Homeಮುಖಪುಟರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

- Advertisement -
- Advertisement -

ಜನರಿಂದ ಆರಿಸಿ ಬಂದ ಸರ್ಕಾರವು ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೇಶದ ಭದ್ರತೆ, ಪ್ರಜೆಗಳ ಸೌಖ್ಯವನ್ನು ಮೆರೆತು ಏನೇನೋ ತರ್ಕ, ಕುತರ್ಕ, ಚಿಂತನೆಗಳ ಕರ್ಫ್ಯೂವನ್ನು ಪ್ರಜೆಗಳ ಮೇಲೆ ಹೇರಲು ಹವಣಿಸುತ್ತಿದೆ. ದೇಶದ ಆರ್ಥಿಕತೆಯ ಕುಸಿತ ಆಡಳಿತ ವೈಫಲ್ಯ ಮರೆಮಾಚಲು ದಿಢೀರನೆ ಒಂದು ದೇಶ ಒಂದು ಚುನಾವಣೆ ಅನ್ನೋದು. ಒಂದು ದೇಶ ಒಂದೇ ಧರ್ಮ ಒಂದೇ ಭಾಷೆ ಒಂದೇ ತೆರಿಗೆ ಅಂತ ಹೆದರಿಸೋದು ಅವ್ಯಾಹತವಾಗಿ ನಡೆದಿದೆ.

ಇದೆಲ್ಲಾ ದೇಶದ ಐಕ್ಯತೆಯನ್ನು ವಿಘಟನೆಯತ್ತ ಕೊಂಡೊಯುತ್ತದಲ್ಲದೆ ಆಯಾ ಭಾಷಿಕರ ಅಸ್ಮಿತೆಯ ಆತ್ಮಹತ್ಯೆಯಾದಿತೆಂಬುದರ ಬಗ್ಗೆ ಚಿಂತಿಸುತ್ತಿಲ್ಲ. ನಿರ್ದಿಷ್ಟ ಚುನಾವಣೆಯಲ್ಲಿ ಗೆಲ್ಲಲು ಆಯಾ ಸಮುದಾಯಗಳಿಗೆ ನಿಗಮಮಂಡಳಿ ಪ್ರಾಧಿಕಾರಗಳನ್ನು ಮಾಡ ಹೊರಡುವುದೂ ನಡೆಯುತ್ತಿದೆ.

