Homeಕರ್ನಾಟಕಗುಡ್ ನ್ಯೂಸ್: ಸುಡು ಬಿಸಿಲಿನಲ್ಲಿ ಗಿಡ ಮಾರುತ್ತಿದ್ದ ಅಜ್ಜನ ಮುಖದಲ್ಲಿ ಮಂದಹಾಸ ಮೂಡಿಸಿದ ಫೇಸ್‌ಬುಕ್ ಪೋಸ್ಟ್!

ಗುಡ್ ನ್ಯೂಸ್: ಸುಡು ಬಿಸಿಲಿನಲ್ಲಿ ಗಿಡ ಮಾರುತ್ತಿದ್ದ ಅಜ್ಜನ ಮುಖದಲ್ಲಿ ಮಂದಹಾಸ ಮೂಡಿಸಿದ ಫೇಸ್‌ಬುಕ್ ಪೋಸ್ಟ್!

ಫೇಸ್‌ಬುಕ್, ಟ್ವಿಟರ್‌ ಕೇವಲ ಮತ್ತೊಬ್ಬರನ್ನು ಟೀಕೆ ಮಾಡಲು, ಲೈಕ್, ಕಾಮೆಂಟ್‌ಗಳನ್ನು ಮಾಡಲು ಮಾತ್ರವಲ್ಲದೆ, ಈ ರೀತಿಯ ಜನಪರ ಕಾರ್ಯಗಳಿಗೂ ಬಳಕೆಯಾಗಲಿ ಎಂಬುದು ಹಲವರ ಅಭಿಮತ.

- Advertisement -
- Advertisement -

ಕೆಲವೊಮ್ಮೆ ನಾವು ರಸ್ತೆಯಲ್ಲಿ ಓಡಾಡುವಾಗ ರಸ್ತೆ ಬದಿಗೆ ಹರಿಸುವ ಒಂದು ಸಣ್ಣ ಗಮನ ಕೆಲವೊಬ್ಬರ ಜೀವನದಲ್ಲಿ ಭಾರಿ ಬದಲಾವಣೆ ತರಬಹುದು. ಇದಕ್ಕೆ ಉದಾಹರಣೆಯಾಗಿ ರಸ್ತೆಬದಿಯಲ್ಲಿ, ಬಿಸಿಲಿನಲ್ಲಿ, ಇಳಿವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ವೃದ್ಧರನ್ನು ಗಮನಿಸಿ ಬರೆದ ಫೇಸ್‌ಬುಕ್‌ ಪೋಸ್ಟ್ ಆವರ ಬದುಕನ್ನು ಬದಲಾಯಿಸಿದೆ.

ಹೌದು, ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋರೂಮ್ ಮುಂದೆ ಒಬ್ಬ ಅಜ್ಜ ಚಿಕ್ಕ ಚಿಕ್ಕ ಪ್ಯಾಕೇಟ್‌ಗಳಲ್ಲಿ ಗಿಡಗಳನ್ನು ಮಾರುತ್ತಿರುತ್ತಾರೆ. ಇವರು ಮಾರುವುದು ಎಲ್ಲಾ ಔಷಧಿಯ ಸಸ್ಯಗಳು ಎಂಬುದು ಗಮನಾರ್ಹ. ಆದರೆ ರಸ್ತೆಯಲ್ಲಿ ಓಡಾಡುವವರು ಇತ್ತ ಕಡೆ ಗಮನ ಇವರೆಡೆಗೆ ಹರಿಸುತ್ತಿದ್ದುದ್ದು ತುಂಬಾ ಕಡಿಮೆ.

ಈಗಿರುವಾಗ ಸುಡು ಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಗಿಡ ಮಾರುವ ಅಜ್ಜ, ಫೇಸ್‌ಬುಕ್ ಬಳಕೆದಾರ ಶಿವರಾಜ್ ಬಾಬು ಎಂಬುವರ ಕಣ್ಣಿಗೆ ಬಿದ್ದಿದ್ದಾರೆ. ಅಜ್ಜನ ಕುರಿತು 2 ಚಿತ್ರಗಳ ಜೊತೆಗೆ, ಸಹಾಯ ಮಾಡುವಂತೆ ಒಂದು ಮನವಿ ಪೋಸ್ಟ್ ಹಾಕಿದ್ದರು. ಅಜ್ಜನ ಬಳಿ ಇರುವ ಗಿಡಗಳ ಕುರಿತು, ರಸ್ತೆಯಲ್ಲಿ ಓಡಾಡುವಾಗ ಗಿಡ ತೆಗೆದುಕೊಂಡು ಸಹಾಯ ಮಾಡಿ ಎಂದಿದ್ದರು.

“ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋರೂಮ್ ಮುಂದೆ ಕೂತಿರುವ ಈ  ವೃದ್ಧನ ಹೆಸರು    ರೇವಣ್ಣಸಿದ್ದಪ್ಪ. ಈ ವಯಸ್ಸಿನಲ್ಲೂ ಭಿಕ್ಷೆ ಬೇಡದೆ ದುಡಿಯುವ ಹುಮ್ಮಸ್ಸು. ಇತನ ಬಳಿ ಇರುವುದು ಔಷಧಿ ಗಿಡಗಳು ಹಾಗೂ ವಿವಿಧ  ರೀತಿಯ ಗಿಡಗಳು. ದೊಡ್ಡ ಪತ್ರೆ, ಅಲೋವೆರಾ, ಕಾಮ ಸಂಜೀವಿನಿ, ಬ್ರಹ್ಮ ಕಮಲ  ಇತ್ಯಾದಿ ಗಿಡಗಳು. ಈ ರಸ್ತೆಯ ಬಳಿ ನೀವು ಹೋಗುವಾಗ ದಯವಿಟ್ಟು ಈ ವೃದ್ಧರ ಬಳಿ ಇರುವ ಗಿಡಗಳನ್ನು ತೆಗೆದುಕೊಂಡು ಹೋಗಿ ಈತನಿಗೆ ಸಹಾಯ ಮಾಡಿ. ಕೇವಲ 10 ರಿಂದ 30 ರೂಪಾಯಿ ಮಾತ್ರ” ಎಂದು ಫೋಸ್ಟ್ ಶೇರ್‌ ಮಾಡಿದ್ದರು.

ಫೇಸ್‌ಬುಕ್ ವೃದ್ಧರಿಗೆ ಸಹಾಯ
PC: screenshot@Shivaraj Babu

ಜೊತೆಗೆ “ನಂಬಿಕಸ್ತರಿಂದ ಮೋಸ ಹೋದೆವು ಎಂದು ಪ್ರಾಮಾಣಿಕರು ಚಿಂತಿಸಬೇಕಾಗಿಲ್ಲ!!!  ಏಕೆಂದರೆ  ಇತಿಹಾಸದಲ್ಲಿ ಉಳಿದಿರುವುದು ಪ್ರಾಮಾಣಿಕರೆ ಹೊರತು ಮೋಸಗಾರರಲ್ಲ!!!” ಎಂದು ಶೀರ್ಷಿಕೆ ಕೂಡ ನೀಡಿದ್ದರು. ಈ ಪೋಸ್ಟ್ ಎರಡು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಇದರ ಪ್ರತಿಫಲ ಇಂದು ಅಜ್ಜನ ಸ್ವಂತ ಪುಟ್ಟ ಅಂಗಡಿ ಆರಂಭವಾಗಿದೆ.

ಫೇಸ್‌ಬುಕ್‌ನಲ್ಲಿ ವಿಷಯ ತಿಳಿದ ಅನೇಕ ಮಂದಿ ವೃದ್ಧರ ಸಹಾಯಕ್ಕೆ ಮುಂದಾಗಿದ್ದಾರೆ. ನೆರಳಿಗಾಗಿ ಒಬ್ಬರು ದೊಡ್ಡ ಛತ್ರಿ ಒದಗಿಸಿದರೇ, ಇನ್ನೋಬ್ಬರು ಕುಳಿತುಕೊಳ್ಳು ಚೇರ್, ಗಿಡಗಳನ್ನು ಇಟ್ಟುಕೊಳ್ಳಲು ಟೇಬಲ್ ಹೀಗೆ ಅಜ್ಜನ ಹೊಸ ಪುಟ್ಟ ಅಂಗಡಿ ನಿರ್ಮಾಣವಾಗಿದೆ.

