Homeಮುಖಪುಟಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ - ಮೈಕೆಲ್ ಹಾನೆಕೆ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

- Advertisement -
- Advertisement -

ಸಿನಿಯಾನ: 04

ರಾಜಶೇಖರ್ ಅಕ್ಕಿ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ. ಆ ಕಥೆಯಲ್ಲಿ ಒಬ್ಬ ಹೀರೋ ಇರ್ತಾನೆ, ಒಬ್ಳು ಹೀರೋಯಿನ್ ಇರ್ತಾಳೆ, ಒಬ್ಬ ಖಳನಾಯಕ ಇರ್ತಾನೆ, ಪೋಷಕ ಪಾತ್ರಗಳಿರ್ತಾವೆ ಎಂತೆಲ್ಲಾ ನಾವು ಅಂದುಕೊಂಡಿದ್ದು. ನಂತರ ಸಿನೆಮಾ ಅಭ್ಯಸಿಸುತ್ತ ಹೋದತ್ತ ಡ್ರಾಮಾ, ಸ್ಟ್ರಕ್ಚರ್ ಎನ್ನುವ ಅಂಶಗಳು ನಮಗೆ ತಿಳಿದವು. ಯಾವುದೇ ಒಂದು ಕಥೆಯಲ್ಲಿ ಆರಂಭ, ಮಧ್ಯ, ಮುಕ್ತಾಯ ಇರುತ್ತವೆ ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಸಿನೆಮಾದ ಮೊದಲ ಇಪ್ಪತ್ತು ನಿಮಿಷಗಳವರೆಗೆ ಸೆಟ್‍ಅಪ್ ಅಂದರೆ ಪಾತ್ರಗಳು, ಆ ಪಾತ್ರಗಳ ಇರುವ ಸನ್ನಿವೇಶ ಇವೆಲ್ಲ ವೀಕ್ಷಕರಿಗೆ ತಿಳಿಯುತ್ತವೆ ಮುಂದಿನ ಸುಮಾರು ಒಂದು ಗಂಟೆಯ ವರೆಗೆ ಆ ಪಾತ್ರಗಳ ನಡುವಿನ ಸಂಘರ್ಷ ವ್ಯಕ್ತವಾಗಿ, ಆಯಾ ಪಾತ್ರಗಳು, ಮುಖ್ಯವಾಗಿ ನಾಯಕ(ಕಿ)ಯ ಪಾತ್ರ ಆ ಸಂಘರ್ಷವನ್ನು, ತನ್ನ ಗುರಿಗೆ ಇರುವ ತೊಡಕುಗಳನ್ನು ಹೇಗೆ ಎದುರಿಸುತ್ತವೆ ಎಂದೂ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಆ ಸಂಘರ್ಷ ಹೇಗೆ ನಿಷ್ಕರ್ಷವಾಗುತ್ತದೆ ಎಂದು ತಿಳಿಯುತ್ತದೆ. ಅನೇಕ ಚಿತ್ರಗಳಲ್ಲಿ ಸಂಘರ್ಷ ಬಾಹ್ಯವಾಗಿದ್ದರೆ ಕೆಲವು ಚಿತ್ರಗಳಲ್ಲಿ ಆಂತರಿಕವಾಗಿರುತ್ತದೆ ಅಂದರೆ ಆ ಪ್ರಮುಖ ಪಾತ್ರಕ್ಕೆ ತಾನೇ, ತನ್ನ ದೌರ್ಬಲ್ಯಗಳೇ ಮುಖ್ಯ ಶತ್ರುವಾಗಿದ್ದಾಗಿರುವಾಗ ಸಂಘರ್ಷ ಹುಟ್ಟಿಕೊಳ್ಳುತ್ತವೆ.

ನಮ್ಮಲ್ಲರಲ್ಲೂ ಅನೇಕ ಕಥೆಗಳಿರುತ್ತವೆ. ನಾವೆಲ್ಲರೂ ನಮ್ಮ ಸುತ್ತಮುತ್ತ ಆಗುತ್ತಿರುವ ಅನ್ಯಾಯ, ಸೋಜಿಗ, ಹೋರಾಟ, ಸಾಹಸಗಳನ್ನು ನೋಡಿ ಅನೇಕ ಕಥೆಗಳನ್ನು ಕಟ್ಟಿಕೊಂಡಿರುತ್ತೇವೆ, ಆಯಾ ಚಿತ್ರಗಳು ಮತ್ತು ಅದರಲ್ಲಿಯ ನಮ್ಮ ಒಳ್ಳೆಯತನ, ಕೆಟ್ಟತನ ಮುಂತಾದವುಗಳ ವ್ಯಾಖ್ಯೆಯ ಪರಿಧಿಯಲ್ಲಿ ಬರುತ್ತವೆ.

