Homeಅಂಕಣಗಳುಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

- Advertisement -
- Advertisement -

ಬೆಂಗಳೂರಿನಿಂದ 120-130 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆ ಎಂಬ ಎರಡು ಅಪರೂಪದ ವಿಭಿನ್ನ ಸ್ಥಳಗಳನ್ನು ಈ ಬರಹದ ಮೂಲಕ ಪರಿಚಯ ಮಾಡಿಕೊಡಲು ಇಚ್ಛಿಸುತ್ತೇನೆ. ಚಾರಣ ಮಾಡಲು, ಈಜಾಡಲು ಮತ್ತು ಈ ಸ್ಥಳಗಳ ಬಗ್ಗೆ ಅಧ್ಯಯನ ಮಾಡಲು ಇವು ಹೇಳಿಮಾಡಿಸಿದ ಸುಂದರ ತಾಣಗಳಾಗಿವೆ.

ಕುಂತಿ ಬೆಟ್ಟ

ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ತೆರಳಿದರೆ (120 ಕಿ.ಮೀ) ಪಾಂಡವಪುರ ಟೌನ್‌ಗೂ ಮುನ್ನವೇ ಕುಂತಿ ಬೆಟ್ಟ ನಿಮ್ಮ ಗಮನ ಸೆಳೆಯುತ್ತದೆ. ಮೈಸೂರಿನಿಂದ ಬಂದರೆ (30 ಕಿ.ಮೀ), ಪಾಂಡವಪುರ ದಾಟಿ ಮಂಡ್ಯ ಮಾರ್ಗವಾಗಿ 5 ಕಿ.ಮೀ ದೂರ ಕ್ರಮಿಸಿದರೆ ಕುಂತಿ ಬೆಟ್ಟ ಕಾಣಸಿಗುತ್ತದೆ. ಪಾಂಡವಪುರ ಕೆರೆ ತಪ್ಪಲಿನಲ್ಲಿರುವ ಈ ಎರಡು – ಮೂರು ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕುಂತಿ ಬೆಟ್ಟಕ್ಕೆ ಹತ್ತಲು ಸುಗಮ ದಾರಿಯಿದೆ. ಒಂದೆರಡು ಕಡೆ ಮಾತ್ರ ಬಂಡೆಗಳಿದ್ದು ಎಚ್ಚರಿಕೆಯಿಂದ ಹತ್ತಬೇಕು. ಉಳಿದೆಡೆ ಆರಾಮಾವಾಗಿ ಸುತ್ತಲಿನ ಹಸಿರು ಮರಗಿಡಗಳನ್ನು ನೋಡುತ್ತ, ಕೆರೆಯ ನೋಟವನ್ನು ಅಸ್ವಾದಿಸುತ್ತಾ, ಸುಸ್ತಾದರೆ ಕುಳಿತು ವಿಹರಿಸುತ್ತಾ ಬೆಟ್ಟ ಹತ್ತಬಹುದು. ಬೆಳ್ಳಂ ಬೆಳಿಗ್ಗೆಯೇ ನೀವು ಹತ್ತಲು ಪ್ರಾರಂಭಿಸಿದರೆ, ಒಂದು-ಒಂದೂವರೆ ಗಂಟೆಯಲ್ಲಿ ಆರಾಮವಾಗಿ ಬೆಟ್ಟದ ತುದಿ ತಲುಪಬಹುದು. ಬೆಳಿಗ್ಗೆ 9 ಗಂಟೆಯ ನಂತರವಾದರೆ ಬಿಸಿಲಿನ ಝಳ ಜೋರಾಗಿರುವುದರಿಂದ ಸುಮಾರು 2 ಗಂಟೆಗಳ ಸಮಯ ಬೇಕು.

