Homeಅಂಕಣಗಳುಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

- Advertisement -
- Advertisement -

ಬೆಂಗಳೂರಿನಿಂದ 120-130 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆ ಎಂಬ ಎರಡು ಅಪರೂಪದ ವಿಭಿನ್ನ ಸ್ಥಳಗಳನ್ನು ಈ ಬರಹದ ಮೂಲಕ ಪರಿಚಯ ಮಾಡಿಕೊಡಲು ಇಚ್ಛಿಸುತ್ತೇನೆ. ಚಾರಣ ಮಾಡಲು, ಈಜಾಡಲು ಮತ್ತು ಈ ಸ್ಥಳಗಳ ಬಗ್ಗೆ ಅಧ್ಯಯನ ಮಾಡಲು ಇವು ಹೇಳಿಮಾಡಿಸಿದ ಸುಂದರ ತಾಣಗಳಾಗಿವೆ.

ಕುಂತಿ ಬೆಟ್ಟ

ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ತೆರಳಿದರೆ (120 ಕಿ.ಮೀ) ಪಾಂಡವಪುರ ಟೌನ್‌ಗೂ ಮುನ್ನವೇ ಕುಂತಿ ಬೆಟ್ಟ ನಿಮ್ಮ ಗಮನ ಸೆಳೆಯುತ್ತದೆ. ಮೈಸೂರಿನಿಂದ ಬಂದರೆ (30 ಕಿ.ಮೀ), ಪಾಂಡವಪುರ ದಾಟಿ ಮಂಡ್ಯ ಮಾರ್ಗವಾಗಿ 5 ಕಿ.ಮೀ ದೂರ ಕ್ರಮಿಸಿದರೆ ಕುಂತಿ ಬೆಟ್ಟ ಕಾಣಸಿಗುತ್ತದೆ. ಪಾಂಡವಪುರ ಕೆರೆ ತಪ್ಪಲಿನಲ್ಲಿರುವ ಈ ಎರಡು – ಮೂರು ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕುಂತಿ ಬೆಟ್ಟಕ್ಕೆ ಹತ್ತಲು ಸುಗಮ ದಾರಿಯಿದೆ. ಒಂದೆರಡು ಕಡೆ ಮಾತ್ರ ಬಂಡೆಗಳಿದ್ದು ಎಚ್ಚರಿಕೆಯಿಂದ ಹತ್ತಬೇಕು. ಉಳಿದೆಡೆ ಆರಾಮಾವಾಗಿ ಸುತ್ತಲಿನ ಹಸಿರು ಮರಗಿಡಗಳನ್ನು ನೋಡುತ್ತ, ಕೆರೆಯ ನೋಟವನ್ನು ಅಸ್ವಾದಿಸುತ್ತಾ, ಸುಸ್ತಾದರೆ ಕುಳಿತು ವಿಹರಿಸುತ್ತಾ ಬೆಟ್ಟ ಹತ್ತಬಹುದು. ಬೆಳ್ಳಂ ಬೆಳಿಗ್ಗೆಯೇ ನೀವು ಹತ್ತಲು ಪ್ರಾರಂಭಿಸಿದರೆ, ಒಂದು-ಒಂದೂವರೆ ಗಂಟೆಯಲ್ಲಿ ಆರಾಮವಾಗಿ ಬೆಟ್ಟದ ತುದಿ ತಲುಪಬಹುದು. ಬೆಳಿಗ್ಗೆ 9 ಗಂಟೆಯ ನಂತರವಾದರೆ ಬಿಸಿಲಿನ ಝಳ ಜೋರಾಗಿರುವುದರಿಂದ ಸುಮಾರು 2 ಗಂಟೆಗಳ ಸಮಯ ಬೇಕು.

