಸಿಕೊಳ್ಳಬಾರದು. ನಾಡ ಹಿರಿಯರು, ಚಿಂತಕರು ಬರೆದ ಪುಸ್ತಕಗಳನ್ನು ಓದುವುದು, ಮಾತುಗಳನ್ನು ಕೇಳುವುದರ ಮೂಲಕ ಕತ್ತಲಿನಿಂದ ಹೊರಗೆ ಬರಬೇಕು. ಬಿಜೆಪಿಯು ಜ್ಞಾನದ್ವೇಷಿ ಪಕ್ಷ. ಸಹಬಾಳ್ವೆ, ಶಾಂತಿ, ಪ್ರೀತಿಯನ್ನು, ಸೌಹಾರ್ದವನ್ನು ಇಷ್ಟ ಪಡುವುದಿಲ್ಲ. ಇವ ನಮ್ಮವ ಎನ್ನದೆ ಇವನಾರವ ಎನ್ನುವುದು ಅದರ ತತ್ವ. ಬಡವರ, ರೈತರ, ಕಾರ್ಮಿಕರ, ಮಹಿಳೆಯರ, ದಮನಿತರ ಏಳಿಗೆ ಬಯಸುವುದು, ರಾಜ್ಯಗಳನ್ನು ಶಕ್ತಿಯುತಗೊಳಿಸುವುದು ಮೊದಲ ದೇಶಪ್ರೇಮ ಎನ್ನುದನ್ನದು ಒಪ್ಪುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುತ್ತಾ ಹಿಟ್ಲರನ ಜೊತೆಯಲ್ಲಿದ್ದ ಗೊಬೆಲ್ಸ್ ನಂತೆ ಸುಳ್ಳುಗಳನ್ನು ಪದೇ ಪದೇ ಹೇಳಿ ಕಾಗೆ ಬೆಳ್ಳಗಿದೆ ಎಂದು ನಂಬಿಸುತ್ತಿದ್ದಾರೆ. ಅರ್ಥ ಮಾಡಿಕೊಳ್ಳಬೇಕಾದವರು ಈಗ ಮೌನವಾದರೆ ನಮ್ಮ ಮುಂದಿನ ತಲೆಮಾರುಗಳ ಬದುಕು ಶಾಶ್ವತ ನರಕದಲ್ಲಿರುವಂತಾಗುತ್ತದೆ. ಬಿಜೆಪಿಯವರು ನರಕವನ್ನೇ ಸ್ವರ್ಗ ಎಂದು ಹೇಳಲು ಪ್ರಾರಂಭಿಸುತ್ತಾರೆ. ಈಗಾಗಲೇ ಅದನ್ನು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.

ಒಂದು ರಾಜ್ಯವೆಂದರೆ, ಒಂದು ಭಾಷೆಯೆಂದರೆ ಗಡಿ, ಭೂಪಟ, ಧ್ವಜ ಮಾತ್ರವಲ್ಲ. ಅಲ್ಲಿ ಬದುಕುತ್ತಿರುವ ಜನರ ಹಿತಾಸಕ್ತಿಯನ್ನು ಕಾಪಾಡುವುದೇ ನಿಜವಾದ ರಾಜ್ಯೋತ್ಸವ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕೆಲವೇ ವಿಚಾರಗಳನ್ನು ಜನರ ಮುಂದೆ ಇಡುವುದು ನನ್ನ ಕರ್ತವ್ಯ. ಈ ಮಾತುಗಳನ್ನು ನೀವು ಸಂಪೂರ್ಣ ಪರಾಮರ್ಶಿಸಿ ನೋಡಿ. ವಿಚಾರ ಮಾಡಿ ಒಪ್ಪಿಗೆಯಾದರೆ ಮಾತ್ರ ಸರಿಯೆನ್ನಿ. ಜ್ಞಾನವೇ ನಮ್ಮನ್ನು ಪೊರೆವ ಬಹಳ ದೊಡ್ಡ ಶಕ್ತಿ. ನಾಡಿನ ಹಿತಾಸಕ್ತಿ ರಕ್ಷಿಸಿಕೊಳ್ಳುವ ಮೂಲಕ ಜ್ಞಾನ- ವಿಜ್ಞಾನಗಳಲ್ಲಿ ದೇದಿಪ್ಯಮಾನವಾದ ನಾಡು ಕಟ್ಟೋಣ. ಅತ್ಯುತ್ತಮವಾದುದನ್ನು ಕಲಿಯುವ, ಒಳ್ಳೆಯ ಉದ್ಯೋಗ ಮಾಡುವ, ನಾಡಿನ ಜನರೆಲ್ಲ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸೋಣ. ಈಗ ಬಂದಿರುವ ಗಂಡಾಂತರವನ್ನು ಪರಿ ಹರಿಸಲು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗೂಡೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ಇದನ್ನೂ ಓದಿ: ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿರುವ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...