Homeಮುಖಪುಟಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ - ಮೈಕೆಲ್ ಹಾನೆಕೆ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

- Advertisement -
- Advertisement -

ಸಿನಿಯಾನ: 04

ರಾಜಶೇಖರ್ ಅಕ್ಕಿ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ. ಆ ಕಥೆಯಲ್ಲಿ ಒಬ್ಬ ಹೀರೋ ಇರ್ತಾನೆ, ಒಬ್ಳು ಹೀರೋಯಿನ್ ಇರ್ತಾಳೆ, ಒಬ್ಬ ಖಳನಾಯಕ ಇರ್ತಾನೆ, ಪೋಷಕ ಪಾತ್ರಗಳಿರ್ತಾವೆ ಎಂತೆಲ್ಲಾ ನಾವು ಅಂದುಕೊಂಡಿದ್ದು. ನಂತರ ಸಿನೆಮಾ ಅಭ್ಯಸಿಸುತ್ತ ಹೋದತ್ತ ಡ್ರಾಮಾ, ಸ್ಟ್ರಕ್ಚರ್ ಎನ್ನುವ ಅಂಶಗಳು ನಮಗೆ ತಿಳಿದವು. ಯಾವುದೇ ಒಂದು ಕಥೆಯಲ್ಲಿ ಆರಂಭ, ಮಧ್ಯ, ಮುಕ್ತಾಯ ಇರುತ್ತವೆ ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಸಿನೆಮಾದ ಮೊದಲ ಇಪ್ಪತ್ತು ನಿಮಿಷಗಳವರೆಗೆ ಸೆಟ್‍ಅಪ್ ಅಂದರೆ ಪಾತ್ರಗಳು, ಆ ಪಾತ್ರಗಳ ಇರುವ ಸನ್ನಿವೇಶ ಇವೆಲ್ಲ ವೀಕ್ಷಕರಿಗೆ ತಿಳಿಯುತ್ತವೆ ಮುಂದಿನ ಸುಮಾರು ಒಂದು ಗಂಟೆಯ ವರೆಗೆ ಆ ಪಾತ್ರಗಳ ನಡುವಿನ ಸಂಘರ್ಷ ವ್ಯಕ್ತವಾಗಿ, ಆಯಾ ಪಾತ್ರಗಳು, ಮುಖ್ಯವಾಗಿ ನಾಯಕ(ಕಿ)ಯ ಪಾತ್ರ ಆ ಸಂಘರ್ಷವನ್ನು, ತನ್ನ ಗುರಿಗೆ ಇರುವ ತೊಡಕುಗಳನ್ನು ಹೇಗೆ ಎದುರಿಸುತ್ತವೆ ಎಂದೂ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಆ ಸಂಘರ್ಷ ಹೇಗೆ ನಿಷ್ಕರ್ಷವಾಗುತ್ತದೆ ಎಂದು ತಿಳಿಯುತ್ತದೆ. ಅನೇಕ ಚಿತ್ರಗಳಲ್ಲಿ ಸಂಘರ್ಷ ಬಾಹ್ಯವಾಗಿದ್ದರೆ ಕೆಲವು ಚಿತ್ರಗಳಲ್ಲಿ ಆಂತರಿಕವಾಗಿರುತ್ತದೆ ಅಂದರೆ ಆ ಪ್ರಮುಖ ಪಾತ್ರಕ್ಕೆ ತಾನೇ, ತನ್ನ ದೌರ್ಬಲ್ಯಗಳೇ ಮುಖ್ಯ ಶತ್ರುವಾಗಿದ್ದಾಗಿರುವಾಗ ಸಂಘರ್ಷ ಹುಟ್ಟಿಕೊಳ್ಳುತ್ತವೆ.

ನಮ್ಮಲ್ಲರಲ್ಲೂ ಅನೇಕ ಕಥೆಗಳಿರುತ್ತವೆ. ನಾವೆಲ್ಲರೂ ನಮ್ಮ ಸುತ್ತಮುತ್ತ ಆಗುತ್ತಿರುವ ಅನ್ಯಾಯ, ಸೋಜಿಗ, ಹೋರಾಟ, ಸಾಹಸಗಳನ್ನು ನೋಡಿ ಅನೇಕ ಕಥೆಗಳನ್ನು ಕಟ್ಟಿಕೊಂಡಿರುತ್ತೇವೆ, ಆಯಾ ಚಿತ್ರಗಳು ಮತ್ತು ಅದರಲ್ಲಿಯ ನಮ್ಮ ಒಳ್ಳೆಯತನ, ಕೆಟ್ಟತನ ಮುಂತಾದವುಗಳ ವ್ಯಾಖ್ಯೆಯ ಪರಿಧಿಯಲ್ಲಿ ಬರುತ್ತವೆ.

