Homeಮುಖಪುಟಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ 'ದಿ ಸೋಷಲ್ ಡೈಲೆಮಾ': ನಮಗೇನಾದರೂ ಪಾಠಗಳಿವೆಯೇ?

ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?

ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಅಪಾಯಗಳನ್ನು ನಾವೆಲ್ಲ ಅರ್ಥ ಮಾಡಿಕೊಂಡು, ಮಾನವೀಯತೆಯ, ನ್ಯಾಯದ ಹೋರಾಟದಲ್ಲಿ ಸೋಲುತ್ತಿದ್ದೇವೆ ಎಂಬ ಸತ್ಯವನ್ನು ಅರಿಗಿಸಿಕೊಳ್ಳಬೇಕಿದೆ.

- Advertisement -
- Advertisement -

“Its the gradual, slight, imperceptible change in our own behavior and perception ; that is the product.”

ನಾನೊಬ್ಬ ಸಿನೆಮಾ ಮನುಷ್ಯ. ಹಾಗಾಗಿ ಯಾವುದೇ ಸಿನೆಮಾ ನೋಡಿದಾಗ, ಆ ಚಿತ್ರ ಚೆನ್ನಾಗಿದೆಯೋ ಇಲ್ಲವೋ, ಚೆನ್ನಾಗಿದ್ದರೆ ಏಕೆ ಚೆನ್ನಾಗಿದೆ, ಅದು ಚೆನ್ನಾಗಿರುವುದಕ್ಕೆ ಯಾರ್‍ಯಾರ ಪಾತ್ರ ಎಷ್ಟು ಎಂಬುದರ ಬಗ್ಗೆ ಯೋಚಿಸುವುದು ನನಗೆ ಸ್ವಾಭಾವಿಕ. ಆದರೆ ಕೆಲವು ಸಿನೆಮಾಗಳನ್ನು ನೋಡಿ, ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ, ಈ ಚಿತ್ರ ನನ್ನ ಮೇಲೆ ಪರಿಣಾಮ ಏನು ಬೀರಿತು, ಸಮಾಜದ ಮೇಲೆ ಏನು ಪರಿಣಾಮ ಬೀರುತ್ತೆ, ಬೀರಬಹುದು ಎಂಬುದರ ಬಗ್ಗೆಯೇ ಯೋಚಿಸುವಂತಾಗುತ್ತದೆ. ದಿ ಸೋಷಲ್ ಡೈಲೆಮಾ ಇಂತಹದ್ದೇ ಒಂದು ಚಿತ್ರ.

It’s a market place which trades exclusively in human future. (ಇದೊಂದು ಮಾನವನ ಭವಿಷ್ಯದಲ್ಲಿ ವ್ಯಾಪಾರ ಮಾಡುವ ಮಾರುಕಟ್ಟೆ.)

