Homeಮುಖಪುಟಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ - ಮೈಕೆಲ್ ಹಾನೆಕೆ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

- Advertisement -
- Advertisement -

ಸಿನಿಯಾನ: 04

ರಾಜಶೇಖರ್ ಅಕ್ಕಿ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ. ಆ ಕಥೆಯಲ್ಲಿ ಒಬ್ಬ ಹೀರೋ ಇರ್ತಾನೆ, ಒಬ್ಳು ಹೀರೋಯಿನ್ ಇರ್ತಾಳೆ, ಒಬ್ಬ ಖಳನಾಯಕ ಇರ್ತಾನೆ, ಪೋಷಕ ಪಾತ್ರಗಳಿರ್ತಾವೆ ಎಂತೆಲ್ಲಾ ನಾವು ಅಂದುಕೊಂಡಿದ್ದು. ನಂತರ ಸಿನೆಮಾ ಅಭ್ಯಸಿಸುತ್ತ ಹೋದತ್ತ ಡ್ರಾಮಾ, ಸ್ಟ್ರಕ್ಚರ್ ಎನ್ನುವ ಅಂಶಗಳು ನಮಗೆ ತಿಳಿದವು. ಯಾವುದೇ ಒಂದು ಕಥೆಯಲ್ಲಿ ಆರಂಭ, ಮಧ್ಯ, ಮುಕ್ತಾಯ ಇರುತ್ತವೆ ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಸಿನೆಮಾದ ಮೊದಲ ಇಪ್ಪತ್ತು ನಿಮಿಷಗಳವರೆಗೆ ಸೆಟ್‍ಅಪ್ ಅಂದರೆ ಪಾತ್ರಗಳು, ಆ ಪಾತ್ರಗಳ ಇರುವ ಸನ್ನಿವೇಶ ಇವೆಲ್ಲ ವೀಕ್ಷಕರಿಗೆ ತಿಳಿಯುತ್ತವೆ ಮುಂದಿನ ಸುಮಾರು ಒಂದು ಗಂಟೆಯ ವರೆಗೆ ಆ ಪಾತ್ರಗಳ ನಡುವಿನ ಸಂಘರ್ಷ ವ್ಯಕ್ತವಾಗಿ, ಆಯಾ ಪಾತ್ರಗಳು, ಮುಖ್ಯವಾಗಿ ನಾಯಕ(ಕಿ)ಯ ಪಾತ್ರ ಆ ಸಂಘರ್ಷವನ್ನು, ತನ್ನ ಗುರಿಗೆ ಇರುವ ತೊಡಕುಗಳನ್ನು ಹೇಗೆ ಎದುರಿಸುತ್ತವೆ ಎಂದೂ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಆ ಸಂಘರ್ಷ ಹೇಗೆ ನಿಷ್ಕರ್ಷವಾಗುತ್ತದೆ ಎಂದು ತಿಳಿಯುತ್ತದೆ. ಅನೇಕ ಚಿತ್ರಗಳಲ್ಲಿ ಸಂಘರ್ಷ ಬಾಹ್ಯವಾಗಿದ್ದರೆ ಕೆಲವು ಚಿತ್ರಗಳಲ್ಲಿ ಆಂತರಿಕವಾಗಿರುತ್ತದೆ ಅಂದರೆ ಆ ಪ್ರಮುಖ ಪಾತ್ರಕ್ಕೆ ತಾನೇ, ತನ್ನ ದೌರ್ಬಲ್ಯಗಳೇ ಮುಖ್ಯ ಶತ್ರುವಾಗಿದ್ದಾಗಿರುವಾಗ ಸಂಘರ್ಷ ಹುಟ್ಟಿಕೊಳ್ಳುತ್ತವೆ.

ನಮ್ಮಲ್ಲರಲ್ಲೂ ಅನೇಕ ಕಥೆಗಳಿರುತ್ತವೆ. ನಾವೆಲ್ಲರೂ ನಮ್ಮ ಸುತ್ತಮುತ್ತ ಆಗುತ್ತಿರುವ ಅನ್ಯಾಯ, ಸೋಜಿಗ, ಹೋರಾಟ, ಸಾಹಸಗಳನ್ನು ನೋಡಿ ಅನೇಕ ಕಥೆಗಳನ್ನು ಕಟ್ಟಿಕೊಂಡಿರುತ್ತೇವೆ, ಆಯಾ ಚಿತ್ರಗಳು ಮತ್ತು ಅದರಲ್ಲಿಯ ನಮ್ಮ ಒಳ್ಳೆಯತನ, ಕೆಟ್ಟತನ ಮುಂತಾದವುಗಳ ವ್ಯಾಖ್ಯೆಯ ಪರಿಧಿಯಲ್ಲಿ ಬರುತ್ತವೆ.