ಸಮುದ್ರಮಟ್ಟದಿಂದ 2882 ಮೀಟರ್ ಎತ್ತರವಿರುವ ಈ ಬೆಟ್ಟದ ತುದಿಯಲ್ಲಿ ದೊಡ್ಡ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಚಾರಣಿಗರು ಅಲ್ಲಿ ಕುಳಿತು ವಿರಮಿಸಬಹುದು. ಅಲ್ಲಿಂದ, ಸುತ್ತ ಮುತ್ತಲಿನ ಹಸಿರು ಕಬ್ಬು ಮತ್ತು ಭತ್ತದ ಗದ್ದೆಗಳನ್ನು ನೋಡಬಹುದು. ಪಾಂಡವಪುರ ನಗರ, ಅದರ ಕೆರೆ, ದೂರದ ಮೇಲುಕೋಟೆ ಬೆಟ್ಟ, ಕರಿಘಟ್ಟ ಇವೆಲ್ಲವೂ ಬೆಟ್ಟದ ಮೇಲಿನಿಂದ ಕಣ್ಣಳತೆಗೆ ಸಿಗುತ್ತವೆ.

ಸುತ್ತಲಿನ ಸುಂದರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಲೇ ನೀವು ತಂದಿದ್ದ ಊಟ, ತಿಂಡಿಗಳನ್ನು ಸವಿಯುವುದು ಅಪರೂಪ ಅನುಭವವೇ ಸರಿ. ನೀವು ಅಲ್ಲಿಗೆ ಹೋಗುವಾಗ ಸಾಕಷ್ಟು ಊಟ-ತಿಂಡಿ ಮತ್ತು ನೀರನ್ನು ಒಯ್ಯುವುದು ಪೂರ್ವ ಷರತ್ತಾಗಿದೆ. ನಂತರ ಅಲ್ಲಿಂದ ಕೆಳಗಿಳಿಯಲು ಒಂದು ಗಂಟೆ ಸಮಯ ಬೇಕಾಗುತ್ತದೆ. ಆಸಕ್ತರು ಎಚ್ಚರಿಕೆಯಿಂದ ರಾತ್ರಿ ವೇಳೆಯೂ ಸಹ ಚಾರಣ ಮಾಡಲು ಅವಕಾಶವಿದೆ.

ಬೆಟ್ಟದ ತಪ್ಪಲಿನಲ್ಲಿ ಕುಂತಿ ಕೊಳ ಹೆಸರಿನ ಕೊಳವೊಂದಿದೆ. ಅಲ್ಲಿ ಹೋಟೆಲ್ ಸಹ ಇದ್ದು ಅಲ್ಲಿ ನೀವು ವಿರಮಿಸಬಹುದು. ಬಹಳ ತಂಪಾದ ಸ್ಥಳ ಇದಾಗಿದ್ದು, ಚಳಿಗಾಲ ಇಲ್ಲಿಗೆ ಪ್ರವಾಸ ಮಾಡಲು ಸೂಕ್ತ ಸಮಯವಾಗಿದೆ.

ಇಲ್ಲಿನ ಪಕ್ಕದ ಊರು ಚಿಕ್ಕಾಡೆ. ಅದೇ ರೀತಿ ಪಾಂಡವಪುರ ಮೊದಲಿನ ಹೆಸರು ಈರೋಡೆ ಎಂಬುದಾಗಿತ್ತು. ಈಗಲೂ ಈರೋಡೆ ಬೀದಿ ಅಲ್ಲಿದೆ. ಈ ಬೆಟ್ಟದಲ್ಲಿ ಬಕಾಸುರ ವಾಸವಿದ್ದ, ಆತನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆಯು, ಈರೋಡೆಯಿಂದ ಹಿರಿಎಡೆಯೂ ಸರಬರಾಜು ಆಗುತ್ತಿತ್ತು ಎಂಬ ಪ್ರತೀತಿ ಇದೆ. ವನವಾಸದ ಸಮಯದಲ್ಲಿ ಕುಂತಿ ಮತ್ತು ಐವರು ಮಕ್ಕಳು ಇಲ್ಲಿಗೆ ಬಂದರು. ಭೀಮ ಬಕಾಸುರನನ್ನು ವಧಿಸಿದ ಸ್ಥಳ ಇದು. ಹಾಗಾಗಿ ಇದಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂತು. ಬೆಟ್ಟದ ತುದಿಯಲ್ಲಿನ ಕಲ್ಲು ಕುಂತಿ ಬಳಸುತ್ತಿದ್ದ ಒನಕೆ ಎಂಬಂತಹ ದಂತಕತೆಗಳನ್ನು, ಪುರಾಣಗಳನ್ನು ಸ್ಥಳೀಯ ಜನ ಹೇಳುತ್ತಾರೆ.

