Homeಪುಸ್ತಕ ವಿಮರ್ಶೆನಾವೆಲ್ಲರು ಓದಲೇಬೇಕಾದ ಪುಸ್ತಕ: 'ಎಲ್ಲರಿಗಾಗಿ ಸ್ತ್ರೀವಾದ - ಆಪ್ತತೆಯ ರಾಜಕಾರಣ'

ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಇಲ್ಲಿ ಚರ್ಚಿಸಿದ್ದಾರೆ.

- Advertisement -
- Advertisement -

ಅಮೆರಿಕದ ಕಪ್ಪು ಸಮುದಾಯದ ಪ್ರಖರ ಸ್ತ್ರೀವಾದಿ ಲೇಖಕಿ, ವಿಮರ್ಶಕಿ, ಚಿಂತಕಿ, ಹಾಗೂ ಮಹಿಳಾ ಚಳವಳಿಯಲ್ಲಿ ಸಕ್ರಿಯ ಹೋರಾಟಗಾರ್ತಿಯಾಗಿರುವ ಬೆಲ್ ಹುಕ್ಸ್ ಅವರು ‘ಫೆಮಿನಿಸಂ ಇಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ (2000) ಎಂಬ ಮಹತ್ವದ ಕೃತಿಯನ್ನು ಬರೆದಿದ್ದಾರೆ. ಇದು ಸ್ತ್ರೀವಾದವನ್ನು ಮರುಪರಿಶೀಲನೆಗೆ ಒಳಪಡಿಸುತ್ತಲೇ ಅನೇಕ ಸಾಂಪ್ರದಾಯಿಕ ಧೋರಣೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ. ಅಮೆರಿಕದ ಸ್ತ್ರೀವಾದಿ ಚಳವಳಿಗೆ ಹೊಸ ದಾರ್ಶನಿಕತೆಯನ್ನು ನೀಡಿರುವ ಈ ಕೃತಿಯನ್ನು ಕನ್ನಡದ ಮುಖ್ಯ ಸ್ತ್ರೀವಾದಿ ಚಿಂತಕಿಯಾದ ಡಾ. ಎಚ್. ಎಸ್. ಶ್ರೀಮತಿಯವರು ಅತ್ಯಂತ ಲವಲವಿಕೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಮೆರಿಕದ ಒಂದು ಸಾಂಪ್ರದಾಯಿಕ ಮೂಲಭೂತವಾದಿ ಕುಟುಂಬದಲ್ಲಿ ಹುಟ್ಟಿದ ಬೆಲ್ ಹುಕ್ಸ್ ಬಾಲ್ಯದಿಂದಲೇ ವರ್ಗ, ಜನಾಂಗೀಯ ಹಾಗೂ ಲಿಂಗ-ಈ ಮೂರು ನೆಲೆಯಿಂದಲೂ ತಾರತಮ್ಯತೆಯನ್ನು ಸ್ವತಃ ಅನುಭವಿಸಿದರು. ತಾವು ಓದುವ ಕಾಲೇಜಿನಲ್ಲಿಯೂ ಒಬ್ಬಳೇ ಕಪ್ಪು ಮಹಿಳೆಯಾಗಿ ಅಪಮಾನಗಳನ್ನು ಎದುರಿಸಿದರು. ಅಸಮಾನತೆಯ ವ್ಯವಸ್ಥೆಯಲ್ಲಿಯೇ ಬೆಲ್ ಹುಕ್ಸ್ ತಮ್ಮ ಗಟ್ಟಿಯಾದ ಸ್ತ್ರೀವಾದಿ ನಿಲುವುಗಳನ್ನು ರೂಪಿಸಿಕೊಂಡರು. ಈ ಕೃತಿಯಲ್ಲಿ ಬೆಲ್ ಹುಕ್ಸ್‌ರವರ ಆತ್ಮಕಥಾನಕದ ಕೆಲವು ಎಳೆಗಳು ಸೇರಿಕೊಂಡಿದ್ದರೂ ಅವರೆಲ್ಲೂ ಭಾವುಕರಾಗುವುದಿಲ್ಲ. ಅವರು ಎದುರುಗೊಂಡ ಅವಮಾನಗಳನ್ನು ವೈಯಕ್ತಿಕವಾಗಿಯಷ್ಟೇ ಪರಿಭಾವಿಸಿಕೊಳ್ಳದೆ ಒಟ್ಟಾರೆ ಸ್ತ್ರೀವಾದಿ ಚಳವಳಿಯ ಹಾಸಿನಲ್ಲಿಟ್ಟು ನೋಡುವ ವ್ಯವಧಾನವನ್ನು ಪಡೆದುಕೊಂಡಿದ್ದಾರೆ. ಅವರ ಬದುಕು ಹೆಚ್ಚು ಸ್ತ್ರೀವಾದಿ ಚಳವಳಿಯೊಂದಿಗೆ ತಳುಕು ಹಾಕಿಕೊಂಡು ಸಾರ್ವಜನಿಕ ಆಯಾಮವನ್ನು ಪಡೆದುಕೊಂಡಿದೆ. ಈ ಕೃತಿಯು ಅಮೆರಿಕದಂತಹ ಅತ್ಯಾಧುನಿಕ ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕಪ್ಪು ಮಹಿಳೆಯರ ಅಸ್ಮಿತೆಯನ್ನು ನಿರ್ಲಿಪ್ತವಾಗಿ ಶೋಧಿಸುತ್ತದೆ. ಅವರು ಎಲ್ಲಿಯೂ ಕೂಡ ಪುರುಷರ ಬಗ್ಗೆ ದ್ವೇಷವನ್ನು ಕಾರುವುದಿಲ್ಲ. ಪುರುಷ ಪ್ರಧಾನತೆಯ ಅಧಿಕಾರದಿಂದ ನಡೆಯುವ ಹಿಂಸೆ, ದಬ್ಬಾಳಿಕೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಪರ್ಯಾಯ ಚಿಂತನಧಾರೆಗಳನ್ನು ಈ ಕೃತಿಯುದ್ದಕ್ಕೂ ಮಂಡಿಸುತ್ತ ಹೋಗಿದ್ದಾರೆ.

