Homeನ್ಯಾಯ ಪಥಗೌರಿಯ ಮಗ ಕನ್ಹಯ್ಯ ಕುಮಾರ್ ಮತ್ತು ಬೆಗುಸರಾಯ್‍ನಲ್ಲಿ ಆಜಾದಿ

ಗೌರಿಯ ಮಗ ಕನ್ಹಯ್ಯ ಕುಮಾರ್ ಮತ್ತು ಬೆಗುಸರಾಯ್‍ನಲ್ಲಿ ಆಜಾದಿ

- Advertisement -
- Advertisement -

| ರೇಣುಕಾ ನಿಡಗುಂದಿ |

2017ರ ಅಗಸ್ಟ್ ತಿಂಗಳ ರಣಗುಡುವ ಬಿಸಿಲು, ಉರಿವ ಸೂರ್ಯ ದುಗುಡ ತುಂಬಿದ ಹಗಲಿನಲ್ಲಿ ಐಟಿಓದ ಬಳಿ ಯೂಜಿಸಿ ಕಛೇರಿಯ ಹತ್ತಿರ ಜೆಎನ್ಯೂ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯ ಗುಂಪಿನಲ್ಲಿ ಪುಟ್ಟ ಬಿಳಿ ಪಾರಿವಾಳದಂತೆ ಗೌರಕ್ಕ ಪುಟುಪುಟು ಓಡಾಡಿದ್ದು, ಮಾತಾಡಿದ್ದು, ಕಣ್ಣಿಗೆ ಕಟ್ಟಿದಂತಿದೆ.

ಯೂಜಿಸಿ ಎಲ್ಲ ಗೇಟುಗಳನ್ನು ಭದ್ರಪಡಿಸಿ ಪೊಲೀಸ್ ಪಡೆಗಳು ಭದ್ರತೆಗಾಗಿ ಕರ್ತವ್ಯನಿರತರಾಗಿದ್ದರು. ಗೌರಕ್ಕ ರಸ್ತೆಯಲ್ಲಿ ಹಲಗೆ ಬಾರಿಸುತ್ತ ಆಜಾದಿಯ ಗೀತೆಯನ್ನು ಹಾಡುತ್ತಿದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ ನುಸುಳಿ ತಮ್ಮ ಮಗ ಕನ್ಹಯ್ಯನನ್ನು, ಉಮರ್‍ನನ್ನು ಗುರುತಿಸಿ ‘ನಾನಿದ್ದೇನೆ ನಿಮ್ಮೊಂದಿಗೆ’ ಎಂದು ಬೆನ್ನುತಟ್ಟಿ ಬಂದಿದ್ದರು. ನಾನು, ವಿಶ್ವಾಸ್ ಮತ್ತು ಗೌರಕ್ಕ ಮೂವರೂ ಯೂಜಿಸಿ ಕಛೇರಿಯ ಪಕ್ಕದ ಫುಟ್ಪಾತಿನಲ್ಲೇ ..ಗಬ್ಬು ನಾರುತ್ತಿದ್ದ ನಾಲಾದ ಪಕ್ಕದಲ್ಲಿ, ಪೋಲಿಸರ ಸಾಲುಗಳಲ್ಲಿ ಸೇರಿ ಪ್ರೇಕ್ಷಕರಾಗಿ ಹೋದದ್ದು ನಿನ್ನೆ ಮೊನ್ನೆಯಂತಿದೆ. ಬಿಸಿಲಿಳಿದು, ದಣಿದ ಸೂರ್ಯನೂ ಪಶ್ಚಿಮದಲ್ಲಿ ಕರಗುವ ಹೊತ್ತಿನವರೆಗೂ ನಾವು ಕನ್ನ್ಹಯ್ಯ, ಉಮರ್ ಅವರ ಸಂಗಾತಿಗಳೊಡನೆಯೇ ಇದ್ದೆವು. ಅದೆಲ್ಲ ಈಗ ಎದೆ ಸುಡುವ ನೆನಪುಗಳಷ್ಟೇ !ಇಂದು ನಮ್ಮ ಗೌರಕ್ಕನ ಹೆಮ್ಮೆಯ ಮಗ ಬೆಗೂಸರಾಯ್‍ದಿಂದ ಚುನಾವಣೆಗೆ ನಿಂತಿದ್ದಾನೆ.

