Homeಅಂಕಣಗಳುಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

- Advertisement -
- Advertisement -

ನಂದಿಗ್ರಾಮದ ಹಿಂಸಾಚಾರ ಈ ಸರ್ಕಾರವನ್ನು ಪತನದ ಇಳಿಜಾರಿಗೆ ನೂಕಿತ್ತು. ರಾಜ್ಯವನ್ನು ಕೈಗಾರಿಕೀಕರಣದ ಹಾದಿಗೆ ಹಚ್ಚುವ ಭರದಲ್ಲಿ ಕುರುಡಾಗಿ ಜೇನುಹುಟ್ಟಿಗೆ ಕೈ ಇಟ್ಟಿತ್ತು ವಾಮವಾದಿ ಆಡಳಿತ. 2011ರಲ್ಲಿ ಛಿದ್ರವಾದ ಕೆಂಪುಕೋಟೆಯ ಅಡಿಯಲ್ಲಿ ಇಡಲಾದ ಸಿಡಿಮದ್ದು ತಯಾರಾದದ್ದು ನಂದಿಗ್ರಾಮದ ಮೂಸೆಯಲ್ಲಿ. ಆದರೆ ಈ ಸಿಡಿಮದ್ದನ್ನು ಅರೆದು ಗಟ್ಟಿ ಮಾಡುವ ಕ್ರಿಯೆಯಲ್ಲಿ ಖುದ್ದು ಎಡರಂಗ ಸರ್ಕಾರ ಕೈಜೋಡಿಸಿದ್ದು ಬಹುದೊಡ್ಡ ವಿಡಂಬನೆ. ಈ ಪರಿಯ ಮೈಮರೆವಿನಲ್ಲಿ ಮುಳುಗಿದ್ದ ಎಡರಂಗಕ್ಕೆ ಕಾಲ ಕೆಳಗಿನ ನೋಟವೇ ಕಾಣದಾಗಿತ್ತು. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಹೋಯಿತು. ತಾನು ಜನರ ನಡುವೆ ಕೆಲಸ ಮಾಡಿ ಕಟ್ಟಿ ಬೆಳೆಸಿದ್ದ ಜನಶಕ್ತಿಯ ಕ್ರೋಧವನ್ನು ತನ್ನ ಮೈಮೇಲೆ ಎಳೆದುಕೊಂಡಿತು. ನೆಲಕ್ಕೆ ಆನಿಸಿ ಜನದನಿಯನ್ನು ಆಲಿಸಬೇಕಿದ್ದ ಕಿವಿಗಳಲ್ಲಿ ಟೊಳ್ಳುಗಾಳಿಯ ಸದ್ದೇ ತುಂಬಿ ಹೋಗಿತ್ತು. ದಮನದ ದಾರಿಯನ್ನು ಆರಿಸಿಕೊಂಡಿತು. ಎಡರಂಗದ ಕಾರ್ಯಕರ್ತರು ಪೊಲೀಸರ ವೇಷ ಧರಿಸಿದ್ದರು. ಅವರ ಕೈಯಲ್ಲಿ ಬಂದೂಕುಗಳಿದ್ದವು. ಹಿಂಸೆಯಲ್ಲಿ ಮುಳುಗೆದ್ದ ನಂದಿಗ್ರಾಮ ರಣರಂಗವಾಗಿತ್ತು. 14 ಮಂದಿ ಅಸುನೀಗಿದ್ದರು. ಎಡರಂಗ ಸರ್ಕಾರ 2011ರಲ್ಲಿ ಘೋರ ಪರಾಭವ ಕಂಡಿತ್ತು.

