Homeಅಂಕಣಗಳುಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

- Advertisement -
- Advertisement -

ಬೆಂಗಳೂರಿನಿಂದ 120-130 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆ ಎಂಬ ಎರಡು ಅಪರೂಪದ ವಿಭಿನ್ನ ಸ್ಥಳಗಳನ್ನು ಈ ಬರಹದ ಮೂಲಕ ಪರಿಚಯ ಮಾಡಿಕೊಡಲು ಇಚ್ಛಿಸುತ್ತೇನೆ. ಚಾರಣ ಮಾಡಲು, ಈಜಾಡಲು ಮತ್ತು ಈ ಸ್ಥಳಗಳ ಬಗ್ಗೆ ಅಧ್ಯಯನ ಮಾಡಲು ಇವು ಹೇಳಿಮಾಡಿಸಿದ ಸುಂದರ ತಾಣಗಳಾಗಿವೆ.

ಕುಂತಿ ಬೆಟ್ಟ

ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ತೆರಳಿದರೆ (120 ಕಿ.ಮೀ) ಪಾಂಡವಪುರ ಟೌನ್‌ಗೂ ಮುನ್ನವೇ ಕುಂತಿ ಬೆಟ್ಟ ನಿಮ್ಮ ಗಮನ ಸೆಳೆಯುತ್ತದೆ. ಮೈಸೂರಿನಿಂದ ಬಂದರೆ (30 ಕಿ.ಮೀ), ಪಾಂಡವಪುರ ದಾಟಿ ಮಂಡ್ಯ ಮಾರ್ಗವಾಗಿ 5 ಕಿ.ಮೀ ದೂರ ಕ್ರಮಿಸಿದರೆ ಕುಂತಿ ಬೆಟ್ಟ ಕಾಣಸಿಗುತ್ತದೆ. ಪಾಂಡವಪುರ ಕೆರೆ ತಪ್ಪಲಿನಲ್ಲಿರುವ ಈ ಎರಡು – ಮೂರು ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕುಂತಿ ಬೆಟ್ಟಕ್ಕೆ ಹತ್ತಲು ಸುಗಮ ದಾರಿಯಿದೆ. ಒಂದೆರಡು ಕಡೆ ಮಾತ್ರ ಬಂಡೆಗಳಿದ್ದು ಎಚ್ಚರಿಕೆಯಿಂದ ಹತ್ತಬೇಕು. ಉಳಿದೆಡೆ ಆರಾಮಾವಾಗಿ ಸುತ್ತಲಿನ ಹಸಿರು ಮರಗಿಡಗಳನ್ನು ನೋಡುತ್ತ, ಕೆರೆಯ ನೋಟವನ್ನು ಅಸ್ವಾದಿಸುತ್ತಾ, ಸುಸ್ತಾದರೆ ಕುಳಿತು ವಿಹರಿಸುತ್ತಾ ಬೆಟ್ಟ ಹತ್ತಬಹುದು. ಬೆಳ್ಳಂ ಬೆಳಿಗ್ಗೆಯೇ ನೀವು ಹತ್ತಲು ಪ್ರಾರಂಭಿಸಿದರೆ, ಒಂದು-ಒಂದೂವರೆ ಗಂಟೆಯಲ್ಲಿ ಆರಾಮವಾಗಿ ಬೆಟ್ಟದ ತುದಿ ತಲುಪಬಹುದು. ಬೆಳಿಗ್ಗೆ 9 ಗಂಟೆಯ ನಂತರವಾದರೆ ಬಿಸಿಲಿನ ಝಳ ಜೋರಾಗಿರುವುದರಿಂದ ಸುಮಾರು 2 ಗಂಟೆಗಳ ಸಮಯ ಬೇಕು.

ಸಮುದ್ರಮಟ್ಟದಿಂದ 2882 ಮೀಟರ್ ಎತ್ತರವಿರುವ ಈ ಬೆಟ್ಟದ ತುದಿಯಲ್ಲಿ ದೊಡ್ಡ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಚಾರಣಿಗರು ಅಲ್ಲಿ ಕುಳಿತು ವಿರಮಿಸಬಹುದು. ಅಲ್ಲಿಂದ, ಸುತ್ತ ಮುತ್ತಲಿನ ಹಸಿರು ಕಬ್ಬು ಮತ್ತು ಭತ್ತದ ಗದ್ದೆಗಳನ್ನು ನೋಡಬಹುದು. ಪಾಂಡವಪುರ ನಗರ, ಅದರ ಕೆರೆ, ದೂರದ ಮೇಲುಕೋಟೆ ಬೆಟ್ಟ, ಕರಿಘಟ್ಟ ಇವೆಲ್ಲವೂ ಬೆಟ್ಟದ ಮೇಲಿನಿಂದ ಕಣ್ಣಳತೆಗೆ ಸಿಗುತ್ತವೆ.