2016 ಅಲ್ಲಿ ಜೆಎನ್ಯೂನ ಕೆಲ ವಿದ್ಯಾರ್ಥಿಗಳು ಅಫ್ಜಲ್ ಗುರು ಪರ ಘೋಷಣೆಯನ್ನು ಕೂಗಿದ್ದರೆಂಬ ಆರೋಪದಡಿ ಅಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯನ ಮತ್ತು ಸಂಗಡಿಗರ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಲಾಗಿತ್ತು. ಅವೆಲ್ಲ ಸುಳ್ಳು ಆರೋಪಗಳೆಂದು ಸಾಬೀತಾದವು. ಚಾರಿತ್ರಿಕವಾಗಿ ಈ ಘಟನೆ ತಥಾಕಥಿತ ದೇಶಭಕ್ತರ ಮುಖವಾಡಗಳನ್ನು ಕಳಚಿ ಹೊಸ ರಾಷ್ಟ್ರವಾದದ ಕರಾಳ ಮುಖವನ್ನು ಪರಿಚಯಿಸಿತು.

ಕನ್ಹಯ್ಯನ ಹೃದಯದ ಭಾಷೆ ದೇಶದ ಬಹುಸಂಖ್ಯಾತರ ಅಂತಃಸಾಕ್ಷಿಯನ್ನು ಬಡಿದೆಬ್ಬಿಸಿ ಹೊಸ ಚೈತನ್ಯವನ್ನು ತುಂಬಿತು. ಕನ್ಹಯ್ಯ ಸಾರಿದ ಸ್ವಾತಂತ್ರ್ಯದ ಸಮರ ಹೊರಗಿನ ಸ್ವಾತಂತ್ರ್ಯದ ಸಮರವಾಗಿರದೇ ನಮ್ಮೊಳಗಿನ ಆಂತರಿಕ ಸ್ವಾತಂತ್ರ್ಯಕ್ಕಾಗಿ ಕೂಗಿದ ಘೋಷವಾಕ್ಯವಾಗಿತ್ತು. ಬಂಡವಾಳಶಾಹಿ ವಿರುದ್ಧ ಸಮರ; ಸಂಘ ಪರಿವಾರದ ವಿರುದ್ಧ ಸಮರ; ಪಾಳೇಗಾರಿ ಪದ್ಧತಿ ವಿರುದ್ಧ ಸಮರ; ಹಸಿವಿನ ವಿರುದ್ಧ ಸಮರ; ಜಾತಿ ವ್ಯವಸ್ಥೆ ವಿರುದ್ಧ ಸಮರ; ಮನುವಾದದ ವಿರುದ್ಧ ಸಮರ’ ದಿಕ್ಕು ದಿಕ್ಕುಗಳಲ್ಲಿ ಅನುರಣಿಸುತ್ತಿದ್ದ ದನಿಯನ್ನು ಈ ದೇಶ ಬಹುಕಾಲದಿಂದ ಎದುರುನೋಡುತ್ತಿತ್ತು. ಕೋಟ್ಯಾಂತರ ಯುವಕರ ಭವಿಷ್ಯದ ಕುರಿತು ಮಾತಾಡುವವರೇ ಇಲ್ಲದಾಗ, ತಮ್ಮೆಲ್ಲ ಒಳಗುದಿಯನ್ನು ಅದುಮಿಟ್ಟುಕೊಂಡ ಯುವಪೀಳಿಗೆ ಕೂಪದೊಳಗಿಂದ ಹೊರಬಂದು ದನಿಯೆತ್ತುವಂತೆ ಮಾಡಿಬಿಟ್ಟ.