ಮೈಕೆಲ್ ಹಾನೆಕೆಯ ಚಿತ್ರಗಳನ್ನು ನೋಡಿದಾಗ ಇವೆಲ್ಲವುಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಕಥೆ ಎಂದರೇನು, ಅದರ ಪರಿಭಾಷೆ ಏನು, ನಾಯಕನ ಪಾತ್ರ ಹೇಗಿರಬೇಕು, ಅವನು ಏನಾದರೂ ಒಳ್ಳೆಯದನ್ನು ಬಿಂಬಿಸಬೇಕಲ್ಲವೇ ಅಥವಾ ಅದಕ್ಕಾಗಿ ಹೋರಾಡಬೇಕಲ್ಲವೇ, ನಾಯಕ ಕೆಟ್ಟವನಾಗಿದ್ದರೂ ಅವನೊಳಗೇ ಏನಾದರೂ ತುಮುಲಗಳಿರಬೇಕಲ್ಲವೇ, ಅವನ/ಳ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಲ್ಲವೇ, ಪ್ರಮುಖ ಪಾತ್ರ ಕೆಟ್ಟವನಾಗಿದ್ದರೆ ಇತರ ಪಾತ್ರಗಳಾದರೂ ಅದರ ವಿರುದ್ಧ ಮನಸ್ಥಿತಿಯನ್ನು ಹೊಂದಿ ಸಂಘರ್ಷ ನಿರ್ಮಾಣವಾಗನೇಕಲ್ಲವೇ, ಕೆಟ್ಟದ್ದು ಮತ್ತು ಒಳ್ಳೇದು ಎನ್ನುವವುದೇನಾದರೂ ಕಥೆಯಲ್ಲಿ ಇರಬೇಕಲ್ಲವೇ, ಚಿತ್ರಕ್ಕೆ ನೈತಿಕ ಸ್ಪಷ್ಟತೆ ಇರಬೇಕಲ್ಲವೇ? ಮೈಕೆಲ್ ಹಾನೆಕೆಯ ಸಿನೆಮಾ ನೋಡಿದರೆ ಇವಕ್ಕೆ ಯಾವುದೇ ಉತ್ತರ ಸಿಗುವುದಿಲ್ಲ; ಸಿಗುವುದು ಪ್ರಶ್ನೆಗಳಷ್ಟೆ.

ಮೈಕೆಲ್ ಹಾನೆಕೆ ಒಬ್ಬ ಆಸ್ಟ್ರಿಯಾದ ಚಿತ್ರನಿರ್ದೇಶಕ. ಇವರು 1942 ರಲ್ಲಿ ಜರ್ಮನಿಯಲ್ಲಿ ಹುಟ್ಟಿ ಆಸ್ಟ್ರಿಯಾದಲ್ಲಿ ತಮ್ಮ ಶಿಕ್ಷಣ ಮುಗಿಸಿದರು. ನಟನಾಗಿ ಯಶಸ್ಸು ಸಿಗದಾಗ ವಿಮರ್ಶಕರಾಗಿ, ಸಂಕಲನಕಾರರಾಗಿ ಕೆಲಸ ಮಾಡಿ ನಂತರ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಮೊದಲ ಚಿತ್ರ ‘ದಿ ಸೆವೆಂತ್ ಕಾಂಟಿನೆಂಟ್’. ಈ ಚಿತ್ರ ಅವರು ಮುಂದು ನಿರ್ದೇಶಿಸಲಿರುವ ಚಿತ್ರಗಳಲ್ಲಿಯ ಹಿಂಸೆ ಮತ್ತು ಬೋಲ್ಡ್ ಶೈಲಿಯ ಒಂದು ಝಲಕ್ ತೋರಿಸಿಕೊಟ್ಟಿತು. (ಸ್ಪಾಯ್ಲರ್ ಅಲರ್ಟ್) ಆಸ್ಟ್ರಿಯಾದ ಒಂದು ಮಧ್ಯಮ ವರ್ಗದ ಕುಟುಂಬ. ಜಾರ್ಜ್, ಒಬ್ಬ ಇಂಜಿನೀಯರ್, ಅವನ ಹೆಂಡತಿ ಆನಾ ಮತ್ತು ಅವರ ಮಗಳು ಈವಾ. ಆಸ್ಟ್ರಿಯಾದಿಂದ ಆಸ್ಟ್ರೇಲಿಯಾಗೆ ವಲಸೆ ಹೋಗಬೇಕೆಂದು ಕನಸು ಕಂಡ ಈ ಕಟುಂಬ, ಹಳ್ಳಿಯಲ್ಲಿರುವ ಜಾರ್ಜ್‍ನ ತಂದೆಯನ್ನು ಭೇಟಿ ಮಾಡಿ ಬಂದ ನಂತರ ತಮ್ಮ ಕಾರನ್ನು ಮಾರಿ, ಬ್ಯಾಂಕ್ ಖಾತೆಯಲ್ಲಿಯ ಎಲ್ಲ ದುಡ್ಡನ್ನು ತೆಗೆದುಕೊಂಡು, ಖಾತೆಯನ್ನು ಮುಚ್ಚಿ, ತಮ್ಮ ಮನೆಯಲ್ಲಿಯ ಎಲ್ಲಾ ವಸ್ತುಗಳನ್ನು ನಾಶಪಡಿಸಿ, ಇದ್ದ ದುಡ್ಡನ್ನೆಲ್ಲ ಹರಿದು ಹಾಕಿ, ಹರಿದ ತುಣುಕಗಳನ್ನೆಲ್ಲ ಟಾಯ್ಲೆಟ್‍ನಲ್ಲಿ ಫ್ಲಷ್ ಮಾಡಿ, ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆಂಡತಿ ಮಗಳು ಸತ್ತ ನಂತರ ಗೋಡೆಯ ಮೇಲೆ ಅವರ ಹೆಸರು, ಅವರು ಸತ್ತ ದಿನಾಂಕ ಮತ್ತು ಸಮಯವನ್ನು ಬರೆದು ತನ್ನ ಹೆಸರಿನ ಮುಂದೆ ಪ್ರಶ್ನಾರ್ಥಕ ಚಿನ್ಹೆ ಹಾಕಿ, ತಾನೂ ಸಾಯುತ್ತಾನೆ. ಆತ್ಮಹತ್ಯೆಗೂ ಮುಂಚೆ ಬರೆದ ಪತ್ರದಲ್ಲಿ ತಾವು ತಮ್ಮ ಕೆಲಸವನ್ನು ಬಿಟ್ಟಿರುವುದಾಗಿ, ತಾವೆಲ್ಲ ಹೋಗುತ್ತಿರುವುದಾಗಿ ಹಾಗೂ ಮಗಳನ್ನೂ ತಮ್ಮೊಂದಿಗೆ ಒಯ್ಯುವುದು ಕಷ್ಟದ ನಿರ್ಧಾರವಾಗಿತ್ತೆಂದು ಆದರೆ ಮಗಳು ಈವಾ ಬರಲು ಸಿದ್ಧವಾಗಿದ್ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗುವದಾಗಿ ಹೇಳುತ್ತಾನೆ.