ಪಿತೃಪ್ರಧಾನತೆಯನ್ನು ಹೊಂದಿರುವ ಸಮಾಜದಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರು ಮಹಿಳೆಯರು ಬಲಿಪಶುಗಳಾಗಿರುತ್ತಾರೆ. ಆದ್ದರಿಂದಲೇ ಮಹಿಳೆಯರ ಸಮಾನತೆಯ ಹಕ್ಕುಗಳಿಗಾಗಿ ಸ್ತ್ರೀವಾದಿ ಚಳವಳಿಗಳು ಹುಟ್ಟಿಕೊಂಡವು. ಅದರಲ್ಲಿಯೂ ಮುಖ್ಯವಾಗಿ ಅಮೆರಿಕದ ಬಿಳಿಯ ಮಹಿಳೆಯರು ಶುರುವಿನಲ್ಲಿ ನಡೆಸಿದ ಸ್ತ್ರೀವಾದಿ ಹೋರಾಟಗಳು ಜನಾಂಗ, ವರ್ಗ ಹಾಗೂ ಲಿಂಗ ತಾರತಮ್ಯತೆಯ ವಿರುದ್ಧವಾಗಿ ಸೆಣಸುವ ಉದಾರವಾದಿ ಆಶಯಗಳನ್ನು ಹೊಂದಿದ್ದರು. ಆದರೆ ಆಳದಲ್ಲಿ ಅವರು ಪೂರ್ವಗ್ರಹಪೀಡಿತ ಮನಸ್ಥಿತಿಯವರಾಗಿದ್ದರು. ಯಾಕೆಂದರೆ ಅವರ ಚಿಂತನೆಗಳು ಸ್ವಹಿತಾಸಕ್ತಿಯಿಂದ ಮುಕ್ತವಾಗಿರಲಿಲ್ಲ. ಇಂತಹ ಹಲವು ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವ ಬೆಲ್ ಹುಕ್ಸ್‌ರವರು ಅಮೆರಿಕದ ಸ್ತ್ರೀವಾದಿ ಚಳವಳಿಯ ಸಂಕುಚಿತ ಮನೋಧರ್ಮವನ್ನು ನಿಷ್ಠುರವಾದ ವಿಮರ್ಶಾತ್ಮಕ ಧಾಟಿಯಲ್ಲಿ ಬಯಲಿಗೆಳೆದರು. ಅನುಕಂಪದ ‘ಸೋದರಿತ್ವ’ ತತ್ವದಡಿಯಲ್ಲಿ ಬಿಳಿಯ ಮಹಿಳೆಯರು ಕಪ್ಪು ಮಹಿಳೆಯರ ಪರವಾಗಿ ಸಮಾನತೆಯ ಮಾತುಗಳನ್ನಾಡುತ್ತಲೇ ಅವರನ್ನು ತಮ್ಮ ಅಧೀನತೆಗೆ ಪಳಗಿಸಿಕೊಂಡಿದ್ದ ರಾಜಕಾರಣವನ್ನು ನಿರ್ಭೀತಿಯಿಂದ ಬರೆದರು. ಒಂದು ಕಡೆಯಲ್ಲಿ ಅವರು ಪುರುಷ ಪ್ರಧಾನತೆಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದರು ಹಾಗೂ ಮತ್ತೊಂದೆಡೆಯಲ್ಲಿ ಜನಾಂಗಿಯ ಭೇದಭಾವವನ್ನು ಪೋಷಿಸುತ್ತಿದ್ದ ವೈರುಧ್ಯವನ್ನು ದಿಟ್ಟವಾಗಿ ತಮ್ಮ ಕೃತಿಯಲ್ಲಿ ತೆರೆದಿಟ್ಟರು. ಕಪ್ಪು ಮಹಿಳೆಯ ದೃಷ್ಟಿಕೋನದಿಂದ ಸ್ತ್ರೀವಾದ ಚಳವಳಿಗೆ ವಿಸ್ಕೃತವಾದ ಆಯಾಮಗಳನ್ನು ಜೋಡಿಸಿದರು.