ಐದು ವರ್ಷದಿಂದ ಮೋದಿ ಗುಣಗಾನವನ್ನು ಕೇಳಿಕೇಳಿ ರೋಸಿಹೋಗಿದ್ದ ಜನರಲ್ಲಿ ಕನ್ಹ್ಯಯ್ಯನ ಮಾತುಗಳು ಜೀವತುಂಬಿದವು. ತನ್ನ ತಲೆಮಾರಿನ ಯುವಜನರನ್ನು ದ್ವೇಷ ಅಸಹಿಷ್ಣುತೆ, ಕೋಮುವಾದ, ಹಿಂಸೆಯ, ರಾಜಕಾರಣದ ದಾಸ್ಯದಿಂದ ಬಿಡಿಸಬಲ್ಲ ಶಕ್ತಿಯೊಂದರ ಅಗತ್ಯ ಇಂದು ತುರ್ತಾಗಿದ್ದಾಗ ಕನ್ಹಯ್ಯ ಭರವಸೆಯ ಬೆಳಕಾಗಿ ತಮ್ಮ ಹುಟ್ಟೂರು ಬೆಗೂಸರಾಯ್‍ದ ಘಟಾನುಘಟಿಗಳನ್ನು ಎದುರುಹಾಕಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾನೆ. ಭವಿಷ್ಯದ ಮುನ್ನೋಟವಿರದೇ ಧರ್ಮಾಂಧತೆ ಮತ್ತು ಕೋಮುವಾದಗಳಲ್ಲಿ ದೇಶವನ್ನು ಕತ್ತಲಯುಗಕ್ಕೆ ತಳ್ಳುತ್ತಿರುವ ವಿಪ್ಲವ ಕಾಲದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಕನ್ಹಯ್ಯರು ಬೇಕಿದ್ದಾರೆ.

2011ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಜೆಎನ್ಯೂವಿನ ಸೆಂಟರ್ ಫಾರ್ ಆಫ್ರಿಕನ್ ಸ್ಟಡೀಸ್‍ನಲ್ಲಿ ಪ್ರವೇಶ ಪಡೆದಿದ್ದ ಕನ್ಹಯ್ಯ ಇದೇ ವರ್ಷ ವಿರೋಧಿಗಳು ಒಡ್ಡಿದ ದೇಶದ್ರೋಹದ ಆರೋಪ, ಸುಳ್ಳು ವದಂತಿ, ಒಳಸಂಚು, ದ್ವೇಷ ಪ್ರಚಾರಗಳ ನಡುವೆಯೂ ತನ್ನ – The Process of De-colonisation and Social Transformation in South Afriica, 1994-2015  ಥೀಸಿಸ್‍ಗೆ ಡಾಕ್ಟರೇಟ್ ಡಿಗ್ರಿಯನ್ನು ಪಡೆದಿದ್ದಾನೆ. ಅವಕಾಶ ಸಿಕ್ಕರೆ ಅಧ್ಯಾಪಕನಾಗುವ ಆಸೆಯಿದೆಯಂತೆ.

ರಾಜಕಾರಣ ಅವನ ಅಗತ್ಯವಲ್ಲ ಅದು ತೀರಿಸಬೇಕಾದ ಋಣ; ಸಾಮಾಜಿಕ ಜವಾಬ್ದಾರಿ.! ವ್ಯವಸ್ಥೆಯಲ್ಲಿನ ಪಾಚಿಯನ್ನು ಬುಡಸಹಿತ ಕಿತ್ತೊಗೆಯಬೇಕಾದರೆ ತನ್ನಂಥ ಯುವಕರು ರಾಜಕೀಯಕ್ಕೆ ಬರಬೇಕು ಎನ್ನುವ ಅಭಿಪ್ರಾಯ ಕನ್ಹಯ್ಯನದು. ಇದೇ ಮಾತನ್ನು ಡಾ.ಅಂಬೇಡ್ಕರ್ ಅವರೂ ಹೇಳಿದ್ದರು. “ಪರಿಶಿಷ್ಟ ಜಾತಿಯವರು ಭಾರತದ ರಾಜಕಾರಣದಲ್ಲಿ ಸಕ್ರಿಯವಾದ ಪಾತ್ರ ವಹಿಸದಿದ್ದರೆ ಅವರಿಗೆ ಉಳಿಗಾಲವಿಲ್ಲ”ವೆಂದು ಎಚ್ಚರಿಸಿದ್ದರು.