ಇವರುಗಳ ಆತ್ಮಹತ್ಯೆ, ಅದರ ತಯ್ಯಾರಿ, ತಮ್ಮೆಲ್ಲ ವಸ್ತುಗಳನ್ನು ನಾಶಪಡಿಸುವುದೇ ಈ ಚಿತ್ರ.

1997 ರಲ್ಲಿ ಮೈಕೆಲ್ ಫನಿ ಗೇಮ್ಸ್ ಎನ್ನುವ ಚಿತ್ರವನ್ನು ಮಾಡಿದರು. ಇದೇ ಚಿತ್ರವನ್ನು ಹತ್ತು ವರ್ಷಗಳ ನಂತರ ಹಾಲಿವುಡ್‍ನಲ್ಲಿಯೂ ಇವರೇ ಮತ್ತೊಮ್ಮೆ ನಿರ್ದೇಶಿಸಿದರು. ಒಂದು ಉಚ್ಚ ಮಧ್ಯಮಗ ವರ್ಗದ ಕುಟುಂಬ, ಗಂಡ, ಹೆಂಡತಿ, ಮಗ ಮತ್ತು ಅವರ ನಾಯಿ ತಾವು ರಜಾದಿನಗಳಿಗಾಗಿಯೇ ನಗರದಿಂದ ದೂರದಲ್ಲಿ ನಿರ್ಮಸಿದ ತಮ್ಮ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ಸಿಗುವವರು ಪಾಲ್ ಮತ್ತು ಪೀಟರ್ ಎನ್ನುವ ಯುವಕರು. ಈ ಇಬ್ಬರು ಕುಟುಂಬದ ಸ್ನೇಹ ಸಂಪಾದಿಸಿ, ನಂತರ ಅವರ ಪೋನ್ ಲೈನ್ ಅನ್ನು ಕಿತ್ತು ಹಾಕಿ ಇಡೀ ಕುಟುಂಬವನ್ನು ಬಂಧಿತರನ್ನಾಗಿಸಿ, ಅವರೊಂದಿಗೆ ನೋವು ಸಾವಿನ ಆಟವಾಡಿ, ಪಾರಾಗಲು ಅವಕಾಶ ಕೊಟ್ಟಂತೆ ಮಾಡಿ ಮರುದಿನ ಬೆಳಗ್ಗೆಯ ತನಕ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಕೊಂದು ಹಾಕುವುದು ಈ ಚಿತ್ರದ ಸಾರಾಂಶ. ಇವರನ್ನು ಮುಗಿಸಿದ ನಂತರ ಇದೇ ಆಟವನ್ನು ಮುಂದುವರೆಸಲು ಪಾಲ್ ಮತ್ತು ಪೀಟರ್ ಇನ್ನೊಂದು ಕುಟುಂಬದ ಸ್ನೇಹ ಸಂಪಾದಿಸುವ ದೃಶ್ಯದಿಂದ ಚಿತ್ರ ಮುಕ್ತಾಯಗೊಳ್ಳುತ್ತದೆ.

