Homeಅಂಕಣಗಳುಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

- Advertisement -
- Advertisement -

ಬೆಂಗಳೂರಿನಿಂದ 120-130 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆ ಎಂಬ ಎರಡು ಅಪರೂಪದ ವಿಭಿನ್ನ ಸ್ಥಳಗಳನ್ನು ಈ ಬರಹದ ಮೂಲಕ ಪರಿಚಯ ಮಾಡಿಕೊಡಲು ಇಚ್ಛಿಸುತ್ತೇನೆ. ಚಾರಣ ಮಾಡಲು, ಈಜಾಡಲು ಮತ್ತು ಈ ಸ್ಥಳಗಳ ಬಗ್ಗೆ ಅಧ್ಯಯನ ಮಾಡಲು ಇವು ಹೇಳಿಮಾಡಿಸಿದ ಸುಂದರ ತಾಣಗಳಾಗಿವೆ.

ಕುಂತಿ ಬೆಟ್ಟ

ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ತೆರಳಿದರೆ (120 ಕಿ.ಮೀ) ಪಾಂಡವಪುರ ಟೌನ್‌ಗೂ ಮುನ್ನವೇ ಕುಂತಿ ಬೆಟ್ಟ ನಿಮ್ಮ ಗಮನ ಸೆಳೆಯುತ್ತದೆ. ಮೈಸೂರಿನಿಂದ ಬಂದರೆ (30 ಕಿ.ಮೀ), ಪಾಂಡವಪುರ ದಾಟಿ ಮಂಡ್ಯ ಮಾರ್ಗವಾಗಿ 5 ಕಿ.ಮೀ ದೂರ ಕ್ರಮಿಸಿದರೆ ಕುಂತಿ ಬೆಟ್ಟ ಕಾಣಸಿಗುತ್ತದೆ. ಪಾಂಡವಪುರ ಕೆರೆ ತಪ್ಪಲಿನಲ್ಲಿರುವ ಈ ಎರಡು – ಮೂರು ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕುಂತಿ ಬೆಟ್ಟಕ್ಕೆ ಹತ್ತಲು ಸುಗಮ ದಾರಿಯಿದೆ. ಒಂದೆರಡು ಕಡೆ ಮಾತ್ರ ಬಂಡೆಗಳಿದ್ದು ಎಚ್ಚರಿಕೆಯಿಂದ ಹತ್ತಬೇಕು. ಉಳಿದೆಡೆ ಆರಾಮಾವಾಗಿ ಸುತ್ತಲಿನ ಹಸಿರು ಮರಗಿಡಗಳನ್ನು ನೋಡುತ್ತ, ಕೆರೆಯ ನೋಟವನ್ನು ಅಸ್ವಾದಿಸುತ್ತಾ, ಸುಸ್ತಾದರೆ ಕುಳಿತು ವಿಹರಿಸುತ್ತಾ ಬೆಟ್ಟ ಹತ್ತಬಹುದು. ಬೆಳ್ಳಂ ಬೆಳಿಗ್ಗೆಯೇ ನೀವು ಹತ್ತಲು ಪ್ರಾರಂಭಿಸಿದರೆ, ಒಂದು-ಒಂದೂವರೆ ಗಂಟೆಯಲ್ಲಿ ಆರಾಮವಾಗಿ ಬೆಟ್ಟದ ತುದಿ ತಲುಪಬಹುದು. ಬೆಳಿಗ್ಗೆ 9 ಗಂಟೆಯ ನಂತರವಾದರೆ ಬಿಸಿಲಿನ ಝಳ ಜೋರಾಗಿರುವುದರಿಂದ ಸುಮಾರು 2 ಗಂಟೆಗಳ ಸಮಯ ಬೇಕು.