ಸಾಲದ್ದಕ್ಕೆ ಇಲ್ಲದ ’ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿ ಅಂತರಧರ್ಮೀಯ ಮದುವೆಗಳನ್ನು ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ. ’ಗೋಹತ್ಯೆ ನಿಷೇಧ’ ಜಾರಿಗೆ ತರುತ್ತೇವೆಂದು ಫರಮಾನು ಹೊರಡಿಸುತ್ತಾ ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳವರ ಮೇಲೆ ಸವಾರಿ ಮಾಡುವ ಚೋದ್ಯವೂ ನಡೆದಿದೆ. ಉತ್ತರ ಪ್ರದೇಶದಲ್ಲಿ ಜಾರಿಯಾಯಿತೆಂದು ’ಲವ್ ಜಿಹಾದ್ ಕಾಯ್ದೆ ತರಲು ಹೊರಟಿರುವ ಸರ್ಕಾರವೂ ಇದು ಅಸಂವಿಧಾನಿಕವೆಂದರಿಯದ್ದೇನಲ್ಲ. ನಿಗದಿಗೊಳಿಸಿದ ವಯೋಮಾನ ದಾಟಿದ ಪ್ರತಿ ಗಂಡು ಹೆಣ್ಣು ಇಷ್ಟಪಟ್ಟವರನ್ನು ವರಿಸುವ ಸ್ವಾತಂತ್ರ್ಯವಿದೆಯೆಂಬ ಕಾನೂನೇ ಇರುವಾಗ ನಿಯಮ ಹೇಗೆ ತರುತ್ತಾರಂತೆ! ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು, ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಪ್ರೇಮಿಸಿ ವರಿಸಬಾರದೆಂಬ ಯಾವ ಕಾಯ್ದೆ ಇದೆ? ಬಲವಂತ ಮತಾಂತರ ತಪ್ಪಿರಬಹುದು. ಇಷ್ಟಪಟ್ಟ ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲವೆಂದು ಸಂವಿಧಾನವೇ ಸಾರಿರುವಾಗ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕೇಕೆ? ಮನುಷ್ಯರನ್ನು ಮನುಷ್ಯ ಮಟ್ಟಿಸಿಕೊಳ್ಳದ, ಮಮತೆ ತೋರದ ಧರ್ಮ ಒಂದಿದ್ದರೆ ಅದರಲ್ಲೆ ಉಳಿಯಲು ಜಿಗುಪ್ಸೆಗೊಂಡು ಪ್ರೀತಿ ಸಾಮರಸ್ಯ ಸಮಾನತೆ ತೋರುವ ಯಾವ ಧರ್ಮವಾದರೇನು ಹೋಗುವುದು ಸಹಜವಲ್ಲವೆ. ಕನಿಷ್ಟ ಜೊತೆಗೆ ಕೂತು ಉಣ್ಣದವರ ನಡುವೆ ವಿವಾಹಗಳಾದವೆ? ಹೀಗಾಗಿಯೇ ಕಾಲಕಾಲಕ್ಕೆ ರೂಪಾಂತರಗಳಾಗಿವೆ. ಅಪಾರ ಬುದ್ಧಿಮತ್ತೆ ಇರುವ ಮಾನವತಾವಾದಿ ಅಂಬೇಡ್ಕರ್ ಅಂಥವರೇ ನೋವುಂಡು ಬೌದ್ಧಧರ್ಮಕ್ಕೆ ಮತಾಂತರಗೊಂಡರೆಂದಾಗ ಜಾತಿಯ ಅಟ್ಟಹಾಸ ಅಳೆವ ಮಾಪನವೆಲ್ಲಿಂದ ತರೋದು ಹೇಳಿ.

ಹಿಂದೆಂದಿಗಿಂತಲೂ ಇಂದು ಭಾರತದಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದಿಸುವ ಕಾರ್ಯ ಹೆಚ್ಚುತ್ತಿದೆ. ಧರ್ಮದ ಹೆಸರಿನಲ್ಲಿ ಮುಸ್ಲಿಂ ದ್ವೇಷವನ್ನು ವ್ಯವಸ್ಥಿತವಾಗಿ ಬಿತ್ತುವುದೂ ಸಹ ’ಜಿಹಾದಿ’ ಅಲ್ಲವೆ? ಜಿಹಾದಿಗೂ ಲವ್‌ಗೂ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೊ! ’ಜಿಹಾ’ ಅಂದರೆ ಇಷ್ಟೆ ಅನ್ಯಾಯದ ವಿರುದ್ಧ ಹೋರಾಟ, ಮುಸ್ಲಿಂ ಬಾಂಧವರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಾ ಅವರ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ, ಅವರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಪ್ರಯತ್ನಗಳಾಗುತ್ತಿರುವುದು ಜನಸಮಾನ್ಯರಿಂದಲ್ಲ. ಆಳುವ ಪ್ರಭುತ್ವದಿಂದಲೇ ಎಂದಾಗ ಯಾರ ಬಳಿ ದೂರುವುದು? ಮುಸ್ಲಿಂ ಹುಡುಗರು ಮಾತ್ರವೇ ಪ್ರೀತಿಸಿ ಮದುವೆಯಾಗಿಯೋ, ಆಗದೆಯೋ ಮೋಸ ಮಾಡುತ್ತಿದ್ದಾರೆಯೆ? ಹಿಂದೂಗಳಲ್ಲಿಯೂ ಅದೆಷ್ಟು ಅಂತರ್ಜಾತಿ ವಿವಾಹಗಳು ವಿಫಲವಾಗಿಲ್ಲ ಹೇಳಿ. ಸನಾತನವ್ಯಾಧಿಗಳಿಂದಾಗಿ ಮರ್ಯಾದಾ ಹತ್ಯೆಗಳು ನಡೆಯುತ್ತಿಲ್ಲವೆ.

