Homeಮುಖಪುಟದೆಹಲಿ ಪೊಲೀಸರ ಟೂಲ್‌ಕಿಟ್‌ನಲ್ಲಿ 124(A), 153(A), 120(B), UAPA! - ಟೂಲ್‌ಕಿಟ್ ಕೊಟ್ಟವರಾರು?

ದೆಹಲಿ ಪೊಲೀಸರ ಟೂಲ್‌ಕಿಟ್‌ನಲ್ಲಿ 124(A), 153(A), 120(B), UAPA! – ಟೂಲ್‌ಕಿಟ್ ಕೊಟ್ಟವರಾರು?

- Advertisement -
- Advertisement -

ಹೌದು, ನಮ್ಮ ದೇಶದ ಸರ್ಕಾರಿ ಟೂಲ್‌ಕಿಟ್ ಒಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದೆ. ಅಷ್ಟೇ ಅಲ್ಲ ಅದು ಅಪಹಾಸ್ಯಕ್ಕೂ ಈಡಾಗುತ್ತಿದೆ. ಈ ಟೂಲ್‌ಕಿಟ್‌ನಲ್ಲಿ ಇರುವ ಮಾರ್ಗಸೂಚಿಗಳು: ಐಪಿಸಿ-ಸಿಆರ್‌ಪಿಸಿ ಸೆಕ್ಷನ್ಸ್ 124(A), 153(A) 120(B) ಮತ್ತು UAPA ಇತ್ಯಾದಿ. ಕೆಲವೊಮ್ಮೆ ಸಾಧಾರಣ ಕೋಡ್‌ಗಳೂ ಬಳಕೆಯಾಗುತ್ತವೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಪೊಲೀಸರು ಈ ಟೂಲ್‌ಕಿಟ್ ಪ್ರಕಾರ ಕೆಲಸ ಮಾಡುತ್ತಿದ್ದಾರಾದರೂ ಉತ್ತರಪ್ರದೇಶ ಪೊಲೀಸರು ತುಸು ಹೆಚ್ಚು ಆಕ್ಟಿವ್ ಆಗಿದ್ದಾರೆ. ಆದರೆ ಈ ಟೂಲ್‌ಕಿಟ್ ಅನ್ನು ಭಯಂಕರವಾಗಿ ಜಾರಿಗೆ ತರುವ ಮೂಲಕ ಜಾಗತಿಕ ಅಪಖ್ಯಾತಿ ಮತ್ತು ಅಪಹಾಸ್ಯಕ್ಕೆ ಈಡಾಗುತ್ತಿರುವುದು ದೆಹಲಿ ಪೊಲೀಸ್.

ಜೆಎನ್‌ಯುನ ಪ್ರಜ್ಞಾವಂತ, ಸಮಾಜಮುಖಿ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಈ ಟೂಲ್‌ಕಿಟ್ ಬಳಸಲಾಯಿತು. ಭೀಮಾ-ಕೋರೆಗಾಂವ್ ಪ್ರಕರಣದ ನೆಪದಲ್ಲಿ ಈ ದೇಶದ ದುರ್ಬಲ ಸಮುದಾಯಗಳ ಸಾಕ್ಷಿ ಪ್ರಜ್ಞೆಯಂತಿರುವ ಲೇಖಕರು, ಸಾಮಾಜಿಕ ಹೋರಾಟಗಾರರು ಮತ್ತು ವಕೀಲರು ಸಾರ್ವಜನಿಕ ಜಾಗೃತಿ ಮೂಡಿಸದಂತೆ ಮಾಡಲು ಇದೇ ಟೂಲ್‌ಕಿಟ್ ಅನ್ವಯ ಮಾಡಿ ಅವರನ್ನೆಲ್ಲ ಬಂಧನದಲ್ಲಿ ಇಡಲಾಗಿತು.
ಕಳೆದ ವರ್ಷ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ ಎನ್‌ಆರ್‌ಸಿ-ಸಿಎಎ-ಎನ್‌ಪಿಆರ್ ಹೋರಾಟಕ್ಕೆ ಕಳಂಕ ತರಲೂ ಇದೇ ಟೂಲ್‌ಕಿಟ್ ಬಳಕೆಯಾಗಿತು. ಈಶಾನ್ಯ ದೆಹಲಿಯಲ್ಲಿ ಪೊಲೀಸರೇ ಮುಂದೆ ನಿಂತು, ಕೆಲವೊಮ್ಮೆ ತಾವೇ ಭಾಗಿದಾರರಾಗಿದ್ದ ಪ್ರಾಯೋಜಿತ ಗಲಭೆ-ಹಿಂಸಾಚಾರ ಪ್ರಕರಣದಲ್ಲಿ ಸಿಎಎ ವಿರೋಧಿ ಹೋರಾಟಗಾರರನ್ನು ಈ ಟೂಲ್‌ಕಿಟ್‌ನ ಅಸ್ತ್ರಗಳ ಜೊತೆ ದಂಗೆ, ಕೊಲೆ ಇತ್ಯಾದಿ ಕೇಸುಗಳನ್ನು ಹಾಕಿ ಬಂಧಿಸಲಾಗಿತು.