ಈ ಪುರಾಣ ಪ್ರತೀತಿಗಳ ಹೊರತಾಗಿಯೂ ಚಾರಣಿಗರಿಗೆ ಖುಷಿ ಕೊಡುವ ಬೆಟ್ಟ ಇದಾಗಿದೆ. ಇನ್ನು ಇಲ್ಲಿ ಚಾರಣ ಮುಗಿಸಿ ಮಧ್ಯಾಹ್ನದ ವೇಳೆಗೆ ನೀವು ಪಾಂಡವಪುರ ದಾಟಿ 8-9 ಕಿ.ಮೀ ದೂರ ಕ್ರಮಿಸಿದರೆ ಕೆರೆ ತೊಣ್ಣೂರು ಎಂಬ ಗ್ರಾಮ ಸಿಗುತ್ತದೆ. ವಿಷ್ಣುವರ್ಧನನ ಕಾಲದಲ್ಲಿ ಇಲ್ಲಿ ನಂಬಿನಾರಾಯಣ ಮತ್ತು ಶ್ರೀ ವೇಣುಗೋಪಾಲರ ಎರಡು ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿದೆ.

ತೊಣ್ಣೂರು ಕೆರೆ

ತೊಣ್ಣೂರು ಗ್ರಾಮದ ಬಳಿ ಇರುವ ತೊಣ್ಣೂರು ಕೆರೆಯು 8-10 ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ದೊಡ್ಡ ಕೆರೆಯಾಗಿದೆ. ಈ ವಿಶಾಲ ಕೆರೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಬೆಟ್ಟದ ಸಾಲುಗಳ ಪಕ್ಕದಲ್ಲಿಯೇ ಈ ಕೆರೆ ಇದ್ದು ನೋಡುತ್ತ ಕುಳಿತರೆ ನೋಡುತ್ತಲೇ ಇರಬೇಕೆನಿಸುತ್ತದೆ. ಪ್ರವಾಸಿಗರಿಗಾಗಿ ಗೋಪುರವೊಂದನ್ನು ನಿರ್ಮಿಸಲಾಗಿದೆ.

ಅಣೆಕಟ್ಟು ಮಾದರಿಯಲ್ಲಿ ಅದರ ದಡವನ್ನು ನಿರ್ಮಿಸಲಾಗಿದ್ದು, ಬಹಳ ಆಳದ ಕೆರೆಯಾದ್ದರಿಂದ ನೀರಿಗೆ ಇಳಿಯದಿರಲು ಮನವಿ ಮಾಡಲಾಗಿದೆ. ಆ ಕೆರೆಯಿಂದ ಸಣ್ಣ ಕಾಲುವೆಯ ರೀತಿ ನೀರು ಹರಿದು ಮೇಲಿನಿಂದ ಜಲಪಾತದ ಮಾದರಿಯಲ್ಲಿ ಧುಮ್ಮಿಕ್ಕುತ್ತದೆ. ಅದನ್ನು ಸ್ಥಳೀಯರು ಮದಗ ಎಂದು ಕರೆಯುತ್ತಾರೆ. ಆ ನೀರಿಗೆ ಮೈಯೊಡ್ಡಿ ಸ್ನಾನ ಮಾಡಬಹುದು. ಅದರ ಪಕ್ಕದಲ್ಲಿ ಕಾಲುವೆಯ ರೀತಿ ನೀರು ವೇಗವಾಗಿ ಹರಿಯುತ್ತದೆ. ಅಲ್ಲಿ ಮಕ್ಕಳೊಂದಿಗೆ ಕೂಡಿ ಮನೆಮಂದಿಯೆಲ್ಲಾ ನೀರಿನೊಂದಿಗೆ ಆಟವಾಡಲು, ಸ್ನಾನ ಮಾಡಲು ಪ್ರಶಸ್ತ ಜಾಗವಾಗಿದೆ.