ಮೈಕೆಲ್ ಹಾನೆಕೆಯ ಚಿತ್ರಗಳನ್ನು ನೋಡಿದಾಗ ಇವೆಲ್ಲವುಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಕಥೆ ಎಂದರೇನು, ಅದರ ಪರಿಭಾಷೆ ಏನು, ನಾಯಕನ ಪಾತ್ರ ಹೇಗಿರಬೇಕು, ಅವನು ಏನಾದರೂ ಒಳ್ಳೆಯದನ್ನು ಬಿಂಬಿಸಬೇಕಲ್ಲವೇ ಅಥವಾ ಅದಕ್ಕಾಗಿ ಹೋರಾಡಬೇಕಲ್ಲವೇ, ನಾಯಕ ಕೆಟ್ಟವನಾಗಿದ್ದರೂ ಅವನೊಳಗೇ ಏನಾದರೂ ತುಮುಲಗಳಿರಬೇಕಲ್ಲವೇ, ಅವನ/ಳ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಲ್ಲವೇ, ಪ್ರಮುಖ ಪಾತ್ರ ಕೆಟ್ಟವನಾಗಿದ್ದರೆ ಇತರ ಪಾತ್ರಗಳಾದರೂ ಅದರ ವಿರುದ್ಧ ಮನಸ್ಥಿತಿಯನ್ನು ಹೊಂದಿ ಸಂಘರ್ಷ ನಿರ್ಮಾಣವಾಗನೇಕಲ್ಲವೇ, ಕೆಟ್ಟದ್ದು ಮತ್ತು ಒಳ್ಳೇದು ಎನ್ನುವವುದೇನಾದರೂ ಕಥೆಯಲ್ಲಿ ಇರಬೇಕಲ್ಲವೇ, ಚಿತ್ರಕ್ಕೆ ನೈತಿಕ ಸ್ಪಷ್ಟತೆ ಇರಬೇಕಲ್ಲವೇ? ಮೈಕೆಲ್ ಹಾನೆಕೆಯ ಸಿನೆಮಾ ನೋಡಿದರೆ ಇವಕ್ಕೆ ಯಾವುದೇ ಉತ್ತರ ಸಿಗುವುದಿಲ್ಲ; ಸಿಗುವುದು ಪ್ರಶ್ನೆಗಳಷ್ಟೆ.

ಮೈಕೆಲ್ ಹಾನೆಕೆ ಒಬ್ಬ ಆಸ್ಟ್ರಿಯಾದ ಚಿತ್ರನಿರ್ದೇಶಕ. ಇವರು 1942 ರಲ್ಲಿ ಜರ್ಮನಿಯಲ್ಲಿ ಹುಟ್ಟಿ ಆಸ್ಟ್ರಿಯಾದಲ್ಲಿ ತಮ್ಮ ಶಿಕ್ಷಣ ಮುಗಿಸಿದರು. ನಟನಾಗಿ ಯಶಸ್ಸು ಸಿಗದಾಗ ವಿಮರ್ಶಕರಾಗಿ, ಸಂಕಲನಕಾರರಾಗಿ ಕೆಲಸ ಮಾಡಿ ನಂತರ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಮೊದಲ ಚಿತ್ರ ‘ದಿ ಸೆವೆಂತ್ ಕಾಂಟಿನೆಂಟ್’. ಈ ಚಿತ್ರ ಅವರು ಮುಂದು ನಿರ್ದೇಶಿಸಲಿರುವ ಚಿತ್ರಗಳಲ್ಲಿಯ ಹಿಂಸೆ ಮತ್ತು ಬೋಲ್ಡ್ ಶೈಲಿಯ ಒಂದು ಝಲಕ್ ತೋರಿಸಿಕೊಟ್ಟಿತು. (ಸ್ಪಾಯ್ಲರ್ ಅಲರ್ಟ್) ಆಸ್ಟ್ರಿಯಾದ ಒಂದು ಮಧ್ಯಮ ವರ್ಗದ ಕುಟುಂಬ. ಜಾರ್ಜ್, ಒಬ್ಬ ಇಂಜಿನೀಯರ್, ಅವನ ಹೆಂಡತಿ ಆನಾ ಮತ್ತು ಅವರ ಮಗಳು ಈವಾ. ಆಸ್ಟ್ರಿಯಾದಿಂದ ಆಸ್ಟ್ರೇಲಿಯಾಗೆ ವಲಸೆ ಹೋಗಬೇಕೆಂದು ಕನಸು ಕಂಡ ಈ ಕಟುಂಬ, ಹಳ್ಳಿಯಲ್ಲಿರುವ ಜಾರ್ಜ್‍ನ ತಂದೆಯನ್ನು ಭೇಟಿ ಮಾಡಿ ಬಂದ ನಂತರ ತಮ್ಮ ಕಾರನ್ನು ಮಾರಿ, ಬ್ಯಾಂಕ್ ಖಾತೆಯಲ್ಲಿಯ ಎಲ್ಲ ದುಡ್ಡನ್ನು ತೆಗೆದುಕೊಂಡು, ಖಾತೆಯನ್ನು ಮುಚ್ಚಿ, ತಮ್ಮ ಮನೆಯಲ್ಲಿಯ ಎಲ್ಲಾ ವಸ್ತುಗಳನ್ನು ನಾಶಪಡಿಸಿ, ಇದ್ದ ದುಡ್ಡನ್ನೆಲ್ಲ ಹರಿದು ಹಾಕಿ, ಹರಿದ ತುಣುಕಗಳನ್ನೆಲ್ಲ ಟಾಯ್ಲೆಟ್‍ನಲ್ಲಿ ಫ್ಲಷ್ ಮಾಡಿ, ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆಂಡತಿ ಮಗಳು ಸತ್ತ ನಂತರ ಗೋಡೆಯ ಮೇಲೆ ಅವರ ಹೆಸರು, ಅವರು ಸತ್ತ ದಿನಾಂಕ ಮತ್ತು ಸಮಯವನ್ನು ಬರೆದು ತನ್ನ ಹೆಸರಿನ ಮುಂದೆ ಪ್ರಶ್ನಾರ್ಥಕ ಚಿನ್ಹೆ ಹಾಕಿ, ತಾನೂ ಸಾಯುತ್ತಾನೆ. ಆತ್ಮಹತ್ಯೆಗೂ ಮುಂಚೆ ಬರೆದ ಪತ್ರದಲ್ಲಿ ತಾವು ತಮ್ಮ ಕೆಲಸವನ್ನು ಬಿಟ್ಟಿರುವುದಾಗಿ, ತಾವೆಲ್ಲ ಹೋಗುತ್ತಿರುವುದಾಗಿ ಹಾಗೂ ಮಗಳನ್ನೂ ತಮ್ಮೊಂದಿಗೆ ಒಯ್ಯುವುದು ಕಷ್ಟದ ನಿರ್ಧಾರವಾಗಿತ್ತೆಂದು ಆದರೆ ಮಗಳು ಈವಾ ಬರಲು ಸಿದ್ಧವಾಗಿದ್ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗುವದಾಗಿ ಹೇಳುತ್ತಾನೆ.