ಬಾಲ್ಯದಲ್ಲಿ ಚುರುಕಾಗಿದ್ದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಕನ್ಹಯ್ಯನನ್ನು ಅವನ ತಾಯಿ ನೇತಾ ಅಂತಲೇ ಕರೆಯುತ್ತಿದ್ದಳಂತೆ. ನಾಲ್ಕನೇ ತರಗತಿಯಲ್ಲಿದ್ದಾಗಲೇ ಭಾಷಣ ಸ್ಪರ್ಧೆಯಲ್ಲಿ ಪುರಸ್ಕಾರವನ್ನೂ ಪಡೆದಿದ್ದ ಕನ್ಹಯ್ಯ ಅತ್ಯುತ್ತಮ ವಾಗ್ಮಿ. ಭಾಷಣದ ವಿಷಯ “ಮಮತಾಮಯಿ ಮದರ್ ತೆರೇಸಾ”. ಕಾಕತಾಳೀಯವೆಂಬಂತೆ ಕನ್ಹಯ್ಯನನ್ನು ದೇಶದ್ರೋಹದ ಆರೋಪದಡಿ ಜೈಲಿನಲ್ಲಿಟ್ಟಾಗ ಅವನಿದ್ದ ವಾರ್ಡ್ ಹೆಸರೂ “ಮದರ್ ತೆರೆಸಾ ವಾರ್ಡ“ ಆಗಿತ್ತೆಂದು ಕನ್ಹಯ್ಯ ನೆನೆದಿದ್ದಾನೆ. ಕನ್ಹಯ್ಯನ ಆತ್ಮಕಥೆ “ಫ್ರಾಮ್ ಬಿಹಾರ್ ಟೂ ತಿಹಾರ್” ಪುಸ್ತಕವನ್ನು ಯುವಪೀಳಿಗೆ ಓದಬೇಕಿದೆ.

ಕನ್ಹಯ್ಯ 2015ರಲ್ಲಿ ಜೆಎನ್ಯೂ ವಿದ್ಯಾರ್ಥಿ ಸಂಘದ ಅಧ್ಯಕ್ಷನಾದ AISF ನ ಮೊದಲ ಸದಸ್ಯ. ಆಗ AISA, ABVP, SFI & NSUI ದ ಎಲ್ಲ ಉಮೇದುವಾರರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದು ಒಂದು ಐತಿಹಾಸಿಕ ಗೆಲುವಾಗಿತ್ತು. ಆದರೆ ಮಂದಿನ ದಿನಗಳಲ್ಲಿ ಅವನ ಜನಪ್ರಿಯತೆಯನ್ನು, ಅವನ ಸಿದ್ಧಾಂತಗಳನ್ನು ವಿರೋಧಿಗಳು ಸಹಿಸಲಿಲ್ಲ. ಅನೇಕ ಬಾರಿ ಅವನ ಮತ್ತು ಅವನ ಸಂಗಡಿಗರ ಮೇಲೆ ಮಾರಣಾಂತಿಕ ಹಲ್ಲೆಗಳಾದವು.