ಈ ಚಿತ್ರವು ಸಾಮಾಜಿಕ ಜಾಲತಾಣದ ಹಲವಾರು ಆಯಾಮಗಳನ್ನು ಪರೀಕ್ಷಿಸುತ್ತೆ. ಅದರಲ್ಲಿ ಈ ಸಾಮಾಜಿಕ ಜಾಲತಾಣಗಳು ನಮ್ಮ ರಾಜಕೀಯವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದರ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ.
ಈ ಸಾಮಾಜಿಕ ಜಾಲತಾಣಗಳು ಮಾಡುವ ಅಪಾಯಕಾರಿ ಕೆಲಸಗಳಲ್ಲಿ ಒಂದು; ‘Confirmation bias’! ಅಂದರೆ ನಾವು ಯಾವುದೇ ಅಧ್ಯಯನ ಅಥವಾ ತನಿಖೆ ಇಲ್ಲದೇ ಏನೋ ಒಂದು ಊಹೆ ಅಥವಾ ತೀರ್ಮಾನ ಮಾಡಿಕೊಂಡಿರುತ್ತೇವೆ, ಅದಾದನಂತರ ಆ ತೀರ್ಮಾನಕ್ಕೆ ಇಂಬು ಕೊಡುವ ಉದಾಹರಣೆಗಳನ್ನೇ ನೋಡುತ್ತ ಅದನ್ನೇ ಅಧ್ಯಯನ ಎಂದು ತಿಳಿದುಕೊಂಡು, ಅಧ್ಯಯನ ಮಾಡುವುದಕ್ಕಿಂತ ಮುಂಚೆಯೇ ಬಂದ ತೀರ್ಮಾನವನ್ನು ಗಟ್ಟಿಗೊಳಿಸುತ್ತ ಹೋಗುತ್ತೇವೆ. ನಾನು ಪಾಠ ಮಾಡುವಾಗ ಹೀಗೆಲ್ಲ ಮಾಡಬಾರದು, ಸಾಮಾನ್ಯತೆಯಿಂದ ದೂರ ಬಂದು, ಸರಿಯಾದ ಅಧ್ಯಯನ ಮಾಡಬೇಕು ಎಂತೆಲ್ಲ ಹೇಳುತ್ತೇನೆ. ಈಗ ಸಾಮಾಜಿಕ ಜಾಲತಾಣದ ಕಿಂಗ್ ಆಗಿರುವ ಫೇಸ್‌ಬುಕ್‌ನಲ್ಲಿ ಆಗುತ್ತಿರುವುದೇನು ಅಥವಾ ಫೇಸ್‌ಬುಕ್ ಮಾಡುತ್ತಿರುವುದೇನು? ಈ Confirmation bias ಎಂಬ ಪ್ರಕ್ರಿಯೆಯನ್ನು ಮಹದಾಕಾರವಾಗಿ ಬೆಳೆಸುತ್ತಿದೆ. ಒಂದರ್ಥದಲ್ಲಿ ಈ ಪ್ರಕ್ರಿಯೆಯೊಂದನ್ನೇ ಹೆಚ್ಚಿಸುತ್ತಿದೆ ಎಂತಲೂ ಹೇಳಬಹುದು.

ಈ ಸಾಮಾಜಿಕ ಜಾಲತಾಣಗಳು ಮಾಡುವುದೇನು? ಇವುಗಳು ಒಬ್ಬ ವ್ಯಕ್ತಿಯನ್ನು ಮಾದರಿಯಾಗಿ(model) ಬದಲಿಸುತ್ತವೆ. ಆ ವ್ಯಕ್ತಿ ಸಾಮಾಜಿಕ ಜಾಲತಾಣಕ್ಕೆ ಸೇರಿದೊಡನೇ, ಅವನು ವ್ಯಕ್ತಿಯಾಗಿ ಉಳಿಯವುದಿಲ್ಲ. ಯಾವ್ಯಾವ ಜಾಹೀರಾತುದಾರರಿಗೆ ಆ ವ್ಯಕ್ತಿ ಮಾದರಿ ಎಂಬುದನ್ನು ನಿರ್ಧರಿಸಲಾಗುತ್ತದೆ. ಅವನ ಇಷ್ಟ, ಪ್ಯಾಷನ್, ದೃಷ್ಟಿಕೋನವನ್ನು ಕಂಡುಹಿಡಿದು ಅವನಿಗೆ ಯಾವ ಉತ್ಪನ್ನಗಳ ಜಾಹೀರಾತುಗಳನ್ನು ತೋರಿಸಬೇಕು, ಅವನು/ಳು ಆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯುವಂತೆ ಮಾಡಲು ಏನೆಲ್ಲ ತೋರಿಸಬೇಕು ಎಂಬುದನ್ನು ನಿರ್ಧರಿಸಿ, ಅವನು/ಳು ಹೆಚ್ಚೆಚ್ಚು ಸಮಯ ಅಲ್ಲಿಯೇ ಕಳೆಯುವಂತೆ ಮಾಡಲಾಗುತ್ತದೆ, ಅದರಿಂದ ಅವರ ವ್ಯಾಪಾರವೂ ಹೆಚ್ಚುತ್ತಲೇ ಇರುತ್ತದೆ.