ಸಮುದ್ರಮಟ್ಟದಿಂದ 2882 ಮೀಟರ್ ಎತ್ತರವಿರುವ ಈ ಬೆಟ್ಟದ ತುದಿಯಲ್ಲಿ ದೊಡ್ಡ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಚಾರಣಿಗರು ಅಲ್ಲಿ ಕುಳಿತು ವಿರಮಿಸಬಹುದು. ಅಲ್ಲಿಂದ, ಸುತ್ತ ಮುತ್ತಲಿನ ಹಸಿರು ಕಬ್ಬು ಮತ್ತು ಭತ್ತದ ಗದ್ದೆಗಳನ್ನು ನೋಡಬಹುದು. ಪಾಂಡವಪುರ ನಗರ, ಅದರ ಕೆರೆ, ದೂರದ ಮೇಲುಕೋಟೆ ಬೆಟ್ಟ, ಕರಿಘಟ್ಟ ಇವೆಲ್ಲವೂ ಬೆಟ್ಟದ ಮೇಲಿನಿಂದ ಕಣ್ಣಳತೆಗೆ ಸಿಗುತ್ತವೆ.

ಸುತ್ತಲಿನ ಸುಂದರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಲೇ ನೀವು ತಂದಿದ್ದ ಊಟ, ತಿಂಡಿಗಳನ್ನು ಸವಿಯುವುದು ಅಪರೂಪ ಅನುಭವವೇ ಸರಿ. ನೀವು ಅಲ್ಲಿಗೆ ಹೋಗುವಾಗ ಸಾಕಷ್ಟು ಊಟ-ತಿಂಡಿ ಮತ್ತು ನೀರನ್ನು ಒಯ್ಯುವುದು ಪೂರ್ವ ಷರತ್ತಾಗಿದೆ. ನಂತರ ಅಲ್ಲಿಂದ ಕೆಳಗಿಳಿಯಲು ಒಂದು ಗಂಟೆ ಸಮಯ ಬೇಕಾಗುತ್ತದೆ. ಆಸಕ್ತರು ಎಚ್ಚರಿಕೆಯಿಂದ ರಾತ್ರಿ ವೇಳೆಯೂ ಸಹ ಚಾರಣ ಮಾಡಲು ಅವಕಾಶವಿದೆ.

ಬೆಟ್ಟದ ತಪ್ಪಲಿನಲ್ಲಿ ಕುಂತಿ ಕೊಳ ಹೆಸರಿನ ಕೊಳವೊಂದಿದೆ. ಅಲ್ಲಿ ಹೋಟೆಲ್ ಸಹ ಇದ್ದು ಅಲ್ಲಿ ನೀವು ವಿರಮಿಸಬಹುದು. ಬಹಳ ತಂಪಾದ ಸ್ಥಳ ಇದಾಗಿದ್ದು, ಚಳಿಗಾಲ ಇಲ್ಲಿಗೆ ಪ್ರವಾಸ ಮಾಡಲು ಸೂಕ್ತ ಸಮಯವಾಗಿದೆ.

ಇಲ್ಲಿನ ಪಕ್ಕದ ಊರು ಚಿಕ್ಕಾಡೆ. ಅದೇ ರೀತಿ ಪಾಂಡವಪುರ ಮೊದಲಿನ ಹೆಸರು ಈರೋಡೆ ಎಂಬುದಾಗಿತ್ತು. ಈಗಲೂ ಈರೋಡೆ ಬೀದಿ ಅಲ್ಲಿದೆ. ಈ ಬೆಟ್ಟದಲ್ಲಿ ಬಕಾಸುರ ವಾಸವಿದ್ದ, ಆತನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆಯು, ಈರೋಡೆಯಿಂದ ಹಿರಿಎಡೆಯೂ ಸರಬರಾಜು ಆಗುತ್ತಿತ್ತು ಎಂಬ ಪ್ರತೀತಿ ಇದೆ. ವನವಾಸದ ಸಮಯದಲ್ಲಿ ಕುಂತಿ ಮತ್ತು ಐವರು ಮಕ್ಕಳು ಇಲ್ಲಿಗೆ ಬಂದರು. ಭೀಮ ಬಕಾಸುರನನ್ನು ವಧಿಸಿದ ಸ್ಥಳ ಇದು. ಹಾಗಾಗಿ ಇದಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂತು. ಬೆಟ್ಟದ ತುದಿಯಲ್ಲಿನ ಕಲ್ಲು ಕುಂತಿ ಬಳಸುತ್ತಿದ್ದ ಒನಕೆ ಎಂಬಂತಹ ದಂತಕತೆಗಳನ್ನು, ಪುರಾಣಗಳನ್ನು ಸ್ಥಳೀಯ ಜನ ಹೇಳುತ್ತಾರೆ.