ಮೈಕೆಲ್ ಹಾನೆಕೆಯ ಚಿತ್ರಗಳನ್ನು ನೋಡಿದಾಗ ಇವೆಲ್ಲವುಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಕಥೆ ಎಂದರೇನು, ಅದರ ಪರಿಭಾಷೆ ಏನು, ನಾಯಕನ ಪಾತ್ರ ಹೇಗಿರಬೇಕು, ಅವನು ಏನಾದರೂ ಒಳ್ಳೆಯದನ್ನು ಬಿಂಬಿಸಬೇಕಲ್ಲವೇ ಅಥವಾ ಅದಕ್ಕಾಗಿ ಹೋರಾಡಬೇಕಲ್ಲವೇ, ನಾಯಕ ಕೆಟ್ಟವನಾಗಿದ್ದರೂ ಅವನೊಳಗೇ ಏನಾದರೂ ತುಮುಲಗಳಿರಬೇಕಲ್ಲವೇ, ಅವನ/ಳ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಲ್ಲವೇ, ಪ್ರಮುಖ ಪಾತ್ರ ಕೆಟ್ಟವನಾಗಿದ್ದರೆ ಇತರ ಪಾತ್ರಗಳಾದರೂ ಅದರ ವಿರುದ್ಧ ಮನಸ್ಥಿತಿಯನ್ನು ಹೊಂದಿ ಸಂಘರ್ಷ ನಿರ್ಮಾಣವಾಗನೇಕಲ್ಲವೇ, ಕೆಟ್ಟದ್ದು ಮತ್ತು ಒಳ್ಳೇದು ಎನ್ನುವವುದೇನಾದರೂ ಕಥೆಯಲ್ಲಿ ಇರಬೇಕಲ್ಲವೇ, ಚಿತ್ರಕ್ಕೆ ನೈತಿಕ ಸ್ಪಷ್ಟತೆ ಇರಬೇಕಲ್ಲವೇ? ಮೈಕೆಲ್ ಹಾನೆಕೆಯ ಸಿನೆಮಾ ನೋಡಿದರೆ ಇವಕ್ಕೆ ಯಾವುದೇ ಉತ್ತರ ಸಿಗುವುದಿಲ್ಲ; ಸಿಗುವುದು ಪ್ರಶ್ನೆಗಳಷ್ಟೆ.

ಮೈಕೆಲ್ ಹಾನೆಕೆ ಒಬ್ಬ ಆಸ್ಟ್ರಿಯಾದ ಚಿತ್ರನಿರ್ದೇಶಕ. ಇವರು 1942 ರಲ್ಲಿ ಜರ್ಮನಿಯಲ್ಲಿ ಹುಟ್ಟಿ ಆಸ್ಟ್ರಿಯಾದಲ್ಲಿ ತಮ್ಮ ಶಿಕ್ಷಣ ಮುಗಿಸಿದರು. ನಟನಾಗಿ ಯಶಸ್ಸು ಸಿಗದಾಗ ವಿಮರ್ಶಕರಾಗಿ, ಸಂಕಲನಕಾರರಾಗಿ ಕೆಲಸ ಮಾಡಿ ನಂತರ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಮೊದಲ ಚಿತ್ರ ‘ದಿ ಸೆವೆಂತ್ ಕಾಂಟಿನೆಂಟ್’. ಈ ಚಿತ್ರ ಅವರು ಮುಂದು ನಿರ್ದೇಶಿಸಲಿರುವ ಚಿತ್ರಗಳಲ್ಲಿಯ ಹಿಂಸೆ ಮತ್ತು ಬೋಲ್ಡ್ ಶೈಲಿಯ ಒಂದು ಝಲಕ್ ತೋರಿಸಿಕೊಟ್ಟಿತು. (ಸ್ಪಾಯ್ಲರ್ ಅಲರ್ಟ್) ಆಸ್ಟ್ರಿಯಾದ ಒಂದು ಮಧ್ಯಮ ವರ್ಗದ ಕುಟುಂಬ. ಜಾರ್ಜ್, ಒಬ್ಬ ಇಂಜಿನೀಯರ್, ಅವನ ಹೆಂಡತಿ ಆನಾ ಮತ್ತು ಅವರ ಮಗಳು ಈವಾ. ಆಸ್ಟ್ರಿಯಾದಿಂದ ಆಸ್ಟ್ರೇಲಿಯಾಗೆ ವಲಸೆ ಹೋಗಬೇಕೆಂದು ಕನಸು ಕಂಡ ಈ ಕಟುಂಬ, ಹಳ್ಳಿಯಲ್ಲಿರುವ ಜಾರ್ಜ್‍ನ ತಂದೆಯನ್ನು ಭೇಟಿ ಮಾಡಿ ಬಂದ ನಂತರ ತಮ್ಮ ಕಾರನ್ನು ಮಾರಿ, ಬ್ಯಾಂಕ್ ಖಾತೆಯಲ್ಲಿಯ ಎಲ್ಲ ದುಡ್ಡನ್ನು ತೆಗೆದುಕೊಂಡು, ಖಾತೆಯನ್ನು ಮುಚ್ಚಿ, ತಮ್ಮ ಮನೆಯಲ್ಲಿಯ ಎಲ್ಲಾ ವಸ್ತುಗಳನ್ನು ನಾಶಪಡಿಸಿ, ಇದ್ದ ದುಡ್ಡನ್ನೆಲ್ಲ ಹರಿದು ಹಾಕಿ, ಹರಿದ ತುಣುಕಗಳನ್ನೆಲ್ಲ ಟಾಯ್ಲೆಟ್‍ನಲ್ಲಿ ಫ್ಲಷ್ ಮಾಡಿ, ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆಂಡತಿ ಮಗಳು ಸತ್ತ ನಂತರ ಗೋಡೆಯ ಮೇಲೆ ಅವರ ಹೆಸರು, ಅವರು ಸತ್ತ ದಿನಾಂಕ ಮತ್ತು ಸಮಯವನ್ನು ಬರೆದು ತನ್ನ ಹೆಸರಿನ ಮುಂದೆ ಪ್ರಶ್ನಾರ್ಥಕ ಚಿನ್ಹೆ ಹಾಕಿ, ತಾನೂ ಸಾಯುತ್ತಾನೆ. ಆತ್ಮಹತ್ಯೆಗೂ ಮುಂಚೆ ಬರೆದ ಪತ್ರದಲ್ಲಿ ತಾವು ತಮ್ಮ ಕೆಲಸವನ್ನು ಬಿಟ್ಟಿರುವುದಾಗಿ, ತಾವೆಲ್ಲ ಹೋಗುತ್ತಿರುವುದಾಗಿ ಹಾಗೂ ಮಗಳನ್ನೂ ತಮ್ಮೊಂದಿಗೆ ಒಯ್ಯುವುದು ಕಷ್ಟದ ನಿರ್ಧಾರವಾಗಿತ್ತೆಂದು ಆದರೆ ಮಗಳು ಈವಾ ಬರಲು ಸಿದ್ಧವಾಗಿದ್ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗುವದಾಗಿ ಹೇಳುತ್ತಾನೆ.