ಇದರಲ್ಲಿ ಎರಡು ಅಂಶಗಳಿವೆ; ಒಂದು ಆ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ತಾನು ಕಳೆಯುವ ಸಮಯವನ್ನು ಹಾಗೂ ತಾನು ನೋಡುವ ಕಾಂಟೆಂಟ್‌ಅನ್ನು ತನ್ನ ಆಯ್ಕೆ ಅಂದುಕೊಂಡಿರುತ್ತಾಳೆ/ನೆ, ಆದರೆ ವಾಸ್ತವದಲ್ಲಿ ಅದು ಅವಳ/ನ ಆಯ್ಕೆ ಆಗಿರದೇ, ಸಾಮಾಜಿಕ ಜಾಲತಾಣದ್ದಾಗಿರುತ್ತೆ. ಹಾಗೂ ಇದೊಂದು ಗೀಳಾಗಿ ಪರಿವರ್ತನೆಯಾಗುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆ ಗೀಳಿನ ಪರಿಣಾಮಗಳೇನು ಎಂಬುದನ್ನು ಬೇರೆಯದಾಗಿ ಚರ್ಚೆ ಮಾಡಬೇಕಾಗುವುದು. ಇದು ಕೇವಲ ಉತ್ಪನ್ನಗಳ ಜಾಹೀರಾತಿಗೆ ಸೀಮಿತವಾಗಿದ್ದರೆ ಅಷ್ಟು ಸಮಸ್ಯೆಯಾಗಿರುತ್ತಿದ್ದಿಲ್ಲವೇನೋ?

There are only two industries that call their customers users; Illegal drugs and software.

ಈ ನಮ್ಮ ಇಡೀ ತಲೆಮಾರಿನ ಚಿಂತನೆಯೇ ಈ ಪ್ರಕ್ರಿಯೆಯನ್ನು ಅವಲಂಬಿಸಿದಂತಾಗಿದೆ. ನೀವ್ಯಾರೋ ಒಬ್ಬ ದ್ವೇಷ ಕುಕ್ಕುವ, ಅತ್ಯಂತ ಮೂರ್ಖತನದಿಂದ ಕೂಡಿದ ಭಾಷಣದ ಒಂದು ವೀಡಿಯೋ ನೋಡಿದಾಗ, ಅಂತಹದ್ದೇ ವೀಡಿಯೋಗಳು ನಿಮ್ಮ ಫೀಡ್‌ನಲ್ಲಿ ಪದೇ ಪದೇ ಕಾಣಿಸಿಕೊಳ್ಳತೊಡಗುತ್ತವೆ. ಒಂದು ವೇಳೆ ಆ ವ್ಯಕ್ತಿಗೆ ಆ ದ್ವೇಷಪೂರಿತ ಭಾಷಣದೊಂದಿಗೆ ಒಂದಿಷ್ಟು ಸಹಮತವಿದ್ದರೂ, ಪದೇ ಪದೇ ಅಂತಹದ್ದೇ ಬರಹಗಳು, ವಿಡಿಯೋಗಳನ್ನು ನೋಡಿ, ಆ ವಿಚಾರಧಾರೆಯಲ್ಲಿ ಕಡುನಂಬಿಕೆ ಹೊಂದಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಈಗ ಆಗುತ್ತಿರುವುದೂ ಅದೆ. ಇದರ ಸಮಗ್ರತೆ ಮತ್ತು ಪರಿಣಾಮವನ್ನು ಸಂಪೂರ್ಣವಾಗಿ ಅರಿಯಲು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜನರ ಸಂಖ್ಯೆಯನ್ನು ನೋಡಬೇಕು. ಭಾರತದ ಜನಸಂಖ್ಯೆ 138 ಕೋಟಿ, ಫೇಸ್‌ಬುಕ್ ಒಂದರಲ್ಲಿ ತಮ್ಮ ಖಾತೆಯನ್ನು ಹೊಂದಿರುವವರ ಸಂಖ್ಯೆ-56 ಕೋಟಿ. ಒಟ್ಟಾರೆ ವಿಶ್ವದಲ್ಲಿ 260 ಕೋಟಿ ಬಳಕೆದಾರರಿದ್ದಾರೆ ಫೇಸ್‌ಬುಕ್ಕಿಗೆ.