ಕೆರೆಯ ಮತ್ತೊಂದು ಬದಿಯು ಮರಳಿನಿಂದ ಆವೃತವಾಗಿದ್ದು, ಅಲ್ಲಿ ಈಜಾಡಬಹುದು ಮತ್ತು ವಿಹರಿಸಬಹುದು. ಅದು ನಿಮಗೆ ಸಮುದ್ರದಡದ ಅನುಭವ ನೀಡುತ್ತದೆ. ಅಲ್ಲಿ ಕೆರೆ ಆಳವಿಲ್ಲವಾದ್ದರಿಂದ ಯಾವುದೇ ಭಯವಿಲ್ಲದೆ ನೀರಿನಲ್ಲಿ ಆಟವಾಡಬಹುದು.

ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರು ಒದಗಿಸುವ ಈ ಕೆರೆ ಅತ್ಯುತ್ತಮ ಪ್ರವಾಸಿಸ್ಥಳವೆನ್ನಬಹುದು. ಕೆರೆಯ ಪಕ್ಕದಲ್ಲಿಯೇ ಬೆಟ್ಟವಿದ್ದು ಹತ್ತಿ ಸಂತಸಬಹುದು. ಬೆಟ್ಟದ ಮೇಲೆ ಹಲವು ದೇವಾಲಯಗಳಿವೆ.

ಇತ್ತೀಚೆಗೆ ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿಪಡಿಸುತ್ತಿದ್ದರೂ, ಇಲ್ಲಿ ಹೋಟೆಲ್‌ಗಳಿಲ್ಲ. ಹಾಗಾಗಿ ನೀವು ಮನೆಯಿಂದ ಹೊರಡುವಾಗಲೇ ಊಟ, ತಿಂಡಿಗಳನ್ನು ಒಯ್ಯುವುದು ಒಳ್ಳೆಯದು. ಅಲ್ಲಿ ಟೀ-ಬಜ್ಜಿ ರೀತಿಯ ಸ್ನ್ಯಾಕ್ಸ್ ಅಷ್ಟೇ ಲಭ್ಯವಿವೆ.

ಸ್ವಂತ ವಾಹನದಲ್ಲಿ ಹೋದರೆ ಉತ್ತಮ. ಇಲ್ಲದಿದ್ದಲ್ಲಿ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆಗಳಿಗೆ ಪಾಂಡವಪುರ ಟೌನ್‌ನಿಂದ ಬಸ್ ವ್ಯವಸ್ಥೆ ಸಹ ಇದೆ. ಅಲ್ಲಿಂದ ಬಾಡಿಗೆ ಆಟೋದಲ್ಲಿಯೂ ಹೋಗಬಹುದು. ಬೆಂಗಳೂರು-ಮೈಸೂರಿನಿಂದ ಪಾಂಡವಪುರ ತಲುಪಲು ರೈಲು ವ್ಯವಸ್ಥೆ ಸಹ ಇದೆ.

ಒಂದು ದಿನದಲ್ಲಿ ಇವೆರಡೂ ಸ್ಥಳಗಳನ್ನು ನೋಡಿಬರಬಹುದು. ನೀವು ಪ್ರವಾಸ ಮುಂದುವರೆಸಬಯಸಿದರೆ ಪಕ್ಕದಲ್ಲಿಯೇ ಮೇಲುಕೋಟೆ, ಶ್ರೀರಂಗಪಟ್ಟಣ, ರಂಗನತಿಟ್ಟು, ಎಡಮುರಿ-ಬಲಮುರಿ, ಕೆಆರ್‌ಎಸ್ ಥರದ ಹತ್ತಾರು ಸ್ಥಳಗಳನ್ನು ನೋಡಬಹುದಾಗಿದೆ.


ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...