Homeಮುಖಪುಟರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

- Advertisement -
- Advertisement -

ಜನರಿಂದ ಆರಿಸಿ ಬಂದ ಸರ್ಕಾರವು ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೇಶದ ಭದ್ರತೆ, ಪ್ರಜೆಗಳ ಸೌಖ್ಯವನ್ನು ಮೆರೆತು ಏನೇನೋ ತರ್ಕ, ಕುತರ್ಕ, ಚಿಂತನೆಗಳ ಕರ್ಫ್ಯೂವನ್ನು ಪ್ರಜೆಗಳ ಮೇಲೆ ಹೇರಲು ಹವಣಿಸುತ್ತಿದೆ. ದೇಶದ ಆರ್ಥಿಕತೆಯ ಕುಸಿತ ಆಡಳಿತ ವೈಫಲ್ಯ ಮರೆಮಾಚಲು ದಿಢೀರನೆ ಒಂದು ದೇಶ ಒಂದು ಚುನಾವಣೆ ಅನ್ನೋದು. ಒಂದು ದೇಶ ಒಂದೇ ಧರ್ಮ ಒಂದೇ ಭಾಷೆ ಒಂದೇ ತೆರಿಗೆ ಅಂತ ಹೆದರಿಸೋದು ಅವ್ಯಾಹತವಾಗಿ ನಡೆದಿದೆ.

ಇದೆಲ್ಲಾ ದೇಶದ ಐಕ್ಯತೆಯನ್ನು ವಿಘಟನೆಯತ್ತ ಕೊಂಡೊಯುತ್ತದಲ್ಲದೆ ಆಯಾ ಭಾಷಿಕರ ಅಸ್ಮಿತೆಯ ಆತ್ಮಹತ್ಯೆಯಾದಿತೆಂಬುದರ ಬಗ್ಗೆ ಚಿಂತಿಸುತ್ತಿಲ್ಲ. ನಿರ್ದಿಷ್ಟ ಚುನಾವಣೆಯಲ್ಲಿ ಗೆಲ್ಲಲು ಆಯಾ ಸಮುದಾಯಗಳಿಗೆ ನಿಗಮಮಂಡಳಿ ಪ್ರಾಧಿಕಾರಗಳನ್ನು ಮಾಡ ಹೊರಡುವುದೂ ನಡೆಯುತ್ತಿದೆ.