ಈಗ ಯೋಚಿಸಿ, ಶೇಕಡಾ ನಲವತ್ತಕ್ಕೂ ಹೆಚ್ಚು ಜನರ ವಿಚಾರಧಾರೆಯನ್ನು, ನಂಬಿಕೆಗಳನ್ನು, ನಿಲುವುಗಳನ್ನು ಈ ಒಂದು ಸಾಮಾಜಿಕ ಜಾಲತಾಣವು ಪ್ರಭಾವಿಸುತ್ತಿರುವ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳು ಇದನ್ನು ಹೇಗೆ, ಯಾವ ಮಟ್ಟದಲ್ಲಿ ಬಳಸುತ್ತಿರಬಹುದು. ನೆನಪಿಡಿ, ಈ ಭೂಮಿ ದುಂಡಗಿದೆ ಎಂಬ ಅಭಿಪ್ರಾಯವನ್ನು ಹೊಂದಿದ ವ್ಯಕ್ತಿಗೆ ಭೂಮಿ ಚಪ್ಪಟೆಯಾಗಿದೆ ಎಂದು ಹೇಳುವ ಯಾವ ಪೋಸ್ಟಗಳೂ ಕಾಣಿಸುವುದಿಲ್ಲ ಹಾಗೂ ಭೂಮಿ ಚಪ್ಪಟೆಯಾಗಿದೆ ಎಂಬ ಅಭಿಪ್ರಾಯದಲ್ಲಿ ನಂಬಿಕೆಯಿಟ್ಟವರಿಗೆ ದಿನಂಪೂರ್ತಿ ಆ ಅಭಿಪ್ರಾಯವನ್ನು ಗಟ್ಟಿಗೊಳಿಸುವ ಪೋಸ್ಟ್‌ಗಳೇ ಕಾಣುತ್ತಿರುತ್ತವೆ.

…..It’s the technology’s ability to bring out the worst in society…..

ಸಮಾಜ, ದೇಶ ಹಾಗೂ ಇಡೀ ವಿಶ್ವವೇ ಧೃವೀಕರಣಗೊಳ್ಳುತ್ತಿರುವ ಸಮಯದಲ್ಲಿ ಈ ಸಾಮಾಜಿಕ ಜಾಲತಾಣಗಳ ಪಾತ್ರವೇನಿತ್ತು ಹಾಗೂ ಇನ್ನು ಮುಂದೆ ಯಾವ ಪಾತ್ರ ವಹಿಸಬಹುದು ಎಂಬುದನ್ನು ಊಹಿಸಿಕೊಳ್ಳಿ. ಹಾಗೂ ಈ ಸಾಮಾಜಿಕ ಜಾಲತಾಣಗಳು ಒಬ್ಬ ಸರ್ವಾಧಿಕಾರಿಯ ಕೈಗೆ ಸಿಕ್ಕರೆ?

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ದ್ವೇಷ ಹೆಚ್ಚಿಸುವಲ್ಲಿ ಈ ಸಾಮಾಜಿಕ ಜಾಲತಾಣಗಳ ಪಾತ್ರ ಪ್ರಬಲವಾಗಿದೆ ಎನ್ನಲಾಗಿದೆ. ಅದರೊಂದಿಗೆ ಬ್ರೆಜಿಲ್‌ನಲ್ಲಿ ಬೋಲ್ಸೆನಾರೋ ಎಂಬ ಧೂರ್ತ ಚುನಾವಣೆಯಲ್ಲಿ ಗೆಲ್ಲುವುದರಲ್ಲೂ ಇವುಗಳೇ ಪ್ರಮುಖ ಪಾತ್ರ ವಹಿಸಿರಬಹುದಾಗಿದೆ.

ನೆನಪಿಡಿ, ಸುಳ್ಳುಸುದ್ದಿಗಳು ಇತರ ಸುದ್ದಿಗಳಿಗಿಂತ ಆರು ಪಟ್ಟು ಹೆಚ್ಚು ಪ್ರಸಾರಗೊಳ್ಳುತ್ತವೆ. ಈ ಸುಳ್ಳುಸುದ್ದಿಗಳು ಹೆಚ್ಚು ಜಾಹೀರಾತು ಅಂದರೆ ಹೆಚ್ಚು ಹಣ ತಂದುಕೊಡುತ್ತವೆ.