ನಟಿ, ಸಾಮಾಜಿಕ ಕಾರ್ಯಕರ್ತೆ ಸಂಯುಕ್ತ ಹೊರನಾಡು ತಮ್ಮ Change Makers of Kanakapura Road ತಂಡದ ಜತೆಗೂಡಿ ಆ ಅಜ್ಜನಿಗೆ ಒಂದು ಕೆನೊಪಿ, ಟೇಬಲ್ ಮತ್ತಿತರ ವಸ್ತುಗಳನ್ನು ಒದಗಿಸಿದ್ದಷ್ಟೇ ಅಲ್ಲದೇ  ಸಂಯುಕ್ತ ಅವರು ಒಂದಷ್ಟು ಗಿಡಗಳನ್ನು ಖರೀದಿಸಿದ್ದಾರೆ. ನಾವು ಅಶ್ವಿನಿ ಎಂಬುವರ ಟ್ವೀಟ್ ಗಮನಿಸಿ ಸಹಾಯಕ್ಕೆ ಬಂದಿದ್ದಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

PC: screenshot@Samyukta Hornad

ಸದ್ಯ ಅಜ್ಜ ಖುಷಿಯಲ್ಲಿದ್ದಾರೆ. ವೃದ್ಧರ ಬಗ್ಗೆ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಶಿವರಾಜ್ ಬಾಬು ಪೋಸ್ಟ್ ಶೇರ್ ಮಾಡಿ, ಅಜ್ಜನಿಗೆ ಸಹಾಯ ಮಾಡಿದ ಎಲ್ಲಾ ಬೆಂಗಳೂರು ಜನತೆಗೆ ಧನ್ಯವಾದ ಎಂದಿದ್ದಾರೆ.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

“ಧನ್ಯವಾದ ಬೆಂಗಳೂರು…. ವೃದ್ದನಿಗೆ ಸಹಾಯ ಮಾಡಿದ ಪ್ರತಿಯೊಬ್ಬ ರಿಗೂ ಧನ್ಯವಾದಗಳು.. ಶೇರ್ ಮಾಡಿ. ಈ ವಿಷಯವನ್ನು ನಮ್ಮ ಬೆಂಗಳೂರು ಜನತೆಗೆ ತಲುಪಿಸಿ ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದಿದ್ದಾರೆ.

Shivaraj Babu
PC: screenshot@Shivaraj Babu

ಇಂತಹ ಪುಟ್ಟ ಪುಟ್ಟ ಪ್ರಯತ್ನಗಳು ಸಾಕು ನಮ್ಮ ನಡುವೆ ಇರುವ ಎಷ್ಟೋ ಜೀವಗಳಿಗೆ ಸಹಾಯ ಮಾಡಲು ಎನ್ನುತ್ತಾರೆ ನೆಟ್ಟಿಗರು. ನಮ್ಮೊಳಗೆ ಒಂದು ಮನಸ್ಸಿದ್ದರೇ, ಇನ್ನೊಬ್ಬರ ನೋವಿಗೆ ಆಸರೆಯಾಗುವ ಕೊಂಚ ಸಹನೆಯಿದ್ದರೇ ಸಾಕು, ನಾವು ದಾರಿಯಲ್ಲಿ ನೋಡುವ ಒಂದು ಚಿಕ್ಕ ಚಿತ್ರಪಟ ಕೂಡ ಮತ್ತೊಂದು ಆಯಾಮವನ್ನು ಸೃಷ್ಟಿಸುತ್ತದೆ.

ಫೇಸ್‌ಬುಕ್, ಟ್ವಿಟರ್‌ ಕೇವಲ ಮತ್ತೊಬ್ಬರನ್ನು ಟೀಕೆ ಮಾಡಲು, ಲೈಕ್, ಕಾಮೆಂಟ್‌ಗಳನ್ನು ಮಾಡಲು ಮಾತ್ರವಲ್ಲ ಈ ರೀತಿಯ ಜನಪರ ಕಾರ್ಯಗಳಿಗೂ ಬಳಕೆಯಾಗಲಿ ಎನ್ನುವುದೇ ವೃದ್ಧರಿಗೆ ಸಹಾಯ ಮಾಡಿದವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಮಹಿಳೆಯರು ಕೆಲಸಕ್ಕೆ ಹೋಗಿದ್ದರಿಂದ METOO ಆರಂಭ: ಮುಖೇಶ್ ಖನ್ನಾ ಹೇಳಿಕೆಗೆ ತೀವ್ರ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...