ಸಾಲದ್ದಕ್ಕೆ ಇಲ್ಲದ ’ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿ ಅಂತರಧರ್ಮೀಯ ಮದುವೆಗಳನ್ನು ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ. ’ಗೋಹತ್ಯೆ ನಿಷೇಧ’ ಜಾರಿಗೆ ತರುತ್ತೇವೆಂದು ಫರಮಾನು ಹೊರಡಿಸುತ್ತಾ ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳವರ ಮೇಲೆ ಸವಾರಿ ಮಾಡುವ ಚೋದ್ಯವೂ ನಡೆದಿದೆ. ಉತ್ತರ ಪ್ರದೇಶದಲ್ಲಿ ಜಾರಿಯಾಯಿತೆಂದು ’ಲವ್ ಜಿಹಾದ್ ಕಾಯ್ದೆ ತರಲು ಹೊರಟಿರುವ ಸರ್ಕಾರವೂ ಇದು ಅಸಂವಿಧಾನಿಕವೆಂದರಿಯದ್ದೇನಲ್ಲ. ನಿಗದಿಗೊಳಿಸಿದ ವಯೋಮಾನ ದಾಟಿದ ಪ್ರತಿ ಗಂಡು ಹೆಣ್ಣು ಇಷ್ಟಪಟ್ಟವರನ್ನು ವರಿಸುವ ಸ್ವಾತಂತ್ರ್ಯವಿದೆಯೆಂಬ ಕಾನೂನೇ ಇರುವಾಗ ನಿಯಮ ಹೇಗೆ ತರುತ್ತಾರಂತೆ! ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು, ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಪ್ರೇಮಿಸಿ ವರಿಸಬಾರದೆಂಬ ಯಾವ ಕಾಯ್ದೆ ಇದೆ? ಬಲವಂತ ಮತಾಂತರ ತಪ್ಪಿರಬಹುದು. ಇಷ್ಟಪಟ್ಟ ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲವೆಂದು ಸಂವಿಧಾನವೇ ಸಾರಿರುವಾಗ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕೇಕೆ? ಮನುಷ್ಯರನ್ನು ಮನುಷ್ಯ ಮಟ್ಟಿಸಿಕೊಳ್ಳದ, ಮಮತೆ ತೋರದ ಧರ್ಮ ಒಂದಿದ್ದರೆ ಅದರಲ್ಲೆ ಉಳಿಯಲು ಜಿಗುಪ್ಸೆಗೊಂಡು ಪ್ರೀತಿ ಸಾಮರಸ್ಯ ಸಮಾನತೆ ತೋರುವ ಯಾವ ಧರ್ಮವಾದರೇನು ಹೋಗುವುದು ಸಹಜವಲ್ಲವೆ. ಕನಿಷ್ಟ ಜೊತೆಗೆ ಕೂತು ಉಣ್ಣದವರ ನಡುವೆ ವಿವಾಹಗಳಾದವೆ? ಹೀಗಾಗಿಯೇ ಕಾಲಕಾಲಕ್ಕೆ ರೂಪಾಂತರಗಳಾಗಿವೆ. ಅಪಾರ ಬುದ್ಧಿಮತ್ತೆ ಇರುವ ಮಾನವತಾವಾದಿ ಅಂಬೇಡ್ಕರ್ ಅಂಥವರೇ ನೋವುಂಡು ಬೌದ್ಧಧರ್ಮಕ್ಕೆ ಮತಾಂತರಗೊಂಡರೆಂದಾಗ ಜಾತಿಯ ಅಟ್ಟಹಾಸ ಅಳೆವ ಮಾಪನವೆಲ್ಲಿಂದ ತರೋದು ಹೇಳಿ.

ಹಿಂದೆಂದಿಗಿಂತಲೂ ಇಂದು ಭಾರತದಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದಿಸುವ ಕಾರ್ಯ ಹೆಚ್ಚುತ್ತಿದೆ. ಧರ್ಮದ ಹೆಸರಿನಲ್ಲಿ ಮುಸ್ಲಿಂ ದ್ವೇಷವನ್ನು ವ್ಯವಸ್ಥಿತವಾಗಿ ಬಿತ್ತುವುದೂ ಸಹ ’ಜಿಹಾದಿ’ ಅಲ್ಲವೆ? ಜಿಹಾದಿಗೂ ಲವ್‌ಗೂ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೊ! ’ಜಿಹಾ’ ಅಂದರೆ ಇಷ್ಟೆ ಅನ್ಯಾಯದ ವಿರುದ್ಧ ಹೋರಾಟ, ಮುಸ್ಲಿಂ ಬಾಂಧವರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಾ ಅವರ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ, ಅವರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಪ್ರಯತ್ನಗಳಾಗುತ್ತಿರುವುದು ಜನಸಮಾನ್ಯರಿಂದಲ್ಲ. ಆಳುವ ಪ್ರಭುತ್ವದಿಂದಲೇ ಎಂದಾಗ ಯಾರ ಬಳಿ ದೂರುವುದು? ಮುಸ್ಲಿಂ ಹುಡುಗರು ಮಾತ್ರವೇ ಪ್ರೀತಿಸಿ ಮದುವೆಯಾಗಿಯೋ, ಆಗದೆಯೋ ಮೋಸ ಮಾಡುತ್ತಿದ್ದಾರೆಯೆ? ಹಿಂದೂಗಳಲ್ಲಿಯೂ ಅದೆಷ್ಟು ಅಂತರ್ಜಾತಿ ವಿವಾಹಗಳು ವಿಫಲವಾಗಿಲ್ಲ ಹೇಳಿ. ಸನಾತನವ್ಯಾಧಿಗಳಿಂದಾಗಿ ಮರ್ಯಾದಾ ಹತ್ಯೆಗಳು ನಡೆಯುತ್ತಿಲ್ಲವೆ.