ಇದನ್ನೂ ಓದಿ: ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

ಈಗ ರೈತ ಹೋರಾಟವನ್ನು ಬಗ್ಗು ಬಡಿಯಲು ಕೂಡ ದೆಹಲಿ ಪೊಲೀಸರು ಈ ಟೂಲ್‌ಕಿಟ್ ಮೊರೆ ಹೋಗಿದ್ದಾರೆ. ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆ ಪ್ರದೇಶದಲ್ಲಿ ಕೆಲವು ಪುಂಡರಿಂದಾದ ಗಲಭೆಯನ್ನು ರೈತ ಹೋರಾಟಗಾರರ ತಲೆಗೆ ಕಟ್ಟಲು ಅವರ ಹೆಸರುಗಳನ್ನು ಎಫ್‌ಐಆರ್‌ಗಳಲ್ಲಿ ಸೇರಿಸಲಾಗಿದೆ, ಯೋಗೇಂದ್ರ ಯಾದವ್ ಸೇರಿ ಹಲವರಿಗೆ ನೋಟಿಸ್ ನೀಡಲಾಗಿದೆ.

ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬಲಪ್ರದರ್ಶನದಿಂದ ಹತ್ತಿಕ್ಕಲು ಹೋಗಿ ಉತ್ತರಪ್ರದೇಶ ಪೊಲೀಸರು ಕೈ ಸುಟ್ಟುಕೊಂಡ ನಂತರ, ದೆಹಲಿ ಪೊಲೀಸರು ಎಚ್ಚರಗೊಂಡಿದ್ದಾರೆ. ಅವರೀಗ ರೈತ ಹೋರಾಟಕ್ಕೆ ಬಾಹ್ಯವಾಗಿ ಬೆಂಬಲ ನೀಡುತ್ತಿರುವ ಯುವಜನರ ಬೇಟೆ ಆರಂಭಿಸಿದ್ದಾರೆ.

ಇದರ ಪರಿಣಾಮವಾಗಿ ದಿಶಾ ರವಿ, ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಇಲ್ಲೂ ದೆಹಲಿ ಪೊಲೀಸರ ಟೂಲ್‌ಕಿಟ್ ಪ್ರಯೋಗವಾಗಿದೆ. ಕುತೂಹಲದ ವಿಷಯ ಎಂದರೆ, ಪ್ರತಿಭಟನೆಯ ಸ್ವರೂಪ ಹೇಗಿರಬೇಕು ಎಂಬ ಮಾರ್ಗಸೂಚಿಗಳನ್ನು ಒಳಗೊಂಡ ಟೂಲ್‌ಕಿಟ್ ಈಗ ದೆಹಲಿ ಪೊಲೀಸರ ಟಾರ್ಗೆಟ್ ಆಗಿದೆ!