ಸಮುದ್ರಮಟ್ಟದಿಂದ 2882 ಮೀಟರ್ ಎತ್ತರವಿರುವ ಈ ಬೆಟ್ಟದ ತುದಿಯಲ್ಲಿ ದೊಡ್ಡ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಚಾರಣಿಗರು ಅಲ್ಲಿ ಕುಳಿತು ವಿರಮಿಸಬಹುದು. ಅಲ್ಲಿಂದ, ಸುತ್ತ ಮುತ್ತಲಿನ ಹಸಿರು ಕಬ್ಬು ಮತ್ತು ಭತ್ತದ ಗದ್ದೆಗಳನ್ನು ನೋಡಬಹುದು. ಪಾಂಡವಪುರ ನಗರ, ಅದರ ಕೆರೆ, ದೂರದ ಮೇಲುಕೋಟೆ ಬೆಟ್ಟ, ಕರಿಘಟ್ಟ ಇವೆಲ್ಲವೂ ಬೆಟ್ಟದ ಮೇಲಿನಿಂದ ಕಣ್ಣಳತೆಗೆ ಸಿಗುತ್ತವೆ.

ಸುತ್ತಲಿನ ಸುಂದರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಲೇ ನೀವು ತಂದಿದ್ದ ಊಟ, ತಿಂಡಿಗಳನ್ನು ಸವಿಯುವುದು ಅಪರೂಪ ಅನುಭವವೇ ಸರಿ. ನೀವು ಅಲ್ಲಿಗೆ ಹೋಗುವಾಗ ಸಾಕಷ್ಟು ಊಟ-ತಿಂಡಿ ಮತ್ತು ನೀರನ್ನು ಒಯ್ಯುವುದು ಪೂರ್ವ ಷರತ್ತಾಗಿದೆ. ನಂತರ ಅಲ್ಲಿಂದ ಕೆಳಗಿಳಿಯಲು ಒಂದು ಗಂಟೆ ಸಮಯ ಬೇಕಾಗುತ್ತದೆ. ಆಸಕ್ತರು ಎಚ್ಚರಿಕೆಯಿಂದ ರಾತ್ರಿ ವೇಳೆಯೂ ಸಹ ಚಾರಣ ಮಾಡಲು ಅವಕಾಶವಿದೆ.

ಬೆಟ್ಟದ ತಪ್ಪಲಿನಲ್ಲಿ ಕುಂತಿ ಕೊಳ ಹೆಸರಿನ ಕೊಳವೊಂದಿದೆ. ಅಲ್ಲಿ ಹೋಟೆಲ್ ಸಹ ಇದ್ದು ಅಲ್ಲಿ ನೀವು ವಿರಮಿಸಬಹುದು. ಬಹಳ ತಂಪಾದ ಸ್ಥಳ ಇದಾಗಿದ್ದು, ಚಳಿಗಾಲ ಇಲ್ಲಿಗೆ ಪ್ರವಾಸ ಮಾಡಲು ಸೂಕ್ತ ಸಮಯವಾಗಿದೆ.

ಇಲ್ಲಿನ ಪಕ್ಕದ ಊರು ಚಿಕ್ಕಾಡೆ. ಅದೇ ರೀತಿ ಪಾಂಡವಪುರ ಮೊದಲಿನ ಹೆಸರು ಈರೋಡೆ ಎಂಬುದಾಗಿತ್ತು. ಈಗಲೂ ಈರೋಡೆ ಬೀದಿ ಅಲ್ಲಿದೆ. ಈ ಬೆಟ್ಟದಲ್ಲಿ ಬಕಾಸುರ ವಾಸವಿದ್ದ, ಆತನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆಯು, ಈರೋಡೆಯಿಂದ ಹಿರಿಎಡೆಯೂ ಸರಬರಾಜು ಆಗುತ್ತಿತ್ತು ಎಂಬ ಪ್ರತೀತಿ ಇದೆ. ವನವಾಸದ ಸಮಯದಲ್ಲಿ ಕುಂತಿ ಮತ್ತು ಐವರು ಮಕ್ಕಳು ಇಲ್ಲಿಗೆ ಬಂದರು. ಭೀಮ ಬಕಾಸುರನನ್ನು ವಧಿಸಿದ ಸ್ಥಳ ಇದು. ಹಾಗಾಗಿ ಇದಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂತು. ಬೆಟ್ಟದ ತುದಿಯಲ್ಲಿನ ಕಲ್ಲು ಕುಂತಿ ಬಳಸುತ್ತಿದ್ದ ಒನಕೆ ಎಂಬಂತಹ ದಂತಕತೆಗಳನ್ನು, ಪುರಾಣಗಳನ್ನು ಸ್ಥಳೀಯ ಜನ ಹೇಳುತ್ತಾರೆ.