ಯಾವನೋ ಮುಸಲ್ಮಾನನೊಬ್ಬ ಹಿಂದೂ ಹೆಣ್ಣೊಬ್ಬಳಿಗೆ ಮೋಸ ಮಾಡಿದನೆಂದಾದರೆ ಅವನನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸದೆ, ಲವ್ ಜಿಹಾದಿ ನಿಷೇಧ ಕಾಯ್ದೆಗೆ ಮುಂದಾಗೋದು ನೆಗಡಿಯಾಯಿತೆಂದು ಮೂಗು ಕತ್ತರಿಸಿಕೊಂಡಂತೆ. ಇದನ್ನು ಕಾನೂನಿಂದ ಮಾನ್ಯ ಮಾಡಲು ಸಾಧ್ಯವೇ? ಜಾತಿ ಧರ್ಮದ ಹೊರತಾಗಿಯೂ ಇಬ್ಬರ ನಡುವಿನ ವೈಯಕ್ತಿಕ ಸಂಬಂಧವನ್ನು ಅತಿಕ್ರಮಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲವೆಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದಾಗಿದೆ. ಇತ್ತೀಚಿಗೆ ಇಂತದ್ದೇ ಪ್ರೇಮ ಪ್ರಕರಣದಲ್ಲಿ ರಮ್ಯ ಮತ್ತು ವಾಜಿದಾಖಾನ್‌ರ ಅಂತರ್ಧರ್ಮಿಯ ವಿವಾದ ವಿಚಾರದಲ್ಲಿ ನ್ಯಾಯಾಮೂರ್ತಿ ಎಸ್. ಸುಜಾತ ಹಾಗೂ ಸಚಿನ್ ಶಂಕರ್ ಮಗದಮ್ ಅವರುಗಳಿದ್ದ ಪೀಠ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೂ ಸರ್ಕಾರ ಕಾಯ್ದೆ ತರಲು ಹೊರಟಿದೆ. ಇದು ಸ್ವಂತ ಆಲೋಚನೆಯೂ ಅಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ನಕಲು.

ಇನ್ನು ಗೋಹತ್ಯೆ ನಿಷೇಧದ ಮಾತು ಬೇರೆ. ಈ ವಿಷಯದಲ್ಲಾಗಲೇ ಧರ್ಮಧರ್ಮಗಳ ನಡುವೆ, ಜಾತಿಜಾತಿಗಳ ಮಧ್ಯೆ ಕೊಲೆಗಳೇ ಆಗಿವೆಯಾದರೂ ಹಗ್ಗಜಗ್ಗಾಟ ನಿಲ್ಲುವಂತಿಲ್ಲ. ಅನಾದಿಕಾಲದಲ್ಲಿ ಎಲ್ಲರೂ ಒಂದೇ ಜಾತಿಯವರೆ – ಬೇಟೆಯಾಡುವ ಬೇಡರು, ಎಲ್ಲಾ ಮಾಂಸಾಹಾರಿಗಳೇ. ಒಂದು ಕಾಲದಲ್ಲಿ ವೈದಿಕರೂ ಮಾಂಸಾಹಾರಿಗಳೇ ಎಂಬ ವಾದವೂ ಈಗ ಹಳೆಯದು. ನಾವು ಏನನ್ನು ಇಷ್ಟಪಟ್ಟು ಉಣ್ಣುತ್ತೇವೋ ಉಡುತ್ತೇವೋ ಹಾಗೆ ಮತಾಂತರವೋ ವೈಯಕ್ತಿಕ ಹಕ್ಕೆಂದು ಸಂವಿಧಾನದಲ್ಲಿ ಹೇಳಿದ್ದರೂ ಸರ್ಕಾರ ಜನರ ನೆಮ್ಮದಿಗೆ ಮತ್ತೆ ಮತ್ತೆ ಕೊಳ್ಳಿ ಇಡುವ ಯತ್ನ ಮಾಡುತ್ತಲೇ ಇದೆಯೇಕೆ? ಮುಸ್ಲಿಮರಲ್ಲಿ ಮಾತ್ರವೆ ಉಗ್ರರಿದ್ದಾರೆಯೇ? ಹಿಂದೂಗಳಲ್ಲಿ ಉಗ್ರರು, ಮೂಲಭೂತವಾದಿಗಳಿಲ್ಲವೇ? ಭಯೋತ್ಪಾದಕರು ಜಿಹಾದಿಗಳೂ ಮುಸ್ಲಿಮರಲ್ಲಿ ಮಾತ್ರವಿದ್ದಾರೆಂಬುದು ಪೂರ್ವಾಗ್ರಹಪೀಡಿತ ಅರ್ಧ ಸತ್ಯವಷ್ಟೆ.