ಇವರುಗಳ ಆತ್ಮಹತ್ಯೆ, ಅದರ ತಯ್ಯಾರಿ, ತಮ್ಮೆಲ್ಲ ವಸ್ತುಗಳನ್ನು ನಾಶಪಡಿಸುವುದೇ ಈ ಚಿತ್ರ.

1997 ರಲ್ಲಿ ಮೈಕೆಲ್ ಫನಿ ಗೇಮ್ಸ್ ಎನ್ನುವ ಚಿತ್ರವನ್ನು ಮಾಡಿದರು. ಇದೇ ಚಿತ್ರವನ್ನು ಹತ್ತು ವರ್ಷಗಳ ನಂತರ ಹಾಲಿವುಡ್‍ನಲ್ಲಿಯೂ ಇವರೇ ಮತ್ತೊಮ್ಮೆ ನಿರ್ದೇಶಿಸಿದರು. ಒಂದು ಉಚ್ಚ ಮಧ್ಯಮಗ ವರ್ಗದ ಕುಟುಂಬ, ಗಂಡ, ಹೆಂಡತಿ, ಮಗ ಮತ್ತು ಅವರ ನಾಯಿ ತಾವು ರಜಾದಿನಗಳಿಗಾಗಿಯೇ ನಗರದಿಂದ ದೂರದಲ್ಲಿ ನಿರ್ಮಸಿದ ತಮ್ಮ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ಸಿಗುವವರು ಪಾಲ್ ಮತ್ತು ಪೀಟರ್ ಎನ್ನುವ ಯುವಕರು. ಈ ಇಬ್ಬರು ಕುಟುಂಬದ ಸ್ನೇಹ ಸಂಪಾದಿಸಿ, ನಂತರ ಅವರ ಪೋನ್ ಲೈನ್ ಅನ್ನು ಕಿತ್ತು ಹಾಕಿ ಇಡೀ ಕುಟುಂಬವನ್ನು ಬಂಧಿತರನ್ನಾಗಿಸಿ, ಅವರೊಂದಿಗೆ ನೋವು ಸಾವಿನ ಆಟವಾಡಿ, ಪಾರಾಗಲು ಅವಕಾಶ ಕೊಟ್ಟಂತೆ ಮಾಡಿ ಮರುದಿನ ಬೆಳಗ್ಗೆಯ ತನಕ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಕೊಂದು ಹಾಕುವುದು ಈ ಚಿತ್ರದ ಸಾರಾಂಶ. ಇವರನ್ನು ಮುಗಿಸಿದ ನಂತರ ಇದೇ ಆಟವನ್ನು ಮುಂದುವರೆಸಲು ಪಾಲ್ ಮತ್ತು ಪೀಟರ್ ಇನ್ನೊಂದು ಕುಟುಂಬದ ಸ್ನೇಹ ಸಂಪಾದಿಸುವ ದೃಶ್ಯದಿಂದ ಚಿತ್ರ ಮುಕ್ತಾಯಗೊಳ್ಳುತ್ತದೆ.