ಈ ಪುರಾಣ ಪ್ರತೀತಿಗಳ ಹೊರತಾಗಿಯೂ ಚಾರಣಿಗರಿಗೆ ಖುಷಿ ಕೊಡುವ ಬೆಟ್ಟ ಇದಾಗಿದೆ. ಇನ್ನು ಇಲ್ಲಿ ಚಾರಣ ಮುಗಿಸಿ ಮಧ್ಯಾಹ್ನದ ವೇಳೆಗೆ ನೀವು ಪಾಂಡವಪುರ ದಾಟಿ 8-9 ಕಿ.ಮೀ ದೂರ ಕ್ರಮಿಸಿದರೆ ಕೆರೆ ತೊಣ್ಣೂರು ಎಂಬ ಗ್ರಾಮ ಸಿಗುತ್ತದೆ. ವಿಷ್ಣುವರ್ಧನನ ಕಾಲದಲ್ಲಿ ಇಲ್ಲಿ ನಂಬಿನಾರಾಯಣ ಮತ್ತು ಶ್ರೀ ವೇಣುಗೋಪಾಲರ ಎರಡು ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿದೆ.

ತೊಣ್ಣೂರು ಕೆರೆ

ತೊಣ್ಣೂರು ಗ್ರಾಮದ ಬಳಿ ಇರುವ ತೊಣ್ಣೂರು ಕೆರೆಯು 8-10 ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ದೊಡ್ಡ ಕೆರೆಯಾಗಿದೆ. ಈ ವಿಶಾಲ ಕೆರೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಬೆಟ್ಟದ ಸಾಲುಗಳ ಪಕ್ಕದಲ್ಲಿಯೇ ಈ ಕೆರೆ ಇದ್ದು ನೋಡುತ್ತ ಕುಳಿತರೆ ನೋಡುತ್ತಲೇ ಇರಬೇಕೆನಿಸುತ್ತದೆ. ಪ್ರವಾಸಿಗರಿಗಾಗಿ ಗೋಪುರವೊಂದನ್ನು ನಿರ್ಮಿಸಲಾಗಿದೆ.

ಅಣೆಕಟ್ಟು ಮಾದರಿಯಲ್ಲಿ ಅದರ ದಡವನ್ನು ನಿರ್ಮಿಸಲಾಗಿದ್ದು, ಬಹಳ ಆಳದ ಕೆರೆಯಾದ್ದರಿಂದ ನೀರಿಗೆ ಇಳಿಯದಿರಲು ಮನವಿ ಮಾಡಲಾಗಿದೆ. ಆ ಕೆರೆಯಿಂದ ಸಣ್ಣ ಕಾಲುವೆಯ ರೀತಿ ನೀರು ಹರಿದು ಮೇಲಿನಿಂದ ಜಲಪಾತದ ಮಾದರಿಯಲ್ಲಿ ಧುಮ್ಮಿಕ್ಕುತ್ತದೆ. ಅದನ್ನು ಸ್ಥಳೀಯರು ಮದಗ ಎಂದು ಕರೆಯುತ್ತಾರೆ. ಆ ನೀರಿಗೆ ಮೈಯೊಡ್ಡಿ ಸ್ನಾನ ಮಾಡಬಹುದು. ಅದರ ಪಕ್ಕದಲ್ಲಿ ಕಾಲುವೆಯ ರೀತಿ ನೀರು ವೇಗವಾಗಿ ಹರಿಯುತ್ತದೆ. ಅಲ್ಲಿ ಮಕ್ಕಳೊಂದಿಗೆ ಕೂಡಿ ಮನೆಮಂದಿಯೆಲ್ಲಾ ನೀರಿನೊಂದಿಗೆ ಆಟವಾಡಲು, ಸ್ನಾನ ಮಾಡಲು ಪ್ರಶಸ್ತ ಜಾಗವಾಗಿದೆ.