ನಾನೂ ಈ ಸಾಮಾಜಿಕ ಜಾಲತಾಣಗಳನ್ನು ಬಳಸುವವನೇ. (ಈ ಚಿತ್ರ ನೋಡಿದ ನಂತರ ಬಹುತೇಕ ಆಪ್‌ಗಳ ನೋಟಿಫಿಕೇಷನ್ ನಿರ್ಭಂದಿಸಿದ್ದೇನೆ.) ನನ್ನ ಸಾಮಾಜಿಕ ಜಾಲತಾಣಗಳಲ್ಲೂ ಇದರ ಪರಿಣಾಮ ಕಾಣುತ್ತಿದ್ದೇನೆ. ಒಂದು ವಿಚಾರಧಾರೆಯ, ಸೈದ್ಧಾಂತಿಕ ನಿಲುವಿನ ಪರ ವಿರೋಧದಲ್ಲಿ ಇರುವವರ ಕಂದರ ಹೆಚ್ಚಾಗುತ್ತಲೇ ಇದೆ. ನಾವೆಲ್ಲ ಒಬ್ಬ ರಾಜಕಾರಣಿ ಇಷ್ಟೊಂದು ಮೂರ್ಖನಾಗಿದ್ದಾನೆ, ದುಷ್ಟನಾಗಿದ್ದಾನೆ, ಜನವಿರೋಧಿಯಾಗಿದ್ದಾನೆ ಎಂಬಿತ್ಯಾದಿ ಪ್ರಮಾಣಗಳು ನಮಗೆ ದಿನವಿಡೀ ಸಿಗುತ್ತಿದ್ದರೂ, ಅವನ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿರುವುದನ್ನು ಕಂಡು ದಂಗಾಗಿರುವುದನ್ನು ಕಂಡಿದ್ದೇನೆ. ಅದಕ್ಕೆ ಕಾರಣ ಸರಳವಾಗಿದೆ; ಆ ರಾಜಕಾರಿಣಿಯನ್ನು ಇಷ್ಟಪಡುವ ವ್ಯಕ್ತಿಗೆ ಅವನ ವಿರೋಧಿಗಳಿಗೆ ಕಾಣಸಿಗುವ ಯಾವುದೇ ಪೋಸ್ಟ್‌ಗಳು ಕಾಣಿಸುತ್ತಿಲ್ಲ. ಇದಕ್ಕಿಂತ ಇನ್ನೊಂದು ದುರದೃಷ್ಟಕರ ಬೆಳವಣಿಗೆಯನ್ನೂ ಕಂಡಿದ್ದೇನೆ. ಜನವಿರೋಧಿ, ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದ ಸಮಯದಲ್ಲೂ, ನ್ಯಾಯಯುತ ಸಮಾಜವನ್ನು ಅಪೇಕ್ಷಿಸುವ, ಫ್ಯಾಸಿಸ್ಟ್ ವಿರೋಧಿಗಳಿಗೆ ತಮ್ಮ ಸೋಲಿನ ಅರಿವು ಆಗದೇ ಇರುವುದು. (sense of loss). ತಮ್ಮ ಸುತ್ತಲೆಲ್ಲಾ, ತಮ್ಮ ಅಭಿಪ್ರಾಯಗಳನ್ನು ಬೆಂಬಲಿಸುವ ವ್ಯಕ್ತಿಗಳೇ ಇರುವುದರಿಂದ ಹಾಗೂ ಈ ಸಾಮಾಜಿಕ ಜಾಲತಾಣಗಳು ಅವರ ನಿಲುವಿಗೆ ತಕ್ಕುದಾದ ಪೋಸ್ಟ್‌ಗಳನ್ನೇ ತೋರಿಸುತ್ತಿರುವುದರಿಂದ ಚುನಾವಣೆಯಲ್ಲಿ ಸೋತರೂ, ತಾವೇ ವಿಜಯಿ ಎಂಬ ಭಾವನೆಯಲ್ಲಿ ಇರುವ ಸಾಧ್ಯತೆ ಬಲವಾಗಿವೆ. ಅದರಿಂದ, ತಮ್ಮ ತಪ್ಪುಗಳನ್ನು ಅವಲೋಕಿಸುವ, ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗುತ್ತೆ.
ಹೀಗೆಯೇ ಮುಂದುವರೆದರೆ ಮುಂದೇನಾಗಬಹುದು?