ಭಾರತದ ಸಂದರ್ಭದಲ್ಲಿ ಜಾತಿವ್ಯವಸ್ಥೆಯು ಎಲ್ಲ ಶೋಷಣೆಗಳ ಮೂಲವಾಗಿರುತ್ತದೆ. ನಮ್ಮಲ್ಲಿ ಎಲ್ಲ ವರ್ಗದ ಹೆಂಗಸರು ದಮನಿತರೇ ಆಗಿದ್ದಾರೆ. ಆದರೆ ದಲಿತ ಮಹಿಳೆಯರು ಜಾತಿ, ವರ್ಗ ಹಾಗೂ ಲಿಂಗದ ನೆಲೆಯಿಂದ ದಿನದಿತ್ಯವೂ ಪುರುಷ ದಬ್ಬಾಳಿಕೆಯನ್ನು ಅನುಭವಿಸುತ್ತಿರುತ್ತಾರೆ. ಇದನ್ನೆಲ್ಲ ಗಮನಿಸಿದರೆ ನಮ್ಮಲ್ಲಿ ಸ್ತ್ರೀವಾದಿ ಚಳವಳಿಯು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಉಳಿದುಕೊಂಡಿದೆ. ಸ್ತ್ರೀವಾದದ ಚರ್ಚೆಯೆಂದರೆ ಅದು ಕೇವಲ ಸಾಹಿತ್ಯ ಕೃತಿಗಳಿಗೆ ಹಾಗೂ ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾಗಿದೆ. ಅಷ್ಟಿಷ್ಟು ನಡೆದ ಅಧ್ಯಯನಗಳು ಪ್ರಧಾನವಾಹಿನಿಗೆ ಬರುತ್ತಿಲ್ಲ. ಎಲ್ಲ ವರ್ಗದ ಜನಸಾಮಾನ್ಯರಿಗೆ ಸ್ತ್ರೀವಾದವನ್ನು ಕುರಿತು ಅರಿವನ್ನು ನೀಡುವ ಪುಸ್ತಕಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಎಚ್.ಎಸ್. ಶ್ರೀಮತಿಯವರು ಚಿಮಮಾಂಡ ನ್‍ಗೊಜಿ ಅಡಿಚಿಯವರ ‘ವಿ ಆಲ್ ಶುಡ್ ಬಿ ಫೆಮಿನಿಸ್ಟ್’ ಎಂಬ ಉಪನ್ಯಾಸವನ್ನು ಭಾಷಾಂತರಿಸಿ ‘ನಾವೆಲ್ಲರೂ ಸ್ತ್ರೀವಾದಿಗಳಾಗಬೇಕು’ ಎಂಬ ಪುಟ್ಟ ಕೃತಿಯನ್ನು ನೀಡಿದ್ದಾರೆ. ಇದೇ ದಾರಿಯಲ್ಲಿ ಬೆಲ್ ಹುಕ್ಸ್ ಅವರ ಕೃತಿಯು ಸ್ತ್ರೀವಾದಿ ಶಿಕ್ಷಣದ ತರಬೇತಿಯನ್ನು ನೀಡುತ್ತದೆ. ಇಂತಹ ಕೃತಿಗಳು ಹೆಚ್ಚೆಚ್ಚು ಕನ್ನಡದಲ್ಲಿ ಬರಬೇಕಾಗಿದೆ ಹಾಗೂ ಅವು ಸುಲಭವಾಗಿ ಓದುಗರಿಗೆ ಕೈಗೆಟಕುವ ವ್ಯವಸ್ಥೆಯಾಗಬೇಕಿದೆ.