ಕೆರೆಯ ಮತ್ತೊಂದು ಬದಿಯು ಮರಳಿನಿಂದ ಆವೃತವಾಗಿದ್ದು, ಅಲ್ಲಿ ಈಜಾಡಬಹುದು ಮತ್ತು ವಿಹರಿಸಬಹುದು. ಅದು ನಿಮಗೆ ಸಮುದ್ರದಡದ ಅನುಭವ ನೀಡುತ್ತದೆ. ಅಲ್ಲಿ ಕೆರೆ ಆಳವಿಲ್ಲವಾದ್ದರಿಂದ ಯಾವುದೇ ಭಯವಿಲ್ಲದೆ ನೀರಿನಲ್ಲಿ ಆಟವಾಡಬಹುದು.

ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರು ಒದಗಿಸುವ ಈ ಕೆರೆ ಅತ್ಯುತ್ತಮ ಪ್ರವಾಸಿಸ್ಥಳವೆನ್ನಬಹುದು. ಕೆರೆಯ ಪಕ್ಕದಲ್ಲಿಯೇ ಬೆಟ್ಟವಿದ್ದು ಹತ್ತಿ ಸಂತಸಬಹುದು. ಬೆಟ್ಟದ ಮೇಲೆ ಹಲವು ದೇವಾಲಯಗಳಿವೆ.

ಇತ್ತೀಚೆಗೆ ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿಪಡಿಸುತ್ತಿದ್ದರೂ, ಇಲ್ಲಿ ಹೋಟೆಲ್‌ಗಳಿಲ್ಲ. ಹಾಗಾಗಿ ನೀವು ಮನೆಯಿಂದ ಹೊರಡುವಾಗಲೇ ಊಟ, ತಿಂಡಿಗಳನ್ನು ಒಯ್ಯುವುದು ಒಳ್ಳೆಯದು. ಅಲ್ಲಿ ಟೀ-ಬಜ್ಜಿ ರೀತಿಯ ಸ್ನ್ಯಾಕ್ಸ್ ಅಷ್ಟೇ ಲಭ್ಯವಿವೆ.

ಸ್ವಂತ ವಾಹನದಲ್ಲಿ ಹೋದರೆ ಉತ್ತಮ. ಇಲ್ಲದಿದ್ದಲ್ಲಿ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆಗಳಿಗೆ ಪಾಂಡವಪುರ ಟೌನ್‌ನಿಂದ ಬಸ್ ವ್ಯವಸ್ಥೆ ಸಹ ಇದೆ. ಅಲ್ಲಿಂದ ಬಾಡಿಗೆ ಆಟೋದಲ್ಲಿಯೂ ಹೋಗಬಹುದು. ಬೆಂಗಳೂರು-ಮೈಸೂರಿನಿಂದ ಪಾಂಡವಪುರ ತಲುಪಲು ರೈಲು ವ್ಯವಸ್ಥೆ ಸಹ ಇದೆ.

ಒಂದು ದಿನದಲ್ಲಿ ಇವೆರಡೂ ಸ್ಥಳಗಳನ್ನು ನೋಡಿಬರಬಹುದು. ನೀವು ಪ್ರವಾಸ ಮುಂದುವರೆಸಬಯಸಿದರೆ ಪಕ್ಕದಲ್ಲಿಯೇ ಮೇಲುಕೋಟೆ, ಶ್ರೀರಂಗಪಟ್ಟಣ, ರಂಗನತಿಟ್ಟು, ಎಡಮುರಿ-ಬಲಮುರಿ, ಕೆಆರ್‌ಎಸ್ ಥರದ ಹತ್ತಾರು ಸ್ಥಳಗಳನ್ನು ನೋಡಬಹುದಾಗಿದೆ.


ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...