ಸಿವಿಲ್ ವಾರ್ (ಅಂತರ್ಯುದ್ಧ) ಸ್ಥಿತಿಗೆ ತಲುಪಬಹುದು ಎಂದು ಕೆಲವರು ಹೇಳಿದರೆ, ಈ ಪ್ರಕ್ರಿಯೆ ಇಡೀ ನಾಗರಿಕತೆಯನ್ನು, ಪ್ರಜಾಪ್ರಭುತ್ವವನ್ನೂ ನಾಶಗೊಳಿಸಬಹುದು ಎಂದು ಕೆಲವರು ಹೇಳಿದ್ದಾರೆ. ಹೌದಾ? ಆ ಸ್ಥಿತಿಗೆ ನಿಜವಾಗಿಯೂ ತಲುಪಬಹುದಾ?

ಹೌದು ಮತ್ತು ಇಲ್ಲ. ಈಗಾಗಲೇ, ಒಂದು ವಿಚಾರಧಾರೆಯ ಎರಡೂ ಬದಿಯಲ್ಲಿ ಜನರು ಸಮನಾದ ಸಂಖ್ಯೆಯಲ್ಲಿ ಇದ್ದಲ್ಲಿ, ಖಂಡಿತವಾಗಿಯೂ ಆಗಬಹುದು. ಆದರೆ, ಒಂದು ವಿಚಾರಧಾರೆ ಅತ್ಯಂತ ಪ್ರಬಲವಾಗಿ, ಆ ವಿಚಾರಧಾರೆಯ ವಿರೋಧಿಗಳು ಅತ್ಯಂತ ಕಡಿಮೆ ಸಂಖ್ಯೆಯಲಿದ್ದರೆ?

ನಾಗರಿಕತೆ ಬದಲಾಗುತ್ತೆ, ಬಹುಸಂಖ್ಯಾತರ, ಬಲಿಷ್ಠರ ಮಾತಿಗೆ ಮಣಿಯಬೇಕಾಗುತ್ತೆ. ಇಂಗ್ಲಿಷಿನಲ್ಲಿ conforn ಎನ್ನುತ್ತಾರೆ. ಅನ್ಯಾಯಕ್ಕೆ ಒಳಗಾಗುವವರೇ, ತಮ್ಮ ಮೇಲೆ ಆಗುವ ಅನ್ಯಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಗೆ ತಲುಪಬಹುದಾಗಿದೆ. ಹಾಗೂ ಈ ಅನ್ಯಾಯ, ದೌರ್ಜನ್ಯ ಸಾವಿರಾರು ವರ್ಷಗಳವರೆಗೆ ಅವ್ಯಾಹತವಾಗಿ ನಡೆಯುವ ಸಾಧ್ಯತೆಯಿದೆ. ಇದನ್ನು ಊಹಿಸುವುದು ಅಷ್ಟು ಕಷ್ಟವಲ್ಲ; ನಮ್ಮ ದೇಶದ ಜಾತಿ ಪದ್ಧತಿ ನೋಡಿ.

ಹಾಗಾದರೆ ಏನು ಮಾಡಬೇಕು?
ಹಲವಾರು ಉತ್ತರಗಳನ್ನು ನೀಡಲಾಗುತ್ತಿದೆ; ಒಂದು, ಸಾಮಾಜಿಕ ಜಾಲತಾಣಗಳಿಂದ ಹೊರಬರುವುದು. ಆದರೆ ಇದು ಸುಲಭಸಾಧ್ಯವಲ್ಲ. ಏಕೆಂದು ವಿವರಿಸುವ ಅಗತ್ಯವಿಲ್ಲ.