ಯಾವನೋ ಮುಸಲ್ಮಾನನೊಬ್ಬ ಹಿಂದೂ ಹೆಣ್ಣೊಬ್ಬಳಿಗೆ ಮೋಸ ಮಾಡಿದನೆಂದಾದರೆ ಅವನನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸದೆ, ಲವ್ ಜಿಹಾದಿ ನಿಷೇಧ ಕಾಯ್ದೆಗೆ ಮುಂದಾಗೋದು ನೆಗಡಿಯಾಯಿತೆಂದು ಮೂಗು ಕತ್ತರಿಸಿಕೊಂಡಂತೆ. ಇದನ್ನು ಕಾನೂನಿಂದ ಮಾನ್ಯ ಮಾಡಲು ಸಾಧ್ಯವೇ? ಜಾತಿ ಧರ್ಮದ ಹೊರತಾಗಿಯೂ ಇಬ್ಬರ ನಡುವಿನ ವೈಯಕ್ತಿಕ ಸಂಬಂಧವನ್ನು ಅತಿಕ್ರಮಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲವೆಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದಾಗಿದೆ. ಇತ್ತೀಚಿಗೆ ಇಂತದ್ದೇ ಪ್ರೇಮ ಪ್ರಕರಣದಲ್ಲಿ ರಮ್ಯ ಮತ್ತು ವಾಜಿದಾಖಾನ್‌ರ ಅಂತರ್ಧರ್ಮಿಯ ವಿವಾದ ವಿಚಾರದಲ್ಲಿ ನ್ಯಾಯಾಮೂರ್ತಿ ಎಸ್. ಸುಜಾತ ಹಾಗೂ ಸಚಿನ್ ಶಂಕರ್ ಮಗದಮ್ ಅವರುಗಳಿದ್ದ ಪೀಠ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೂ ಸರ್ಕಾರ ಕಾಯ್ದೆ ತರಲು ಹೊರಟಿದೆ. ಇದು ಸ್ವಂತ ಆಲೋಚನೆಯೂ ಅಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ನಕಲು.

ಇನ್ನು ಗೋಹತ್ಯೆ ನಿಷೇಧದ ಮಾತು ಬೇರೆ. ಈ ವಿಷಯದಲ್ಲಾಗಲೇ ಧರ್ಮಧರ್ಮಗಳ ನಡುವೆ, ಜಾತಿಜಾತಿಗಳ ಮಧ್ಯೆ ಕೊಲೆಗಳೇ ಆಗಿವೆಯಾದರೂ ಹಗ್ಗಜಗ್ಗಾಟ ನಿಲ್ಲುವಂತಿಲ್ಲ. ಅನಾದಿಕಾಲದಲ್ಲಿ ಎಲ್ಲರೂ ಒಂದೇ ಜಾತಿಯವರೆ – ಬೇಟೆಯಾಡುವ ಬೇಡರು, ಎಲ್ಲಾ ಮಾಂಸಾಹಾರಿಗಳೇ. ಒಂದು ಕಾಲದಲ್ಲಿ ವೈದಿಕರೂ ಮಾಂಸಾಹಾರಿಗಳೇ ಎಂಬ ವಾದವೂ ಈಗ ಹಳೆಯದು. ನಾವು ಏನನ್ನು ಇಷ್ಟಪಟ್ಟು ಉಣ್ಣುತ್ತೇವೋ ಉಡುತ್ತೇವೋ ಹಾಗೆ ಮತಾಂತರವೋ ವೈಯಕ್ತಿಕ ಹಕ್ಕೆಂದು ಸಂವಿಧಾನದಲ್ಲಿ ಹೇಳಿದ್ದರೂ ಸರ್ಕಾರ ಜನರ ನೆಮ್ಮದಿಗೆ ಮತ್ತೆ ಮತ್ತೆ ಕೊಳ್ಳಿ ಇಡುವ ಯತ್ನ ಮಾಡುತ್ತಲೇ ಇದೆಯೇಕೆ? ಮುಸ್ಲಿಮರಲ್ಲಿ ಮಾತ್ರವೆ ಉಗ್ರರಿದ್ದಾರೆಯೇ? ಹಿಂದೂಗಳಲ್ಲಿ ಉಗ್ರರು, ಮೂಲಭೂತವಾದಿಗಳಿಲ್ಲವೇ? ಭಯೋತ್ಪಾದಕರು ಜಿಹಾದಿಗಳೂ ಮುಸ್ಲಿಮರಲ್ಲಿ ಮಾತ್ರವಿದ್ದಾರೆಂಬುದು ಪೂರ್ವಾಗ್ರಹಪೀಡಿತ ಅರ್ಧ ಸತ್ಯವಷ್ಟೆ.