ಇದನ್ನೂ ಓದಿ:  ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ಅಂದರೆ ತಮ್ಮ ಪ್ರಭು ಮತ್ತು ದಂಡನಾಯಕ ಎಡಿಟ್ ಮಾಡಿರುವ ಟೂಲ್‌ಕಿಟ್ ಈ ದೆಹಲಿ ಪೊಲೀಸರ ಅಸ್ತ್ರ. ದೇಶದ್ರೋಹಕ್ಕಾಗಿ ಐಪಿಸಿ ಸೆಕ್ಷನ್ಸ್ 124(A), ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಕ್ಕೆ 153 (A) ಮತ್ತು ಕ್ರಿಮಿನಲ್ ಪಿತೂರಿಗಾಗಿ 120 (B) ಮತ್ತು UAPA ಅಡಿಯಲ್ಲಿ ಯಾವಾಗ ಬೇಕಾದರೂ, ಸರ್ಕಾರವನ್ನು ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರು ಸ್ವತಂತ್ರರು!

ದೆಹಲಿ ಪೊಲೀಸರ ದ್ವಿಪಾತ್ರ ಅಭಿನಯ, ಮೂಕಪ್ರೇಕ್ಷಕರು ಮತ್ತು ಹೈಪರ್-ಆಕ್ಟಿವ್

ಹಾಗಂತ ಎಲ್ಲ ಸಂದರ್ಭಗಳಲ್ಲೂ ದೆಹಲಿ ಪೊಲೀಸರು ತಮ್ಮ ಸರ್ಕಾರಿ ಟೂಲ್‌ಕಿಟ್ ಬಳಸುತ್ತಾರೆ ಎಂದುಕೊಳ್ಳಬೇಡಿ. ಅವರು ಒಮ್ಮೊಮ್ಮೆ ಮೂಕಪ್ರೇಕ್ಷಕರಾಗಿ ’ಅಹಿಂಸಾವಾದ’ ಮೆರೆದಿದ್ದೂ ಇದೆ. ಪ್ರಭುಗಳ ಚೇಲಾಗಳು ನಡೆಸುವ ಹಿಂಸಾಚಾರದ ಸಂದರ್ಭಗಳಲ್ಲಿ ಇಂತಹ ನಿಲುವು ತಳೆಯುತ್ತಾರೆ. ಕೆಲವೊಮ್ಮೆ ಪ್ರಭುಗಳ ಅಣತಿಯಂತೆ, ತಾವೇ ಹಿಂಸಾಚಾರದಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಒಮ್ಮೆ ಮೂಕಪ್ರೇಕ್ಷಕರಾಗಿಯೂ, ಇನ್ನೊಮ್ಮೆ ಹೈಪರ್ ಆಕ್ಟಿವ್ ಆಗಿಯೂ ದ್ವಿಪಾತ್ರ ಅಭಿನಯ ಮಾಡುವ ’ಸಮರ’ ಕಲೆ ಅವರಿಗೆ ಸಿದ್ಧಿಯಾಗಿದೆ.

  • ಜೆಎನ್‌ಯುಗೆ ನುಗ್ಗಿದ ಗೂಂಡಾಗಳ ಪಡೆಯೊಂದು ರಾಡು, ಲಾಠಿಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಥಳಿಸುವಾಗ ದೆಹಲಿ ಪೊಲೀಸರು ಮೂಕಪ್ರೇಕ್ಷಕರು. ಈಗಲೂ ಆ ಕೇಸಿನಲ್ಲಿ ಒಬ್ಬರ ಬಂಧನವೂ ಆಗಿಲ್ಲ!
  • ಸಿಎಎ-ಎನ್‌ಆರ್‌ಸಿ ವಿರೋಧಿಸಿ ಶಾಹೀನ್ ಬಾಗ್ ಪ್ರತಿಭಟನಾಕಾರರು ನಡೆಸುತ್ತಿದ್ದ ಪಾದಯಾತ್ರೆ… ಏಕಾಏಕಿ ಒಬ್ಬ ಪುಂಡ ನೇರಾನೇರ ನಿಂತು ಪಿಸ್ತೂಲ್ ತೆಗೆದು ಪ್ರತಿಭಟನಾಕಾರರತ್ತ ಶೂಟ್ ಮಾಡತೊಡಗಿದ. ಆತನ ಹಿಂದುಗಡೆ ನಿಂತಿದ್ದ ಹಿಂಡು ಪೊಲೀಸರು ಏನೂ ನಡೆದೇ ಇಲ್ಲ ಎಂಬ ಭಾವದಲ್ಲಿದ್ದರು, ಮೂಕಪ್ರೇಕ್ಷಕರು!