ಸಾಮಾಜಿಕ ಜಾಲತಾಣಗಳೇ ಈ ಪೆಡಂಭೂತವನ್ನು (frankeisntein) ಸೃಷ್ಟಿಸಿವೆ, ಅವುಗಳೇ ನಿಯಂತ್ರಣ ಮಾಡಬೇಕು. ಹಾಗೂ ನಿಯಂತ್ರಣ ಮಾಡುವಂತೆ ಕಾನೂನುಗಳನ್ನು ತರಬೇಕು. ಸಾಮಾಜಿಕ ಜಾಲತಾಣಗಳ ಜಗತ್ತು ನಾಗಾಲೋಟದಲ್ಲಿ ಬೆಳೆದಿದೆ, ಅದರೆ ಅದಕ್ಕೆ ತಕ್ಕುನಾಗಿ ಸೈಬರ್ ಕಾನೂನುಗಳು ಪರಿಷ್ಕೃತಗೊಂಡಿಲ್ಲ. ಅವುಗಳನ್ನು ನಿಯಂತ್ರಣಗೊಳಿಸುವಂತೆ ಕಾನೂನುಗಳನ್ನು ತರಬೇಕು. (ಇದೂ ಸುಲಭವಲ್ಲ, ಏಕೆಂದರೆ ಈ ದೈತ್ಯಗಾತ್ರದ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡಲೆಂದೆ ಕಾನೂನುಗಳನ್ನು ರಚಿಸಲಾಗುವ ಸಾಧ್ಯತೆಯಿದೆ.
ಆದರೂ, ಕೆಲ ವರ್ಷಗಳ ಹಿಂದೆ ಫೇಸ್‌ಬುಕ್ ಎಂಬ ದೈತ್ಯ ಕಂಪನಿಯು ಫ್ರೀ ಬೇಸಿಕ್ಸ್ ಎಂಬ ಹೆಸರಿನಲ್ಲಿ ಒಂದು ಧೂರ್ತ ಯೋಜನೆಯನ್ನು ಹಮ್ಮಿಕೊಂಡಿತ್ತು. ಆಗ ಹಲವಾರು ಆಕ್ಟಿವಿಸ್ಟ್‌ಗಳು ಇದರ ವಿರುದ್ಧ ಕ್ಯಾಂಪೇನ್ ಮಾಡಿದ್ದರ ಪರಿಣಾಮವಾಗಿ, ಆ ಯೋಜನೆಗೆ ಅವಕಾಶ ಕೊಡಲಿಲ್ಲ.) ಮೂರನೆಯದಾಗಿ, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಲೇ, ಅವುಗಳ ಕುತಂತ್ರವನ್ನು ಅರಿತು, ನಮ್ಮ strategy ಯನ್ನು ಬದಲಿಸವುದು. ಅದಕ್ಕೆ ಸೂಚಿಸಿದ ಒಂದು ದಾರಿ, ತಮ್ಮ ವಿಚಾರಧಾರೆಗೆ ಒಪ್ಪಿಗೆಯಿಲ್ಲದವರನ್ನು, ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚಾಗಿ ಸಂಪರ್ಕ ಸಾಧಿಸುವುದು. ಅದರಿಂದ ವಾಸ್ತವದಲ್ಲಿ ಇತರರೂ ಒಪ್ಪುವಂತಹ ತಿಳಿವಳಿಕೆಗೆ ಬರುವ ಸಾಧ್ಯತೆಯಿದೆ. ಇದೂ ಸುಲಭಸಾಧ್ಯವಲ್ಲ, ಆದರೆ ನಾವುಗಳು ಸುಲಭವಾಗಿ ಮಾಡಬಹುದಾದ ಒಂದು ಕೆಲಸ ಇದೊಂದೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಅಪಾಯಗಳನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ಮಾನವೀಯತೆಯ, ನ್ಯಾಯದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆ ಎಂಬ ಸತ್ಯವನ್ನು ಅರಿಗಿಸಿಕೊಳ್ಳಬೇಕಿದೆ. ಆಗ, ಇನ್ನಷ್ಟು ದಾರಿಗಳು ಕಾಣಬಹುದು.

ಅಂದಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಳ್ಳುತ್ತಿರುವ, ಜೆಫ್ ಒರ್‍ಲೋವ್‌ಸ್ಕಿ ನಿರ್ದೇಶಿಸಿದ ಈ ಚಿತ್ರ ’ದಿ ಸೋಷಲ್ ಡೈಲೆಮಾ’ ಅನ್ನು ಎಲ್ಲರೂ ನೋಡಲೇಬೇಕಿದೆ.

  • ರಾಜಶೇಖರ್ ಅಕ್ಕಿ

ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...