ಒಮ್ಮೆ ಇಂದೋರಿನಲ್ಲಿ ಸಿಪಿಐ ಪಕ್ಷದ ಎಐವೈಎಫ್ ಮತ್ತು ಎಐಎಸ್‍ಎಫ್ ಆಯೋಜಿಸಿದ್ದ “ಲಾಂಗ್ ಮಾರ್ಚ್”ನಲ್ಲಿ ಭಾಗವಹಿಸಲು ಹೋಗುತ್ತಿದ್ದ ಕನ್ಹಯ್ಯನ ಕಾರಿನ ಮೇಲೆ ಮೋದಿ ಭಕ್ತರು ದಾಳಿ ಮಾಡಿದ್ದರು. ದೇಶದ ಅನೇಕ ರಾಜ್ಯಗಳಿಗೆ ಭೆಟ್ಟಿಯಿತ್ತು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರ ಮುಂದಿಡಲಾಗುತ್ತಿದ್ದ ಈ ಗುಂಪಿನ “ಲಾಂಗ್ ಮಾರ್ಚ” ನಡಿಗೆಯನ್ನು ಸಹಿಸದ ಮೂಲಭೂತವಾದಿಗಳು ದಾಳಿ ಮಾಡಿದ್ದರೂ ಕನ್ಹಯ್ಯಾ ಬೆದರಿರಲಿಲ್ಲ. ಆದರೆ ಅವನ ಗೆಳೆಯರಿಬ್ಬರಿಗೆ ಗಾಯಗಳಾಗಿದ್ದವು. ಇಂದೋರಿನಲ್ಲಿ ಕಲ್ಲುತೂರಿದರೆ, ಪಶ್ಚಿಮ ಬಂಗಾಳದಲ್ಲಿ ಕೊಳೆತ ಮೊಟ್ಟೆಗಳನ್ನು ತೂರಿದ್ದರು ಸಂಘಿಗಳು.

ಕನ್ಹಯ್ಯ ಫ್ರೀಲಾನ್ಸ್ ಮತ್ತು ಉಪನ್ಯಾಸಗಳನ್ನು ನೀಡುತ್ತಿದ್ದುದನ್ನು, ಪುಸ್ತಕದ ರಾಯಲ್ಟಿ ಹಣ, ಎರಡು ವರ್ಷದ ಆದಾಯ 8.5ಲಕ್ಷ, ಸ್ವಂತ ಭೂಮಿಯಿಲ್ಲ, ನಗದು 24,000 ಮತ್ತು ಮೂರುವರೆ ಲಕ್ಷದಷ್ಟು ಠೇವಣಿಯನ್ನು ಅಫಿಡವಿಟ್‍ನಲ್ಲಿ ನಮೂದಿಸಿದ್ದರೂ ತೃಪ್ತರಾಗದ ಭಕ್ತರು ಮೊನ್ನೆ ನಾಮಪತ್ರ ಸಲ್ಲಿಸಿದ ಬಳಿಕ ಎಂಟು ಲಕ್ಷ ಎಲ್ಲಿಂದ ಬಂತು ಅಂತ ವಾಗ್ದಾಳಿ ಮಾಡಿದ್ದಾರೆ. ಕೋಟಿಗಟ್ಟಲೆ ದೋಚಿಕೊಂಡು ಹೋದವರನ್ನು ಎಳೆದುತರುವ ತಾಕತ್ತಿರದವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರು!

ಕನ್ಹಯ್ಯನ ಮಟ್ಟಿಗೆ ಚುನಾವಣೆಯೆಂಬುದು ದೇಶದ ಬಹುತ್ವ, ಐಕ್ಯತೆ, ಸಹಬಾಳ್ವೆಯ ಸಾಂಸ್ಕೃತಿಕ ಹೆಣಿಕೆಯನ್ನು ವಿರೂಪಗೊಳಿಸಿ ದ್ವೇಷವನ್ನು ಬಿತ್ತುತ್ತಿರುವ ಪ್ರಭುತ್ವದ ವಿರುದ್ಧದ ಹೋರಾಟವಾಗಿದೆ. ತತ್ವ ಸಿದ್ಧಾಂತಗಳಲ್ಲಿ ಬದ್ಢತೆಯುಳ್ಳ ಕಮ್ಯುನಿಸ್ಟರು ಜನರನ್ನು ತಲುಪುವಲ್ಲಿ ಸೋತಿದ್ದಾರೆಂಬ ವಾಸ್ತವದ ಅರಿವು ಕನ್ಹಯ್ಯನಿಗಿದೆ. ಇಂದಿನ ಸಂಘರ್ಷದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾಗಿದೆ. ದೇಶದ ನೂರಾರು ಕಲಾವಿದರು, ಚಿಂತಕರು, ಗೆಳೆಯರು, ಹೋರಾಟಗಾರರು, ವಿಚಾರವಾದಿಗಳು ಕನ್ಹಯ್ಯನಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಇನ್ನು ಅನೇಕ ಕಲಾವಿದರು, ಬರಹಗಾರರು, ಬ್ಯೂರೋಕ್ರಾಟ್ಸಗಳು ಕೋಮುದ್ವೇಷವನ್ನು ಪ್ರೋತ್ಸಾಹಿಸುವ ಪಕ್ಷಕ್ಕೆ ವೋಟು ನೀಡದಂತೆ ಅಂತರ್ಜಾಲದ ಆಂದೋಲನವನ್ನೇ ಸಾರಿದ್ದಾರೆ.