ದಿಶಾಳ ವಾಟ್ಸಾಪ್ ಚಾಟ್ಸ್‌, ತನಿಖಾ ಮಾಹಿತಿ ಸೋರಿಕೆ: ನ್ಯೂಸ್‌ ಚಾನೆಲ್‌ಗಳಿಗೆ ನೋಟಿಸ್!

  • ಈಶಾನ್ಯ ದೆಹಲಿಯಲ್ಲಿ ಹುಟ್ಟು ಹಾಕಲಾದ ಗಲಭೆ ನಿಯಂತ್ರಣಕ್ಕೆ ತರಬೇಕಿದ್ದ ಪೊಲೀಸರು, ಮುಸ್ಲಿಮರ ಮನೆಗೆ ಪುಂಡಪೋಕರಿಗಳು, ದುಷ್ಕರ್ಮಿಗಳು ಬೆಂಕಿ ಹಚ್ಚುವಾಗ ಸುಮ್ಮನೆ ನಿಂತಿದ್ದರು. ಮತ್ತೆ ಮೂಕಪ್ರೇಕ್ಷಕರ ಪಾತ್ರ!
  • ದೆಹಲಿ ಗಲಭೆಗೆ ಸಂಬಂಧಿಸಿದಂತೆ, ಸಿಎಎ ವಿರೋಧಿ ಹೋರಾಟಗಾರರು, ಅಲ್ಪಸಂಖ್ಯಾತ ಸಂತಸ್ತ್ರರ ಮೇಲೆಯೇ ಎಫ್‌ಐಆರ್ ದಾಖಲಿಸಿದರು. ಹೈಪರ್-ಆಕ್ಟಿವ್ ರೋಲ್!
  • ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸುವವರೆಗೂ ಮೂಕಪ್ರೇಕ್ಷಕರು.
  • ನಂತರ ಫುಲ್‌ಚಾರ್ಜ್ ಆದ ಪೊಲೀಸರು ರೈತ ಮುಖಂಡರ ಮೇಲೆಯೇ ಎಫ್‌ಐಆರ್ ದಾಖಲಿಸಿದರು. ನೂರಾರು ರೈತ ಪ್ರತಿಭಟನಾಕರರನ್ನು ಜೈಲಿಗೆ ತಳ್ಳಿದರು.
  • ಸಿಂಘು ಗಡಿಯ ಒಂದು ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ನೇತೃತ್ವದ ದುಷ್ಕರ್ಮಿಗಳ ಗುಂಪೊಂದು ಪ್ರತಿಭಟನಾ ನಿರತ ರೈತರ ಮೇಲೆ ಕಲ್ಲು ತೂರಾಟ ನಡೆಸುವಾಗ ಪಕ್ಕದಲ್ಲೇ ನಿಂತಿದ್ದ ಪೊಲೀಸರು ಗಪ್‌ಚುಪ್. ಎರಡು ದಿನದ ನಂತರ, ಈ ಕಲ್ಲು ತೂರಾಟ ನಡೆಸಿದವರಿಗೂ, ಬಿಜೆಪಿಗೂ ಲಿಂಕ್ ಇದೆ ಎಂದು ವರದಿ ಮಾಡಿದ್ದ ಪತ್ರಕರ್ತನನ್ನು ಎಳೆದುಕೊಂಡು ಹಲ್ಲೆ ನಡೆಸಿ ಬಂಧಿಸಿದರು.