ಈ ಪುರಾಣ ಪ್ರತೀತಿಗಳ ಹೊರತಾಗಿಯೂ ಚಾರಣಿಗರಿಗೆ ಖುಷಿ ಕೊಡುವ ಬೆಟ್ಟ ಇದಾಗಿದೆ. ಇನ್ನು ಇಲ್ಲಿ ಚಾರಣ ಮುಗಿಸಿ ಮಧ್ಯಾಹ್ನದ ವೇಳೆಗೆ ನೀವು ಪಾಂಡವಪುರ ದಾಟಿ 8-9 ಕಿ.ಮೀ ದೂರ ಕ್ರಮಿಸಿದರೆ ಕೆರೆ ತೊಣ್ಣೂರು ಎಂಬ ಗ್ರಾಮ ಸಿಗುತ್ತದೆ. ವಿಷ್ಣುವರ್ಧನನ ಕಾಲದಲ್ಲಿ ಇಲ್ಲಿ ನಂಬಿನಾರಾಯಣ ಮತ್ತು ಶ್ರೀ ವೇಣುಗೋಪಾಲರ ಎರಡು ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿದೆ.

ತೊಣ್ಣೂರು ಕೆರೆ

ತೊಣ್ಣೂರು ಗ್ರಾಮದ ಬಳಿ ಇರುವ ತೊಣ್ಣೂರು ಕೆರೆಯು 8-10 ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ದೊಡ್ಡ ಕೆರೆಯಾಗಿದೆ. ಈ ವಿಶಾಲ ಕೆರೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಬೆಟ್ಟದ ಸಾಲುಗಳ ಪಕ್ಕದಲ್ಲಿಯೇ ಈ ಕೆರೆ ಇದ್ದು ನೋಡುತ್ತ ಕುಳಿತರೆ ನೋಡುತ್ತಲೇ ಇರಬೇಕೆನಿಸುತ್ತದೆ. ಪ್ರವಾಸಿಗರಿಗಾಗಿ ಗೋಪುರವೊಂದನ್ನು ನಿರ್ಮಿಸಲಾಗಿದೆ.

ಅಣೆಕಟ್ಟು ಮಾದರಿಯಲ್ಲಿ ಅದರ ದಡವನ್ನು ನಿರ್ಮಿಸಲಾಗಿದ್ದು, ಬಹಳ ಆಳದ ಕೆರೆಯಾದ್ದರಿಂದ ನೀರಿಗೆ ಇಳಿಯದಿರಲು ಮನವಿ ಮಾಡಲಾಗಿದೆ. ಆ ಕೆರೆಯಿಂದ ಸಣ್ಣ ಕಾಲುವೆಯ ರೀತಿ ನೀರು ಹರಿದು ಮೇಲಿನಿಂದ ಜಲಪಾತದ ಮಾದರಿಯಲ್ಲಿ ಧುಮ್ಮಿಕ್ಕುತ್ತದೆ. ಅದನ್ನು ಸ್ಥಳೀಯರು ಮದಗ ಎಂದು ಕರೆಯುತ್ತಾರೆ. ಆ ನೀರಿಗೆ ಮೈಯೊಡ್ಡಿ ಸ್ನಾನ ಮಾಡಬಹುದು. ಅದರ ಪಕ್ಕದಲ್ಲಿ ಕಾಲುವೆಯ ರೀತಿ ನೀರು ವೇಗವಾಗಿ ಹರಿಯುತ್ತದೆ. ಅಲ್ಲಿ ಮಕ್ಕಳೊಂದಿಗೆ ಕೂಡಿ ಮನೆಮಂದಿಯೆಲ್ಲಾ ನೀರಿನೊಂದಿಗೆ ಆಟವಾಡಲು, ಸ್ನಾನ ಮಾಡಲು ಪ್ರಶಸ್ತ ಜಾಗವಾಗಿದೆ.