ಸುತ್ತಲಿನ ಸುಂದರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಲೇ ನೀವು ತಂದಿದ್ದ ಊಟ, ತಿಂಡಿಗಳನ್ನು ಸವಿಯುವುದು ಅಪರೂಪ ಅನುಭವವೇ ಸರಿ. ನೀವು ಅಲ್ಲಿಗೆ ಹೋಗುವಾಗ ಸಾಕಷ್ಟು ಊಟ-ತಿಂಡಿ ಮತ್ತು ನೀರನ್ನು ಒಯ್ಯುವುದು ಪೂರ್ವ ಷರತ್ತಾಗಿದೆ. ನಂತರ ಅಲ್ಲಿಂದ ಕೆಳಗಿಳಿಯಲು ಒಂದು ಗಂಟೆ ಸಮಯ ಬೇಕಾಗುತ್ತದೆ. ಆಸಕ್ತರು ಎಚ್ಚರಿಕೆಯಿಂದ ರಾತ್ರಿ ವೇಳೆಯೂ ಸಹ ಚಾರಣ ಮಾಡಲು ಅವಕಾಶವಿದೆ.

ಬೆಟ್ಟದ ತಪ್ಪಲಿನಲ್ಲಿ ಕುಂತಿ ಕೊಳ ಹೆಸರಿನ ಕೊಳವೊಂದಿದೆ. ಅಲ್ಲಿ ಹೋಟೆಲ್ ಸಹ ಇದ್ದು ಅಲ್ಲಿ ನೀವು ವಿರಮಿಸಬಹುದು. ಬಹಳ ತಂಪಾದ ಸ್ಥಳ ಇದಾಗಿದ್ದು, ಚಳಿಗಾಲ ಇಲ್ಲಿಗೆ ಪ್ರವಾಸ ಮಾಡಲು ಸೂಕ್ತ ಸಮಯವಾಗಿದೆ.

ಇಲ್ಲಿನ ಪಕ್ಕದ ಊರು ಚಿಕ್ಕಾಡೆ. ಅದೇ ರೀತಿ ಪಾಂಡವಪುರ ಮೊದಲಿನ ಹೆಸರು ಈರೋಡೆ ಎಂಬುದಾಗಿತ್ತು. ಈಗಲೂ ಈರೋಡೆ ಬೀದಿ ಅಲ್ಲಿದೆ. ಈ ಬೆಟ್ಟದಲ್ಲಿ ಬಕಾಸುರ ವಾಸವಿದ್ದ, ಆತನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆಯು, ಈರೋಡೆಯಿಂದ ಹಿರಿಎಡೆಯೂ ಸರಬರಾಜು ಆಗುತ್ತಿತ್ತು ಎಂಬ ಪ್ರತೀತಿ ಇದೆ. ವನವಾಸದ ಸಮಯದಲ್ಲಿ ಕುಂತಿ ಮತ್ತು ಐವರು ಮಕ್ಕಳು ಇಲ್ಲಿಗೆ ಬಂದರು. ಭೀಮ ಬಕಾಸುರನನ್ನು ವಧಿಸಿದ ಸ್ಥಳ ಇದು. ಹಾಗಾಗಿ ಇದಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂತು. ಬೆಟ್ಟದ ತುದಿಯಲ್ಲಿನ ಕಲ್ಲು ಕುಂತಿ ಬಳಸುತ್ತಿದ್ದ ಒನಕೆ ಎಂಬಂತಹ ದಂತಕತೆಗಳನ್ನು, ಪುರಾಣಗಳನ್ನು ಸ್ಥಳೀಯ ಜನ ಹೇಳುತ್ತಾರೆ.