ನಮ್ಮ ಶಾಲಾಕಾಲೇಜುಗಳ ಶೈಕ್ಷಣಿಕ ಪಠ್ಯಗಳು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿವೆ. ಇನ್ನು ಸ್ತ್ರೀವಾದಿ ಆಲೋಚನೆಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಅಂಗವಾಗಿಲ್ಲ. ಮನೆಯಿಂದಲೇ ಹೆಣ್ಣುಮಕ್ಕಳನ್ನು ತರತಮ ಭಾವನೆಯಿಂದ ಬೆಳೆಸಲಾಗುತ್ತದೆ. ಶಾಲಾ ಕಾಲೇಜುಗಳು ಇದೇ ಲಿಂಗತಾರತಮ್ಯವನ್ನು ಪೋಷಿಸಿಕೊಂಡು ಹೋಗುತ್ತಿವೆ. ಇದರಿಂದಾಗಿ ಹೆಣ್ಣನ್ನು ಎರಡನೇ ದರ್ಜೆಯಲ್ಲಿಡುವ ಕೀಳು ಪ್ರಜ್ಞೆಯು ಜಾಗೃತವಾಗಿರುತ್ತದೆ. ಪಿತೃಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯುವುದರಿಂದ ಮಹಿಳೆಯರ ಮೇಲಿನ ಯಜಮಾನಿಕೆಯು ಅವ್ಯಾಹತವಾಗಿ ಮುಂದುವರೆಯುತ್ತದೆ. ಅದಕ್ಕಾಗಿಯೇ ಸ್ತ್ರೀವಾದದ ಕನಿಷ್ಟ ಶಿಕ್ಷಣವಾದರು ಗಂಡು ಮಕ್ಕಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಹೆಣ್ಣು-ಗಂಡುಗಳ ನಡುವಿನ ಸಾಮರಸ್ಯದ ಅರಿವಿಗಾಗಿ ‘ಎಲ್ಲರಿಗಾಗಿ ಸ್ತ್ರೀವಾದ’ ಕೃತಿಯು ಒಂದು ಮುಖ್ಯವಾದ ಕೈಪಿಡಿಯಾಗಿದೆ.

‘ಎಲ್ಲರಿಗಾಗಿ ಸ್ತ್ರೀವಾದ’ವು ಬರಿ ಅಮೆರಿಕನ್ ಸ್ತ್ರೀವಾದಿ ಚಳವಳಿಯನ್ನಷ್ಟೆ ಗಮನದಲ್ಲಿಟ್ಟುಕೊಂಡು ರಚನೆಯಾದ ಕೃತಿಯಲ್ಲ. ಜಾಗತಿಕ ಸ್ತ್ರೀವಾದವನ್ನು ವಿಮರ್ಶಿಸುತ್ತಲೇ ಆಯಾ ಕಾಲಘಟ್ಟದ ಚಳವಳಿಯ ಮಿತಿಗಳನ್ನು ಕಾಣಿಸಲಾಗಿದೆ. ಸಾಮಾಜೀಕರಣದ ಭಾಗವಾಗಿ ಹೆಣ್ಣನ್ನು ಪಳಗಿಸಿ ಅಧೀನವಾಗಿಸಿಕೊಳ್ಳುವ ಲೈಂಗಿಕತಾವಾದದಿಂದ ಹೊರಬರುವುದರ ಬಗ್ಗೆ ಸಾಕಷ್ಟು ಒಳನೋಟಗಳಿವೆ. ಪುರುಷರ ಕಣ್ಣಳತೆಯಲ್ಲಿ ತಮ್ಮ ದೇಹ ಮತ್ತು ಸೌಂದರ್ಯವನ್ನು ಪರಿಭಾವಿಸಿಕೊಳ್ಳುವ ಮಹಿಳೆಯು ಪಿತೃಪ್ರಧಾನತೆಯನ್ನು ಒಪ್ಪಿಕೊಂಡವರೇ ಆಗಿರುತ್ತಾರೆ. ಸಮೂಹ ಮಾಧ್ಯಮಗಳು ಹಾಗೂ ಜಾಹಿರಾತುಗಳು ಹೆಣ್ಣಿನ ಬಳಕುವ ದೇಹವನ್ನೇ ಬಂಡವಾಳವಾಗಿಸಿಕೊಂಡು ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಂಡಿವೆ. ಹೆಣ್ಣಿಗೆ ತನ್ನ ದೇಹ ಹಾಗೂ ಲೈಂಗಿಕತೆಯ ಮೇಲೆ ಅವಳದ್ದೇ ಹಕ್ಕುಗಳಿರಬೇಕು ಎಂಬುದನ್ನು ಎಲ್ಲ ಸ್ತ್ರೀವಾದಿಗಳು ಹೇಳುವ ಮಾತಾಗಿದೆ. ಆದರೆ ಅನೇಕ ಮಹಿಳೆಯರು ಕೂಡ ಪಿತೃಪ್ರಧಾನತೆಯ ಮೌಲ್ಯಗಳನ್ನು ಹಾಗೂ ಯಜಮಾನಿಕೆಯನ್ನು ಬೆಂಬಲಿಸುವವರಾಗಿರುತ್ತಾರೆ. ಇಂತಹ ಪುರುಷನಿಷ್ಠ ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹಿಳೆಯರನ್ನು ಸ್ತ್ರೀವಾದಿಗಳೆಂದು ಕರೆಯಲಾಗದು. ಮಹಿಳೆಯರ ಮೂಲಕ ಮುಂದುವರೆಯುವ ಪುರುಷ ಪ್ರಧಾನತೆಯನ್ನು ಬೆಲ್ ಹುಕ್ಸ್ ತಮ್ಮ ಕೃತಿಯಲ್ಲಿ ಸಾಕಷ್ಟು ಕಟುವಾಗಿ ಮಿಮರ್ಶಿಸಿದ್ದಾರೆ.