ಇನ್ನು ಕ್ರಾಸ್ ಮದುವೆಗಳಾಗಿವೆ ಎಂದು ವಿರೋಧ ಪಕ್ಷದ ನಾಯಕರ ಮಾತಿಗೆ ಆಳುವ ರಾಜಕಾರಣಿಗಳು ಮುನಿದು ಹೊಗೆ ಹಾಕಿದ್ದಾರೆ. ಇಂತಹ ಮದುವೆಗಳು 600 ವರ್ಷ ಆಳಿದ ಮೊಘಲರ ಕಾಲದಲ್ಲೂ ನಂತರ 200 ವರ್ಷ ಆಳಿದ ಬ್ರಿಟಿಷರ ಕಾಲದಲ್ಲೂ ನಡೆದಿದೆ. ಇಲ್ಲಿರುವ ಬಹುತೇಕ ಮುಸ್ಲಿಮರು ಕ್ರಿಶ್ಚಿಯನ್ನರೂ ಕನ್ವರ್ಟೆಡ್ ಹಿಂದೂಗಳು. ಇಂತಹ ಕೇಸ್‌ಗಳು ವೇದಗಳ ಕಾಲದಲ್ಲೇ ನಡೆದಿವೆ, ವಸಿಷ್ಠ ಅರುಂಧತಿ, ಜಮದಗ್ನಿ ರೇಣುಕಾರ ವಿವಾಹಗಳಿಗೇನಂತೀರಿ?

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

ಹೀಗಂದರೆ ತಟ್ಟನೆ ಧರ್ಮದ್ರೋಹಿ, ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತದೆ. ಅಂಬೇಡ್ಕರ್ ಕೊಟ್ಟ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವೀಗ ನಡೆದಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಆಳುವವರ ಮುಖವಾಣಿಯಾಗಿದೆ. ವಿರೋಧ ಪಕ್ಷದಂತೆ ಧ್ವನಿ ಎತ್ತಬೇಕಾದ ದವರು ಆಳುವವರಿಗೆ ಮಾರಿಕೊಂಡು ಬಕೆಟ್ ಹಿಡಿದು ವಾಚಾಮಗೋಚರವಾಗಿ ಹೊಗಳಿ ಆಟ್ಟಕ್ಕೇರಿಸುತ್ತಾ ಅಸಹ್ಯ ಹುಟ್ಟಿಸುತ್ತಿದೆ. ಸರ್ಕಾರವಾಗಲಿ ಯಾರೇ ಅಗಲಿ ಕಾನೂನಿಗಿಂತ ಅತೀ ಅಲ್ಲವೆಂದು ತಿಳಿದೂ ಇಂತಹ ಕೆಲಸಕ್ಕೆ ಸರ್ಕಾರ ಕೈ ಹಾಕುವಲ್ಲಿ ಸದುದ್ದೇಶವಂತೂ ಕಾಣುತ್ತಿಲ್ಲ. ಎದೆ ಎಷ್ಟು ಇಂಚಿದೆ ಅನ್ನೋದು ದೊಡ್ಡ ವಿಷಯವಾಗದೆ ಮಿದುಳು ಎಷ್ಟಿದೆ ಎಂಬುದೀಗ ಸಾಬೀತಾಗಬೇಕಿದೆಯಲ್ಲವೆ.

  • ಡಾ. ಬಿ. ಎಲ್ ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. 26 ಕಾದಂಬರಿಗಳನ್ನು ಪ್ರಕಟಿಸಿದ್ದು ಈ ಪೈಕಿ 9 ಚಲನಚಿತ್ರಗಳಾಗಿವೆ. ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...