ಈ ಚಿತ್ರ ನೋಡಿದಾಗ ವೀಕ್ಷಕರ ಮನದಲ್ಲಿ ಪ್ರಶ್ನೆಗಳು ಏಳುವುದು ಸಹಜ. ಏಕೀ ಸಿನೆಮಾ? ಮೈಕೆಲ್ ಹೇಳುವಂತೆ ಅವರ ಸಿನೆಮಾಗಳು ವೀಕ್ಷಕರ ಕಲ್ಪನೆಗೆ ಅವಕಾಶ ಮಾಡಿಕೊಡುತ್ತವೆ ಹಾಗೂ ವೀಕ್ಷಕರು ತಮ್ಮನ್ನು ತಾವು ಪ್ರಶ್ನಿಸುವಂತೆ ಮಾಡುತ್ತವೆ. ಖಂಡಿತವಾಗಿಯೂ ಈ ಎರಡೂ ಉದ್ದೇಶಗಳು ಇವರ ಸಿನೆಮಾಗಳಲ್ಲಿ ಸಾಕಾರಗೊಳ್ಳುತ್ತವೆ ಆದರೂ ಹಲವಾರೂ ಪ್ರಶ್ನೆಗಳು ಉಳಿದುಕೊಳ್ಳುತ್ತವೆ. ಒಂದು ಪತ್ರಿಕೆ ಫನಿ ಗೇಮ್ಸ್ ಚಿತ್ರವನ್ನು ಕಲಾತ್ಮಕ ಚಿತ್ರಹಿಂಸೆ ಎಂದು ಕರೆದು ಅತಿ ಕಟ್ಟ ಚಿತ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಹಲವಾರು ವೀಕ್ಷಕರು ಮತ್ತು ವಿಮರ್ಶಕರು ಈ ಚಿತ್ರಗಳನ್ನು ವೀಕ್ಷಿಸುವದು ಒಂದು ವಿಶಿಷ್ಟ ಅನುಭವ, ನಮ್ಮ ಆಳದ ಹಿಂಸೆಯನ್ನು ಹೊರಗೆ ತರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಿದೆ.

2001 ರಲ್ಲಿ ಬಂದ ಫ್ರೆಂಚ್ ಸಿನೆಮಾ ‘ದಿ ಪಿಯಾನೋ ಟೀಚರ್’ ಇವರ ಇನ್ನೊಂದು ಚಿತ್ರ. ಒಬ್ಬ ಮಧ್ಯವಯಸ್ಕ ಪಿಯಾನೋ ಶಿಕ್ಷಕಿ ಎರಿಕಾ ಕೊಹಟ್‍ಯ ಕಥೆ. ಎರಿಕಾಳ ಲೈಂಗಿಕ ತುಮುಲಗಳು, ತನ್ನ ವಿದ್ಯಾರ್ಥಿಗಳೊಂದಿಗಿನ ಕ್ಲಿಷ್ಟಕರ ಸಂಬಂಧಗಳನ್ನು ಎಲ್ಲಿಯೂ ಜಜ್‍ಮೆಂಟಲ್ ಆಗದೇ ತೋರಿಸುತ್ತ ಹೋಗುತ್ತದೆ. ಕ್ಯಾಷೆ(2005), ದಿ ವೈಟ್ ರಿಬನ್(2009), ಅಮೋರ್(2012) ಮುಂತಾದವುಗಳು ಮೈಕೆಲ್ ಹಾನೆಕೆ ನಿರ್ದೇಶಿಸಿದ ಖ್ಯಾತ ಚಿತ್ರಗಳು. ಮನುಷ್ಯನ ಆಳಕ್ಕಿಳಿದು ಅಲ್ಲಿಯ ಹಿಂಸೆ, ನೋವು, ಲೈಂಗಿಕತೆಯ ತುಮುಲಗಳನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಇವರ ಚಿತ್ರಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮೈಕಲ್ ಹಾನೆಕೆ ಸದ್ಯಕ್ಕೆ ವಿಯೆನ್ನಾದ ಫಿಲ್ಮ್ ಅಕಾಡೆಮಿಯಲ್ಲಿ ಚಲನಚಿತ್ರ ನಿರ್ದೇಶನ ಕಲಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...