ಇವರುಗಳ ಆತ್ಮಹತ್ಯೆ, ಅದರ ತಯ್ಯಾರಿ, ತಮ್ಮೆಲ್ಲ ವಸ್ತುಗಳನ್ನು ನಾಶಪಡಿಸುವುದೇ ಈ ಚಿತ್ರ.

1997 ರಲ್ಲಿ ಮೈಕೆಲ್ ಫನಿ ಗೇಮ್ಸ್ ಎನ್ನುವ ಚಿತ್ರವನ್ನು ಮಾಡಿದರು. ಇದೇ ಚಿತ್ರವನ್ನು ಹತ್ತು ವರ್ಷಗಳ ನಂತರ ಹಾಲಿವುಡ್‍ನಲ್ಲಿಯೂ ಇವರೇ ಮತ್ತೊಮ್ಮೆ ನಿರ್ದೇಶಿಸಿದರು. ಒಂದು ಉಚ್ಚ ಮಧ್ಯಮಗ ವರ್ಗದ ಕುಟುಂಬ, ಗಂಡ, ಹೆಂಡತಿ, ಮಗ ಮತ್ತು ಅವರ ನಾಯಿ ತಾವು ರಜಾದಿನಗಳಿಗಾಗಿಯೇ ನಗರದಿಂದ ದೂರದಲ್ಲಿ ನಿರ್ಮಸಿದ ತಮ್ಮ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ಸಿಗುವವರು ಪಾಲ್ ಮತ್ತು ಪೀಟರ್ ಎನ್ನುವ ಯುವಕರು. ಈ ಇಬ್ಬರು ಕುಟುಂಬದ ಸ್ನೇಹ ಸಂಪಾದಿಸಿ, ನಂತರ ಅವರ ಪೋನ್ ಲೈನ್ ಅನ್ನು ಕಿತ್ತು ಹಾಕಿ ಇಡೀ ಕುಟುಂಬವನ್ನು ಬಂಧಿತರನ್ನಾಗಿಸಿ, ಅವರೊಂದಿಗೆ ನೋವು ಸಾವಿನ ಆಟವಾಡಿ, ಪಾರಾಗಲು ಅವಕಾಶ ಕೊಟ್ಟಂತೆ ಮಾಡಿ ಮರುದಿನ ಬೆಳಗ್ಗೆಯ ತನಕ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಕೊಂದು ಹಾಕುವುದು ಈ ಚಿತ್ರದ ಸಾರಾಂಶ. ಇವರನ್ನು ಮುಗಿಸಿದ ನಂತರ ಇದೇ ಆಟವನ್ನು ಮುಂದುವರೆಸಲು ಪಾಲ್ ಮತ್ತು ಪೀಟರ್ ಇನ್ನೊಂದು ಕುಟುಂಬದ ಸ್ನೇಹ ಸಂಪಾದಿಸುವ ದೃಶ್ಯದಿಂದ ಚಿತ್ರ ಮುಕ್ತಾಯಗೊಳ್ಳುತ್ತದೆ.