ಇನ್ನು ಕ್ರಾಸ್ ಮದುವೆಗಳಾಗಿವೆ ಎಂದು ವಿರೋಧ ಪಕ್ಷದ ನಾಯಕರ ಮಾತಿಗೆ ಆಳುವ ರಾಜಕಾರಣಿಗಳು ಮುನಿದು ಹೊಗೆ ಹಾಕಿದ್ದಾರೆ. ಇಂತಹ ಮದುವೆಗಳು 600 ವರ್ಷ ಆಳಿದ ಮೊಘಲರ ಕಾಲದಲ್ಲೂ ನಂತರ 200 ವರ್ಷ ಆಳಿದ ಬ್ರಿಟಿಷರ ಕಾಲದಲ್ಲೂ ನಡೆದಿದೆ. ಇಲ್ಲಿರುವ ಬಹುತೇಕ ಮುಸ್ಲಿಮರು ಕ್ರಿಶ್ಚಿಯನ್ನರೂ ಕನ್ವರ್ಟೆಡ್ ಹಿಂದೂಗಳು. ಇಂತಹ ಕೇಸ್‌ಗಳು ವೇದಗಳ ಕಾಲದಲ್ಲೇ ನಡೆದಿವೆ, ವಸಿಷ್ಠ ಅರುಂಧತಿ, ಜಮದಗ್ನಿ ರೇಣುಕಾರ ವಿವಾಹಗಳಿಗೇನಂತೀರಿ?

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

ಹೀಗಂದರೆ ತಟ್ಟನೆ ಧರ್ಮದ್ರೋಹಿ, ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತದೆ. ಅಂಬೇಡ್ಕರ್ ಕೊಟ್ಟ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವೀಗ ನಡೆದಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಆಳುವವರ ಮುಖವಾಣಿಯಾಗಿದೆ. ವಿರೋಧ ಪಕ್ಷದಂತೆ ಧ್ವನಿ ಎತ್ತಬೇಕಾದ ದವರು ಆಳುವವರಿಗೆ ಮಾರಿಕೊಂಡು ಬಕೆಟ್ ಹಿಡಿದು ವಾಚಾಮಗೋಚರವಾಗಿ ಹೊಗಳಿ ಆಟ್ಟಕ್ಕೇರಿಸುತ್ತಾ ಅಸಹ್ಯ ಹುಟ್ಟಿಸುತ್ತಿದೆ. ಸರ್ಕಾರವಾಗಲಿ ಯಾರೇ ಅಗಲಿ ಕಾನೂನಿಗಿಂತ ಅತೀ ಅಲ್ಲವೆಂದು ತಿಳಿದೂ ಇಂತಹ ಕೆಲಸಕ್ಕೆ ಸರ್ಕಾರ ಕೈ ಹಾಕುವಲ್ಲಿ ಸದುದ್ದೇಶವಂತೂ ಕಾಣುತ್ತಿಲ್ಲ. ಎದೆ ಎಷ್ಟು ಇಂಚಿದೆ ಅನ್ನೋದು ದೊಡ್ಡ ವಿಷಯವಾಗದೆ ಮಿದುಳು ಎಷ್ಟಿದೆ ಎಂಬುದೀಗ ಸಾಬೀತಾಗಬೇಕಿದೆಯಲ್ಲವೆ.

  • ಡಾ. ಬಿ. ಎಲ್ ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. 26 ಕಾದಂಬರಿಗಳನ್ನು ಪ್ರಕಟಿಸಿದ್ದು ಈ ಪೈಕಿ 9 ಚಲನಚಿತ್ರಗಳಾಗಿವೆ. ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....