ಈ ಪುರಾಣ ಪ್ರತೀತಿಗಳ ಹೊರತಾಗಿಯೂ ಚಾರಣಿಗರಿಗೆ ಖುಷಿ ಕೊಡುವ ಬೆಟ್ಟ ಇದಾಗಿದೆ. ಇನ್ನು ಇಲ್ಲಿ ಚಾರಣ ಮುಗಿಸಿ ಮಧ್ಯಾಹ್ನದ ವೇಳೆಗೆ ನೀವು ಪಾಂಡವಪುರ ದಾಟಿ 8-9 ಕಿ.ಮೀ ದೂರ ಕ್ರಮಿಸಿದರೆ ಕೆರೆ ತೊಣ್ಣೂರು ಎಂಬ ಗ್ರಾಮ ಸಿಗುತ್ತದೆ. ವಿಷ್ಣುವರ್ಧನನ ಕಾಲದಲ್ಲಿ ಇಲ್ಲಿ ನಂಬಿನಾರಾಯಣ ಮತ್ತು ಶ್ರೀ ವೇಣುಗೋಪಾಲರ ಎರಡು ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿದೆ.

ತೊಣ್ಣೂರು ಕೆರೆ

ತೊಣ್ಣೂರು ಗ್ರಾಮದ ಬಳಿ ಇರುವ ತೊಣ್ಣೂರು ಕೆರೆಯು 8-10 ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ದೊಡ್ಡ ಕೆರೆಯಾಗಿದೆ. ಈ ವಿಶಾಲ ಕೆರೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಬೆಟ್ಟದ ಸಾಲುಗಳ ಪಕ್ಕದಲ್ಲಿಯೇ ಈ ಕೆರೆ ಇದ್ದು ನೋಡುತ್ತ ಕುಳಿತರೆ ನೋಡುತ್ತಲೇ ಇರಬೇಕೆನಿಸುತ್ತದೆ. ಪ್ರವಾಸಿಗರಿಗಾಗಿ ಗೋಪುರವೊಂದನ್ನು ನಿರ್ಮಿಸಲಾಗಿದೆ.

ಅಣೆಕಟ್ಟು ಮಾದರಿಯಲ್ಲಿ ಅದರ ದಡವನ್ನು ನಿರ್ಮಿಸಲಾಗಿದ್ದು, ಬಹಳ ಆಳದ ಕೆರೆಯಾದ್ದರಿಂದ ನೀರಿಗೆ ಇಳಿಯದಿರಲು ಮನವಿ ಮಾಡಲಾಗಿದೆ. ಆ ಕೆರೆಯಿಂದ ಸಣ್ಣ ಕಾಲುವೆಯ ರೀತಿ ನೀರು ಹರಿದು ಮೇಲಿನಿಂದ ಜಲಪಾತದ ಮಾದರಿಯಲ್ಲಿ ಧುಮ್ಮಿಕ್ಕುತ್ತದೆ. ಅದನ್ನು ಸ್ಥಳೀಯರು ಮದಗ ಎಂದು ಕರೆಯುತ್ತಾರೆ. ಆ ನೀರಿಗೆ ಮೈಯೊಡ್ಡಿ ಸ್ನಾನ ಮಾಡಬಹುದು. ಅದರ ಪಕ್ಕದಲ್ಲಿ ಕಾಲುವೆಯ ರೀತಿ ನೀರು ವೇಗವಾಗಿ ಹರಿಯುತ್ತದೆ. ಅಲ್ಲಿ ಮಕ್ಕಳೊಂದಿಗೆ ಕೂಡಿ ಮನೆಮಂದಿಯೆಲ್ಲಾ ನೀರಿನೊಂದಿಗೆ ಆಟವಾಡಲು, ಸ್ನಾನ ಮಾಡಲು ಪ್ರಶಸ್ತ ಜಾಗವಾಗಿದೆ.

ಕೆರೆಯ ಮತ್ತೊಂದು ಬದಿಯು ಮರಳಿನಿಂದ ಆವೃತವಾಗಿದ್ದು, ಅಲ್ಲಿ ಈಜಾಡಬಹುದು ಮತ್ತು ವಿಹರಿಸಬಹುದು. ಅದು ನಿಮಗೆ ಸಮುದ್ರದಡದ ಅನುಭವ ನೀಡುತ್ತದೆ. ಅಲ್ಲಿ ಕೆರೆ ಆಳವಿಲ್ಲವಾದ್ದರಿಂದ ಯಾವುದೇ ಭಯವಿಲ್ಲದೆ ನೀರಿನಲ್ಲಿ ಆಟವಾಡಬಹುದು.

ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರು ಒದಗಿಸುವ ಈ ಕೆರೆ ಅತ್ಯುತ್ತಮ ಪ್ರವಾಸಿಸ್ಥಳವೆನ್ನಬಹುದು. ಕೆರೆಯ ಪಕ್ಕದಲ್ಲಿಯೇ ಬೆಟ್ಟವಿದ್ದು ಹತ್ತಿ ಸಂತಸಬಹುದು. ಬೆಟ್ಟದ ಮೇಲೆ ಹಲವು ದೇವಾಲಯಗಳಿವೆ.