ಈ ಚಿತ್ರ ನೋಡಿದಾಗ ವೀಕ್ಷಕರ ಮನದಲ್ಲಿ ಪ್ರಶ್ನೆಗಳು ಏಳುವುದು ಸಹಜ. ಏಕೀ ಸಿನೆಮಾ? ಮೈಕೆಲ್ ಹೇಳುವಂತೆ ಅವರ ಸಿನೆಮಾಗಳು ವೀಕ್ಷಕರ ಕಲ್ಪನೆಗೆ ಅವಕಾಶ ಮಾಡಿಕೊಡುತ್ತವೆ ಹಾಗೂ ವೀಕ್ಷಕರು ತಮ್ಮನ್ನು ತಾವು ಪ್ರಶ್ನಿಸುವಂತೆ ಮಾಡುತ್ತವೆ. ಖಂಡಿತವಾಗಿಯೂ ಈ ಎರಡೂ ಉದ್ದೇಶಗಳು ಇವರ ಸಿನೆಮಾಗಳಲ್ಲಿ ಸಾಕಾರಗೊಳ್ಳುತ್ತವೆ ಆದರೂ ಹಲವಾರೂ ಪ್ರಶ್ನೆಗಳು ಉಳಿದುಕೊಳ್ಳುತ್ತವೆ. ಒಂದು ಪತ್ರಿಕೆ ಫನಿ ಗೇಮ್ಸ್ ಚಿತ್ರವನ್ನು ಕಲಾತ್ಮಕ ಚಿತ್ರಹಿಂಸೆ ಎಂದು ಕರೆದು ಅತಿ ಕಟ್ಟ ಚಿತ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಹಲವಾರು ವೀಕ್ಷಕರು ಮತ್ತು ವಿಮರ್ಶಕರು ಈ ಚಿತ್ರಗಳನ್ನು ವೀಕ್ಷಿಸುವದು ಒಂದು ವಿಶಿಷ್ಟ ಅನುಭವ, ನಮ್ಮ ಆಳದ ಹಿಂಸೆಯನ್ನು ಹೊರಗೆ ತರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಿದೆ.

2001 ರಲ್ಲಿ ಬಂದ ಫ್ರೆಂಚ್ ಸಿನೆಮಾ ‘ದಿ ಪಿಯಾನೋ ಟೀಚರ್’ ಇವರ ಇನ್ನೊಂದು ಚಿತ್ರ. ಒಬ್ಬ ಮಧ್ಯವಯಸ್ಕ ಪಿಯಾನೋ ಶಿಕ್ಷಕಿ ಎರಿಕಾ ಕೊಹಟ್‍ಯ ಕಥೆ. ಎರಿಕಾಳ ಲೈಂಗಿಕ ತುಮುಲಗಳು, ತನ್ನ ವಿದ್ಯಾರ್ಥಿಗಳೊಂದಿಗಿನ ಕ್ಲಿಷ್ಟಕರ ಸಂಬಂಧಗಳನ್ನು ಎಲ್ಲಿಯೂ ಜಜ್‍ಮೆಂಟಲ್ ಆಗದೇ ತೋರಿಸುತ್ತ ಹೋಗುತ್ತದೆ. ಕ್ಯಾಷೆ(2005), ದಿ ವೈಟ್ ರಿಬನ್(2009), ಅಮೋರ್(2012) ಮುಂತಾದವುಗಳು ಮೈಕೆಲ್ ಹಾನೆಕೆ ನಿರ್ದೇಶಿಸಿದ ಖ್ಯಾತ ಚಿತ್ರಗಳು. ಮನುಷ್ಯನ ಆಳಕ್ಕಿಳಿದು ಅಲ್ಲಿಯ ಹಿಂಸೆ, ನೋವು, ಲೈಂಗಿಕತೆಯ ತುಮುಲಗಳನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಇವರ ಚಿತ್ರಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮೈಕಲ್ ಹಾನೆಕೆ ಸದ್ಯಕ್ಕೆ ವಿಯೆನ್ನಾದ ಫಿಲ್ಮ್ ಅಕಾಡೆಮಿಯಲ್ಲಿ ಚಲನಚಿತ್ರ ನಿರ್ದೇಶನ ಕಲಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...