****

ಪಟ್ಟಿ ಮಾಡುತ್ತ ಹೋದರೆ, ಬಿಡಿ ಬಿಡಿ ಘಟನೆ ಬರೆಯುತ್ತ ಹೋದರೆ ಅದೇ ಒಂದು ದೊಡ್ಡ ಕತೆಯಾದೀತು. ಮೇಲಿನ ಎಲ್ಲ ಘಟನೆಗಳಲ್ಲೂ ದೆಹಲಿ ಪೊಲೀಸರು ಒಂದೋ ಮೂಕಪ್ರೇಕ್ಷಕರು ಇಲ್ಲವೇ ಹೈಪರ್-ಆಕ್ಟಿವ್ (ವಿಪರೀತ ಕಾರ್ಯಶೀಲರು). ಈ 6-7 ವರ್ಷಗಳಲ್ಲಿ ಅವರೆಂದೂ ಸಮಚಿತ್ತದ ಪೊಲೀಸರಾಗಿ ಕೆಲಸ ನಿರ್ವಹಿಸಿದ್ದೇ ಅಪರೂಪ.

ಹೀಗೆ ಒಂದಕ್ಕೊಂದು ತದ್ವಿರುದ್ಧವಾದ ದ್ವಿಪಾತ್ರ ಅಭಿನಯವನ್ನು ಸಲೀಸಾಗಿ ಮಾಡುತ್ತ ಹೊರಟಿರುವ ಅವರು, ಈಗ ತಮ್ಮ ಮೂರ್ಖ ನಿರ್ಧಾರಗಳಿಂದ ಜಾಗತಿಕ ಮಟ್ಟದಲ್ಲಿಯೂ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಇವರಿಗೆ ದ್ವಿಪಾತ್ರ ವಹಿಸಿದ ನಿರ್ದೇಶಕ ಅಮಿತ್ ಶಾ ಮತ್ತು ದಿಗ್ದರ್ಶಕ ಮೋದಿ ಅವರಂತೆಯೇ ದೆಹಲಿ ಪೊಲೀಸರು ಕೂಡ ಸಂವೇದನೆಯನ್ನೆ ಕಳೆದುಕೊಂಡ ವಿಕ್ಷಿಪ್ತ ಮನಸ್ಸಿನ ಮನುಷ್ಯರಾಗಿ ಬದಲಾಗಿದ್ದಾರೆ.

ಮೇಲಿನ ವಿಡಿಯೋ ಅಲ್ಟ್‌ನ್ಯೂಸ್ ಮತ್ತು ನ್ಯೂಯಾರ್ಕ್ ಟೈಮ್ಸ್ ದೃಢೀಕರಿಸಿದ ವಿಡಿಯೋವಾಗಿದೆ. ಇದು ದೆಹಲಿ ಹಿಂಸಾಚಾರ ಸಂದರ್ಭದ್ದಾಗಿದ್ದು, ಪೊಲೀಸರು ಐದಾರು ಮುಸ್ಲಿಂ ಯುವಕರನ್ನು ನೆಲಕ್ಕೆ ಕೆಡವಿ ಲಾಠಿಯಿಂದ ಮನಸೋ ಇಚ್ಛೆ ಥಳಿಸಿ ವಿಕೃತ ಆನಂದ ಪಡೆಯುವುದಲ್ಲದೇ ಜನಗಣಮನ ಹಾಡಲು ಒತ್ತಾಯಿಸುತ್ತಾ ಕ್ರೂರವಾಗಿ ನಡೆದುಕೊಂಡಿದ್ದರು. ಹೀಗೆ ಥಳಿತಕ್ಕೊಳಗಾದವರಲ್ಲಿ ಒಬ್ಬ ವ್ಯಕ್ತಿ ನಂತರದಲ್ಲಿ ಮೃತಪಟ್ಟಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತ್ತು.

ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...