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಚರ್ಚಿಸಿದ್ದಾರೆ. ಮಹಿಳೆಯನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾಗಬೇಕಾದರೆ ಗಂಡು ಪ್ರಧಾನ ನಿಲುವುಗಳಲ್ಲಿ ಪಲ್ಲಟವನ್ನು ತರಬೇಕಾಗುತ್ತದೆ. ಇದಕ್ಕಾಗಿ ವ್ಯಾಪಕವಾಗಿ ಸ್ತ್ರೀವಾದಿ ಪ್ರಜ್ಞಾ ತರಬೇತಿಯು ಬೇಕಾಗುತ್ತದೆ. ಸ್ತ್ರೀವಾದಿ ಚಿಂತನೆಗಳು ಎಲ್ಲರಿಗೂ ದಕ್ಕುವ ಹಾಗೆ ಮಾಡಬೇಕೆನ್ನುವ ಸಾಮಾಜಿಕ ಕಾಳಜಿಯು ಬೆಲ್ ಹುಕ್ಸ್‌ರವರ ಕೃತಿಯಲ್ಲಿ ಹರಡಿಕೊಂಡಿದೆ. ಬೆಲ್ ಹುಕ್ಸ್‌ರವರ ಸ್ತ್ರೀವಾದಿ ಆಲೋಚನೆಗಳನ್ನು ನಮ್ಮ ಪರಿಸರಕ್ಕೆ ಒಗ್ಗಿಸಿಕೊಂಡು ಚರ್ಚಿಸುವ ಅಗತ್ಯವಿದೆ. ಸದರಿ ಕೃತಿಯ ಅನುವಾದದಲ್ಲಿ ಬಳಕೆಯಾಗಿರುವ ಸ್ತ್ರೀವಾದಿ ಲೇಖಕಿಯರ ಬಗ್ಗೆ ಹಾಗೂ ಕೆಲವು ಪರಿಭಾಷೆಗಳ ಕುರಿತು ಅನುಬಂಧದಲ್ಲಿ ವಿವರಣೆಯನ್ನು ನೀಡಿದ್ದರೆ ಸಾಮಾನ್ಯ ಓದುಗರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು.

ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ
ಮೂಲ: ಬೆಲ್ ಹುಕ್ಸ್
ಕನ್ನಡಕ್ಕೆ: ಎಚ್.ಎಸ್. ಶ್ರೀಮತಿ
ಪ್ರಕಾಶಕರು: ಆಕೃತಿ ಪುಸ್ತಕ, ರಾಜಾಜಿನಗರ
ಪುಟ: 208 ಬೆಲೆ: 150 ರೂಪಾಯಿ

* ಡಾ. ಸುಭಾಷ್ ರಾಜಮಾನೆ

ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ ಇಂಗ್ಲಿಷ್ ಮರಾಠಿ, ಭಾಷೆಗಳನ್ನು ಬಲ್ಲ ಇವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಇಮೇಲ್ ವಿಳಾಸ [email protected]


ಇದನ್ನೂ ಓದಿ: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. It’s an interesting reading but one may have his or her differences. It’s neither easy nor difficult to reject the feminist perspective unless we seriously discuss alternate explanations to define the relationship between a male and a female

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...