ಕೆರೆಯ ಮತ್ತೊಂದು ಬದಿಯು ಮರಳಿನಿಂದ ಆವೃತವಾಗಿದ್ದು, ಅಲ್ಲಿ ಈಜಾಡಬಹುದು ಮತ್ತು ವಿಹರಿಸಬಹುದು. ಅದು ನಿಮಗೆ ಸಮುದ್ರದಡದ ಅನುಭವ ನೀಡುತ್ತದೆ. ಅಲ್ಲಿ ಕೆರೆ ಆಳವಿಲ್ಲವಾದ್ದರಿಂದ ಯಾವುದೇ ಭಯವಿಲ್ಲದೆ ನೀರಿನಲ್ಲಿ ಆಟವಾಡಬಹುದು.

ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರು ಒದಗಿಸುವ ಈ ಕೆರೆ ಅತ್ಯುತ್ತಮ ಪ್ರವಾಸಿಸ್ಥಳವೆನ್ನಬಹುದು. ಕೆರೆಯ ಪಕ್ಕದಲ್ಲಿಯೇ ಬೆಟ್ಟವಿದ್ದು ಹತ್ತಿ ಸಂತಸಬಹುದು. ಬೆಟ್ಟದ ಮೇಲೆ ಹಲವು ದೇವಾಲಯಗಳಿವೆ.

ಇತ್ತೀಚೆಗೆ ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿಪಡಿಸುತ್ತಿದ್ದರೂ, ಇಲ್ಲಿ ಹೋಟೆಲ್‌ಗಳಿಲ್ಲ. ಹಾಗಾಗಿ ನೀವು ಮನೆಯಿಂದ ಹೊರಡುವಾಗಲೇ ಊಟ, ತಿಂಡಿಗಳನ್ನು ಒಯ್ಯುವುದು ಒಳ್ಳೆಯದು. ಅಲ್ಲಿ ಟೀ-ಬಜ್ಜಿ ರೀತಿಯ ಸ್ನ್ಯಾಕ್ಸ್ ಅಷ್ಟೇ ಲಭ್ಯವಿವೆ.

ಸ್ವಂತ ವಾಹನದಲ್ಲಿ ಹೋದರೆ ಉತ್ತಮ. ಇಲ್ಲದಿದ್ದಲ್ಲಿ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆಗಳಿಗೆ ಪಾಂಡವಪುರ ಟೌನ್‌ನಿಂದ ಬಸ್ ವ್ಯವಸ್ಥೆ ಸಹ ಇದೆ. ಅಲ್ಲಿಂದ ಬಾಡಿಗೆ ಆಟೋದಲ್ಲಿಯೂ ಹೋಗಬಹುದು. ಬೆಂಗಳೂರು-ಮೈಸೂರಿನಿಂದ ಪಾಂಡವಪುರ ತಲುಪಲು ರೈಲು ವ್ಯವಸ್ಥೆ ಸಹ ಇದೆ.

ಒಂದು ದಿನದಲ್ಲಿ ಇವೆರಡೂ ಸ್ಥಳಗಳನ್ನು ನೋಡಿಬರಬಹುದು. ನೀವು ಪ್ರವಾಸ ಮುಂದುವರೆಸಬಯಸಿದರೆ ಪಕ್ಕದಲ್ಲಿಯೇ ಮೇಲುಕೋಟೆ, ಶ್ರೀರಂಗಪಟ್ಟಣ, ರಂಗನತಿಟ್ಟು, ಎಡಮುರಿ-ಬಲಮುರಿ, ಕೆಆರ್‌ಎಸ್ ಥರದ ಹತ್ತಾರು ಸ್ಥಳಗಳನ್ನು ನೋಡಬಹುದಾಗಿದೆ.


ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...