ಇತ್ತೀಚೆಗೆ ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿಪಡಿಸುತ್ತಿದ್ದರೂ, ಇಲ್ಲಿ ಹೋಟೆಲ್‌ಗಳಿಲ್ಲ. ಹಾಗಾಗಿ ನೀವು ಮನೆಯಿಂದ ಹೊರಡುವಾಗಲೇ ಊಟ, ತಿಂಡಿಗಳನ್ನು ಒಯ್ಯುವುದು ಒಳ್ಳೆಯದು. ಅಲ್ಲಿ ಟೀ-ಬಜ್ಜಿ ರೀತಿಯ ಸ್ನ್ಯಾಕ್ಸ್ ಅಷ್ಟೇ ಲಭ್ಯವಿವೆ.

ಸ್ವಂತ ವಾಹನದಲ್ಲಿ ಹೋದರೆ ಉತ್ತಮ. ಇಲ್ಲದಿದ್ದಲ್ಲಿ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆಗಳಿಗೆ ಪಾಂಡವಪುರ ಟೌನ್‌ನಿಂದ ಬಸ್ ವ್ಯವಸ್ಥೆ ಸಹ ಇದೆ. ಅಲ್ಲಿಂದ ಬಾಡಿಗೆ ಆಟೋದಲ್ಲಿಯೂ ಹೋಗಬಹುದು. ಬೆಂಗಳೂರು-ಮೈಸೂರಿನಿಂದ ಪಾಂಡವಪುರ ತಲುಪಲು ರೈಲು ವ್ಯವಸ್ಥೆ ಸಹ ಇದೆ.

ಒಂದು ದಿನದಲ್ಲಿ ಇವೆರಡೂ ಸ್ಥಳಗಳನ್ನು ನೋಡಿಬರಬಹುದು. ನೀವು ಪ್ರವಾಸ ಮುಂದುವರೆಸಬಯಸಿದರೆ ಪಕ್ಕದಲ್ಲಿಯೇ ಮೇಲುಕೋಟೆ, ಶ್ರೀರಂಗಪಟ್ಟಣ, ರಂಗನತಿಟ್ಟು, ಎಡಮುರಿ-ಬಲಮುರಿ, ಕೆಆರ್‌ಎಸ್ ಥರದ ಹತ್ತಾರು ಸ್ಥಳಗಳನ್ನು ನೋಡಬಹುದಾಗಿದೆ.


ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷದಲ್ಲಿ 532 ನಕ್ಸಲರ ಹತ್ಯೆ; 2004 ಜನರ ಬಂಧನ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ

2024 ರ ಜನವರಿಯಿಂದ ರಾಜ್ಯದಲ್ಲಿ 532 ನಕ್ಸಲರು ಸಾವನ್ನಪ್ಪಿದ್ದಾರೆ, 2004 ಜನರನ್ನು ಬಂಧಿಸಲಾಗಿದ್ದು, 2,700 ಜನರು ಶರಣಾಗಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಶುಕ್ರವಾರ ಹೇಳಿದ್ದಾರೆ. 2026ರ ಮಾರ್ಚ್ 31 ರೊಳಗೆ...

ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಒಪ್ಪಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಾಮೀನು

ಅಸ್ಸಾಂ (ಬೊಂಗಾನ್): ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳೊಂದಿಗೆ ಸಹವಾಸ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ 24 ವರ್ಷದ ಯುವಕನಿಗೆ ಇಲ್ಲಿನ ಬೊಂಗಾನ್ ಉಪ-ವಿಭಾಗೀಯ ನ್ಯಾಯಾಲಯವು ಜಾಮೀನು...

ಕೇರಳ: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರನನ್ನು ತಡೆದ ವೃದ್ಧೆಗೆ ಸಾರಿಗೆ ಅಧಿಕಾರಿಗಳಿಂದ ಸನ್ಮಾನ

ಕಳೆದ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುವುದುನ್ನು ತಡೆದ ವೃದ್ಧ ಮಹಿಳೆಯನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ಅಧಿಕಾರಿಗಳು ಸನ್ಮಾನಿಸಿದರು. ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ತಪ್ಪಿಸಲು ಎರಂಜಿಪಾಲಂನ...

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...