ಅಂದು ಮಮತಾ ಗೆಲುವಿನ ಪಯಣವನ್ನು ನಿರ್ಣಯಿಸಿದ್ದ ಅದೇ ನಂದಿಗ್ರಾಮ ಇಂದು ಆಕೆಯನ್ನು ಸತ್ವಪರೀಕ್ಷೆಗೆ ಗುರಿಪಡಿಸಿದೆ. ನಂದಿಗ್ರಾಮ ಮತ್ತು ಸಿಂಗೂರಿನಲ್ಲಿ ಕೃಷಿ ವ್ಯವಸ್ಥೆ ಮತ್ತು ಕೈಗಾರಿಕೀಕರಣದ ಕವಲುದಾರಿಯಲ್ಲಿ ನಿಂತಿತ್ತು ಬಂಗಾಳ. ಎಡರಂಗ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೊಡವೆಗೆ ಹೋಗದೆ ದುಡುಕಿತು. ಬಲವಂತ ಭೂಗ್ರಹಣದ ವಿರುದ್ಧ ಜನರೊಂದಿಗೆ ನಿಂತು ಮಮತಾ ಕಟ್ಟಿ ಬೆಳೆಸಿದ ಆಂದೋಲನವನ್ನು ಹಣಿಯಲು ಹೋಗಿ ಮಣ್ಣು ಮುಕ್ಕಿತು. ಆದರೆ ಅಂದು ಕೈಗಾರಿಕೆಗಳ ಸ್ಥಾಪನೆಗೆ ಕೃಷಿ ಭೂಮಿಯ ಬಲವಂತದ ಸ್ವಾಧೀನವನ್ನು ವಿರೋಧಿಸಿದ ಮಮತಾ ದೀದಿ ಕಳೆದ ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ಮಾಡಿದ್ದಾದರೂ ಏನು? ಕೃಷಿ ಮತ್ತು ಕೈಗಾರಿಕೆಯ ಸಮನ್ವಯ ಅರ್ಥವ್ಯವಸ್ಥೆಯೊಂದನ್ನು ಜನವಿಶ್ವಾಸದ ಅಡಿಪಾಯದ ಮೇಲೆ ಕಟ್ಟಿ ಬೆಳೆಸಬೇಕಿತ್ತಲ್ಲವೇ? ಈ ಕಾರ್ಯದಲ್ಲಿ ಅವರು ಸಂಪೂರ್ಣ ವಿಫಲರಾದರು.

ಬಂಗಾಳದ ಅರ್ಥವ್ಯವಸ್ಥೆ ಹೆಚ್ಚೂಕಡಿಮೆ ಹದಿನಾಲ್ಕು ವರ್ಷಗಳ ಹಳೆಯ ನಂದಿಗ್ರಾಮ-ಸಿಂಗೂರುಗಳಲ್ಲೇ ಹೂತು ಹೋಗಿದೆ. ನಂದಿಗ್ರಾಮ ಹೊಮ್ಮಿಸಿದ ಸವಾಲುಗಳ ನೋಟಕ್ಕೆ ನೋಟ ಬೆರೆಸಿ ನೋಡಲಿಲ್ಲ ಮಮತಾ ಆಡಳಿತ. ಮಮತಾ ದಂಡು ಮತ್ತು ದಂಡನಾಯಕರು ನಡೆಸಿದ ಭ್ರಷ್ಟಾಚಾರವನ್ನೂ ತಮ್ಮ ಕೊರಳಿಗೆ ಸುತ್ತಿಕೊಂಡಿದ್ದಾರೆ. ಪರಿವರ್ತನೆಯ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದವರು ಮಮತಾ. ಸರ್ಕಾರದ ಪರಿವರ್ತನೆ ಆಯಿತೇ ವಿನಾ ವ್ಯವಸ್ಥೆ ಬದಲಾಗಲಿಲ್ಲ. ಹಾಗೆಂದು ಮಮತಾ ಆಡಳಿತದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ತಪ್ಪಾದೀತು. ಆದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಅದರ ಸುತ್ತ ಬೆಸೆದಿದ್ದ ಆಶೋತ್ತರಗಳು ಚಿಗಿತು ಫಲ ನೀಡಲಿಲ್ಲ. ನಿಜ, ಮಮತಾ ಆಡಳಿತ ವಿರೋಧಿ ಅಲೆಯನ್ನೇನೂ ಎದುರಿಸಿಲ್ಲ.

ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು
PC: Deccan herald

ಎರಡು ಅವಧಿಗಳ ನಂತರವೂ ಅಂತಹ ಅಲೆ ಇಲ್ಲದಿರುವುದು ಸಾಧಾರಣ ಸಂಗತಿಯೇನೂ ಅಲ್ಲ. ತಾವು ಎಡಕ್ಕಿಂತ ಹೆಚ್ಚು ಎಡ ಎಂದು ತೋರಿಸಿಕೊಂಡ ದೀದಿ ನೀತಿ ನಿರ್ಧಾರಗಳಲ್ಲಿ ಮೂಲಭೂತ ಬದಲಾವಣೆಗೆ ಕೈ ಹಾಕಲಿಲ್ಲ. ಹೀಗಾಗಿ ನಿರಾಸೆಯ ಅಂತರ್ವಾಹಿನಿ ಜನಮಾನಸದಲ್ಲಿ ಹರಿದಿರುವುದು ಹೌದು. ಅದು ಭ್ರಮನಿರಸನದ ರೂಪನ್ನು ಇನ್ನೂ ತಳೆದಿಲ್ಲವೆಂದರೆ ಮಮತಾ ಸರ್ಕಾರದ ಹಲವಾರು ಜನಪ್ರಿಯ ಕಾರ್ಯಕ್ರಮಗಳೇ ಕಾರಣ. ಎಡರಂಗವೇ ಪ್ರತಿಪಕ್ಷವಾಗಿ ಉಳಿದಿದ್ದರೆ ಮಮತಾಗೆ ಎದುರೇ ಇರುತ್ತಿರಲಿಲ್ಲ. ಆದರೆ ಎಡರಂಗ ಮತ್ತು ಕಾಂಗ್ರೆಸ್ ಉಳಿಸಿರುವ ಶೂನ್ಯವನ್ನು ಮೋದಿ ಮತ್ತು ಅಮಿತ್ ಶಾ ಅವರ ಅತ್ಯುಗ್ರ ಅಕ್ರಮಣಕಾರಿ ಹಿಂದುತ್ವ ರಾಜಕಾರಣ ಕಬಳಿಸಿದೆ.

ಎದುರಾದದ್ದನ್ನೆಲ್ಲ ಉರುಳಿಸಿ ನೆಲಸಮ ಮಾಡುವ ದೈತ್ಯ ಬುಲ್ಡೋಜರ್ ರಾಜಕಾರಣವಿದು. ಹುಟ್ಟಾ ಬಂಡಾಯಗಾರ್ತಿ ಎಂಬ ಪಟ್ಟ ಪಡೆದಿರುವ ಮಮತಾ ಅವರನ್ನೂ ಅಲ್ಲಾಡಿಸಿರುವ ದಾಳಿಯಿದು. ಬೇರುಮಟ್ಟದಲ್ಲಿ ರಾಜಕಾರಣವನ್ನು ನಿಯಂತ್ರಿಸುವ ತೋಳ್ಬಲ-ಧನಬಲದ ಕಟ್ಟಾಳುಗಳನ್ನು ತೃಣಮೂಲದಿಂದ ಸೆಳೆದುಕೊಂಡಿದೆ ಬಿಜೆಪಿ. ಶಾರದ-ನಾರದ ಹಗರಣಗಳಲ್ಲಿ ಕಳಂಕಿತರಾದ ಹಲವು ತೃಣಮೂಲ ತಲೆಯಾಳುಗಳು ಇಂದು ಬಿಜೆಪಿ ಎಂಬ ’ಗಂಗೆ’ಯಲ್ಲಿ ಮುಳುಗಿ ’ಪವಿತ್ರ’ರಾಗಿದ್ದಾರೆ. ಹೀಗಾಗಿ ಬಿಜೆಪಿ ಕೇವಲ ’ಕಟ್ ಮನಿ’ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಿದೆಯೇ ವಿನಾ ಶಾರದ- ನಾರದ ಚಿಟ್ ಫಂಡ್ ಹಗರಣಗಳ ಕುರಿತು ತುಟಿ ಹೊಲಿದುಕೊಂಡಿದೆ.