ಕನ್ಹಯ್ಯನನ್ನು ನನ್ನ ಪ್ರೀತಿಯ ಕೂಸು ಎನ್ನುತ್ತಿದ್ದ ಗೌರಿಯನ್ನು ಕೊಂದ ಫ್ಯಾಸಿಸ್ಟ ಶಕ್ತಿಗಳು ನಾಶವಾಗಲೇ ಬೇಕು. ಈ ಸಮಯದಲ್ಲಿ ಅವಳಿದ್ದಿದ್ದರೆ ತನ್ನ ಕಂದನ ಹುಟ್ಟೂರಾದ ಬೇಗೂಸರಾಯಿಗೆ ಹೋಗಿ ಕನ್ಹಯ್ಯನಿಗೆ ಬೆಂಬಲವಾಗಿ ನಿಂತಿರುತ್ತಿದ್ದಳು. ಗೌರಿ ಬರೀ ವ್ಯಕ್ತಿಯಲ್ಲ, ಈ ದೇಶದ ಅಂತಃಶಕ್ತಿಯಾಗಿ ಜಿಗ್ನೇಶ್ ಮೇವಾನಿ, ಕನ್ಹಯ್ಯನಂತ ಯುವಶಕ್ತಿಗಳಿಗೆ ತಾಯಿಯಾಗಿದ್ದಾಳೆ. ಕಾರ್ಪೊರೇಟ್ ಪರ ಮತ್ತು ರೈತವಿರೋಧಿ, ಕಾರ್ಮಿಕ ವಿರೋಧಿ ಜನ ವಿರೋಧಿ ನೀತಿಗಳ ವಿರುದ್ದ ಸಿಡಿದೆದ್ದ ಚಳವಳಿಯ ಕಿಡಿಯಾಗಿ ದೇಶದಾದ್ಯಂತ ಬೆಳಗುತ್ತಿದ್ದಾಳೆ.

ಇವತ್ತು ನಮ್ಮೆಲ್ಲರ ಭರವಸೆಯ ದೀವಿಗೆಗಾಗಿ ನಮ್ಮ ಪ್ರೀತಿಯ ಕನ್ಹಯ್ಯ ದೊಡ್ದ ದೊಡ್ದ ಬಂಡವಾಳಗಾರರ ಮತ್ತು ದೊಡ್ಡ ದೊಡ್ಡ ನುರಿತ ರಾಜಕೀಯ ಧುರೀಣರೆದುರು ಚುನಾವಣೆಯ ಕಣಕ್ಕಿಳಿದಿದ್ದಾನೆ. ಕನ್ಹಯ್ಯನ ಗೆಲುವು ಪ್ರಜಾಪ್ರಭುತ್ವದ ಗೆಲುವು ! ಸಹಬಾಳ್ವೆ, ಸಮಾನತೆ, ಜಾತ್ಯತೀತ ಭಾರತವನ್ನು ಪ್ರೀತಿಸುವ ನಮ್ಮ ನಿಮ್ಮೆಲ್ಲರ ಗೆಲುವಾಗಲೆಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...