ಈ ಚಿತ್ರ ನೋಡಿದಾಗ ವೀಕ್ಷಕರ ಮನದಲ್ಲಿ ಪ್ರಶ್ನೆಗಳು ಏಳುವುದು ಸಹಜ. ಏಕೀ ಸಿನೆಮಾ? ಮೈಕೆಲ್ ಹೇಳುವಂತೆ ಅವರ ಸಿನೆಮಾಗಳು ವೀಕ್ಷಕರ ಕಲ್ಪನೆಗೆ ಅವಕಾಶ ಮಾಡಿಕೊಡುತ್ತವೆ ಹಾಗೂ ವೀಕ್ಷಕರು ತಮ್ಮನ್ನು ತಾವು ಪ್ರಶ್ನಿಸುವಂತೆ ಮಾಡುತ್ತವೆ. ಖಂಡಿತವಾಗಿಯೂ ಈ ಎರಡೂ ಉದ್ದೇಶಗಳು ಇವರ ಸಿನೆಮಾಗಳಲ್ಲಿ ಸಾಕಾರಗೊಳ್ಳುತ್ತವೆ ಆದರೂ ಹಲವಾರೂ ಪ್ರಶ್ನೆಗಳು ಉಳಿದುಕೊಳ್ಳುತ್ತವೆ. ಒಂದು ಪತ್ರಿಕೆ ಫನಿ ಗೇಮ್ಸ್ ಚಿತ್ರವನ್ನು ಕಲಾತ್ಮಕ ಚಿತ್ರಹಿಂಸೆ ಎಂದು ಕರೆದು ಅತಿ ಕಟ್ಟ ಚಿತ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಹಲವಾರು ವೀಕ್ಷಕರು ಮತ್ತು ವಿಮರ್ಶಕರು ಈ ಚಿತ್ರಗಳನ್ನು ವೀಕ್ಷಿಸುವದು ಒಂದು ವಿಶಿಷ್ಟ ಅನುಭವ, ನಮ್ಮ ಆಳದ ಹಿಂಸೆಯನ್ನು ಹೊರಗೆ ತರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಿದೆ.

2001 ರಲ್ಲಿ ಬಂದ ಫ್ರೆಂಚ್ ಸಿನೆಮಾ ‘ದಿ ಪಿಯಾನೋ ಟೀಚರ್’ ಇವರ ಇನ್ನೊಂದು ಚಿತ್ರ. ಒಬ್ಬ ಮಧ್ಯವಯಸ್ಕ ಪಿಯಾನೋ ಶಿಕ್ಷಕಿ ಎರಿಕಾ ಕೊಹಟ್‍ಯ ಕಥೆ. ಎರಿಕಾಳ ಲೈಂಗಿಕ ತುಮುಲಗಳು, ತನ್ನ ವಿದ್ಯಾರ್ಥಿಗಳೊಂದಿಗಿನ ಕ್ಲಿಷ್ಟಕರ ಸಂಬಂಧಗಳನ್ನು ಎಲ್ಲಿಯೂ ಜಜ್‍ಮೆಂಟಲ್ ಆಗದೇ ತೋರಿಸುತ್ತ ಹೋಗುತ್ತದೆ. ಕ್ಯಾಷೆ(2005), ದಿ ವೈಟ್ ರಿಬನ್(2009), ಅಮೋರ್(2012) ಮುಂತಾದವುಗಳು ಮೈಕೆಲ್ ಹಾನೆಕೆ ನಿರ್ದೇಶಿಸಿದ ಖ್ಯಾತ ಚಿತ್ರಗಳು. ಮನುಷ್ಯನ ಆಳಕ್ಕಿಳಿದು ಅಲ್ಲಿಯ ಹಿಂಸೆ, ನೋವು, ಲೈಂಗಿಕತೆಯ ತುಮುಲಗಳನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಇವರ ಚಿತ್ರಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮೈಕಲ್ ಹಾನೆಕೆ ಸದ್ಯಕ್ಕೆ ವಿಯೆನ್ನಾದ ಫಿಲ್ಮ್ ಅಕಾಡೆಮಿಯಲ್ಲಿ ಚಲನಚಿತ್ರ ನಿರ್ದೇಶನ ಕಲಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...