ಬೀಡುಬೀಸು ಪಕ್ಷಾಂತರ, ಹಣದಶಕ್ತಿಯ ಅಬ್ಬರ, ಕೇಂದ್ರದ ಅಧಿಕಾರದ ದಂಡದ ಯಥೇಚ್ಛ ಬಳಕೆ, ಕೋಮುವಾದಿ ಧ್ರುವೀಕರಣ ಹಾಗೂ ಮಿಥ್ಯಾಪ್ರಚಾರದ ಹಲವು ಹತಾರುಗಳನ್ನು ಝಳಪಿಸುತ್ತ ಬಿಜೆಪಿ ಬಂಗಾಳಕ್ಕೆ ಲಗ್ಗೆ ಹಾಕಿ ವರ್ಷಗಳೇ ಉರುಳಿವೆ. ತನ್ನ ಸನ್ನಾಹದಲ್ಲಿ ಅದು ಕಣ್ಣುಕುಕ್ಕುವ ಯಶಸ್ಸನ್ನು ಕಂಡಿದೆ ಕೂಡ. ಇಂದು ಬಂಗಾಳದ ಅಧಿಕಾರದ ಗದ್ದುಗೆಯ ಮೇಲೆ ಕೈಯಿರಿಸಿ ನಿಂತೀತೆಂದು ಹತ್ತು ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ.

ಇಂತಹ ಬಿಜೆಪಿ ಪ್ರವೇಶದ ನಂತರ ಪಶ್ಚಿಮ ಬಂಗಾಳದ ಬದಲಾದ ರಾಜಕಾರಣದ ವಿನ್ಯಾಸದ ಸುಳಿವುಗಳು ನಂದಿಗ್ರಾಮದ ಮಮತಾ ಬ್ಯಾನರ್ಜಿ-ಸುವೇಂದು ಅಧಿಕಾರಿ ಹಣಾಹಣಿಯಲ್ಲಿ ಕಾಣಸಿಗುತ್ತವೆ. ನಂದೀಗ್ರಾಮದ ಪರಿಶಿಷ್ಟ ಜಾತಿ-ಪಂಗಡಗಳ ಜನಸಂಖ್ಯೆಯ ಪ್ರಮಾಣ ಶೇ.16.5. ಈ ಸಮುದಾಯಗಳನ್ನೂ ಒಡೆದಿರುವ ಬಿಜೆಪಿ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಭಾರೀ ಪ್ರಮಾಣದ ಪಕ್ಷಾಂತರದ ಮೂಲಕ ನಂದೀಗ್ರಾಮವನ್ನು ಗೆಲ್ಲಲು ಹೊರಟಿದೆ. ಈ ಮಾತು ಇಡೀ ಪಶ್ಚಿಮ ಬಂಗಾಳಕ್ಕೆ ಅಕ್ಷರಶಃ ವಿಸ್ತರಿಸಲಿದೆ. ನಂದಿಗ್ರಾಮದ ಕಂಪನಗಳು ರಾಜ್ಯಾದ್ಯಂತ ಹರಿಯಲಿವೆ. ಚುನಾವಣಾ ಫಲಿತಾಂಶಗಳ ನಂತರವೂ ಮುಂದುವರೆಯಲಿವೆ.

ಭಾರತದ ಸಹಬಾಳ್ವೆಯ ಆತ್ಮದ ಅಳಿವು ಉಳಿವಿಗಾಗಿ ನಡೆದಿರುವ ಬಂಗಾಳದ ಸಮರದ ಆತ್ಮ ನಂದಿಗ್ರಾಮ. ಇಲ್ಲಿ ಮಮತಾ ಸೋತರೆ ಈ ಉತ್ಪಾತದ ಕಂಪನಗಳು ದೇಶದ ಜನತಂತ್ರವನ್ನು ಅಸ್ಥಿರಗೊಳಿಸುವುದು ನಿಶ್ಚಿತ. ಬಿಜೆಪಿ ಬಯಸುತ್ತಿರುವ ಪ್ರತಿಪಕ್ಷಮುಕ್ತ ಭಾರತ ಬಾಗಿಲು ಬಡಿಯುತ್ತಿದೆ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...